ಹೈದ್ರಾಬಾದ್ ಪರ ಮಿಂಚು ಹರಿಸ್ತಾರಾ ಮಯಾಂಕ್ ಅಗರ್ವಾಲ್?
ಅದೃಷ್ಟ ಪರೀಕ್ಷೆಯ ಕಣದಲ್ಲಿ ಕನ್ನಡದ ಯಂಗ್ಸ್ಟರ್ಸ್ ಭವಿಷ್ಯ!
ಆರ್ಸಿಬಿ ಟೀಮ್ನಲ್ಲಿ ಎಷ್ಟು ಆಟಗಾರರು ಕನ್ನಡಿಗರು ಇದ್ದಾರೆ..?
ಐಪಿಎಲ್ ಮಹಾ ಸಂಗ್ರಮ.. ಯುವ ಕ್ರಿಕೆಟಿಗರ ಪಾಲಿನ ಅದೃಷ್ಟ ಪರೀಕ್ಷೆಯ ಕಣ. ಇಲ್ಲಿ ಪಾಸ್ ಆದ್ರೆ, ಟೀಮ್ ಇಂಡಿಯಾ ಡೋರ್ ಸಲೀಸಾಗಿ ಓಪನ್ ಆಗುತ್ತೆ. ಆಲ್ ರೆಡಿ ತಂಡದಲ್ಲಿದ್ದವರ ಸ್ಥಾನ ಫುಲ್ ಸೇಫ್ ಆಗುತ್ತೆ. ನೇಮ್ & ಫೇಮ್ ನಿರೀಕ್ಷೆ ಮಾಡಲಾಗದಷ್ಟು ಬರುತ್ತೆ. ಹೀಗಾಗಿ ಯಂಗ್ಸ್ಟರ್ಸ್ ಪೈಪೋಟಿಗೆ ಬಿದ್ದು ಪರ್ಫಾಮ್ ಮಾಡ್ತಾರೆ. ನಮ್ಮ ಕನ್ನಡಿಗರು ಕೂಡ ಇದೇ ಫೈಟ್ನಲ್ಲಿದ್ದಾರೆ.
ಐಪಿಎಲ್ ರಣಕಣದಲ್ಲಿ ದೇಶ-ವಿದೇಶದ ಪ್ಲೇಯರ್ಸ್ಗಳು ಸೆಂಟರ್ ಆಫ್ ಅಟ್ರಾಕ್ಷನ್ಸ್ ಆಗಿದ್ದಾರೆ. ಹರಾಜಿನಲ್ಲಿ ಬಿಗ್ ಡೀಲ್ಗೆ ಸೇಲಾದ ಕೋಟಿ ವೀರರ ಮೇಲೆ ಕೋಟಿ-ಕೋಟಿ ಕಣ್ಣುಗಳು ನೆಟ್ಟಿವೆ. ಇವ್ರ ನಡುವೆ ನಮ್ಮ ಹೆಮ್ಮೆಯ ಕನ್ನಡಿಗರು ಕೂಡ ಧೂಳೆಬ್ಬಿಸಲು ಸಜ್ಜಾಗಿದ್ದಾರೆ. ಅದೃಷ್ಟ ಪರೀಕ್ಷೆಯಲ್ಲಿ ಸಕ್ಸಸ್ ಕಾಣ್ತಾರಾ ಅನ್ನೋದು ಎಲ್ಲರ ಕುತೂಹಲ ಕೆರಳಿಸಿದೆ.
ಲಕ್ನೋ ಸೂಪರ್ ಜೈಂಟ್ಸ್ಗೆ ಕನ್ನಡಿಗರದ್ದೇ ಬಲ.!
ಲಕ್ನೋ ಸೂಪರ್ ಜೈಂಟ್ಸ್ ತಂಡದ ಸಾರಥಿಯೇ ಕನ್ನಡಿಗ ಕೆ.ಎಲ್ ರಾಹುಲ್. ಕ್ಲಾಸಿಕ್ ಬ್ಯಾಟಿಂಗ್ ಮೂಲಕ ಐಪಿಎಲ್ ಸಕ್ಸಸ್ಫುಲ್ ಬ್ಯಾಟರ್ ಅನಿಸಿಕೊಂಡಿರೋ ರಾಹುಲ್, ಇನ್ನೊಂದು ಸಕ್ಸಸ್ಫುಲ್ ಸೀಸನ್ನ ಎದುರುನೋಡ್ತಿದ್ದಾರೆ. ಓಪನರ್ ದೇವದತ್ತ್ ಪಡಿಕ್ಕಲ್ ಕೂಡ ರನ್ ಹೊಳೆ ಹರಿಸಲು ಕಾತರರಾಗಿದ್ದಾರೆ. ಕೆ.ಗೌತಮ್ ಆಲ್ರೌಂಡ್ ಆಟದ ಮ್ಯಾಜಿಕ್ ಮಾಡಲು ಕಾದು ಕುಳಿತಿದ್ದಾರೆ.
RCBಯಲ್ಲಿ ಧೂಳೆಬ್ಬಿಸಲು ವೈಶಾಕ್, ಮನೋಜ್ ಸಜ್ಜು.!
ನಮ್ಮದೇ ಮಣ್ಣಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಘರ್ಜಿಸಲು ಕನ್ನಡದ ಕಲಿಗಳು ಸಜ್ಜಾಗಿದ್ದಾರೆ. ವೇಗಿ ವೈಶಾಖ್ ವಿಜಯ್ ಕುಮಾರ್, ಮನೋಜ್ ಬಾಂಡಗೆ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.
ಹಳೇ ತಂಡದ ಪರ ಅದೃಷ್ಟ ಪರೀಕ್ಷೆಗೆ ಸಜ್ಜಾದ ಮನೀಶ್ ಪಾಂಡೆ.!
ಈ ಸೀಸನ್ ಐಪಿಎಲ್ನಲ್ಲಿ ಮನೀಶ್ ಪಾಂಡೆ ಮತ್ತೆ ಕೆಕೆಆರ್ ತಂಡವನ್ನ ಸೇರಿದ್ದಾರೆ. ಈ ಹಿಂದೆ ಕೆಕೆಅರ್ ಪರ ಘರ್ಜಿಸಿದ್ದ ಮನೀಶ್ ಮತ್ತದೇ ಪರ್ಫಾಮೆನ್ಸ್ ನೀಡೋ ಆತ್ಮವಿಶ್ವಾಸದಲ್ಲಿದ್ದಾರೆ.
ಆರೆಂಜ್ ಆರ್ಮಿ ಪರ ಮಿಂಚು ಹರಿಸ್ತಾರಾ ಮಯಾಂಕ್.?
ಕಳೆದ ಸೀಸನ್ನಲ್ಲಿ ಮಯಾಂಕ್ ಅಗರ್ವಾಲ್ ಡಿಸೆಂಟ್ ಪರ್ಫಾಮೆನ್ಸ್ ನೀಡಿದ್ರು. ಈ ಸೀಸನ್ಗೂ ಮುನ್ನ ನೆಟ್ಸ್ನಲ್ಲಿ ಬೆವರಿಳಸಿರೋ ಮಯಾಂಕ್, ರನ್ ಹೊಳೆ ಹರಿಸಲು ಸಿದ್ಧರಾಗಿದ್ದಾರೆ.
ಇದನ್ನೂ ಓದಿ: ಮರುಜೀವ ಪಡೆದ ಪಂತ್ಗೆ ಇದು ಬದುಕಿನ ಸೆಕೆಂಡ್ ಇನ್ನಿಂಗ್ಸ್; ಕ್ರಿಕೆಟ್ ಲೋಕದಲ್ಲೂ ಪವಾಡ ಮಾಡಲು ರೆಡಿ..!
ಅದೃಷ್ಟ ಪರೀಕ್ಷೆಯ ಕಣದಲ್ಲಿ ಕನ್ನಡದ ಯಂಗ್ಸ್ಟರ್ಸ್.!
ಈಗಾಗಲೇ ಸ್ಟಾರ್ಗಳೆನಿಸಕೊಂಡವರ ಜೊತೆಗೆ ಕನ್ನಡದ ಯಂಗ್ಸ್ಟರ್ಸ್ ಕೂಡ ಐಪಿಎಲ್ ಅಖಾಡದಲ್ಲಿ ಧೂಳೆಬ್ಬಿಸಲು ಸಜ್ಜಾಗಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದಲ್ಲಿರೋ ಸ್ಪಿನ್ನರ್ ಶ್ರೇಯಸ್ ಗೋಪಾಲ್, ಗುಜರಾತ್ ಟೈಟನ್ಸ್ ತಂಡದಲ್ಲಿರೋ ಅಭಿನವ್ ಮನೋಹರ್, ಬಿ.ಆರ್ ಶರತ್, ಪಂಜಾಬ್ ಕಿಂಗ್ಸ್ನಲ್ಲಿರೋ ವಿದ್ವತ್ ಕಾವೇರಪ್ಪ, ಡೆಲ್ಲಿ ಕ್ಯಾಪಿಟಲ್ಸ್ನಲ್ಲಿರೋ ಪ್ರವೀಣ್ ದುಬೆ ಮಿಂಚು ಹರಿಸಲು ಸಜ್ಜಾಗಿದ್ದಾರೆ.
ಸೀಸನ್ 17ರ ಐಪಿಎಲ್ನಲ್ಲಿ ಒಟ್ಟು 12 ಮಂದಿ ಕನ್ನಡಿಗರು ಅದೃಷ್ಟ ಪರೀಕ್ಷೆಗೆ ಭರ್ಜರಿಯಾಗಿ ಸಜ್ಜಾಗಿದ್ದಾರೆ. ಅಖಾಡದಲ್ಲಿ ಯಾರ ಘರ್ಜನೆ ಜೋರಾಗಿರುತ್ತೆ ಅನ್ನೋದನ್ನ ಕಾದು ನೋಡೋಣ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಹೈದ್ರಾಬಾದ್ ಪರ ಮಿಂಚು ಹರಿಸ್ತಾರಾ ಮಯಾಂಕ್ ಅಗರ್ವಾಲ್?
ಅದೃಷ್ಟ ಪರೀಕ್ಷೆಯ ಕಣದಲ್ಲಿ ಕನ್ನಡದ ಯಂಗ್ಸ್ಟರ್ಸ್ ಭವಿಷ್ಯ!
ಆರ್ಸಿಬಿ ಟೀಮ್ನಲ್ಲಿ ಎಷ್ಟು ಆಟಗಾರರು ಕನ್ನಡಿಗರು ಇದ್ದಾರೆ..?
ಐಪಿಎಲ್ ಮಹಾ ಸಂಗ್ರಮ.. ಯುವ ಕ್ರಿಕೆಟಿಗರ ಪಾಲಿನ ಅದೃಷ್ಟ ಪರೀಕ್ಷೆಯ ಕಣ. ಇಲ್ಲಿ ಪಾಸ್ ಆದ್ರೆ, ಟೀಮ್ ಇಂಡಿಯಾ ಡೋರ್ ಸಲೀಸಾಗಿ ಓಪನ್ ಆಗುತ್ತೆ. ಆಲ್ ರೆಡಿ ತಂಡದಲ್ಲಿದ್ದವರ ಸ್ಥಾನ ಫುಲ್ ಸೇಫ್ ಆಗುತ್ತೆ. ನೇಮ್ & ಫೇಮ್ ನಿರೀಕ್ಷೆ ಮಾಡಲಾಗದಷ್ಟು ಬರುತ್ತೆ. ಹೀಗಾಗಿ ಯಂಗ್ಸ್ಟರ್ಸ್ ಪೈಪೋಟಿಗೆ ಬಿದ್ದು ಪರ್ಫಾಮ್ ಮಾಡ್ತಾರೆ. ನಮ್ಮ ಕನ್ನಡಿಗರು ಕೂಡ ಇದೇ ಫೈಟ್ನಲ್ಲಿದ್ದಾರೆ.
ಐಪಿಎಲ್ ರಣಕಣದಲ್ಲಿ ದೇಶ-ವಿದೇಶದ ಪ್ಲೇಯರ್ಸ್ಗಳು ಸೆಂಟರ್ ಆಫ್ ಅಟ್ರಾಕ್ಷನ್ಸ್ ಆಗಿದ್ದಾರೆ. ಹರಾಜಿನಲ್ಲಿ ಬಿಗ್ ಡೀಲ್ಗೆ ಸೇಲಾದ ಕೋಟಿ ವೀರರ ಮೇಲೆ ಕೋಟಿ-ಕೋಟಿ ಕಣ್ಣುಗಳು ನೆಟ್ಟಿವೆ. ಇವ್ರ ನಡುವೆ ನಮ್ಮ ಹೆಮ್ಮೆಯ ಕನ್ನಡಿಗರು ಕೂಡ ಧೂಳೆಬ್ಬಿಸಲು ಸಜ್ಜಾಗಿದ್ದಾರೆ. ಅದೃಷ್ಟ ಪರೀಕ್ಷೆಯಲ್ಲಿ ಸಕ್ಸಸ್ ಕಾಣ್ತಾರಾ ಅನ್ನೋದು ಎಲ್ಲರ ಕುತೂಹಲ ಕೆರಳಿಸಿದೆ.
ಲಕ್ನೋ ಸೂಪರ್ ಜೈಂಟ್ಸ್ಗೆ ಕನ್ನಡಿಗರದ್ದೇ ಬಲ.!
ಲಕ್ನೋ ಸೂಪರ್ ಜೈಂಟ್ಸ್ ತಂಡದ ಸಾರಥಿಯೇ ಕನ್ನಡಿಗ ಕೆ.ಎಲ್ ರಾಹುಲ್. ಕ್ಲಾಸಿಕ್ ಬ್ಯಾಟಿಂಗ್ ಮೂಲಕ ಐಪಿಎಲ್ ಸಕ್ಸಸ್ಫುಲ್ ಬ್ಯಾಟರ್ ಅನಿಸಿಕೊಂಡಿರೋ ರಾಹುಲ್, ಇನ್ನೊಂದು ಸಕ್ಸಸ್ಫುಲ್ ಸೀಸನ್ನ ಎದುರುನೋಡ್ತಿದ್ದಾರೆ. ಓಪನರ್ ದೇವದತ್ತ್ ಪಡಿಕ್ಕಲ್ ಕೂಡ ರನ್ ಹೊಳೆ ಹರಿಸಲು ಕಾತರರಾಗಿದ್ದಾರೆ. ಕೆ.ಗೌತಮ್ ಆಲ್ರೌಂಡ್ ಆಟದ ಮ್ಯಾಜಿಕ್ ಮಾಡಲು ಕಾದು ಕುಳಿತಿದ್ದಾರೆ.
RCBಯಲ್ಲಿ ಧೂಳೆಬ್ಬಿಸಲು ವೈಶಾಕ್, ಮನೋಜ್ ಸಜ್ಜು.!
ನಮ್ಮದೇ ಮಣ್ಣಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಘರ್ಜಿಸಲು ಕನ್ನಡದ ಕಲಿಗಳು ಸಜ್ಜಾಗಿದ್ದಾರೆ. ವೇಗಿ ವೈಶಾಖ್ ವಿಜಯ್ ಕುಮಾರ್, ಮನೋಜ್ ಬಾಂಡಗೆ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.
ಹಳೇ ತಂಡದ ಪರ ಅದೃಷ್ಟ ಪರೀಕ್ಷೆಗೆ ಸಜ್ಜಾದ ಮನೀಶ್ ಪಾಂಡೆ.!
ಈ ಸೀಸನ್ ಐಪಿಎಲ್ನಲ್ಲಿ ಮನೀಶ್ ಪಾಂಡೆ ಮತ್ತೆ ಕೆಕೆಆರ್ ತಂಡವನ್ನ ಸೇರಿದ್ದಾರೆ. ಈ ಹಿಂದೆ ಕೆಕೆಅರ್ ಪರ ಘರ್ಜಿಸಿದ್ದ ಮನೀಶ್ ಮತ್ತದೇ ಪರ್ಫಾಮೆನ್ಸ್ ನೀಡೋ ಆತ್ಮವಿಶ್ವಾಸದಲ್ಲಿದ್ದಾರೆ.
ಆರೆಂಜ್ ಆರ್ಮಿ ಪರ ಮಿಂಚು ಹರಿಸ್ತಾರಾ ಮಯಾಂಕ್.?
ಕಳೆದ ಸೀಸನ್ನಲ್ಲಿ ಮಯಾಂಕ್ ಅಗರ್ವಾಲ್ ಡಿಸೆಂಟ್ ಪರ್ಫಾಮೆನ್ಸ್ ನೀಡಿದ್ರು. ಈ ಸೀಸನ್ಗೂ ಮುನ್ನ ನೆಟ್ಸ್ನಲ್ಲಿ ಬೆವರಿಳಸಿರೋ ಮಯಾಂಕ್, ರನ್ ಹೊಳೆ ಹರಿಸಲು ಸಿದ್ಧರಾಗಿದ್ದಾರೆ.
ಇದನ್ನೂ ಓದಿ: ಮರುಜೀವ ಪಡೆದ ಪಂತ್ಗೆ ಇದು ಬದುಕಿನ ಸೆಕೆಂಡ್ ಇನ್ನಿಂಗ್ಸ್; ಕ್ರಿಕೆಟ್ ಲೋಕದಲ್ಲೂ ಪವಾಡ ಮಾಡಲು ರೆಡಿ..!
ಅದೃಷ್ಟ ಪರೀಕ್ಷೆಯ ಕಣದಲ್ಲಿ ಕನ್ನಡದ ಯಂಗ್ಸ್ಟರ್ಸ್.!
ಈಗಾಗಲೇ ಸ್ಟಾರ್ಗಳೆನಿಸಕೊಂಡವರ ಜೊತೆಗೆ ಕನ್ನಡದ ಯಂಗ್ಸ್ಟರ್ಸ್ ಕೂಡ ಐಪಿಎಲ್ ಅಖಾಡದಲ್ಲಿ ಧೂಳೆಬ್ಬಿಸಲು ಸಜ್ಜಾಗಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದಲ್ಲಿರೋ ಸ್ಪಿನ್ನರ್ ಶ್ರೇಯಸ್ ಗೋಪಾಲ್, ಗುಜರಾತ್ ಟೈಟನ್ಸ್ ತಂಡದಲ್ಲಿರೋ ಅಭಿನವ್ ಮನೋಹರ್, ಬಿ.ಆರ್ ಶರತ್, ಪಂಜಾಬ್ ಕಿಂಗ್ಸ್ನಲ್ಲಿರೋ ವಿದ್ವತ್ ಕಾವೇರಪ್ಪ, ಡೆಲ್ಲಿ ಕ್ಯಾಪಿಟಲ್ಸ್ನಲ್ಲಿರೋ ಪ್ರವೀಣ್ ದುಬೆ ಮಿಂಚು ಹರಿಸಲು ಸಜ್ಜಾಗಿದ್ದಾರೆ.
ಸೀಸನ್ 17ರ ಐಪಿಎಲ್ನಲ್ಲಿ ಒಟ್ಟು 12 ಮಂದಿ ಕನ್ನಡಿಗರು ಅದೃಷ್ಟ ಪರೀಕ್ಷೆಗೆ ಭರ್ಜರಿಯಾಗಿ ಸಜ್ಜಾಗಿದ್ದಾರೆ. ಅಖಾಡದಲ್ಲಿ ಯಾರ ಘರ್ಜನೆ ಜೋರಾಗಿರುತ್ತೆ ಅನ್ನೋದನ್ನ ಕಾದು ನೋಡೋಣ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ