2019ರಲ್ಲಿ ಚಂದ್ರಯಾನ-2 ಉಡಾವಣೆ ಸ್ಪಲ್ಪದರಲ್ಲೇ ವಿಫಲವಾಗಿತ್ತು
ಚಂದ್ರಯಾನ- 3 ಯಶಸ್ವಿಗೆ ತಿಮ್ಮಪ್ಪನ ಮೊರೆ ಹೋದ ವಿಜ್ಞಾನಿಗಳು
ನಾಳೆ ಮಧ್ಯಾಹ್ನ 2 ಗಂಟೆ 35 ನಿಮಿಷದ 17 ಸೆಕೆಂಡ್ಗೆ ಮುಹೂರ್ತ
ತಿರುಪತಿ: ಇಡೀ ಭಾರತವೇ ಅದೊಂದು ಕ್ಷಣಕ್ಕೆ ಕಾದು ಕುಳಿತಿದೆ. ಪ್ರತಿಯೊಬ್ಬ ಭಾರತೀಯರು ಎದುರು ನೋಡ್ತಿರೋ ಚಂದ್ರಯಾನ-3 ಉಡಾವಣೆಗೆ ಕೌಂಟ್ಡೌನ್ ಶುರುವಾಗಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಚಂದ್ರಯಾನ-3 ಉಡಾವಣೆಗೆ ಇಂದು ಮಧ್ಯಾಹ್ನ 1 ಗಂಟೆಗೆ ಕೌಂಟ್ಡೌನ್ ಶುರುವಾಗಿದೆ. ನಾಳೆ ಮಧ್ಯಾಹ್ನ 2 ಗಂಟೆ 35 ನಿಮಿಷದ 17 ಸೆಕೆಂಡ್ಗೆ ಸರಿಯಾಗಿ, ಲ್ಯಾಂಡರ್ ಮತ್ತು ರೋವರ್ ಮಷಿನ್ಗಳನ್ನು ಹೊತ್ತು ಬಾಹುಬಲಿ ರಾಕೆಟ್ ಆಕಾಶಕ್ಕೆ ಚಿಮ್ಮಲಿದೆ.
ನಾಳೆ ಚಂದ್ರಯಾನ- 3 ಉಡಾವಣೆಯಾಗುವ ಹಿನ್ನೆಲೆ ಇಂದು ಇಸ್ರೋ ಮುಖ್ಯಸ್ಥ ಸೋಮನಾಥ್ ಹಾಗೂ ವಿಜ್ಞಾನಿಗಳ ತಂಡ ತಿರುಪತಿಗೆ ಭೇಟಿ ಕೊಟ್ಟಿದೆ. ವಿಶೇಷ ಪೂಜೆ ಸಲ್ಲಿಸಿರುವ ಇಸ್ರೋ ಮುಖ್ಯಸ್ಥ ಸೋಮನಾಥ್ ಅವರು ನಾಳೆಯ ಚಂದ್ರಯಾನ-3 ಯಶಸ್ವಿಯಾಗಲೆಂದು ಪ್ರಾರ್ಥನೆ ಸಲ್ಲಿಸಿದ್ದಾರೆ.
2019ರಲ್ಲಿ ಚಂದ್ರಯಾನ-2 ಸ್ಪಲ್ಪದರಲ್ಲೇ ಫೇಲ್ ಆಗಿತ್ತು. ಈ ಬಾರಿ ಚಂದ್ರಯಾನ-3ರ ಯಶಸ್ಸಿಗಾಗಿ ಇಸ್ರೋ ವಿಜ್ಞಾನಿಗಳು ಬಾರಿ ಪ್ರಯತ್ನ ನಡೆಸಿದ್ದಾರೆ. ವಿಜ್ಞಾನಿಗಳ ಪ್ರಯತ್ನದ ಜೊತೆಗೆ ದೇವರ ಆಶೀರ್ವಾದವೂ ಯಶಸ್ಸಿಗೆ ಮುಖ್ಯ ಎಂದು ಇಸ್ರೋ ಮುಖ್ಯಸ್ಥ ಸೋಮನಾಥ್ ನಂಬಿದ್ದಾರೆ.
ಚಂದ್ರಯಾನ- 3 ಯಶಸ್ವಿ ಉಡಾವಣೆಗೆ ಇಸ್ರೋ ಮುಖ್ಯಸ್ಥ ಸೋಮನಾಥ ದೇವರ ಮೊರೆ ಹೋಗಿದ್ದಾರೆ. ತಿರುಪತಿ ಜಿಲ್ಲೆಯ ಸುಲ್ಲೂರಪೇಟ್ನಲ್ಲಿರುವ ಚೆಂಗಲ್ಲಮ್ಮ ದೇವಾಲಯದಲ್ಲಿ ಇಸ್ರೋ ಮುಖ್ಯಸ್ಥ ಸೋಮನಾಥ ಚಂದ್ರಯಾನ -3 ಯಶಸ್ಸಿಗಾಗಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. #NewsFirstKannada #Newsfirstlive #KannadaNews #Chandrayan3 #ISRO pic.twitter.com/uOGjWKmTqf
— NewsFirst Kannada (@NewsFirstKan) July 13, 2023
ಇದನ್ನೂ ಓದಿ: ಚಂದ್ರಯಾನ-3 ಉಡಾವಣೆಗೆ ಗ್ರೀನ್ ಸಿಗ್ನಲ್.. ಇಂದು ಮಧ್ಯಾಹ್ನದಿಂದಲೇ ಕೌಂಟ್ಡೌನ್ ಸ್ಟಾರ್ಟ್..!
ಚಂದ್ರಯಾನ -3 ರ ಮಾದರಿಯೊಂದಿಗೆ ಇಸ್ರೋ ವಿಜ್ಞಾನಿಗಳು ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಆಗಮಿಸಿದ್ದಾರೆ. ಚಂದ್ರಯಾನ- 3ರ ಮಾದರಿಯನ್ನು ದೇವರ ಮುಂದೆ ಇಟ್ಟು ಇಸ್ರೋ ವಿಜ್ಞಾನಿಗಳು ಬೇಡಿಕೊಂಡಿದ್ದಾರೆ. ಚಂದ್ರಯಾನ-3 ಯಶಸ್ಸಿಗೆ ತಮ್ಮ ಪ್ರಯತ್ನದ ಜೊತೆಗೆ ದೇವರ ಆಶೀರ್ವಾದವನ್ನು ಇಸ್ರೋ ವಿಜ್ಞಾನಿಗಳು ಬೇಡಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಚಂದ್ರಯಾನ- 3 ಯಶಸ್ವಿ ಉಡಾವಣೆಗೆ ಇಸ್ರೋ ವಿಜ್ಞಾನಿಗಳು ದೇವರ ಮೊರೆ ಹೋಗಿದ್ದಾರೆ. ಚಂದ್ರಯಾನ-3 ರಾಕೆಟ್ ಮಾದರಿಯನ್ನು ತಿರುಪತಿ ತಿಮ್ಮಪ್ಪನ ಮುಂದಿಟ್ಟು ಬೇಡಿಕೊಂಡಿದ್ದಾರೆ. #NewsFirstKannada #Newsfirstlive #KannadaNews #Chandrayan3 #ISRO pic.twitter.com/THHNykezHs
— NewsFirst Kannada (@NewsFirstKan) July 13, 2023
2019ರಲ್ಲಿ ಚಂದ್ರಯಾನ-2 ಉಡಾವಣೆ ಸ್ಪಲ್ಪದರಲ್ಲೇ ವಿಫಲವಾಗಿತ್ತು
ಚಂದ್ರಯಾನ- 3 ಯಶಸ್ವಿಗೆ ತಿಮ್ಮಪ್ಪನ ಮೊರೆ ಹೋದ ವಿಜ್ಞಾನಿಗಳು
ನಾಳೆ ಮಧ್ಯಾಹ್ನ 2 ಗಂಟೆ 35 ನಿಮಿಷದ 17 ಸೆಕೆಂಡ್ಗೆ ಮುಹೂರ್ತ
ತಿರುಪತಿ: ಇಡೀ ಭಾರತವೇ ಅದೊಂದು ಕ್ಷಣಕ್ಕೆ ಕಾದು ಕುಳಿತಿದೆ. ಪ್ರತಿಯೊಬ್ಬ ಭಾರತೀಯರು ಎದುರು ನೋಡ್ತಿರೋ ಚಂದ್ರಯಾನ-3 ಉಡಾವಣೆಗೆ ಕೌಂಟ್ಡೌನ್ ಶುರುವಾಗಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಚಂದ್ರಯಾನ-3 ಉಡಾವಣೆಗೆ ಇಂದು ಮಧ್ಯಾಹ್ನ 1 ಗಂಟೆಗೆ ಕೌಂಟ್ಡೌನ್ ಶುರುವಾಗಿದೆ. ನಾಳೆ ಮಧ್ಯಾಹ್ನ 2 ಗಂಟೆ 35 ನಿಮಿಷದ 17 ಸೆಕೆಂಡ್ಗೆ ಸರಿಯಾಗಿ, ಲ್ಯಾಂಡರ್ ಮತ್ತು ರೋವರ್ ಮಷಿನ್ಗಳನ್ನು ಹೊತ್ತು ಬಾಹುಬಲಿ ರಾಕೆಟ್ ಆಕಾಶಕ್ಕೆ ಚಿಮ್ಮಲಿದೆ.
ನಾಳೆ ಚಂದ್ರಯಾನ- 3 ಉಡಾವಣೆಯಾಗುವ ಹಿನ್ನೆಲೆ ಇಂದು ಇಸ್ರೋ ಮುಖ್ಯಸ್ಥ ಸೋಮನಾಥ್ ಹಾಗೂ ವಿಜ್ಞಾನಿಗಳ ತಂಡ ತಿರುಪತಿಗೆ ಭೇಟಿ ಕೊಟ್ಟಿದೆ. ವಿಶೇಷ ಪೂಜೆ ಸಲ್ಲಿಸಿರುವ ಇಸ್ರೋ ಮುಖ್ಯಸ್ಥ ಸೋಮನಾಥ್ ಅವರು ನಾಳೆಯ ಚಂದ್ರಯಾನ-3 ಯಶಸ್ವಿಯಾಗಲೆಂದು ಪ್ರಾರ್ಥನೆ ಸಲ್ಲಿಸಿದ್ದಾರೆ.
2019ರಲ್ಲಿ ಚಂದ್ರಯಾನ-2 ಸ್ಪಲ್ಪದರಲ್ಲೇ ಫೇಲ್ ಆಗಿತ್ತು. ಈ ಬಾರಿ ಚಂದ್ರಯಾನ-3ರ ಯಶಸ್ಸಿಗಾಗಿ ಇಸ್ರೋ ವಿಜ್ಞಾನಿಗಳು ಬಾರಿ ಪ್ರಯತ್ನ ನಡೆಸಿದ್ದಾರೆ. ವಿಜ್ಞಾನಿಗಳ ಪ್ರಯತ್ನದ ಜೊತೆಗೆ ದೇವರ ಆಶೀರ್ವಾದವೂ ಯಶಸ್ಸಿಗೆ ಮುಖ್ಯ ಎಂದು ಇಸ್ರೋ ಮುಖ್ಯಸ್ಥ ಸೋಮನಾಥ್ ನಂಬಿದ್ದಾರೆ.
ಚಂದ್ರಯಾನ- 3 ಯಶಸ್ವಿ ಉಡಾವಣೆಗೆ ಇಸ್ರೋ ಮುಖ್ಯಸ್ಥ ಸೋಮನಾಥ ದೇವರ ಮೊರೆ ಹೋಗಿದ್ದಾರೆ. ತಿರುಪತಿ ಜಿಲ್ಲೆಯ ಸುಲ್ಲೂರಪೇಟ್ನಲ್ಲಿರುವ ಚೆಂಗಲ್ಲಮ್ಮ ದೇವಾಲಯದಲ್ಲಿ ಇಸ್ರೋ ಮುಖ್ಯಸ್ಥ ಸೋಮನಾಥ ಚಂದ್ರಯಾನ -3 ಯಶಸ್ಸಿಗಾಗಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. #NewsFirstKannada #Newsfirstlive #KannadaNews #Chandrayan3 #ISRO pic.twitter.com/uOGjWKmTqf
— NewsFirst Kannada (@NewsFirstKan) July 13, 2023
ಇದನ್ನೂ ಓದಿ: ಚಂದ್ರಯಾನ-3 ಉಡಾವಣೆಗೆ ಗ್ರೀನ್ ಸಿಗ್ನಲ್.. ಇಂದು ಮಧ್ಯಾಹ್ನದಿಂದಲೇ ಕೌಂಟ್ಡೌನ್ ಸ್ಟಾರ್ಟ್..!
ಚಂದ್ರಯಾನ -3 ರ ಮಾದರಿಯೊಂದಿಗೆ ಇಸ್ರೋ ವಿಜ್ಞಾನಿಗಳು ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಆಗಮಿಸಿದ್ದಾರೆ. ಚಂದ್ರಯಾನ- 3ರ ಮಾದರಿಯನ್ನು ದೇವರ ಮುಂದೆ ಇಟ್ಟು ಇಸ್ರೋ ವಿಜ್ಞಾನಿಗಳು ಬೇಡಿಕೊಂಡಿದ್ದಾರೆ. ಚಂದ್ರಯಾನ-3 ಯಶಸ್ಸಿಗೆ ತಮ್ಮ ಪ್ರಯತ್ನದ ಜೊತೆಗೆ ದೇವರ ಆಶೀರ್ವಾದವನ್ನು ಇಸ್ರೋ ವಿಜ್ಞಾನಿಗಳು ಬೇಡಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಚಂದ್ರಯಾನ- 3 ಯಶಸ್ವಿ ಉಡಾವಣೆಗೆ ಇಸ್ರೋ ವಿಜ್ಞಾನಿಗಳು ದೇವರ ಮೊರೆ ಹೋಗಿದ್ದಾರೆ. ಚಂದ್ರಯಾನ-3 ರಾಕೆಟ್ ಮಾದರಿಯನ್ನು ತಿರುಪತಿ ತಿಮ್ಮಪ್ಪನ ಮುಂದಿಟ್ಟು ಬೇಡಿಕೊಂಡಿದ್ದಾರೆ. #NewsFirstKannada #Newsfirstlive #KannadaNews #Chandrayan3 #ISRO pic.twitter.com/THHNykezHs
— NewsFirst Kannada (@NewsFirstKan) July 13, 2023