newsfirstkannada.com

3ನೇಯವರಿಗೆ ಟಿಕೆಟ್ ಕೊಟ್ಟು ಕೈ ತೊಳೆದುಕೊಂಡ್ರೆ.. ಕಾಂಗ್ರೆಸ್‌ ನಾಯಕರಿಗೆ ಕೆ.ಹೆಚ್ ಮುನಿಯಪ್ಪ ಎಚ್ಚರಿಕೆ

Share :

Published March 29, 2024 at 3:46pm

Update March 29, 2024 at 3:50pm

    ನಾನು ಸೋತಲ್ಲಿ, ನಾನೇ ಗೆಲ್ಲಿಸಿಕೊಂಡು ಬರುತ್ತೇನೆ ಅಂತಾ ಪಟ್ಟು ಹಿಡಿದ ಸಚಿವ

    ನಾನು ಹೇಳಿದ ಅಭ್ಯರ್ಥಿಗೆ ಅವಕಾಶ ಕೊಟ್ಟರೆ ಗೆಲುವು ಖಚಿತ- ಕೆ.ಹೆಚ್ ಮುನಿಯಪ್ಪ

    ಅವರಿಗೂ ಬೇಡ, ನಿಮಗೂ ಬೇಡ ಅಂದ್ರೆ ಯಾರೂ ಕೆಲಸ ಮಾಡೋದಿಲ್ಲ!

ಕೋಲಾರ: ಇಬ್ಬರಿಗೂ ಬೇಡ ಮೂರನೇಯವರಿಗೆ ಟಿಕೆಟ್ ಕೊಟ್ಟು ಕೈ ತೊಳೆದುಕೊಂಡರೆ ಸರಿಯಲ್ಲ. ನಮಗೆ ಕೋಲಾರ ಕ್ಷೇತ್ರ ಗೆಲ್ಲಬೇಕು. ನಾವಿದ್ದು ಕ್ಷೇತ್ರ ಗೆಲ್ಲಲಿಲ್ಲವೆಂದರೆ ಹೇಗೆ? ಅವರಿಗೂ ಬೇಡ ನಿಮಗೂ ಬೇಡ ಅಂದ್ರೆ ಯಾರೂ ಕೆಲಸ ಮಾಡೋದಿಲ್ಲ ಎಂದು ಸಚಿವ ಕೆ.ಹೆಚ್‌ ಮುನಿಯಪ್ಪ ಕಾಂಗ್ರೆಸ್​ ನಾಯಕರನ್ನು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​​ಗೆ ಕಗ್ಗಂಟಾದ ಚಿನ್ನದ ಕೋಟೆ; ಟಿಕೆಟ್​ ಪೆಂಡಿಂಗ್ ಇಟ್ಟ ‘ಕೈ’ ಪಡೆ; ಇಂದು ಸಂಜೆ ಎಲ್ಲಾ ಸಮಸ್ಯೆಗೆ ಮುಕ್ತಿ ಪಕ್ಕಾ?

ಕೋಲಾರ ಕಾಂಗ್ರೆಸ್ ಟಿಕೆಟ್ ಹಂಚಿಕೆಯ ಕುರಿತು ಮಾತಾಡಿದ ಸಚಿವ ಮುನಿಯಪ್ಪ, ನಮಗೆ ಕೋಲಾರ ಕ್ಷೇತ್ರ ಗೆಲ್ಲಬೇಕು. ನಾವಿದ್ದು ಕ್ಷೇತ್ರ ಗೆಲ್ಲಲಿಲ್ಲವೆಂದರೆ ಹೇಗೆ? ಅವರಿಗೂ ಬೇಡ ನಿಮಗೂ ಬೇಡ ಅಂದ್ರೆ ಯಾರೂ ಕೆಲಸ ಮಾಡೋದಿಲ್ಲ. ಮೂರನೆಯವರು ಬಂದು ಇಲ್ಲಿ ಅತಂತ್ರರಾಗೋದು ಬೇಡ. ನಾನು ಮತ್ತೊಮ್ಮೆ ಮನವಿ ಮಾಡಿದ್ದೇನೆ. ನನಗೆ ಅವಕಾಶ ಮಾಡಿಕೊಡಿ. ನಾನು ಹೇಳಿದ ಅಭ್ಯರ್ಥಿಗೆ ಅವಕಾಶ ಕೊಟ್ಟರೆ ಗೆಲ್ಲಿಸಿಕೊಂಡು ಬರುತ್ತೇನೆ ಅಂತಾ ಹೇಳಿದ್ದೇನೆ. ಎಲ್ಲರೂ ಒಟ್ಟಿಗೆ ಇರಬೇಕು ಎಂಬುದು ನನ್ನ ಭಾವನೆ. ರಮೇಶ್ ಕುಮಾರ್ ಹಿರಿಯರು ಅವರೂ ಕೂಡ ನಿನ್ನೆ ಹಾಜರಿರಲಿಲ್ಲ. ನಾವು ಎಲ್ಲರೂ ಒಟ್ಟಿಗೆ ಸೇರಿದ್ದಾಗ ರಮೇಶ್ ಕುಮಾರ್ ಎಲ್ಲ ಭಿನ್ನಾಭಿಪ್ರಾಯ ಬಿಟ್ಟು ಕೆಲಸ ಮಾಡ್ತೇವೆ ಅಂದಿದ್ದರು. ಅವರೇ ಈ ಮಾತನ್ನು ಹೇಳಿದ್ದರು. ನಾನು ಸೋತಲ್ಲಿ, ನಾನೇ ಗೆಲ್ಲಿಸಿಕೊಂಡು ಬರುತ್ತೇನೆ ಎಂದು ಕೆ.ಹೆಚ್‌ ಮುನಿಯಪ್ಪ ಪಟ್ಟು ಹಿಡಿದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

3ನೇಯವರಿಗೆ ಟಿಕೆಟ್ ಕೊಟ್ಟು ಕೈ ತೊಳೆದುಕೊಂಡ್ರೆ.. ಕಾಂಗ್ರೆಸ್‌ ನಾಯಕರಿಗೆ ಕೆ.ಹೆಚ್ ಮುನಿಯಪ್ಪ ಎಚ್ಚರಿಕೆ

https://newsfirstlive.com/wp-content/uploads/2023/08/kh-muniyappa-2.jpg

    ನಾನು ಸೋತಲ್ಲಿ, ನಾನೇ ಗೆಲ್ಲಿಸಿಕೊಂಡು ಬರುತ್ತೇನೆ ಅಂತಾ ಪಟ್ಟು ಹಿಡಿದ ಸಚಿವ

    ನಾನು ಹೇಳಿದ ಅಭ್ಯರ್ಥಿಗೆ ಅವಕಾಶ ಕೊಟ್ಟರೆ ಗೆಲುವು ಖಚಿತ- ಕೆ.ಹೆಚ್ ಮುನಿಯಪ್ಪ

    ಅವರಿಗೂ ಬೇಡ, ನಿಮಗೂ ಬೇಡ ಅಂದ್ರೆ ಯಾರೂ ಕೆಲಸ ಮಾಡೋದಿಲ್ಲ!

ಕೋಲಾರ: ಇಬ್ಬರಿಗೂ ಬೇಡ ಮೂರನೇಯವರಿಗೆ ಟಿಕೆಟ್ ಕೊಟ್ಟು ಕೈ ತೊಳೆದುಕೊಂಡರೆ ಸರಿಯಲ್ಲ. ನಮಗೆ ಕೋಲಾರ ಕ್ಷೇತ್ರ ಗೆಲ್ಲಬೇಕು. ನಾವಿದ್ದು ಕ್ಷೇತ್ರ ಗೆಲ್ಲಲಿಲ್ಲವೆಂದರೆ ಹೇಗೆ? ಅವರಿಗೂ ಬೇಡ ನಿಮಗೂ ಬೇಡ ಅಂದ್ರೆ ಯಾರೂ ಕೆಲಸ ಮಾಡೋದಿಲ್ಲ ಎಂದು ಸಚಿವ ಕೆ.ಹೆಚ್‌ ಮುನಿಯಪ್ಪ ಕಾಂಗ್ರೆಸ್​ ನಾಯಕರನ್ನು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​​ಗೆ ಕಗ್ಗಂಟಾದ ಚಿನ್ನದ ಕೋಟೆ; ಟಿಕೆಟ್​ ಪೆಂಡಿಂಗ್ ಇಟ್ಟ ‘ಕೈ’ ಪಡೆ; ಇಂದು ಸಂಜೆ ಎಲ್ಲಾ ಸಮಸ್ಯೆಗೆ ಮುಕ್ತಿ ಪಕ್ಕಾ?

ಕೋಲಾರ ಕಾಂಗ್ರೆಸ್ ಟಿಕೆಟ್ ಹಂಚಿಕೆಯ ಕುರಿತು ಮಾತಾಡಿದ ಸಚಿವ ಮುನಿಯಪ್ಪ, ನಮಗೆ ಕೋಲಾರ ಕ್ಷೇತ್ರ ಗೆಲ್ಲಬೇಕು. ನಾವಿದ್ದು ಕ್ಷೇತ್ರ ಗೆಲ್ಲಲಿಲ್ಲವೆಂದರೆ ಹೇಗೆ? ಅವರಿಗೂ ಬೇಡ ನಿಮಗೂ ಬೇಡ ಅಂದ್ರೆ ಯಾರೂ ಕೆಲಸ ಮಾಡೋದಿಲ್ಲ. ಮೂರನೆಯವರು ಬಂದು ಇಲ್ಲಿ ಅತಂತ್ರರಾಗೋದು ಬೇಡ. ನಾನು ಮತ್ತೊಮ್ಮೆ ಮನವಿ ಮಾಡಿದ್ದೇನೆ. ನನಗೆ ಅವಕಾಶ ಮಾಡಿಕೊಡಿ. ನಾನು ಹೇಳಿದ ಅಭ್ಯರ್ಥಿಗೆ ಅವಕಾಶ ಕೊಟ್ಟರೆ ಗೆಲ್ಲಿಸಿಕೊಂಡು ಬರುತ್ತೇನೆ ಅಂತಾ ಹೇಳಿದ್ದೇನೆ. ಎಲ್ಲರೂ ಒಟ್ಟಿಗೆ ಇರಬೇಕು ಎಂಬುದು ನನ್ನ ಭಾವನೆ. ರಮೇಶ್ ಕುಮಾರ್ ಹಿರಿಯರು ಅವರೂ ಕೂಡ ನಿನ್ನೆ ಹಾಜರಿರಲಿಲ್ಲ. ನಾವು ಎಲ್ಲರೂ ಒಟ್ಟಿಗೆ ಸೇರಿದ್ದಾಗ ರಮೇಶ್ ಕುಮಾರ್ ಎಲ್ಲ ಭಿನ್ನಾಭಿಪ್ರಾಯ ಬಿಟ್ಟು ಕೆಲಸ ಮಾಡ್ತೇವೆ ಅಂದಿದ್ದರು. ಅವರೇ ಈ ಮಾತನ್ನು ಹೇಳಿದ್ದರು. ನಾನು ಸೋತಲ್ಲಿ, ನಾನೇ ಗೆಲ್ಲಿಸಿಕೊಂಡು ಬರುತ್ತೇನೆ ಎಂದು ಕೆ.ಹೆಚ್‌ ಮುನಿಯಪ್ಪ ಪಟ್ಟು ಹಿಡಿದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More