newsfirstkannada.com

ಮರಳಿ ಬಿಜೆಪಿಗೆ ಹೋದರೂ ಶೆಟ್ಟರ್​ಗೆ ನೆಮ್ಮದಿ ಇಲ್ಲ; ಟಿಕೆಟ್ ಬಗ್ಗೆ ಬಿಗ್​ ಅಪ್​​ಡೇಟ್ಸ್​ ಕೊಟ್ಟ ಮಂಗಳಾ ಅಂಗಡಿ

Share :

Published March 15, 2024 at 10:26pm

Update March 16, 2024 at 12:15am

    ಮಾಜಿ ಸಿಎಂ ಜಗದೀಶ್ ಶೆಟ್ಟರ್​ಗೆ ಶಾಕ್ ಕೊಟ್ಟ ಹೈಕಮಾಂಡ್

    ಒಲ್ಲದ ಮನಸ್ಸಿನಿಂದಲೇ ಸ್ಪರ್ಧಿಸಲು ಸಜ್ಜಾದ್ರಾ ಮಾಜಿ ಸಿಎಂ ಶೆಟ್ಟರ್

    ಬೆಳಗಾವಿಯಿಂದ ಸ್ಪರ್ಧಿಸಲು ಒಪ್ಪಿದ ಮಾಜಿ ಸಿಎಂ ಜಗದೀಶ್​ ಶೆಟ್ಟರ್

ಮರಳಿ ಬಿಜೆಪಿಗೆ ಹೋದ್ರೂ ಮಾಜಿ ಸಿಎಂ ಶೆಟ್ಟರ್​ಗೆ ನೆಮ್ಮದಿ ಇಲ್ಲದಂತಾಗಿದೆ. ಹುಬ್ಬಳ್ಳಿ-ಧಾರವಾಡದಿಂದ ಟಿಕೆಟ್ ಬಯಸಿದ್ದ ಶೆಟ್ಟರ್​ಗೆ ಹೈಕಮಾಂಡ್ ಶಾಕ್ ಕೊಟ್ಟಿದೆ. ಹಾಲಿ ಸಂಸದೆ ಮಂಗಳಾ ಅಂಗಡಿಗೆ ಟಿಕೆಟ್ ಮಿಸ್ ಆಗಿದ್ದು ಶೆಟ್ಟರ್ ಬೇಡ ಬೇಡ ಅಂದ್ರೂ ಬೆಳಗಾವಿಯಲ್ಲೇ ಟಿಕೆಟ್ ಫಿಕ್ಸ್ ಆದಂತಿದೆ.

 

ಮಾಜಿ ಸಿಎಂ ಜಗದೀಶ್ ಶೆಟ್ಟರ್​ಗೆ ಹೈಕಮಾಂಡ್ ಶಾಕ್ ನೀಡಿದೆ. ಬಯಸ್ಸಿದ್ದ ಹುಬ್ಬಳ್ಳಿ-ಧಾರವಾಡ ಕ್ಷೇತ್ರ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪಾಲಾಗಿದೆ. ಬಿಜೆಪಿ ಮತ್ತೊಂದು ಪಟ್ಟಿ ಬಿಡುಗಡೆಯಾಗಲಿದ್ದು ಜಗದೀಶ್ ಶೆಟ್ಟರ್​ಗೆ ಬೆಳಗಾವಿಯಿಂದಲೇ ಬಹುತೇಕ ಟಿಕೆಟ್ ಫಿಕ್ಸ್ ಅಂತ ನ್ಯೂಸ್ ಫಸ್ಟ್​ ಹಾಲಿ ಸಂಸದೆ ಮಂಗಳಾ ಅಂಗಡಿ ಮಾಹಿತಿ ನೀಡಿದ್ದಾರೆ. ನಮ್ಮ ಕುಟುಂಬಕ್ಕೆ ಟಿಕೆಟ್ ಸಿಗುತ್ತೆ ಅಂತ ದೆಹಲಿಗೆ ಹೋಗಿದ್ದೆ. ಆದ್ರೆ ಶೆಟ್ಟರ್​​ಗೆ ಟಿಕೆಟ್ ಫಿಕ್ಸ್ ಅನ್ನೋ ಮಾತು ಕೇಳಿ ಬಂದಿದ್ದೇವೆ. ಶೆಟ್ಟರ್​ಗೆ ಟಿಕೆಟ್ ಕೊಟ್ರೆ ನಾವು ಅವರ ಪ್ರಚಾರ ಮಾಡ್ತೀವಿ ಎಂದಿದ್ದಾರೆ.

ಇದನ್ನು ಓದಿ: ದಾವಣಗೆರೆಯಲ್ಲಿ ಆತಂಕಕಾರಿ ಘಟನೆ; ಪಾನಿಪುರಿ ಸೇವಿಸಿ 19 ಮಕ್ಕಳು ತೀವ್ರ ಅಸ್ವಸ್ಥ

ಬಿಜೆಪಿ 2ನೇ ಲಿಸ್ಟ್ ನಲ್ಲಿ ನಮ್ಮ ಕುಟುಂಬಕ್ಕೆ ಸಿಗದ ಕಾರಣ ದೆಹಲಿಗೆ ಹೋಗಿದ್ದವು. ಜಗದೀಶ್ ಶೆಟ್ಟರ್ ಟಿಕೆಟ್​ ಪಿಕ್ಸ್ ಆಗಿದೆ ಎನ್ನುವುದನ್ನ ಕೇಳಿ ವಾಪಸ್ ಬಂದಿದ್ದೇವೆ. ಶಟ್ಟರ್​ಗೆ ಟಿಕೆಟ್​ ಕೊಟ್ಟರೆ ನಾವು ಸಂತೋಷದಿಂದ ಅವರ ಪರ ಪ್ರಚಾರ ಮಾಡುತ್ತೇವೆ. ನಮ್ಮ ಜೊತೆ ಜಗದೀಶ್ ಶೆಟ್ಟರ್ ದೂರವಾಣಿ ಮೂಲಕ ಮಾತನಾಡಿದ್ದಾರೆ. ಬೆಳಗಾವಿಯಿಂದ ಶೆಟ್ಟರ್​ಗೆ ವಿರೋಧ ಈಗ ಯಾವ ವಿರೋಧ ಇಲ್ಲ. ಶೆಟ್ಟರ್ ಎಲ್ಲ ಶಾಸಕರು, ಮಾಜಿ ಶಾಸಕರ ಜೊತೆ ಮಾತುಕತೆ ಮಾಡಿದ್ದಾರೆ. ಒಟ್ಟಾಗಿ ಕೂಡಿ ಜಗದೀಶ್ ಶೆಟ್ಟರ್ ಗೆಲ್ಲಿಸಿ ಮೋದಿ ಅವರ ಕೈ ಬಲಪಡಿಸುತ್ತೇವೆ. ಶೀಘ್ರದಲ್ಲಿಯೇ ಟಿಕೆಟ್​ ಘೋಷಣೆಯಾಗುವ ಸಾಧ್ಯತೆ ಇದೆ.

– ಹಾಲಿ ಸಂಸದೆ ಮಂಗಳಾ

ಹುಬ್ಬಳ್ಳಿ-ಧಾರವಾಡ ಅಥವಾ ಹಾವೇರಿ ಟಿಕೆಟ್ ಮೇಲೆ ಕಣ್ಣಿಟ್ಟಿದ್ದ ಜಗದೀಶ್ ಶೆಟ್ಟರ್​​ಗೆ ಹೈಕಮಾಂಡ್​ ಶಾಕ್ ಕೊಟ್ಟಿದೆ. ಮಾಜಿ ಸಿಎಂ ಯಡಿಯೂರಪ್ಪ ಮೂಲಕ ಪ್ರಯತ್ನ ನಡೆಸ್ತಿದ್ರೂ ಅದು ಫಲ ಕೊಟ್ಟಿಲ್ಲ. ಮೊದಲಿಗೆ ಸ್ಪರ್ಧೆಯಿಂದ ದೂರ ಉಳಿಯಲು ಯೋಚಿಸಿದ್ದ ಶೆಟ್ಟರ್ ಮಂಗಳಾ ಅಂಗಡಿ ಮಕ್ಕಳಲ್ಲೇ ಒಬ್ಬರಿಗೆ ಟಿಕೆಟ್ ಕೊಡಿ ಅಂತ ಮನವಿ ಮಾಡಿದ್ದರು. ಆದ್ರೆ ಬೆಳಗಾವಿಯಿಂದಲೇ ಸ್ಪರ್ಧಿಸುವಂತೆ ಮಾಜಿ ಸಿಎಂ ಯಡಿಯೂರಪ್ಪ ಒತ್ತಾಯಿಸಿದ್ದು​​​​, ಯಡಿಯೂರಪ್ಪ ವಿಶ್ವಾಸದ ಮಾತಿಗೆ ಶೆಟ್ಟರ್ ತಲೆಯಾಡಿಸಿದ್ದಾರೆ.

ನಿನ್ನೆ ಯಡಿಯೂರಪ್ಪ ಭೇಟಿಯಾಗಿದ್ದ ಶೆಟ್ಟರ್ ಟಿಕೆಟ್ ಬಗ್ಗೆ ಸುದೀರ್ಘ ಚರ್ಚಿಸಿದ್ದು ಒಲ್ಲದ ಮನಸ್ಸಿನಿಂದಲೇ ಬೆಳಗಾವಿಯಲ್ಲಿ ಸ್ಪರ್ಧಿಸಲು ತಯಾರಿ ಮಾಡಿಕೊಳ್ತಿದ್ದಾರೆ. ಇನ್ನು, ಇದೇ ವೇಳೆ ಬೆಳಗಾವಿಯಲ್ಲಿ ಶೆಟ್ಟರ್ ಸ್ಪರ್ಧೆಗೆ ರಮೇಶ್ ಜಾರಕಿಹೊಳಿ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ. ಸ್ಥಳೀಯರಿಗೆ ಟಿಕೆಟ್​ ಕೊಡುವಂತೆ ಒತ್ತಾಯ ಮಾಡಿದ್ದು ಟಿಕೆಟ್ ಸಿಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಜಗದೀಶ್ ಶೆಟ್ಟರ್​​ ಬೇಡ ಬೇಡ ಅಂದ್ರೂ ಬಯಸದ ಬೆಳಗಾವಿ ಸಿಕ್ಕಿದೆ. ಕುಂದಾನಗರಿ ಶೆಟ್ಟರ್ ಕೈ ಹಿಡಿಯುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮರಳಿ ಬಿಜೆಪಿಗೆ ಹೋದರೂ ಶೆಟ್ಟರ್​ಗೆ ನೆಮ್ಮದಿ ಇಲ್ಲ; ಟಿಕೆಟ್ ಬಗ್ಗೆ ಬಿಗ್​ ಅಪ್​​ಡೇಟ್ಸ್​ ಕೊಟ್ಟ ಮಂಗಳಾ ಅಂಗಡಿ

https://newsfirstlive.com/wp-content/uploads/2024/03/jagadish.jpg

    ಮಾಜಿ ಸಿಎಂ ಜಗದೀಶ್ ಶೆಟ್ಟರ್​ಗೆ ಶಾಕ್ ಕೊಟ್ಟ ಹೈಕಮಾಂಡ್

    ಒಲ್ಲದ ಮನಸ್ಸಿನಿಂದಲೇ ಸ್ಪರ್ಧಿಸಲು ಸಜ್ಜಾದ್ರಾ ಮಾಜಿ ಸಿಎಂ ಶೆಟ್ಟರ್

    ಬೆಳಗಾವಿಯಿಂದ ಸ್ಪರ್ಧಿಸಲು ಒಪ್ಪಿದ ಮಾಜಿ ಸಿಎಂ ಜಗದೀಶ್​ ಶೆಟ್ಟರ್

ಮರಳಿ ಬಿಜೆಪಿಗೆ ಹೋದ್ರೂ ಮಾಜಿ ಸಿಎಂ ಶೆಟ್ಟರ್​ಗೆ ನೆಮ್ಮದಿ ಇಲ್ಲದಂತಾಗಿದೆ. ಹುಬ್ಬಳ್ಳಿ-ಧಾರವಾಡದಿಂದ ಟಿಕೆಟ್ ಬಯಸಿದ್ದ ಶೆಟ್ಟರ್​ಗೆ ಹೈಕಮಾಂಡ್ ಶಾಕ್ ಕೊಟ್ಟಿದೆ. ಹಾಲಿ ಸಂಸದೆ ಮಂಗಳಾ ಅಂಗಡಿಗೆ ಟಿಕೆಟ್ ಮಿಸ್ ಆಗಿದ್ದು ಶೆಟ್ಟರ್ ಬೇಡ ಬೇಡ ಅಂದ್ರೂ ಬೆಳಗಾವಿಯಲ್ಲೇ ಟಿಕೆಟ್ ಫಿಕ್ಸ್ ಆದಂತಿದೆ.

 

ಮಾಜಿ ಸಿಎಂ ಜಗದೀಶ್ ಶೆಟ್ಟರ್​ಗೆ ಹೈಕಮಾಂಡ್ ಶಾಕ್ ನೀಡಿದೆ. ಬಯಸ್ಸಿದ್ದ ಹುಬ್ಬಳ್ಳಿ-ಧಾರವಾಡ ಕ್ಷೇತ್ರ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪಾಲಾಗಿದೆ. ಬಿಜೆಪಿ ಮತ್ತೊಂದು ಪಟ್ಟಿ ಬಿಡುಗಡೆಯಾಗಲಿದ್ದು ಜಗದೀಶ್ ಶೆಟ್ಟರ್​ಗೆ ಬೆಳಗಾವಿಯಿಂದಲೇ ಬಹುತೇಕ ಟಿಕೆಟ್ ಫಿಕ್ಸ್ ಅಂತ ನ್ಯೂಸ್ ಫಸ್ಟ್​ ಹಾಲಿ ಸಂಸದೆ ಮಂಗಳಾ ಅಂಗಡಿ ಮಾಹಿತಿ ನೀಡಿದ್ದಾರೆ. ನಮ್ಮ ಕುಟುಂಬಕ್ಕೆ ಟಿಕೆಟ್ ಸಿಗುತ್ತೆ ಅಂತ ದೆಹಲಿಗೆ ಹೋಗಿದ್ದೆ. ಆದ್ರೆ ಶೆಟ್ಟರ್​​ಗೆ ಟಿಕೆಟ್ ಫಿಕ್ಸ್ ಅನ್ನೋ ಮಾತು ಕೇಳಿ ಬಂದಿದ್ದೇವೆ. ಶೆಟ್ಟರ್​ಗೆ ಟಿಕೆಟ್ ಕೊಟ್ರೆ ನಾವು ಅವರ ಪ್ರಚಾರ ಮಾಡ್ತೀವಿ ಎಂದಿದ್ದಾರೆ.

ಇದನ್ನು ಓದಿ: ದಾವಣಗೆರೆಯಲ್ಲಿ ಆತಂಕಕಾರಿ ಘಟನೆ; ಪಾನಿಪುರಿ ಸೇವಿಸಿ 19 ಮಕ್ಕಳು ತೀವ್ರ ಅಸ್ವಸ್ಥ

ಬಿಜೆಪಿ 2ನೇ ಲಿಸ್ಟ್ ನಲ್ಲಿ ನಮ್ಮ ಕುಟುಂಬಕ್ಕೆ ಸಿಗದ ಕಾರಣ ದೆಹಲಿಗೆ ಹೋಗಿದ್ದವು. ಜಗದೀಶ್ ಶೆಟ್ಟರ್ ಟಿಕೆಟ್​ ಪಿಕ್ಸ್ ಆಗಿದೆ ಎನ್ನುವುದನ್ನ ಕೇಳಿ ವಾಪಸ್ ಬಂದಿದ್ದೇವೆ. ಶಟ್ಟರ್​ಗೆ ಟಿಕೆಟ್​ ಕೊಟ್ಟರೆ ನಾವು ಸಂತೋಷದಿಂದ ಅವರ ಪರ ಪ್ರಚಾರ ಮಾಡುತ್ತೇವೆ. ನಮ್ಮ ಜೊತೆ ಜಗದೀಶ್ ಶೆಟ್ಟರ್ ದೂರವಾಣಿ ಮೂಲಕ ಮಾತನಾಡಿದ್ದಾರೆ. ಬೆಳಗಾವಿಯಿಂದ ಶೆಟ್ಟರ್​ಗೆ ವಿರೋಧ ಈಗ ಯಾವ ವಿರೋಧ ಇಲ್ಲ. ಶೆಟ್ಟರ್ ಎಲ್ಲ ಶಾಸಕರು, ಮಾಜಿ ಶಾಸಕರ ಜೊತೆ ಮಾತುಕತೆ ಮಾಡಿದ್ದಾರೆ. ಒಟ್ಟಾಗಿ ಕೂಡಿ ಜಗದೀಶ್ ಶೆಟ್ಟರ್ ಗೆಲ್ಲಿಸಿ ಮೋದಿ ಅವರ ಕೈ ಬಲಪಡಿಸುತ್ತೇವೆ. ಶೀಘ್ರದಲ್ಲಿಯೇ ಟಿಕೆಟ್​ ಘೋಷಣೆಯಾಗುವ ಸಾಧ್ಯತೆ ಇದೆ.

– ಹಾಲಿ ಸಂಸದೆ ಮಂಗಳಾ

ಹುಬ್ಬಳ್ಳಿ-ಧಾರವಾಡ ಅಥವಾ ಹಾವೇರಿ ಟಿಕೆಟ್ ಮೇಲೆ ಕಣ್ಣಿಟ್ಟಿದ್ದ ಜಗದೀಶ್ ಶೆಟ್ಟರ್​​ಗೆ ಹೈಕಮಾಂಡ್​ ಶಾಕ್ ಕೊಟ್ಟಿದೆ. ಮಾಜಿ ಸಿಎಂ ಯಡಿಯೂರಪ್ಪ ಮೂಲಕ ಪ್ರಯತ್ನ ನಡೆಸ್ತಿದ್ರೂ ಅದು ಫಲ ಕೊಟ್ಟಿಲ್ಲ. ಮೊದಲಿಗೆ ಸ್ಪರ್ಧೆಯಿಂದ ದೂರ ಉಳಿಯಲು ಯೋಚಿಸಿದ್ದ ಶೆಟ್ಟರ್ ಮಂಗಳಾ ಅಂಗಡಿ ಮಕ್ಕಳಲ್ಲೇ ಒಬ್ಬರಿಗೆ ಟಿಕೆಟ್ ಕೊಡಿ ಅಂತ ಮನವಿ ಮಾಡಿದ್ದರು. ಆದ್ರೆ ಬೆಳಗಾವಿಯಿಂದಲೇ ಸ್ಪರ್ಧಿಸುವಂತೆ ಮಾಜಿ ಸಿಎಂ ಯಡಿಯೂರಪ್ಪ ಒತ್ತಾಯಿಸಿದ್ದು​​​​, ಯಡಿಯೂರಪ್ಪ ವಿಶ್ವಾಸದ ಮಾತಿಗೆ ಶೆಟ್ಟರ್ ತಲೆಯಾಡಿಸಿದ್ದಾರೆ.

ನಿನ್ನೆ ಯಡಿಯೂರಪ್ಪ ಭೇಟಿಯಾಗಿದ್ದ ಶೆಟ್ಟರ್ ಟಿಕೆಟ್ ಬಗ್ಗೆ ಸುದೀರ್ಘ ಚರ್ಚಿಸಿದ್ದು ಒಲ್ಲದ ಮನಸ್ಸಿನಿಂದಲೇ ಬೆಳಗಾವಿಯಲ್ಲಿ ಸ್ಪರ್ಧಿಸಲು ತಯಾರಿ ಮಾಡಿಕೊಳ್ತಿದ್ದಾರೆ. ಇನ್ನು, ಇದೇ ವೇಳೆ ಬೆಳಗಾವಿಯಲ್ಲಿ ಶೆಟ್ಟರ್ ಸ್ಪರ್ಧೆಗೆ ರಮೇಶ್ ಜಾರಕಿಹೊಳಿ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ. ಸ್ಥಳೀಯರಿಗೆ ಟಿಕೆಟ್​ ಕೊಡುವಂತೆ ಒತ್ತಾಯ ಮಾಡಿದ್ದು ಟಿಕೆಟ್ ಸಿಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಜಗದೀಶ್ ಶೆಟ್ಟರ್​​ ಬೇಡ ಬೇಡ ಅಂದ್ರೂ ಬಯಸದ ಬೆಳಗಾವಿ ಸಿಕ್ಕಿದೆ. ಕುಂದಾನಗರಿ ಶೆಟ್ಟರ್ ಕೈ ಹಿಡಿಯುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More