newsfirstkannada.com

×

ಕಿಚ್ಚನ ವಿರುದ್ಧ ಆರೋಪ ಕೇಸ್​ಗೆ ಬಿಗ್​ ಟ್ವಿಸ್ಟ್​​.. ಕಾನೂನು ಹೋರಾಟಕ್ಕಿಳಿದ ಸುದೀಪ್!

Share :

Published July 16, 2023 at 8:51pm

    ನಟ ಕಿಚ್ಚ ಸುದೀಪ್ ವಿರುದ್ಧ ವಂಚನೆ ಆರೋಪ

    ಪ್ರೊಡ್ಯೂಸರ್ಸ್ ವಿರುದ್ಧ ಕಿಚ್ಚನ ಫ್ಯಾನ್ಸ್‌ ಕಿಚ್ಚು..!

    ಮಲೆನಾಡಿನ ಮಣ್ಣಿನಲ್ಲಿ ಕಿಚ್ಚನ ಧ್ವಜಗಳ ಹಾರಾಟ

ಬೆಂಗಳೂರು: ನಿರ್ಮಾಪಕರ ಪಾಲಿನ ಮಾಣಿಕ್ಯನಂತಿದ್ದ ಕಿಚ್ಚ ಸುದೀಪ್ ಈಗ ಕೆಲವೊಬ್ಬರಿಗೆ ಬೇಡವಾಗಿಬಿಟ್ರಾ? ಹೀಗೊಂದು ಮಾತು ಗಾಂಧಿನಗರದಲ್ಲಿ ಗುಲ್ಲೆಬ್ಬಿಸಿದೆ. ಸುದೀಪ್‌ ಅಭಿನಯದ ಚಿತ್ರಗಳಿಗೆ ಕಣ್ಮುಚ್ಚಿಕೊಂಡು ಹಣ ಸುರಿಯುತ್ತಿದ್ದ ನಿರ್ಮಾಪಕರೇ ಅವರ ವಿರುದ್ಧ ತಿರುಗಿಬಿದಿದ್ರು. ರನ್ನನ ವಿರುದ್ಧ ವಂಚನೆಯ ಆರೋಪವನ್ನೂ ಮಾಡಿದ್ರು. ಸದ್ಯ ಈ ಆರೋಪದ ವಿರುದ್ಧ ಕಿಚ್ಚನ ಅಭಿಮಾನಿಗಳು ಸಿಡಿದೆದ್ದಿದ್ದಾರೆ. ನಿರ್ಮಾಪಕರ ವಿರುದ್ಧ ಹೋರಾಟ ಮಾಡಿದ್ದಾರೆ.

ಕಿಚ್ಚ ಸುದೀಪ್‌ ಸ್ಯಾಂಡಲ್‌ವುಡ್ ಅಭಿನಯ ಚಕ್ರವರ್ತಿ. ಅಭಿಮಾನಿಗಳ ನೆಚ್ಚಿನ ರನ್ನ. ಕನ್ನಡ ಚಿತ್ರರಂಗದ ಮಾಣಿಕ್ಯ. ಆದ್ರೀಗ ನಿರ್ಮಾಪಕರ ಪಾಲಿಗೆ ಕಿಚ್ಚ ಸುದೀಪ್‌ ಅದ್ಯಾಕೋ ಕೈಗೆ ಸಿಗದ ಹುಳಿ ದ್ರಾಕ್ಷಿಯಂತಾಗಿದ್ದಾರೆ. ತಮ್ಮಿಂದ ಹಣ ಪಡೆದು ಸುದೀಪ್ ವಂಚಿಸಿದ್ದಾರೆ ಅಂತಾ ಬಹಿರಂಗ ಸಮರ ಸಾರಿದ್ದಾರೆ. ಹೀಗೆ ಆರೋಪಿಸಿದ್ದ ನಿರ್ಮಾಪಕನ ವಿರುದ್ಧ ಕಿಚ್ಚ ಕೋರ್ಟ್ ಮೆಟ್ಟಿಲೇರಿದ್ದಾರೆ. ಇದೀಗ ತಮ್ಮ ನೆಚ್ಚಿನ ನಟನ ವಿರುದ್ಧ ಮಾಡಿರೋ ಆರೋಪದ ವಿರುದ್ಧ ಅಭಿಮಾನಿಗಳು ಸಿಡಿದೆದ್ದಿದ್ದಾರೆ.

ಸುದೀಪ್ ವಿರುದ್ಧ ನಿರ್ಮಾಪಕರಿಂದ ವಂಚನೆ ಆರೋಪ

ಮಲೆನಾಡಿನ ಮಣ್ಣಿನಲ್ಲಿ ಕಿಚ್ಚನ ಧ್ವಜಗಳ ಹಾರಾಟ. ನಿರ್ಮಾಪಕರಾದ ಸೂರಪ್ಪ ಬಾಬು, ರೆಹಮಾನ್, ಎಂ.ಎನ್‌. ಕುಮಾರ್ ಫ್ಲೆಕ್ಸ್‌ ಹಿಡಿದು ಆಕ್ರೋಶ. ಕಿಚ್ಚನ ವಿರುದ್ಧ ವಂಚನೆ ಆರೋಪ ಮಾಡಿದ್ದವರ ವಿರುದ್ಧ ಕಿಚ್ಚನ ಅಭಿಮಾನಿಗಳ ಕಿಚ್ಚು. ಇದು ಕಿಚ್ಚ ಸುದೀಪ್ ಅಭಿಮಾನಿಗಳ ಆಕ್ರೋಶದ ಪರಿ.

ಕಳೆದ ಹತ್ತು ದಿನಗಳಿಂದ ಸ್ಯಾಂಡಲ್‌ವುಡ್‌ನಲ್ಲಿ ನಟ ಸುದೀಪ್ ಮತ್ತು ನಿರ್ಮಾಪಕ ನಡುವಿನ ಸಮರ ಭಾರೀ ಸದ್ದು ಮಾಡಿತ್ತು. ಕಿಚ್ಚ ಸುದೀಪ್‌ ಸಿನಿಮಾಗಳಿಗೆ ಹಣ ಸುರಿದವರು, ಹಿಟ್ ಮೇಲೆ ಹಿಟ್ ಕೊಟ್ಟ ನಿರ್ಮಾಪಕರೇ ನಟನ ವಿರುದ್ಧ ಬಹಿರಂಗ ಮಾತಿನಯುದ್ಧ ಆರಂಭಿಸಿದ್ರು. ಅಷ್ಟೇ ಅಲ್ಲ ಈ ವಿಚಾರ ಕೋರ್ಟ್​ ಮೆಟ್ಟಿಲೇರಿದೆ. ಸಿನಿಮಾ ಮಾಡಿ ಕೊಡ್ತಿನಿ ಎಂದು ಹೇಳಿ ಸುದೀಪ್ ಹಣ ಪಡೆದು ಸಿನಿಮಾನೂ ಮಾಡಿಕೊಡ್ತಿಲ್ಲ, ದುಡ್ಡು ವಾಪಸ್ ಕೊಡ್ತಿಲ್ಲ ಅಂತ ನಿರ್ಮಾಪಕ ಎಂ. ಎನ್ ಕುಮಾರ್ ಕಿಚ್ಚನ ವಿರುದ್ಧ ಸಾಲು ಸಾಲು ಆರೋಪ ಮಾಡಿದ್ರು. ಇದೀಗ ನಿರ್ಮಾಪಕನ ವಿರುದ್ಧ ಕಿಚ್ಚ ಸುದೀಪ್ ಕಾನೂನು ಹೋರಾಟಕ್ಕಿಳಿದಿದ್ದಾರೆ. ಇದ್ರ ಮಧ್ಯೆ ಶಿವಮೊಗ್ಗದಲ್ಲಿ ಕಿಚ್ಚನ ಅಭಿಮಾನಿಗಳು ಬೀದಿಗಿಳಿದು ನಿರ್ಮಾಪಕರ ನಡೆಯನ್ನ ಖಂಡಿಸಿದ್ದಾರೆ.

ಯೆಸ್‌.. ಇವತ್ತು ಅಭಿನಯ ಚಕ್ರವರ್ತಿಯ ಶಿವಮೊಗ್ಗದ ಅಭಿಮಾನಿಗಳು ಬೃಹತ್ ಪ್ರತಿಭಟನೆ ನಡೆಸಿದ್ರು. ಶಿವಮೊಗ್ಗದ ಗೋಪಿ ಸರ್ಕಲ್‌ನಿಂದ ಕೋರ್ಟ್ ಸರ್ಕಲ್‌ವರೆಗೆ ಪ್ರತಿಭಟನಾ ಱಲಿ ನಡೆಸಿದ್ರು. ನಟ ಸುದೀಪ್ ಬೆಂಬಲಿಸಿ ಫ್ಯಾನ್ಸ್‌ ಘೋಷಣೆ ಕೂಗಿದ್ರು. ನಿರ್ಮಾಪಕರಾದ ಎಂ.ಎನ್. ಕುಮಾರ್, ಸೂರಪ್ಪ ಬಾಬು ಹಾಗೂ ರೆಹಮಾನ್ ವಿರುದ್ಧ ಪ್ರತಿಭಟನೆ ನಡೆಸಿದ್ರು.

ಪ್ರೊಡ್ಯೂಸರ್ಸ್ ವಿರುದ್ಧ ಕಿಚ್ಚನ ಫ್ಯಾನ್ಸ್‌ ಕಿಚ್ಚು..!

ಅದಷ್ಟೇ ಅಲ್ಲ.. ತಮ್ಮ ನೆಚ್ಚಿನ ನಟನ ವಿರುದ್ಧ ನಿರ್ಮಾಪಕರೆಲ್ಲಾ ಸುಳ್ಳು ಆರೋಪ ಮಾಡ್ತಿದ್ದಾರೆ. ಈ ಮೂಲಕ ಅವರ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡ್ತಿದ್ದಾರೆ. ಹೀಗೆ ಸುಖಾಸುಮ್ಮನೆ ಆರೋಪ ಮಾಡಿದ್ರೆ ಚಲನಚಿತ್ರ ವಾಣಿಜ್ಯ ಮಂಡಳಿ ಮುಂಭಾಗ ಬೃಹತ್ ಪ್ರತಿಭಟನೆ ಮಾಡುವುದಾಗಿ ಕಿಚ್ಚನ ಅಭಿಮಾನಿಗಳು ಎಚ್ಚರಿಕೆ ನೀಡಿದ್ರು.

ಒಟ್ಟಾರೆ, ಕಿಚ್ಚನ ವಿರುದ್ಧ ನಿರ್ಮಾಪಕರೆಲ್ಲಾ ಒಂದಾಗಿ ವಂಚನೆಯ ಆರೋಪ ಮಾಡ್ತಿದ್ದಾರೆ. ಇದರ ವಿರುದ್ಧ ಸುದೀಪ್ ಕೋರ್ಟ್ ಮೆಟ್ಟಿಲೇರಿದ್ದಾರೆ. ಇದ್ರ ಮಧ್ಯೆ ಕಿಚ್ಚನ ಅಭಿಮಾನಿಗಳು ಸಿಡಿದೆದ್ದಿದ್ದಾರೆ.. ನಿರ್ಮಾಪಕರಿಗೆ ವಾರ್ನಿಂಗ್ ಕೊಟ್ಟಿದ್ದಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಕಿಚ್ಚನ ವಿರುದ್ಧ ಆರೋಪ ಕೇಸ್​ಗೆ ಬಿಗ್​ ಟ್ವಿಸ್ಟ್​​.. ಕಾನೂನು ಹೋರಾಟಕ್ಕಿಳಿದ ಸುದೀಪ್!

https://newsfirstlive.com/wp-content/uploads/2023/07/Sudeep-2.jpg

    ನಟ ಕಿಚ್ಚ ಸುದೀಪ್ ವಿರುದ್ಧ ವಂಚನೆ ಆರೋಪ

    ಪ್ರೊಡ್ಯೂಸರ್ಸ್ ವಿರುದ್ಧ ಕಿಚ್ಚನ ಫ್ಯಾನ್ಸ್‌ ಕಿಚ್ಚು..!

    ಮಲೆನಾಡಿನ ಮಣ್ಣಿನಲ್ಲಿ ಕಿಚ್ಚನ ಧ್ವಜಗಳ ಹಾರಾಟ

ಬೆಂಗಳೂರು: ನಿರ್ಮಾಪಕರ ಪಾಲಿನ ಮಾಣಿಕ್ಯನಂತಿದ್ದ ಕಿಚ್ಚ ಸುದೀಪ್ ಈಗ ಕೆಲವೊಬ್ಬರಿಗೆ ಬೇಡವಾಗಿಬಿಟ್ರಾ? ಹೀಗೊಂದು ಮಾತು ಗಾಂಧಿನಗರದಲ್ಲಿ ಗುಲ್ಲೆಬ್ಬಿಸಿದೆ. ಸುದೀಪ್‌ ಅಭಿನಯದ ಚಿತ್ರಗಳಿಗೆ ಕಣ್ಮುಚ್ಚಿಕೊಂಡು ಹಣ ಸುರಿಯುತ್ತಿದ್ದ ನಿರ್ಮಾಪಕರೇ ಅವರ ವಿರುದ್ಧ ತಿರುಗಿಬಿದಿದ್ರು. ರನ್ನನ ವಿರುದ್ಧ ವಂಚನೆಯ ಆರೋಪವನ್ನೂ ಮಾಡಿದ್ರು. ಸದ್ಯ ಈ ಆರೋಪದ ವಿರುದ್ಧ ಕಿಚ್ಚನ ಅಭಿಮಾನಿಗಳು ಸಿಡಿದೆದ್ದಿದ್ದಾರೆ. ನಿರ್ಮಾಪಕರ ವಿರುದ್ಧ ಹೋರಾಟ ಮಾಡಿದ್ದಾರೆ.

ಕಿಚ್ಚ ಸುದೀಪ್‌ ಸ್ಯಾಂಡಲ್‌ವುಡ್ ಅಭಿನಯ ಚಕ್ರವರ್ತಿ. ಅಭಿಮಾನಿಗಳ ನೆಚ್ಚಿನ ರನ್ನ. ಕನ್ನಡ ಚಿತ್ರರಂಗದ ಮಾಣಿಕ್ಯ. ಆದ್ರೀಗ ನಿರ್ಮಾಪಕರ ಪಾಲಿಗೆ ಕಿಚ್ಚ ಸುದೀಪ್‌ ಅದ್ಯಾಕೋ ಕೈಗೆ ಸಿಗದ ಹುಳಿ ದ್ರಾಕ್ಷಿಯಂತಾಗಿದ್ದಾರೆ. ತಮ್ಮಿಂದ ಹಣ ಪಡೆದು ಸುದೀಪ್ ವಂಚಿಸಿದ್ದಾರೆ ಅಂತಾ ಬಹಿರಂಗ ಸಮರ ಸಾರಿದ್ದಾರೆ. ಹೀಗೆ ಆರೋಪಿಸಿದ್ದ ನಿರ್ಮಾಪಕನ ವಿರುದ್ಧ ಕಿಚ್ಚ ಕೋರ್ಟ್ ಮೆಟ್ಟಿಲೇರಿದ್ದಾರೆ. ಇದೀಗ ತಮ್ಮ ನೆಚ್ಚಿನ ನಟನ ವಿರುದ್ಧ ಮಾಡಿರೋ ಆರೋಪದ ವಿರುದ್ಧ ಅಭಿಮಾನಿಗಳು ಸಿಡಿದೆದ್ದಿದ್ದಾರೆ.

ಸುದೀಪ್ ವಿರುದ್ಧ ನಿರ್ಮಾಪಕರಿಂದ ವಂಚನೆ ಆರೋಪ

ಮಲೆನಾಡಿನ ಮಣ್ಣಿನಲ್ಲಿ ಕಿಚ್ಚನ ಧ್ವಜಗಳ ಹಾರಾಟ. ನಿರ್ಮಾಪಕರಾದ ಸೂರಪ್ಪ ಬಾಬು, ರೆಹಮಾನ್, ಎಂ.ಎನ್‌. ಕುಮಾರ್ ಫ್ಲೆಕ್ಸ್‌ ಹಿಡಿದು ಆಕ್ರೋಶ. ಕಿಚ್ಚನ ವಿರುದ್ಧ ವಂಚನೆ ಆರೋಪ ಮಾಡಿದ್ದವರ ವಿರುದ್ಧ ಕಿಚ್ಚನ ಅಭಿಮಾನಿಗಳ ಕಿಚ್ಚು. ಇದು ಕಿಚ್ಚ ಸುದೀಪ್ ಅಭಿಮಾನಿಗಳ ಆಕ್ರೋಶದ ಪರಿ.

ಕಳೆದ ಹತ್ತು ದಿನಗಳಿಂದ ಸ್ಯಾಂಡಲ್‌ವುಡ್‌ನಲ್ಲಿ ನಟ ಸುದೀಪ್ ಮತ್ತು ನಿರ್ಮಾಪಕ ನಡುವಿನ ಸಮರ ಭಾರೀ ಸದ್ದು ಮಾಡಿತ್ತು. ಕಿಚ್ಚ ಸುದೀಪ್‌ ಸಿನಿಮಾಗಳಿಗೆ ಹಣ ಸುರಿದವರು, ಹಿಟ್ ಮೇಲೆ ಹಿಟ್ ಕೊಟ್ಟ ನಿರ್ಮಾಪಕರೇ ನಟನ ವಿರುದ್ಧ ಬಹಿರಂಗ ಮಾತಿನಯುದ್ಧ ಆರಂಭಿಸಿದ್ರು. ಅಷ್ಟೇ ಅಲ್ಲ ಈ ವಿಚಾರ ಕೋರ್ಟ್​ ಮೆಟ್ಟಿಲೇರಿದೆ. ಸಿನಿಮಾ ಮಾಡಿ ಕೊಡ್ತಿನಿ ಎಂದು ಹೇಳಿ ಸುದೀಪ್ ಹಣ ಪಡೆದು ಸಿನಿಮಾನೂ ಮಾಡಿಕೊಡ್ತಿಲ್ಲ, ದುಡ್ಡು ವಾಪಸ್ ಕೊಡ್ತಿಲ್ಲ ಅಂತ ನಿರ್ಮಾಪಕ ಎಂ. ಎನ್ ಕುಮಾರ್ ಕಿಚ್ಚನ ವಿರುದ್ಧ ಸಾಲು ಸಾಲು ಆರೋಪ ಮಾಡಿದ್ರು. ಇದೀಗ ನಿರ್ಮಾಪಕನ ವಿರುದ್ಧ ಕಿಚ್ಚ ಸುದೀಪ್ ಕಾನೂನು ಹೋರಾಟಕ್ಕಿಳಿದಿದ್ದಾರೆ. ಇದ್ರ ಮಧ್ಯೆ ಶಿವಮೊಗ್ಗದಲ್ಲಿ ಕಿಚ್ಚನ ಅಭಿಮಾನಿಗಳು ಬೀದಿಗಿಳಿದು ನಿರ್ಮಾಪಕರ ನಡೆಯನ್ನ ಖಂಡಿಸಿದ್ದಾರೆ.

ಯೆಸ್‌.. ಇವತ್ತು ಅಭಿನಯ ಚಕ್ರವರ್ತಿಯ ಶಿವಮೊಗ್ಗದ ಅಭಿಮಾನಿಗಳು ಬೃಹತ್ ಪ್ರತಿಭಟನೆ ನಡೆಸಿದ್ರು. ಶಿವಮೊಗ್ಗದ ಗೋಪಿ ಸರ್ಕಲ್‌ನಿಂದ ಕೋರ್ಟ್ ಸರ್ಕಲ್‌ವರೆಗೆ ಪ್ರತಿಭಟನಾ ಱಲಿ ನಡೆಸಿದ್ರು. ನಟ ಸುದೀಪ್ ಬೆಂಬಲಿಸಿ ಫ್ಯಾನ್ಸ್‌ ಘೋಷಣೆ ಕೂಗಿದ್ರು. ನಿರ್ಮಾಪಕರಾದ ಎಂ.ಎನ್. ಕುಮಾರ್, ಸೂರಪ್ಪ ಬಾಬು ಹಾಗೂ ರೆಹಮಾನ್ ವಿರುದ್ಧ ಪ್ರತಿಭಟನೆ ನಡೆಸಿದ್ರು.

ಪ್ರೊಡ್ಯೂಸರ್ಸ್ ವಿರುದ್ಧ ಕಿಚ್ಚನ ಫ್ಯಾನ್ಸ್‌ ಕಿಚ್ಚು..!

ಅದಷ್ಟೇ ಅಲ್ಲ.. ತಮ್ಮ ನೆಚ್ಚಿನ ನಟನ ವಿರುದ್ಧ ನಿರ್ಮಾಪಕರೆಲ್ಲಾ ಸುಳ್ಳು ಆರೋಪ ಮಾಡ್ತಿದ್ದಾರೆ. ಈ ಮೂಲಕ ಅವರ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡ್ತಿದ್ದಾರೆ. ಹೀಗೆ ಸುಖಾಸುಮ್ಮನೆ ಆರೋಪ ಮಾಡಿದ್ರೆ ಚಲನಚಿತ್ರ ವಾಣಿಜ್ಯ ಮಂಡಳಿ ಮುಂಭಾಗ ಬೃಹತ್ ಪ್ರತಿಭಟನೆ ಮಾಡುವುದಾಗಿ ಕಿಚ್ಚನ ಅಭಿಮಾನಿಗಳು ಎಚ್ಚರಿಕೆ ನೀಡಿದ್ರು.

ಒಟ್ಟಾರೆ, ಕಿಚ್ಚನ ವಿರುದ್ಧ ನಿರ್ಮಾಪಕರೆಲ್ಲಾ ಒಂದಾಗಿ ವಂಚನೆಯ ಆರೋಪ ಮಾಡ್ತಿದ್ದಾರೆ. ಇದರ ವಿರುದ್ಧ ಸುದೀಪ್ ಕೋರ್ಟ್ ಮೆಟ್ಟಿಲೇರಿದ್ದಾರೆ. ಇದ್ರ ಮಧ್ಯೆ ಕಿಚ್ಚನ ಅಭಿಮಾನಿಗಳು ಸಿಡಿದೆದ್ದಿದ್ದಾರೆ.. ನಿರ್ಮಾಪಕರಿಗೆ ವಾರ್ನಿಂಗ್ ಕೊಟ್ಟಿದ್ದಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

Load More