ಟೀಮ್ ಇಂಡಿಯಾ ಅಭಿಮಾನಿಗಳಲ್ಲಿ ಮೂಡಿದೆ ಚಿಂತೆ
IPLನಲ್ಲೇ ಫೇಲಾದವರು.. ವಿಶ್ವಕಪ್ನಲ್ಲಿ ಅಬ್ಬರಿಸ್ತಾರಾ..?
ನಾಲ್ಕೇ ದಿನ ಬಾಕಿ.. ಕಂಡುಕೊಳ್ಳಬೇಕಿದೆ ಫಾರ್ಮ್
T20 ವಿಶ್ವಕಪ್ ಟೂರ್ನಿಗೆ ಟೀಮ್ ಇಂಡಿಯಾ ರೆಡಿಯಾಗಿದೆ. ನ್ಯೂಯಾರ್ಕ್ನಲ್ಲಿ ಬೀಡು ಬಿಟ್ಟಿರುವ ಟೀಮ್ ಇಂಡಿಯಾ, ಅಖಾಡಕ್ಕೆ ಇಳಿಯೋದೊಂದೇ ಬಾಕಿ. ಈ ಅಖಾಡಕ್ಕಿಳಿಯಲು ಸಜ್ಜಾಗಿರುವ ಕೆಲ ರಣಕಲಿಗಳು, ಭಾರತೀಯ ಕ್ರಿಕೆಟ್ ಅಭಿಮಾನಿಗಳನ್ನ ಚಿಂತೆಗೆ ದೂಡಿದ್ದಾರೆ.
T20 ವಿಶ್ವಕಪ್ ಮಹಾ ಸಂಗ್ರಾಮಕ್ಕೆ ಟೀಮ್ ಇಂಡಿಯಾ ಸಜ್ಜಾಗಿದೆ. 17 ವರ್ಷಗಳ ಬಳಿಕ ಚುಟುಕು ವಿಶ್ವ ಸಮರ ಗೆಲ್ಲಲು ಪಣ ತೊಟ್ಟಿದೆ. ಈ ನಿಟ್ಟಿನಲ್ಲೇ ಬಲಿಷ್ಠ ತಂಡವನ್ನ ಕಟ್ಟಿದೆ. ಏಕದಿನ ವಿಶ್ವಕಪ್ ಸೋಲಿನ ಕಹಿ ಮರೆಯೋ ಆಶಾಭಾವನೆ ತಂಡದಲ್ಲಿದೆ. ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಆ್ಯಂಡ್ ಫ್ಯಾನ್ಸ್ಗೆ ಮಾತ್ರ, ಟೆನ್ಶನ್ ಶುರುವಾಗಿದೆ. ಇದಕ್ಕೆಲ್ಲಾ ಕಾರಣ ಇಂಡಿಯನ್ ಪ್ರಿಮೀಯರ್ ಲೀಗ್ ಟೂರ್ನಿ ಹಾಗೂ ಕೆಲ ಆಟಗಾರರು.!
ಇದನ್ನೂ ಓದಿ:ದೈವದ ಕೆಲಸಕ್ಕೆ ಕಾಡಿಗೆ ಹೋಗಿದ್ದವ ನಿಗೂಢ ನಾಪತ್ತೆ.. 82 ವರ್ಷದ ವೃದ್ಧ ಬದುಕಿ ಬಂದಿದ್ದೇ ರೋಚಕ
T20 ವಿಶ್ವಕಪ್ಗೆ ಆಯ್ಕೆಯಾದ ಆಟಗಾರರ ಫ್ಲಾಪ್ ಶೋ..!
ಟಿ20 ವಿಶ್ವಕಪ್ ತಂಡದ ಆಟಗಾರರೇ ಟೀಮ್ ಇಂಡಿಯಾ ಅಭಿಮಾನಿಗಳ ಆತಂಕಕ್ಕೆ ಕಾರಣರಾಗಿದ್ದಾರೆ. ಟಿ20 ವಿಶ್ವಕಪ್ನಲ್ಲಿ ಸ್ಥಾನ ಪಡೆದ ಬಹುತೇಕ ಆಟಗಾರರು, ಐಪಿಎಲ್ನಲ್ಲಿ ಫ್ಲಾಫ್ ಪರ್ಫಾಮೆನ್ಸ್ ನೀಡಿದ್ದಾರೆ, ತಮ್ಮ ಸಾಮರ್ಥ್ಯಕ್ಕೆ ತಕ್ಕ ಆಟವಾಡುವಲ್ಲಿ ವಿಫಲರಾಗಿದ್ದಾರೆ. ಬಿಗ್ ಸ್ಟಾರ್ಗಳೇ ಪರದಾಡಿದ್ದಾರೆ. ಹೀಗಾಗಿ ಐಪಿಎಲ್ನಲ್ಲಿ ಫೇಲಾದ ಆಟಗಾರರು, ಬಿಗ್ ಸ್ಟೇಜ್ನಲ್ಲಿ ಅಬ್ಬರಿಸ್ತಾರಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಔಟ್ ಆಫ್ ಫಾರ್ಮ್ ಸುಳಿಯಲ್ಲಿ ಕ್ಯಾಪ್ಟನ್ ರೋಹಿತ್..!
ಕ್ಯಾಪ್ಟನ್ ರೋಹಿತ್ ಶರ್ಮಾ ಔಟ್ ಆಫ್ ಫಾರ್ಮ್ ಸುಳಿಗೆ ಸಿಲುಕಿದ್ದಾರೆ. ಆರಂಭಿಕರಾಗಿ ಆರ್ಭಟಿಸುವಲ್ಲಿ ಫೇಲ್ ಆಗಿದ್ದಾರೆ. ಅದರಲ್ಲೂ ಕಳೆದ 8 ಪಂದ್ಯಗಳಿಂದ ಹಿಟ್ಮ್ಯಾನ್ ಕೇವಲ 156 ರನ್ಗಳಿಸಿದ್ದಾರೆ. ರೋಹಿತ್ ಶರ್ಮಾ ಮಾತ್ರವಲ್ಲ.. ಹಿಟ್ಮ್ಯಾನ್ ಜೊತೆ ಇನ್ನಿಂಗ್ಸ್ ಆರಂಭಿಸುವ ಕನಸು ಕಾಣ್ತಿರುವ ಯಶಸ್ವಿ ಜೈಸ್ವಾಲ್ ಕಥೆಯೂ ಇದಕ್ಕಿಂತ ಭಿನ್ನವೇನಿಲ್ಲ.
ಇದನ್ನೂ ಓದಿ:ಉಳಿದಿರೋದು ಐದೇ ದಿನ.. ಯಾವುದರಲ್ಲೂ ಕ್ಲಾರಿಟಿಯೇ ಇಲ್ಲ.. ತಂಡ ಒಂದೇ ಆದರೂ ಯಾಕೆ ಹೀಗೆ?
ಹಾರ್ದಿಕ್ಗಿಲ್ಲ ಹಳೇ ಖದರ್.. ದುಬೆ ದುಬಾರಿ..!
ವೈಸ್ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಕೂಡ ಕಂಪ್ಲೀಟ್ ಮಕಾಡೆ ಮಲಗಿದ್ದಾರೆ. ಏಕದಿನ ವಿಶ್ವಕಪ್ ವೇಳೆ ಇಂಜುರಿಗೆ ತುತ್ತಾಗಿದ್ದ ಹಾರ್ದಿಕ್ ಐಪಿಎಲ್ಗೆ ಕಮ್ಬ್ಯಾಕ್ ಮಾಡಿದ್ರು. ಆದ್ರೆ, ಅಟ್ಟರ್ ಫ್ಲಾಪ್ ಪರ್ಫಾಮೆನ್ಸ್ ನೀಡ್ತಿದ್ದಾರೆ. ಬ್ಯಾಟಿಂಗ್ ಖದರ್ ಕಳೆದುಕೊಂಡಿರುವ ಪಾಂಡ್ಯ, ಫಿನಿಶರ್ ಆಗಿ ಬೌಂಡರಿ ಬಾರಿಸಲು ಪರದಾಡಿದ್ದಾರೆ. 14 ಪಂದ್ಯಗಳಿಂದ 18ರ ಅವರೇಜ್ನಲ್ಲಿ ಜಸ್ಟ್ 216 ರನ್ ಬಾರಿಸಿದ್ರೆ. ಬೌಲಿಂಗ್ನಲ್ಲಿ 11ರ ಏಕಾನಮಿಯಲ್ಲಿ ರನ್ ಬಿಟ್ಟುಕೊಟ್ಟು 11 ವಿಕೆಟ್ ಉರುಳಿಸಿದ್ದಾರೆ.
ಟಿ20ಯಲ್ಲಿ ಗೇಮ್ ಚೇಂಜರ್ ಅಂತಾನೇ ಹೇಳಲಾಗ್ತಿರುವ ಶಿವಂ ದುಬೆ, ವಿಶ್ವಕಪ್ ತಂಡದ ಆಯ್ಕೆ ಬಳಿಕ ಸಿಡಿಸಿರೋದು ಬರೀ 46 ರನ್. ಚೆನ್ನೈ ಪಾಲಿಗೆ ದುಬಾರಿಯಾದ್ರು.
ಜಡ್ಡು ಜಾದೂ ಮಾಡಲಿಲ್ಲ.. ಸಿರಾಜ್ ಸ್ಥಿರವಾಗಿಲ್ಲ..!
ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ, ಟ್ರೋಫಿಗೆ ಮುತ್ತಿಡಬೇಕು ಅಂದ್ರೆ, ಜಡ್ಡು ಮ್ಯಾಜಿಕ್ ನಡೆಯಲೇಬೇಕು. ಆದ್ರೆ, ಐಪಿಎಲ್ನಲ್ಲಿ ಜಡ್ಡು ಜಾದೂ ನಡೆದೇ ಇಲ್ಲ. 14 ಪಂದ್ಯಗಳಿಂದ 8 ವಿಕೆಟ್ ಬೇಟೆಯಾಡಿರೋ ಜಡೇಜಾ, ಬ್ಯಾಟಿಂಗ್ನಲ್ಲೂ ಮೋಡಿ ಮಾಡಲಿಲ್ಲ. ಬೂಮ್ರಾ ಜೊತೆ ಚೆಂಡು ಹಂಚಿಕೊಳ್ಳಲು ರೆಡಿಯಾಗಿರುವ ಸಿರಾಜ್ ಕೂಡ ಐಪಿಎಲ್ನಲ್ಲಿ ನೀಡಿರೋದು ಫ್ಲಾಫ್ ಶೋ. 14 ಪಂದ್ಯಗಳಿಂದ 9.18ರ ಎಕಾನಮಿಯಲ್ಲಿ ರನ್ ನೀಡಿರುವ ಸಿರಾಜ್, ಬೇಟೆಯಾಡಿರೋದು ಜಸ್ಟ್ 15 ವಿಕೆಟ್ ಮಾತ್ರ. ಈ ಪೈಕಿ ಕೊನೆ 6 ಪಂದ್ಯಗಳಿಂದ 11 ವಿಕೆಟ್ ಕಬಳಿಸಿರೋದು ಸಮಾಧಾನಕರ ವಿಚಾರ.
ಇದನ್ನೂ ಓದಿ:ಒಂದು ಫೋಟೋ ಹಲವು ಅರ್ಥ.. KL ರಾಹುಲ್ ಸೈಲೆಂಟ್ ಅಲ್ಲೇ ಟಕ್ಕರ್ ಕೊಟ್ರಾ?
ಐಪಿಎಲ್ನಲ್ಲಿ ಸತತ ವೈಫಲ್ಯ ಅನುಭವಿಸಿರೋ ಇವರು, ಟಿ20 ವಿಶ್ವಕಪ್ ವೇಳೆಗೆ ಕಮ್ಬ್ಯಾಕ್ ಮಾಡಬೇಕಾದ ಅಗತ್ಯ ಇದೆ. ವಿರಾಟ್ ಕೊಹ್ಲಿ ಹಾಗೂ ಜಸ್ಪ್ರೀತ್ ಬೂಮ್ರಾ ಜೊತೆಗೆ ಈ ಎಲ್ಲಾ ಆಟಗಾರರು, ಟಿ20 ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ಕ್ಲಿಕ್ ಆಗಬೇಕಿದೆ. ಆಗ ಮಾತ್ರ ಅಸಲಿ ಟೂರ್ನಿಗೈ ಮುನ್ನ ಆತ್ಮವಿಶ್ವಾಸ ಹೆಚ್ಚಲಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಟೀಮ್ ಇಂಡಿಯಾ ಅಭಿಮಾನಿಗಳಲ್ಲಿ ಮೂಡಿದೆ ಚಿಂತೆ
IPLನಲ್ಲೇ ಫೇಲಾದವರು.. ವಿಶ್ವಕಪ್ನಲ್ಲಿ ಅಬ್ಬರಿಸ್ತಾರಾ..?
ನಾಲ್ಕೇ ದಿನ ಬಾಕಿ.. ಕಂಡುಕೊಳ್ಳಬೇಕಿದೆ ಫಾರ್ಮ್
T20 ವಿಶ್ವಕಪ್ ಟೂರ್ನಿಗೆ ಟೀಮ್ ಇಂಡಿಯಾ ರೆಡಿಯಾಗಿದೆ. ನ್ಯೂಯಾರ್ಕ್ನಲ್ಲಿ ಬೀಡು ಬಿಟ್ಟಿರುವ ಟೀಮ್ ಇಂಡಿಯಾ, ಅಖಾಡಕ್ಕೆ ಇಳಿಯೋದೊಂದೇ ಬಾಕಿ. ಈ ಅಖಾಡಕ್ಕಿಳಿಯಲು ಸಜ್ಜಾಗಿರುವ ಕೆಲ ರಣಕಲಿಗಳು, ಭಾರತೀಯ ಕ್ರಿಕೆಟ್ ಅಭಿಮಾನಿಗಳನ್ನ ಚಿಂತೆಗೆ ದೂಡಿದ್ದಾರೆ.
T20 ವಿಶ್ವಕಪ್ ಮಹಾ ಸಂಗ್ರಾಮಕ್ಕೆ ಟೀಮ್ ಇಂಡಿಯಾ ಸಜ್ಜಾಗಿದೆ. 17 ವರ್ಷಗಳ ಬಳಿಕ ಚುಟುಕು ವಿಶ್ವ ಸಮರ ಗೆಲ್ಲಲು ಪಣ ತೊಟ್ಟಿದೆ. ಈ ನಿಟ್ಟಿನಲ್ಲೇ ಬಲಿಷ್ಠ ತಂಡವನ್ನ ಕಟ್ಟಿದೆ. ಏಕದಿನ ವಿಶ್ವಕಪ್ ಸೋಲಿನ ಕಹಿ ಮರೆಯೋ ಆಶಾಭಾವನೆ ತಂಡದಲ್ಲಿದೆ. ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಆ್ಯಂಡ್ ಫ್ಯಾನ್ಸ್ಗೆ ಮಾತ್ರ, ಟೆನ್ಶನ್ ಶುರುವಾಗಿದೆ. ಇದಕ್ಕೆಲ್ಲಾ ಕಾರಣ ಇಂಡಿಯನ್ ಪ್ರಿಮೀಯರ್ ಲೀಗ್ ಟೂರ್ನಿ ಹಾಗೂ ಕೆಲ ಆಟಗಾರರು.!
ಇದನ್ನೂ ಓದಿ:ದೈವದ ಕೆಲಸಕ್ಕೆ ಕಾಡಿಗೆ ಹೋಗಿದ್ದವ ನಿಗೂಢ ನಾಪತ್ತೆ.. 82 ವರ್ಷದ ವೃದ್ಧ ಬದುಕಿ ಬಂದಿದ್ದೇ ರೋಚಕ
T20 ವಿಶ್ವಕಪ್ಗೆ ಆಯ್ಕೆಯಾದ ಆಟಗಾರರ ಫ್ಲಾಪ್ ಶೋ..!
ಟಿ20 ವಿಶ್ವಕಪ್ ತಂಡದ ಆಟಗಾರರೇ ಟೀಮ್ ಇಂಡಿಯಾ ಅಭಿಮಾನಿಗಳ ಆತಂಕಕ್ಕೆ ಕಾರಣರಾಗಿದ್ದಾರೆ. ಟಿ20 ವಿಶ್ವಕಪ್ನಲ್ಲಿ ಸ್ಥಾನ ಪಡೆದ ಬಹುತೇಕ ಆಟಗಾರರು, ಐಪಿಎಲ್ನಲ್ಲಿ ಫ್ಲಾಫ್ ಪರ್ಫಾಮೆನ್ಸ್ ನೀಡಿದ್ದಾರೆ, ತಮ್ಮ ಸಾಮರ್ಥ್ಯಕ್ಕೆ ತಕ್ಕ ಆಟವಾಡುವಲ್ಲಿ ವಿಫಲರಾಗಿದ್ದಾರೆ. ಬಿಗ್ ಸ್ಟಾರ್ಗಳೇ ಪರದಾಡಿದ್ದಾರೆ. ಹೀಗಾಗಿ ಐಪಿಎಲ್ನಲ್ಲಿ ಫೇಲಾದ ಆಟಗಾರರು, ಬಿಗ್ ಸ್ಟೇಜ್ನಲ್ಲಿ ಅಬ್ಬರಿಸ್ತಾರಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಔಟ್ ಆಫ್ ಫಾರ್ಮ್ ಸುಳಿಯಲ್ಲಿ ಕ್ಯಾಪ್ಟನ್ ರೋಹಿತ್..!
ಕ್ಯಾಪ್ಟನ್ ರೋಹಿತ್ ಶರ್ಮಾ ಔಟ್ ಆಫ್ ಫಾರ್ಮ್ ಸುಳಿಗೆ ಸಿಲುಕಿದ್ದಾರೆ. ಆರಂಭಿಕರಾಗಿ ಆರ್ಭಟಿಸುವಲ್ಲಿ ಫೇಲ್ ಆಗಿದ್ದಾರೆ. ಅದರಲ್ಲೂ ಕಳೆದ 8 ಪಂದ್ಯಗಳಿಂದ ಹಿಟ್ಮ್ಯಾನ್ ಕೇವಲ 156 ರನ್ಗಳಿಸಿದ್ದಾರೆ. ರೋಹಿತ್ ಶರ್ಮಾ ಮಾತ್ರವಲ್ಲ.. ಹಿಟ್ಮ್ಯಾನ್ ಜೊತೆ ಇನ್ನಿಂಗ್ಸ್ ಆರಂಭಿಸುವ ಕನಸು ಕಾಣ್ತಿರುವ ಯಶಸ್ವಿ ಜೈಸ್ವಾಲ್ ಕಥೆಯೂ ಇದಕ್ಕಿಂತ ಭಿನ್ನವೇನಿಲ್ಲ.
ಇದನ್ನೂ ಓದಿ:ಉಳಿದಿರೋದು ಐದೇ ದಿನ.. ಯಾವುದರಲ್ಲೂ ಕ್ಲಾರಿಟಿಯೇ ಇಲ್ಲ.. ತಂಡ ಒಂದೇ ಆದರೂ ಯಾಕೆ ಹೀಗೆ?
ಹಾರ್ದಿಕ್ಗಿಲ್ಲ ಹಳೇ ಖದರ್.. ದುಬೆ ದುಬಾರಿ..!
ವೈಸ್ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಕೂಡ ಕಂಪ್ಲೀಟ್ ಮಕಾಡೆ ಮಲಗಿದ್ದಾರೆ. ಏಕದಿನ ವಿಶ್ವಕಪ್ ವೇಳೆ ಇಂಜುರಿಗೆ ತುತ್ತಾಗಿದ್ದ ಹಾರ್ದಿಕ್ ಐಪಿಎಲ್ಗೆ ಕಮ್ಬ್ಯಾಕ್ ಮಾಡಿದ್ರು. ಆದ್ರೆ, ಅಟ್ಟರ್ ಫ್ಲಾಪ್ ಪರ್ಫಾಮೆನ್ಸ್ ನೀಡ್ತಿದ್ದಾರೆ. ಬ್ಯಾಟಿಂಗ್ ಖದರ್ ಕಳೆದುಕೊಂಡಿರುವ ಪಾಂಡ್ಯ, ಫಿನಿಶರ್ ಆಗಿ ಬೌಂಡರಿ ಬಾರಿಸಲು ಪರದಾಡಿದ್ದಾರೆ. 14 ಪಂದ್ಯಗಳಿಂದ 18ರ ಅವರೇಜ್ನಲ್ಲಿ ಜಸ್ಟ್ 216 ರನ್ ಬಾರಿಸಿದ್ರೆ. ಬೌಲಿಂಗ್ನಲ್ಲಿ 11ರ ಏಕಾನಮಿಯಲ್ಲಿ ರನ್ ಬಿಟ್ಟುಕೊಟ್ಟು 11 ವಿಕೆಟ್ ಉರುಳಿಸಿದ್ದಾರೆ.
ಟಿ20ಯಲ್ಲಿ ಗೇಮ್ ಚೇಂಜರ್ ಅಂತಾನೇ ಹೇಳಲಾಗ್ತಿರುವ ಶಿವಂ ದುಬೆ, ವಿಶ್ವಕಪ್ ತಂಡದ ಆಯ್ಕೆ ಬಳಿಕ ಸಿಡಿಸಿರೋದು ಬರೀ 46 ರನ್. ಚೆನ್ನೈ ಪಾಲಿಗೆ ದುಬಾರಿಯಾದ್ರು.
ಜಡ್ಡು ಜಾದೂ ಮಾಡಲಿಲ್ಲ.. ಸಿರಾಜ್ ಸ್ಥಿರವಾಗಿಲ್ಲ..!
ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ, ಟ್ರೋಫಿಗೆ ಮುತ್ತಿಡಬೇಕು ಅಂದ್ರೆ, ಜಡ್ಡು ಮ್ಯಾಜಿಕ್ ನಡೆಯಲೇಬೇಕು. ಆದ್ರೆ, ಐಪಿಎಲ್ನಲ್ಲಿ ಜಡ್ಡು ಜಾದೂ ನಡೆದೇ ಇಲ್ಲ. 14 ಪಂದ್ಯಗಳಿಂದ 8 ವಿಕೆಟ್ ಬೇಟೆಯಾಡಿರೋ ಜಡೇಜಾ, ಬ್ಯಾಟಿಂಗ್ನಲ್ಲೂ ಮೋಡಿ ಮಾಡಲಿಲ್ಲ. ಬೂಮ್ರಾ ಜೊತೆ ಚೆಂಡು ಹಂಚಿಕೊಳ್ಳಲು ರೆಡಿಯಾಗಿರುವ ಸಿರಾಜ್ ಕೂಡ ಐಪಿಎಲ್ನಲ್ಲಿ ನೀಡಿರೋದು ಫ್ಲಾಫ್ ಶೋ. 14 ಪಂದ್ಯಗಳಿಂದ 9.18ರ ಎಕಾನಮಿಯಲ್ಲಿ ರನ್ ನೀಡಿರುವ ಸಿರಾಜ್, ಬೇಟೆಯಾಡಿರೋದು ಜಸ್ಟ್ 15 ವಿಕೆಟ್ ಮಾತ್ರ. ಈ ಪೈಕಿ ಕೊನೆ 6 ಪಂದ್ಯಗಳಿಂದ 11 ವಿಕೆಟ್ ಕಬಳಿಸಿರೋದು ಸಮಾಧಾನಕರ ವಿಚಾರ.
ಇದನ್ನೂ ಓದಿ:ಒಂದು ಫೋಟೋ ಹಲವು ಅರ್ಥ.. KL ರಾಹುಲ್ ಸೈಲೆಂಟ್ ಅಲ್ಲೇ ಟಕ್ಕರ್ ಕೊಟ್ರಾ?
ಐಪಿಎಲ್ನಲ್ಲಿ ಸತತ ವೈಫಲ್ಯ ಅನುಭವಿಸಿರೋ ಇವರು, ಟಿ20 ವಿಶ್ವಕಪ್ ವೇಳೆಗೆ ಕಮ್ಬ್ಯಾಕ್ ಮಾಡಬೇಕಾದ ಅಗತ್ಯ ಇದೆ. ವಿರಾಟ್ ಕೊಹ್ಲಿ ಹಾಗೂ ಜಸ್ಪ್ರೀತ್ ಬೂಮ್ರಾ ಜೊತೆಗೆ ಈ ಎಲ್ಲಾ ಆಟಗಾರರು, ಟಿ20 ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ಕ್ಲಿಕ್ ಆಗಬೇಕಿದೆ. ಆಗ ಮಾತ್ರ ಅಸಲಿ ಟೂರ್ನಿಗೈ ಮುನ್ನ ಆತ್ಮವಿಶ್ವಾಸ ಹೆಚ್ಚಲಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್