Advertisment

ತಾಯಿ ಜೊತೆಗೆ ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡಿದ Jr. NTR; ಪ್ರಶಾಂತ್​ ನೀಲ್​, ರಿಷಬ್‌​ ಶೆಟ್ಟಿ ಸಾಥ್!​

author-image
Gopal Kulkarni
Updated On
ತಾಯಿ ಜೊತೆಗೆ ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡಿದ Jr. NTR; ಪ್ರಶಾಂತ್​ ನೀಲ್​, ರಿಷಬ್‌​ ಶೆಟ್ಟಿ ಸಾಥ್!​
Advertisment
  • ಕೃಷ್ಣನೂರು ಉಡುಪಿಗೆ ಆಗಮಿಸಿದ ತೆಲುಗು ನಟ ಜೂನಿಯರ್ ಎನ್​ಟಿಆರ್
  • ಪ್ರಶಾಂತ್​ ನೀಲ್, ತಾಯಿಯ ಜೊತೆಗೆ ಕೃಷ್ಣನ ಆಶೀರ್ವಾದ ಪಡೆದ ನಟ
  • ಎನ್​ಟಿಆರ್ ಅವರನ್ನು ಅಪ್ಪಿಕೊಂಡು ಸ್ವಾಗತಿಸಿದ ನಟ, ನಿರ್ದೇಶಕ ರಿಷಭ್​​​ ಶೆಟ್ಟಿ

ಉಡುಪಿ: ಉಡುಪಿ ಕೃಷ್ಣಮಠಕ್ಕೆ ತೆಲುಗು ಸೂಪರ್​ಸ್ಟಾರ್ ಜೂನಿಯರ್ ಎನ್​ಟಿಆರ್ ಇಂದು ತಮ್ಮ ತಾಯಿ ಜೊತೆ ಆಗಮಿಸಿ ಶ್ರೀಕೃಷ್ಣನ ದರ್ಶನ ಪಡೆದರು. ಉಡುಪಿ ಕೃಷ್ಣಮಠಕ್ಕೆ ತಾಯಿ ಹಾಗೂ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್​ ಜೊತೆ ಆಗಮಿಸಿದ್ದ ಜೂನಿಯರ್​ ಎನ್​ಟಿಆರ್​, ಕೃಷ್ಣನಿಗೆ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದರು.

Advertisment

ಇದನ್ನೂ ಓದಿ:ಕೇರಳದ MeToo ಗದ್ದಲದ ನಡುವೆ ಟಾಲಿವುಡ್​ಗೆ ಸಮಂತಾ ದೊಡ್ಡ ಸಂದೇಶ

publive-image

ಜೂನಿಯರ್ ಎನ್​ಟಿಆರ್​ನ್ನು ಸ್ವಾಗತಿಸಿದ ರಿಷಬ್ ಶೆಟ್ಟಿ

ಇನ್ನು ಉಡುಪಿಗೆ ಆಗಮಿಸಿದ ಜೂನಿಯರ್ ಎಟಿಆರ್​​ರನ್ನ ಕನ್ನಡದ ನಟ ಹಾಗೂ ನಿರ್ದೇಶಕ ರಿಷಭ್​​ ಶೆಟ್ಟಿ ಸ್ವಾಗತಿಸಿದರು. ಹೇಗಿದ್ದೀರಾ ಸರ್ ಅಂತಲೇ ರಿಷಭ್​​ ಅವ​ರನ್ನು ಜೂನಿಯರ್ ಎನ್​ಟಿಆರ್ ತಬ್ಬಿಕೊಂಡು ಅಭಿನಂದಿಸಿದರು.

ಇದನ್ನೂ ಓದಿ: ಪ್ರೆಗ್ನೆನ್ಸಿ ಆದ್ರೂ ನ್ಯೂ ಲುಕ್​ನಲ್ಲಿ ನಟಿ ಪ್ರಣಿತಾ.. ಈ ಫೋಟೋ ಕ್ಲಿಕ್ ಮಾಡಿದ್ದು ಯಾರು?

publive-image

ಕುಂದಾಪುರ ಮೂಲದವರೇ ಆದ ಜೂನಿಯರ್ ಎನ್​ಟಿಆರ್​ ತಾಯಿಯ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು ರಿಷಬ್‌​​. ಇತ್ತೀಚೆಗಷ್ಟೆ ಜೂನಿಯರ್ ಎನ್​ಟಿಆರ್ ಹಾಗೂ ಪ್ರಶಾಂತ್ ನೀಲ್ ಅವರ ಸಿನಿಮಾ ಅದ್ಧೂರಿಯಾಗಿ ಸೆಟ್ಟೇರಿತ್ತು. ಅದೇ ಕಾರಣಕ್ಕೆ ಇಂದು ಕೃಷ್ಣ ಮಠಕ್ಕೆ ಆಗಮಿಸಿದ ಜೂನಿಯರ್ ಎನ್​ಟಿಆರ್, ಅವರ ತಾಯಿ ಹಾಗೂ ಪ್ರಶಾಂತ್ ನೀಲ್​​​ ಕೃಷ್ಣನ ದರ್ಶನ ಪಡೆದರು.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment