newsfirstkannada.com

BBK10: ‘ಬಿಗ್‌ಬಾಸ್‌ ಮನೆಯಲ್ಲಿ ದೇವರು ನಿಂತಿದ್ದಾರೆ’- ರಕ್ಷಕ್‌ ಮಾತಿಗೆ ಕಿಚ್ಚ ಸುದೀಪ್ ಕೊಟ್ರು ಕೌಂಟರ್!

Share :

Published January 20, 2024 at 6:28pm

    ಜನವರಿ 27 ಮತ್ತು 28ರಂದು ಅದ್ಧೂರಿಯಾಗಿ ಬಿಗ್​​ಬಾಸ್​ ಫಿನಾಲೆ

    ಬಿಗ್​ ಮನೆಗೆ ಎಂಟ್ರಿ ಕೊಟ್ಟಿದ್ದ 7 ಎಲಿಮಿನೇಟ್​ ಆದ ಸ್ಪರ್ಧಿಗಳು

    ರಕ್ಷಕ್‌ ಬುಲೆಟ್ ಮೇಲೆ ಕೆರಳಿ ಕೆಂಡಮಂಡಲರಾದ ಕಿಚ್ಚ ಸುದೀಪ್​​

ಕನ್ನಡ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10 ಕೊನೆಯ ವಾರಕ್ಕೆ ಬಂದು ತಲುಪಿದೆ. ಇದರ ಜತೆ ಕಿಚ್ಚನ ಕೊನೆಯ ಪಂಚಾಯ್ತಿ ಇದಾಗಿದೆ. ಜನವರಿ 27 ಮತ್ತು 28ರಂದು ಅದ್ಧೂರಿಯಾಗಿ ಬಿಗ್​​ಬಾಸ್​ ಫಿನಾಲೆ ಆಗಲಿದೆ. ಈಗ ಕೊನೆಯ ವಾರದ ಪಂಚಾಯ್ತಿಗೆ ಕಿಚ್ಚ ಸುದೀಪ್‌ ಖಡಕ್​ ಆಗಿ ಎಂಟ್ರಿ ಕೊಟ್ಟಿದ್ದಾರೆ. ಅದರ ಜೊತೆಗೆ ಬಿಗ್​ಬಾಸ್​​ನಿಂದ ಎಲಿಮಿನೇಟ್ ಆಗಿ ಮತ್ತೆ ಮನೆಗೆ ಬಂದ ಸ್ಪರ್ಧಿಗಳ ವಿರುದ್ಧ ಕೆಂಡ ಕಾರಿದ್ದಾರೆ. ರಿಲೀಸ್ ಆದ ಹೊಸ ಪ್ರೋಮೋದಲ್ಲಿ ಕಿಚ್ಚ ಸುದೀಪ್​ ಹಳೇ ಕಂಟೆಸ್ಟೆಂಟ್‌ಗಳಾದ ಇಶಾನಿ ಹಾಗೂ ರಕ್ಷಕ್‌ ಬುಲೆಟ್ ಮೇಲೆ ಕೆರಳಿ ಕೆಂಡಮಂಡಲ ರಾಗಿದ್ದಾರೆ.

ರಿಲೀಸ್​ ಆದ ಪ್ರೋಮೋದಲ್ಲಿ ಕಾಕೆ ಕಕ್ಕ ಮಾಡಿಕೊಂಡು ಸಿಂಪತಿಯಿಂದ ಗೆದ್ದುಕೊಂಡಿದೆ ವಾವ್​​ ಇಶಾನಿ. ಯಾವ ಌಂಗಲ್​ನಲ್ಲಿ ನೀವು ಸೋತು ಹೊರಗಡೆ ಹೋಗಿ ಕಲಿತುಕೊಂಡು ಬಳಗಡೆ ಬಂದ್ರಿ ಅಂತಾ ನಿಮಗೆ ಅನಿಸುತ್ತಾ ಹೇಳಿ ಎಂದು ಕೇಳಿದ್ದಾರೆ. ಆದರೆ ನಮ್ರತಾ ಮಾತಿಗೆ ಕಿಚ್ಚ ಅಂತಹದ್ದೇನು ನಡೆದಿದೆ ಹೊರಗಡೆ ಎಂದು ಹೇಳಿದ್ದಾರೆ. ಮತ್ತೆ ರಕ್ಷಕ್​ಗೆ ನಿಮಗೆ ಚೆನ್ನಾಗಿ ಇಟ್ಟಿರಲಿ ಆ ದೇವರು ಎಂದು ಕೌಂಟರ್​ ಕೊಟ್ಟಿದ್ದಾರೆ. ಬಿಗ್​ಬಾಸ್ ಮನೆಯಲ್ಲಿ ಇರುವವರ ತಪ್ಪು ಮಾಡಿದರೆ ಕಿಚ್ಚ ಸುದೀಪ್ ಅವರು​ ಕ್ಲಾಸ್​ ತೆಗೆದುಕೊಳ್ಳುತ್ತಾರೆ ಸಾಮಾನ್ಯ. ಆದರೆ ಎಲಿಮಿನೇಟ್ ಆಗಿ ಹೋದವರು ತಪ್ಪು ಮಾಡಿದ ಸ್ಪರ್ಧಿಗಳ ವಿರುದ್ಧ ಕೆಂಡ ಕಾರಿದ್ದಾರೆ.

ಇದನ್ನು ಓದಿ: BIGG BOSS: ಇಶಾನಿ, ರಕ್ಷಕ್‌ಗೆ ಬೆಂಡೆತ್ತಿದ ಕಿಚ್ಚ ಸುದೀಪ್‌.. ಬಿಗ್‌ಬಾಸ್‌ ವಾರದ ಕತೆಯಲ್ಲಿ ಬೆಂಕಿ, ಬಿರುಗಾಳಿ!

ಬಿಗ್​ಬಾಸ್​ ಮನೆಗೆ ಮೈಕೆಲ್​, ಸ್ನೇಹಿತ್​, ಈಶಾನಿ, ರಕ್ಷಕ್​, ಸಿರಿ, ಭಾಗ್ಯಶ್ರೀ, ನೀತು ಬಂದಿದ್ದರು. ಈ ವೇಳೆ ಈಶಾನಿ ಆಡಿದ ಮಾತುಗಳಿಗೆ ತೀವ್ರ ಟೀಕೆ ಗುರಿಯಾಗಿದೆ. ಡ್ರೋನ್​ ಪ್ರತಾಪ್​ ಅವರನ್ನು ಕಾಗೆ ಎಂದು ಈಶಾನಿ ಹೇಳಿದ್ದಾರೆ. ಇದರ ಬಗ್ಗೆಯೇ ಕಿಚ್ಚ ಸುದೀಪ್​ ವಾರದ ಪಂಚಾಯ್ತಿಯಲ್ಲಿ ಪ್ರಸ್ತಾಪ ಮಾಡಿದ್ದಾರೆ. ಬಳಿಕ ಸ್ನೇಹಿತ್​ ಅವರು ನಮ್ರತಾಗೆ ನೀವು ಹೊರಗಡೆ ತುಂಬಾ ಕೆಟ್ಟದಾಗಿ ಕಾಣಿಸಿಕೊಳ್ಳುತ್ತಿರುವಿರಿ ಎಂದು ಹೇಳಿದ್ದರು. ಈ ಮಾತನ್ನು ಕೇಳಿದ ನಮ್ರತಾ ತುಂಬಾನೇ ಬೇಸರಗೊಂಡಿದ್ದರು.

ಬಳಿಕ ನ್ಯೂಸ್​​ಫಸ್ಟ್​ನ ಸಂದರ್ಶನದಲ್ಲಿ ಸುದೀಪ್​ ಅಣ್ಣ ಬಂದ ಕೂಡಲೇ ಎಲ್ಲರೂ, ಅಲ್ಲಿ ದೇವರು ನಿಂತುಕೊಂಡಿದ್ದಾರೆ. ಅವರು ಹೇಳಿದ ಮಾತನ್ನು ಕೇಳಿಕೊಂಡು ಅವರು ವರ ಕೊಡ್ತಾರೋ ಹಾಗೇ ಮಾಡಬೇಕು ಅಂತಾ ಇರುತ್ತಾರೆ ಎಂದಿದ್ದರು. ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿತ್ತು. ರಕ್ಷಕ್​ ವಿರುದ್ಧ ಕಿಚ್ಚನ ಅಭಿಮಾನಿಗಳು ಕೆಂಡ ಕಾರಿದ್ದರು. ಹೀಗಾಗಿ ರಕ್ಷಕ್​​ಗೂ ಕೂಡ ವೇದಿಕೆ ಮೇಲೆ ಮಾತಿನ ಮೂಲಕವೇ ಕಿಚ್ಚ ಸುದೀಪ್​ ಟಾಂಗ್​ ಕೊಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BBK10: ‘ಬಿಗ್‌ಬಾಸ್‌ ಮನೆಯಲ್ಲಿ ದೇವರು ನಿಂತಿದ್ದಾರೆ’- ರಕ್ಷಕ್‌ ಮಾತಿಗೆ ಕಿಚ್ಚ ಸುದೀಪ್ ಕೊಟ್ರು ಕೌಂಟರ್!

https://newsfirstlive.com/wp-content/uploads/2024/01/bigg-boss-2024-01-20T173240.468.jpg

    ಜನವರಿ 27 ಮತ್ತು 28ರಂದು ಅದ್ಧೂರಿಯಾಗಿ ಬಿಗ್​​ಬಾಸ್​ ಫಿನಾಲೆ

    ಬಿಗ್​ ಮನೆಗೆ ಎಂಟ್ರಿ ಕೊಟ್ಟಿದ್ದ 7 ಎಲಿಮಿನೇಟ್​ ಆದ ಸ್ಪರ್ಧಿಗಳು

    ರಕ್ಷಕ್‌ ಬುಲೆಟ್ ಮೇಲೆ ಕೆರಳಿ ಕೆಂಡಮಂಡಲರಾದ ಕಿಚ್ಚ ಸುದೀಪ್​​

ಕನ್ನಡ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10 ಕೊನೆಯ ವಾರಕ್ಕೆ ಬಂದು ತಲುಪಿದೆ. ಇದರ ಜತೆ ಕಿಚ್ಚನ ಕೊನೆಯ ಪಂಚಾಯ್ತಿ ಇದಾಗಿದೆ. ಜನವರಿ 27 ಮತ್ತು 28ರಂದು ಅದ್ಧೂರಿಯಾಗಿ ಬಿಗ್​​ಬಾಸ್​ ಫಿನಾಲೆ ಆಗಲಿದೆ. ಈಗ ಕೊನೆಯ ವಾರದ ಪಂಚಾಯ್ತಿಗೆ ಕಿಚ್ಚ ಸುದೀಪ್‌ ಖಡಕ್​ ಆಗಿ ಎಂಟ್ರಿ ಕೊಟ್ಟಿದ್ದಾರೆ. ಅದರ ಜೊತೆಗೆ ಬಿಗ್​ಬಾಸ್​​ನಿಂದ ಎಲಿಮಿನೇಟ್ ಆಗಿ ಮತ್ತೆ ಮನೆಗೆ ಬಂದ ಸ್ಪರ್ಧಿಗಳ ವಿರುದ್ಧ ಕೆಂಡ ಕಾರಿದ್ದಾರೆ. ರಿಲೀಸ್ ಆದ ಹೊಸ ಪ್ರೋಮೋದಲ್ಲಿ ಕಿಚ್ಚ ಸುದೀಪ್​ ಹಳೇ ಕಂಟೆಸ್ಟೆಂಟ್‌ಗಳಾದ ಇಶಾನಿ ಹಾಗೂ ರಕ್ಷಕ್‌ ಬುಲೆಟ್ ಮೇಲೆ ಕೆರಳಿ ಕೆಂಡಮಂಡಲ ರಾಗಿದ್ದಾರೆ.

ರಿಲೀಸ್​ ಆದ ಪ್ರೋಮೋದಲ್ಲಿ ಕಾಕೆ ಕಕ್ಕ ಮಾಡಿಕೊಂಡು ಸಿಂಪತಿಯಿಂದ ಗೆದ್ದುಕೊಂಡಿದೆ ವಾವ್​​ ಇಶಾನಿ. ಯಾವ ಌಂಗಲ್​ನಲ್ಲಿ ನೀವು ಸೋತು ಹೊರಗಡೆ ಹೋಗಿ ಕಲಿತುಕೊಂಡು ಬಳಗಡೆ ಬಂದ್ರಿ ಅಂತಾ ನಿಮಗೆ ಅನಿಸುತ್ತಾ ಹೇಳಿ ಎಂದು ಕೇಳಿದ್ದಾರೆ. ಆದರೆ ನಮ್ರತಾ ಮಾತಿಗೆ ಕಿಚ್ಚ ಅಂತಹದ್ದೇನು ನಡೆದಿದೆ ಹೊರಗಡೆ ಎಂದು ಹೇಳಿದ್ದಾರೆ. ಮತ್ತೆ ರಕ್ಷಕ್​ಗೆ ನಿಮಗೆ ಚೆನ್ನಾಗಿ ಇಟ್ಟಿರಲಿ ಆ ದೇವರು ಎಂದು ಕೌಂಟರ್​ ಕೊಟ್ಟಿದ್ದಾರೆ. ಬಿಗ್​ಬಾಸ್ ಮನೆಯಲ್ಲಿ ಇರುವವರ ತಪ್ಪು ಮಾಡಿದರೆ ಕಿಚ್ಚ ಸುದೀಪ್ ಅವರು​ ಕ್ಲಾಸ್​ ತೆಗೆದುಕೊಳ್ಳುತ್ತಾರೆ ಸಾಮಾನ್ಯ. ಆದರೆ ಎಲಿಮಿನೇಟ್ ಆಗಿ ಹೋದವರು ತಪ್ಪು ಮಾಡಿದ ಸ್ಪರ್ಧಿಗಳ ವಿರುದ್ಧ ಕೆಂಡ ಕಾರಿದ್ದಾರೆ.

ಇದನ್ನು ಓದಿ: BIGG BOSS: ಇಶಾನಿ, ರಕ್ಷಕ್‌ಗೆ ಬೆಂಡೆತ್ತಿದ ಕಿಚ್ಚ ಸುದೀಪ್‌.. ಬಿಗ್‌ಬಾಸ್‌ ವಾರದ ಕತೆಯಲ್ಲಿ ಬೆಂಕಿ, ಬಿರುಗಾಳಿ!

ಬಿಗ್​ಬಾಸ್​ ಮನೆಗೆ ಮೈಕೆಲ್​, ಸ್ನೇಹಿತ್​, ಈಶಾನಿ, ರಕ್ಷಕ್​, ಸಿರಿ, ಭಾಗ್ಯಶ್ರೀ, ನೀತು ಬಂದಿದ್ದರು. ಈ ವೇಳೆ ಈಶಾನಿ ಆಡಿದ ಮಾತುಗಳಿಗೆ ತೀವ್ರ ಟೀಕೆ ಗುರಿಯಾಗಿದೆ. ಡ್ರೋನ್​ ಪ್ರತಾಪ್​ ಅವರನ್ನು ಕಾಗೆ ಎಂದು ಈಶಾನಿ ಹೇಳಿದ್ದಾರೆ. ಇದರ ಬಗ್ಗೆಯೇ ಕಿಚ್ಚ ಸುದೀಪ್​ ವಾರದ ಪಂಚಾಯ್ತಿಯಲ್ಲಿ ಪ್ರಸ್ತಾಪ ಮಾಡಿದ್ದಾರೆ. ಬಳಿಕ ಸ್ನೇಹಿತ್​ ಅವರು ನಮ್ರತಾಗೆ ನೀವು ಹೊರಗಡೆ ತುಂಬಾ ಕೆಟ್ಟದಾಗಿ ಕಾಣಿಸಿಕೊಳ್ಳುತ್ತಿರುವಿರಿ ಎಂದು ಹೇಳಿದ್ದರು. ಈ ಮಾತನ್ನು ಕೇಳಿದ ನಮ್ರತಾ ತುಂಬಾನೇ ಬೇಸರಗೊಂಡಿದ್ದರು.

ಬಳಿಕ ನ್ಯೂಸ್​​ಫಸ್ಟ್​ನ ಸಂದರ್ಶನದಲ್ಲಿ ಸುದೀಪ್​ ಅಣ್ಣ ಬಂದ ಕೂಡಲೇ ಎಲ್ಲರೂ, ಅಲ್ಲಿ ದೇವರು ನಿಂತುಕೊಂಡಿದ್ದಾರೆ. ಅವರು ಹೇಳಿದ ಮಾತನ್ನು ಕೇಳಿಕೊಂಡು ಅವರು ವರ ಕೊಡ್ತಾರೋ ಹಾಗೇ ಮಾಡಬೇಕು ಅಂತಾ ಇರುತ್ತಾರೆ ಎಂದಿದ್ದರು. ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿತ್ತು. ರಕ್ಷಕ್​ ವಿರುದ್ಧ ಕಿಚ್ಚನ ಅಭಿಮಾನಿಗಳು ಕೆಂಡ ಕಾರಿದ್ದರು. ಹೀಗಾಗಿ ರಕ್ಷಕ್​​ಗೂ ಕೂಡ ವೇದಿಕೆ ಮೇಲೆ ಮಾತಿನ ಮೂಲಕವೇ ಕಿಚ್ಚ ಸುದೀಪ್​ ಟಾಂಗ್​ ಕೊಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More