newsfirstkannada.com

ಸೈಕ್ಲೋನ್​ ಎಫೆಕ್ಟ್: ಅಂಡಮಾನ್​ ನಿಕೋಬಾರ್​​ನಲ್ಲಿ ಸಿಕ್ಕಿಬಿದ್ದ ಕನ್ನಡಿಗರು! ನಿಮ್ಮವ್ರು ಇದ್ದಾರಾ?

Share :

Published May 27, 2024 at 8:17pm

    ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಸೃಷ್ಟಿಯಾಗಿದ ರೆಮಲ್ ಸೈಕ್ಲೋನ್​​

    ಭಾನುವಾರ ಮಧ್ಯರಾತ್ರಿ ಪಶ್ಚಿಮ ಬಂಗಾಳಕ್ಕೆ ಅಪ್ಪಳಿಸಿದ ರೆಮೆಲ್​ ಚಂಡಮಾರುತ..!

    ಊಟ ನೀರಿಲ್ಲದೆ ಅಂಡಮಾನ್​​ ನಿಕೋಬಾರ್​ನಲ್ಲಿ ಸಂಕಷ್ಟಕ್ಕೆ ಸಿಲುಕಿದ ಕನ್ನಡಿಗರು

ಮೈಸೂರು: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಸೃಷ್ಟಿಯಾಗಿರೋ ರೆಮಲ್ ಚಂಡಮಾರುತ ಭೂಸ್ಪರ್ಶ ಮಾಡಿದೆ. ಭಾನುವಾರ ಮಧ್ಯರಾತ್ರಿ ಪಶ್ಚಿಮ ಬಂಗಾಳಕ್ಕೆ ಚಂಡಮಾರುತ ಅಪ್ಪಳಿಸಿದ್ದು, ಇದರ ಪರಿಣಾಮ ವಿಮಾನಯಾನ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ. ಹಾಗಾಗಿ ಅಂಡಮಾನ್​​ ನಿಕೋಬಾರ್​ನಲ್ಲಿ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇನ್ನು, ಮೈಸೂರು, ದಾವಣಗೆರೆ ಸೇರಿ ರಾಜ್ಯದ ಹಲವು ಭಾಗಗಳಿಂದ ಅಂಡಮಾನ್ ನಿಕೋಬಾರ್​ಗೆ ಕನ್ನಡಿಗರು ತೆರಳಿದ್ದರು. ಆದರೆ, ರೆಮಲ್ ಚಂಡಮಾರುತ ಎಫೆಕ್ಟ್​ನಿಂದ ವಿಸ್ತಾರ ವಿಮಾನ ಯಾನ ಸೇವೆಯಲ್ಲಿ ವ್ಯತ್ಯಯ ಆಗಿದೆ. ಹಾಗಾಗಿ ಬೆಳಗ್ಗೆ 11 ಗಂಟೆಗೆ ಏರ್ಪೋರ್ಟ್​ಗೆ ಬಂದಿದ್ದ 180ಕ್ಕೂ ಹೆಚ್ಚು ಮಂದಿಗೆ ಸಂಕಷ್ಟ ಎದುರಾಗಿದೆ. ಸಂಜೆಯಾದ್ರೂ ಇನ್ನೂ ವಿಮಾನ ಬಾರದ ಕಾರಣ ಆಹಾರ ಮತ್ತು ನೀರು ಸಿಗದೆ ಪರದಾಡುತ್ತಿದ್ದಾರೆ.

ನ್ಯೂಸ್​ಫಸ್ಟ್​ ಜತೆಗೆ ಮಾತಾಡಿದ ಮೈಸೂರು ಮೂಲದ ನಿವೃತ್ತ ಪ್ರಾಂಶುಪಾಲರಾದ ಪರಮೇಶ್ ಎಂಬುವವರು ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದೇವೆ. ನಮ್ಮ ನೆರವಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಬರಬೇಕಿದೆ ಎಂದಿದ್ದಾರೆ.

ಇದನ್ನೂ ಓದಿ: ‘ನೀನೊಬ್ಬ ಜೋಕರ್​​’- ಕೊಹ್ಲಿ ಬಗ್ಗೆ ಮಾತಾಡಿದ ರಾಯುಡುಗೆ ಬೂತ ಬಿಡಿಸಿದ ಕೆವಿನ್​ ಪೀಟರ್ಸನ್!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಸೈಕ್ಲೋನ್​ ಎಫೆಕ್ಟ್: ಅಂಡಮಾನ್​ ನಿಕೋಬಾರ್​​ನಲ್ಲಿ ಸಿಕ್ಕಿಬಿದ್ದ ಕನ್ನಡಿಗರು! ನಿಮ್ಮವ್ರು ಇದ್ದಾರಾ?

https://newsfirstlive.com/wp-content/uploads/2024/05/Andaman-Nicobar.jpg

    ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಸೃಷ್ಟಿಯಾಗಿದ ರೆಮಲ್ ಸೈಕ್ಲೋನ್​​

    ಭಾನುವಾರ ಮಧ್ಯರಾತ್ರಿ ಪಶ್ಚಿಮ ಬಂಗಾಳಕ್ಕೆ ಅಪ್ಪಳಿಸಿದ ರೆಮೆಲ್​ ಚಂಡಮಾರುತ..!

    ಊಟ ನೀರಿಲ್ಲದೆ ಅಂಡಮಾನ್​​ ನಿಕೋಬಾರ್​ನಲ್ಲಿ ಸಂಕಷ್ಟಕ್ಕೆ ಸಿಲುಕಿದ ಕನ್ನಡಿಗರು

ಮೈಸೂರು: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಸೃಷ್ಟಿಯಾಗಿರೋ ರೆಮಲ್ ಚಂಡಮಾರುತ ಭೂಸ್ಪರ್ಶ ಮಾಡಿದೆ. ಭಾನುವಾರ ಮಧ್ಯರಾತ್ರಿ ಪಶ್ಚಿಮ ಬಂಗಾಳಕ್ಕೆ ಚಂಡಮಾರುತ ಅಪ್ಪಳಿಸಿದ್ದು, ಇದರ ಪರಿಣಾಮ ವಿಮಾನಯಾನ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ. ಹಾಗಾಗಿ ಅಂಡಮಾನ್​​ ನಿಕೋಬಾರ್​ನಲ್ಲಿ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇನ್ನು, ಮೈಸೂರು, ದಾವಣಗೆರೆ ಸೇರಿ ರಾಜ್ಯದ ಹಲವು ಭಾಗಗಳಿಂದ ಅಂಡಮಾನ್ ನಿಕೋಬಾರ್​ಗೆ ಕನ್ನಡಿಗರು ತೆರಳಿದ್ದರು. ಆದರೆ, ರೆಮಲ್ ಚಂಡಮಾರುತ ಎಫೆಕ್ಟ್​ನಿಂದ ವಿಸ್ತಾರ ವಿಮಾನ ಯಾನ ಸೇವೆಯಲ್ಲಿ ವ್ಯತ್ಯಯ ಆಗಿದೆ. ಹಾಗಾಗಿ ಬೆಳಗ್ಗೆ 11 ಗಂಟೆಗೆ ಏರ್ಪೋರ್ಟ್​ಗೆ ಬಂದಿದ್ದ 180ಕ್ಕೂ ಹೆಚ್ಚು ಮಂದಿಗೆ ಸಂಕಷ್ಟ ಎದುರಾಗಿದೆ. ಸಂಜೆಯಾದ್ರೂ ಇನ್ನೂ ವಿಮಾನ ಬಾರದ ಕಾರಣ ಆಹಾರ ಮತ್ತು ನೀರು ಸಿಗದೆ ಪರದಾಡುತ್ತಿದ್ದಾರೆ.

ನ್ಯೂಸ್​ಫಸ್ಟ್​ ಜತೆಗೆ ಮಾತಾಡಿದ ಮೈಸೂರು ಮೂಲದ ನಿವೃತ್ತ ಪ್ರಾಂಶುಪಾಲರಾದ ಪರಮೇಶ್ ಎಂಬುವವರು ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದೇವೆ. ನಮ್ಮ ನೆರವಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಬರಬೇಕಿದೆ ಎಂದಿದ್ದಾರೆ.

ಇದನ್ನೂ ಓದಿ: ‘ನೀನೊಬ್ಬ ಜೋಕರ್​​’- ಕೊಹ್ಲಿ ಬಗ್ಗೆ ಮಾತಾಡಿದ ರಾಯುಡುಗೆ ಬೂತ ಬಿಡಿಸಿದ ಕೆವಿನ್​ ಪೀಟರ್ಸನ್!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Load More