ಇನ್ನೂ ನಿಲ್ಲದ ಸುದೀಪ್, ಎಂ.ಎನ್ ಕುಮಾರ್ ಜಗಳ
ಕೋರ್ಟ್ನಲ್ಲೂ ನಟ ಕಿಚ್ಚ ಸುದೀಪ್ಗೆ ಮುನ್ನಡೆ..!
ನಿರ್ಮಾಪಕರಿಗೆ ಶುರುವಾಯ್ತು ಕಾನೂನು ಸಂಕಷ್ಟ
ಬೆಂಗಳೂರು: ನಟ ಕಿಚ್ಚ ಸುದೀಪ್ ವಿರುದ್ಧ ಸ್ಯಾಂಡಲ್ವುಡ್ ನಿರ್ಮಾಪಕರು ವಂಚನೆ ಆರೋಪ ಮಾಡಿದ್ದರು. ಹೀಗಾಗಿ ತನ್ನ ವಿರುದ್ಧ ಗಂಭೀರ ಆರೋಪ ಮಾಡಿದ್ದ ನಿರ್ಮಾಪಕರ ವಿರುದ್ಧ ಸುದೀಪ್ ಕೋರ್ಟ್ ಮೆಟ್ಟಿಲೇರಿದ್ದರು. ಈಗ ಕೇಸ್ ಸಂಬಂಧ ನಿರ್ಮಾಪಕರಾದ ಎಂ.ಎನ್ ಕುಮಾರ್ ಮತ್ತು ಎನ್.ಎಂ ಸುರೇಶ್ಗೆ ಕೋರ್ಟ್ ಸಮನ್ಸ್ ಜಾರಿಗೊಳಿಸಿದೆ.
ಇನ್ನು, ಇಬ್ಬರು ನಿರ್ಮಾಪಕರಿಗೂ ಸಮನ್ಸ್ ಜಾರಿಗೊಳಿಸಿದ ಬೆಂಗಳೂರು 13ನೇ ಎಸಿಎಂಎಂ ಕೋರ್ಟ್ ವಿಚಾರಣೆಗೆ ಹಾಜರಾಗಿ ಎಂದಿದೆ. ಜತೆಗೆ ಎಂ.ಎನ್ ಕುಮಾರ್, ಎನ್.ಎಂ ಸುರೇಶ್ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಲು ಆದೇಶಿಸಿದೆ.
ಏನಿದು ಕೇಸ್..?
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕಳೆದ ಕೆಲವು ದಿನಗಳಿಂದ ಹಲವು ಕಾಂಟ್ರವರ್ಸಿಗಳಿಂದ ಸಾಕಷ್ಟು ಸುದ್ದಿಯಾಗಿದ್ರು. ಎಂ.ಎನ್. ಕುಮಾರ್ ಮತ್ತು ಎಂಎಸ್ ಸುರೇಶ್ ರನ್ನ ವಿರುದ್ಧ ಮಾಧ್ಯಗಳ ಮುಂದೆ ಸಾಕ್ಷಿ ಇಲ್ಲದ ಆರೋಪ ಮಾಡಿದ್ರು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸುದೀಪ್ ಕೂಡಾ ಮಾನನಷ್ಟ ಮೊಕದ್ದಮೆ ಹೂಡಿದ್ರು. ಬಳಿಕ ನಡೆದ ರಾಜಿ ಸಂಧಾನವೂ ವಿಫಲವಾಗಿತ್ತು. ಕಿಚ್ಚು ಬಿಡದ ಕಿಚ್ಚ ನೇರಾ ನೇರಾ ಫೈಟ್ಗಿಳಿದು ಕೋರ್ಟ್ಗೆ ಹಾಜರಾಗಿ ಪ್ರಮಾಣಿಕ ಹೇಳಿಕೆ ದಾಖಲಿಸಿದ್ದರು.
ಎಂ.ಎನ್ ಕುಮಾರ್ ನನ್ನ ವಿರುದ್ದ ಮಾಧ್ಯಮಗೋಷ್ಟಿ ನಡೆಸಿದ್ದರು. ಅಲ್ಲಿ ನನ್ನ ವಿರುದ್ದ ಇಲ್ಲ ಸಲ್ಲದ ಸುಳ್ಳು ಆರೋಪಗಳನ್ನ ಮಾಡಿದ್ದಾರೆ. ಆರ್ ಆರ್ ನಗರದ ಮನೆ ಕಟ್ಟಲು ಹಣದ ಸಹಾಯ ಮಾಡಿದ್ದಾಗಿ ಆರೋಪಿಸಿದ್ದಾರೆ. ಮನೆ ರಿಪೇರಿಗೆ ಹಣ ನೀಡಿದ್ದಾಗಿ ಹೇಳಿದ್ದಾರೆ. ಕುಮಾರ್ ಅವರ ಹೇಳಿಕೆಯನ್ನ ಎಂಎಸ್ ಸುರೇಶ್ ಬೆಂಬಲಿಸಿ ಮಾತನಾಡಿದ್ದಾರೆ. ಇವರಿಂದ ನನ್ನ ಮಾನ ಹಾನಿಯಾಗಿದೆ. ಈ ಬಗ್ಗೆ ಹಲವರು ನನಗೆ ಪ್ರಶ್ನೆ ಮಾಡ್ತಾ ಇದ್ದಾರೆ ಎಂದು ಕೋರ್ಟ್ ಮುಂದೆ ಸುದೀಪ್ ಹೇಳಿಕೆ ಕೊಟ್ಟಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಇನ್ನೂ ನಿಲ್ಲದ ಸುದೀಪ್, ಎಂ.ಎನ್ ಕುಮಾರ್ ಜಗಳ
ಕೋರ್ಟ್ನಲ್ಲೂ ನಟ ಕಿಚ್ಚ ಸುದೀಪ್ಗೆ ಮುನ್ನಡೆ..!
ನಿರ್ಮಾಪಕರಿಗೆ ಶುರುವಾಯ್ತು ಕಾನೂನು ಸಂಕಷ್ಟ
ಬೆಂಗಳೂರು: ನಟ ಕಿಚ್ಚ ಸುದೀಪ್ ವಿರುದ್ಧ ಸ್ಯಾಂಡಲ್ವುಡ್ ನಿರ್ಮಾಪಕರು ವಂಚನೆ ಆರೋಪ ಮಾಡಿದ್ದರು. ಹೀಗಾಗಿ ತನ್ನ ವಿರುದ್ಧ ಗಂಭೀರ ಆರೋಪ ಮಾಡಿದ್ದ ನಿರ್ಮಾಪಕರ ವಿರುದ್ಧ ಸುದೀಪ್ ಕೋರ್ಟ್ ಮೆಟ್ಟಿಲೇರಿದ್ದರು. ಈಗ ಕೇಸ್ ಸಂಬಂಧ ನಿರ್ಮಾಪಕರಾದ ಎಂ.ಎನ್ ಕುಮಾರ್ ಮತ್ತು ಎನ್.ಎಂ ಸುರೇಶ್ಗೆ ಕೋರ್ಟ್ ಸಮನ್ಸ್ ಜಾರಿಗೊಳಿಸಿದೆ.
ಇನ್ನು, ಇಬ್ಬರು ನಿರ್ಮಾಪಕರಿಗೂ ಸಮನ್ಸ್ ಜಾರಿಗೊಳಿಸಿದ ಬೆಂಗಳೂರು 13ನೇ ಎಸಿಎಂಎಂ ಕೋರ್ಟ್ ವಿಚಾರಣೆಗೆ ಹಾಜರಾಗಿ ಎಂದಿದೆ. ಜತೆಗೆ ಎಂ.ಎನ್ ಕುಮಾರ್, ಎನ್.ಎಂ ಸುರೇಶ್ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಲು ಆದೇಶಿಸಿದೆ.
ಏನಿದು ಕೇಸ್..?
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕಳೆದ ಕೆಲವು ದಿನಗಳಿಂದ ಹಲವು ಕಾಂಟ್ರವರ್ಸಿಗಳಿಂದ ಸಾಕಷ್ಟು ಸುದ್ದಿಯಾಗಿದ್ರು. ಎಂ.ಎನ್. ಕುಮಾರ್ ಮತ್ತು ಎಂಎಸ್ ಸುರೇಶ್ ರನ್ನ ವಿರುದ್ಧ ಮಾಧ್ಯಗಳ ಮುಂದೆ ಸಾಕ್ಷಿ ಇಲ್ಲದ ಆರೋಪ ಮಾಡಿದ್ರು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸುದೀಪ್ ಕೂಡಾ ಮಾನನಷ್ಟ ಮೊಕದ್ದಮೆ ಹೂಡಿದ್ರು. ಬಳಿಕ ನಡೆದ ರಾಜಿ ಸಂಧಾನವೂ ವಿಫಲವಾಗಿತ್ತು. ಕಿಚ್ಚು ಬಿಡದ ಕಿಚ್ಚ ನೇರಾ ನೇರಾ ಫೈಟ್ಗಿಳಿದು ಕೋರ್ಟ್ಗೆ ಹಾಜರಾಗಿ ಪ್ರಮಾಣಿಕ ಹೇಳಿಕೆ ದಾಖಲಿಸಿದ್ದರು.
ಎಂ.ಎನ್ ಕುಮಾರ್ ನನ್ನ ವಿರುದ್ದ ಮಾಧ್ಯಮಗೋಷ್ಟಿ ನಡೆಸಿದ್ದರು. ಅಲ್ಲಿ ನನ್ನ ವಿರುದ್ದ ಇಲ್ಲ ಸಲ್ಲದ ಸುಳ್ಳು ಆರೋಪಗಳನ್ನ ಮಾಡಿದ್ದಾರೆ. ಆರ್ ಆರ್ ನಗರದ ಮನೆ ಕಟ್ಟಲು ಹಣದ ಸಹಾಯ ಮಾಡಿದ್ದಾಗಿ ಆರೋಪಿಸಿದ್ದಾರೆ. ಮನೆ ರಿಪೇರಿಗೆ ಹಣ ನೀಡಿದ್ದಾಗಿ ಹೇಳಿದ್ದಾರೆ. ಕುಮಾರ್ ಅವರ ಹೇಳಿಕೆಯನ್ನ ಎಂಎಸ್ ಸುರೇಶ್ ಬೆಂಬಲಿಸಿ ಮಾತನಾಡಿದ್ದಾರೆ. ಇವರಿಂದ ನನ್ನ ಮಾನ ಹಾನಿಯಾಗಿದೆ. ಈ ಬಗ್ಗೆ ಹಲವರು ನನಗೆ ಪ್ರಶ್ನೆ ಮಾಡ್ತಾ ಇದ್ದಾರೆ ಎಂದು ಕೋರ್ಟ್ ಮುಂದೆ ಸುದೀಪ್ ಹೇಳಿಕೆ ಕೊಟ್ಟಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ