ಮೈತ್ರಿ ನಾಯಕರು ಹಾಗೂ ಬಿಜೆಪಿ ನಡುವೆ ಮತ್ತೊಂದು ಸುತ್ತಿನ ಕದನ ಶುರು
ಶನಿವಾರದಿಂದ ಪಾದಯಾತ್ರೆಯ ರಣಕಹಳೆ ಮೊಳಗಿಸಿದ ಮೈತ್ರಿ ನಾಯಕರು
ಬೆಂಗಳೂರಿನಿಂದ ಮೈಸೂರಿನವರೆಗೂ ಪಾದಯಾತ್ರೆಗೆ ಮುಹೂರ್ತ ಫಿಕ್ಸ್
ರಾಜ್ಯದಲ್ಲಿ ಮೈತ್ರಿ ನಾಯಕರು ಹಾಗೂ ಹಸ್ತಪಡೆ ನಡುವೆ ಮತ್ತೊಂದು ಸುತ್ತಿನ ಕದನ ಶುರುವಾಗಲಿದೆ. ಮೂಡಾ, ವಾಲ್ಮೀಕಿ ನಿಗಮದ ಹಗರಣವಿಟ್ಟುಕೊಂಡು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಇದೇ ಶನಿವಾರದಿಂದ ಪಾದಯಾತ್ರೆಯ ರಣಕಹಳೆ ಮೊಳಗಿಸಿವೆ. ಇದಕ್ಕೆ ಕಾಂಗ್ರೆಸ್ ಕೂಡ ಪ್ರತ್ಯಾಸ್ತ್ರ ರೆಡಿಮಾಡಿಕೊಂಡಿದೆ.
ಇದನ್ನೂ ಓದಿ: ವಂದೇ ಭಾರತ್ ರೈಲಿನಲ್ಲಿ ಸರ್ವಿಸ್ ಸ್ಟಾಫ್ಗೆ ಬಿತ್ತು ಗೂಸಾ: ಪ್ರಯಾಣಿಕನ ಸಿಟ್ಟಿಗೆ ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!
ಮೈತ್ರಿ ಪಾದಯಾತ್ರೆ!
ಬೆಂಗಳೂರಿನಿಂದ ಮೈಸೂರಿನವರೆಗೂ ಪಾದಯಾತ್ರೆಗೆ ಮುಹೂರ್ತ ಫಿಕ್ಸ್ ಆಗಿದೆ. ಮುಂಬರುವ ಶನಿವಾರ ಮೈತ್ರಿ ಪಾದಯಾತ್ರೆಗೆ ಚಾಲನೆ ಸಿಗಲಿದೆ. ಆಗಸ್ಟ್ 10ರವರೆಗೆ ಬಿಜೆಪಿ-ಜೆಡಿಎಸ್ ಪಾದಯಾತ್ರೆ ನಡೆಯಲಿದ್ದು, ಒಟ್ಟು 7 ದಿನಗಳ ಕಾಲ ಎರಡೂ ಪಕ್ಷಗಳ ನಾಯಕರೂ ಹೆಜ್ಜೆ ಹಾಕಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ರಾಷ್ಟ್ರೀಯ ನಾಯಕರು ಪಾಲ್ಗೊಳ್ಳಲಿದ್ದಾರೆ. ಅದ್ಯಾವಾಗ ಕಾಂಗ್ರೆಸ್ ಸರ್ಕಾರದ ವಿರುದ್ಧ ದೋಸ್ತಿ ನಾಯಕರು ಬೃಹತ್ ಪಾದಯಾತ್ರೆ ನಡೆಸ್ತಾರೆ ಅಂತ ಗೊತ್ತಾಯ್ತೋ ಹಸ್ತ ಪಡೆಯಲ್ಲಿ ತಳಮಳ ಶುರುವಾಗಿದೆ. ಪಾದಯಾತ್ರೆಗೆ ಕೌಂಟರ್ ಆಗಿ ಸಮಾವೇಶವೆಂಬ ಪ್ರತ್ಯಾಸ್ತ್ರವನ್ನು ಬಳಸೋಕೆ ಸಜ್ಜಾಗಿದೆ.
ಪಾದಯಾತ್ರೆ vs ಸಮಾವೇಶ
ಬಿಜೆಪಿ-ಜೆಡಿಎಸ್ ಪಾದಯಾತ್ರೆಗೆ ಕೌಂಟರ್ ಆಗಿ ಸಮಾವೇಶ ನಡೆಸಲು ಕಾಂಗ್ರೆಸ್ ತೀರ್ಮಾನಿಸಿದೆ. ರಾಜ್ಯದ ಎಲ್ಲಾ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಸಮಾವೇಶ ಮಾಡಲಿದೆ. ಸಿಎಂ ಸಿದ್ದರಾಮಯ್ಯ ಸರ್ಕಾರಿ ನಿವಾಸದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಂಪುಟ ಸಹದ್ಯೋಗಿಗಳ ಜೊತೆ ಸುಮಾರು 2 ಗಂಟೆ ಕಾಲ ಸಭೆ ನಡೆಸಲಾಗಿದ್ದು ಬಿಜೆಪಿ-ದಳ ಆರೋಪಗಳಿಗೆ ತಿರುಗೇಟು ನೀಡುವ ಬಗ್ಗೆ ಚರ್ಚೆ ನಡೆದಿತ್ತು.
ಇದನ್ನೂ ಓದಿ: ಅತಿ ವೇಗದಿಂದ ಅಪಘಾತ.. ಕಾರು ಡಿಕ್ಕಿಯಾಗಿ ಬೈಕ್ ಸವಾರ ಸಾವು; ಮಗಳು, 1 ವರ್ಷದ ಮಗು ಸ್ಥಿತಿ ಗಂಭೀರ
ಈ ವೇಳೆ ಪಾದಯಾತ್ರೆ ದಿನದಿಂದ ಬೃಹತ್ ಸಮಾವೇಶಗಳ ಆಯೋಜನೆ ಮಾಡಲಾಗುತ್ತದೆ. ಮೂರು ಲಕ್ಷ ಜನರನ್ನ ಸೇರಿಸಿ ಸಮಾವೇಶ ನಡೆಸಲು ನಿರ್ಧಾರ ಮಾಡಲಾಗಿದೆ. ಒಟ್ಟಾರೆ ರಾಜ್ಯದಲ್ಲಿ ಪಾದಯಾತ್ರೆ ವರ್ಸಸ್ ಸಮಾವೇಶ ಅನ್ನುವಂತಾಗಿದೆ. ಮುಡಾ ಅಕ್ರಮ ಸಿದ್ದರಾಮಯ್ಯ ವಿರುದ್ಧ ಮೈತ್ರಿ ಸಂಜೀವಿನಿ ಆಗಿಸಿದೆ. ಸದನದ ಒಳಗೆ ಕದನ ನಡೆಸಿದ್ದ ಮೈತ್ರಿಪಡೆ, ಶನಿವಾರದಿಂದ ಪಾದಯಾತ್ರೆ ಮೂಲಕ ಕಹಳೆ ಮೊಳಗಿಸಲು ಸಜ್ಜಾಗಿದೆ. ಇದಕ್ಕೆ ಕಾಂಗ್ರೆಸ್ ಸಮಾವೇಶದ ಮೂಲಕ ಠಕ್ಕರ್ ನೀಡಲು ಮುಂದಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಮೈತ್ರಿ ನಾಯಕರು ಹಾಗೂ ಬಿಜೆಪಿ ನಡುವೆ ಮತ್ತೊಂದು ಸುತ್ತಿನ ಕದನ ಶುರು
ಶನಿವಾರದಿಂದ ಪಾದಯಾತ್ರೆಯ ರಣಕಹಳೆ ಮೊಳಗಿಸಿದ ಮೈತ್ರಿ ನಾಯಕರು
ಬೆಂಗಳೂರಿನಿಂದ ಮೈಸೂರಿನವರೆಗೂ ಪಾದಯಾತ್ರೆಗೆ ಮುಹೂರ್ತ ಫಿಕ್ಸ್
ರಾಜ್ಯದಲ್ಲಿ ಮೈತ್ರಿ ನಾಯಕರು ಹಾಗೂ ಹಸ್ತಪಡೆ ನಡುವೆ ಮತ್ತೊಂದು ಸುತ್ತಿನ ಕದನ ಶುರುವಾಗಲಿದೆ. ಮೂಡಾ, ವಾಲ್ಮೀಕಿ ನಿಗಮದ ಹಗರಣವಿಟ್ಟುಕೊಂಡು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಇದೇ ಶನಿವಾರದಿಂದ ಪಾದಯಾತ್ರೆಯ ರಣಕಹಳೆ ಮೊಳಗಿಸಿವೆ. ಇದಕ್ಕೆ ಕಾಂಗ್ರೆಸ್ ಕೂಡ ಪ್ರತ್ಯಾಸ್ತ್ರ ರೆಡಿಮಾಡಿಕೊಂಡಿದೆ.
ಇದನ್ನೂ ಓದಿ: ವಂದೇ ಭಾರತ್ ರೈಲಿನಲ್ಲಿ ಸರ್ವಿಸ್ ಸ್ಟಾಫ್ಗೆ ಬಿತ್ತು ಗೂಸಾ: ಪ್ರಯಾಣಿಕನ ಸಿಟ್ಟಿಗೆ ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!
ಮೈತ್ರಿ ಪಾದಯಾತ್ರೆ!
ಬೆಂಗಳೂರಿನಿಂದ ಮೈಸೂರಿನವರೆಗೂ ಪಾದಯಾತ್ರೆಗೆ ಮುಹೂರ್ತ ಫಿಕ್ಸ್ ಆಗಿದೆ. ಮುಂಬರುವ ಶನಿವಾರ ಮೈತ್ರಿ ಪಾದಯಾತ್ರೆಗೆ ಚಾಲನೆ ಸಿಗಲಿದೆ. ಆಗಸ್ಟ್ 10ರವರೆಗೆ ಬಿಜೆಪಿ-ಜೆಡಿಎಸ್ ಪಾದಯಾತ್ರೆ ನಡೆಯಲಿದ್ದು, ಒಟ್ಟು 7 ದಿನಗಳ ಕಾಲ ಎರಡೂ ಪಕ್ಷಗಳ ನಾಯಕರೂ ಹೆಜ್ಜೆ ಹಾಕಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ರಾಷ್ಟ್ರೀಯ ನಾಯಕರು ಪಾಲ್ಗೊಳ್ಳಲಿದ್ದಾರೆ. ಅದ್ಯಾವಾಗ ಕಾಂಗ್ರೆಸ್ ಸರ್ಕಾರದ ವಿರುದ್ಧ ದೋಸ್ತಿ ನಾಯಕರು ಬೃಹತ್ ಪಾದಯಾತ್ರೆ ನಡೆಸ್ತಾರೆ ಅಂತ ಗೊತ್ತಾಯ್ತೋ ಹಸ್ತ ಪಡೆಯಲ್ಲಿ ತಳಮಳ ಶುರುವಾಗಿದೆ. ಪಾದಯಾತ್ರೆಗೆ ಕೌಂಟರ್ ಆಗಿ ಸಮಾವೇಶವೆಂಬ ಪ್ರತ್ಯಾಸ್ತ್ರವನ್ನು ಬಳಸೋಕೆ ಸಜ್ಜಾಗಿದೆ.
ಪಾದಯಾತ್ರೆ vs ಸಮಾವೇಶ
ಬಿಜೆಪಿ-ಜೆಡಿಎಸ್ ಪಾದಯಾತ್ರೆಗೆ ಕೌಂಟರ್ ಆಗಿ ಸಮಾವೇಶ ನಡೆಸಲು ಕಾಂಗ್ರೆಸ್ ತೀರ್ಮಾನಿಸಿದೆ. ರಾಜ್ಯದ ಎಲ್ಲಾ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಸಮಾವೇಶ ಮಾಡಲಿದೆ. ಸಿಎಂ ಸಿದ್ದರಾಮಯ್ಯ ಸರ್ಕಾರಿ ನಿವಾಸದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಂಪುಟ ಸಹದ್ಯೋಗಿಗಳ ಜೊತೆ ಸುಮಾರು 2 ಗಂಟೆ ಕಾಲ ಸಭೆ ನಡೆಸಲಾಗಿದ್ದು ಬಿಜೆಪಿ-ದಳ ಆರೋಪಗಳಿಗೆ ತಿರುಗೇಟು ನೀಡುವ ಬಗ್ಗೆ ಚರ್ಚೆ ನಡೆದಿತ್ತು.
ಇದನ್ನೂ ಓದಿ: ಅತಿ ವೇಗದಿಂದ ಅಪಘಾತ.. ಕಾರು ಡಿಕ್ಕಿಯಾಗಿ ಬೈಕ್ ಸವಾರ ಸಾವು; ಮಗಳು, 1 ವರ್ಷದ ಮಗು ಸ್ಥಿತಿ ಗಂಭೀರ
ಈ ವೇಳೆ ಪಾದಯಾತ್ರೆ ದಿನದಿಂದ ಬೃಹತ್ ಸಮಾವೇಶಗಳ ಆಯೋಜನೆ ಮಾಡಲಾಗುತ್ತದೆ. ಮೂರು ಲಕ್ಷ ಜನರನ್ನ ಸೇರಿಸಿ ಸಮಾವೇಶ ನಡೆಸಲು ನಿರ್ಧಾರ ಮಾಡಲಾಗಿದೆ. ಒಟ್ಟಾರೆ ರಾಜ್ಯದಲ್ಲಿ ಪಾದಯಾತ್ರೆ ವರ್ಸಸ್ ಸಮಾವೇಶ ಅನ್ನುವಂತಾಗಿದೆ. ಮುಡಾ ಅಕ್ರಮ ಸಿದ್ದರಾಮಯ್ಯ ವಿರುದ್ಧ ಮೈತ್ರಿ ಸಂಜೀವಿನಿ ಆಗಿಸಿದೆ. ಸದನದ ಒಳಗೆ ಕದನ ನಡೆಸಿದ್ದ ಮೈತ್ರಿಪಡೆ, ಶನಿವಾರದಿಂದ ಪಾದಯಾತ್ರೆ ಮೂಲಕ ಕಹಳೆ ಮೊಳಗಿಸಲು ಸಜ್ಜಾಗಿದೆ. ಇದಕ್ಕೆ ಕಾಂಗ್ರೆಸ್ ಸಮಾವೇಶದ ಮೂಲಕ ಠಕ್ಕರ್ ನೀಡಲು ಮುಂದಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ