ಜನವರಿ 27 ಮತ್ತು 28ರಂದು ಅದ್ಧೂರಿಯಾಗಿ ಬಿಗ್ಬಾಸ್ ಫಿನಾಲೆ
ಬಿಗ್ ಮನೆಗೆ ಎಂಟ್ರಿ ಕೊಟ್ಟಿದ್ದ 7 ಎಲಿಮಿನೇಟ್ ಆದ ಸ್ಪರ್ಧಿಗಳು
ರಕ್ಷಕ್ ಬುಲೆಟ್ ಮೇಲೆ ಕೆರಳಿ ಕೆಂಡಮಂಡಲರಾದ ಕಿಚ್ಚ ಸುದೀಪ್
ಕನ್ನಡ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10 ಕೊನೆಯ ವಾರಕ್ಕೆ ಬಂದು ತಲುಪಿದೆ. ಇದರ ಜತೆ ಕಿಚ್ಚನ ಕೊನೆಯ ಪಂಚಾಯ್ತಿ ಇದಾಗಿದೆ. ಜನವರಿ 27 ಮತ್ತು 28ರಂದು ಅದ್ಧೂರಿಯಾಗಿ ಬಿಗ್ಬಾಸ್ ಫಿನಾಲೆ ಆಗಲಿದೆ. ಈಗ ಕೊನೆಯ ವಾರದ ಪಂಚಾಯ್ತಿಗೆ ಕಿಚ್ಚ ಸುದೀಪ್ ಖಡಕ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಅದರ ಜೊತೆಗೆ ಬಿಗ್ಬಾಸ್ನಿಂದ ಎಲಿಮಿನೇಟ್ ಆಗಿ ಮತ್ತೆ ಮನೆಗೆ ಬಂದ ಸ್ಪರ್ಧಿಗಳ ವಿರುದ್ಧ ಕೆಂಡ ಕಾರಿದ್ದಾರೆ. ರಿಲೀಸ್ ಆದ ಹೊಸ ಪ್ರೋಮೋದಲ್ಲಿ ಕಿಚ್ಚ ಸುದೀಪ್ ಹಳೇ ಕಂಟೆಸ್ಟೆಂಟ್ಗಳಾದ ಇಶಾನಿ ಹಾಗೂ ರಕ್ಷಕ್ ಬುಲೆಟ್ ಮೇಲೆ ಕೆರಳಿ ಕೆಂಡಮಂಡಲ ರಾಗಿದ್ದಾರೆ.
ರಿಲೀಸ್ ಆದ ಪ್ರೋಮೋದಲ್ಲಿ ಕಾಕೆ ಕಕ್ಕ ಮಾಡಿಕೊಂಡು ಸಿಂಪತಿಯಿಂದ ಗೆದ್ದುಕೊಂಡಿದೆ ವಾವ್ ಇಶಾನಿ. ಯಾವ ಌಂಗಲ್ನಲ್ಲಿ ನೀವು ಸೋತು ಹೊರಗಡೆ ಹೋಗಿ ಕಲಿತುಕೊಂಡು ಬಳಗಡೆ ಬಂದ್ರಿ ಅಂತಾ ನಿಮಗೆ ಅನಿಸುತ್ತಾ ಹೇಳಿ ಎಂದು ಕೇಳಿದ್ದಾರೆ. ಆದರೆ ನಮ್ರತಾ ಮಾತಿಗೆ ಕಿಚ್ಚ ಅಂತಹದ್ದೇನು ನಡೆದಿದೆ ಹೊರಗಡೆ ಎಂದು ಹೇಳಿದ್ದಾರೆ. ಮತ್ತೆ ರಕ್ಷಕ್ಗೆ ನಿಮಗೆ ಚೆನ್ನಾಗಿ ಇಟ್ಟಿರಲಿ ಆ ದೇವರು ಎಂದು ಕೌಂಟರ್ ಕೊಟ್ಟಿದ್ದಾರೆ. ಬಿಗ್ಬಾಸ್ ಮನೆಯಲ್ಲಿ ಇರುವವರ ತಪ್ಪು ಮಾಡಿದರೆ ಕಿಚ್ಚ ಸುದೀಪ್ ಅವರು ಕ್ಲಾಸ್ ತೆಗೆದುಕೊಳ್ಳುತ್ತಾರೆ ಸಾಮಾನ್ಯ. ಆದರೆ ಎಲಿಮಿನೇಟ್ ಆಗಿ ಹೋದವರು ತಪ್ಪು ಮಾಡಿದ ಸ್ಪರ್ಧಿಗಳ ವಿರುದ್ಧ ಕೆಂಡ ಕಾರಿದ್ದಾರೆ.
ಇದನ್ನು ಓದಿ: BIGG BOSS: ಇಶಾನಿ, ರಕ್ಷಕ್ಗೆ ಬೆಂಡೆತ್ತಿದ ಕಿಚ್ಚ ಸುದೀಪ್.. ಬಿಗ್ಬಾಸ್ ವಾರದ ಕತೆಯಲ್ಲಿ ಬೆಂಕಿ, ಬಿರುಗಾಳಿ!
View this post on Instagram
ಬಿಗ್ಬಾಸ್ ಮನೆಗೆ ಮೈಕೆಲ್, ಸ್ನೇಹಿತ್, ಈಶಾನಿ, ರಕ್ಷಕ್, ಸಿರಿ, ಭಾಗ್ಯಶ್ರೀ, ನೀತು ಬಂದಿದ್ದರು. ಈ ವೇಳೆ ಈಶಾನಿ ಆಡಿದ ಮಾತುಗಳಿಗೆ ತೀವ್ರ ಟೀಕೆ ಗುರಿಯಾಗಿದೆ. ಡ್ರೋನ್ ಪ್ರತಾಪ್ ಅವರನ್ನು ಕಾಗೆ ಎಂದು ಈಶಾನಿ ಹೇಳಿದ್ದಾರೆ. ಇದರ ಬಗ್ಗೆಯೇ ಕಿಚ್ಚ ಸುದೀಪ್ ವಾರದ ಪಂಚಾಯ್ತಿಯಲ್ಲಿ ಪ್ರಸ್ತಾಪ ಮಾಡಿದ್ದಾರೆ. ಬಳಿಕ ಸ್ನೇಹಿತ್ ಅವರು ನಮ್ರತಾಗೆ ನೀವು ಹೊರಗಡೆ ತುಂಬಾ ಕೆಟ್ಟದಾಗಿ ಕಾಣಿಸಿಕೊಳ್ಳುತ್ತಿರುವಿರಿ ಎಂದು ಹೇಳಿದ್ದರು. ಈ ಮಾತನ್ನು ಕೇಳಿದ ನಮ್ರತಾ ತುಂಬಾನೇ ಬೇಸರಗೊಂಡಿದ್ದರು.
ಬಳಿಕ ನ್ಯೂಸ್ಫಸ್ಟ್ನ ಸಂದರ್ಶನದಲ್ಲಿ ಸುದೀಪ್ ಅಣ್ಣ ಬಂದ ಕೂಡಲೇ ಎಲ್ಲರೂ, ಅಲ್ಲಿ ದೇವರು ನಿಂತುಕೊಂಡಿದ್ದಾರೆ. ಅವರು ಹೇಳಿದ ಮಾತನ್ನು ಕೇಳಿಕೊಂಡು ಅವರು ವರ ಕೊಡ್ತಾರೋ ಹಾಗೇ ಮಾಡಬೇಕು ಅಂತಾ ಇರುತ್ತಾರೆ ಎಂದಿದ್ದರು. ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ರಕ್ಷಕ್ ವಿರುದ್ಧ ಕಿಚ್ಚನ ಅಭಿಮಾನಿಗಳು ಕೆಂಡ ಕಾರಿದ್ದರು. ಹೀಗಾಗಿ ರಕ್ಷಕ್ಗೂ ಕೂಡ ವೇದಿಕೆ ಮೇಲೆ ಮಾತಿನ ಮೂಲಕವೇ ಕಿಚ್ಚ ಸುದೀಪ್ ಟಾಂಗ್ ಕೊಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಜನವರಿ 27 ಮತ್ತು 28ರಂದು ಅದ್ಧೂರಿಯಾಗಿ ಬಿಗ್ಬಾಸ್ ಫಿನಾಲೆ
ಬಿಗ್ ಮನೆಗೆ ಎಂಟ್ರಿ ಕೊಟ್ಟಿದ್ದ 7 ಎಲಿಮಿನೇಟ್ ಆದ ಸ್ಪರ್ಧಿಗಳು
ರಕ್ಷಕ್ ಬುಲೆಟ್ ಮೇಲೆ ಕೆರಳಿ ಕೆಂಡಮಂಡಲರಾದ ಕಿಚ್ಚ ಸುದೀಪ್
ಕನ್ನಡ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10 ಕೊನೆಯ ವಾರಕ್ಕೆ ಬಂದು ತಲುಪಿದೆ. ಇದರ ಜತೆ ಕಿಚ್ಚನ ಕೊನೆಯ ಪಂಚಾಯ್ತಿ ಇದಾಗಿದೆ. ಜನವರಿ 27 ಮತ್ತು 28ರಂದು ಅದ್ಧೂರಿಯಾಗಿ ಬಿಗ್ಬಾಸ್ ಫಿನಾಲೆ ಆಗಲಿದೆ. ಈಗ ಕೊನೆಯ ವಾರದ ಪಂಚಾಯ್ತಿಗೆ ಕಿಚ್ಚ ಸುದೀಪ್ ಖಡಕ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಅದರ ಜೊತೆಗೆ ಬಿಗ್ಬಾಸ್ನಿಂದ ಎಲಿಮಿನೇಟ್ ಆಗಿ ಮತ್ತೆ ಮನೆಗೆ ಬಂದ ಸ್ಪರ್ಧಿಗಳ ವಿರುದ್ಧ ಕೆಂಡ ಕಾರಿದ್ದಾರೆ. ರಿಲೀಸ್ ಆದ ಹೊಸ ಪ್ರೋಮೋದಲ್ಲಿ ಕಿಚ್ಚ ಸುದೀಪ್ ಹಳೇ ಕಂಟೆಸ್ಟೆಂಟ್ಗಳಾದ ಇಶಾನಿ ಹಾಗೂ ರಕ್ಷಕ್ ಬುಲೆಟ್ ಮೇಲೆ ಕೆರಳಿ ಕೆಂಡಮಂಡಲ ರಾಗಿದ್ದಾರೆ.
ರಿಲೀಸ್ ಆದ ಪ್ರೋಮೋದಲ್ಲಿ ಕಾಕೆ ಕಕ್ಕ ಮಾಡಿಕೊಂಡು ಸಿಂಪತಿಯಿಂದ ಗೆದ್ದುಕೊಂಡಿದೆ ವಾವ್ ಇಶಾನಿ. ಯಾವ ಌಂಗಲ್ನಲ್ಲಿ ನೀವು ಸೋತು ಹೊರಗಡೆ ಹೋಗಿ ಕಲಿತುಕೊಂಡು ಬಳಗಡೆ ಬಂದ್ರಿ ಅಂತಾ ನಿಮಗೆ ಅನಿಸುತ್ತಾ ಹೇಳಿ ಎಂದು ಕೇಳಿದ್ದಾರೆ. ಆದರೆ ನಮ್ರತಾ ಮಾತಿಗೆ ಕಿಚ್ಚ ಅಂತಹದ್ದೇನು ನಡೆದಿದೆ ಹೊರಗಡೆ ಎಂದು ಹೇಳಿದ್ದಾರೆ. ಮತ್ತೆ ರಕ್ಷಕ್ಗೆ ನಿಮಗೆ ಚೆನ್ನಾಗಿ ಇಟ್ಟಿರಲಿ ಆ ದೇವರು ಎಂದು ಕೌಂಟರ್ ಕೊಟ್ಟಿದ್ದಾರೆ. ಬಿಗ್ಬಾಸ್ ಮನೆಯಲ್ಲಿ ಇರುವವರ ತಪ್ಪು ಮಾಡಿದರೆ ಕಿಚ್ಚ ಸುದೀಪ್ ಅವರು ಕ್ಲಾಸ್ ತೆಗೆದುಕೊಳ್ಳುತ್ತಾರೆ ಸಾಮಾನ್ಯ. ಆದರೆ ಎಲಿಮಿನೇಟ್ ಆಗಿ ಹೋದವರು ತಪ್ಪು ಮಾಡಿದ ಸ್ಪರ್ಧಿಗಳ ವಿರುದ್ಧ ಕೆಂಡ ಕಾರಿದ್ದಾರೆ.
ಇದನ್ನು ಓದಿ: BIGG BOSS: ಇಶಾನಿ, ರಕ್ಷಕ್ಗೆ ಬೆಂಡೆತ್ತಿದ ಕಿಚ್ಚ ಸುದೀಪ್.. ಬಿಗ್ಬಾಸ್ ವಾರದ ಕತೆಯಲ್ಲಿ ಬೆಂಕಿ, ಬಿರುಗಾಳಿ!
View this post on Instagram
ಬಿಗ್ಬಾಸ್ ಮನೆಗೆ ಮೈಕೆಲ್, ಸ್ನೇಹಿತ್, ಈಶಾನಿ, ರಕ್ಷಕ್, ಸಿರಿ, ಭಾಗ್ಯಶ್ರೀ, ನೀತು ಬಂದಿದ್ದರು. ಈ ವೇಳೆ ಈಶಾನಿ ಆಡಿದ ಮಾತುಗಳಿಗೆ ತೀವ್ರ ಟೀಕೆ ಗುರಿಯಾಗಿದೆ. ಡ್ರೋನ್ ಪ್ರತಾಪ್ ಅವರನ್ನು ಕಾಗೆ ಎಂದು ಈಶಾನಿ ಹೇಳಿದ್ದಾರೆ. ಇದರ ಬಗ್ಗೆಯೇ ಕಿಚ್ಚ ಸುದೀಪ್ ವಾರದ ಪಂಚಾಯ್ತಿಯಲ್ಲಿ ಪ್ರಸ್ತಾಪ ಮಾಡಿದ್ದಾರೆ. ಬಳಿಕ ಸ್ನೇಹಿತ್ ಅವರು ನಮ್ರತಾಗೆ ನೀವು ಹೊರಗಡೆ ತುಂಬಾ ಕೆಟ್ಟದಾಗಿ ಕಾಣಿಸಿಕೊಳ್ಳುತ್ತಿರುವಿರಿ ಎಂದು ಹೇಳಿದ್ದರು. ಈ ಮಾತನ್ನು ಕೇಳಿದ ನಮ್ರತಾ ತುಂಬಾನೇ ಬೇಸರಗೊಂಡಿದ್ದರು.
ಬಳಿಕ ನ್ಯೂಸ್ಫಸ್ಟ್ನ ಸಂದರ್ಶನದಲ್ಲಿ ಸುದೀಪ್ ಅಣ್ಣ ಬಂದ ಕೂಡಲೇ ಎಲ್ಲರೂ, ಅಲ್ಲಿ ದೇವರು ನಿಂತುಕೊಂಡಿದ್ದಾರೆ. ಅವರು ಹೇಳಿದ ಮಾತನ್ನು ಕೇಳಿಕೊಂಡು ಅವರು ವರ ಕೊಡ್ತಾರೋ ಹಾಗೇ ಮಾಡಬೇಕು ಅಂತಾ ಇರುತ್ತಾರೆ ಎಂದಿದ್ದರು. ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ರಕ್ಷಕ್ ವಿರುದ್ಧ ಕಿಚ್ಚನ ಅಭಿಮಾನಿಗಳು ಕೆಂಡ ಕಾರಿದ್ದರು. ಹೀಗಾಗಿ ರಕ್ಷಕ್ಗೂ ಕೂಡ ವೇದಿಕೆ ಮೇಲೆ ಮಾತಿನ ಮೂಲಕವೇ ಕಿಚ್ಚ ಸುದೀಪ್ ಟಾಂಗ್ ಕೊಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ