ಪಾಕ್ ಭಯೋತ್ಪಾದಕರ ಕಣ್ಣು ಜಮ್ಮುವಿನತ್ತ ಹೊರಳುತ್ತಿರೋದು ಏಕೆ?
ಕಾಶ್ಮೀರದಲ್ಲಿ ತಣ್ಣಗಾದ ಭಯೋತ್ಪಾದನೆ ಜಮ್ಮುವಿನಲ್ಲಿ ಚಿಗುರಿದ್ದು ಹೇಗೆ?
ಪುನಃ ಹಿಡಿತ ಸಾಧಿಸುವ ಹುನ್ನಾರದಲ್ಲಿದೆಯಾ ಪಾಕಿಸ್ತಾನದ ಐಎಸ್ಐ..?
ಶ್ರೀನಗರ: ಜಮ್ಮು ಕಾಶ್ಮೀರ ಸುಮಾರು ಮೂರು ದಶಕಗಳ ಕಾಲ ಉಗ್ರರ ಕರಿ ನೆರಳಲಿನಲ್ಲಿ ನರಳಿದ ಭಾರತದ ಮುಕುಟ. ಕಾಶ್ಮೀರಿ ನಿವಾಸಿನಿ ಶಾರದೆ ಎಂದೇ ನಮ್ಮ ಪುರಾಣಗಳು ಕಾಶ್ಮೀರವನ್ನು ನೆನಪಿಸಿಕೊಳ್ಳುತ್ತದೆ. ಸ್ವತಃ ಸರಸ್ವತಿಯೇ ನೆಲೆಯೂರಿದ ಆ ಪ್ರದೇಶದಲ್ಲಿ ಸರಿ ಸುಮಾರು ಮೂರು ದಶಕಗಳ ಕಾಲ ಅಕ್ಷರಶಃ ಅಟ್ಟಹಾಸ ಮೆರೆದಿತ್ತು ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆ. ಐತಿಹಾಸಿಕ ಪ್ರಮಾದಗಳೋ, ದೂರದೃಷ್ಟಿಯಿಲ್ಲದ ನಿರ್ಧಾರಗಳೋ ಒಟ್ಟಿನಲ್ಲಿ ಕಾಶ್ಮೀರದ ಕಣಿವೆಯ ಶ್ವೇತ ಹಿಮದಲ್ಲಿ ಹೆಪ್ಪುಗಟ್ಟಿದ್ದು ಮಾತ್ರ ನಮ್ಮ ಸೈನಿಕರ, ಕಾಶ್ಮೀರಿ ಪಂಡಿತರ ರಕ್ತದ ಕಲೆಗಳು.
ಭಾರತ ಮತ್ತು ಪಾಕಿಸ್ತಾನ ಎಂದು ಈ ದೇಶ ಎರಡು ಹೋಳಾದ ಮೇಲೆ ಕಾಶ್ಮೀರಕ್ಕಾಗಿ ದೊಡ್ಡ ಬಡಿದಾಟಗಳೇ ಆಗಿವೆ. ಒಂದು ಬೆಟ್ಟದ ಮೇಲಿನ ಹಿಡಿತಕ್ಕಾಗಿ ಸುದೀರ್ಘವಾದ ಭೀಕರವಾದ ಒಂದು ಯುದ್ಧವೇ ನಡೆದು ಹೋಗಿದೆ. ಕಳೆದ 75 ವರ್ಷಗಳಲ್ಲಿ ದಾಲ್ ಸರೋವರದಲ್ಲಿ ಸಾಕಷ್ಟು ನೀರು ಹರಿದು ಹೋಗಿದೆ. ಕಾಶ್ಮೀರದಲ್ಲಿ ಬದಲಾವಣೆ ಪರ್ವವೂ ಆರಂಭವಾಗಿದೆ. ಒಂದು ಕಾಲದಲ್ಲಿ ಅಕ್ರಮ ಒಳನುಸುಳುವಿಕೆ, ಬಾಂಬ್ ಸ್ಫೋಟ, ಯೋಧರ ಮತ್ತು ಉಗ್ರರ ನಡುವಿನ ಗುಂಡಿನ ಕಾಳಗ, ಕಲ್ಲು ತೂರಾಟ ಇಂತಹ ವಿಷಯಗಳಿಗೆ ಹೆಚ್ಚು ಸುದ್ದಿಯಾಗುತ್ತಿದ್ದ ಕಾಶ್ಮೀರದಲ್ಲೀಗ ಬದಲಾವಣೆಯ ಕುರುಹುಗಳು ಕಾಣಸಿಗುತ್ತಿವೆ. ಜಿ20 ಶೃಂಗಸಭೆಯಂತಹ ಮಹತ್ವದ ಸಭೆಗಳು ಅಲ್ಲಿ ನಡೆಯುತ್ತಿವೆ. ಜೋರ್ ಸೆ ಬೋಲೋ ಆಜಾದಿ ಎಂಬ ಕೂಗುಳ ಮರೆಯಾಗಿ ಭಾರತ್ ಮಾತಾ ಕಿ ಜೈ ಎನ್ನುವ ಘೋಷಣೆಗಳು ಮಾರ್ಧನಿಸುತ್ತಿವೆ. ಇದಕ್ಕೆಲ್ಲಾ ಕಾರಣ ಜಮ್ಮು ಕಾಶ್ಮೀರ ಮತ್ತು ಭಾರತ ನಡುವೆ ಭೇದಕ ಶಕ್ತಿ ಗೆರೆಯಾಗಿ ನಿಂತಿದ್ದ ಆರ್ಟಿಕಲ್ 370 ಅನ್ನೋ ಒಂದು ಕರಾಳ ಇತಿಹಾಸ.
ಯಾವಾಗ ಜಮ್ಮು ಕಾಶ್ಮೀರದಿಂದ 370ನೇ ಕಲಂನ್ನು ತೆಗೆದು ಹಾಕಲಾಯ್ತೋ, ಜಮ್ಮು ಕಾಶ್ಮೀರ ಸದಾಕಾಲಕ್ಕೆ ಭಾರತದ ಒಂದು ಅವಿಭಾಜ್ಯ ಅಂಗವಾಗಿ ಅಧಿಕೃತವಾಗಿ ಸೇರಿಕೊಂಡಿತೋ ಅಂದಿನಿಂದ ಉಗ್ರರ ಉಪಟಳಗಳು ನಿಧಾನಕ್ಕೆ ಕಡಿಮೆಯಾಗುತ್ತಾ ಹೋಯ್ತು. ನಯಾ ಕಾಶ್ಮೀರ ಎಂಬ ಭಾರತ ಸರ್ಕಾರದ ಘೋಷಣೆ ಅಲ್ಲಿ ಅಕ್ಷರಶಃ ಕಾರ್ಯಗೊತಗೊಂಡಿತು. ಜಮ್ಮು ಕಾಶ್ಮೀರವನ್ನು ಎರಡು ಭಾಗ ಮಾಡಿ ಒಂದು ಜಮ್ಮು ಕಾಶ್ಮೀರ ಮತ್ತೊಂದು ಲಡಾಕ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳು ಜಾರಿಗೆ ಬಂದವು. ಸೇನಾಪಡೆ ಅಕ್ಷರಶಃ ಉಗ್ರರ ಅಟ್ಟಹಾಸವನ್ನು ಮೆಟ್ಟಿ ಒಂದು ಹಂತಕ್ಕೆ ಈ ಎರಡು ಕೇಂದ್ರಾಡಳಿತ ಪ್ರದೇಶದಲ್ಲಿ ಶಾಂತಿ ನೆಲೆಸುವಂತೆ ಮಾಡಿದವು. ಆದ್ರೆ ಈಗ ಉಗ್ರರ ಕಣ್ಣು ಬೇರೆಕಡೆಗೆ ಹರಿದಿದೆ. ಅವರ ಬಂದೂಕಿನ ಗುರಿ ಮತ್ತೊಂದು ಕಡೆ ಮುಖಮಾಡಿ ಸದ್ದು ಮಾಡುತ್ತಿದೆ. ಹಾಗಾದ್ರೆ ಸದ್ಯ ಉಗ್ರರ ಕಣ್ಣು ಬೇರೆ ಕಡೆ ಸರಿದಿದ್ದು ಏಕೆ? ಯಾವ ಪ್ರದೇಶದ ಮೇಲೆ ಮತ್ತು ಏಕೆ ಅವರ ಬಂದೂಕಿನ ಗುರಿ ತಿರುಗಿದೆ ಅಂತ ವಿವರವಾಗಿ ನೋಡುವುದಾದ್ರೆ.
ಕಾಶ್ಮೀರ ಬಿಟ್ಟು ಜಮ್ಮುವಿನತ್ತ ಉಗ್ರರ ಕಣ್ಣು..? ಬಂದೂಕಿನ ಗುರಿ ಜಮ್ಮುವಿನತ್ತ ತಿರುಗಿದ್ದು ಏಕೆ.?
ಇದನ್ನೂ ಓದಿ: ಸ್ಯಾಂಡಲ್ವುಡ್ಗೆ ಮತ್ತೊಂದು ಶಾಕ್.. ನೀನಾಸಂ ಸತೀಶ್ ಚಿತ್ರದ ನಿರ್ದೇಶಕ ಆತ್ಮಹತ್ಯೆ; ಕಾರಣವೇನು?
ಕಳೆದ ಕೆಲವು ತಿಂಗಳುಗಳ ವರದಿಯನ್ನು ನೋಡ್ತಾ ಹೋಗುವುದಾದ್ರೆ ಕಾಶ್ಮೀರ ಹೆಚ್ಚು ಕಡಿಮೆ ಶಾಂತವಾಗಿದೆ. ಆದ್ರೆ ಜಮ್ಮುವಿನಲ್ಲಿ ಉಗ್ರರ ಬಂದೂಕಿನ ಹಾಗು ಬಾಂಬ್ಗಳ ಮೊರೆತ ಕೇಳಿ ಬರುತ್ತಿವೆ. ಹಾಗಾದ್ರೆ ಯಾಕೆ. ಜಮ್ಮು ಉಗ್ರರ ಟಾರ್ಗೆಟ್ ಆಗಿದ್ದು ಹೇಗೆ ಮತ್ತು ಏಕೆ ಅನ್ನೋದನ್ನ ನೋಡೋಕು ಮುನ್ನ ಜಮ್ಮುವಿನಲ್ಲಿ ಉಗ್ರರ ಉಪಟಳದ ಆರಂಭದ ಬಗ್ಗೆ ಒಂದಿಷ್ಟು ಮಾಹಿತಿಗಳನ್ನು ನೋಡೋಣ.
ಕತುವಾದಲ್ಲಿ ಸೇನೆಯ ವಾಹನದ ಮೇಲೆ ಹಠಾತ್ ದಾಳಿ ಮಾಡಿ ಅಚ್ಚರಿ ಮೂಡಿಸಿತ್ತು ಉಗ್ರರ ಪಡೆ. ಇದೊಂದು ಚಿತ್ತ ಬದಲಿಸುವ ತಂತ್ರ ಎಂದುಕೊಂಡು ಸುಮ್ಮನಾಗುವಂತಿರಲಿಲ್ಲ ಏಕೆಂದ್ರೆ ಅದಾದ ಕೆಲವೇ ದಿನಗಳ ಬಳಿಕ ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ನಡೆದ ಉಗ್ರರು ಮತ್ತು ಸೇನೆಯ ನಡುವಿನ ಗುಂಡಿನ ಚಕಮಕಿಯಲ್ಲಿ 6 ಉಗ್ರರು ಹತರಾದರೇ ನಮ್ಮ ಹೆಮ್ಮೆಯ ಇಬ್ಬರು ಸೈನಿಕರು ಹುತಾತ್ಮರಾದರು. ಅದಕ್ಕಿಂತ ಭೀಕರವಾದದ್ದು ಅಂದ್ರೆ ವೈಷ್ಣೋದೇವಿ ಯಾತ್ರಾರ್ಥಿಗಳ ಮೇಲೆ ನಡೆದ ದಾಳಿಯಲ್ಲಿ ಸುಮಾರು 9 ಜನ ಯಾತ್ರಾರ್ಥಿಗಳು ಸಾವಿಗೀಡಾದರು. ಹಾಗಿದ್ರೆ ಯಾಕೆ ಜಮ್ಮು ಪದೇ ಪದೇ ಉಗ್ರರ ದಾಳಿಗೆ ಟಾರ್ಗೆಟ್ ಆಗ್ತಿದೆ. ಕಾಶ್ಮೀರದಿಂದ ಕಾಲ್ಕಿತ್ತ ಉಗ್ರರು ಜಮ್ಮುವನ್ನೇಕೆ ಗುರಿಯಾಗಿಸಿಕೊಂಡಿದ್ದಾರೆ ಅಂದ್ರೆ ಅದಕ್ಕೆ ಉತ್ತರ ಒಂದೇ. ಕಾಶ್ಮೀರದಲ್ಲಿ ನಡೆಯುವ ಪ್ರತಿ ದಾಳಿಗೂ ಅಲ್ಲಿ ಕೌಟರ್ ಅಟ್ಯಾಕ್ ಸೇನೆಯಿಂದ ನಡೆಯುತ್ತಿದೆ. ಒಳಕ್ಕೆ ನುಗ್ಗುವ ಮೊದಲೇ ಉಗ್ರರನ್ನು ಹೊಡೆದುರುಳಿಸುತ್ತಿದ್ದಾರೆ ಸೈನಿಕರು. ಹೀಗಾಗಿ ಈಗ ಜಮ್ಮುವಿನಲ್ಲಿ ತಮ್ಮ ಬೇರೆಯದ್ದೇ ಆಟ ಹೂಡಿದೆ ಉಗ್ರ ದುಷ್ಟಪಡೆ..ಆದರೆ ಇದೊಂದೇ ಕಾರಣವಲ್ಲ. ಜಮ್ಮುವಿನ ಮೇಲೆ ಉಗ್ರರ ದೃಷ್ಟಿ ಸರಿಯಲು ಮತ್ತೊಂದು ಕಾರಣವಿದೆ.
ಇದನ್ನೂ ಓದಿ: ಯಾಕಿಷ್ಟು ರಕ್ತದಾಹ? ಆಂಧ್ರಪ್ರದೇಶ ರಣ, ರಣ ರಾಜಕೀಯದ ರಕ್ತಚರಿತ್ರೆಗಿದೆ 12ನೇ ಶತಮಾನದ ನಂಟು; ಏನದು?
ಕಾಶ್ಮೀರದ ಮೇಲೆ ಹಿಡಿತ ಕಳೆದುಕೊಳ್ಳುತ್ತಿರುವ ಪಾಕಿಸ್ತಾನ: ಹೀಗಾಗಿ ಜಮ್ಮುವಿನ ಮೇಲೆ ಅದರ ಗುರಿ
ಭಯೋತ್ಪಾದನೆ ಅನ್ನೋದು ಹೆಚ್ಚು ಕಡಿಮೆ ನೀರು ಇದ್ದ ಹಾಗೆ, ಅಡ್ಡಿಯಿಲ್ಲದ ಕಡೆ ಅದು ಸರಾಗವಾಗಿ ಹರಿದು ಹೋಗುತ್ತದೆ. ಅದರಂತೆ ಪುಲ್ವಾಮಾ ಘಟನೆಯ ಬಳಿಕ ಕಾಶ್ಮೀರದಲ್ಲಿ ಉಗ್ರವಾದ ಅನ್ನುವ ಕಳೆಯನ್ನು ಮಟ್ಟಸಾವಾಗಿ ಕತ್ತರಿಸಿ ಹಾಕಿದೆ ಭಾರತೀಯ ಸೇನೆ. ಅದು ಅಲ್ಲದೇ ಆ ಮಟ್ಟದ ದೊಡ್ಡ ದಾಳಿಯನ್ನು ನಡೆಸುವ ಶಕ್ತಿಯನ್ನು ಹಾಗೂ ಹಾದಿಯನ್ನು ಸಂಪೂರ್ಣವಾಗಿ ಪಾಕಿಸ್ತಾನದಿಂದ ಕಿತ್ತುಕೊಂಡಿದೆ ಗುಪ್ತಚರ ಇಲಾಖೆ. ಆದ್ರೆ ಜಮ್ಮು ಕಾಶ್ಮೀರದ ಮೇಲೆ ಪಾಕಿಸ್ತಾನ ಇಂದು ನಿನ್ನೆಯಿಂದ ಕಣ್ಣಿಟ್ಟಿಲ್ಲ. ಸುಮಾರು 7 ದಶಕಗಳ ಕಾಲ ನಿರಂತರವಾಗಿ ಕಾಶ್ಮೀರವನ್ನು ತನ್ನ ವಶಕ್ಕೆ ಪಡೆಯಬೇಕು ಎಂಬ ಹಠದಲ್ಲಿ ಮೂರು ಮೂರು ಯುದ್ಧವನ್ನು ಮಾಡಿದೆ. ಕಳೆದ 3 ದಶಕಗಳಲ್ಲಿ ಜಮ್ಮು ಕಾಶ್ಮೀರದಲ್ಲಿ ಹೆಚ್ಚು ಕಡಿಮೆ ಉಗ್ರವಾದಿಗಳ ಪ್ರತ್ಯೇಕತಾವಾದಿಗಳ ಹಾಗೂ ಐಎಸ್ಐನ ಹಿಡಿತವೇ ಇತ್ತು. ಪಾಕಿಸ್ತಾನ ಭಯೋತ್ಪಾನೆಯೆಂಬ ಕಸವನ್ನು ಹುಲುಸಾಗಿಯೇ ಕಾಶ್ಮೀರದಲ್ಲಿ ಬೆಳೆದಿತ್ತು. ಆದ್ರೆ ಪುಲ್ವಾಮಾ ದಾಳಿ ಬಳಿಕ ಅಲ್ಲಿನ ಚಿತ್ರಣ ಬದಲಾಗಿದೆ. ಭಯೋತ್ಪಾದಕರು ದೀರ್ಘವಾಗಿ ಉಸಿರು ಎಳೆದುಕೊಂಡ ಶಬ್ದ ಬಂದರು ಆ ಕಡೆಗೆ ಭಾರತೀಯ ಸೇನೆಯ ಗುಂಡು ಸಿಡಿಯತೊಡಗಿತು. ಅದೆಲ್ಲದರ ಮೇಲೆ ಕಳಶವಿಟ್ಟಂತೆ ಜಮ್ಮು ಕಾಶ್ಮೀರಕ್ಕೆ ಶಾಪದಂತಿದ್ದ ಕಳೆದ ಏಳು ದಶಕಗಳಿಂದ ಆ ಪ್ರದೇಶವನ್ನು ನರಳಿಸಿದ್ದ 370 ಆರ್ಟಿಕಲ್ ರದ್ದುಗೊಂಡಿದ್ದು. ಹೆಚ್ಚು ಕಡಿಮೆ ಕಾಶ್ಮೀರದ ಮೇಲಿದ್ದ ಪ್ರತ್ಯೇಕವಾದಿಗಳ, ಭಯೋತ್ಪಾದನೆ ಸಂಘಟನೆಗಳ ಹಿಡಿತ ಸಂಪೂರ್ಣವಾಗಿ ತಪ್ಪಿ ಹೋಗಿದೆ. ಅದಕ್ಕೆ ಸ್ಪಷ್ಟ ಉದಾಹರಣೆಯಾಗಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಇದೇ ಕಾಶ್ಮೀರದಲ್ಲಿ ಪ್ರತ್ಯೇಕವಾದಿಗಳನ್ನು ಅಲ್ಲಿನ ಮತದಾರರೇ ದೂರವಿಟ್ಟಿದ್ದು ಸಾಕ್ಷಿ. ಹೀಗಾಗಿ, ಹೇಗಾದರು ಮಾಡಿ ಮತ್ತೆ ಜಮ್ಮು ಕಾಶ್ಮೀರದಲ್ಲಿ ತನ್ನ ಹಿಡಿತವನ್ನು ಬಲಗೊಳಿಸುವ ಉದ್ದೇಶದಲ್ಲಿ ಐಎಸ್ಐ, ಪಾಕಿಸ್ತಾನ ಹಾಗೂ ಪ್ರತ್ಯೇಕವಾದಿಗಳು ಇದ್ದಾರೆ. ಸಂಪೂರ್ಣವಾಗಿ ಭಯೋತ್ಪಾನೆ ನಿಂತೇ ಹೋಗಿಬಿಟ್ಟರೇ ತಾವು ಸೋಲು ಒಪ್ಪಿಕೊಂಡಂತೆ ಎಂಬುದನ್ನು ಮನಗಂಡ ಈ ಪಡೆ ಎಲ್ಲಿ ಅವರ ಕ್ರಿಯೆಗೆ ಪ್ರತಿಕ್ರಿಯೆ ಕಡಿಮೆ ಬರುತ್ತಿದೆಯೋ ಆ ಕಡೆ ತಮ್ಮ ಬಂದೂಕಿನ ಬಾಂಬಿನ ಗುರಿಯನ್ನು ತಿರುಗಿಸಿದವು. ಈಗ ಕಾಶ್ಮೀರದಿಂದ ಜಮ್ಮುವಿನೆಡೆಗೆ ಉಗ್ರರ ಗುರಿ ಶಿಫ್ಟಾಗಿದೆ. ಈಗ ಭಾರತೀಯ ರಕ್ಷಣಾ ಮಂತ್ರಾಲಯವು ಈಗ ಇದರ ಬಗ್ಗೆ ಅರಿತುಕೊಂಡಿದೆ. ಜಮ್ಮುವಿನ ಕಡೆ ಸೇನಾ ಜಮಾವಣೆಯನ್ನು ಹೆಚ್ಚುಗೊಳಿಸಿದೆ. ಗುಪ್ತಚರ ಇಲಾಖೆಯೂ ಕೂಡ ಚುರುಕುಗೊಂಡಿದೆ. ಕಾಶ್ಮೀರದಂತೆ ಜಮ್ಮುವಿನಲ್ಲಿಯೂ ಕೂಡ ಉಗ್ರವಾದದ ಕಳೆಯನ್ನು ಸಂಪೂರ್ಣವಾಗಿ ಕತ್ತರಿಸಿ ಹಾಕಲು ಪ್ಲಾನ್ ಕೂಡ ರೆಡಿಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಪಾಕ್ ಭಯೋತ್ಪಾದಕರ ಕಣ್ಣು ಜಮ್ಮುವಿನತ್ತ ಹೊರಳುತ್ತಿರೋದು ಏಕೆ?
ಕಾಶ್ಮೀರದಲ್ಲಿ ತಣ್ಣಗಾದ ಭಯೋತ್ಪಾದನೆ ಜಮ್ಮುವಿನಲ್ಲಿ ಚಿಗುರಿದ್ದು ಹೇಗೆ?
ಪುನಃ ಹಿಡಿತ ಸಾಧಿಸುವ ಹುನ್ನಾರದಲ್ಲಿದೆಯಾ ಪಾಕಿಸ್ತಾನದ ಐಎಸ್ಐ..?
ಶ್ರೀನಗರ: ಜಮ್ಮು ಕಾಶ್ಮೀರ ಸುಮಾರು ಮೂರು ದಶಕಗಳ ಕಾಲ ಉಗ್ರರ ಕರಿ ನೆರಳಲಿನಲ್ಲಿ ನರಳಿದ ಭಾರತದ ಮುಕುಟ. ಕಾಶ್ಮೀರಿ ನಿವಾಸಿನಿ ಶಾರದೆ ಎಂದೇ ನಮ್ಮ ಪುರಾಣಗಳು ಕಾಶ್ಮೀರವನ್ನು ನೆನಪಿಸಿಕೊಳ್ಳುತ್ತದೆ. ಸ್ವತಃ ಸರಸ್ವತಿಯೇ ನೆಲೆಯೂರಿದ ಆ ಪ್ರದೇಶದಲ್ಲಿ ಸರಿ ಸುಮಾರು ಮೂರು ದಶಕಗಳ ಕಾಲ ಅಕ್ಷರಶಃ ಅಟ್ಟಹಾಸ ಮೆರೆದಿತ್ತು ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆ. ಐತಿಹಾಸಿಕ ಪ್ರಮಾದಗಳೋ, ದೂರದೃಷ್ಟಿಯಿಲ್ಲದ ನಿರ್ಧಾರಗಳೋ ಒಟ್ಟಿನಲ್ಲಿ ಕಾಶ್ಮೀರದ ಕಣಿವೆಯ ಶ್ವೇತ ಹಿಮದಲ್ಲಿ ಹೆಪ್ಪುಗಟ್ಟಿದ್ದು ಮಾತ್ರ ನಮ್ಮ ಸೈನಿಕರ, ಕಾಶ್ಮೀರಿ ಪಂಡಿತರ ರಕ್ತದ ಕಲೆಗಳು.
ಭಾರತ ಮತ್ತು ಪಾಕಿಸ್ತಾನ ಎಂದು ಈ ದೇಶ ಎರಡು ಹೋಳಾದ ಮೇಲೆ ಕಾಶ್ಮೀರಕ್ಕಾಗಿ ದೊಡ್ಡ ಬಡಿದಾಟಗಳೇ ಆಗಿವೆ. ಒಂದು ಬೆಟ್ಟದ ಮೇಲಿನ ಹಿಡಿತಕ್ಕಾಗಿ ಸುದೀರ್ಘವಾದ ಭೀಕರವಾದ ಒಂದು ಯುದ್ಧವೇ ನಡೆದು ಹೋಗಿದೆ. ಕಳೆದ 75 ವರ್ಷಗಳಲ್ಲಿ ದಾಲ್ ಸರೋವರದಲ್ಲಿ ಸಾಕಷ್ಟು ನೀರು ಹರಿದು ಹೋಗಿದೆ. ಕಾಶ್ಮೀರದಲ್ಲಿ ಬದಲಾವಣೆ ಪರ್ವವೂ ಆರಂಭವಾಗಿದೆ. ಒಂದು ಕಾಲದಲ್ಲಿ ಅಕ್ರಮ ಒಳನುಸುಳುವಿಕೆ, ಬಾಂಬ್ ಸ್ಫೋಟ, ಯೋಧರ ಮತ್ತು ಉಗ್ರರ ನಡುವಿನ ಗುಂಡಿನ ಕಾಳಗ, ಕಲ್ಲು ತೂರಾಟ ಇಂತಹ ವಿಷಯಗಳಿಗೆ ಹೆಚ್ಚು ಸುದ್ದಿಯಾಗುತ್ತಿದ್ದ ಕಾಶ್ಮೀರದಲ್ಲೀಗ ಬದಲಾವಣೆಯ ಕುರುಹುಗಳು ಕಾಣಸಿಗುತ್ತಿವೆ. ಜಿ20 ಶೃಂಗಸಭೆಯಂತಹ ಮಹತ್ವದ ಸಭೆಗಳು ಅಲ್ಲಿ ನಡೆಯುತ್ತಿವೆ. ಜೋರ್ ಸೆ ಬೋಲೋ ಆಜಾದಿ ಎಂಬ ಕೂಗುಳ ಮರೆಯಾಗಿ ಭಾರತ್ ಮಾತಾ ಕಿ ಜೈ ಎನ್ನುವ ಘೋಷಣೆಗಳು ಮಾರ್ಧನಿಸುತ್ತಿವೆ. ಇದಕ್ಕೆಲ್ಲಾ ಕಾರಣ ಜಮ್ಮು ಕಾಶ್ಮೀರ ಮತ್ತು ಭಾರತ ನಡುವೆ ಭೇದಕ ಶಕ್ತಿ ಗೆರೆಯಾಗಿ ನಿಂತಿದ್ದ ಆರ್ಟಿಕಲ್ 370 ಅನ್ನೋ ಒಂದು ಕರಾಳ ಇತಿಹಾಸ.
ಯಾವಾಗ ಜಮ್ಮು ಕಾಶ್ಮೀರದಿಂದ 370ನೇ ಕಲಂನ್ನು ತೆಗೆದು ಹಾಕಲಾಯ್ತೋ, ಜಮ್ಮು ಕಾಶ್ಮೀರ ಸದಾಕಾಲಕ್ಕೆ ಭಾರತದ ಒಂದು ಅವಿಭಾಜ್ಯ ಅಂಗವಾಗಿ ಅಧಿಕೃತವಾಗಿ ಸೇರಿಕೊಂಡಿತೋ ಅಂದಿನಿಂದ ಉಗ್ರರ ಉಪಟಳಗಳು ನಿಧಾನಕ್ಕೆ ಕಡಿಮೆಯಾಗುತ್ತಾ ಹೋಯ್ತು. ನಯಾ ಕಾಶ್ಮೀರ ಎಂಬ ಭಾರತ ಸರ್ಕಾರದ ಘೋಷಣೆ ಅಲ್ಲಿ ಅಕ್ಷರಶಃ ಕಾರ್ಯಗೊತಗೊಂಡಿತು. ಜಮ್ಮು ಕಾಶ್ಮೀರವನ್ನು ಎರಡು ಭಾಗ ಮಾಡಿ ಒಂದು ಜಮ್ಮು ಕಾಶ್ಮೀರ ಮತ್ತೊಂದು ಲಡಾಕ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳು ಜಾರಿಗೆ ಬಂದವು. ಸೇನಾಪಡೆ ಅಕ್ಷರಶಃ ಉಗ್ರರ ಅಟ್ಟಹಾಸವನ್ನು ಮೆಟ್ಟಿ ಒಂದು ಹಂತಕ್ಕೆ ಈ ಎರಡು ಕೇಂದ್ರಾಡಳಿತ ಪ್ರದೇಶದಲ್ಲಿ ಶಾಂತಿ ನೆಲೆಸುವಂತೆ ಮಾಡಿದವು. ಆದ್ರೆ ಈಗ ಉಗ್ರರ ಕಣ್ಣು ಬೇರೆಕಡೆಗೆ ಹರಿದಿದೆ. ಅವರ ಬಂದೂಕಿನ ಗುರಿ ಮತ್ತೊಂದು ಕಡೆ ಮುಖಮಾಡಿ ಸದ್ದು ಮಾಡುತ್ತಿದೆ. ಹಾಗಾದ್ರೆ ಸದ್ಯ ಉಗ್ರರ ಕಣ್ಣು ಬೇರೆ ಕಡೆ ಸರಿದಿದ್ದು ಏಕೆ? ಯಾವ ಪ್ರದೇಶದ ಮೇಲೆ ಮತ್ತು ಏಕೆ ಅವರ ಬಂದೂಕಿನ ಗುರಿ ತಿರುಗಿದೆ ಅಂತ ವಿವರವಾಗಿ ನೋಡುವುದಾದ್ರೆ.
ಕಾಶ್ಮೀರ ಬಿಟ್ಟು ಜಮ್ಮುವಿನತ್ತ ಉಗ್ರರ ಕಣ್ಣು..? ಬಂದೂಕಿನ ಗುರಿ ಜಮ್ಮುವಿನತ್ತ ತಿರುಗಿದ್ದು ಏಕೆ.?
ಇದನ್ನೂ ಓದಿ: ಸ್ಯಾಂಡಲ್ವುಡ್ಗೆ ಮತ್ತೊಂದು ಶಾಕ್.. ನೀನಾಸಂ ಸತೀಶ್ ಚಿತ್ರದ ನಿರ್ದೇಶಕ ಆತ್ಮಹತ್ಯೆ; ಕಾರಣವೇನು?
ಕಳೆದ ಕೆಲವು ತಿಂಗಳುಗಳ ವರದಿಯನ್ನು ನೋಡ್ತಾ ಹೋಗುವುದಾದ್ರೆ ಕಾಶ್ಮೀರ ಹೆಚ್ಚು ಕಡಿಮೆ ಶಾಂತವಾಗಿದೆ. ಆದ್ರೆ ಜಮ್ಮುವಿನಲ್ಲಿ ಉಗ್ರರ ಬಂದೂಕಿನ ಹಾಗು ಬಾಂಬ್ಗಳ ಮೊರೆತ ಕೇಳಿ ಬರುತ್ತಿವೆ. ಹಾಗಾದ್ರೆ ಯಾಕೆ. ಜಮ್ಮು ಉಗ್ರರ ಟಾರ್ಗೆಟ್ ಆಗಿದ್ದು ಹೇಗೆ ಮತ್ತು ಏಕೆ ಅನ್ನೋದನ್ನ ನೋಡೋಕು ಮುನ್ನ ಜಮ್ಮುವಿನಲ್ಲಿ ಉಗ್ರರ ಉಪಟಳದ ಆರಂಭದ ಬಗ್ಗೆ ಒಂದಿಷ್ಟು ಮಾಹಿತಿಗಳನ್ನು ನೋಡೋಣ.
ಕತುವಾದಲ್ಲಿ ಸೇನೆಯ ವಾಹನದ ಮೇಲೆ ಹಠಾತ್ ದಾಳಿ ಮಾಡಿ ಅಚ್ಚರಿ ಮೂಡಿಸಿತ್ತು ಉಗ್ರರ ಪಡೆ. ಇದೊಂದು ಚಿತ್ತ ಬದಲಿಸುವ ತಂತ್ರ ಎಂದುಕೊಂಡು ಸುಮ್ಮನಾಗುವಂತಿರಲಿಲ್ಲ ಏಕೆಂದ್ರೆ ಅದಾದ ಕೆಲವೇ ದಿನಗಳ ಬಳಿಕ ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ನಡೆದ ಉಗ್ರರು ಮತ್ತು ಸೇನೆಯ ನಡುವಿನ ಗುಂಡಿನ ಚಕಮಕಿಯಲ್ಲಿ 6 ಉಗ್ರರು ಹತರಾದರೇ ನಮ್ಮ ಹೆಮ್ಮೆಯ ಇಬ್ಬರು ಸೈನಿಕರು ಹುತಾತ್ಮರಾದರು. ಅದಕ್ಕಿಂತ ಭೀಕರವಾದದ್ದು ಅಂದ್ರೆ ವೈಷ್ಣೋದೇವಿ ಯಾತ್ರಾರ್ಥಿಗಳ ಮೇಲೆ ನಡೆದ ದಾಳಿಯಲ್ಲಿ ಸುಮಾರು 9 ಜನ ಯಾತ್ರಾರ್ಥಿಗಳು ಸಾವಿಗೀಡಾದರು. ಹಾಗಿದ್ರೆ ಯಾಕೆ ಜಮ್ಮು ಪದೇ ಪದೇ ಉಗ್ರರ ದಾಳಿಗೆ ಟಾರ್ಗೆಟ್ ಆಗ್ತಿದೆ. ಕಾಶ್ಮೀರದಿಂದ ಕಾಲ್ಕಿತ್ತ ಉಗ್ರರು ಜಮ್ಮುವನ್ನೇಕೆ ಗುರಿಯಾಗಿಸಿಕೊಂಡಿದ್ದಾರೆ ಅಂದ್ರೆ ಅದಕ್ಕೆ ಉತ್ತರ ಒಂದೇ. ಕಾಶ್ಮೀರದಲ್ಲಿ ನಡೆಯುವ ಪ್ರತಿ ದಾಳಿಗೂ ಅಲ್ಲಿ ಕೌಟರ್ ಅಟ್ಯಾಕ್ ಸೇನೆಯಿಂದ ನಡೆಯುತ್ತಿದೆ. ಒಳಕ್ಕೆ ನುಗ್ಗುವ ಮೊದಲೇ ಉಗ್ರರನ್ನು ಹೊಡೆದುರುಳಿಸುತ್ತಿದ್ದಾರೆ ಸೈನಿಕರು. ಹೀಗಾಗಿ ಈಗ ಜಮ್ಮುವಿನಲ್ಲಿ ತಮ್ಮ ಬೇರೆಯದ್ದೇ ಆಟ ಹೂಡಿದೆ ಉಗ್ರ ದುಷ್ಟಪಡೆ..ಆದರೆ ಇದೊಂದೇ ಕಾರಣವಲ್ಲ. ಜಮ್ಮುವಿನ ಮೇಲೆ ಉಗ್ರರ ದೃಷ್ಟಿ ಸರಿಯಲು ಮತ್ತೊಂದು ಕಾರಣವಿದೆ.
ಇದನ್ನೂ ಓದಿ: ಯಾಕಿಷ್ಟು ರಕ್ತದಾಹ? ಆಂಧ್ರಪ್ರದೇಶ ರಣ, ರಣ ರಾಜಕೀಯದ ರಕ್ತಚರಿತ್ರೆಗಿದೆ 12ನೇ ಶತಮಾನದ ನಂಟು; ಏನದು?
ಕಾಶ್ಮೀರದ ಮೇಲೆ ಹಿಡಿತ ಕಳೆದುಕೊಳ್ಳುತ್ತಿರುವ ಪಾಕಿಸ್ತಾನ: ಹೀಗಾಗಿ ಜಮ್ಮುವಿನ ಮೇಲೆ ಅದರ ಗುರಿ
ಭಯೋತ್ಪಾದನೆ ಅನ್ನೋದು ಹೆಚ್ಚು ಕಡಿಮೆ ನೀರು ಇದ್ದ ಹಾಗೆ, ಅಡ್ಡಿಯಿಲ್ಲದ ಕಡೆ ಅದು ಸರಾಗವಾಗಿ ಹರಿದು ಹೋಗುತ್ತದೆ. ಅದರಂತೆ ಪುಲ್ವಾಮಾ ಘಟನೆಯ ಬಳಿಕ ಕಾಶ್ಮೀರದಲ್ಲಿ ಉಗ್ರವಾದ ಅನ್ನುವ ಕಳೆಯನ್ನು ಮಟ್ಟಸಾವಾಗಿ ಕತ್ತರಿಸಿ ಹಾಕಿದೆ ಭಾರತೀಯ ಸೇನೆ. ಅದು ಅಲ್ಲದೇ ಆ ಮಟ್ಟದ ದೊಡ್ಡ ದಾಳಿಯನ್ನು ನಡೆಸುವ ಶಕ್ತಿಯನ್ನು ಹಾಗೂ ಹಾದಿಯನ್ನು ಸಂಪೂರ್ಣವಾಗಿ ಪಾಕಿಸ್ತಾನದಿಂದ ಕಿತ್ತುಕೊಂಡಿದೆ ಗುಪ್ತಚರ ಇಲಾಖೆ. ಆದ್ರೆ ಜಮ್ಮು ಕಾಶ್ಮೀರದ ಮೇಲೆ ಪಾಕಿಸ್ತಾನ ಇಂದು ನಿನ್ನೆಯಿಂದ ಕಣ್ಣಿಟ್ಟಿಲ್ಲ. ಸುಮಾರು 7 ದಶಕಗಳ ಕಾಲ ನಿರಂತರವಾಗಿ ಕಾಶ್ಮೀರವನ್ನು ತನ್ನ ವಶಕ್ಕೆ ಪಡೆಯಬೇಕು ಎಂಬ ಹಠದಲ್ಲಿ ಮೂರು ಮೂರು ಯುದ್ಧವನ್ನು ಮಾಡಿದೆ. ಕಳೆದ 3 ದಶಕಗಳಲ್ಲಿ ಜಮ್ಮು ಕಾಶ್ಮೀರದಲ್ಲಿ ಹೆಚ್ಚು ಕಡಿಮೆ ಉಗ್ರವಾದಿಗಳ ಪ್ರತ್ಯೇಕತಾವಾದಿಗಳ ಹಾಗೂ ಐಎಸ್ಐನ ಹಿಡಿತವೇ ಇತ್ತು. ಪಾಕಿಸ್ತಾನ ಭಯೋತ್ಪಾನೆಯೆಂಬ ಕಸವನ್ನು ಹುಲುಸಾಗಿಯೇ ಕಾಶ್ಮೀರದಲ್ಲಿ ಬೆಳೆದಿತ್ತು. ಆದ್ರೆ ಪುಲ್ವಾಮಾ ದಾಳಿ ಬಳಿಕ ಅಲ್ಲಿನ ಚಿತ್ರಣ ಬದಲಾಗಿದೆ. ಭಯೋತ್ಪಾದಕರು ದೀರ್ಘವಾಗಿ ಉಸಿರು ಎಳೆದುಕೊಂಡ ಶಬ್ದ ಬಂದರು ಆ ಕಡೆಗೆ ಭಾರತೀಯ ಸೇನೆಯ ಗುಂಡು ಸಿಡಿಯತೊಡಗಿತು. ಅದೆಲ್ಲದರ ಮೇಲೆ ಕಳಶವಿಟ್ಟಂತೆ ಜಮ್ಮು ಕಾಶ್ಮೀರಕ್ಕೆ ಶಾಪದಂತಿದ್ದ ಕಳೆದ ಏಳು ದಶಕಗಳಿಂದ ಆ ಪ್ರದೇಶವನ್ನು ನರಳಿಸಿದ್ದ 370 ಆರ್ಟಿಕಲ್ ರದ್ದುಗೊಂಡಿದ್ದು. ಹೆಚ್ಚು ಕಡಿಮೆ ಕಾಶ್ಮೀರದ ಮೇಲಿದ್ದ ಪ್ರತ್ಯೇಕವಾದಿಗಳ, ಭಯೋತ್ಪಾದನೆ ಸಂಘಟನೆಗಳ ಹಿಡಿತ ಸಂಪೂರ್ಣವಾಗಿ ತಪ್ಪಿ ಹೋಗಿದೆ. ಅದಕ್ಕೆ ಸ್ಪಷ್ಟ ಉದಾಹರಣೆಯಾಗಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಇದೇ ಕಾಶ್ಮೀರದಲ್ಲಿ ಪ್ರತ್ಯೇಕವಾದಿಗಳನ್ನು ಅಲ್ಲಿನ ಮತದಾರರೇ ದೂರವಿಟ್ಟಿದ್ದು ಸಾಕ್ಷಿ. ಹೀಗಾಗಿ, ಹೇಗಾದರು ಮಾಡಿ ಮತ್ತೆ ಜಮ್ಮು ಕಾಶ್ಮೀರದಲ್ಲಿ ತನ್ನ ಹಿಡಿತವನ್ನು ಬಲಗೊಳಿಸುವ ಉದ್ದೇಶದಲ್ಲಿ ಐಎಸ್ಐ, ಪಾಕಿಸ್ತಾನ ಹಾಗೂ ಪ್ರತ್ಯೇಕವಾದಿಗಳು ಇದ್ದಾರೆ. ಸಂಪೂರ್ಣವಾಗಿ ಭಯೋತ್ಪಾನೆ ನಿಂತೇ ಹೋಗಿಬಿಟ್ಟರೇ ತಾವು ಸೋಲು ಒಪ್ಪಿಕೊಂಡಂತೆ ಎಂಬುದನ್ನು ಮನಗಂಡ ಈ ಪಡೆ ಎಲ್ಲಿ ಅವರ ಕ್ರಿಯೆಗೆ ಪ್ರತಿಕ್ರಿಯೆ ಕಡಿಮೆ ಬರುತ್ತಿದೆಯೋ ಆ ಕಡೆ ತಮ್ಮ ಬಂದೂಕಿನ ಬಾಂಬಿನ ಗುರಿಯನ್ನು ತಿರುಗಿಸಿದವು. ಈಗ ಕಾಶ್ಮೀರದಿಂದ ಜಮ್ಮುವಿನೆಡೆಗೆ ಉಗ್ರರ ಗುರಿ ಶಿಫ್ಟಾಗಿದೆ. ಈಗ ಭಾರತೀಯ ರಕ್ಷಣಾ ಮಂತ್ರಾಲಯವು ಈಗ ಇದರ ಬಗ್ಗೆ ಅರಿತುಕೊಂಡಿದೆ. ಜಮ್ಮುವಿನ ಕಡೆ ಸೇನಾ ಜಮಾವಣೆಯನ್ನು ಹೆಚ್ಚುಗೊಳಿಸಿದೆ. ಗುಪ್ತಚರ ಇಲಾಖೆಯೂ ಕೂಡ ಚುರುಕುಗೊಂಡಿದೆ. ಕಾಶ್ಮೀರದಂತೆ ಜಮ್ಮುವಿನಲ್ಲಿಯೂ ಕೂಡ ಉಗ್ರವಾದದ ಕಳೆಯನ್ನು ಸಂಪೂರ್ಣವಾಗಿ ಕತ್ತರಿಸಿ ಹಾಕಲು ಪ್ಲಾನ್ ಕೂಡ ರೆಡಿಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ