Advertisment

ಧೋನಿ ಕನ್ನಡಿಯಲ್ಲಿ ಮುಖ ನೋಡಿಕೊಳ್ಳಲಿ! ಮಾಹಿ ಬಗ್ಗೆ ನಿಗಿ ನಿಗಿ ಕೆಂಡ ಕಾರಿದ ಮಾಜಿ ಕ್ರಿಕೆಟಿಗ

author-image
AS Harshith
Updated On
ಧೋನಿ ಕನ್ನಡಿಯಲ್ಲಿ ಮುಖ ನೋಡಿಕೊಳ್ಳಲಿ! ಮಾಹಿ ಬಗ್ಗೆ ನಿಗಿ ನಿಗಿ ಕೆಂಡ ಕಾರಿದ ಮಾಜಿ ಕ್ರಿಕೆಟಿಗ
Advertisment
  • ಮಹೇಂದ್ರ ಸಿಂಗ್​ ಧೋನಿ ಬಗ್ಗೆ ಗಂಭೀರ ಆರೋಪ
  • ಭಾರತೀಯ ನಟ, ಮಾಜಿ ಕ್ರಿಕೆಟಿಗನ ಬಾಯಲ್ಲಿ ಇಂಥಾ ಮಾತೇ
  • ನಾನು ಧೋನಿಯನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದ ಮಾಜಿ ಕ್ರಿಕೆಟಿಗ

ಭಾರತೀಯ ನಟ ಹಾಗೂ ಮಾಜಿ ಕ್ರಿಕೆಟಿಗ ಯೋಗರಾಜ್​ ಸಿಂಗ್​ರವರು ಮಹೇಂದ್ರ ಸಿಂಗ್ ಧೋನಿ​ ಬಗ್ಗೆ ಕೆಂಡ ಕಾರಿದ್ದಾರೆ. ನನ್ನ ಮಗನ ಬದುಕು ಹಾಳು ಮಾಡಿದ ಎಂದು ಆರೋಪಿಸಿದ್ದಾರೆ.

Advertisment

ಯೋಗರಾಜ್​ ಸಿಂಗ್​ರವರು ಟೀಂ ಇಂಡಿಯಾದ ಮಾಹಿ ಆಲ್​ರೌಂಡರ್​​, ಸಿಕ್ಸರ್​ ಸಿಂಗ್​ ಎಂದೇ ಖ್ಯಾತಿ ಪಡೆದಿದ್ದ ಯುವರಾಜ್​ ಸಿಂಗ್​​ರವರ ತಂದೆ. ಇವರು ಕೂಡ ಮಾಜಿ ಕ್ರಿಗೆಟಿಗರು ಮತ್ತು ಭಾರತೀಯ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡವರು. ಆದರೀಗ ಧೋನಿ ಕುರಿತಾಗಿ ಅವರಾಡಿದ ಮಾತುಗಳು ವೈರಲ್​ ಆಗಿವೆ.

publive-image

ಇದನ್ನೂ ಓದಿ: IPL 2025: RCB ರೀಟೈನ್​ ಲಿಸ್ಟ್​ ರೆಡಿ; ಬೆಂಗಳೂರು ತಂಡದಿಂದ ಸ್ಟಾರ್​ ಆಟಗಾರ ಔಟ್​​!

ಸಂವಾದ ಕಾರ್ಯಕ್ರಮದಲ್ಲಿ ಯೋಗರಾಜ್​ ಸಿಂಗ್​​ರವರು ಧೋನಿಯನ್ನು ದೂರಿದ್ದಾರೆ​, ‘ನಾನು ಧೋನಿಯನ್ನು ಕ್ಷಮಿಸುವುದಿಲ್ಲ. ಅವರು ಕನ್ನಡಿಯಲ್ಲಿ ಮುಖ ನೋಡಿಕೊಳ್ಳಬೇಕು. ಅವರು ಶ್ರೇಷ್ಠ ಕ್ರಿಕೆಟಿಗನಾದರೆ ನನ್ನ ಮಗನ ವಿರುದ್ಧ ಏನು ಮಾಡಿದ್ರು. ಅದು ಈಗ ಬೆಳಕಿಗೆ ಬರುತ್ತಿದೆ. ನಾನು ಎಂದಿಗೂ ಕ್ಷಮಿಸುವುದಿಲ್ಲ. ಅವರು ನನ್ನ ಕುಟುಂಬವಾಗಿದ್ದರೂ ಸರಿ ನಾನು ತಪ್ಪು ಮಾಡಿಕೊಂಡದವರನ್ನು ಕ್ಷಮಿಸಲ್ಲ ಎಂದಿದ್ದಾರೆ.

Advertisment

ಇದನ್ನೂ ಓದಿ: 6,6,6,6,6,6; ಒಂದೇ ಓವರ್​ನಲ್ಲಿ ಆರು ಸಿಕ್ಸರ್​ ಸಿಡಿಸಿದ ಭಾರತದ ಯುವ ಬ್ಯಾಟರ್​ ಯಾರು?

publive-image

ಯಾರಾದರೂ ಯುವರಾಜ್​ ಸಿಂಗ್​ನಂತಹ ಮಗನನ್ನು ಹುಟ್ಟು ಹಾಕಬೇಕು ಎಂದು ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ. ಗೌತಮ್​ ಗಂಭೀರ್​​, ವಿರೇಂದ್ರ ಸೆಹ್ವಾಗ್​ ಮತ್ತು ಯುವರಾಜ್​​​ ಸಿಂಗ್​​ನಂತರ ಆಟಗಾರರು ಎಂದಿಗೂ ಹುಟ್ಟಿಲ್ಲ ಎಂದಿಗೂ ಹುಟ್ಟಲ್ಲ. ಯುವರಾಜ್​ ಸಿಂಗ್​ಗೆ ಭಾರತ ರತ್ನ ಕೊಡಬೇಕು. ಯುವಿ ಕ್ಯಾನ್ಸರ್​​ ವಿರುದ್ಧ ಹೋರಾಡಿ ಭಾರತಕ್ಕೆ ವಿಶ್ವಕಪ್​​ ಗೆದ್ದು ಕೊಟ್ಟವರು. ಯುವಿ ಇನ್ನೂ ನಾಲ್ಕೈದು ವರ್ಷಗಳ ಕಾಲ ಆಡಬಹುದಿತ್ತು ಎಂದು ತಂದೆ ಯೋಗರಾಜ್​ ಸಿಂಗ್​ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment