/newsfirstlive-kannada/media/post_attachments/wp-content/uploads/2024/03/rohit-sharma-1.jpg)
ರಾಜಸ್ಥಾನಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಸವಾಲು
ಇಂದು ನಡೆಯುವ 17ನೇ ಐಪಿಎಲ್ ಆವೃತ್ತಿಯ 9ನೇ ಪಂದ್ಯದಲ್ಲಿ ಬಲಿಷ್ಠ ತಂಡಗಳಾದ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಜಸ್ಥಾನ ತಂಡಗಳು ಕಾದಾಡಲಿವೆ. ರಿಷಬ್​​ ಪಂತ್​​​ ಬಳಗ ಮೊದಲ ಪಂದ್ಯದಲ್ಲಿ ಮುಗ್ಗರಿಸಿದೆ. ಇಂದು ತವರಿನಲ್ಲಿ ರಾಜಸ್ಥಾನ ಮಣಿಸಿ ಗೆಲುವಿನ ಲಯಕ್ಕೆ ಮರಳುವ ಲೆಕ್ಕಚಾರದಲ್ಲಿದೆ. ಅತ್ತ ಗೆಲುವಿನ ಹುಮಸ್ಸಿನಲ್ಲಿರೋ ರಾಜಸ್ಥಾನ ಮತ್ತೊಂದು ವಿಕ್ಟರಿ ಮೇಲೆ ಕಣ್ಣಿಟ್ಟಿದೆ. ಏನ್ರಿಚ್​ ನೋಕಿಯಾ ಡೆಲ್ಲಿ ಬಳಗ ಸೇರಿಕೊಂಡಿದ್ದು ಬೌಲಿಂಗ್ ವಿಭಾಗಕ್ಕೆ ಮತ್ತಷ್ಟು ಬಲ ಬಂದಿದೆ.
Matchday hype after this video 📈📈📈 pic.twitter.com/xGjJzjDxrQ
— Rajasthan Royals (@rajasthanroyals) March 28, 2024
ರೋಹಿತ್​ ಶರ್ಮಾಗೆ ವಿಶೇಷ ಗೌರವ
ನಿನ್ನೆ ನಡೆದ ಸನ್​ರೈಸರ್ಸ್​ ಹೈದ್ರಾಬಾದ್​ ವಿರುದ್ಧದ ಪಂದ್ಯಕ್ಕೂ ಮುನ್ನ ಮುಂಬೈ ಇಂಡಿಯನ್ಸ್​ ತಂಡದ ಬ್ಯಾಟ್ಸ್​ಮನ್​ ರೋಹಿತ್​ ಶರ್ಮಾಗೆ ವಿಶೇಷ ಗೌರವ ನೀಡಲಾಯ್ತು. ನಿನ್ನೆಯ ಪಂದ್ಯದೊಂದಿಗೆ ರೋಹಿತ್​ ಮುಂಬೈ ಪರ 200 ಪಂದ್ಯವನ್ನಾಡಿದ ಸಾಧನೆ ಮಾಡಿದ್ರು. ಈ ಹಿನ್ನೆಲೆಯಲ್ಲಿ ಪಂದ್ಯಕ್ಕೂ ಮುನ್ನ ತಂಡದ ಮೆಂಟರ್​ ಸಚಿನ್​ ತೆಂಡುಲ್ಕರ್​ ವಿಶೇಷ ಕ್ಯಾಪ್​, ಹಾಗೂ 200 ನಂಬರಿನ ಜೆರ್ಸಿ ನೀಡಿ ಗೌರವಿಸಿದ್ರು.
Moment hai bhai, moment hai 📸#MumbaiMeriJaan#MumbaiIndians#SRHvMIpic.twitter.com/Fo5CE4PN0g
— Mumbai Indians (@mipaltan) March 27, 2024
ಮುಂದಿನ ಪಂದ್ಯಕ್ಕೆ ಲಕ್ನೋ ತಾಲೀಮು
ಲಕ್ನೋ ಸೂಪರ್ ಜೈಂಟ್ಸ್​ ಮುಂದಿನ ಐಪಿಎಲ್​ ಪಂದ್ಯಕ್ಕೆ ಭರ್ಜರಿ ಅಭ್ಯಾಸ ನಡೆಸಿದೆ. ಫೀಲ್ಡಿಂಗ್ ಕೋಚ್​​ ಜಾಂಟಿ ರೋಲ್ಡ್​ ಆಟಗಾರರಿಗೆ ಡ್ರಿಲ್ ನಡೆಸಿದ್ದಾರೆ. ಫೀಲ್ಡಿಂಗ್ ಸುಧಾರಿಸುವ ನಿಟ್ಟಿನಲ್ಲಿ ಲಕ್ನೋ ಹೆಚ್ಚು ಗಮನ ಹರಿಸಿದೆ. ಆಡಿದ ಮೊದಲ ಪಂದ್ಯದಲ್ಲಿ ಮುಗ್ಗರಿಸಿದ ಲಕ್ನೋ ತಂಡ ಶನಿವಾರ ತವರಿನ ಅಂಗಳದಲ್ಲಿ ಬಲಾಢ್ಯ ಪಂಜಾಬ್ ಕಿಂಗ್ಸ್​ ಸವಾಲನ್ನ ಎದುರಿಸಲಿದೆ.
Ab aapke gharwaapsi ki baari hai 💙
Buy tickets on @bookmyshow now ▶️ https://t.co/opO03nHG6Fpic.twitter.com/2ek3An4yn5— Lucknow Super Giants (@LucknowIPL) March 28, 2024
ಹಾರ್ದಿಕ್​​​ ಪಾದ ಮುಟ್ಟಿ ನಮಸ್ಕರಿಸಿದ ಫ್ಯಾನ್
ಮುಂಬೈ ಕ್ಯಾಪ್ಟನ್ ನೂತನ ನಾಯಕ ಮರು ಅಭಿಮಾನಿಗಳ ಪ್ರೀತಿ ಸಂಪಾದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಭಿಮಾನಿಯೊಬ್ಬ ಹಾರ್ದಿಕ್​​​ ಪಾದ ಮುಟ್ಟಿ ನಮಸ್ಕರಿಸಿದ್ದಾರೆ. ಫ್ಯಾನ್​​ ಜೊತೆ ಪಾಂಡ್ಯ ಆತ್ಮೀಯವಾಗಿ ಮಾತನಾಡಿದ್ದು ಫೋಟೋ ತೆಗೆಸಿಕೊಂಡಿದ್ದಾರೆ. ಇದೇ ವೇಳೆ ಅಭಿಮಾನಿ ಕೈಯಲ್ಲಿ ಹಾಕಿಕೊಂಡಿರೋ ಪಾಂಡ್ಯ ಅವರ ಟ್ಯಾಟೂ ಅನ್ನ ಮುಂಬೈ ನಾಯಕನಿಗೆ ತೋರಿಸಿದ್ದಾರೆ.
https://twitter.com/ChatGPTChr26111/status/1772694373815275938
ಫಿಲಿಪ್ಸ್​ VS ನಿತೀಶ್ ನಡುವೆ ರನ್ನಿಂಗ್​​​​​ ರೇಸ್​
ಸನ್​ರೈಸರ್ಸ್​ ಹೈದ್ರಾಬಾದ್ ತಂಡದ ಗ್ಲೆನ್​ ಫಿಲಿಪ್ಸ್ ಹಾಗೂ ನಿತೀಶ್ ಕುಮಾರ್​ ನಡುವೆ ರನ್ನಿಂಗ್​​​ ಫೈಟ್​​ ಏರ್ಪಟ್ಟಿದೆ. 22 ಯಾರ್ಡ್​ ಪಿಚ್​​ನಲ್ಲಿ ವೇಗವಾಗಿ ಗುರಿ ಮುಟ್ಟಲು ಪೈಪೋಟಿ ನಡೆಸಿದ್ರು. ಇಬ್ಬರೂ ಸಮಬಲದ ಹೋರಾಟ ನಡೆಸಿದರಾದ್ರು, ಗ್ಲೆನ್ ಫಿಲಿಪ್ಸ್​​​ ಕೂದಲೆಳೆ ಅಂತರದಲ್ಲಿ ಬೇಗನೆ ಗುರಿ ಮುಟ್ಟಿ ನಿಶೀಶ್​ ಕುಮಾರ್​ ರೆಡ್ಡಿಯನ್ನ ಸೋಲಿಸಿದ್ರು. ಕೊನೆಗೆ ಹೈದ್ರಾಬಾದ್​​ ಆಟಗಾರರು ರೇಸ್​ ಬಗ್ಗೆ ಪರಸ್ಪರ ಅಭಿಪ್ರಾಯಗಳನ್ನ ಹಂಚಿಕೊಂಡಿದ್ದಾರೆ
ಇದನ್ನೂ ಓದಿ: RCB ಮ್ಯಾನೇಜ್ಮೆಂಟ್ ವಿರುದ್ಧ ಫ್ಯಾನ್ಸ್​ ನಿಗಿನಿಗಿ ಕೆಂಡ; ರೂಪೇಶ್ ರಾಜಣ್ಣ ಕೂಡ ತೀವ್ರ ಖಂಡನೆ..!
ಹರ್ಷಿತ್ ರಾಣಾ​​​​​​​​​​ ಭರ್ಜರಿ ಸಮರಾಭ್ಯಾಸ..!
ಆರ್​ಸಿಬಿ ಎದುರಿನ ಪಂದ್ಯಕ್ಕೆ ಕೆಕೆಆರ್​ ಸಿದ್ಧತೆ ಜೋರಾಗಿದೆ. ಯುವವೇಗಿ ಹರ್ಷಿತ್​ ರಾಣ ನೆಟ್ಸ್​ನಲ್ಲಿ ಭರ್ಜರಿ ಬೆವರು ಹರಿಸಿದ್ದಾರೆ. ಹರ್ಷಿತ್​​ ಮೊದಲ ಪಂದ್ಯದಲ್ಲೆ 3 ವಿಕೆಟ್ ಪಡೆದು ಭರವಸೆ ಮೂಡಿಸಿದ್ರು. ನಾಳೆ ನಡೆಯುವ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಹರ್ಷಿತ್ ಮೇಲೆ ಅಪಾರ ನಿರೀಕ್ಷೆ ಗರಿಗೆದರಿದೆ.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us