newsfirstkannada.com

×

ಪತ್ನಿಗೆ ಬೇರೊಂದು ಮದುವೆ ಮಾಡಿಸಿದ್ದ ಸೇಡು, 2 ಕ್ವಾರ್ಟರ್ ಎಣ್ಣೆ ಕುಡಿಸಿ ಕೊಂದೇ ಬಿಟ್ಟ.. ಇದು ಕುಚಿಕು ಗೆಳೆಯನ ಮರ್ಡರ್​ ಸ್ಟೋರಿ

Share :

Published November 14, 2023 at 7:35am

    ತರಕಾರಿ ಮಾರ್ಕೆಟ್ ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಸ್ನೇಹಿತರು

    2015ರಲ್ಲಿ‌ ಮದ್ಯವರ್ಜನ ಕೇಂದ್ರಕ್ಕೆ ದಾಖಲಾಗಿದ್ದ ಆರೋಪಿ ವಿಜಯ್

    ಶಿಬಿರ ಮುಗಿಸಿ ಬಂದಾಗ ಪತ್ನಿಗೆ ಬೇರೊಂದು ಮದುವೆ ಮಾಡಿಸಿದ್ದ ಗೆಳೆಯ

ಬೆಂಗಳೂರು: ಕಲಾಸಿಪಾಳ್ಯ ಸುಧಾಹರನ್ ಹತ್ಯೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್. ಕೊಲೆ ಆರೋಪಿ ವಿಜಯ್ ಕುಮಾರ್ ವಿಚಾರಣೆ ವೇಳೆ ಅಸಲಿ ಸತ್ಯ ಬಾಯ್ಬಿಟ್ಟಿದ್ದಾನೆ.

ಸುಧಾಹರನ್ ಮತ್ತು ವಿಜಯ್ ಕುಮಾರ್ ಸ್ನೇಹಿತರಾಗಿದ್ದರು. ಇಬ್ಬರು ಕಲಾಸಿಪಾಳ್ಯದ ತರಕಾರಿ ಮಾರ್ಕೆಟ್ ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ವಿಜಯ್ ಕುಮಾರ್ ಮದ್ಯ ಮತ್ತು ಸಿಗರೇಟ್ ಸೇದುವ ಚಟವಿತ್ತು. ಇದರಿಂದ 2015ರಲ್ಲಿ‌ ವಿಜಯ್ ನನ್ನು ಆತನ ತಾಯಿ ಮದ್ಯವರ್ಜನ ಕೇಂದ್ರಕ್ಕೆ ಸೇರಿಸಿದ್ದರು.

ವಿಜಯ್ ಪತ್ನಿಗೆ ಬೇರೊಂದು ಮದುವೆ

11 ತಿಂಗಳು ವಿಜಯ್ ಕುಮಾರ್ ಮದ್ಯವರ್ಜನ ಕೇಂದ್ರದಲ್ಲಿ ಬಂದಿಯಾಗಿದ್ದ. ಆದರೆ ಈ ವೇಳೆ ಸುಧಾಹರನ್ ವಿಜಯ್ ಪತ್ನಿ ನಂದಿನಿಗೆ ಬೇರೆ ಮದುವೆ ಮಾಡಿಸಿದ್ದ. ಆನಂದ್ ಎಂಬುವವನ ಜೊತೆ ಮದುವೆ ಮಾಡಿಸಿದ್ದನು. ಬಳಿಕ ಮದ್ಯವರ್ಜನ ಕೇಂದ್ರದಿಂದ ಹೊರ ಬಂದಿದ್ದ ವಿಜಯ್ ಗೆ ಈ ವಿಚಾರ ತಿಳಿದು ಶಾಕ್ ಆಗಿದೆ. ಪತ್ನಿ‌ಗೆ ಬೇರೆ ಮದುವೆಯಾಗಿದ್ದರಿಂದ ವಿಜಯ್​ ಡಿಪ್ರೆಶನ್​ಗೆ ಹೋಗಿದ್ದ.

ಸುಧಾಹರನ್ ಬಳಿ ಈ ವಿಚಾರವಾಗಿ ಹಲವು ಬಾರಿ ಜಗಳವಾಡಿದ್ದನು. ನಾಲ್ಕು ತಿಂಗಳ ಹಿಂದೆ ವಿಜಯ್ ತನ್ನ ಪತ್ನಿ ನಂದಿನಿ ಮತ್ತು ಆನಂದ್ ಎಲ್ಲಿದ್ದಾರೆ ಎಂದು ಸುಧಾಹರನ್ ಬಳಿ ಕೇಳಿದ್ದನು. ಈ ವೇಳೆ ಆನಂದ್ ಗೆ ಸುಧಾಹರನ್ ಫೋನ್ ಮಾಡಿದ್ದನು. ಆದರೆ ಫೋನ್ ರಿಸೀವ್ ಮಾಡದೆ ಆನಂದ್ ಮತ್ತು ನಂದಿನಿ ಸುಮ್ಮನಿದ್ದರು.

ಸುಧಾಹರನ್ ಮೇಲೆ ವಿಜಯ್​ಗೆ​ ದ್ವೇಷ

ಪತ್ನಿಗೆ ಮದುವೆ ಮಾಡಿಸಿದ್ದ ಸುಧಾಹರನ್ ಮೇಲೆ ವಿಜಯ್​ ದ್ವೇಷ ಸಾದಿಸಿದ್ದನು. ತನ್ನ ಹೆಂಡತಿಗೆ ಮತ್ತೊಂದು ಮದುವೆ ಮಾಡಿಸಿ ಮೋಸ ಮಾಡಿದಿಯಾ ಎಂದು ಪದೇ ಪದೇ ಜಗಳ ಮಾಡುತ್ತಿದ್ದನು. ಹೆಂಡತಿ ನೆನಪಾದಗೆಲ್ಲ ಸುಧಾಹರನ್ ಜೊತೆಗೆ ಜಗಳವಾಡುತ್ತಿದ್ದನು. ಕೊನೆಗೆ ಸುಧಾಹರನ್ ಹತ್ಯೆ ಮಾಡಲು ವಿಜಯ್ ನಿರ್ಧರಿಸಿದ್ದಾನೆ.

ಮೋಸ ಮಾಡಿದ್ದ ಸುಧಾಹರನ್​ನ ಮುಗಿಸಲು ಸಂಚು ರೂಪಿಸಿದ್ದಾನೆ. ಅದಕ್ಕಾಗಿ ನವಂಬರ್ 11 ರಂದು ಕಲಾಸಿಪಾಳ್ಯ ಮಾರ್ಕೆಟ್ ನಲ್ಲಿ ಸುಧಾಹರನನ್ನು ವಿಜಯ್​ ಭೇಟಿಯಾಗಿದ್ದಾನೆ. ಬಳಿಕ ತನ್ನ ಬಳಿ ಇದ್ದ ಒಂದುವರೆ ಕ್ವಾರ್ಟರ್ ಮದ್ಯದ ಬಾಟಲು ವಿಜಯ್​ ತನ್ನ ಸ್ನೇಹಿತ ಸುಧಾಹರನ್​ಗೆ ನೀಡಿದ್ದಾನೆ. ನನಗೆ ಆರೋಗ್ಯ ಸರಿಯಿಲ್ಲ ನೀನೇ ಕುಡಿಯೆಂದು ಸುಧಾಹರನ್​ನ ಮನವೊಲಿಸಿದ್ದಾನೆ. ನಂತರ ಸುಧಾಹರನ್ ಗೆ ಮತ್ತೊಂದು ಕ್ವಾರ್ಟರ್ ಮದ್ಯ ಕುಡಿಸಿದ್ದಾನೆ.

ವಿಶ್ರಾಂತಿ ಮಾಡೋಣ ಬಾ

ಇಷ್ಟೆಲ್ಲಾ ಆದ ಬಳಿಕ 12 ಗಂಟೆ ಮಧ್ಯಾಹ್ನ ವಿಶ್ರಾಂತಿ ಮಾಡೋಣ ಬಾ ಎಂದು ವಿಜಯ್​​ ‌ಸುಧಾಹರ​​​​​ನನ್ನು ತರಕಾರಿ ಮಾರ್ಕೆಟ್ ಮೇಲ್ಛಾವಣಿಗೆ ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ಮೇಲ್ಛಾವಣಿಯ ಮೆಟ್ಟಿಲ ಮೇಲೆಯೇ ಸುಧಾಹರನ್ ನಿದ್ದೆಗೆ ಜಾರಿದ್ದಾನೆ. ಬಳಿಕ ಸುಧಾಹರನ್​ನ ಎಬ್ಬಿಸಿ ನನ್ನ ಬಳಿ 140 ರೂಪಾಯಿ ‌ಇತ್ತು ಅದು ಕಾಣಿಸುತ್ತಿಲ್ಲ ಎಂದು ಜಗಳ ತೆಗೆದಿದ್ದಾನೆ. ಇದರಿಂದ ಮಾತಿಗೆ ಮಾತು ಬೆಳೆದು ಸುಧಾಹರನ್ ಸಿಟ್ಟಿನಿಂದ ವಿಜಯ್ ಕಪಾಳಕ್ಕೆ ಹೊಡೆದಿದ್ದಾನೆ.

ಬಳಿಕ ಹತ್ಯೆ ಮಾಡಲು ಇದೆ ಸರಿಯಾದ ಸಮಯ ಎಂದು ಭಾವಿಸಿದ ವಿಜಯ್. ತನ್ನ ಬಳಿ ಇದ್ದ ಹಣ್ಣು ಕತ್ತರಿಸುವ ಚಾಕಿನಿಂದ ಸುಧಾಹರನ್ ಕುತ್ತಿಗೆಗೆ ಚುಚ್ಚಿದ್ದಾನೆ. ಈ ವೇಳೆ ಗಾಯಗೊಂಡು ರಕ್ತ ಸ್ರಾವದಿಂದ ಸುಧಾಹರನ್ ಸಾವನಪ್ಪಿದ್ದಾನೆ. ಬಳಿಕ ಸುಧಾಹರನ್ ಗುರುತು ಸಿಗದಂತೆ ಮಾಡಲು ಗೋಣಿಚೀಲ ಸುತ್ತಿ ಬೆಂಕಿ ಹಾಕಿದ್ದ ವಿಜಯ್​ ಎಸ್ಕೇಪ್ ಆಗಿದ್ದನು. ಆದರೀಗ ಪೊಲೀಸ್ ವಿಚಾರಣೆಯಿಂದ ಕೊಲೆ ಹಿಂದಿನ ಅಸಲಿ ಸತ್ಯ ಹೊರಬಿದ್ದಿದೆ. ಆರೋಪಿ ವಿಜಯ್ ಕುಮಾರ್ ತನ್ನ ಬಾಯಾರೆ ನಿಜ ಸಂಗತಿ ಬಾಯ್ಬಿಟ್ಟಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪತ್ನಿಗೆ ಬೇರೊಂದು ಮದುವೆ ಮಾಡಿಸಿದ್ದ ಸೇಡು, 2 ಕ್ವಾರ್ಟರ್ ಎಣ್ಣೆ ಕುಡಿಸಿ ಕೊಂದೇ ಬಿಟ್ಟ.. ಇದು ಕುಚಿಕು ಗೆಳೆಯನ ಮರ್ಡರ್​ ಸ್ಟೋರಿ

https://newsfirstlive.com/wp-content/uploads/2023/11/Vijay-kumar.jpg

    ತರಕಾರಿ ಮಾರ್ಕೆಟ್ ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಸ್ನೇಹಿತರು

    2015ರಲ್ಲಿ‌ ಮದ್ಯವರ್ಜನ ಕೇಂದ್ರಕ್ಕೆ ದಾಖಲಾಗಿದ್ದ ಆರೋಪಿ ವಿಜಯ್

    ಶಿಬಿರ ಮುಗಿಸಿ ಬಂದಾಗ ಪತ್ನಿಗೆ ಬೇರೊಂದು ಮದುವೆ ಮಾಡಿಸಿದ್ದ ಗೆಳೆಯ

ಬೆಂಗಳೂರು: ಕಲಾಸಿಪಾಳ್ಯ ಸುಧಾಹರನ್ ಹತ್ಯೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್. ಕೊಲೆ ಆರೋಪಿ ವಿಜಯ್ ಕುಮಾರ್ ವಿಚಾರಣೆ ವೇಳೆ ಅಸಲಿ ಸತ್ಯ ಬಾಯ್ಬಿಟ್ಟಿದ್ದಾನೆ.

ಸುಧಾಹರನ್ ಮತ್ತು ವಿಜಯ್ ಕುಮಾರ್ ಸ್ನೇಹಿತರಾಗಿದ್ದರು. ಇಬ್ಬರು ಕಲಾಸಿಪಾಳ್ಯದ ತರಕಾರಿ ಮಾರ್ಕೆಟ್ ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ವಿಜಯ್ ಕುಮಾರ್ ಮದ್ಯ ಮತ್ತು ಸಿಗರೇಟ್ ಸೇದುವ ಚಟವಿತ್ತು. ಇದರಿಂದ 2015ರಲ್ಲಿ‌ ವಿಜಯ್ ನನ್ನು ಆತನ ತಾಯಿ ಮದ್ಯವರ್ಜನ ಕೇಂದ್ರಕ್ಕೆ ಸೇರಿಸಿದ್ದರು.

ವಿಜಯ್ ಪತ್ನಿಗೆ ಬೇರೊಂದು ಮದುವೆ

11 ತಿಂಗಳು ವಿಜಯ್ ಕುಮಾರ್ ಮದ್ಯವರ್ಜನ ಕೇಂದ್ರದಲ್ಲಿ ಬಂದಿಯಾಗಿದ್ದ. ಆದರೆ ಈ ವೇಳೆ ಸುಧಾಹರನ್ ವಿಜಯ್ ಪತ್ನಿ ನಂದಿನಿಗೆ ಬೇರೆ ಮದುವೆ ಮಾಡಿಸಿದ್ದ. ಆನಂದ್ ಎಂಬುವವನ ಜೊತೆ ಮದುವೆ ಮಾಡಿಸಿದ್ದನು. ಬಳಿಕ ಮದ್ಯವರ್ಜನ ಕೇಂದ್ರದಿಂದ ಹೊರ ಬಂದಿದ್ದ ವಿಜಯ್ ಗೆ ಈ ವಿಚಾರ ತಿಳಿದು ಶಾಕ್ ಆಗಿದೆ. ಪತ್ನಿ‌ಗೆ ಬೇರೆ ಮದುವೆಯಾಗಿದ್ದರಿಂದ ವಿಜಯ್​ ಡಿಪ್ರೆಶನ್​ಗೆ ಹೋಗಿದ್ದ.

ಸುಧಾಹರನ್ ಬಳಿ ಈ ವಿಚಾರವಾಗಿ ಹಲವು ಬಾರಿ ಜಗಳವಾಡಿದ್ದನು. ನಾಲ್ಕು ತಿಂಗಳ ಹಿಂದೆ ವಿಜಯ್ ತನ್ನ ಪತ್ನಿ ನಂದಿನಿ ಮತ್ತು ಆನಂದ್ ಎಲ್ಲಿದ್ದಾರೆ ಎಂದು ಸುಧಾಹರನ್ ಬಳಿ ಕೇಳಿದ್ದನು. ಈ ವೇಳೆ ಆನಂದ್ ಗೆ ಸುಧಾಹರನ್ ಫೋನ್ ಮಾಡಿದ್ದನು. ಆದರೆ ಫೋನ್ ರಿಸೀವ್ ಮಾಡದೆ ಆನಂದ್ ಮತ್ತು ನಂದಿನಿ ಸುಮ್ಮನಿದ್ದರು.

ಸುಧಾಹರನ್ ಮೇಲೆ ವಿಜಯ್​ಗೆ​ ದ್ವೇಷ

ಪತ್ನಿಗೆ ಮದುವೆ ಮಾಡಿಸಿದ್ದ ಸುಧಾಹರನ್ ಮೇಲೆ ವಿಜಯ್​ ದ್ವೇಷ ಸಾದಿಸಿದ್ದನು. ತನ್ನ ಹೆಂಡತಿಗೆ ಮತ್ತೊಂದು ಮದುವೆ ಮಾಡಿಸಿ ಮೋಸ ಮಾಡಿದಿಯಾ ಎಂದು ಪದೇ ಪದೇ ಜಗಳ ಮಾಡುತ್ತಿದ್ದನು. ಹೆಂಡತಿ ನೆನಪಾದಗೆಲ್ಲ ಸುಧಾಹರನ್ ಜೊತೆಗೆ ಜಗಳವಾಡುತ್ತಿದ್ದನು. ಕೊನೆಗೆ ಸುಧಾಹರನ್ ಹತ್ಯೆ ಮಾಡಲು ವಿಜಯ್ ನಿರ್ಧರಿಸಿದ್ದಾನೆ.

ಮೋಸ ಮಾಡಿದ್ದ ಸುಧಾಹರನ್​ನ ಮುಗಿಸಲು ಸಂಚು ರೂಪಿಸಿದ್ದಾನೆ. ಅದಕ್ಕಾಗಿ ನವಂಬರ್ 11 ರಂದು ಕಲಾಸಿಪಾಳ್ಯ ಮಾರ್ಕೆಟ್ ನಲ್ಲಿ ಸುಧಾಹರನನ್ನು ವಿಜಯ್​ ಭೇಟಿಯಾಗಿದ್ದಾನೆ. ಬಳಿಕ ತನ್ನ ಬಳಿ ಇದ್ದ ಒಂದುವರೆ ಕ್ವಾರ್ಟರ್ ಮದ್ಯದ ಬಾಟಲು ವಿಜಯ್​ ತನ್ನ ಸ್ನೇಹಿತ ಸುಧಾಹರನ್​ಗೆ ನೀಡಿದ್ದಾನೆ. ನನಗೆ ಆರೋಗ್ಯ ಸರಿಯಿಲ್ಲ ನೀನೇ ಕುಡಿಯೆಂದು ಸುಧಾಹರನ್​ನ ಮನವೊಲಿಸಿದ್ದಾನೆ. ನಂತರ ಸುಧಾಹರನ್ ಗೆ ಮತ್ತೊಂದು ಕ್ವಾರ್ಟರ್ ಮದ್ಯ ಕುಡಿಸಿದ್ದಾನೆ.

ವಿಶ್ರಾಂತಿ ಮಾಡೋಣ ಬಾ

ಇಷ್ಟೆಲ್ಲಾ ಆದ ಬಳಿಕ 12 ಗಂಟೆ ಮಧ್ಯಾಹ್ನ ವಿಶ್ರಾಂತಿ ಮಾಡೋಣ ಬಾ ಎಂದು ವಿಜಯ್​​ ‌ಸುಧಾಹರ​​​​​ನನ್ನು ತರಕಾರಿ ಮಾರ್ಕೆಟ್ ಮೇಲ್ಛಾವಣಿಗೆ ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ಮೇಲ್ಛಾವಣಿಯ ಮೆಟ್ಟಿಲ ಮೇಲೆಯೇ ಸುಧಾಹರನ್ ನಿದ್ದೆಗೆ ಜಾರಿದ್ದಾನೆ. ಬಳಿಕ ಸುಧಾಹರನ್​ನ ಎಬ್ಬಿಸಿ ನನ್ನ ಬಳಿ 140 ರೂಪಾಯಿ ‌ಇತ್ತು ಅದು ಕಾಣಿಸುತ್ತಿಲ್ಲ ಎಂದು ಜಗಳ ತೆಗೆದಿದ್ದಾನೆ. ಇದರಿಂದ ಮಾತಿಗೆ ಮಾತು ಬೆಳೆದು ಸುಧಾಹರನ್ ಸಿಟ್ಟಿನಿಂದ ವಿಜಯ್ ಕಪಾಳಕ್ಕೆ ಹೊಡೆದಿದ್ದಾನೆ.

ಬಳಿಕ ಹತ್ಯೆ ಮಾಡಲು ಇದೆ ಸರಿಯಾದ ಸಮಯ ಎಂದು ಭಾವಿಸಿದ ವಿಜಯ್. ತನ್ನ ಬಳಿ ಇದ್ದ ಹಣ್ಣು ಕತ್ತರಿಸುವ ಚಾಕಿನಿಂದ ಸುಧಾಹರನ್ ಕುತ್ತಿಗೆಗೆ ಚುಚ್ಚಿದ್ದಾನೆ. ಈ ವೇಳೆ ಗಾಯಗೊಂಡು ರಕ್ತ ಸ್ರಾವದಿಂದ ಸುಧಾಹರನ್ ಸಾವನಪ್ಪಿದ್ದಾನೆ. ಬಳಿಕ ಸುಧಾಹರನ್ ಗುರುತು ಸಿಗದಂತೆ ಮಾಡಲು ಗೋಣಿಚೀಲ ಸುತ್ತಿ ಬೆಂಕಿ ಹಾಕಿದ್ದ ವಿಜಯ್​ ಎಸ್ಕೇಪ್ ಆಗಿದ್ದನು. ಆದರೀಗ ಪೊಲೀಸ್ ವಿಚಾರಣೆಯಿಂದ ಕೊಲೆ ಹಿಂದಿನ ಅಸಲಿ ಸತ್ಯ ಹೊರಬಿದ್ದಿದೆ. ಆರೋಪಿ ವಿಜಯ್ ಕುಮಾರ್ ತನ್ನ ಬಾಯಾರೆ ನಿಜ ಸಂಗತಿ ಬಾಯ್ಬಿಟ್ಟಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More