ಜನವರಿ 22 ಶುಭ ದಿನವೆಂದು ಅಂದೇ ನಾಮಕರಣಕ್ಕೆ ಸಿದ್ಧತೆ
ಶಾಸ್ತ್ರದಲ್ಲಿ ಬೇರೆ ಹೆಸರು ಬಂದರು ರಾಮ ಎಂದೇ ನಾಮಕರಣ
ಅಯೋಧ್ಯೆಯಲ್ಲಿ ರಾಮನ ಪ್ರಾಣ ಪ್ರತಿಷ್ಠಾಪನೆ ಸಮಾರಂಭ
ಚಿತ್ರದುರ್ಗ: ಅಯೋಧ್ಯೆಯಲ್ಲಿ ಬಾಲರಾಮ ವಿಗ್ರಹ ಪ್ರಾಣ ಪ್ರತಿಷ್ಠಾಪನೆಗೆ ವಿದ್ವಾಂಸರು, ಪಂಡಿತರೆಲ್ಲ ಸೇರಿ ಜನವರಿ 22ಕ್ಕೆ ಮುಹೂರ್ತ ನಿಗದಿ ಮಾಡಿದ್ದಾರೆ. ಈ ದಿನ ಸಾಕಷ್ಟು ವಿಶೇಷತೆಗಳಿಂದ ಕೂಡಿದ ಕಾರಣ ಚಿತ್ರದುರ್ಗದ ದಂಪತಿ ತಮ್ಮ ಮಗುವಿಗೆ ಪ್ರಾಣ ಪ್ರತಿಷ್ಠಾಪನಾದಂದೇ ತಮ್ಮ ಮಗುವಿಗೆ ನಾಮಕಾರಣ ಮಾಡಲು ಮುಂದಾಗಿದ್ದಾರೆ.
ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಆಗುವ ಹೊತ್ತಿಗೆ ಕೋಟೆನಾಡು ಚಿತ್ರದುರ್ಗದಲ್ಲಿ ಮಗುವೊಂದರ ನಾಮಕರಣ ಸಮಾರಂಭಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅದು ರಾಮ ಎನ್ನುವ ಹೆಸರನ್ನೇ ಮಗುವಿಗೆ ನಾಮಕರಣ ಮಾಡುತ್ತಿರುವುದು ವಿಶೇಷವಾಗಿದೆ.
ಚಿತ್ರದುರ್ಗದ ಗಾಂಧಿ ನಗರದ ನಿವಾಸಿಗಳಾದ ಭಾವನಾ ಹಾಗೂ ಸಾಗರ್ ಎನ್ನುವ ದಂಪತಿಗಳು ತಮ್ಮ 5 ತಿಂಗಳ ಪುತ್ರನಿಗೆ ಅಯೋಧ್ಯೆಯಲ್ಲಿ ಬಾಲರಾಮನ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆಯ ದಿನವೇ ನಾಮಕರಣ ಇಟ್ಟುಕೊಂಡಿದ್ದಾರೆ. ಶಾಸ್ತ್ರ ಕೇಳಿದಾಗ ಜನ್ಮ ನಾಮ ಬೇರೆ ಬಂದರೂ ರಾಮ ಎಂದೇ ಹೆಸರಿಡಲು ದಂಪತಿ ನಿರ್ಧಾರ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಜನವರಿ 22 ಶುಭ ದಿನವೆಂದು ಅಂದೇ ನಾಮಕರಣಕ್ಕೆ ಸಿದ್ಧತೆ
ಶಾಸ್ತ್ರದಲ್ಲಿ ಬೇರೆ ಹೆಸರು ಬಂದರು ರಾಮ ಎಂದೇ ನಾಮಕರಣ
ಅಯೋಧ್ಯೆಯಲ್ಲಿ ರಾಮನ ಪ್ರಾಣ ಪ್ರತಿಷ್ಠಾಪನೆ ಸಮಾರಂಭ
ಚಿತ್ರದುರ್ಗ: ಅಯೋಧ್ಯೆಯಲ್ಲಿ ಬಾಲರಾಮ ವಿಗ್ರಹ ಪ್ರಾಣ ಪ್ರತಿಷ್ಠಾಪನೆಗೆ ವಿದ್ವಾಂಸರು, ಪಂಡಿತರೆಲ್ಲ ಸೇರಿ ಜನವರಿ 22ಕ್ಕೆ ಮುಹೂರ್ತ ನಿಗದಿ ಮಾಡಿದ್ದಾರೆ. ಈ ದಿನ ಸಾಕಷ್ಟು ವಿಶೇಷತೆಗಳಿಂದ ಕೂಡಿದ ಕಾರಣ ಚಿತ್ರದುರ್ಗದ ದಂಪತಿ ತಮ್ಮ ಮಗುವಿಗೆ ಪ್ರಾಣ ಪ್ರತಿಷ್ಠಾಪನಾದಂದೇ ತಮ್ಮ ಮಗುವಿಗೆ ನಾಮಕಾರಣ ಮಾಡಲು ಮುಂದಾಗಿದ್ದಾರೆ.
ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಆಗುವ ಹೊತ್ತಿಗೆ ಕೋಟೆನಾಡು ಚಿತ್ರದುರ್ಗದಲ್ಲಿ ಮಗುವೊಂದರ ನಾಮಕರಣ ಸಮಾರಂಭಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅದು ರಾಮ ಎನ್ನುವ ಹೆಸರನ್ನೇ ಮಗುವಿಗೆ ನಾಮಕರಣ ಮಾಡುತ್ತಿರುವುದು ವಿಶೇಷವಾಗಿದೆ.
ಚಿತ್ರದುರ್ಗದ ಗಾಂಧಿ ನಗರದ ನಿವಾಸಿಗಳಾದ ಭಾವನಾ ಹಾಗೂ ಸಾಗರ್ ಎನ್ನುವ ದಂಪತಿಗಳು ತಮ್ಮ 5 ತಿಂಗಳ ಪುತ್ರನಿಗೆ ಅಯೋಧ್ಯೆಯಲ್ಲಿ ಬಾಲರಾಮನ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆಯ ದಿನವೇ ನಾಮಕರಣ ಇಟ್ಟುಕೊಂಡಿದ್ದಾರೆ. ಶಾಸ್ತ್ರ ಕೇಳಿದಾಗ ಜನ್ಮ ನಾಮ ಬೇರೆ ಬಂದರೂ ರಾಮ ಎಂದೇ ಹೆಸರಿಡಲು ದಂಪತಿ ನಿರ್ಧಾರ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ