ಖಾಸಗಿ ಕಂಪನಿಯಲ್ಲಿ ಕನ್ನಡಿಗರಿಗೆ ಶೇ 75 ರಷ್ಟು ಮೀಸಲಾತಿ..
ಮೀಸಲಾತಿ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯಗೇ ಗೊಂದಲ
ಮೊದಲು ನಿರ್ಧಾರ.. ಆಮೇಲೆ ತಡೆ.. ಮತ್ತೆ ಸಿದ್ಧತೆಯ ಟ್ವೀಟ್
ಖಾಸಗಿ ಉದ್ಯಮದ ಮ್ಯಾನೇಜ್ಮೆಂಟ್ನಲ್ಲಿ ಕನ್ನಡಿಗರಿಗೆ ಶೇ.50 ರಷ್ಟು ಮೀಸಲಾತಿ, ನಾನ್ ಮ್ಯಾನೇಜ್ಮೆಂಟ್ ವಿಭಾಗಗಳಲ್ಲಿ ಶೇ.75ರಷ್ಟು ಮೀಸಲಾತಿ ನೀಡಬೇಕು ಎಂಬ ಮಸೂದೆಗೆ ಕ್ಯಾಬಿನೆಟ್ ಅಂಗೀಕರಿಸಿತ್ತು. ಈ ಸುದ್ದಿ ಕನ್ನಡಿಗರ ಖುಷಿಯನ್ನ ಇಮ್ಮಡಿಗೊಳಿಸಿತ್ತು. ಆದ್ರೆ ವಿರೋಧ ಹೆಚ್ಚಾಗ್ತಿದ್ದಂತೆ ಸರ್ಕಾರ ಯೂ ಟರ್ನ್ ಹೊಡೆದಿದೆ. ಈ ಮಧ್ಯೆ ಸರ್ಕಾರಕ್ಕೆ ಮಸೂದೆ ಬಗ್ಗೆ ಗೊಂದಲ ಏರ್ಪಟ್ಟಿರೋದು ಮೇಲ್ನೋಟಕ್ಕೆ ಗೋಚರಿಸುತ್ತಿದೆ.
ಮೀಸಲಾತಿ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯಗೇ ಗೊಂದಲ
ಕರ್ನಾಟಕದಲ್ಲೇ ಹುಟ್ಟಿ-ಬೆಳೆದ ಕನ್ನಡಿಗನಿಗೆ ಅದೆಷ್ಟೇ ಕೌಶಲ್ಯವಿದ್ರೂ ಕೆಲ ಲಾಬಿಗಳು, ಜಾಗತೀಕರಣ, ಉದಾರಿಕರಣ ಕಾರಣ ಆತನನ್ನ ನಿರುದ್ಯೋಗಿ ಆಗಿಸಿವೆ. ಈಗ ಸರ್ಕಾರ ಇದಕ್ಕೆ ಬದಲಾವಣೆ ತರಲು ದಿಟ್ಟ ಹೆಜ್ಜೆ ಇಟ್ಟಿತ್ತು. ಕಾರ್ಪೋರೇಟ್ ವಲಯ ಮೀಸಲಾತಿಗೆ ಅಪಸ್ವರ ಎತ್ತುತ್ತಿದ್ದಂತೆ ಸರ್ಕಾರವೇ ಗೊಂದಲಕ್ಕೆ ಸಿಲುಕಿದೆ.
ಇದನ್ನೂ ಓದಿ:ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಹೋಗದಿದ್ದರೆ.. ಭಾರತದ ಪಂದ್ಯಗಳು ಈ ದೇಶದಲ್ಲಿ ನಡೆಯಲಿವೆ..
ಮೊದಲು ಮಧ್ಯಾಹ್ನ 2:51ರ ಹೊತ್ತಿಗೆ ಖಾಸಗಿ ಉದ್ಯಮದ ಮ್ಯಾನೇಜ್ಮೆಂಟ್ನಲ್ಲಿ ಕನ್ನಡಿಗರಿಗೆ ಶೇ.100ರಷ್ಟು ಮೀಸಲಾತಿ ಅಂತ ಸಿಎಂ ಘೋಷಣೆ ಮಾಡಿದ್ರು. ಇದಾದ ಬಳಿಕ ಖಾಸಗಿ ಉದ್ಯಮದ ಮ್ಯಾನೇಜ್ಮೆಂಟ್ನಲ್ಲಿ ಶೇ.50 ರಷ್ಟು ಮೀಸಲಾತಿ, ನಾನ್ ಮ್ಯಾನೇಜ್ಮೆಂಟ್ ವಿಭಾಗಗಳಲ್ಲಿ ಶೇ.75ರಷ್ಟು ಮೀಸಲಾತಿ ನೀಡಬೇಕು ಎಂಬ ಮಸೂದೆಗೆ ಸಚಿವ ಸಂಪುಟ ಅಂಗೀಕಾರ ನೀಡಿದೆ ಅಂತ ಸಿದ್ದರಾಮಯ್ಯ ಸಿಹಿ ಸುದ್ದಿ ಕೊಟ್ಟಿದ್ದರು.
ರಾಜ್ಯದ ಖಾಸಗಿ ಕೈಗಾರಿಕೆಗಳು ಹಾಗೂ ಇತರೆ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಆಡಳಿತಾತ್ಮಕ ಹುದ್ದೆಗಳಿಗೆ ಶೇ.50 ಹಾಗೂ ಆಡಳಿತಾತ್ಮಕವಲ್ಲದ ಹುದ್ದೆಗಳಿಗೆ ಶೇ.75 ಮೀಸಲಾತಿ ನಿಗದಿಪಡಿಸುವ ವಿಧೇಯಕಕ್ಕೆ ಸೋಮವಾರ ನಡೆದ ಸಚಿವ ಸಂಪುಟ ಸಭೆಯು ಒಪ್ಪಿಗೆ ನೀಡಿದೆ.
ಕನ್ನಡಿಗರು ಕನ್ನಡದ ನೆಲದಲ್ಲಿ ಉದ್ಯೋಗ ವಂಚಿತರಾಗುವುದನ್ನು ತಪ್ಪಿಸಿ, ತಾಯ್ನಾಡಿನಲ್ಲಿ… pic.twitter.com/Rz6a0vNCBz
— Siddaramaiah (@siddaramaiah) July 17, 2024
ಇದಾದ ಮೇಲೆ ನಿನ್ನೆ ರಾತ್ರಿ 8.46ಕ್ಕೆ ಮತ್ತೊಂದು ಟ್ವೀಟ್ ಮಾಡಿದ್ದ ಸಿಎಂ ಸಿದ್ದರಾಮಯ್ಯ ವಿಧೇಯಕಕ್ಕೆ ತಾತ್ಕಾಲಿಕ ತಡೆ ನೀಡಲಾಗಿದೆ ಅಂತ ಮತ್ತೊಂದು ಟ್ವೀಟ್ ಮಾಡಿ ಕನ್ನಡಿಗರ ಸಂತೋಷಕ್ಕೆ ಎಳ್ಳುನೀರು ಬಿಟ್ಟಿದ್ದಾರೆ.
‘ವಿಧೇಯಕ ಸಿದ್ಧತೆ ಹಂತ’
ಕನ್ನಡಿಗರಿಗೆ ಖಾಸಗಿ ವಲಯದ ಸಂಸ್ಥೆಗಳು, ಕೈಗಾರಿಕೆಗಳು ಹಾಗೂ ಉದ್ದಿಮೆಗಳಲ್ಲಿ ಮೀಸಲಾತಿ ಕಲ್ಪಿಸುವ ಸಂಬಂಧ ಜಾರಿಗೆ ತರಲು ಉದ್ದೇಶಿಸಿದ್ದ ವಿಧೇಯಕವು ಇನ್ನೂ ಸಿದ್ಧತೆಯ ಹಂತದಲ್ಲಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಿ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು-ಸಿದ್ದರಾಮಯ್ಯ, ಮುಖ್ಯಮಂತ್ರಿ
ಹೀಗೆ ಸರ್ಕಾರ ಗಂಟೆಗೊಂದು ಮಾತು, ಕ್ಷಣಕ್ಕೊಂದು ನಿರ್ಧಾರ ಮಾಡಿ ತಾವು ಗೊಂದಲಕ್ಕೆ ಸಿಲುಕಿರೋದಲ್ಲದೇ ಜನರನ್ನೂ ಗೊಂದಲಕ್ಕೆ ತಳ್ಳಿರೋದಂತೂ ನಿಜ. ಸಿದ್ದರಾಮಯ್ಯ ಟ್ವೀಟ್ ಬೆನ್ನಲ್ಲೇ, ಕರ್ನಾಟಕ ಬಿಜೆಪಿ ಯುಟರ್ನ್ ಸರ್ಕಾರ ಎಂದು ಕಿಡಿಕಾರಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ರೋಹಿತ್ಗೆ ಪರ್ಯಾಯ ನಾಯಕ ಯಾರು? ರೇಸ್ನಲ್ಲಿ 5 ಆಟಗಾರರು..!
“ಕನ್ನಡಿಗರಿಗೆ ಉದ್ಯೋಗ ಕೊಡುವ ವಿಧೇಯಕ ತಂದದ್ಯಾಕೆ? ತಡೆಹಿಡಿದಿದ್ದೇಕೆ?
ಕನ್ನಡಿಗರ ಬದುಕಿನೊಂದಿಗೆ ಚೆಲ್ಲಾಟವೇಕೆ?
ಅಪಮಾನಿಸಲು ನಿಮಗೆ ಕನ್ನಡಿಗರೇ ಬೇಕಿತ್ತೆ?”ಕನ್ನಡಿಗರಿಗೆ ಉದ್ಯೋಗ ಕೊಡುವ ವಿಧೇಯಕ ದಿಢೀರ್ ತಡೆಹಿಡಿದು ಕನ್ನಡ-ಕನ್ನಡಿಗ-ಕರ್ನಾಟಕವನ್ನು ಅಪಮಾನಿಸಿರುವ ಮುಖ್ಯಮಂತ್ರಿ @siddaramaiah ನವರ ನೇತೃತ್ವದ @INCKarnataka… pic.twitter.com/9hVm9ubH2W
— Vijayendra Yediyurappa (@BYVijayendra) July 18, 2024
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಖಾಸಗಿ ಕಂಪನಿಯಲ್ಲಿ ಕನ್ನಡಿಗರಿಗೆ ಶೇ 75 ರಷ್ಟು ಮೀಸಲಾತಿ..
ಮೀಸಲಾತಿ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯಗೇ ಗೊಂದಲ
ಮೊದಲು ನಿರ್ಧಾರ.. ಆಮೇಲೆ ತಡೆ.. ಮತ್ತೆ ಸಿದ್ಧತೆಯ ಟ್ವೀಟ್
ಖಾಸಗಿ ಉದ್ಯಮದ ಮ್ಯಾನೇಜ್ಮೆಂಟ್ನಲ್ಲಿ ಕನ್ನಡಿಗರಿಗೆ ಶೇ.50 ರಷ್ಟು ಮೀಸಲಾತಿ, ನಾನ್ ಮ್ಯಾನೇಜ್ಮೆಂಟ್ ವಿಭಾಗಗಳಲ್ಲಿ ಶೇ.75ರಷ್ಟು ಮೀಸಲಾತಿ ನೀಡಬೇಕು ಎಂಬ ಮಸೂದೆಗೆ ಕ್ಯಾಬಿನೆಟ್ ಅಂಗೀಕರಿಸಿತ್ತು. ಈ ಸುದ್ದಿ ಕನ್ನಡಿಗರ ಖುಷಿಯನ್ನ ಇಮ್ಮಡಿಗೊಳಿಸಿತ್ತು. ಆದ್ರೆ ವಿರೋಧ ಹೆಚ್ಚಾಗ್ತಿದ್ದಂತೆ ಸರ್ಕಾರ ಯೂ ಟರ್ನ್ ಹೊಡೆದಿದೆ. ಈ ಮಧ್ಯೆ ಸರ್ಕಾರಕ್ಕೆ ಮಸೂದೆ ಬಗ್ಗೆ ಗೊಂದಲ ಏರ್ಪಟ್ಟಿರೋದು ಮೇಲ್ನೋಟಕ್ಕೆ ಗೋಚರಿಸುತ್ತಿದೆ.
ಮೀಸಲಾತಿ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯಗೇ ಗೊಂದಲ
ಕರ್ನಾಟಕದಲ್ಲೇ ಹುಟ್ಟಿ-ಬೆಳೆದ ಕನ್ನಡಿಗನಿಗೆ ಅದೆಷ್ಟೇ ಕೌಶಲ್ಯವಿದ್ರೂ ಕೆಲ ಲಾಬಿಗಳು, ಜಾಗತೀಕರಣ, ಉದಾರಿಕರಣ ಕಾರಣ ಆತನನ್ನ ನಿರುದ್ಯೋಗಿ ಆಗಿಸಿವೆ. ಈಗ ಸರ್ಕಾರ ಇದಕ್ಕೆ ಬದಲಾವಣೆ ತರಲು ದಿಟ್ಟ ಹೆಜ್ಜೆ ಇಟ್ಟಿತ್ತು. ಕಾರ್ಪೋರೇಟ್ ವಲಯ ಮೀಸಲಾತಿಗೆ ಅಪಸ್ವರ ಎತ್ತುತ್ತಿದ್ದಂತೆ ಸರ್ಕಾರವೇ ಗೊಂದಲಕ್ಕೆ ಸಿಲುಕಿದೆ.
ಇದನ್ನೂ ಓದಿ:ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಹೋಗದಿದ್ದರೆ.. ಭಾರತದ ಪಂದ್ಯಗಳು ಈ ದೇಶದಲ್ಲಿ ನಡೆಯಲಿವೆ..
ಮೊದಲು ಮಧ್ಯಾಹ್ನ 2:51ರ ಹೊತ್ತಿಗೆ ಖಾಸಗಿ ಉದ್ಯಮದ ಮ್ಯಾನೇಜ್ಮೆಂಟ್ನಲ್ಲಿ ಕನ್ನಡಿಗರಿಗೆ ಶೇ.100ರಷ್ಟು ಮೀಸಲಾತಿ ಅಂತ ಸಿಎಂ ಘೋಷಣೆ ಮಾಡಿದ್ರು. ಇದಾದ ಬಳಿಕ ಖಾಸಗಿ ಉದ್ಯಮದ ಮ್ಯಾನೇಜ್ಮೆಂಟ್ನಲ್ಲಿ ಶೇ.50 ರಷ್ಟು ಮೀಸಲಾತಿ, ನಾನ್ ಮ್ಯಾನೇಜ್ಮೆಂಟ್ ವಿಭಾಗಗಳಲ್ಲಿ ಶೇ.75ರಷ್ಟು ಮೀಸಲಾತಿ ನೀಡಬೇಕು ಎಂಬ ಮಸೂದೆಗೆ ಸಚಿವ ಸಂಪುಟ ಅಂಗೀಕಾರ ನೀಡಿದೆ ಅಂತ ಸಿದ್ದರಾಮಯ್ಯ ಸಿಹಿ ಸುದ್ದಿ ಕೊಟ್ಟಿದ್ದರು.
ರಾಜ್ಯದ ಖಾಸಗಿ ಕೈಗಾರಿಕೆಗಳು ಹಾಗೂ ಇತರೆ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಆಡಳಿತಾತ್ಮಕ ಹುದ್ದೆಗಳಿಗೆ ಶೇ.50 ಹಾಗೂ ಆಡಳಿತಾತ್ಮಕವಲ್ಲದ ಹುದ್ದೆಗಳಿಗೆ ಶೇ.75 ಮೀಸಲಾತಿ ನಿಗದಿಪಡಿಸುವ ವಿಧೇಯಕಕ್ಕೆ ಸೋಮವಾರ ನಡೆದ ಸಚಿವ ಸಂಪುಟ ಸಭೆಯು ಒಪ್ಪಿಗೆ ನೀಡಿದೆ.
ಕನ್ನಡಿಗರು ಕನ್ನಡದ ನೆಲದಲ್ಲಿ ಉದ್ಯೋಗ ವಂಚಿತರಾಗುವುದನ್ನು ತಪ್ಪಿಸಿ, ತಾಯ್ನಾಡಿನಲ್ಲಿ… pic.twitter.com/Rz6a0vNCBz
— Siddaramaiah (@siddaramaiah) July 17, 2024
ಇದಾದ ಮೇಲೆ ನಿನ್ನೆ ರಾತ್ರಿ 8.46ಕ್ಕೆ ಮತ್ತೊಂದು ಟ್ವೀಟ್ ಮಾಡಿದ್ದ ಸಿಎಂ ಸಿದ್ದರಾಮಯ್ಯ ವಿಧೇಯಕಕ್ಕೆ ತಾತ್ಕಾಲಿಕ ತಡೆ ನೀಡಲಾಗಿದೆ ಅಂತ ಮತ್ತೊಂದು ಟ್ವೀಟ್ ಮಾಡಿ ಕನ್ನಡಿಗರ ಸಂತೋಷಕ್ಕೆ ಎಳ್ಳುನೀರು ಬಿಟ್ಟಿದ್ದಾರೆ.
‘ವಿಧೇಯಕ ಸಿದ್ಧತೆ ಹಂತ’
ಕನ್ನಡಿಗರಿಗೆ ಖಾಸಗಿ ವಲಯದ ಸಂಸ್ಥೆಗಳು, ಕೈಗಾರಿಕೆಗಳು ಹಾಗೂ ಉದ್ದಿಮೆಗಳಲ್ಲಿ ಮೀಸಲಾತಿ ಕಲ್ಪಿಸುವ ಸಂಬಂಧ ಜಾರಿಗೆ ತರಲು ಉದ್ದೇಶಿಸಿದ್ದ ವಿಧೇಯಕವು ಇನ್ನೂ ಸಿದ್ಧತೆಯ ಹಂತದಲ್ಲಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಿ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು-ಸಿದ್ದರಾಮಯ್ಯ, ಮುಖ್ಯಮಂತ್ರಿ
ಹೀಗೆ ಸರ್ಕಾರ ಗಂಟೆಗೊಂದು ಮಾತು, ಕ್ಷಣಕ್ಕೊಂದು ನಿರ್ಧಾರ ಮಾಡಿ ತಾವು ಗೊಂದಲಕ್ಕೆ ಸಿಲುಕಿರೋದಲ್ಲದೇ ಜನರನ್ನೂ ಗೊಂದಲಕ್ಕೆ ತಳ್ಳಿರೋದಂತೂ ನಿಜ. ಸಿದ್ದರಾಮಯ್ಯ ಟ್ವೀಟ್ ಬೆನ್ನಲ್ಲೇ, ಕರ್ನಾಟಕ ಬಿಜೆಪಿ ಯುಟರ್ನ್ ಸರ್ಕಾರ ಎಂದು ಕಿಡಿಕಾರಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ರೋಹಿತ್ಗೆ ಪರ್ಯಾಯ ನಾಯಕ ಯಾರು? ರೇಸ್ನಲ್ಲಿ 5 ಆಟಗಾರರು..!
“ಕನ್ನಡಿಗರಿಗೆ ಉದ್ಯೋಗ ಕೊಡುವ ವಿಧೇಯಕ ತಂದದ್ಯಾಕೆ? ತಡೆಹಿಡಿದಿದ್ದೇಕೆ?
ಕನ್ನಡಿಗರ ಬದುಕಿನೊಂದಿಗೆ ಚೆಲ್ಲಾಟವೇಕೆ?
ಅಪಮಾನಿಸಲು ನಿಮಗೆ ಕನ್ನಡಿಗರೇ ಬೇಕಿತ್ತೆ?”ಕನ್ನಡಿಗರಿಗೆ ಉದ್ಯೋಗ ಕೊಡುವ ವಿಧೇಯಕ ದಿಢೀರ್ ತಡೆಹಿಡಿದು ಕನ್ನಡ-ಕನ್ನಡಿಗ-ಕರ್ನಾಟಕವನ್ನು ಅಪಮಾನಿಸಿರುವ ಮುಖ್ಯಮಂತ್ರಿ @siddaramaiah ನವರ ನೇತೃತ್ವದ @INCKarnataka… pic.twitter.com/9hVm9ubH2W
— Vijayendra Yediyurappa (@BYVijayendra) July 18, 2024
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ