ಕಾಡುತ್ತಿದೆ ಟೀಮ್ ಇಂಡಿಯಾಕ್ಕೆ ಶ್ರೇಯಸ್ ಅಲಭ್ಯತೆ
4ನೇ ಕ್ರಮಾಂಕದ ಸಮಸ್ಯೆಗೆ ಸಿಲುಕಿದ ಟೀಮ್ ಇಂಡಿಯಾ
ಯಾರು ಆಗ್ತಾರೆ ಟೀಮ್ ಇಂಡಿಯಾ ಕಗ್ಗಂಟ್ಟಿಗೆ ಉತ್ತರ..?
ಟೀಮ್ ಇಂಡಿಯಾದಲ್ಲಿನ ಪ್ರತಿ ಸ್ಲಾಟ್ಗೆ ಪರಿಹಾರ ಸಿಕ್ಕಿದ್ರೂ, ಕ್ರೂಶಿಯಲ್ ಟೈಮ್ನಲ್ಲಿ ಕೈ ಕೊಡುತ್ತೆ. ಈಗ ಮತ್ತೆ ಅದೇ ಸ್ಲಾಟ್ ಟೀಮ್ ಇಂಡಿಯಾಗೆ ಸಮಸ್ಯೆಯಾಗಿ ಮಾರ್ಪಟ್ಟಿದೆ. ಇದು ಮತ್ತೆ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾಗೆ ಮುಳ್ಳಾಗೋದು ಕನ್ಫರ್ಮ್. ಅಂದ್ಹಾಗೆ ಆ ಸ್ಲಾಟ್ ಯಾವುದು..? ಆ ಸ್ಲಾಟ್ಗೂ ವಿಶ್ವಕಪ್ಗೂ ಇರೋ ನಂಟೇನು?
ಟೀಮ್ ಇಂಡಿಯಾ ಅಂದ್ರೆನೇ ಸಮಸ್ಯೆಗಳ ಆಗರ. ಒಂದಿಲ್ಲೊಂದು ಸಮಸ್ಯೆಯ ಸುಳಿಗೆ ಸಿಲುಕಿ ನಲುಗುವ ಟೀಮ್ ಇಂಡಿಯಾಗೆ, ಈಗ ಮತ್ತದೇ ಸಮಸ್ಯೆ ಕಂಗ್ಗಂಟಾಗಿದೆ. ಆ ಸಮಸ್ಯೆಯೇ ನಂ.4 ಸ್ಲಾಟ್.
ಟೀಮ್ ಇಂಡಿಯಾಗೆ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಕ್ಕಿದ್ರೂ, ಈ 4 ಸ್ಲಾಟ್ಗೆ ಮಾತ್ರ ಪರಿಹಾರನೇ ಸಿಕ್ಕಿಲ್ಲ. ಪರಿಹಾರ ಸಿಕ್ತು ಎಂದಾಕ್ಷಣ ಮತ್ತದೇ ಸಮಸ್ಯೆ ವಿಶ್ವಕಪ್ ವೇಳೆಗೆ ಉಲ್ಬಣಗೊಂಡು ವಿಶ್ವಕಪ್ ಕಿರೀಟದ ಕನಸಿಗೆ ಕೊಳ್ಳಿ ಇಡುತ್ತೆ. ಈ ಸಲನೂ ಇದೇ ರಿಪೀಟ್ ಆಗ್ತಿದೆ. ಇದಕ್ಕೆಲ್ಲಾ ಕಾರಣ 4ನೇ ಸ್ಲಾಟ್ನ ಸಕ್ಸಸ್ಫುಲ್ ಪ್ಲೇಯರ್ ಶ್ರೇಯಸ್.
ವಿಶ್ವಕಪ್ಗಳಲ್ಲಿ 4ನೇ ಕ್ರಮಾಂಕವೇ ಭಾರತಕ್ಕೆ ಥ್ರೆಟ್..!
ಟೀಮ್ ಇಂಡಿಯಾಗೆ ಉತ್ತರ ಇಲ್ಲದ ಪ್ರಶ್ನೆ ಅಂದ್ರೆ 4ನೇ ಕ್ರಮಾಂಕ ಅನ್ನೋದನ್ನ ಸ್ಪಷ್ಟವಾಗಿ ಹೇಳಬಹುದು. 2019ರ ವಿಶ್ವಕಪ್ ಬಳಿಕ ಟೀಮ್ ಇಂಡಿಯಾದ 4ರ ಸಮಸ್ಯೆಗೆ ಶ್ರೇಯಸ್ ಅಯ್ಯರ್ ಎಂಬ ಉತ್ತರ ಸಿಕ್ಕಿತ್ತು. ಸಾಲಿಡ್ ಬ್ಯಾಟಿಂಗ್ ಮಾಡುವ ಮೂಲಕ 4ರ ಕಗ್ಗಂಟ್ಟಿಗೆ ಉತ್ತರವಾಗಿದ್ದರು. ಆದ್ರೀಗ ಮತ್ತೆ ವಿಶ್ವಕಪ್ ಸಮಯದಲ್ಲೇ ಇಂಜುರಿಗೆ ತುತ್ತಾಗಿರೋ ಶ್ರೇಯಸ್ ಮತ್ತೆ ವಿಶ್ವಕಪ್ ಟೂರ್ನಿಗೆ ಲಭ್ಯರಾಗೋದು ಅನುಮಾನ. ಇದೇ ಏಕದಿನ ವಿಶ್ವಕಪ್ನಲ್ಲಿ ಸಮಸ್ಯೆಯಾಗುವ ಸಾಧ್ಯತೆ ಇದೆ.
2019ರ ಏಕದಿನ ವಿಶ್ವಕಪ್ನಲ್ಲೂ ಕಾಡಿತ್ತು 4ರ ಕಗ್ಗಂಟ್ಟು.!
ಟೀಮ್ ಇಂಡಿಯಾಗೆ ಈ 4ರ ಸಮಸ್ಯೆ, ಇಂದು ನಿನ್ನೆಯದಲ್ಲ. ಬರೋಬ್ಬರಿ 5 ವರ್ಷಗಳ ಸಮಸ್ಯೆ. ಈ ಸಮಸ್ಯೆಗೆ ಟೀಮ್ ಇಂಡಿಯಾ ಬೆಲೆ ತೆತ್ತಿದ್ದು ಬರೋಬ್ಬರಿ 3 ವಿಶ್ವಕಪ್ಗಳು.
ಹೌದು! 2019ರ ಏಕದಿನ ವಿಶ್ವಕಪ್ನಲ್ಲೂ ಟೀಮ್ ಇಂಡಿಯಾಗೆ 4ನೇ ಕ್ರಮಾಂಕದ ಸಮಸ್ಯೆ ಕಾಡಿತ್ತು. ಅಂಬಾಟಿ ರಾಯುಡು, ಅಜಿಂಕ್ಯಾ ರಹಾನೆಯ ಹೊರತಾಗಿ ವಿಜಯ್ ಶಂಕರ್ಗೆ ಮಣೆ ಹಾಕಿದ್ದ ಬಿಸಿಸಿಐ, ಇನ್ನಿಲ್ಲದ ಸಮಸ್ಯೆ ಎದುರಿಸಿತ್ತು. ಪರಿಣಾಮ ವಿಶ್ವಕಪ್ ಗೆಲುವಿನ ಕನಸು ಚಿದ್ರವಾಗಿತ್ತು. ಇದಿಷ್ಟೇ ಅಲ್ಲ, ನಂತರದ 2 ವಿಶ್ವಕಪ್ಗಳಲ್ಲೂ ಟೀಮ್ ಇಂಡಿಯಾಗೆ 4ರದ್ದೇ ಸಮಸ್ಯೆಯಾಗಿತ್ತು.
2021, 2022ರ ಟಿ20 ವಿಶ್ವಕಪ್ನಲ್ಲೂ ಸೇಮ್ ಪ್ರಾಬ್ಲಂ..!
ಹೌದು! 2021 ವಿಶ್ವಕಪ್ಗೂ ಮುನ್ನ ಟೀಮ್ ಇಂಡಿಯಾ ನೋಡೋಕೆ ಬಲಾಢ್ಯವಾಗೇ ಕಾಣ್ತಿತ್ತು. ಆದ್ರೆ, ಇಂಗ್ಲೆಂಡ್ ಸರಣಿ ವೇಳೆ ಭುಜದ ಇಂಜುರಿಗೆ ತುತ್ತಾದ ಶ್ರೇಯಸ್, ಟಿ20 ವಿಶ್ವಕಪ್ ರೇಸ್ನಿಂದಲೇ ಹೊರ ಬೀಳಬೇಕಾಯ್ತು. ಇದರಿಂದ 4ನೇ ಕ್ರಮಾಂಕದ ಸಮಸ್ಯೆಗೆ ಸಿಲುಕಿದ ಟೀಮ್ ಇಂಡಿಯಾ, ಸೂರ್ಯಕುಮಾರ್ ಹಾಗೂ ಇಶಾನ್ ಕಿಶನ್ಗೆ ಮಣೆಹಾಕಿತ್ತು. ಟೂರ್ನಿಯಲ್ಲಿ ಅಲ್ಲೊಂದು ಚಾನ್ಸ್, ಇಲ್ಲೊಂದು ಚಾನ್ಸ್ ನೀಡಿದ ಪರಿಣಾಮ ಲೀಗ್ ಸ್ಟೇಜ್ನಿಂದಲೇ ಔಟಾಗಿತ್ತು.
ಇಂಥದ್ದೆ ಸಮಸ್ಯೆ 2022ರ ಟಿ20 ವಿಶ್ವಕಪ್ನಲ್ಲೂ ಮುಂದುವರಿದಿತ್ತು. ಈ ವಿಶ್ವಕಪ್ನಲ್ಲಿ ಸೂರ್ಯಕುಮಾರ್ ಕೊನೆಯಲ್ಲಿ ಅಬ್ಬರಿಸಿದ್ದರು. ನಿರ್ಣಾಯಕ ಪಂದ್ಯಗಳಲ್ಲಿ ಕೈಕೊಟ್ಟಿದ್ದರು. ಪರಿಣಾಮ ಸೆಮೀಸ್ನಿಂದ ಹೊರಬಿತ್ತು. ಆದ್ರೀಗ ಇಂಥದ್ದೇ ಸಮಸ್ಯೆ ಟೀಮ್ ಇಂಡಿಯಾಗೆ ಎದುರಾಗ್ತಿದೆ.
ಈ ಏಕದಿನ ವಿಶ್ವಕಪ್ನಲ್ಲಿ ಸಿಗುತ್ತಾ ಸೂಕ್ತ ಪರಿಹಾರ..?
ಮತ್ತದೇ ಸಮಸ್ಯೆಗೆ ಸಿಲುಕಿರೋ ಟೀಮ್ ಇಂಡಿಯಾ, ಮತ್ತೆ 4ಮನೇ ಕ್ರಮಾಂಕದ ಕಗ್ಗಂಟ್ಟಿನ ಉತ್ತರ ಹುಡುಕುತ್ತಿದೆ. ಈಗಾಗಲೇ ಈ ಸ್ಲಾಟ್ನಲ್ಲಿ ಬ್ಯಾಟ್ ಬೀಸಿರುವ ಸೂರ್ಯಕುಮಾರ್ ಯಾದವ್, ಇಶಾನ್ ಕಿಶಾನ್, ಕೆ.ಎಲ್.ರಾಹುಲ್ ಸಕ್ಸಸ್ ಅನ್ನೇ ಕಂಡಿಲ್ಲ. ಹೀಗಾಗಿ ಬಿಗ್ಬಾಸ್ಗಳಿಗೆ ಬಿಗ್ ಟೆನ್ಶನ್ ಆಗಿ ಮಾರ್ಪಟ್ಟಿದೆ.
4ನೇ ಕ್ರಮಾಂಕದ ಆಟಗಾರರ ಪ್ರದರ್ಶನ
ಯಾಕಂದ್ರೆ, 4ನೇ ಕ್ರಮಾಂಕದಲ್ಲಿ ಆಡಿರೋ ಸೂರ್ಯಕುಮಾರ್ ಯಾದವ್ 5 ಪಂದ್ಯಗಳಿಂದ 6ರ ಸರಾಸರಿಯಲ್ಲಿ ಜಸ್ಟ್ 30 ರನ್ ಗಳಿಸಿದ್ರೆ. 6 ಪಂದ್ಯಗಳನ್ನು ಆಡಿರುವ ಇಶಾನ್ ಕಿಶನ್ 21.20 ಸರಾಸರಿಯಲ್ಲಿ 106 ರನ್ ಗಳಿಸಿದ್ದಾರೆ. ಇವರ ಬಳಿಕ 7 ಪಂದ್ಯಗಳನ್ನು ಆಡಿರುವ ಕೆ.ಎಲ್.ರಾಹುಲ್ 40.16ರ ಸರಾಸರಿಯಲ್ಲಿ 241 ರನ್ ಗಳಿಸಿದ್ದಾರೆ. ಆ ಮೂಲಕ 4ನೇ ಸ್ಲಾಟ್ ತುಂಬುವ ಭರವಸೆ ಮೂಡಿಸಿದ್ದಾರೆ.
ಆದ್ರೆ, ಇಂಜುರಿಯಿಂದ ಬಳಲುತ್ತಿರುವ ಕೆ.ಎಲ್.ರಾಹುಲ್, 5ನೇ ಕ್ರಮಾಂಕದಲ್ಲಿ ಕ್ರೂಶಿಯಲ್ ಇನ್ನಿಂಗ್ಸ್ ಆಡಿದ್ದಾರೆ. ಹೀಗಾಗಿ 4ನೇ ಕ್ರಮಾಂಕಕ್ಕೆ ಬಿಸಿಸಿಐ ಯಾರನ್ನ ಆಯ್ಕೆ ಮಾಡುತ್ತೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಯಾಕಂದ್ರೆ, 4ನೇ ಕ್ರಮಾಂಕ ಮೋಸ್ಟ್ ಕ್ರೂಶಿಯಲ್ ರೋಲ್.. ಟಾಪ್ ಆರ್ಡರ್ ವೈಫಲ್ಯದ ವೇಳೆ ತಡೆಗೊಡೆಯಾಗಿ ನಿಲ್ಲಬೇಕಾದ ಜವಾಬ್ದಾರಿಯ ಜೊತೆಗೆ ತಂಡವನ್ನ ಗೆಲುವಿನ ದಡ ಸೇರಿಸುವ ಹೊಣೆ ಈ 4ನೇ ಕ್ರಮಾಂಕದ ಬ್ಯಾಟರ್ಗಳೇ ಹೊರಬೇಕಾಗುತ್ತೆ. ಈ ಕ್ರಮಾಂಕದ ಸಕ್ಸಸ್ ಮೇಲೆ ತಂಡದ ಭವಿಷ್ಯ ಅಡಗಿರುತ್ತೆ. ಹೀಗಾಗಿ ಕಗ್ಗಂಟ್ಟಿನ ಉತ್ತರಕ್ಕೆ ಸ್ಪಷ್ಟ ಉತ್ತರ ಕಂಡುಕೊಳ್ಳಬೇಕಾದ ಅವಶ್ಯಕತೆ ಟೀಮ್ ಇಂಡಿಯಾಗೆ ಇದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಕಾಡುತ್ತಿದೆ ಟೀಮ್ ಇಂಡಿಯಾಕ್ಕೆ ಶ್ರೇಯಸ್ ಅಲಭ್ಯತೆ
4ನೇ ಕ್ರಮಾಂಕದ ಸಮಸ್ಯೆಗೆ ಸಿಲುಕಿದ ಟೀಮ್ ಇಂಡಿಯಾ
ಯಾರು ಆಗ್ತಾರೆ ಟೀಮ್ ಇಂಡಿಯಾ ಕಗ್ಗಂಟ್ಟಿಗೆ ಉತ್ತರ..?
ಟೀಮ್ ಇಂಡಿಯಾದಲ್ಲಿನ ಪ್ರತಿ ಸ್ಲಾಟ್ಗೆ ಪರಿಹಾರ ಸಿಕ್ಕಿದ್ರೂ, ಕ್ರೂಶಿಯಲ್ ಟೈಮ್ನಲ್ಲಿ ಕೈ ಕೊಡುತ್ತೆ. ಈಗ ಮತ್ತೆ ಅದೇ ಸ್ಲಾಟ್ ಟೀಮ್ ಇಂಡಿಯಾಗೆ ಸಮಸ್ಯೆಯಾಗಿ ಮಾರ್ಪಟ್ಟಿದೆ. ಇದು ಮತ್ತೆ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾಗೆ ಮುಳ್ಳಾಗೋದು ಕನ್ಫರ್ಮ್. ಅಂದ್ಹಾಗೆ ಆ ಸ್ಲಾಟ್ ಯಾವುದು..? ಆ ಸ್ಲಾಟ್ಗೂ ವಿಶ್ವಕಪ್ಗೂ ಇರೋ ನಂಟೇನು?
ಟೀಮ್ ಇಂಡಿಯಾ ಅಂದ್ರೆನೇ ಸಮಸ್ಯೆಗಳ ಆಗರ. ಒಂದಿಲ್ಲೊಂದು ಸಮಸ್ಯೆಯ ಸುಳಿಗೆ ಸಿಲುಕಿ ನಲುಗುವ ಟೀಮ್ ಇಂಡಿಯಾಗೆ, ಈಗ ಮತ್ತದೇ ಸಮಸ್ಯೆ ಕಂಗ್ಗಂಟಾಗಿದೆ. ಆ ಸಮಸ್ಯೆಯೇ ನಂ.4 ಸ್ಲಾಟ್.
ಟೀಮ್ ಇಂಡಿಯಾಗೆ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಕ್ಕಿದ್ರೂ, ಈ 4 ಸ್ಲಾಟ್ಗೆ ಮಾತ್ರ ಪರಿಹಾರನೇ ಸಿಕ್ಕಿಲ್ಲ. ಪರಿಹಾರ ಸಿಕ್ತು ಎಂದಾಕ್ಷಣ ಮತ್ತದೇ ಸಮಸ್ಯೆ ವಿಶ್ವಕಪ್ ವೇಳೆಗೆ ಉಲ್ಬಣಗೊಂಡು ವಿಶ್ವಕಪ್ ಕಿರೀಟದ ಕನಸಿಗೆ ಕೊಳ್ಳಿ ಇಡುತ್ತೆ. ಈ ಸಲನೂ ಇದೇ ರಿಪೀಟ್ ಆಗ್ತಿದೆ. ಇದಕ್ಕೆಲ್ಲಾ ಕಾರಣ 4ನೇ ಸ್ಲಾಟ್ನ ಸಕ್ಸಸ್ಫುಲ್ ಪ್ಲೇಯರ್ ಶ್ರೇಯಸ್.
ವಿಶ್ವಕಪ್ಗಳಲ್ಲಿ 4ನೇ ಕ್ರಮಾಂಕವೇ ಭಾರತಕ್ಕೆ ಥ್ರೆಟ್..!
ಟೀಮ್ ಇಂಡಿಯಾಗೆ ಉತ್ತರ ಇಲ್ಲದ ಪ್ರಶ್ನೆ ಅಂದ್ರೆ 4ನೇ ಕ್ರಮಾಂಕ ಅನ್ನೋದನ್ನ ಸ್ಪಷ್ಟವಾಗಿ ಹೇಳಬಹುದು. 2019ರ ವಿಶ್ವಕಪ್ ಬಳಿಕ ಟೀಮ್ ಇಂಡಿಯಾದ 4ರ ಸಮಸ್ಯೆಗೆ ಶ್ರೇಯಸ್ ಅಯ್ಯರ್ ಎಂಬ ಉತ್ತರ ಸಿಕ್ಕಿತ್ತು. ಸಾಲಿಡ್ ಬ್ಯಾಟಿಂಗ್ ಮಾಡುವ ಮೂಲಕ 4ರ ಕಗ್ಗಂಟ್ಟಿಗೆ ಉತ್ತರವಾಗಿದ್ದರು. ಆದ್ರೀಗ ಮತ್ತೆ ವಿಶ್ವಕಪ್ ಸಮಯದಲ್ಲೇ ಇಂಜುರಿಗೆ ತುತ್ತಾಗಿರೋ ಶ್ರೇಯಸ್ ಮತ್ತೆ ವಿಶ್ವಕಪ್ ಟೂರ್ನಿಗೆ ಲಭ್ಯರಾಗೋದು ಅನುಮಾನ. ಇದೇ ಏಕದಿನ ವಿಶ್ವಕಪ್ನಲ್ಲಿ ಸಮಸ್ಯೆಯಾಗುವ ಸಾಧ್ಯತೆ ಇದೆ.
2019ರ ಏಕದಿನ ವಿಶ್ವಕಪ್ನಲ್ಲೂ ಕಾಡಿತ್ತು 4ರ ಕಗ್ಗಂಟ್ಟು.!
ಟೀಮ್ ಇಂಡಿಯಾಗೆ ಈ 4ರ ಸಮಸ್ಯೆ, ಇಂದು ನಿನ್ನೆಯದಲ್ಲ. ಬರೋಬ್ಬರಿ 5 ವರ್ಷಗಳ ಸಮಸ್ಯೆ. ಈ ಸಮಸ್ಯೆಗೆ ಟೀಮ್ ಇಂಡಿಯಾ ಬೆಲೆ ತೆತ್ತಿದ್ದು ಬರೋಬ್ಬರಿ 3 ವಿಶ್ವಕಪ್ಗಳು.
ಹೌದು! 2019ರ ಏಕದಿನ ವಿಶ್ವಕಪ್ನಲ್ಲೂ ಟೀಮ್ ಇಂಡಿಯಾಗೆ 4ನೇ ಕ್ರಮಾಂಕದ ಸಮಸ್ಯೆ ಕಾಡಿತ್ತು. ಅಂಬಾಟಿ ರಾಯುಡು, ಅಜಿಂಕ್ಯಾ ರಹಾನೆಯ ಹೊರತಾಗಿ ವಿಜಯ್ ಶಂಕರ್ಗೆ ಮಣೆ ಹಾಕಿದ್ದ ಬಿಸಿಸಿಐ, ಇನ್ನಿಲ್ಲದ ಸಮಸ್ಯೆ ಎದುರಿಸಿತ್ತು. ಪರಿಣಾಮ ವಿಶ್ವಕಪ್ ಗೆಲುವಿನ ಕನಸು ಚಿದ್ರವಾಗಿತ್ತು. ಇದಿಷ್ಟೇ ಅಲ್ಲ, ನಂತರದ 2 ವಿಶ್ವಕಪ್ಗಳಲ್ಲೂ ಟೀಮ್ ಇಂಡಿಯಾಗೆ 4ರದ್ದೇ ಸಮಸ್ಯೆಯಾಗಿತ್ತು.
2021, 2022ರ ಟಿ20 ವಿಶ್ವಕಪ್ನಲ್ಲೂ ಸೇಮ್ ಪ್ರಾಬ್ಲಂ..!
ಹೌದು! 2021 ವಿಶ್ವಕಪ್ಗೂ ಮುನ್ನ ಟೀಮ್ ಇಂಡಿಯಾ ನೋಡೋಕೆ ಬಲಾಢ್ಯವಾಗೇ ಕಾಣ್ತಿತ್ತು. ಆದ್ರೆ, ಇಂಗ್ಲೆಂಡ್ ಸರಣಿ ವೇಳೆ ಭುಜದ ಇಂಜುರಿಗೆ ತುತ್ತಾದ ಶ್ರೇಯಸ್, ಟಿ20 ವಿಶ್ವಕಪ್ ರೇಸ್ನಿಂದಲೇ ಹೊರ ಬೀಳಬೇಕಾಯ್ತು. ಇದರಿಂದ 4ನೇ ಕ್ರಮಾಂಕದ ಸಮಸ್ಯೆಗೆ ಸಿಲುಕಿದ ಟೀಮ್ ಇಂಡಿಯಾ, ಸೂರ್ಯಕುಮಾರ್ ಹಾಗೂ ಇಶಾನ್ ಕಿಶನ್ಗೆ ಮಣೆಹಾಕಿತ್ತು. ಟೂರ್ನಿಯಲ್ಲಿ ಅಲ್ಲೊಂದು ಚಾನ್ಸ್, ಇಲ್ಲೊಂದು ಚಾನ್ಸ್ ನೀಡಿದ ಪರಿಣಾಮ ಲೀಗ್ ಸ್ಟೇಜ್ನಿಂದಲೇ ಔಟಾಗಿತ್ತು.
ಇಂಥದ್ದೆ ಸಮಸ್ಯೆ 2022ರ ಟಿ20 ವಿಶ್ವಕಪ್ನಲ್ಲೂ ಮುಂದುವರಿದಿತ್ತು. ಈ ವಿಶ್ವಕಪ್ನಲ್ಲಿ ಸೂರ್ಯಕುಮಾರ್ ಕೊನೆಯಲ್ಲಿ ಅಬ್ಬರಿಸಿದ್ದರು. ನಿರ್ಣಾಯಕ ಪಂದ್ಯಗಳಲ್ಲಿ ಕೈಕೊಟ್ಟಿದ್ದರು. ಪರಿಣಾಮ ಸೆಮೀಸ್ನಿಂದ ಹೊರಬಿತ್ತು. ಆದ್ರೀಗ ಇಂಥದ್ದೇ ಸಮಸ್ಯೆ ಟೀಮ್ ಇಂಡಿಯಾಗೆ ಎದುರಾಗ್ತಿದೆ.
ಈ ಏಕದಿನ ವಿಶ್ವಕಪ್ನಲ್ಲಿ ಸಿಗುತ್ತಾ ಸೂಕ್ತ ಪರಿಹಾರ..?
ಮತ್ತದೇ ಸಮಸ್ಯೆಗೆ ಸಿಲುಕಿರೋ ಟೀಮ್ ಇಂಡಿಯಾ, ಮತ್ತೆ 4ಮನೇ ಕ್ರಮಾಂಕದ ಕಗ್ಗಂಟ್ಟಿನ ಉತ್ತರ ಹುಡುಕುತ್ತಿದೆ. ಈಗಾಗಲೇ ಈ ಸ್ಲಾಟ್ನಲ್ಲಿ ಬ್ಯಾಟ್ ಬೀಸಿರುವ ಸೂರ್ಯಕುಮಾರ್ ಯಾದವ್, ಇಶಾನ್ ಕಿಶಾನ್, ಕೆ.ಎಲ್.ರಾಹುಲ್ ಸಕ್ಸಸ್ ಅನ್ನೇ ಕಂಡಿಲ್ಲ. ಹೀಗಾಗಿ ಬಿಗ್ಬಾಸ್ಗಳಿಗೆ ಬಿಗ್ ಟೆನ್ಶನ್ ಆಗಿ ಮಾರ್ಪಟ್ಟಿದೆ.
4ನೇ ಕ್ರಮಾಂಕದ ಆಟಗಾರರ ಪ್ರದರ್ಶನ
ಯಾಕಂದ್ರೆ, 4ನೇ ಕ್ರಮಾಂಕದಲ್ಲಿ ಆಡಿರೋ ಸೂರ್ಯಕುಮಾರ್ ಯಾದವ್ 5 ಪಂದ್ಯಗಳಿಂದ 6ರ ಸರಾಸರಿಯಲ್ಲಿ ಜಸ್ಟ್ 30 ರನ್ ಗಳಿಸಿದ್ರೆ. 6 ಪಂದ್ಯಗಳನ್ನು ಆಡಿರುವ ಇಶಾನ್ ಕಿಶನ್ 21.20 ಸರಾಸರಿಯಲ್ಲಿ 106 ರನ್ ಗಳಿಸಿದ್ದಾರೆ. ಇವರ ಬಳಿಕ 7 ಪಂದ್ಯಗಳನ್ನು ಆಡಿರುವ ಕೆ.ಎಲ್.ರಾಹುಲ್ 40.16ರ ಸರಾಸರಿಯಲ್ಲಿ 241 ರನ್ ಗಳಿಸಿದ್ದಾರೆ. ಆ ಮೂಲಕ 4ನೇ ಸ್ಲಾಟ್ ತುಂಬುವ ಭರವಸೆ ಮೂಡಿಸಿದ್ದಾರೆ.
ಆದ್ರೆ, ಇಂಜುರಿಯಿಂದ ಬಳಲುತ್ತಿರುವ ಕೆ.ಎಲ್.ರಾಹುಲ್, 5ನೇ ಕ್ರಮಾಂಕದಲ್ಲಿ ಕ್ರೂಶಿಯಲ್ ಇನ್ನಿಂಗ್ಸ್ ಆಡಿದ್ದಾರೆ. ಹೀಗಾಗಿ 4ನೇ ಕ್ರಮಾಂಕಕ್ಕೆ ಬಿಸಿಸಿಐ ಯಾರನ್ನ ಆಯ್ಕೆ ಮಾಡುತ್ತೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಯಾಕಂದ್ರೆ, 4ನೇ ಕ್ರಮಾಂಕ ಮೋಸ್ಟ್ ಕ್ರೂಶಿಯಲ್ ರೋಲ್.. ಟಾಪ್ ಆರ್ಡರ್ ವೈಫಲ್ಯದ ವೇಳೆ ತಡೆಗೊಡೆಯಾಗಿ ನಿಲ್ಲಬೇಕಾದ ಜವಾಬ್ದಾರಿಯ ಜೊತೆಗೆ ತಂಡವನ್ನ ಗೆಲುವಿನ ದಡ ಸೇರಿಸುವ ಹೊಣೆ ಈ 4ನೇ ಕ್ರಮಾಂಕದ ಬ್ಯಾಟರ್ಗಳೇ ಹೊರಬೇಕಾಗುತ್ತೆ. ಈ ಕ್ರಮಾಂಕದ ಸಕ್ಸಸ್ ಮೇಲೆ ತಂಡದ ಭವಿಷ್ಯ ಅಡಗಿರುತ್ತೆ. ಹೀಗಾಗಿ ಕಗ್ಗಂಟ್ಟಿನ ಉತ್ತರಕ್ಕೆ ಸ್ಪಷ್ಟ ಉತ್ತರ ಕಂಡುಕೊಳ್ಳಬೇಕಾದ ಅವಶ್ಯಕತೆ ಟೀಮ್ ಇಂಡಿಯಾಗೆ ಇದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ