ಐದನೇ ಬಾರಿಗೆ ಐಪಿಎಲ್ ಟ್ರೋಫಿ ಎತ್ತಿ ಹಿಡಿದ ಸಿಎಸ್ಕೆ
ಡಕೌಟ್ ಆಗಿ ಬೇಸರಿಂದ ಹೊರನಡೆದ ಕ್ಯಾಪ್ಟನ್ ಧೋನಿ
ತಮ್ಮ ಕೊನೆ ಪಂದ್ಯದಲ್ಲಿ ರಾಯುಡು ಅಮೋಘ ಆಟ
ಅಭಿಮಾನಿಗಳ ಕಣ್ಣೀರು ವ್ಯರ್ಥ ಆಗಲಿಲ್ಲ. ಯೆಲ್ಲೋ ಆರ್ಮಿ ಕಪ್ ಗೆಲ್ಲಬೇಕೆಂಬ ಪ್ರಾರ್ಥನೆ ಕೊನೆಗೂ ಫಲಿಸಿತು. ಗುಜರಾತ್ ಟೈಟನ್ಸ್ ಎದುರಿನ ಹೈ-ಥ್ರಿಲ್ಲಿಂಗ್ ಗೇಮ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆದ್ದು ಐಪಿಎಲ್ ಕಿರೀಟ ಮುಡಿಗೇರಿಸಿಕೊಂಡಿತು. ಹಳದಿ ಆರ್ಮಿಯ ಹಿಸ್ಟಾರಿಕಲ್ ವಿಕ್ಟರಿ ಸೆಲೆಬ್ರೇಷನ್ ಹೇಗಿತ್ತು ಅನ್ನೋ ವಿವರ ಇಲ್ಲಿದೆ.
ಇನ್ನು ಚೆನ್ನೈ ತಂಡ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಆರಂಭದಲ್ಲೇ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು. ಎರಡುವರೆ ತಾಸಿನ ಬಳಿಕ ಆರಂಭಗೊಂಡಿದ್ದರಿಂದ ಪಂದ್ಯವನ್ನ 15 ಓವರ್ಗೆ ನಿಗದಿ ಪಡಿಸಿ, ಡಿಎಲ್ಎಸ್ ರೂಲ್ಸ್ ಅನ್ವಯ ಚೆನ್ನೈಗೆ 171 ರನ್ ಗುರಿ ನೀಡಲಾಯ್ತು.
ಸಾಲಿಡ್ ಓಪನಿಂಗ್ ಒದಗಿಸಿದ ಗಾಯಕ್ವಾಡ್-ಕಾನ್ವೆ
ಚೆನ್ನೈ ಮುಂದೆ ಬಿಗ್ ಟಾರ್ಗೆಟ್ ಇದ್ದಿದ್ರಿಂದ ಚೆನ್ನೈ ಓಪನರ್ಸ್ ದಂಡಂ ದಶಗುಣಂ ಆಟಕ್ಕೆ ಮುಂದಾದ್ರು. ಪರಿಣಾಮ ಫಸ್ಟ್ ನಾಲ್ಕು ಓವರ್ಗಳಲ್ಲೇ ಹಾಫ್ಸೆಂಚುರಿ ಪೇರಿಸಿದ್ರು. ಇದೇ ಹೊತ್ತಲ್ಲಿ ಗಾಯಕ್ವಾಡ್ 26 ಹಾಗೂ ಡೇಂಜರಸ್ ಕಾನ್ವೆ ಆಟ 47 ರನ್ಗೆ ಸ್ಟಾಪ್ ಆಯ್ತು. ಬಳಿಕ ಕ್ರೀಸ್ಗಿಳಿದ ರಹಾನೆ ಪಟಪಟನೇ 2 ಬೌಂಡ್ರಿ, 2 ಸಿಕ್ಸರ್ ಸಿಡಿಸಿ ಔಟಾದ್ರು. ಆಗ ತಂಡದ ಮೊತ್ತ 117..ಕೊನೆ 3 ಓವರ್ನಲ್ಲಿ ಚೆನ್ನೈ ಗೆಲ್ಲಲು 38 ರನ್ ಬೇಕಿತ್ತು.
13ನೇ ಓವರ್ನಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್
ಪಂದ್ಯದ 13ನೇ ಓವರ್ನಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗ್ತು. ವಿದಾಯ ಪಂದ್ಯದಲ್ಲಿ ಅಂಬಟಿ ರಾಯುಡು ರಗಡ್ ಆಟವಾಡಿದ್ರು. ಇದೇ ಓವರ್ನಲ್ಲಿ ಎರಡು ಸಿಕ್ಸ್ ಹಾಗೂ 1 ಬೌಂಡ್ರಿ ಸಹಿತ 19 ರನ್ ಬಾರಿಸಿ ಹೊರನಡೆದ್ರು.
ತಲಾ ಧೋನಿ ಡಕೌಟ್.. ಸ್ಟೇಡಿಯಂ ಸ್ತಬ್ಧ..!
ಇದೇ ಓವರ್ನಲ್ಲಿ 5ನೇ ಎಸೆತದಲ್ಲಿ ಬಿಗ್ ಶಾಕ್ವೊಂದು ಕಾದಿತ್ತು. ಅದೇನಂದ್ರೆ ತಲಾ ಧೋನಿ ಆಡಿದ ಫಸ್ಟ್ ಬಾಲ್ನಲ್ಲಿ ಡಕೌಟಾದ್ರು. ಆಗ ಸ್ಟೇಡಿಯಂ ಒಂದು ಕ್ಷಣ ಪಿನ್ಡ್ರಾಪ್ ಸೈಲೆಂಟ್ ಆಯ್ತು.
ಕೊನೆ ಓವರ್ನಲ್ಲಿ ಜಡ್ಡು ಮ್ಯಾಜಿಕ್
ಒಂದೆಡೆ ಮಾಹಿ ಔಟಾಗ್ತಿದ್ದಂತೆ ಚೆನ್ನೈ ಒತ್ತಡಕ್ಕೆ ಸಿಲುಕಿತ್ತು. ಕಪ್ ಗೆಲ್ಲಲು ಚೆನ್ನೈ ಲಾಸ್ಟ್ ಓವರ್ನಲ್ಲಿ 13 ರನ್ ಅಗತ್ಯವಿತ್ತು. ಆದ್ರೆ ಫಸ್ಟ್ ನಾಲ್ಕು ಬಾಲ್ನಲ್ಲಿ ಕೇವಲ 3 ರನ್ ಬಂದವು. ಆದ್ರೆ ಕೊನೆ ಎರಡು ಎಸೆತದಲ್ಲಿ ಆಲ್ರೌಂಡರ್ ಜಡೇಜಾ ಸಿಕ್ಸರ್ ಹಾಗೂ ಬೌಂಡ್ರಿ ಸಿಡಿಸಿ ಚೆನ್ನೈಗೆ 5 ವಿಕೆಟ್ಗಳ ರಣರೋಚಕ ವಿಕ್ಟರಿ ತಂದುಕೊಟ್ರು. ಈ ಐತಿಹಾಸಿಕ ಗೆಲುವಿನೊಂದಿಗೆ ಚೆನ್ನೈ ತಂಡ ಐಪಿಎಲ್ ಹಿಸ್ಟರಿಯಲ್ಲಿ 5ನೇ ಬಾರಿ ಟ್ರೋಫಿಗೆ ಮುತ್ತಿಕ್ಕಿತು. ಆ ಮೂಲಕ ಮುಂಬೈ ಇಂಡಿಯನ್ಸ್ ದಾಖಲೆಯನ್ನು ಸರಿಗಟ್ಟಿತು.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಐದನೇ ಬಾರಿಗೆ ಐಪಿಎಲ್ ಟ್ರೋಫಿ ಎತ್ತಿ ಹಿಡಿದ ಸಿಎಸ್ಕೆ
ಡಕೌಟ್ ಆಗಿ ಬೇಸರಿಂದ ಹೊರನಡೆದ ಕ್ಯಾಪ್ಟನ್ ಧೋನಿ
ತಮ್ಮ ಕೊನೆ ಪಂದ್ಯದಲ್ಲಿ ರಾಯುಡು ಅಮೋಘ ಆಟ
ಅಭಿಮಾನಿಗಳ ಕಣ್ಣೀರು ವ್ಯರ್ಥ ಆಗಲಿಲ್ಲ. ಯೆಲ್ಲೋ ಆರ್ಮಿ ಕಪ್ ಗೆಲ್ಲಬೇಕೆಂಬ ಪ್ರಾರ್ಥನೆ ಕೊನೆಗೂ ಫಲಿಸಿತು. ಗುಜರಾತ್ ಟೈಟನ್ಸ್ ಎದುರಿನ ಹೈ-ಥ್ರಿಲ್ಲಿಂಗ್ ಗೇಮ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆದ್ದು ಐಪಿಎಲ್ ಕಿರೀಟ ಮುಡಿಗೇರಿಸಿಕೊಂಡಿತು. ಹಳದಿ ಆರ್ಮಿಯ ಹಿಸ್ಟಾರಿಕಲ್ ವಿಕ್ಟರಿ ಸೆಲೆಬ್ರೇಷನ್ ಹೇಗಿತ್ತು ಅನ್ನೋ ವಿವರ ಇಲ್ಲಿದೆ.
ಇನ್ನು ಚೆನ್ನೈ ತಂಡ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಆರಂಭದಲ್ಲೇ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು. ಎರಡುವರೆ ತಾಸಿನ ಬಳಿಕ ಆರಂಭಗೊಂಡಿದ್ದರಿಂದ ಪಂದ್ಯವನ್ನ 15 ಓವರ್ಗೆ ನಿಗದಿ ಪಡಿಸಿ, ಡಿಎಲ್ಎಸ್ ರೂಲ್ಸ್ ಅನ್ವಯ ಚೆನ್ನೈಗೆ 171 ರನ್ ಗುರಿ ನೀಡಲಾಯ್ತು.
ಸಾಲಿಡ್ ಓಪನಿಂಗ್ ಒದಗಿಸಿದ ಗಾಯಕ್ವಾಡ್-ಕಾನ್ವೆ
ಚೆನ್ನೈ ಮುಂದೆ ಬಿಗ್ ಟಾರ್ಗೆಟ್ ಇದ್ದಿದ್ರಿಂದ ಚೆನ್ನೈ ಓಪನರ್ಸ್ ದಂಡಂ ದಶಗುಣಂ ಆಟಕ್ಕೆ ಮುಂದಾದ್ರು. ಪರಿಣಾಮ ಫಸ್ಟ್ ನಾಲ್ಕು ಓವರ್ಗಳಲ್ಲೇ ಹಾಫ್ಸೆಂಚುರಿ ಪೇರಿಸಿದ್ರು. ಇದೇ ಹೊತ್ತಲ್ಲಿ ಗಾಯಕ್ವಾಡ್ 26 ಹಾಗೂ ಡೇಂಜರಸ್ ಕಾನ್ವೆ ಆಟ 47 ರನ್ಗೆ ಸ್ಟಾಪ್ ಆಯ್ತು. ಬಳಿಕ ಕ್ರೀಸ್ಗಿಳಿದ ರಹಾನೆ ಪಟಪಟನೇ 2 ಬೌಂಡ್ರಿ, 2 ಸಿಕ್ಸರ್ ಸಿಡಿಸಿ ಔಟಾದ್ರು. ಆಗ ತಂಡದ ಮೊತ್ತ 117..ಕೊನೆ 3 ಓವರ್ನಲ್ಲಿ ಚೆನ್ನೈ ಗೆಲ್ಲಲು 38 ರನ್ ಬೇಕಿತ್ತು.
13ನೇ ಓವರ್ನಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್
ಪಂದ್ಯದ 13ನೇ ಓವರ್ನಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗ್ತು. ವಿದಾಯ ಪಂದ್ಯದಲ್ಲಿ ಅಂಬಟಿ ರಾಯುಡು ರಗಡ್ ಆಟವಾಡಿದ್ರು. ಇದೇ ಓವರ್ನಲ್ಲಿ ಎರಡು ಸಿಕ್ಸ್ ಹಾಗೂ 1 ಬೌಂಡ್ರಿ ಸಹಿತ 19 ರನ್ ಬಾರಿಸಿ ಹೊರನಡೆದ್ರು.
ತಲಾ ಧೋನಿ ಡಕೌಟ್.. ಸ್ಟೇಡಿಯಂ ಸ್ತಬ್ಧ..!
ಇದೇ ಓವರ್ನಲ್ಲಿ 5ನೇ ಎಸೆತದಲ್ಲಿ ಬಿಗ್ ಶಾಕ್ವೊಂದು ಕಾದಿತ್ತು. ಅದೇನಂದ್ರೆ ತಲಾ ಧೋನಿ ಆಡಿದ ಫಸ್ಟ್ ಬಾಲ್ನಲ್ಲಿ ಡಕೌಟಾದ್ರು. ಆಗ ಸ್ಟೇಡಿಯಂ ಒಂದು ಕ್ಷಣ ಪಿನ್ಡ್ರಾಪ್ ಸೈಲೆಂಟ್ ಆಯ್ತು.
ಕೊನೆ ಓವರ್ನಲ್ಲಿ ಜಡ್ಡು ಮ್ಯಾಜಿಕ್
ಒಂದೆಡೆ ಮಾಹಿ ಔಟಾಗ್ತಿದ್ದಂತೆ ಚೆನ್ನೈ ಒತ್ತಡಕ್ಕೆ ಸಿಲುಕಿತ್ತು. ಕಪ್ ಗೆಲ್ಲಲು ಚೆನ್ನೈ ಲಾಸ್ಟ್ ಓವರ್ನಲ್ಲಿ 13 ರನ್ ಅಗತ್ಯವಿತ್ತು. ಆದ್ರೆ ಫಸ್ಟ್ ನಾಲ್ಕು ಬಾಲ್ನಲ್ಲಿ ಕೇವಲ 3 ರನ್ ಬಂದವು. ಆದ್ರೆ ಕೊನೆ ಎರಡು ಎಸೆತದಲ್ಲಿ ಆಲ್ರೌಂಡರ್ ಜಡೇಜಾ ಸಿಕ್ಸರ್ ಹಾಗೂ ಬೌಂಡ್ರಿ ಸಿಡಿಸಿ ಚೆನ್ನೈಗೆ 5 ವಿಕೆಟ್ಗಳ ರಣರೋಚಕ ವಿಕ್ಟರಿ ತಂದುಕೊಟ್ರು. ಈ ಐತಿಹಾಸಿಕ ಗೆಲುವಿನೊಂದಿಗೆ ಚೆನ್ನೈ ತಂಡ ಐಪಿಎಲ್ ಹಿಸ್ಟರಿಯಲ್ಲಿ 5ನೇ ಬಾರಿ ಟ್ರೋಫಿಗೆ ಮುತ್ತಿಕ್ಕಿತು. ಆ ಮೂಲಕ ಮುಂಬೈ ಇಂಡಿಯನ್ಸ್ ದಾಖಲೆಯನ್ನು ಸರಿಗಟ್ಟಿತು.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್