newsfirstkannada.com

RCB ಫ್ಯಾನ್ಸ್​​ಗೆ ಗುಡ್​ನ್ಯೂಸ್​​; ದಿನೇಶ್​ ಕಾರ್ತಿಕ್​​ ಬಗ್ಗೆ ರೋಹಿತ್​​, ದ್ರಾವಿಡ್​ ಮಹತ್ವದ ಸಭೆ!

Share :

Published April 17, 2024 at 5:15pm

    ಬಹುನಿರೀಕ್ಷಿತ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​ ಸೀಸನ್

    ಇದರ ಬೆನ್ನಲ್ಲೇ ಪ್ರತಿಷ್ಠಿ ಐಸಿಸಿ 2024ರ ಟಿ20 ವಿಶ್ವಕಪ್​​ ನಡೆಯಲಿದೆ!

    ದಿನೇಶ್​ ಕಾರ್ತಿಕ್​​ ಬಗ್ಗೆ ಟೀಮ್​ ಇಂಡಿಯಾ ಸೆಲೆಕ್ಷನ್​ ಕಮಿಟಿ ಸಭೆ

ಇಂಡಿಯನ್​ ಪ್ರೀಮಿಯರ್​ ಲೀಗ್​ ಬೆನ್ನಲ್ಲೇ ಪ್ರತಿಷ್ಠಿತ ಐಸಿಸಿ 2024ರ ಟಿ20 ವಿಶ್ವಕಪ್​​ ನಡೆಯಲಿದೆ. ಟಿ20 ವಿಶ್ವಕಪ್​​ಗಾಗಿ ಬಲಿಷ್ಠ ಟೀಮ್​ ಇಂಡಿಯಾ ಆಯ್ಕೆ ಮಾಡಲು ಸೆಲೆಕ್ಷನ್​ ಕಮಿಟಿ ಭಾರೀ ಕಸರತ್ತು ನಡೆಸುತ್ತಿದೆ. ಈ ಮಧ್ಯೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಅಭಿಮಾನಿಗಳಿಗೆ ಗುಡ್​ನ್ಯೂಸ್​ ಸಿಕ್ಕಿದೆ.

ಹೌದು, ಇತ್ತೀಚೆಗೆ ಮುಂಬೈನಲ್ಲಿ ಟೀಮ್​ ಇಂಡಿಯಾದ ಕೋಚ್​​​ ರಾಹುಲ್​ ದ್ರಾವಿಡ್​​, ಸೆಲೆಕ್ಷನ್​ ಕಮಿಟಿ ಚೀಫ್​ ಅಜಿತ್​​ ಅಗರ್ಕರ್​ ಅವರನ್ನು ಕ್ಯಾಪ್ಟನ್​ ರೋಹಿತ್​ ಶರ್ಮಾ ಭೇಟಿಯಾಗಿದ್ದರು. ಈ ಮೂವರ ಮಧ್ಯೆ ಮಹತ್ವದ ಸಭೆ ನಡೆದಿದೆ. ಈ ಸಭೆಯಲ್ಲಿ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ ಜೋಡಿ ಟಿ20 ವಿಶ್ವಕಪ್​​ನಲ್ಲಿ ಟೀಮ್​​ ಇಂಡಿಯಾ ಪರ ಓಪನಿಂಗ್​ ಮಾಡಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಇಷ್ಟೇ ಅಲ್ಲ ಆರ್​​​ಸಿಬಿ ಸ್ಟಾರ್​ ಫಿನಿಶರ್​ ದಿನೇಶ್​ ಕಾರ್ತಿಕ್​ ಅವರು ಕೂಡ ವಿಕೆಟ್​ ಕೀಪರ್​ ಬ್ಯಾಟರ್​​ ರೋಲ್​ ರೇಸ್​ನಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಹೀಗೆ ತನ್ನ ಅದ್ಭುತ ಪ್ರದರ್ಶನ ಮುಂದುವರಿಸಿದ್ರೆ ಮೊದಲ ಆದ್ಯತೆ ಮೇರೆಗೆ ಆಯ್ಕೆ ಮಾಡಲಾಗುವುದು ಎಂಬ ಚರ್ಚೆ ನಡೆದಿದೆಯಂತೆ.

ಸದ್ಯ ನಡೆಯುತ್ತಿರೋ ಐಪಿಎಲ್​ನಲ್ಲಿ ದಿನೇಶ್​ ಕಾರ್ತಿಕ್​ ಆರ್​​ಸಿಬಿ ಪರ ಭರ್ಜರಿ ಬ್ಯಾಟಿಂಗ್​ ಮಾಡುತ್ತಿದ್ದಾರೆ. ಇತ್ತೀಚೆಗೆ ಹೈದರಾಬಾದ್​​ ವಿರುದ್ಧ ನಡೆದ ಪಂದ್ಯದಲ್ಲೂ ಚೇಸಿಂಗ್​ನಲ್ಲಿ ಹೈದರಬಾದ್​​​ ಬೌಲರ್​ಗಳ ಬೆಂಡೆತ್ತಿದ್ರು. ತಾನು ಆಡಿದ ಕೇವಲ 35 ಬಾಲ್​ನಲ್ಲಿ ದಿನೇಶ್​ ಕಾರ್ತಿಕ್​ ಬರೋಬ್ಬರಿ 7 ಸಿಕ್ಸರ್​​, 3 ಫೋರ್​ ಸಮೇತ 83 ರನ್​ ಸಿಡಿಸಿದ್ರು. ಇವರ ಸ್ಟ್ರೈಕ್​ ರೇಟ್​ 240ಕ್ಕೂ ಹೆಚ್ಚು ಇತ್ತು.

ಇದನ್ನೂ ಓದಿ: T20 ವಿಶ್ವಕಪ್​​; ಕೊಹ್ಲಿಗಾಗಿ ರೋಹಿತ್​​, ದ್ರಾವಿಡ್​ ಮಹತ್ವದ ಸಭೆ; ಅಸಲಿಗೆ ಆಗಿದ್ದೇನು?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

RCB ಫ್ಯಾನ್ಸ್​​ಗೆ ಗುಡ್​ನ್ಯೂಸ್​​; ದಿನೇಶ್​ ಕಾರ್ತಿಕ್​​ ಬಗ್ಗೆ ರೋಹಿತ್​​, ದ್ರಾವಿಡ್​ ಮಹತ್ವದ ಸಭೆ!

https://newsfirstlive.com/wp-content/uploads/2024/04/Rohit_DK-News.jpg

    ಬಹುನಿರೀಕ್ಷಿತ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​ ಸೀಸನ್

    ಇದರ ಬೆನ್ನಲ್ಲೇ ಪ್ರತಿಷ್ಠಿ ಐಸಿಸಿ 2024ರ ಟಿ20 ವಿಶ್ವಕಪ್​​ ನಡೆಯಲಿದೆ!

    ದಿನೇಶ್​ ಕಾರ್ತಿಕ್​​ ಬಗ್ಗೆ ಟೀಮ್​ ಇಂಡಿಯಾ ಸೆಲೆಕ್ಷನ್​ ಕಮಿಟಿ ಸಭೆ

ಇಂಡಿಯನ್​ ಪ್ರೀಮಿಯರ್​ ಲೀಗ್​ ಬೆನ್ನಲ್ಲೇ ಪ್ರತಿಷ್ಠಿತ ಐಸಿಸಿ 2024ರ ಟಿ20 ವಿಶ್ವಕಪ್​​ ನಡೆಯಲಿದೆ. ಟಿ20 ವಿಶ್ವಕಪ್​​ಗಾಗಿ ಬಲಿಷ್ಠ ಟೀಮ್​ ಇಂಡಿಯಾ ಆಯ್ಕೆ ಮಾಡಲು ಸೆಲೆಕ್ಷನ್​ ಕಮಿಟಿ ಭಾರೀ ಕಸರತ್ತು ನಡೆಸುತ್ತಿದೆ. ಈ ಮಧ್ಯೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಅಭಿಮಾನಿಗಳಿಗೆ ಗುಡ್​ನ್ಯೂಸ್​ ಸಿಕ್ಕಿದೆ.

ಹೌದು, ಇತ್ತೀಚೆಗೆ ಮುಂಬೈನಲ್ಲಿ ಟೀಮ್​ ಇಂಡಿಯಾದ ಕೋಚ್​​​ ರಾಹುಲ್​ ದ್ರಾವಿಡ್​​, ಸೆಲೆಕ್ಷನ್​ ಕಮಿಟಿ ಚೀಫ್​ ಅಜಿತ್​​ ಅಗರ್ಕರ್​ ಅವರನ್ನು ಕ್ಯಾಪ್ಟನ್​ ರೋಹಿತ್​ ಶರ್ಮಾ ಭೇಟಿಯಾಗಿದ್ದರು. ಈ ಮೂವರ ಮಧ್ಯೆ ಮಹತ್ವದ ಸಭೆ ನಡೆದಿದೆ. ಈ ಸಭೆಯಲ್ಲಿ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ ಜೋಡಿ ಟಿ20 ವಿಶ್ವಕಪ್​​ನಲ್ಲಿ ಟೀಮ್​​ ಇಂಡಿಯಾ ಪರ ಓಪನಿಂಗ್​ ಮಾಡಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಇಷ್ಟೇ ಅಲ್ಲ ಆರ್​​​ಸಿಬಿ ಸ್ಟಾರ್​ ಫಿನಿಶರ್​ ದಿನೇಶ್​ ಕಾರ್ತಿಕ್​ ಅವರು ಕೂಡ ವಿಕೆಟ್​ ಕೀಪರ್​ ಬ್ಯಾಟರ್​​ ರೋಲ್​ ರೇಸ್​ನಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಹೀಗೆ ತನ್ನ ಅದ್ಭುತ ಪ್ರದರ್ಶನ ಮುಂದುವರಿಸಿದ್ರೆ ಮೊದಲ ಆದ್ಯತೆ ಮೇರೆಗೆ ಆಯ್ಕೆ ಮಾಡಲಾಗುವುದು ಎಂಬ ಚರ್ಚೆ ನಡೆದಿದೆಯಂತೆ.

ಸದ್ಯ ನಡೆಯುತ್ತಿರೋ ಐಪಿಎಲ್​ನಲ್ಲಿ ದಿನೇಶ್​ ಕಾರ್ತಿಕ್​ ಆರ್​​ಸಿಬಿ ಪರ ಭರ್ಜರಿ ಬ್ಯಾಟಿಂಗ್​ ಮಾಡುತ್ತಿದ್ದಾರೆ. ಇತ್ತೀಚೆಗೆ ಹೈದರಾಬಾದ್​​ ವಿರುದ್ಧ ನಡೆದ ಪಂದ್ಯದಲ್ಲೂ ಚೇಸಿಂಗ್​ನಲ್ಲಿ ಹೈದರಬಾದ್​​​ ಬೌಲರ್​ಗಳ ಬೆಂಡೆತ್ತಿದ್ರು. ತಾನು ಆಡಿದ ಕೇವಲ 35 ಬಾಲ್​ನಲ್ಲಿ ದಿನೇಶ್​ ಕಾರ್ತಿಕ್​ ಬರೋಬ್ಬರಿ 7 ಸಿಕ್ಸರ್​​, 3 ಫೋರ್​ ಸಮೇತ 83 ರನ್​ ಸಿಡಿಸಿದ್ರು. ಇವರ ಸ್ಟ್ರೈಕ್​ ರೇಟ್​ 240ಕ್ಕೂ ಹೆಚ್ಚು ಇತ್ತು.

ಇದನ್ನೂ ಓದಿ: T20 ವಿಶ್ವಕಪ್​​; ಕೊಹ್ಲಿಗಾಗಿ ರೋಹಿತ್​​, ದ್ರಾವಿಡ್​ ಮಹತ್ವದ ಸಭೆ; ಅಸಲಿಗೆ ಆಗಿದ್ದೇನು?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Load More