ವಿನೋದ್ ಸಾವಿನ ಸುದ್ದಿ ಕೇಳಿ ನಿವಾಸದತ್ತ ದೌಡಾಯಿಸಿದ ಚಿತ್ರರಂಗದ ಗಣ್ಯರು
ಪ್ರೀತಿಯ ಪತಿ ವಿನೋದ್ ಅವರನ್ನು ಕಳೆದುಕೊಂಡ ಪತ್ನಿ ಗೀತಾ ಕಣ್ಣೀರು
ಜನಪ್ರಿಯ ಧಾರಾವಾಹಿಗಳನ್ನು ನಿರ್ದೇಶನ ಮಾಡಿರುವ ವಿನೋದ್ ದೋಂಡಳೆ
ಬೆಂಗಳೂರು: ಕನ್ನಡ ಕಿರುತೆರೆಯ ಖ್ಯಾತ ನಿರ್ದೇಶಕ ವಿನೋದ್ ದೋಂಡಾಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬರೋಬ್ಬರಿ 20 ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ಕೆಲಸ ಮಾಡುತ್ತಿದ್ದ ನಿರ್ದೇಶಕ ವಿನೋದ್ ದೋಂಡಾಲೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿರೋ ನಿರ್ದೇಶಕ ವಿನೋದ್ ದೋಂಡಾಲೆ ನಿವಾಸದಲ್ಲಿ ನೀರವ ಮೌನ ಆವರಿಸಿದೆ. ವಿನೋದ್ ಆತ್ಮಹತ್ಯೆ ವಿಚಾರ ಕೇಳಿ ನಿವಾಸದ ಕಡೆಗೆ ಆಪ್ತರು, ಕುಟುಂಬಸ್ಥರು ದೌಡಾಯಿಸಿದ್ದಾರೆ. ನಾಳೆ ವಿನೋದ್ ದೋಂಡಾಳೆ ಅವರ ಅಂತ್ಯಕ್ರಿಯೆ ನಡೆಯಲಿದೆ.
ಪ್ರೀತಿಯ ಪತಿ ವಿನೋದ್ ಅವರನ್ನು ಕಳೆದುಕೊಂಡ ಪತ್ನಿ ಗೀತಾ ಕಣ್ಣೀರು ಹಾಕುತ್ತಿದ್ದಾರೆ. ನಾನು ಕ್ಯಾಮೆರಾ ಮುಂದೆ ಬರೋದೆ ಅವರಿಗೆ ಇಷ್ಟ ಆಗುತ್ತಿರಲಿಲ್ಲ. ಆದರೆ ಈ ಥರಾ ವಿಷ್ಯಕ್ಕೆ ಕ್ಯಾಮೆರಾ ಮುಂದೆ ಬರ್ತೀನಿ ಅಂತಾ ನನಗೆ ಗೊತ್ತಿರಲಿಲ್ಲ. ನಿನ್ನೆ ರಾತ್ರಿ ಕೂಡ ಚೆನ್ನಾಗಿದ್ರು. ಎಲ್ಲರ ಜೊತೆ ಚೆನ್ನಾಗಿ ಮಾತಾಡಿದ್ರು. ಮಗನನ್ನು ಕಾಲೇಜಿಗೂ ಬಿಟ್ಟು ಬಂದಿದ್ರು. ಬೆಳಗ್ಗೆ ಸ್ನಾನಕ್ಕೆ ಅಂತಾ ಹೋಗಿ ಹೀಗೆ ಮಾಡ್ಕೊಂಡಿದ್ದಾರೆ ಅಂತ ಪತಿ ವಿನೋದ್ ಅವರನ್ನು ನೆನೆದು ಪತ್ನಿ ಗೀತಾ ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ.
ಇದನ್ನೂ ಓದಿ: ನಿರ್ದೇಶಕ ವಿನೋದ್ ದೋಂಡಾಲೆ ಸಾವಿಗೆ ಟಿ.ಎನ್ ಸೀತಾರಾಮ್ ಸಂತಾಪ; ಹೇಳಿದ್ದೇನು?
ಹಲವು ಜನಪ್ರಿಯ ಧಾರಾವಾಹಿಗಳನ್ನು ನಿರ್ದೇಶನ ಮಾಡಿರುವ ವಿನೋದ್ ದೋಂಡಳೆ ಸಾವಿನ ಸುದ್ದಿ ಕೇಳಿ ಕಿರುತೆರೆ ಕಲಾವಿದರು ಆಘಾತಕ್ಕೆ ಒಳಗಾಗಿದ್ದಾರೆ. ಜನಪ್ರಿಯ ಧಾರಾವಾಹಿಗಳಾದ ನನ್ನರಸಿ ರಾಧೆ, ಕರಿಮಣಿ, ಮೌನರಾಗ ಸೇರಿದಂತೆ ಹಲವು ಸೀರಿಯಲ್ಗಳನ್ನು ನಿರ್ದೇಶನ ಮಾಡಿದ್ದಾರೆ. ಅಷ್ಟೇ ಅಲ್ಲದೇ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಶಾಂತಂ ಪಾಪಂ ಎಪಿಸೋಡ್ಗಳನ್ನು ಕೂಡ ನಿರ್ದೇಶನ ಮಾಡಿದ್ದಾರೆ.
ವಿನೋದ್ ಮತ್ತು ನರಹರಿ ಜೋಡಿ ಸೀರಿಯಲ್ ಇಂಡಸ್ಟ್ರಿಯಲ್ಲಿ ಫೇಮಸ್ ಆಗಿತ್ತು. ವಿನೋದ್ ಅವರು ಡೈರೆಕ್ಷನ್ ಮತ್ತು ಕಂಟೆಂಟ್ ನೋಡಿಕೊಳ್ತಿದ್ದರು. ನರಹರಿ ಪ್ರೊಡಕ್ಷನ್ ಬಗ್ಗೆ ಗಮನ ಹರಿಸುತ್ತಿದ್ದರು. ನರಹರಿ ಪ್ರೊಡಕ್ಷನ್ ಹಾಗೂ ವಿನೋದ್ ದೋಂಡಳೆ ಇಬ್ಬರು ಸೇರಿ ವೃದ್ಧಿ ಕ್ರಿಯೇಷನ್ಸ್ ಶುರು ಮಾಡಿದ್ದರು. ಇದೇ ವೃದ್ಧಿ ಕ್ರಿಯೇಷನ್ಸ್ ಅಡಿಯಲ್ಲಿ ಹಲವು ಸೀರಿಯಲ್ಗಳನ್ನ ನಿರ್ಮಾಣ ಮಾಡಿದ್ದರು. ಅದರಲ್ಲೂ ವೃದ್ಧಿ ಕ್ರಿಯೇಷನ್ಸ್ ಅಡಿಯಲ್ಲಿ ನಿರ್ಮಾಣಗೊಂಡಿದ್ದ ನನ್ನರಸಿ ರಾಧೆ ಸೀರಿಯಲ್ ವೀಕ್ಷಕರ ಮನಸ್ಸಲ್ಲಿ ಹಚ್ಚ ಹಸಿರಾಗಿ ಉಳಿಸಿಕೊಂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ವಿನೋದ್ ಸಾವಿನ ಸುದ್ದಿ ಕೇಳಿ ನಿವಾಸದತ್ತ ದೌಡಾಯಿಸಿದ ಚಿತ್ರರಂಗದ ಗಣ್ಯರು
ಪ್ರೀತಿಯ ಪತಿ ವಿನೋದ್ ಅವರನ್ನು ಕಳೆದುಕೊಂಡ ಪತ್ನಿ ಗೀತಾ ಕಣ್ಣೀರು
ಜನಪ್ರಿಯ ಧಾರಾವಾಹಿಗಳನ್ನು ನಿರ್ದೇಶನ ಮಾಡಿರುವ ವಿನೋದ್ ದೋಂಡಳೆ
ಬೆಂಗಳೂರು: ಕನ್ನಡ ಕಿರುತೆರೆಯ ಖ್ಯಾತ ನಿರ್ದೇಶಕ ವಿನೋದ್ ದೋಂಡಾಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬರೋಬ್ಬರಿ 20 ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ಕೆಲಸ ಮಾಡುತ್ತಿದ್ದ ನಿರ್ದೇಶಕ ವಿನೋದ್ ದೋಂಡಾಲೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿರೋ ನಿರ್ದೇಶಕ ವಿನೋದ್ ದೋಂಡಾಲೆ ನಿವಾಸದಲ್ಲಿ ನೀರವ ಮೌನ ಆವರಿಸಿದೆ. ವಿನೋದ್ ಆತ್ಮಹತ್ಯೆ ವಿಚಾರ ಕೇಳಿ ನಿವಾಸದ ಕಡೆಗೆ ಆಪ್ತರು, ಕುಟುಂಬಸ್ಥರು ದೌಡಾಯಿಸಿದ್ದಾರೆ. ನಾಳೆ ವಿನೋದ್ ದೋಂಡಾಳೆ ಅವರ ಅಂತ್ಯಕ್ರಿಯೆ ನಡೆಯಲಿದೆ.
ಪ್ರೀತಿಯ ಪತಿ ವಿನೋದ್ ಅವರನ್ನು ಕಳೆದುಕೊಂಡ ಪತ್ನಿ ಗೀತಾ ಕಣ್ಣೀರು ಹಾಕುತ್ತಿದ್ದಾರೆ. ನಾನು ಕ್ಯಾಮೆರಾ ಮುಂದೆ ಬರೋದೆ ಅವರಿಗೆ ಇಷ್ಟ ಆಗುತ್ತಿರಲಿಲ್ಲ. ಆದರೆ ಈ ಥರಾ ವಿಷ್ಯಕ್ಕೆ ಕ್ಯಾಮೆರಾ ಮುಂದೆ ಬರ್ತೀನಿ ಅಂತಾ ನನಗೆ ಗೊತ್ತಿರಲಿಲ್ಲ. ನಿನ್ನೆ ರಾತ್ರಿ ಕೂಡ ಚೆನ್ನಾಗಿದ್ರು. ಎಲ್ಲರ ಜೊತೆ ಚೆನ್ನಾಗಿ ಮಾತಾಡಿದ್ರು. ಮಗನನ್ನು ಕಾಲೇಜಿಗೂ ಬಿಟ್ಟು ಬಂದಿದ್ರು. ಬೆಳಗ್ಗೆ ಸ್ನಾನಕ್ಕೆ ಅಂತಾ ಹೋಗಿ ಹೀಗೆ ಮಾಡ್ಕೊಂಡಿದ್ದಾರೆ ಅಂತ ಪತಿ ವಿನೋದ್ ಅವರನ್ನು ನೆನೆದು ಪತ್ನಿ ಗೀತಾ ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ.
ಇದನ್ನೂ ಓದಿ: ನಿರ್ದೇಶಕ ವಿನೋದ್ ದೋಂಡಾಲೆ ಸಾವಿಗೆ ಟಿ.ಎನ್ ಸೀತಾರಾಮ್ ಸಂತಾಪ; ಹೇಳಿದ್ದೇನು?
ಹಲವು ಜನಪ್ರಿಯ ಧಾರಾವಾಹಿಗಳನ್ನು ನಿರ್ದೇಶನ ಮಾಡಿರುವ ವಿನೋದ್ ದೋಂಡಳೆ ಸಾವಿನ ಸುದ್ದಿ ಕೇಳಿ ಕಿರುತೆರೆ ಕಲಾವಿದರು ಆಘಾತಕ್ಕೆ ಒಳಗಾಗಿದ್ದಾರೆ. ಜನಪ್ರಿಯ ಧಾರಾವಾಹಿಗಳಾದ ನನ್ನರಸಿ ರಾಧೆ, ಕರಿಮಣಿ, ಮೌನರಾಗ ಸೇರಿದಂತೆ ಹಲವು ಸೀರಿಯಲ್ಗಳನ್ನು ನಿರ್ದೇಶನ ಮಾಡಿದ್ದಾರೆ. ಅಷ್ಟೇ ಅಲ್ಲದೇ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಶಾಂತಂ ಪಾಪಂ ಎಪಿಸೋಡ್ಗಳನ್ನು ಕೂಡ ನಿರ್ದೇಶನ ಮಾಡಿದ್ದಾರೆ.
ವಿನೋದ್ ಮತ್ತು ನರಹರಿ ಜೋಡಿ ಸೀರಿಯಲ್ ಇಂಡಸ್ಟ್ರಿಯಲ್ಲಿ ಫೇಮಸ್ ಆಗಿತ್ತು. ವಿನೋದ್ ಅವರು ಡೈರೆಕ್ಷನ್ ಮತ್ತು ಕಂಟೆಂಟ್ ನೋಡಿಕೊಳ್ತಿದ್ದರು. ನರಹರಿ ಪ್ರೊಡಕ್ಷನ್ ಬಗ್ಗೆ ಗಮನ ಹರಿಸುತ್ತಿದ್ದರು. ನರಹರಿ ಪ್ರೊಡಕ್ಷನ್ ಹಾಗೂ ವಿನೋದ್ ದೋಂಡಳೆ ಇಬ್ಬರು ಸೇರಿ ವೃದ್ಧಿ ಕ್ರಿಯೇಷನ್ಸ್ ಶುರು ಮಾಡಿದ್ದರು. ಇದೇ ವೃದ್ಧಿ ಕ್ರಿಯೇಷನ್ಸ್ ಅಡಿಯಲ್ಲಿ ಹಲವು ಸೀರಿಯಲ್ಗಳನ್ನ ನಿರ್ಮಾಣ ಮಾಡಿದ್ದರು. ಅದರಲ್ಲೂ ವೃದ್ಧಿ ಕ್ರಿಯೇಷನ್ಸ್ ಅಡಿಯಲ್ಲಿ ನಿರ್ಮಾಣಗೊಂಡಿದ್ದ ನನ್ನರಸಿ ರಾಧೆ ಸೀರಿಯಲ್ ವೀಕ್ಷಕರ ಮನಸ್ಸಲ್ಲಿ ಹಚ್ಚ ಹಸಿರಾಗಿ ಉಳಿಸಿಕೊಂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ