/newsfirstlive-kannada/media/post_attachments/wp-content/uploads/2024/08/JUNIOR-NTR-IN-UDUPI.jpg)
ಉಡುಪಿ: ಉಡುಪಿ ಕೃಷ್ಣಮಠಕ್ಕೆ ತೆಲುಗು ಸೂಪರ್​ಸ್ಟಾರ್ ಜೂನಿಯರ್ ಎನ್​ಟಿಆರ್ ಇಂದು ತಮ್ಮ ತಾಯಿ ಜೊತೆ ಆಗಮಿಸಿ ಶ್ರೀಕೃಷ್ಣನ ದರ್ಶನ ಪಡೆದರು. ಉಡುಪಿ ಕೃಷ್ಣಮಠಕ್ಕೆ ತಾಯಿ ಹಾಗೂ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್​ ಜೊತೆ ಆಗಮಿಸಿದ್ದ ಜೂನಿಯರ್​ ಎನ್​ಟಿಆರ್​, ಕೃಷ್ಣನಿಗೆ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದರು.
ಇದನ್ನೂ ಓದಿ:ಕೇರಳದ MeToo ಗದ್ದಲದ ನಡುವೆ ಟಾಲಿವುಡ್​ಗೆ ಸಮಂತಾ ದೊಡ್ಡ ಸಂದೇಶ
/newsfirstlive-kannada/media/post_attachments/wp-content/uploads/2024/08/JUNIOR-NTR-IN-UDUPI-1.jpg)
ಜೂನಿಯರ್ ಎನ್​ಟಿಆರ್​ನ್ನು ಸ್ವಾಗತಿಸಿದ ರಿಷಬ್ ಶೆಟ್ಟಿ
ಇನ್ನು ಉಡುಪಿಗೆ ಆಗಮಿಸಿದ ಜೂನಿಯರ್ ಎಟಿಆರ್​​ರನ್ನ ಕನ್ನಡದ ನಟ ಹಾಗೂ ನಿರ್ದೇಶಕ ರಿಷಭ್​​ ಶೆಟ್ಟಿ ಸ್ವಾಗತಿಸಿದರು. ಹೇಗಿದ್ದೀರಾ ಸರ್ ಅಂತಲೇ ರಿಷಭ್​​ ಅವ​ರನ್ನು ಜೂನಿಯರ್ ಎನ್​ಟಿಆರ್ ತಬ್ಬಿಕೊಂಡು ಅಭಿನಂದಿಸಿದರು.
ಇದನ್ನೂ ಓದಿ: ಪ್ರೆಗ್ನೆನ್ಸಿ ಆದ್ರೂ ನ್ಯೂ ಲುಕ್​ನಲ್ಲಿ ನಟಿ ಪ್ರಣಿತಾ.. ಈ ಫೋಟೋ ಕ್ಲಿಕ್ ಮಾಡಿದ್ದು ಯಾರು?
/newsfirstlive-kannada/media/post_attachments/wp-content/uploads/2024/08/JUNIOR-NTR-IN-UDUPI-2.jpg)
ಕುಂದಾಪುರ ಮೂಲದವರೇ ಆದ ಜೂನಿಯರ್ ಎನ್​ಟಿಆರ್​ ತಾಯಿಯ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು ರಿಷಬ್​​. ಇತ್ತೀಚೆಗಷ್ಟೆ ಜೂನಿಯರ್ ಎನ್​ಟಿಆರ್ ಹಾಗೂ ಪ್ರಶಾಂತ್ ನೀಲ್ ಅವರ ಸಿನಿಮಾ ಅದ್ಧೂರಿಯಾಗಿ ಸೆಟ್ಟೇರಿತ್ತು. ಅದೇ ಕಾರಣಕ್ಕೆ ಇಂದು ಕೃಷ್ಣ ಮಠಕ್ಕೆ ಆಗಮಿಸಿದ ಜೂನಿಯರ್ ಎನ್​ಟಿಆರ್, ಅವರ ತಾಯಿ ಹಾಗೂ ಪ್ರಶಾಂತ್ ನೀಲ್​​​ ಕೃಷ್ಣನ ದರ್ಶನ ಪಡೆದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us