ಗ್ಯಾಂಗ್ಸ್ಟರ್ ಜೊತೆ ಓಡಿ ಹೋಗಿದ್ದ ಐಎಎಸ್ ಅಧಿಕಾರಿ ಪತ್ನಿ!
9 ತಿಂಗಳ ನಂತರ ಮತ್ತೆ ಪತಿಯ ಮನೆಯತ್ತ ಓಡಿ ಬಂದಿದ್ದೇಕೆ?
ಎಲ್ಲಿಯೂ ಸಲ್ಲದವಳು ಕೊನೆಗೆ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ?
ಗುಜರಾತ್ ಗಾಂಧಿನಗರದ ಸೆಕ್ಟರ್ 19ರಲ್ಲಿ ಒಂದು ವಿಚಿತ್ರ ಘಟನೆಯೊಂದು ನಡೆದಿದೆ. ಐಎಎಸ್ ಅಧಿಕಾರಿಯ ಪತ್ನಿಯೊಬ್ಬಳು ಮೊದಲು ಗ್ಯಾಂಗ್ಸ್ಟರ್ ಜೊತೆ ಓಡಿ ಹೋಗಿ, ಪುನಃ ತನ್ನ ಪತಿಯ ಮನೆಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ಹಿಟ್ ಆ್ಯಂಡ್ ರನ್; ಬೈಕ್ಗೆ ಭಯಾನಕ ಡಿಕ್ಕಿ.. ರಸ್ತೆಯಲ್ಲೇ ಉಸಿರು ಚೆಲ್ಲಿದ ಯುವಕ
45 ವರ್ಷದ ಸೂರ್ಯ ಜಯಾ ಅನ್ನೋರು ಐಎಎಸ್ ಅಧಿಕಾರಿಯ ಪತ್ನಿ. ಈಕೆ ಪತಿಯ ಹೆಸರು ರಂಜೀತ್ ಕುಮಾರ್ ಗುಜರಾತ್ ವಿದ್ಯುತ್ ನಿರ್ವಹಣಾ ಮಂಡಳಿಯಲ್ಲಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿಂದೆ ಮಗುವಿನ ಅಪಹರಣ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದಳಂತೆ ರಂಜೀತ್ ಕುಮಾರ್ ಪತ್ನಿ ಸೂರ್ಯಜಯಾ. ಹೀಗಾಗಿ ರಂಜೀತ್ ಆಕೆ ಒಂದು ವೇಳೆ ಮನೆಗೆ ಬಂದರೆ ಮನೆಯೊಳಗೆ ಸೇರಿಸಿಕೊಳ್ಳಬೇಡಿ ಎಂದು ಮನೆಯ ಕೆಲಸಗಾರರಿಗೆ ಸೂಚನೆ ನೀಡಿದ್ದರಂತೆ.
ಇದನ್ನೂ ಓದಿ:2 ತಿಂಗಳ ಗರ್ಭಿಣಿ ಪತ್ನಿಗೆ ಚೂರಿ ಇರಿದ ನೇತ್ರಾವತಿ ಧಾರಾವಾಹಿ ನಟ.. ಗರ್ಭಪಾತವಾಗಿ ಆಸ್ಪತ್ರೆಗೆ ದಾಖಲು
ತಮಿಳುನಾಡಿನಲ್ಲಿ 14 ವರ್ಷದ ಮಗುವಿನ ಕಿಡ್ನಾಪ್ ಪ್ರಕರಣವೊಂದರಲ್ಲಿ ಸಿಲುಕಿದ್ದ ಸೂರ್ಯಜಯಾ, ಅಲ್ಲಿನ ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳಲು ಅಂತ ವಾಪಸ್ ತನ್ನ ಪತಿಯ ಮನೆಗೆ ಬಂದಿದ್ದಾಳೆ. ಯಾವಾಗ ಆಕೆಯನ್ನು ಮನೆಯೊಳಗೆ ಯಾರು ಸೇರಿಸಿಕೊಳ್ಳಲಿಲ್ಲವೋ ಕೂಡಲೇ ಆಕೆ ಬೇರೆ ದಾರಿ ಕಾಣದೆ ವಿಷ ಕುಡಿದು ನಂತರ ತಾನೇ 108ಕ್ಕೆ ಕಾಲ್ ಮಾಡಿ ತಾನು ವಿಷ ಸೇವಿಸಿರುವುದಾಗಿ ಹೇಳಿದ್ದಾರೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋದರು ಕೂಡ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾಳೆ.
ಡೆತ್ನೋಟ್ ಬರೆದಿಟ್ಟ IAS ಅಧಿಕಾರಿ ಪತ್ನಿ!
ಸೂರ್ಯಜಯಾ ಪತಿ ರಂಜಿತ್ ಅವರ ಪರ ವಕೀಲ ಹೇಳುವ ಪ್ರಕಾರ ಈ ದಂಪತಿ 2023ರಲ್ಲಿಯೇ ವಿಚ್ಛೇದನ ಪಡೆದಿತ್ತು. ಇತ್ತೀಚೆಗೆ ಈ ಮಹಿಳೆಯ ಹೆಸರು ಗ್ಯಾಂಗ್ಸ್ಟರ್ ಬಾಯ್ಫ್ರೆಂಡ್ ಹಾಗೂ ಆತನ ಭಂಟ ಸೆಂಥೀಲ್ ಕುಮಾರ್ನೊಂದಿಗೆ ಮಗುವಿನ ಕಿಡ್ನಾಪ್ ಪ್ರಕರಣವೊಂದರಲ್ಲಿ ತಳುಕು ಹಾಕಿಕೊಂಡಿತ್ತು. ಕಳೆದ ಜುಲೈ 11 ರಂದು ಮಗುವನ್ನು ಕಿಡ್ನಾಪ್ ಮಾಡಿದ್ದ ಇವರು ಆತನ ತಾಯಿಗೆ 2 ಕೋಟಿ ರೂಪಾಯಿ ಕೊಡುವಂತೆ ಬೆದರಿಕೆ ಹಾಕಿತ್ತು. ತಮಿಳುನಾಡಿನ ಮಧುರೈ ಪೊಲೀಸರು ಪ್ರಕರಣವನ್ನು ಕೈಗೆತ್ತಿಕೊಂಡು ಮಗುವನ್ನು ರಕ್ಷಣೆ ಮಾಡಿದ್ದರು. ಇದೇ ಸಮಯದಲ್ಲಿಯೇ ಸೂರ್ಯಜಯಾ ಸೇರಿದಂತೆ ಪ್ರಕಣದಲ್ಲಿ ಭಾಗಿಯಾದವರ ಬೇಟೆಗೆ ಸಜ್ಜಾಗಿತ್ತು ಪೊಲೀಸ್ ಪಡೆ. ಪೊಲೀಸರ ಕೈಗೆ ಸಿಕ್ಕಿಬೀಳುವ ಭಯದಿಂದ ಪತಿಯ ಮನೆಗೆ ಓಡಿ ಬಂದ ಜಯಾಗೆ ಅಲ್ಲಿಯೂ ನೆಲೆ ಸಿಗಿದಿದ್ದಾಗ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತಮಿಳಿನಲ್ಲಿ ಡೆತ್ನೋಟ್ ಬರೆದಿಟ್ಟಿರುವುದಾಗಿ ಪೊಲೀಸರು ತಿಳಿಸಿದ್ದು. ಡೆತ್ನೋಟ್ನಲ್ಲಿ ಏನು ಬರೆದಿದ್ದಾಳೆ ಅನ್ನೋದನ್ನ ಸದ್ಯದಲ್ಲಿಯೇ ರಿವೀಲ್ ಮಾಡುವುದಾಗಿ ಗುಜರಾತ್ ಪೊಲೀಸರು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಗ್ಯಾಂಗ್ಸ್ಟರ್ ಜೊತೆ ಓಡಿ ಹೋಗಿದ್ದ ಐಎಎಸ್ ಅಧಿಕಾರಿ ಪತ್ನಿ!
9 ತಿಂಗಳ ನಂತರ ಮತ್ತೆ ಪತಿಯ ಮನೆಯತ್ತ ಓಡಿ ಬಂದಿದ್ದೇಕೆ?
ಎಲ್ಲಿಯೂ ಸಲ್ಲದವಳು ಕೊನೆಗೆ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ?
ಗುಜರಾತ್ ಗಾಂಧಿನಗರದ ಸೆಕ್ಟರ್ 19ರಲ್ಲಿ ಒಂದು ವಿಚಿತ್ರ ಘಟನೆಯೊಂದು ನಡೆದಿದೆ. ಐಎಎಸ್ ಅಧಿಕಾರಿಯ ಪತ್ನಿಯೊಬ್ಬಳು ಮೊದಲು ಗ್ಯಾಂಗ್ಸ್ಟರ್ ಜೊತೆ ಓಡಿ ಹೋಗಿ, ಪುನಃ ತನ್ನ ಪತಿಯ ಮನೆಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ಹಿಟ್ ಆ್ಯಂಡ್ ರನ್; ಬೈಕ್ಗೆ ಭಯಾನಕ ಡಿಕ್ಕಿ.. ರಸ್ತೆಯಲ್ಲೇ ಉಸಿರು ಚೆಲ್ಲಿದ ಯುವಕ
45 ವರ್ಷದ ಸೂರ್ಯ ಜಯಾ ಅನ್ನೋರು ಐಎಎಸ್ ಅಧಿಕಾರಿಯ ಪತ್ನಿ. ಈಕೆ ಪತಿಯ ಹೆಸರು ರಂಜೀತ್ ಕುಮಾರ್ ಗುಜರಾತ್ ವಿದ್ಯುತ್ ನಿರ್ವಹಣಾ ಮಂಡಳಿಯಲ್ಲಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿಂದೆ ಮಗುವಿನ ಅಪಹರಣ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದಳಂತೆ ರಂಜೀತ್ ಕುಮಾರ್ ಪತ್ನಿ ಸೂರ್ಯಜಯಾ. ಹೀಗಾಗಿ ರಂಜೀತ್ ಆಕೆ ಒಂದು ವೇಳೆ ಮನೆಗೆ ಬಂದರೆ ಮನೆಯೊಳಗೆ ಸೇರಿಸಿಕೊಳ್ಳಬೇಡಿ ಎಂದು ಮನೆಯ ಕೆಲಸಗಾರರಿಗೆ ಸೂಚನೆ ನೀಡಿದ್ದರಂತೆ.
ಇದನ್ನೂ ಓದಿ:2 ತಿಂಗಳ ಗರ್ಭಿಣಿ ಪತ್ನಿಗೆ ಚೂರಿ ಇರಿದ ನೇತ್ರಾವತಿ ಧಾರಾವಾಹಿ ನಟ.. ಗರ್ಭಪಾತವಾಗಿ ಆಸ್ಪತ್ರೆಗೆ ದಾಖಲು
ತಮಿಳುನಾಡಿನಲ್ಲಿ 14 ವರ್ಷದ ಮಗುವಿನ ಕಿಡ್ನಾಪ್ ಪ್ರಕರಣವೊಂದರಲ್ಲಿ ಸಿಲುಕಿದ್ದ ಸೂರ್ಯಜಯಾ, ಅಲ್ಲಿನ ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳಲು ಅಂತ ವಾಪಸ್ ತನ್ನ ಪತಿಯ ಮನೆಗೆ ಬಂದಿದ್ದಾಳೆ. ಯಾವಾಗ ಆಕೆಯನ್ನು ಮನೆಯೊಳಗೆ ಯಾರು ಸೇರಿಸಿಕೊಳ್ಳಲಿಲ್ಲವೋ ಕೂಡಲೇ ಆಕೆ ಬೇರೆ ದಾರಿ ಕಾಣದೆ ವಿಷ ಕುಡಿದು ನಂತರ ತಾನೇ 108ಕ್ಕೆ ಕಾಲ್ ಮಾಡಿ ತಾನು ವಿಷ ಸೇವಿಸಿರುವುದಾಗಿ ಹೇಳಿದ್ದಾರೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋದರು ಕೂಡ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾಳೆ.
ಡೆತ್ನೋಟ್ ಬರೆದಿಟ್ಟ IAS ಅಧಿಕಾರಿ ಪತ್ನಿ!
ಸೂರ್ಯಜಯಾ ಪತಿ ರಂಜಿತ್ ಅವರ ಪರ ವಕೀಲ ಹೇಳುವ ಪ್ರಕಾರ ಈ ದಂಪತಿ 2023ರಲ್ಲಿಯೇ ವಿಚ್ಛೇದನ ಪಡೆದಿತ್ತು. ಇತ್ತೀಚೆಗೆ ಈ ಮಹಿಳೆಯ ಹೆಸರು ಗ್ಯಾಂಗ್ಸ್ಟರ್ ಬಾಯ್ಫ್ರೆಂಡ್ ಹಾಗೂ ಆತನ ಭಂಟ ಸೆಂಥೀಲ್ ಕುಮಾರ್ನೊಂದಿಗೆ ಮಗುವಿನ ಕಿಡ್ನಾಪ್ ಪ್ರಕರಣವೊಂದರಲ್ಲಿ ತಳುಕು ಹಾಕಿಕೊಂಡಿತ್ತು. ಕಳೆದ ಜುಲೈ 11 ರಂದು ಮಗುವನ್ನು ಕಿಡ್ನಾಪ್ ಮಾಡಿದ್ದ ಇವರು ಆತನ ತಾಯಿಗೆ 2 ಕೋಟಿ ರೂಪಾಯಿ ಕೊಡುವಂತೆ ಬೆದರಿಕೆ ಹಾಕಿತ್ತು. ತಮಿಳುನಾಡಿನ ಮಧುರೈ ಪೊಲೀಸರು ಪ್ರಕರಣವನ್ನು ಕೈಗೆತ್ತಿಕೊಂಡು ಮಗುವನ್ನು ರಕ್ಷಣೆ ಮಾಡಿದ್ದರು. ಇದೇ ಸಮಯದಲ್ಲಿಯೇ ಸೂರ್ಯಜಯಾ ಸೇರಿದಂತೆ ಪ್ರಕಣದಲ್ಲಿ ಭಾಗಿಯಾದವರ ಬೇಟೆಗೆ ಸಜ್ಜಾಗಿತ್ತು ಪೊಲೀಸ್ ಪಡೆ. ಪೊಲೀಸರ ಕೈಗೆ ಸಿಕ್ಕಿಬೀಳುವ ಭಯದಿಂದ ಪತಿಯ ಮನೆಗೆ ಓಡಿ ಬಂದ ಜಯಾಗೆ ಅಲ್ಲಿಯೂ ನೆಲೆ ಸಿಗಿದಿದ್ದಾಗ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತಮಿಳಿನಲ್ಲಿ ಡೆತ್ನೋಟ್ ಬರೆದಿಟ್ಟಿರುವುದಾಗಿ ಪೊಲೀಸರು ತಿಳಿಸಿದ್ದು. ಡೆತ್ನೋಟ್ನಲ್ಲಿ ಏನು ಬರೆದಿದ್ದಾಳೆ ಅನ್ನೋದನ್ನ ಸದ್ಯದಲ್ಲಿಯೇ ರಿವೀಲ್ ಮಾಡುವುದಾಗಿ ಗುಜರಾತ್ ಪೊಲೀಸರು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ