ವಿದೇಶಕ್ಕೆ ಕೆಲಸಕ್ಕೆ ತೆರಳುವವರೇ ಎಚ್ಚರ! ಏಚ್ಚರ! ಎಚ್ಚರ!
ಸೆಕ್ಯುರಿಟಿ ಗಾರ್ಡ್ ಕೆಲಸ ಕೊಡಿಸುವುದಾಗಿ ಯುದ್ಧಕ್ಕೆ ಬಳಕೆ
ವಿಡಿಯೋ ಮಾಡಿ ನೋವು ತೋಡಿಕೊಂಡ ಕರ್ನಾಟಕದ ಯುವಕರು
ಕಲಬುರಗಿ: ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳು ಪ್ಲಾನ್ ಇದೆಯಾ?. ಹಾಗಿದ್ರೆ ಎಚ್ಚರ. ಏಜೆಂಟ್ ಮೂಲಕ ಕೆಲಸ ಕೊಡಿಸುತ್ತೇವೆ ಎಂಬ ನೆಪದಲ್ಲಿ ವಿದೇಶ ತೆರಳುವ ಆಸೆ ಹೊಂದಿದ್ದರೆ ಈ ಸ್ಟೋರಿ ನೋಡಲೇಬೇಕು. ಕಲಬುರಗಿ ಮೂಲದ ಯುವಕರನ್ನು ವಿದೇಶದಲ್ಲಿ ಯುದ್ಧಕ್ಕೆ ಬಳಕೆ ಮಾಡಿರುವ ಸಂಗತಿ ವಿಡಿಯೋ ಸಮೇತ ಬೆಳಕಿಗೆ ಬಂದಿದೆ. ತಾವು ಕಷ್ಟಪಡುತ್ತಿರುವ ವಿಚಾರವನ್ನು ವಿಡಿಯೋದ ಮೂಲಕ ಹಂಚಿಕೊಂಡಿದ್ದಾರೆ.
ಕರ್ನಾಟಕದ ಕಲಬುರಗಿ ಮೂಲದ ಮೂರು ಯುವಕರು ಉದ್ಯೋಗಕ್ಕಾಗಿ ರಷ್ಯಾಗೆ ತೆರಳಿ ಅಲ್ಲಿ ಪರದಾಟುತ್ತಿರುವ ಸಂಗತಿ ಮುನ್ನೆಲೆಗೆ ಬಂದಿದೆ. ಭಾರತೀಯರನ್ನು ಅಲ್ಲಿ ಯುದ್ದಕ್ಕೆ ಬಳಕೆ ಮಾಡಿರುವ ವಿಚಾರವನ್ನು ಯುವಕರು ವಿಡಿಯೋದ ಮೂಲಕ ತೆರೆದಿಟ್ಟಿದ್ದಾರೆ. ಆ ಮೂಲಕ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.
ಕಲಬುರಗಿ ಮೂಲದ ಮೂವರನ್ನು ರಷ್ಯಾ ಉಕ್ರೇನ್ ಉದ್ದಕ್ಕೆ ಬಳಸಿಕೊಂಡ ಹಿನ್ನೆಲೆ ಪರದಾಟುತ್ತಿದ್ದಾರೆ. ದುಬೈ ಏಜೆಂಟರ ಮೂಲಕ ರಷ್ಯಾಕ್ಕೆ ತೆರಳಿ ಅಲ್ಲಿ ಕಷ್ಟಪಡುತ್ತಿದ್ದಾರೆ. ಸೆಕ್ಯುರಿಟಿ ಕೆಲಸ ಕೊಡಿಸುವುದಾಗಿ ಹೇಳಿ ಏಜೆಂಟ್ಗಳು ರಷ್ಯಾಗೆ ಕಳುಹಿಸಿದ್ದಾರೆ. ಆದರೆ ಸೆಕ್ಯುರಿಟಿ ಕೆಲಸದ ಬದಲಿಗೆ ರಷ್ಯಾ ಉಕ್ರೇನ್ ಯುದ್ದಕ್ಕೆ ಅವರನ್ನು ಬಳಸಿಕೊಂಡಿದ್ದಾರೆ.
ಕಲಬುರಗಿ ಮೂಲದ 3 ಯುವಕರನ್ನು ಯುದ್ಧಕ್ಕೆ ಬಳಕೆ ಮಾಡಿರುವ ಸಂಗತಿ ರಷ್ಯಾದಲ್ಲಿ ಬೆಳಕಿಗೆ ಬಂದಿದೆ. ಸೆಕ್ಯುರಿಟಿ ಗಾರ್ಡ್ ಕೆಲಸ ಕೊಡಿಸುತ್ತೇನೆಂದು ಏಜೆಂಟ್ ಮಾತನ್ನು ನಂಬಿ ಯುದ್ಧಕ್ಕೆ ಬಳಸಿಕೊಂಡಿದ್ದಾರೆ. ಸದ್ಯ ಅಲ್ಲಿ ಸಿಲುಕಿರುವ ಮೂವರು ಯುವಕರು ತಾಯ್ನಾಡಿಗೆ ವಾಪಾಸ್ ಕರೆಸಿಕೊಳ್ಳಿ ಎಂದು ವಿಡಿಯೋ ಮೂಲಕ ನೋವನ್ನು ಹಂಚಿಕೊಂಡಿದ್ದಾರೆ pic.twitter.com/vEICmlEPcj
— NewsFirst Kannada (@NewsFirstKan) February 22, 2024
ಇದರಿಂದ ನೊಂದ ಯುವಕರು ನಮ್ಮನ್ನ ವಾಪಸ್ ತಾಯ್ನಾಡಿಗೆ ಕರೆಸಿಕೊಳ್ಳುವಂತೆ ಯುವಕರು ವಿಡಿಯೋ ಮಾಡಿ ಮನವಿ ಮಾಡಿಕೊಂಡಿದ್ದಾರೆ. ಸಂಸದ ಅಸಾದುದ್ದೀನ್ ಓವೈಸಿ ರಷ್ಯಾದಲ್ಲಿ ಸಿಲುಕಿದ ಯುವಕರನ್ನ ಸೇಫ್ ಆಗಿ ಕರೆತರುವಂತೆ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ವಿದೇಶಕ್ಕೆ ಕೆಲಸಕ್ಕೆ ತೆರಳುವವರೇ ಎಚ್ಚರ! ಏಚ್ಚರ! ಎಚ್ಚರ!
ಸೆಕ್ಯುರಿಟಿ ಗಾರ್ಡ್ ಕೆಲಸ ಕೊಡಿಸುವುದಾಗಿ ಯುದ್ಧಕ್ಕೆ ಬಳಕೆ
ವಿಡಿಯೋ ಮಾಡಿ ನೋವು ತೋಡಿಕೊಂಡ ಕರ್ನಾಟಕದ ಯುವಕರು
ಕಲಬುರಗಿ: ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳು ಪ್ಲಾನ್ ಇದೆಯಾ?. ಹಾಗಿದ್ರೆ ಎಚ್ಚರ. ಏಜೆಂಟ್ ಮೂಲಕ ಕೆಲಸ ಕೊಡಿಸುತ್ತೇವೆ ಎಂಬ ನೆಪದಲ್ಲಿ ವಿದೇಶ ತೆರಳುವ ಆಸೆ ಹೊಂದಿದ್ದರೆ ಈ ಸ್ಟೋರಿ ನೋಡಲೇಬೇಕು. ಕಲಬುರಗಿ ಮೂಲದ ಯುವಕರನ್ನು ವಿದೇಶದಲ್ಲಿ ಯುದ್ಧಕ್ಕೆ ಬಳಕೆ ಮಾಡಿರುವ ಸಂಗತಿ ವಿಡಿಯೋ ಸಮೇತ ಬೆಳಕಿಗೆ ಬಂದಿದೆ. ತಾವು ಕಷ್ಟಪಡುತ್ತಿರುವ ವಿಚಾರವನ್ನು ವಿಡಿಯೋದ ಮೂಲಕ ಹಂಚಿಕೊಂಡಿದ್ದಾರೆ.
ಕರ್ನಾಟಕದ ಕಲಬುರಗಿ ಮೂಲದ ಮೂರು ಯುವಕರು ಉದ್ಯೋಗಕ್ಕಾಗಿ ರಷ್ಯಾಗೆ ತೆರಳಿ ಅಲ್ಲಿ ಪರದಾಟುತ್ತಿರುವ ಸಂಗತಿ ಮುನ್ನೆಲೆಗೆ ಬಂದಿದೆ. ಭಾರತೀಯರನ್ನು ಅಲ್ಲಿ ಯುದ್ದಕ್ಕೆ ಬಳಕೆ ಮಾಡಿರುವ ವಿಚಾರವನ್ನು ಯುವಕರು ವಿಡಿಯೋದ ಮೂಲಕ ತೆರೆದಿಟ್ಟಿದ್ದಾರೆ. ಆ ಮೂಲಕ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.
ಕಲಬುರಗಿ ಮೂಲದ ಮೂವರನ್ನು ರಷ್ಯಾ ಉಕ್ರೇನ್ ಉದ್ದಕ್ಕೆ ಬಳಸಿಕೊಂಡ ಹಿನ್ನೆಲೆ ಪರದಾಟುತ್ತಿದ್ದಾರೆ. ದುಬೈ ಏಜೆಂಟರ ಮೂಲಕ ರಷ್ಯಾಕ್ಕೆ ತೆರಳಿ ಅಲ್ಲಿ ಕಷ್ಟಪಡುತ್ತಿದ್ದಾರೆ. ಸೆಕ್ಯುರಿಟಿ ಕೆಲಸ ಕೊಡಿಸುವುದಾಗಿ ಹೇಳಿ ಏಜೆಂಟ್ಗಳು ರಷ್ಯಾಗೆ ಕಳುಹಿಸಿದ್ದಾರೆ. ಆದರೆ ಸೆಕ್ಯುರಿಟಿ ಕೆಲಸದ ಬದಲಿಗೆ ರಷ್ಯಾ ಉಕ್ರೇನ್ ಯುದ್ದಕ್ಕೆ ಅವರನ್ನು ಬಳಸಿಕೊಂಡಿದ್ದಾರೆ.
ಕಲಬುರಗಿ ಮೂಲದ 3 ಯುವಕರನ್ನು ಯುದ್ಧಕ್ಕೆ ಬಳಕೆ ಮಾಡಿರುವ ಸಂಗತಿ ರಷ್ಯಾದಲ್ಲಿ ಬೆಳಕಿಗೆ ಬಂದಿದೆ. ಸೆಕ್ಯುರಿಟಿ ಗಾರ್ಡ್ ಕೆಲಸ ಕೊಡಿಸುತ್ತೇನೆಂದು ಏಜೆಂಟ್ ಮಾತನ್ನು ನಂಬಿ ಯುದ್ಧಕ್ಕೆ ಬಳಸಿಕೊಂಡಿದ್ದಾರೆ. ಸದ್ಯ ಅಲ್ಲಿ ಸಿಲುಕಿರುವ ಮೂವರು ಯುವಕರು ತಾಯ್ನಾಡಿಗೆ ವಾಪಾಸ್ ಕರೆಸಿಕೊಳ್ಳಿ ಎಂದು ವಿಡಿಯೋ ಮೂಲಕ ನೋವನ್ನು ಹಂಚಿಕೊಂಡಿದ್ದಾರೆ pic.twitter.com/vEICmlEPcj
— NewsFirst Kannada (@NewsFirstKan) February 22, 2024
ಇದರಿಂದ ನೊಂದ ಯುವಕರು ನಮ್ಮನ್ನ ವಾಪಸ್ ತಾಯ್ನಾಡಿಗೆ ಕರೆಸಿಕೊಳ್ಳುವಂತೆ ಯುವಕರು ವಿಡಿಯೋ ಮಾಡಿ ಮನವಿ ಮಾಡಿಕೊಂಡಿದ್ದಾರೆ. ಸಂಸದ ಅಸಾದುದ್ದೀನ್ ಓವೈಸಿ ರಷ್ಯಾದಲ್ಲಿ ಸಿಲುಕಿದ ಯುವಕರನ್ನ ಸೇಫ್ ಆಗಿ ಕರೆತರುವಂತೆ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ