ರತ್ನಭಂಡಾರದ ಕೊಠಡಿ ಇದುವರೆಗೂ ಕೇವಲ 3 ಬಾರಿ ಅಷ್ಟೇ ಓಪನ್!
16 ಜನರ ವಿಶೇಷ ತಂಡದಿಂದ ರತ್ನ ಭಂಡಾರ ಕೋಣೆಯ ಶೋಧ
ತಾಳೆಗರಿಯ 31ನೇ ಪುಟದಲ್ಲಿ ನೆಲಮಾಳಿಗೆಯ ನಿಧಿ ಬಗ್ಗೆ ಉಲ್ಲೇಖ
ಭುವನೇಶ್ವರ: ಇತಿಹಾಸ ಪ್ರಸಿದ್ಧ ಹಿಂದೂ ದೇವಾಲಯ ಪುರಿ ಜಗನ್ನಾಥ ಮಂದಿರದಲ್ಲಿರುವ ರತ್ನ ಭಂಡಾರದ ರಹಸ್ಯ ಬಯಲಾಗುವ ಶುಭ ಕಾಲ ಬಂದಿದೆ. 46 ವರ್ಷದ ಬಳಿಕ ಒಡಿಶಾ ಸರ್ಕಾರ ರತ್ನ ಭಂಡಾರ ಇರುವ ಕೋಣೆಯ ಬಾಗಿಲನ್ನು ತೆರೆದಿದೆ. ದೇವಾಲಯ ಸಮಿತಿಯ 16 ಜನರ ವಿಶೇಷ ತಂಡದಿಂದ ರತ್ನ ಭಂಡಾರ ಕೋಣೆಯ ಶೋಧ ಕಾರ್ಯ ನಡೆಯುತ್ತಿದೆ.
ಇದನ್ನೂ ಓದಿ: BREAKING: ಪುರಿ ಜಗನ್ನಾಥನ ರತ್ನ ಭಂಡಾರದ ಬಾಗಿಲು ತೆಗೆಯುತ್ತಿದ್ದಂತೆ ಮೂರ್ಛೆ ಹೋದ ಎಸ್ಪಿ
ಇಲ್ಲಿವರೆಗೆ 3 ಬಾರಿ ಬಾಗಿಲು ಓಪನ್!
ಪುರಿ ಜಗನ್ನಾಥ ದೇವಾಲಯದ ರತ್ನಭಂಡಾರದ ಕೊಠಡಿಯನ್ನ ಇದುವರೆಗೂ ಕೇವಲ 3 ಬಾರಿ ಅಷ್ಟೇ ಓಪನ್ ಮಾಡಲಾಗಿದೆ. 1803, 1926 ಮತ್ತು 1978ರಲ್ಲಿ ಮಾತ್ರ ರತ್ನ ಭಂಡಾರವನ್ನು ತೆರೆದು ಪರಿಶೀಲನೆ ನಡೆಸಲಾಗಿದೆ. ಅದಾದ ನಂತರ ರತ್ನ ಭಂಡಾರದ ಬಾಗಿಲು ತೆಗೆದೇ ಇಲ್ಲ.
46 ವರ್ಷದ ಹಿಂದೆ ಏನೇನಿತ್ತು?
1979ರಲ್ಲಿ ರತ್ನ ಭಂಡಾರದ ಖಜಾನೆ ತೆರೆದಾಗ ಸಿಕ್ಕ ಒಡವೆಯನ್ನು ದಾಖಲಿಸಲಾಗಿದೆ. ಅಂದು ಜಗನ್ನಾಥನ ಖಜಾನೆಯಲ್ಲಿ 150 ಕೆಜಿ ಚಿನ್ನ ಇತ್ತು. ಚಿನ್ನದ ಆಭರಣಗಳು ಮತ್ತು ಚಿನ್ನವನ್ನೊಳಗೊಂಡ ಕಲ್ಲುಗಳು 1.50 ಲಕ್ಷ ಗ್ರಾಂ ಎನ್ನಲಾಗಿದೆ. ಬೆಳ್ಳಿ ಆಭರಣಗಳು ಮತ್ತು ಬೆಳ್ಳಿಯನ್ನೊಳಗೊಂಡ ಕಲ್ಲುಗಳು 2.50 ಲಕ್ಷ ಗ್ರಾಂ ಇದೆ ಎನ್ನಲಾಗಿದೆ.
ಇದನ್ನೂ ಓದಿ: ರಹಸ್ಯಗಳ ಹೊತ್ತು ನಿಂತ ಪೂರಿ ಜಗನ್ನಾಥ..! ಲೆಕ್ಕವೇ ಮಾಡಲಾಗದಷ್ಟು ರತ್ನ ಭಂಡಾರ ನೀಡಿದ್ದು ಯಾರು ಗೊತ್ತೇ..?
ತಾಳೆಗರಿಯಲ್ಲಿ ಇರೋದೇನು?
ಪುರಿ ಜಗನ್ನಾಥ ದೇಗುಲದ ಇತಿಹಾಸ ತಿಳಿಸುವ ತಾಳೆಗರಿ ಪುಸ್ತಕದಲ್ಲಿ ರತ್ನಭಂಡಾರದಲ್ಲಿರುವ ಆಭರಣಗಳ ಬಗ್ಗೆ ಮಾಹಿತಿ ಇದೆ. ತಾಳೆಗರಿಯ 31ನೇ ಪುಟದಲ್ಲಿ ಮಂದಿರದ ನೆಲಮಾಳಿಗೆಯಲ್ಲಿ ನಿಧಿ ಇದೆ ಎಂದು ಉಲ್ಲೇಖ ಮಾಡಲಾಗಿದೆ.
ನೆಲಮಾಳಿಗೆಯಲ್ಲಿರುವ ಆ ಕೋಣೆಯ ಹೆಸರೇ ರತ್ನ ಭಂಡಾರ. ಈ ಭಂಡಾರಕ್ಕೆ 2 ಕೋಣೆಗಳಿವೆ. ಹೊರಕೋಣೆ ಮತ್ತು ಒಳಕೋಣೆ. ಹೊರಕೋಣೆಯಲ್ಲಿ ದೇವರಿಗೆ ದಿನನಿತ್ಯ ಬಳಸುವ ಆಭರಣಗಳನ್ನು ಜೋಪಾನವಾಗಿ ಇಡಲಾಗಿದೆ. ಇದರ ಕೀಲಿ ಕೈ ದೇವಸ್ಥಾನದ ಆಡಳಿತ ಮಂಡಳಿ ಕಚೇರಿಯಲ್ಲಿದೆ.
ಇದನ್ನೂ ಓದಿ: 222 ಕೆಜಿ ಚಿನ್ನ.. 12,838ಕ್ಕೂ ಹೆಚ್ಚು ರತ್ನಖಚಿತ ಆಭರಣ; ಆ ಕೊಠಡಿಯಲ್ಲಿ ಇನ್ನೂ ಏನೇನು ಉಂಟು..?
ಹೊರಕೋಣೆಯಲ್ಲಿ ಎರಡು ಭಾಗವಿದ್ದು, ಒಂದು ಕೋಣೆಯಲ್ಲಿ ದಿನನಿತ್ಯ ಬಳಸೋ ಆಭರಣಗಳಿವೆ. ಇನ್ನೊಂದರಲ್ಲಿ ವಿಶೇಷ ದಿನಗಳಲ್ಲಿ ಬಳಸುವ ಆಭರಣಗಳಿವೆ. ಒಳಕೋಣೆಯಲ್ಲಿ ಬಾಕಿ ಉಳಿದಿರುವ ಹೆಚ್ಚುವರಿ ಹಾಗೂ ಭಾರೀ ಪ್ರಮಾಣದ ಚಿನ್ನಾಭರಣಗಳನ್ನು ಒಳಕೊಠಡಿಯಲ್ಲಿ ಇಡಲಾಗಿದೆ. ಸದ್ಯಕ್ಕೆ ಇದರ ಕೀಲಿ ಕೈ ಕಣ್ಮರೆಯಾಗಿದೆ.
ರತ್ನ ಭಂಡಾರ ರಹಸ್ಯ
ಕೋಣೆ 01
ಹೊರಗಿನ ಕೋಣೆಯಲ್ಲಿವೆ ದೇವಸ್ಥಾನದಲ್ಲಿ ಬಳಸುವ ಆಭರಣಗಳು
ದೇವಸ್ಥಾನದಲ್ಲಿ ಬಳಸುವ ಚಿನ್ನ, ಬೆಳ್ಳಿಯ ಆಭರಣಗಳು ಲಭ್ಯವಿದೆ
ಕೋಣೆ 02
ಇದೀಗ ನಕಲಿ ಕೀ ಬಳಸಿ ಓಪನ್ ಮಾಡಿರೋದು ಇದೇ ಕೋಣೆಯನ್ನ
ಕೋಣೆಯಲ್ಲಿವೆ ಬಂಗಾರ, ಮುತ್ತು, ರತ್ನ, ಹವಳ, ಬೆಳ್ಳಿ ಸಾಮಾಗ್ರಿಗಳು
ರಾಜರು ದಾನವಾಗಿ ಕೊಟ್ಟಿರೋ ಅಪಾರವಾದ ವಜ್ರ-ವೈಢೂರ್ಯಗಳಿವೆ
1979ರಲ್ಲಿ ಬರೋಬ್ಬರಿ 70 ದಿನಗಳ ಕಾಲ ಸಂಪತ್ತಿನ ಮೌಲ್ಯ ಲೆಕ್ಕಾಚಾರ
ಇದೀಗ ಮತ್ತೆ ಸಂಪತ್ತಿನ ಎಣಿಕೆ ಕಾರ್ಯ ನಡೆಸುತ್ತಿರೋ 16 ಜನರ ಸಮಿತಿ
ಕೋಣೆ 03
ಇನ್ನೂ ರಹಸ್ಯವಾಗಿಯೋ ಉಳಿದಿರೋ ದೇಗುಲದ 3ನೇ ಕೋಣೆ
ಈ ಮೂರನೇ ರತ್ನಭಂಡಾರ ಕೋಣೆಗಿದೆ ‘ನಾಗಬಂಧ’ ರಕ್ಷಣೆ
ಇದೇ ಕೊಠಡಿಯಿಂದ ಹಿಂದೆ ಹಾವು ಬುಸುಗುಡುವ ಶಬ್ಧ ಕೇಳಿತ್ತಂತೆ
ಈ ಕೋಣೆಯಿಂದ ಸುರಂಗ ಮಾರ್ಗವೂ ಇದೆ ಎಂಬ ನಂಬಿಕೆ ಇದೆ
ಇದುವರೆಗೂ ಯಾರ ಪ್ರವೇಶಕ್ಕೂ ಸಾಧ್ಯವಾಗದ ನಿಗೂಢ ಕೊಠಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ರತ್ನಭಂಡಾರದ ಕೊಠಡಿ ಇದುವರೆಗೂ ಕೇವಲ 3 ಬಾರಿ ಅಷ್ಟೇ ಓಪನ್!
16 ಜನರ ವಿಶೇಷ ತಂಡದಿಂದ ರತ್ನ ಭಂಡಾರ ಕೋಣೆಯ ಶೋಧ
ತಾಳೆಗರಿಯ 31ನೇ ಪುಟದಲ್ಲಿ ನೆಲಮಾಳಿಗೆಯ ನಿಧಿ ಬಗ್ಗೆ ಉಲ್ಲೇಖ
ಭುವನೇಶ್ವರ: ಇತಿಹಾಸ ಪ್ರಸಿದ್ಧ ಹಿಂದೂ ದೇವಾಲಯ ಪುರಿ ಜಗನ್ನಾಥ ಮಂದಿರದಲ್ಲಿರುವ ರತ್ನ ಭಂಡಾರದ ರಹಸ್ಯ ಬಯಲಾಗುವ ಶುಭ ಕಾಲ ಬಂದಿದೆ. 46 ವರ್ಷದ ಬಳಿಕ ಒಡಿಶಾ ಸರ್ಕಾರ ರತ್ನ ಭಂಡಾರ ಇರುವ ಕೋಣೆಯ ಬಾಗಿಲನ್ನು ತೆರೆದಿದೆ. ದೇವಾಲಯ ಸಮಿತಿಯ 16 ಜನರ ವಿಶೇಷ ತಂಡದಿಂದ ರತ್ನ ಭಂಡಾರ ಕೋಣೆಯ ಶೋಧ ಕಾರ್ಯ ನಡೆಯುತ್ತಿದೆ.
ಇದನ್ನೂ ಓದಿ: BREAKING: ಪುರಿ ಜಗನ್ನಾಥನ ರತ್ನ ಭಂಡಾರದ ಬಾಗಿಲು ತೆಗೆಯುತ್ತಿದ್ದಂತೆ ಮೂರ್ಛೆ ಹೋದ ಎಸ್ಪಿ
ಇಲ್ಲಿವರೆಗೆ 3 ಬಾರಿ ಬಾಗಿಲು ಓಪನ್!
ಪುರಿ ಜಗನ್ನಾಥ ದೇವಾಲಯದ ರತ್ನಭಂಡಾರದ ಕೊಠಡಿಯನ್ನ ಇದುವರೆಗೂ ಕೇವಲ 3 ಬಾರಿ ಅಷ್ಟೇ ಓಪನ್ ಮಾಡಲಾಗಿದೆ. 1803, 1926 ಮತ್ತು 1978ರಲ್ಲಿ ಮಾತ್ರ ರತ್ನ ಭಂಡಾರವನ್ನು ತೆರೆದು ಪರಿಶೀಲನೆ ನಡೆಸಲಾಗಿದೆ. ಅದಾದ ನಂತರ ರತ್ನ ಭಂಡಾರದ ಬಾಗಿಲು ತೆಗೆದೇ ಇಲ್ಲ.
46 ವರ್ಷದ ಹಿಂದೆ ಏನೇನಿತ್ತು?
1979ರಲ್ಲಿ ರತ್ನ ಭಂಡಾರದ ಖಜಾನೆ ತೆರೆದಾಗ ಸಿಕ್ಕ ಒಡವೆಯನ್ನು ದಾಖಲಿಸಲಾಗಿದೆ. ಅಂದು ಜಗನ್ನಾಥನ ಖಜಾನೆಯಲ್ಲಿ 150 ಕೆಜಿ ಚಿನ್ನ ಇತ್ತು. ಚಿನ್ನದ ಆಭರಣಗಳು ಮತ್ತು ಚಿನ್ನವನ್ನೊಳಗೊಂಡ ಕಲ್ಲುಗಳು 1.50 ಲಕ್ಷ ಗ್ರಾಂ ಎನ್ನಲಾಗಿದೆ. ಬೆಳ್ಳಿ ಆಭರಣಗಳು ಮತ್ತು ಬೆಳ್ಳಿಯನ್ನೊಳಗೊಂಡ ಕಲ್ಲುಗಳು 2.50 ಲಕ್ಷ ಗ್ರಾಂ ಇದೆ ಎನ್ನಲಾಗಿದೆ.
ಇದನ್ನೂ ಓದಿ: ರಹಸ್ಯಗಳ ಹೊತ್ತು ನಿಂತ ಪೂರಿ ಜಗನ್ನಾಥ..! ಲೆಕ್ಕವೇ ಮಾಡಲಾಗದಷ್ಟು ರತ್ನ ಭಂಡಾರ ನೀಡಿದ್ದು ಯಾರು ಗೊತ್ತೇ..?
ತಾಳೆಗರಿಯಲ್ಲಿ ಇರೋದೇನು?
ಪುರಿ ಜಗನ್ನಾಥ ದೇಗುಲದ ಇತಿಹಾಸ ತಿಳಿಸುವ ತಾಳೆಗರಿ ಪುಸ್ತಕದಲ್ಲಿ ರತ್ನಭಂಡಾರದಲ್ಲಿರುವ ಆಭರಣಗಳ ಬಗ್ಗೆ ಮಾಹಿತಿ ಇದೆ. ತಾಳೆಗರಿಯ 31ನೇ ಪುಟದಲ್ಲಿ ಮಂದಿರದ ನೆಲಮಾಳಿಗೆಯಲ್ಲಿ ನಿಧಿ ಇದೆ ಎಂದು ಉಲ್ಲೇಖ ಮಾಡಲಾಗಿದೆ.
ನೆಲಮಾಳಿಗೆಯಲ್ಲಿರುವ ಆ ಕೋಣೆಯ ಹೆಸರೇ ರತ್ನ ಭಂಡಾರ. ಈ ಭಂಡಾರಕ್ಕೆ 2 ಕೋಣೆಗಳಿವೆ. ಹೊರಕೋಣೆ ಮತ್ತು ಒಳಕೋಣೆ. ಹೊರಕೋಣೆಯಲ್ಲಿ ದೇವರಿಗೆ ದಿನನಿತ್ಯ ಬಳಸುವ ಆಭರಣಗಳನ್ನು ಜೋಪಾನವಾಗಿ ಇಡಲಾಗಿದೆ. ಇದರ ಕೀಲಿ ಕೈ ದೇವಸ್ಥಾನದ ಆಡಳಿತ ಮಂಡಳಿ ಕಚೇರಿಯಲ್ಲಿದೆ.
ಇದನ್ನೂ ಓದಿ: 222 ಕೆಜಿ ಚಿನ್ನ.. 12,838ಕ್ಕೂ ಹೆಚ್ಚು ರತ್ನಖಚಿತ ಆಭರಣ; ಆ ಕೊಠಡಿಯಲ್ಲಿ ಇನ್ನೂ ಏನೇನು ಉಂಟು..?
ಹೊರಕೋಣೆಯಲ್ಲಿ ಎರಡು ಭಾಗವಿದ್ದು, ಒಂದು ಕೋಣೆಯಲ್ಲಿ ದಿನನಿತ್ಯ ಬಳಸೋ ಆಭರಣಗಳಿವೆ. ಇನ್ನೊಂದರಲ್ಲಿ ವಿಶೇಷ ದಿನಗಳಲ್ಲಿ ಬಳಸುವ ಆಭರಣಗಳಿವೆ. ಒಳಕೋಣೆಯಲ್ಲಿ ಬಾಕಿ ಉಳಿದಿರುವ ಹೆಚ್ಚುವರಿ ಹಾಗೂ ಭಾರೀ ಪ್ರಮಾಣದ ಚಿನ್ನಾಭರಣಗಳನ್ನು ಒಳಕೊಠಡಿಯಲ್ಲಿ ಇಡಲಾಗಿದೆ. ಸದ್ಯಕ್ಕೆ ಇದರ ಕೀಲಿ ಕೈ ಕಣ್ಮರೆಯಾಗಿದೆ.
ರತ್ನ ಭಂಡಾರ ರಹಸ್ಯ
ಕೋಣೆ 01
ಹೊರಗಿನ ಕೋಣೆಯಲ್ಲಿವೆ ದೇವಸ್ಥಾನದಲ್ಲಿ ಬಳಸುವ ಆಭರಣಗಳು
ದೇವಸ್ಥಾನದಲ್ಲಿ ಬಳಸುವ ಚಿನ್ನ, ಬೆಳ್ಳಿಯ ಆಭರಣಗಳು ಲಭ್ಯವಿದೆ
ಕೋಣೆ 02
ಇದೀಗ ನಕಲಿ ಕೀ ಬಳಸಿ ಓಪನ್ ಮಾಡಿರೋದು ಇದೇ ಕೋಣೆಯನ್ನ
ಕೋಣೆಯಲ್ಲಿವೆ ಬಂಗಾರ, ಮುತ್ತು, ರತ್ನ, ಹವಳ, ಬೆಳ್ಳಿ ಸಾಮಾಗ್ರಿಗಳು
ರಾಜರು ದಾನವಾಗಿ ಕೊಟ್ಟಿರೋ ಅಪಾರವಾದ ವಜ್ರ-ವೈಢೂರ್ಯಗಳಿವೆ
1979ರಲ್ಲಿ ಬರೋಬ್ಬರಿ 70 ದಿನಗಳ ಕಾಲ ಸಂಪತ್ತಿನ ಮೌಲ್ಯ ಲೆಕ್ಕಾಚಾರ
ಇದೀಗ ಮತ್ತೆ ಸಂಪತ್ತಿನ ಎಣಿಕೆ ಕಾರ್ಯ ನಡೆಸುತ್ತಿರೋ 16 ಜನರ ಸಮಿತಿ
ಕೋಣೆ 03
ಇನ್ನೂ ರಹಸ್ಯವಾಗಿಯೋ ಉಳಿದಿರೋ ದೇಗುಲದ 3ನೇ ಕೋಣೆ
ಈ ಮೂರನೇ ರತ್ನಭಂಡಾರ ಕೋಣೆಗಿದೆ ‘ನಾಗಬಂಧ’ ರಕ್ಷಣೆ
ಇದೇ ಕೊಠಡಿಯಿಂದ ಹಿಂದೆ ಹಾವು ಬುಸುಗುಡುವ ಶಬ್ಧ ಕೇಳಿತ್ತಂತೆ
ಈ ಕೋಣೆಯಿಂದ ಸುರಂಗ ಮಾರ್ಗವೂ ಇದೆ ಎಂಬ ನಂಬಿಕೆ ಇದೆ
ಇದುವರೆಗೂ ಯಾರ ಪ್ರವೇಶಕ್ಕೂ ಸಾಧ್ಯವಾಗದ ನಿಗೂಢ ಕೊಠಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ