newsfirstkannada.com

KL ರಾಹುಲ್​ ಸೇರಿ ಐಪಿಎಲ್​ನಲ್ಲಿ ಎಷ್ಟು ಕನ್ನಡಿಗರಿದ್ದಾರೆ.. RCBಯಲ್ಲಿ ಕರ್ನಾಟಕದವ್ರು ಇದ್ದಾರಾ?

Share :

Published March 23, 2024 at 1:13pm

    ಹೈದ್ರಾಬಾದ್​ ಪರ ಮಿಂಚು ಹರಿಸ್ತಾರಾ ಮಯಾಂಕ್ ಅಗರ್ವಾಲ್?

    ಅದೃಷ್ಟ ಪರೀಕ್ಷೆಯ ಕಣದಲ್ಲಿ ಕನ್ನಡದ ಯಂಗ್​​ಸ್ಟರ್ಸ್ ಭವಿಷ್ಯ!

    ಆರ್​ಸಿಬಿ ಟೀಮ್​ನಲ್ಲಿ ಎಷ್ಟು ಆಟಗಾರರು ಕನ್ನಡಿಗರು ಇದ್ದಾರೆ..?

ಐಪಿಎಲ್​ ಮಹಾ ಸಂಗ್ರಮ.. ಯುವ ಕ್ರಿಕೆಟಿಗರ ಪಾಲಿನ ಅದೃಷ್ಟ ಪರೀಕ್ಷೆಯ ಕಣ. ಇಲ್ಲಿ ಪಾಸ್​ ಆದ್ರೆ, ಟೀಮ್​ ಇಂಡಿಯಾ ಡೋರ್​ ಸಲೀಸಾಗಿ ಓಪನ್​ ಆಗುತ್ತೆ. ಆಲ್​ ರೆಡಿ ತಂಡದಲ್ಲಿದ್ದವರ ಸ್ಥಾನ ಫುಲ್​ ಸೇಫ್​ ಆಗುತ್ತೆ. ನೇಮ್​​ & ಫೇಮ್​​ ನಿರೀಕ್ಷೆ ಮಾಡಲಾಗದಷ್ಟು ಬರುತ್ತೆ. ಹೀಗಾಗಿ ಯಂಗ್​​ಸ್ಟರ್ಸ್​​ ಪೈಪೋಟಿಗೆ ಬಿದ್ದು ಪರ್ಫಾಮ್​ ಮಾಡ್ತಾರೆ. ನಮ್ಮ ಕನ್ನಡಿಗರು ಕೂಡ ಇದೇ ಫೈಟ್​​ನಲ್ಲಿದ್ದಾರೆ.

ಐಪಿಎಲ್​​ ರಣಕಣದಲ್ಲಿ ದೇಶ-ವಿದೇಶದ ಪ್ಲೇಯರ್ಸ್​ಗಳು ಸೆಂಟರ್​​ ಆಫ್​ ಅಟ್ರಾಕ್ಷನ್ಸ್​​ ಆಗಿದ್ದಾರೆ. ಹರಾಜಿನಲ್ಲಿ ಬಿಗ್​ ಡೀಲ್​ಗೆ ಸೇಲಾದ ಕೋಟಿ ವೀರರ ಮೇಲೆ ಕೋಟಿ-ಕೋಟಿ ಕಣ್ಣುಗಳು ನೆಟ್ಟಿವೆ. ಇವ್ರ ನಡುವೆ ನಮ್ಮ ಹೆಮ್ಮೆಯ ಕನ್ನಡಿಗರು ಕೂಡ ಧೂಳೆಬ್ಬಿಸಲು ಸಜ್ಜಾಗಿದ್ದಾರೆ. ಅದೃಷ್ಟ ಪರೀಕ್ಷೆಯಲ್ಲಿ ಸಕ್ಸಸ್​ ಕಾಣ್ತಾರಾ ಅನ್ನೋದು ಎಲ್ಲರ ಕುತೂಹಲ ಕೆರಳಿಸಿದೆ.

ಲಕ್ನೋ ಸೂಪರ್​​​ ಜೈಂಟ್ಸ್​​ಗೆ ಕನ್ನಡಿಗರದ್ದೇ ಬಲ.!

ಲಕ್ನೋ ಸೂಪರ್​ ಜೈಂಟ್ಸ್​ ತಂಡದ ಸಾರಥಿಯೇ ಕನ್ನಡಿಗ ಕೆ.ಎಲ್​ ರಾಹುಲ್​. ಕ್ಲಾಸಿಕ್​ ಬ್ಯಾಟಿಂಗ್​ ಮೂಲಕ ಐಪಿಎಲ್​ ಸಕ್ಸಸ್​ಫುಲ್​ ಬ್ಯಾಟರ್​ ಅನಿಸಿಕೊಂಡಿರೋ ರಾಹುಲ್​, ಇನ್ನೊಂದು ಸಕ್ಸಸ್​​ಫುಲ್​ ಸೀಸನ್​ನ ಎದುರುನೋಡ್ತಿದ್ದಾರೆ. ಓಪನರ್​​ ದೇವದತ್ತ್​ ಪಡಿಕ್ಕಲ್​ ಕೂಡ ರನ್​ ಹೊಳೆ ಹರಿಸಲು ಕಾತರರಾಗಿದ್ದಾರೆ. ಕೆ.ಗೌತಮ್​ ಆಲ್​​ರೌಂಡ್​​ ಆಟದ ಮ್ಯಾಜಿಕ್​ ಮಾಡಲು ಕಾದು ಕುಳಿತಿದ್ದಾರೆ.

RCBಯಲ್ಲಿ ಧೂಳೆಬ್ಬಿಸಲು ವೈಶಾಕ್​, ಮನೋಜ್​ ಸಜ್ಜು.!

ನಮ್ಮದೇ ಮಣ್ಣಿನ ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ತಂಡದ ಪರ ಘರ್ಜಿಸಲು ಕನ್ನಡದ ಕಲಿಗಳು ಸಜ್ಜಾಗಿದ್ದಾರೆ. ವೇಗಿ ವೈಶಾಖ್​ ವಿಜಯ್​ ಕುಮಾರ್, ಮನೋಜ್​ ಬಾಂಡಗೆ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.

ಹಳೇ ತಂಡದ ಪರ ಅದೃಷ್ಟ ಪರೀಕ್ಷೆಗೆ ಸಜ್ಜಾದ ಮನೀಶ್ ಪಾಂಡೆ​.!

ಈ ಸೀಸನ್​ ಐಪಿಎಲ್​​ನಲ್ಲಿ ಮನೀಶ್ ಪಾಂಡೆ ಮತ್ತೆ ಕೆಕೆಆರ್​ ತಂಡವನ್ನ ಸೇರಿದ್ದಾರೆ. ಈ ಹಿಂದೆ ಕೆಕೆಅರ್​ ಪರ ಘರ್ಜಿಸಿದ್ದ ಮನೀಶ್ ಮತ್ತದೇ ಪರ್ಫಾಮೆನ್ಸ್​​ ನೀಡೋ ಆತ್ಮವಿಶ್ವಾಸದಲ್ಲಿದ್ದಾರೆ.

ಆರೆಂಜ್​ ಆರ್ಮಿ ಪರ ಮಿಂಚು ಹರಿಸ್ತಾರಾ ಮಯಾಂಕ್​.?

ಕಳೆದ ಸೀಸನ್​ನಲ್ಲಿ ಮಯಾಂಕ್​ ಅಗರ್​ವಾಲ್​ ಡಿಸೆಂಟ್ ಪರ್ಫಾಮೆನ್ಸ್​ ನೀಡಿದ್ರು. ಈ ಸೀಸನ್​ಗೂ ಮುನ್ನ ನೆಟ್ಸ್​ನಲ್ಲಿ ಬೆವರಿಳಸಿರೋ ಮಯಾಂಕ್​, ರನ್​​ ಹೊಳೆ ಹರಿಸಲು ಸಿದ್ಧರಾಗಿದ್ದಾರೆ.

ಇದನ್ನೂ ಓದಿ: ಮರುಜೀವ ಪಡೆದ ಪಂತ್​​ಗೆ ಇದು ಬದುಕಿನ ಸೆಕೆಂಡ್ ಇನ್ನಿಂಗ್ಸ್; ಕ್ರಿಕೆಟ್ ಲೋಕದಲ್ಲೂ ಪವಾಡ ಮಾಡಲು ರೆಡಿ..!


ಅದೃಷ್ಟ ಪರೀಕ್ಷೆಯ ಕಣದಲ್ಲಿ ಕನ್ನಡದ ಯಂಗ್​​ಸ್ಟರ್ಸ್​.!

ಈಗಾಗಲೇ ಸ್ಟಾರ್​​ಗಳೆನಿಸಕೊಂಡವರ ಜೊತೆಗೆ ಕನ್ನಡದ ಯಂಗ್​​ಸ್ಟರ್ಸ್​ ಕೂಡ ಐಪಿಎಲ್​ ಅಖಾಡದಲ್ಲಿ ಧೂಳೆಬ್ಬಿಸಲು ಸಜ್ಜಾಗಿದ್ದಾರೆ. ಮುಂಬೈ ಇಂಡಿಯನ್ಸ್​ ತಂಡದಲ್ಲಿರೋ ಸ್ಪಿನ್ನರ್​ ಶ್ರೇಯಸ್​​ ಗೋಪಾಲ್​, ಗುಜರಾತ್​ ಟೈಟನ್ಸ್​ ತಂಡದಲ್ಲಿರೋ ಅಭಿನವ್​ ಮನೋಹರ್​, ಬಿ.ಆರ್​​ ಶರತ್​, ಪಂಜಾಬ್​ ಕಿಂಗ್ಸ್​​ನಲ್ಲಿರೋ ವಿದ್ವತ್​ ಕಾವೇರಪ್ಪ, ಡೆಲ್ಲಿ ಕ್ಯಾಪಿಟಲ್ಸ್​​ನಲ್ಲಿರೋ ಪ್ರವೀಣ್​ ದುಬೆ ಮಿಂಚು ಹರಿಸಲು ಸಜ್ಜಾಗಿದ್ದಾರೆ.

ಸೀಸನ್​ 17ರ ಐಪಿಎಲ್​ನಲ್ಲಿ ಒಟ್ಟು 12 ಮಂದಿ ಕನ್ನಡಿಗರು ಅದೃಷ್ಟ ಪರೀಕ್ಷೆಗೆ ಭರ್ಜರಿಯಾಗಿ ಸಜ್ಜಾಗಿದ್ದಾರೆ. ಅಖಾಡದಲ್ಲಿ ಯಾರ ಘರ್ಜನೆ ಜೋರಾಗಿರುತ್ತೆ ಅನ್ನೋದನ್ನ ಕಾದು ನೋಡೋಣ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

KL ರಾಹುಲ್​ ಸೇರಿ ಐಪಿಎಲ್​ನಲ್ಲಿ ಎಷ್ಟು ಕನ್ನಡಿಗರಿದ್ದಾರೆ.. RCBಯಲ್ಲಿ ಕರ್ನಾಟಕದವ್ರು ಇದ್ದಾರಾ?

https://newsfirstlive.com/wp-content/uploads/2024/03/KL_RAHUL-1.jpg

    ಹೈದ್ರಾಬಾದ್​ ಪರ ಮಿಂಚು ಹರಿಸ್ತಾರಾ ಮಯಾಂಕ್ ಅಗರ್ವಾಲ್?

    ಅದೃಷ್ಟ ಪರೀಕ್ಷೆಯ ಕಣದಲ್ಲಿ ಕನ್ನಡದ ಯಂಗ್​​ಸ್ಟರ್ಸ್ ಭವಿಷ್ಯ!

    ಆರ್​ಸಿಬಿ ಟೀಮ್​ನಲ್ಲಿ ಎಷ್ಟು ಆಟಗಾರರು ಕನ್ನಡಿಗರು ಇದ್ದಾರೆ..?

ಐಪಿಎಲ್​ ಮಹಾ ಸಂಗ್ರಮ.. ಯುವ ಕ್ರಿಕೆಟಿಗರ ಪಾಲಿನ ಅದೃಷ್ಟ ಪರೀಕ್ಷೆಯ ಕಣ. ಇಲ್ಲಿ ಪಾಸ್​ ಆದ್ರೆ, ಟೀಮ್​ ಇಂಡಿಯಾ ಡೋರ್​ ಸಲೀಸಾಗಿ ಓಪನ್​ ಆಗುತ್ತೆ. ಆಲ್​ ರೆಡಿ ತಂಡದಲ್ಲಿದ್ದವರ ಸ್ಥಾನ ಫುಲ್​ ಸೇಫ್​ ಆಗುತ್ತೆ. ನೇಮ್​​ & ಫೇಮ್​​ ನಿರೀಕ್ಷೆ ಮಾಡಲಾಗದಷ್ಟು ಬರುತ್ತೆ. ಹೀಗಾಗಿ ಯಂಗ್​​ಸ್ಟರ್ಸ್​​ ಪೈಪೋಟಿಗೆ ಬಿದ್ದು ಪರ್ಫಾಮ್​ ಮಾಡ್ತಾರೆ. ನಮ್ಮ ಕನ್ನಡಿಗರು ಕೂಡ ಇದೇ ಫೈಟ್​​ನಲ್ಲಿದ್ದಾರೆ.

ಐಪಿಎಲ್​​ ರಣಕಣದಲ್ಲಿ ದೇಶ-ವಿದೇಶದ ಪ್ಲೇಯರ್ಸ್​ಗಳು ಸೆಂಟರ್​​ ಆಫ್​ ಅಟ್ರಾಕ್ಷನ್ಸ್​​ ಆಗಿದ್ದಾರೆ. ಹರಾಜಿನಲ್ಲಿ ಬಿಗ್​ ಡೀಲ್​ಗೆ ಸೇಲಾದ ಕೋಟಿ ವೀರರ ಮೇಲೆ ಕೋಟಿ-ಕೋಟಿ ಕಣ್ಣುಗಳು ನೆಟ್ಟಿವೆ. ಇವ್ರ ನಡುವೆ ನಮ್ಮ ಹೆಮ್ಮೆಯ ಕನ್ನಡಿಗರು ಕೂಡ ಧೂಳೆಬ್ಬಿಸಲು ಸಜ್ಜಾಗಿದ್ದಾರೆ. ಅದೃಷ್ಟ ಪರೀಕ್ಷೆಯಲ್ಲಿ ಸಕ್ಸಸ್​ ಕಾಣ್ತಾರಾ ಅನ್ನೋದು ಎಲ್ಲರ ಕುತೂಹಲ ಕೆರಳಿಸಿದೆ.

ಲಕ್ನೋ ಸೂಪರ್​​​ ಜೈಂಟ್ಸ್​​ಗೆ ಕನ್ನಡಿಗರದ್ದೇ ಬಲ.!

ಲಕ್ನೋ ಸೂಪರ್​ ಜೈಂಟ್ಸ್​ ತಂಡದ ಸಾರಥಿಯೇ ಕನ್ನಡಿಗ ಕೆ.ಎಲ್​ ರಾಹುಲ್​. ಕ್ಲಾಸಿಕ್​ ಬ್ಯಾಟಿಂಗ್​ ಮೂಲಕ ಐಪಿಎಲ್​ ಸಕ್ಸಸ್​ಫುಲ್​ ಬ್ಯಾಟರ್​ ಅನಿಸಿಕೊಂಡಿರೋ ರಾಹುಲ್​, ಇನ್ನೊಂದು ಸಕ್ಸಸ್​​ಫುಲ್​ ಸೀಸನ್​ನ ಎದುರುನೋಡ್ತಿದ್ದಾರೆ. ಓಪನರ್​​ ದೇವದತ್ತ್​ ಪಡಿಕ್ಕಲ್​ ಕೂಡ ರನ್​ ಹೊಳೆ ಹರಿಸಲು ಕಾತರರಾಗಿದ್ದಾರೆ. ಕೆ.ಗೌತಮ್​ ಆಲ್​​ರೌಂಡ್​​ ಆಟದ ಮ್ಯಾಜಿಕ್​ ಮಾಡಲು ಕಾದು ಕುಳಿತಿದ್ದಾರೆ.

RCBಯಲ್ಲಿ ಧೂಳೆಬ್ಬಿಸಲು ವೈಶಾಕ್​, ಮನೋಜ್​ ಸಜ್ಜು.!

ನಮ್ಮದೇ ಮಣ್ಣಿನ ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ತಂಡದ ಪರ ಘರ್ಜಿಸಲು ಕನ್ನಡದ ಕಲಿಗಳು ಸಜ್ಜಾಗಿದ್ದಾರೆ. ವೇಗಿ ವೈಶಾಖ್​ ವಿಜಯ್​ ಕುಮಾರ್, ಮನೋಜ್​ ಬಾಂಡಗೆ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.

ಹಳೇ ತಂಡದ ಪರ ಅದೃಷ್ಟ ಪರೀಕ್ಷೆಗೆ ಸಜ್ಜಾದ ಮನೀಶ್ ಪಾಂಡೆ​.!

ಈ ಸೀಸನ್​ ಐಪಿಎಲ್​​ನಲ್ಲಿ ಮನೀಶ್ ಪಾಂಡೆ ಮತ್ತೆ ಕೆಕೆಆರ್​ ತಂಡವನ್ನ ಸೇರಿದ್ದಾರೆ. ಈ ಹಿಂದೆ ಕೆಕೆಅರ್​ ಪರ ಘರ್ಜಿಸಿದ್ದ ಮನೀಶ್ ಮತ್ತದೇ ಪರ್ಫಾಮೆನ್ಸ್​​ ನೀಡೋ ಆತ್ಮವಿಶ್ವಾಸದಲ್ಲಿದ್ದಾರೆ.

ಆರೆಂಜ್​ ಆರ್ಮಿ ಪರ ಮಿಂಚು ಹರಿಸ್ತಾರಾ ಮಯಾಂಕ್​.?

ಕಳೆದ ಸೀಸನ್​ನಲ್ಲಿ ಮಯಾಂಕ್​ ಅಗರ್​ವಾಲ್​ ಡಿಸೆಂಟ್ ಪರ್ಫಾಮೆನ್ಸ್​ ನೀಡಿದ್ರು. ಈ ಸೀಸನ್​ಗೂ ಮುನ್ನ ನೆಟ್ಸ್​ನಲ್ಲಿ ಬೆವರಿಳಸಿರೋ ಮಯಾಂಕ್​, ರನ್​​ ಹೊಳೆ ಹರಿಸಲು ಸಿದ್ಧರಾಗಿದ್ದಾರೆ.

ಇದನ್ನೂ ಓದಿ: ಮರುಜೀವ ಪಡೆದ ಪಂತ್​​ಗೆ ಇದು ಬದುಕಿನ ಸೆಕೆಂಡ್ ಇನ್ನಿಂಗ್ಸ್; ಕ್ರಿಕೆಟ್ ಲೋಕದಲ್ಲೂ ಪವಾಡ ಮಾಡಲು ರೆಡಿ..!


ಅದೃಷ್ಟ ಪರೀಕ್ಷೆಯ ಕಣದಲ್ಲಿ ಕನ್ನಡದ ಯಂಗ್​​ಸ್ಟರ್ಸ್​.!

ಈಗಾಗಲೇ ಸ್ಟಾರ್​​ಗಳೆನಿಸಕೊಂಡವರ ಜೊತೆಗೆ ಕನ್ನಡದ ಯಂಗ್​​ಸ್ಟರ್ಸ್​ ಕೂಡ ಐಪಿಎಲ್​ ಅಖಾಡದಲ್ಲಿ ಧೂಳೆಬ್ಬಿಸಲು ಸಜ್ಜಾಗಿದ್ದಾರೆ. ಮುಂಬೈ ಇಂಡಿಯನ್ಸ್​ ತಂಡದಲ್ಲಿರೋ ಸ್ಪಿನ್ನರ್​ ಶ್ರೇಯಸ್​​ ಗೋಪಾಲ್​, ಗುಜರಾತ್​ ಟೈಟನ್ಸ್​ ತಂಡದಲ್ಲಿರೋ ಅಭಿನವ್​ ಮನೋಹರ್​, ಬಿ.ಆರ್​​ ಶರತ್​, ಪಂಜಾಬ್​ ಕಿಂಗ್ಸ್​​ನಲ್ಲಿರೋ ವಿದ್ವತ್​ ಕಾವೇರಪ್ಪ, ಡೆಲ್ಲಿ ಕ್ಯಾಪಿಟಲ್ಸ್​​ನಲ್ಲಿರೋ ಪ್ರವೀಣ್​ ದುಬೆ ಮಿಂಚು ಹರಿಸಲು ಸಜ್ಜಾಗಿದ್ದಾರೆ.

ಸೀಸನ್​ 17ರ ಐಪಿಎಲ್​ನಲ್ಲಿ ಒಟ್ಟು 12 ಮಂದಿ ಕನ್ನಡಿಗರು ಅದೃಷ್ಟ ಪರೀಕ್ಷೆಗೆ ಭರ್ಜರಿಯಾಗಿ ಸಜ್ಜಾಗಿದ್ದಾರೆ. ಅಖಾಡದಲ್ಲಿ ಯಾರ ಘರ್ಜನೆ ಜೋರಾಗಿರುತ್ತೆ ಅನ್ನೋದನ್ನ ಕಾದು ನೋಡೋಣ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Load More