ಚೂರಲ್ಮಲೆಯಲ್ಲಿ ವಾಸವಿದ್ದ ಚಾಮರಾಜನಗರ ಮೂಲದ ಕುಟುಂಬ
ಹಸುವಿನ ಕೂಗಾಟದ ಶಬ್ಧಕ್ಕೆ ನಿದ್ದೆಯಿಂದ ಎಚ್ಚರಗೊಂಡ ಮನೆಯವರು
ಕೆಲವೇ ನಿಮಿಷಕ್ಕೆ ಮನೆ, ವಾಹನ ಎಲ್ಲವೂ ಕೊಚ್ಚಿಕೊಂಡು ಹೋಗಿದೆ
ಚಾಮರಾಜನಗರ: ಕೊಚ್ಚಿ ಹೋದ ಮನೆಗಳು, ಕಂಡು ಕೇಳರಿಯದ ಭೀಕರ ಪ್ರವಾಹ ಕೇರಳದಲ್ಲಿ ಸಂಭವಿಸಿದೆ. ವಯನಾಡ್ ಭೂಕುಸಿತದಲ್ಲಿ ಸಿಲುಕಿದವರು ಇನ್ನೂ ಅಪಾಯದಲ್ಲೇ ಇದ್ದಾರೆ. ರಕ್ಷಣಾ ಕಾರ್ಯ ಚುರುಕಾಗಿದ್ದು, ಬದುಕುಳಿದವರನ್ನು ಸುರಕ್ಷಿತ ಜಾಗಗಳಿಗೆ ಶಿಫ್ಟ್ ಮಾಡಲಾಗಿದೆ.
ಕೇರಳದ ಚೂರಲ್ಮಲೆಯಲ್ಲಿ ವಾಸವಿದ್ದ ಚಾಮರಾಜನಗರ ಮೂಲದ ಕುಟುಂಬವೊಂದು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದು ಕರ್ನಾಟಕಕ್ಕೆ ಆಗಮಿಸಿದ್ದಾರೆ. ಈ ಕುಟುಂಬಸ್ಥರು ಕೊಟ್ಟಿಗೆಯಲ್ಲಿದ್ದ ಹಸುವಿನ ಕೂಗಿಗೆ ಪಾರಾಗಿರೋದು ಮತ್ತೊಂದು ಅಚ್ಚರಿಗೆ ಕಾರಣವಾಗಿದೆ.
ಇದನ್ನೂ ಓದಿ: ‘ಅಮ್ಮನಿಗೆ ಕ್ಯಾನ್ಸರ್, ಅತ್ತಿಗೆ ಗರ್ಭಿಣಿ..’ ಯಾರೇ ಫೋನ್ ಮಾಡಿದರೂ ನನ್ನವರು ಎಲ್ಲಿ ಅಂತಿದ್ದಾರೆ ಜಿಷ್ಣು..!
ಚೂರಲ್ಮಲೆಯಲ್ಲಿ ವಿನೋದ್ ಪತ್ನಿ ಪ್ರವಿದಾ ಅವರು ನ್ಯೂಸ್ ಫಸ್ಟ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಮಧ್ಯರಾತ್ರಿ ಹಸುವಿನ ಕೂಗಾಟದ ಶಬ್ಧದಿಂದ ಪ್ರವಿದಾ ಅವರ ಪತಿ ವಿನೋದ್ ಮಧ್ಯರಾತ್ರಿ ಎಚ್ಚರಗೊಂಡಿದ್ದಾರೆ. ಹಸುವಿನ ಕೊಟ್ಟಿಗೆಗೆ ನೀರು ದಿಢೀರನೇ ಪ್ರವಾಹ ನೀರು ನುಗ್ಗಿದೆ. ನೀರಿನ ಪ್ರಮಾಣ ಹೆಚ್ಚಾದ ಮೇಲೆ ಹಸುವನ್ನು ಬಿಚ್ಚುವಾಗ ದುರಂತ ಸಂಭವಿಸಿರೋದು ಗೊತ್ತಾಗಿದೆ. ಬಳಿಕ ಮನೆಯಲ್ಲಿ ಇದ್ದ ಜಯಶ್ರೀ, ಸಿದ್ದರಾಜು, ಮಹೇಶ್, ಗೌರಮ್ಮ ಎಂಬುವವರನ್ನು ಎದ್ದೇಳಿಸಿಕೊಂಡು ಗುಡ್ಡದ ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ.
ಇದಾದ ಕೂಡಲೇ ವಿನೋದ್ ಅವರು ಮೆಪಾಡಿಯ ಅತ್ತೆ ಮನೆಯಲ್ಲಿದ್ದ ಪತ್ನಿ ಪ್ರವಿದಾಗೂ ಇಲ್ಲಿ ಎಲ್ಲಾ ಕೊಚ್ಚಿಕೊಂಡು ಹೋಗುತ್ತಿದೆ ಎಂದು ಭೂ ಕುಸಿತದ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಮಾಹಿತಿ ತಿಳಿಯುತ್ತಿದ್ದಂತೆ ವಿನೋದ್ ಪತ್ನಿ ಪ್ರವಿದಾ, ಅತ್ತೆ ಲಕ್ಷ್ಮಿ, ಪುಟ್ಟಸಿದ್ದಮ್ಮನವರು ಸುರಕ್ಷಿತ ಸ್ಥಳಕ್ಕೆ ತೆರಳಿ ಜೀವ ಉಳಿಸಿಕೊಂಡಿದ್ದಾರೆ.
ಇದನ್ನೂ ಓದಿ: ರಾತ್ರಿ ಇದ್ದ ಮನೆ ಬೆಳಗ್ಗೆ ಇಲ್ಲ.. ಮನೆಯವರೂ ಇಲ್ಲ; ಒಂದೇ ಕುಟುಂಬದ 25 ಮಂದಿ ಕಣ್ಮರೆ; ಉಳಿದವರು ಹೇಳಿದ್ದೇನು?
ಮಧ್ಯರಾತ್ರಿ ನನ್ನ ಗಂಡ ವಿನೋದ್ ನನಗೆ ಕರೆ ಮಾಡಿದ್ದರು. ನಾನಿನ್ನು 2 ತಿಂಗಳ ಮಗುವನ್ನ ನೋಡಲು ಸಾಧ್ಯವಿಲ್ಲ. ಫಸ್ಟ್ ಪಾಪುವನ್ನು ಇಲ್ಲಿದೆ ದೂರ ಕರೆದುಕೊಂಡು ಎಲ್ಲಿಗಾದ್ರೂ ಹೋಗು ಎಂದು ಅಳುತ್ತಿದ್ದರು. ಕೆಲವೇ ಸಮಯದಲ್ಲಿ ವಿನೋದ್ ಮನೆ, ವಾಹನ ಎಲ್ಲವೂ ಕೊಚ್ಚಿಕೊಂಡು ಹೋಗಿದೆ. ಭೂಮಿಯಡಿ ಮನೆ, ವಾಹನ ಎಲ್ಲವೂ ಹುದುಗಿ ಹೋಗಿದೆ ಎಂದಿದ್ದಾರೆ.
ವಿನೋದ್ ಪತ್ನಿ ಬಾಣಂತಿ ಆದ್ದರಿಂದ 2 ತಿಂಗಳ ಹಸುಗೂಸು ಸೇರಿ ಇಡೀ ಕುಟುಂಬ ಕೇರಳದಿಂದ ಚಾಮರಾಜನಗರಕ್ಕೆ ಸುರಕ್ಷಿತವಾಗಿ ಮರಳಿದೆ. ಕೇರಳದ ಚೂರಲ್ ಮಲೆಯಲ್ಲಿ ವಿನೋದ್ ಹಾಗೂ ಕುಟುಂಬ ವಾಸವಿದ್ದು, ನಿನ್ನೆ ಸಂಜೆ ಕರ್ನಾಟಕಕ್ಕೆ ಮರಳಿದ್ದಾರೆ. ಆದ್ರೆ ಇವರ ಪತಿ ವಿನೋದ್ ಅವರು ಇನ್ನೂ ಚೂರಲ್ ಮಲೆಯ ಭೂಕುಸಿತದ ಜಾಗದಲ್ಲೇ ಸಿಲುಕಿದ್ದಾರೆ. ಅವರ ಕಾಲಿಗೆ ಸ್ವಲ್ಪ ಪೆಟ್ಟಾಗಿದೆ. ಅವರಿರೋ ಕಡೆ ಸೇತುವೆ ಕೊಚ್ಚಿ ಕೊಂಡು ಹೋಗಿದ್ದು, ಸಂಪರ್ಕ್ ಬಂದ್ ಆಗಿದೆ. ಈಗ ಮೆಡಿಸನ್ ಸಿಕ್ಕಿರಬಹುದು. ಅವರು ಈಗ ಕಾಲ್ ರಿಸೀವ್ ಮಾಡುತ್ತಿಲ್ಲ ಎಂದು ಪ್ರವಿದಾ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಚೂರಲ್ಮಲೆಯಲ್ಲಿ ವಾಸವಿದ್ದ ಚಾಮರಾಜನಗರ ಮೂಲದ ಕುಟುಂಬ
ಹಸುವಿನ ಕೂಗಾಟದ ಶಬ್ಧಕ್ಕೆ ನಿದ್ದೆಯಿಂದ ಎಚ್ಚರಗೊಂಡ ಮನೆಯವರು
ಕೆಲವೇ ನಿಮಿಷಕ್ಕೆ ಮನೆ, ವಾಹನ ಎಲ್ಲವೂ ಕೊಚ್ಚಿಕೊಂಡು ಹೋಗಿದೆ
ಚಾಮರಾಜನಗರ: ಕೊಚ್ಚಿ ಹೋದ ಮನೆಗಳು, ಕಂಡು ಕೇಳರಿಯದ ಭೀಕರ ಪ್ರವಾಹ ಕೇರಳದಲ್ಲಿ ಸಂಭವಿಸಿದೆ. ವಯನಾಡ್ ಭೂಕುಸಿತದಲ್ಲಿ ಸಿಲುಕಿದವರು ಇನ್ನೂ ಅಪಾಯದಲ್ಲೇ ಇದ್ದಾರೆ. ರಕ್ಷಣಾ ಕಾರ್ಯ ಚುರುಕಾಗಿದ್ದು, ಬದುಕುಳಿದವರನ್ನು ಸುರಕ್ಷಿತ ಜಾಗಗಳಿಗೆ ಶಿಫ್ಟ್ ಮಾಡಲಾಗಿದೆ.
ಕೇರಳದ ಚೂರಲ್ಮಲೆಯಲ್ಲಿ ವಾಸವಿದ್ದ ಚಾಮರಾಜನಗರ ಮೂಲದ ಕುಟುಂಬವೊಂದು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದು ಕರ್ನಾಟಕಕ್ಕೆ ಆಗಮಿಸಿದ್ದಾರೆ. ಈ ಕುಟುಂಬಸ್ಥರು ಕೊಟ್ಟಿಗೆಯಲ್ಲಿದ್ದ ಹಸುವಿನ ಕೂಗಿಗೆ ಪಾರಾಗಿರೋದು ಮತ್ತೊಂದು ಅಚ್ಚರಿಗೆ ಕಾರಣವಾಗಿದೆ.
ಇದನ್ನೂ ಓದಿ: ‘ಅಮ್ಮನಿಗೆ ಕ್ಯಾನ್ಸರ್, ಅತ್ತಿಗೆ ಗರ್ಭಿಣಿ..’ ಯಾರೇ ಫೋನ್ ಮಾಡಿದರೂ ನನ್ನವರು ಎಲ್ಲಿ ಅಂತಿದ್ದಾರೆ ಜಿಷ್ಣು..!
ಚೂರಲ್ಮಲೆಯಲ್ಲಿ ವಿನೋದ್ ಪತ್ನಿ ಪ್ರವಿದಾ ಅವರು ನ್ಯೂಸ್ ಫಸ್ಟ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಮಧ್ಯರಾತ್ರಿ ಹಸುವಿನ ಕೂಗಾಟದ ಶಬ್ಧದಿಂದ ಪ್ರವಿದಾ ಅವರ ಪತಿ ವಿನೋದ್ ಮಧ್ಯರಾತ್ರಿ ಎಚ್ಚರಗೊಂಡಿದ್ದಾರೆ. ಹಸುವಿನ ಕೊಟ್ಟಿಗೆಗೆ ನೀರು ದಿಢೀರನೇ ಪ್ರವಾಹ ನೀರು ನುಗ್ಗಿದೆ. ನೀರಿನ ಪ್ರಮಾಣ ಹೆಚ್ಚಾದ ಮೇಲೆ ಹಸುವನ್ನು ಬಿಚ್ಚುವಾಗ ದುರಂತ ಸಂಭವಿಸಿರೋದು ಗೊತ್ತಾಗಿದೆ. ಬಳಿಕ ಮನೆಯಲ್ಲಿ ಇದ್ದ ಜಯಶ್ರೀ, ಸಿದ್ದರಾಜು, ಮಹೇಶ್, ಗೌರಮ್ಮ ಎಂಬುವವರನ್ನು ಎದ್ದೇಳಿಸಿಕೊಂಡು ಗುಡ್ಡದ ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ.
ಇದಾದ ಕೂಡಲೇ ವಿನೋದ್ ಅವರು ಮೆಪಾಡಿಯ ಅತ್ತೆ ಮನೆಯಲ್ಲಿದ್ದ ಪತ್ನಿ ಪ್ರವಿದಾಗೂ ಇಲ್ಲಿ ಎಲ್ಲಾ ಕೊಚ್ಚಿಕೊಂಡು ಹೋಗುತ್ತಿದೆ ಎಂದು ಭೂ ಕುಸಿತದ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಮಾಹಿತಿ ತಿಳಿಯುತ್ತಿದ್ದಂತೆ ವಿನೋದ್ ಪತ್ನಿ ಪ್ರವಿದಾ, ಅತ್ತೆ ಲಕ್ಷ್ಮಿ, ಪುಟ್ಟಸಿದ್ದಮ್ಮನವರು ಸುರಕ್ಷಿತ ಸ್ಥಳಕ್ಕೆ ತೆರಳಿ ಜೀವ ಉಳಿಸಿಕೊಂಡಿದ್ದಾರೆ.
ಇದನ್ನೂ ಓದಿ: ರಾತ್ರಿ ಇದ್ದ ಮನೆ ಬೆಳಗ್ಗೆ ಇಲ್ಲ.. ಮನೆಯವರೂ ಇಲ್ಲ; ಒಂದೇ ಕುಟುಂಬದ 25 ಮಂದಿ ಕಣ್ಮರೆ; ಉಳಿದವರು ಹೇಳಿದ್ದೇನು?
ಮಧ್ಯರಾತ್ರಿ ನನ್ನ ಗಂಡ ವಿನೋದ್ ನನಗೆ ಕರೆ ಮಾಡಿದ್ದರು. ನಾನಿನ್ನು 2 ತಿಂಗಳ ಮಗುವನ್ನ ನೋಡಲು ಸಾಧ್ಯವಿಲ್ಲ. ಫಸ್ಟ್ ಪಾಪುವನ್ನು ಇಲ್ಲಿದೆ ದೂರ ಕರೆದುಕೊಂಡು ಎಲ್ಲಿಗಾದ್ರೂ ಹೋಗು ಎಂದು ಅಳುತ್ತಿದ್ದರು. ಕೆಲವೇ ಸಮಯದಲ್ಲಿ ವಿನೋದ್ ಮನೆ, ವಾಹನ ಎಲ್ಲವೂ ಕೊಚ್ಚಿಕೊಂಡು ಹೋಗಿದೆ. ಭೂಮಿಯಡಿ ಮನೆ, ವಾಹನ ಎಲ್ಲವೂ ಹುದುಗಿ ಹೋಗಿದೆ ಎಂದಿದ್ದಾರೆ.
ವಿನೋದ್ ಪತ್ನಿ ಬಾಣಂತಿ ಆದ್ದರಿಂದ 2 ತಿಂಗಳ ಹಸುಗೂಸು ಸೇರಿ ಇಡೀ ಕುಟುಂಬ ಕೇರಳದಿಂದ ಚಾಮರಾಜನಗರಕ್ಕೆ ಸುರಕ್ಷಿತವಾಗಿ ಮರಳಿದೆ. ಕೇರಳದ ಚೂರಲ್ ಮಲೆಯಲ್ಲಿ ವಿನೋದ್ ಹಾಗೂ ಕುಟುಂಬ ವಾಸವಿದ್ದು, ನಿನ್ನೆ ಸಂಜೆ ಕರ್ನಾಟಕಕ್ಕೆ ಮರಳಿದ್ದಾರೆ. ಆದ್ರೆ ಇವರ ಪತಿ ವಿನೋದ್ ಅವರು ಇನ್ನೂ ಚೂರಲ್ ಮಲೆಯ ಭೂಕುಸಿತದ ಜಾಗದಲ್ಲೇ ಸಿಲುಕಿದ್ದಾರೆ. ಅವರ ಕಾಲಿಗೆ ಸ್ವಲ್ಪ ಪೆಟ್ಟಾಗಿದೆ. ಅವರಿರೋ ಕಡೆ ಸೇತುವೆ ಕೊಚ್ಚಿ ಕೊಂಡು ಹೋಗಿದ್ದು, ಸಂಪರ್ಕ್ ಬಂದ್ ಆಗಿದೆ. ಈಗ ಮೆಡಿಸನ್ ಸಿಕ್ಕಿರಬಹುದು. ಅವರು ಈಗ ಕಾಲ್ ರಿಸೀವ್ ಮಾಡುತ್ತಿಲ್ಲ ಎಂದು ಪ್ರವಿದಾ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ