ಎದುರಾಳಿ ತಂಡದ 6 ವಿಕೆಟ್ ಪಡೆದ್ರೂ ಗೆಲುವು ಕನ್ಫರ್ಮ್ ಇರ್ಲಿಲ್ಲ
ಶ್ರೇಯಸ್ ಅಯ್ಯರ್ ಮಾಡಿದ ಅದ್ಭುತ ರನೌಟ್ನಿಂದ ತಂಡಕ್ಕೆ ತಿರುವು
ಹಿಟ್ಮ್ಯಾನ್ ಬುದ್ಧಿವಂತಿಕೆಗೆ ಇಂಗ್ಲೆಂಡ್ ಪ್ರತ್ಯುತ್ತರ ನೀಡಲಾಗಲಿಲ್ಲ
ವೈಜಾಗ್ನಲ್ಲಿ ಆಂಗ್ಲರಿಗೆ ಸೋಲಿನ ಮುಖಭಂಗವಾಗಿದೆ. ಭಾರತೀಯ ಹುಲಿಗಳ ಘರ್ಜನೆ ಮುಂದೆ ಸ್ಟೋಕ್ಸ್ ಬಳಗದ ಬಝ್ಬಾಲ್ ಠುಸ್ ಪಟಾಕಿ ಆಯ್ತು. ನಾಲ್ಕೇ ದಿನದಲ್ಲಿ ಪ್ರವಾಸಿ ಇಂಗ್ಲೆಂಡ್ ಗಂಟೆಮೂಟೆ ಕಟ್ತು. ಇಂಗ್ಲೆಂಡ್ ತಂಡವನ್ನ ಸೋಲಿನ ಖೆಡ್ಡಾಗೆ ತಳ್ಳಿದ್ದು, ಆ ಐದು ಮೂಮೆಂಟ್ಸ್. ಆ 5 ಗೇಮ್ ಚೇಂಜಿಂಗ್ ಮೂಮೆಂಟ್ಸ್ಗಳು ಯಾವವು?.
ಹೈದ್ರಾಬಾದ್ ಟೆಸ್ಟ್ ಸೋಲಿನಿಂದ ಕಂಗೆಟ್ಟಿದ್ದ ಟೀಮ್ ಇಂಡಿಯಾ ಸಿಡಿದು ನಿಂತಿದೆ. ಸೇಡಿನ ಸಮರದಲ್ಲಿ ರೋಹಿತ್ ಪಡೆ ಗೆದ್ದು ಬೀಗಿದೆ. ವೈಜಾಗ್ನಲ್ಲಿ 106 ರನ್ನಿಂದ ಗೆದ್ದು ಆಂಗ್ಲರ ಹುಟ್ಟಡಗಿಸಿದೆ. ಆ ಮೂಲಕ ಸರಣಿಯಲ್ಲಿ ಭಾರತ ಬ್ಯಾಕ್ ವಿತ್ ಬ್ಯಾಂಗ್ ಮಾಡಿದ್ದು, WE NERVER GIVE UP ಅನ್ನೋ ಸ್ಟ್ರಾಂಗ್ ಮೆಸೇಜ್ ರವಾನಿಸಿದೆ. ಅಷ್ಟಕ್ಕೂ ಭಾರತದ ಗೆಲುವನ್ನ ನಿರ್ಧರಿಸಿದ್ದು ಆ ಐದೇ 5 ಮೂಮೆಂಟ್ಸ್. ಆ 5 ಮೂಮೆಂಟ್ಸ್ನಿಂದಲೇ ಇಡೀ ಪಂದ್ಯ ಭಾರತದ ಕಡೆ ಟರ್ನ್ ಆಯ್ತು. ಆ ಗೇಮ್ ಚೇಜಿಂಗ್ ಮೂಮೆಂಟ್ಸ್ಗಳನ್ನ ಒಂದೊಂದರ ಮಾಹಿತಿ ಇಲ್ಲಿದೆ.
ರೋಹಿತ್ ಕೈಯಲ್ಲಿ ಪೋಪ್ ಲಾಕ್.. ಆಂಗ್ಲರ ಅಧಃಪತನ ಶುರು
ಇಂಗ್ಲೆಂಡ್ 2 ವಿಕೆಟ್ಗೆ 131 ರನ್ ಗಳಿಸಿ ಸುಭದ್ರ ಸ್ಥಿತಿಯಲ್ಲಿತ್ತು. ಆಗ ಕ್ಯಾಪ್ಟನ್ ರೋಹಿತ್ ವಿಕೆಟ್ ಟೇಕರ್ ಅಶ್ವಿನ್ ಕೈಯಲ್ಲಿ ಚೆಂಡು ನೀಡಿದ್ರು. ಪೋಪ್ ಬ್ಯಾಟ್ಗೆ ತಗುಲಿದ ಚೆಂಡು ನೇರವಾಗಿ ಸ್ಲಿಪ್ನಲ್ಲಿ ಕ್ಯಾಪ್ಟನ್ ಕೈ ಸೇರಿತು. ಪೋಪ್ 23 ರನ್ ಗಳಿಸಿ ಹೊರನಡೆದಿದ್ದೆ ತಡ, ಆಂಗ್ಲರ ಅಧಃಪತನ ಶುರುವಾಯ್ತು. ರೋಹಿತ್ ಬಳಗದಲ್ಲಿ ಗೆಲುವಿನ ಆಸೆ ಚಿಗುರಿತು. ಒಂದು ವೇಳೆ ರೋಹಿತ್, ಡೇಂಜರಸ್ ಪೋಪ್ ಕ್ಯಾಚ್ ಡ್ರಾಪ್ ಮಾಡಿದ್ರೆ ಸೋಲಿನ ದರ್ಶನ ಆಗಿ ಬಿಡ್ತಿತ್ತು.
ಬಿಗ್ ಫಿಶ್ ಕ್ರಾವ್ಲಿ- ಬೇರ್ಸ್ಟೋವ್ ಔಟ್..ಭಾರತ ನಿರಾಳ..!
ಭಾರತ 154ಕ್ಕೆ 4 ವಿಕೆಟ್ ಕಬಳಿಸಿದ್ರೂ ಜಾಕ್ ಕ್ರಾವ್ಲಿ ಹಾಗೂ ಜಾನಿ ಬೇಸ್ಟೋವ್ ಕ್ರಿಸ್ನಲ್ಲಿ ಹೆಬ್ಬಂಡೆಯಾಗಿ ನಿಂತಿದ್ರು. ಬಿರುಸಿನ 40 ರನ್ ಜೊತೆಯಾಟವಾಡಿ ಪಂದ್ಯವನ್ನ ತಮ್ಮತ್ತ ತಿರುಗುವಂತೆ ಮಾಡಿದ್ರು. ಇನ್ನೇನು ಭಾರತದ ಕಥೆ ಮುಗೀತು ಅನ್ನುವಷ್ಟರಲ್ಲಿ ಕುಲ್ದೀಪ್ ಯಾದವ್ ಅರ್ಧಶತಕ ಗಳಿಸಿದ್ದ ಜಾಕ್ ಕ್ರಾವ್ಲಿಗೆ ಗೇಟ್ಪಾಸ್ ನೀಡಿದ್ರು. ಇವರ ಬೆನ್ನಲ್ಲೆ ಬಿಗ್ ಹಿಟ್ಟರ್ ಬೇರ್ಸ್ಟೋವ್ ಕೂಡ ನಿರ್ಗಮಿಸಿದ್ರು.ಲಂಚ್ ಬ್ರೇಕ್ಗೂ ಮುನ್ನ ಈ ಎರಡು ಬಿಗ್ ಫಿಶ್ ಬಲಿ ಪಡೆದ ಭಾರತ ಪಂದ್ಯದ ಮೇಲೆ ಮತ್ತಷ್ಟು ಹಿಡಿತ ಸಾಧಿಸ್ತು.
ಸ್ಟೋಕ್ಸ್ಗೆ ಶ್ರೇಯಸ್ ರನೌಟ್ ಶಾಕ್.. ಪಂದ್ಯಕ್ಕೆ ತಿರುವು..
ಎದುರಾಳಿಯ ತಂಡದ 6 ವಿಕೆಟ್ ಪಡೆದ್ರೂ ಗೆಲುವು ಕನ್ಫರ್ಮ್ ಆಗಿರ್ಲಿಲ್ಲ. ಯಾಕಂದ್ರೆ ಗೇಮ್ ಚೇಂಜರ್ ಬೆನ್ ಸ್ಟೋಕ್ಸ್ ಕ್ರೀಸ್ನಲ್ಲಿದ್ರು. ಯಾವ ಟೈಮ್ಲ್ಲೂ ಪಂದ್ಯದ ಚಿತ್ರಣ ಬದಲಿಸುವ ತಾಕತ್ತು ಇವರಿಗಿತ್ತು. ಇಂತಹ ಒನ್ ಮ್ಯಾನ್ ಆರ್ಮಿಯನ್ನ ಶ್ರೇಯಸ್ ಅಯ್ಯರ್ ಅದ್ಭುತ ರನೌಟ್ ಬಲೆಗೆ ಬೀಳಿಸಿದ್ರು. ಆಗ ತಾನೇ ಹೊಟ್ಟೆ ತುಂಬಾ ತಿಂದು ಬಂದಿದ್ದ ಸ್ಟೋಕ್ಸ್, ರನೌಟ್ಗೆ ಬಲಿಯಾದ್ರು.
ಬೌಲರ್ಸ್ ಕಣ್ಣಲ್ಲಿ ಕಾಣ್ತಿದ್ದ ಗೆಲುವಿನ ಕಿಡಿ..!
ಪಂದ್ಯದ ನಾಲ್ಕನೇ ದಿನ ಟೀಮ್ ಇಂಡಿಯಾದ ಎಲ್ಲ ಬೌಲರ್ಸ್ ವೈಜಾಗ್ ಟೆಸ್ಟ್ ಗೆದ್ದೇ ತೀರುವ ಪಣ ತೊಟ್ಟಂತೆ ಕಾಣಿಸ್ತಿತ್ತು. ಆ ಮಟ್ಟಿಗೆ ವೇಗಿಗಳು ಹಾಗೂ ಸ್ಪಿನ್ನರ್ಸ್ ಒಗ್ಗಟ್ಟಿನ ಹೋರಾಟ ನಡೆಸಿದ್ರು. ಸ್ಟಾರ್ ಬೌಲರ್ ಬೂಮ್ರಾ 3 ವಿಕೆಟ್ ಪಡೆದು ಇಂಗ್ಲೆಂಡ್ಗೆ ದೊಡ್ಡ ಪೆಟ್ಟು ನೀಡಿದ್ರು. ಸ್ಪಿನ್ನರ್ಗಳಾದ ಅಶ್ವಿನ್ 3 ಹಾಗೂ ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್ ತಲಾ 1 ವಿಕೆಟ್ ಪಡೆದು ಪಂದ್ಯದ ದಿಕ್ಕನ್ನೆ ಬದಲಿಸಿದ್ರು.
ಒತ್ತಡದ ನಡುವೆ ರೋಹಿತ್ ಜಾಣತನದ ಕ್ಯಾಪ್ಟನ್ಸಿ
ರೋಹಿತ್ ಶರ್ಮಾರ CLEVER ಕ್ಯಾಪ್ಟನ್ಸಿ ಕೂಡ ವೈಜಾಗ್ ಟೆಸ್ಟ್ನಲ್ಲಿ ಪ್ರಮುಖ ಗೆಲುವಿನ ಪಾತ್ರ ವಹಿಸ್ತು. ಒಂದೆಡೆ ಇಂಗ್ಲೆಂಡ್ ಬ್ಯಾಟರ್ಸ್ ಆಕ್ರಮಣಕಾರಿ ಆಟದ ಮೂಲಕ ಒತ್ತಡ ಹೇರುತ್ತಿದ್ರು. ಇದಕ್ಕೆ ರೋಹಿತ್ ಗಾಬರಿಗೊಳ್ಳಲಿಲ್ಲ. ಆಟಗಾರರನ್ನ ಕೂಲ್ ಆಗಿ ಹ್ಯಾಂಡಲ್ ಮಾಡಿದ್ರು. ಎದುರಾಳಿ ಬ್ಯಾಟರ್ಗಳ ವಿಕ್ನೆಸ್ಗೆ ಸೂಕ್ತ ಸ್ಟ್ರಾಟಜಿ ರೂಪಿಸಿದ್ರು. ಹಿಟ್ಮ್ಯಾನ್ರ ಬುದ್ಧಿವಂತಿಕೆಯ ನಾಯಕತ್ವಕ್ಕೆ ಆಂಗ್ಲರು ಪ್ರತ್ಯುತ್ತರ ನೀಡಲಾಗದೇ ಸೋಲೊಪ್ಪಿಕೊಂಡ್ರು.
ಹೈದ್ರಾಬಾದ್ನಲ್ಲಿ ತಲೆ ತಗ್ಗಿಸಿದ್ದ ಟೀಮ್ ಇಂಡಿಯಾ ವೈಜಾಗ್ನಲ್ಲಿ ತಲೆ ಎತ್ತಿ ಮೆರೆದಾಡಿದೆ. ಈ ಗೆಲುವನ್ನ ತಲೆಗೇರಿಸಿಕೊಳ್ಳದೇ ರಾಜ್ಕೋಟ್ನಲ್ಲಿ ಕಣಕ್ಕಿಳಿಯಲಿ. ಗೆಲುವಿನ ಯಾತ್ರೆ ಮುಂದುವರಿಸಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಎದುರಾಳಿ ತಂಡದ 6 ವಿಕೆಟ್ ಪಡೆದ್ರೂ ಗೆಲುವು ಕನ್ಫರ್ಮ್ ಇರ್ಲಿಲ್ಲ
ಶ್ರೇಯಸ್ ಅಯ್ಯರ್ ಮಾಡಿದ ಅದ್ಭುತ ರನೌಟ್ನಿಂದ ತಂಡಕ್ಕೆ ತಿರುವು
ಹಿಟ್ಮ್ಯಾನ್ ಬುದ್ಧಿವಂತಿಕೆಗೆ ಇಂಗ್ಲೆಂಡ್ ಪ್ರತ್ಯುತ್ತರ ನೀಡಲಾಗಲಿಲ್ಲ
ವೈಜಾಗ್ನಲ್ಲಿ ಆಂಗ್ಲರಿಗೆ ಸೋಲಿನ ಮುಖಭಂಗವಾಗಿದೆ. ಭಾರತೀಯ ಹುಲಿಗಳ ಘರ್ಜನೆ ಮುಂದೆ ಸ್ಟೋಕ್ಸ್ ಬಳಗದ ಬಝ್ಬಾಲ್ ಠುಸ್ ಪಟಾಕಿ ಆಯ್ತು. ನಾಲ್ಕೇ ದಿನದಲ್ಲಿ ಪ್ರವಾಸಿ ಇಂಗ್ಲೆಂಡ್ ಗಂಟೆಮೂಟೆ ಕಟ್ತು. ಇಂಗ್ಲೆಂಡ್ ತಂಡವನ್ನ ಸೋಲಿನ ಖೆಡ್ಡಾಗೆ ತಳ್ಳಿದ್ದು, ಆ ಐದು ಮೂಮೆಂಟ್ಸ್. ಆ 5 ಗೇಮ್ ಚೇಂಜಿಂಗ್ ಮೂಮೆಂಟ್ಸ್ಗಳು ಯಾವವು?.
ಹೈದ್ರಾಬಾದ್ ಟೆಸ್ಟ್ ಸೋಲಿನಿಂದ ಕಂಗೆಟ್ಟಿದ್ದ ಟೀಮ್ ಇಂಡಿಯಾ ಸಿಡಿದು ನಿಂತಿದೆ. ಸೇಡಿನ ಸಮರದಲ್ಲಿ ರೋಹಿತ್ ಪಡೆ ಗೆದ್ದು ಬೀಗಿದೆ. ವೈಜಾಗ್ನಲ್ಲಿ 106 ರನ್ನಿಂದ ಗೆದ್ದು ಆಂಗ್ಲರ ಹುಟ್ಟಡಗಿಸಿದೆ. ಆ ಮೂಲಕ ಸರಣಿಯಲ್ಲಿ ಭಾರತ ಬ್ಯಾಕ್ ವಿತ್ ಬ್ಯಾಂಗ್ ಮಾಡಿದ್ದು, WE NERVER GIVE UP ಅನ್ನೋ ಸ್ಟ್ರಾಂಗ್ ಮೆಸೇಜ್ ರವಾನಿಸಿದೆ. ಅಷ್ಟಕ್ಕೂ ಭಾರತದ ಗೆಲುವನ್ನ ನಿರ್ಧರಿಸಿದ್ದು ಆ ಐದೇ 5 ಮೂಮೆಂಟ್ಸ್. ಆ 5 ಮೂಮೆಂಟ್ಸ್ನಿಂದಲೇ ಇಡೀ ಪಂದ್ಯ ಭಾರತದ ಕಡೆ ಟರ್ನ್ ಆಯ್ತು. ಆ ಗೇಮ್ ಚೇಜಿಂಗ್ ಮೂಮೆಂಟ್ಸ್ಗಳನ್ನ ಒಂದೊಂದರ ಮಾಹಿತಿ ಇಲ್ಲಿದೆ.
ರೋಹಿತ್ ಕೈಯಲ್ಲಿ ಪೋಪ್ ಲಾಕ್.. ಆಂಗ್ಲರ ಅಧಃಪತನ ಶುರು
ಇಂಗ್ಲೆಂಡ್ 2 ವಿಕೆಟ್ಗೆ 131 ರನ್ ಗಳಿಸಿ ಸುಭದ್ರ ಸ್ಥಿತಿಯಲ್ಲಿತ್ತು. ಆಗ ಕ್ಯಾಪ್ಟನ್ ರೋಹಿತ್ ವಿಕೆಟ್ ಟೇಕರ್ ಅಶ್ವಿನ್ ಕೈಯಲ್ಲಿ ಚೆಂಡು ನೀಡಿದ್ರು. ಪೋಪ್ ಬ್ಯಾಟ್ಗೆ ತಗುಲಿದ ಚೆಂಡು ನೇರವಾಗಿ ಸ್ಲಿಪ್ನಲ್ಲಿ ಕ್ಯಾಪ್ಟನ್ ಕೈ ಸೇರಿತು. ಪೋಪ್ 23 ರನ್ ಗಳಿಸಿ ಹೊರನಡೆದಿದ್ದೆ ತಡ, ಆಂಗ್ಲರ ಅಧಃಪತನ ಶುರುವಾಯ್ತು. ರೋಹಿತ್ ಬಳಗದಲ್ಲಿ ಗೆಲುವಿನ ಆಸೆ ಚಿಗುರಿತು. ಒಂದು ವೇಳೆ ರೋಹಿತ್, ಡೇಂಜರಸ್ ಪೋಪ್ ಕ್ಯಾಚ್ ಡ್ರಾಪ್ ಮಾಡಿದ್ರೆ ಸೋಲಿನ ದರ್ಶನ ಆಗಿ ಬಿಡ್ತಿತ್ತು.
ಬಿಗ್ ಫಿಶ್ ಕ್ರಾವ್ಲಿ- ಬೇರ್ಸ್ಟೋವ್ ಔಟ್..ಭಾರತ ನಿರಾಳ..!
ಭಾರತ 154ಕ್ಕೆ 4 ವಿಕೆಟ್ ಕಬಳಿಸಿದ್ರೂ ಜಾಕ್ ಕ್ರಾವ್ಲಿ ಹಾಗೂ ಜಾನಿ ಬೇಸ್ಟೋವ್ ಕ್ರಿಸ್ನಲ್ಲಿ ಹೆಬ್ಬಂಡೆಯಾಗಿ ನಿಂತಿದ್ರು. ಬಿರುಸಿನ 40 ರನ್ ಜೊತೆಯಾಟವಾಡಿ ಪಂದ್ಯವನ್ನ ತಮ್ಮತ್ತ ತಿರುಗುವಂತೆ ಮಾಡಿದ್ರು. ಇನ್ನೇನು ಭಾರತದ ಕಥೆ ಮುಗೀತು ಅನ್ನುವಷ್ಟರಲ್ಲಿ ಕುಲ್ದೀಪ್ ಯಾದವ್ ಅರ್ಧಶತಕ ಗಳಿಸಿದ್ದ ಜಾಕ್ ಕ್ರಾವ್ಲಿಗೆ ಗೇಟ್ಪಾಸ್ ನೀಡಿದ್ರು. ಇವರ ಬೆನ್ನಲ್ಲೆ ಬಿಗ್ ಹಿಟ್ಟರ್ ಬೇರ್ಸ್ಟೋವ್ ಕೂಡ ನಿರ್ಗಮಿಸಿದ್ರು.ಲಂಚ್ ಬ್ರೇಕ್ಗೂ ಮುನ್ನ ಈ ಎರಡು ಬಿಗ್ ಫಿಶ್ ಬಲಿ ಪಡೆದ ಭಾರತ ಪಂದ್ಯದ ಮೇಲೆ ಮತ್ತಷ್ಟು ಹಿಡಿತ ಸಾಧಿಸ್ತು.
ಸ್ಟೋಕ್ಸ್ಗೆ ಶ್ರೇಯಸ್ ರನೌಟ್ ಶಾಕ್.. ಪಂದ್ಯಕ್ಕೆ ತಿರುವು..
ಎದುರಾಳಿಯ ತಂಡದ 6 ವಿಕೆಟ್ ಪಡೆದ್ರೂ ಗೆಲುವು ಕನ್ಫರ್ಮ್ ಆಗಿರ್ಲಿಲ್ಲ. ಯಾಕಂದ್ರೆ ಗೇಮ್ ಚೇಂಜರ್ ಬೆನ್ ಸ್ಟೋಕ್ಸ್ ಕ್ರೀಸ್ನಲ್ಲಿದ್ರು. ಯಾವ ಟೈಮ್ಲ್ಲೂ ಪಂದ್ಯದ ಚಿತ್ರಣ ಬದಲಿಸುವ ತಾಕತ್ತು ಇವರಿಗಿತ್ತು. ಇಂತಹ ಒನ್ ಮ್ಯಾನ್ ಆರ್ಮಿಯನ್ನ ಶ್ರೇಯಸ್ ಅಯ್ಯರ್ ಅದ್ಭುತ ರನೌಟ್ ಬಲೆಗೆ ಬೀಳಿಸಿದ್ರು. ಆಗ ತಾನೇ ಹೊಟ್ಟೆ ತುಂಬಾ ತಿಂದು ಬಂದಿದ್ದ ಸ್ಟೋಕ್ಸ್, ರನೌಟ್ಗೆ ಬಲಿಯಾದ್ರು.
ಬೌಲರ್ಸ್ ಕಣ್ಣಲ್ಲಿ ಕಾಣ್ತಿದ್ದ ಗೆಲುವಿನ ಕಿಡಿ..!
ಪಂದ್ಯದ ನಾಲ್ಕನೇ ದಿನ ಟೀಮ್ ಇಂಡಿಯಾದ ಎಲ್ಲ ಬೌಲರ್ಸ್ ವೈಜಾಗ್ ಟೆಸ್ಟ್ ಗೆದ್ದೇ ತೀರುವ ಪಣ ತೊಟ್ಟಂತೆ ಕಾಣಿಸ್ತಿತ್ತು. ಆ ಮಟ್ಟಿಗೆ ವೇಗಿಗಳು ಹಾಗೂ ಸ್ಪಿನ್ನರ್ಸ್ ಒಗ್ಗಟ್ಟಿನ ಹೋರಾಟ ನಡೆಸಿದ್ರು. ಸ್ಟಾರ್ ಬೌಲರ್ ಬೂಮ್ರಾ 3 ವಿಕೆಟ್ ಪಡೆದು ಇಂಗ್ಲೆಂಡ್ಗೆ ದೊಡ್ಡ ಪೆಟ್ಟು ನೀಡಿದ್ರು. ಸ್ಪಿನ್ನರ್ಗಳಾದ ಅಶ್ವಿನ್ 3 ಹಾಗೂ ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್ ತಲಾ 1 ವಿಕೆಟ್ ಪಡೆದು ಪಂದ್ಯದ ದಿಕ್ಕನ್ನೆ ಬದಲಿಸಿದ್ರು.
ಒತ್ತಡದ ನಡುವೆ ರೋಹಿತ್ ಜಾಣತನದ ಕ್ಯಾಪ್ಟನ್ಸಿ
ರೋಹಿತ್ ಶರ್ಮಾರ CLEVER ಕ್ಯಾಪ್ಟನ್ಸಿ ಕೂಡ ವೈಜಾಗ್ ಟೆಸ್ಟ್ನಲ್ಲಿ ಪ್ರಮುಖ ಗೆಲುವಿನ ಪಾತ್ರ ವಹಿಸ್ತು. ಒಂದೆಡೆ ಇಂಗ್ಲೆಂಡ್ ಬ್ಯಾಟರ್ಸ್ ಆಕ್ರಮಣಕಾರಿ ಆಟದ ಮೂಲಕ ಒತ್ತಡ ಹೇರುತ್ತಿದ್ರು. ಇದಕ್ಕೆ ರೋಹಿತ್ ಗಾಬರಿಗೊಳ್ಳಲಿಲ್ಲ. ಆಟಗಾರರನ್ನ ಕೂಲ್ ಆಗಿ ಹ್ಯಾಂಡಲ್ ಮಾಡಿದ್ರು. ಎದುರಾಳಿ ಬ್ಯಾಟರ್ಗಳ ವಿಕ್ನೆಸ್ಗೆ ಸೂಕ್ತ ಸ್ಟ್ರಾಟಜಿ ರೂಪಿಸಿದ್ರು. ಹಿಟ್ಮ್ಯಾನ್ರ ಬುದ್ಧಿವಂತಿಕೆಯ ನಾಯಕತ್ವಕ್ಕೆ ಆಂಗ್ಲರು ಪ್ರತ್ಯುತ್ತರ ನೀಡಲಾಗದೇ ಸೋಲೊಪ್ಪಿಕೊಂಡ್ರು.
ಹೈದ್ರಾಬಾದ್ನಲ್ಲಿ ತಲೆ ತಗ್ಗಿಸಿದ್ದ ಟೀಮ್ ಇಂಡಿಯಾ ವೈಜಾಗ್ನಲ್ಲಿ ತಲೆ ಎತ್ತಿ ಮೆರೆದಾಡಿದೆ. ಈ ಗೆಲುವನ್ನ ತಲೆಗೇರಿಸಿಕೊಳ್ಳದೇ ರಾಜ್ಕೋಟ್ನಲ್ಲಿ ಕಣಕ್ಕಿಳಿಯಲಿ. ಗೆಲುವಿನ ಯಾತ್ರೆ ಮುಂದುವರಿಸಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ