/newsfirstlive-kannada/media/post_attachments/wp-content/uploads/2024/08/sudeep-1.jpg)
ಸ್ಯಾಂಡಲ್​ವುಡ್​​ ನಟ ಕಿಚ್ಚ ಸುದೀಪ್​ ಸುದ್ದಿಗೋಷ್ಠಿ ಕರೆದಿದ್ದಾರೆ. ಸೆಪ್ಟೆಂಬರ್​ 2ರಂದು ತಮ್ಮ ಹುಟ್ಟುಹಬ್ಬ ಆಚರಿಸುವ ಸಲುವಾಗಿ ಪ್ರೆಸ್​ ಮೀಟ್​ ಕರೆದಿದ್ದಾರೆ. ಈ ವೇಳೆ ನಟ ದರ್ಶನ್​ ಕುರಿತಾಗಿಯೂ ಮಾತನಾಡಿದ್ದಾರೆ.
ರೇಣುಕಾಸ್ವಾಮಿ ಕೊಲೆ ಆರೋಪಿಯಾಗಿ ಬಳ್ಳಾರಿ ಜೈಲು ಸೇರಿರುವ ದರ್ಶನ್​ ಕುರಿತಾಗಿ ಕಿಚ್ಚ ಸುದೀಪ್ ಮಾತನಾಡಿದ್ದಾರೆ, ಅವರಿಗಷ್ಟೇ ಫ್ಯಾನ್ಸ್ ಇದ್ದಾರೆ, ಕುಟುಂಬ ಇದೆ. ನಾವು ಮಾತಾಡಿ ನೋವು ಕೊಡೋದು ಬೇಡ ಎಂದು ಹೇಳಿದ್ದಾರೆ.
ಬಳಿಕ ಮಾತು ಮುಂದುವರೆಸಿದ ಕಿಚ್ಚ ಸುದೀಪ್​, ರಾಜಕೀಯವಾಗಿ ಮಾತಾಡ್ತಿದ್ದೀನಿ ಅಂತ ಬೇಡ. ಕಾನೂನು ನಂಬಬೇಕಿದೆ. ನಾನು ಮಾಧ್ಯಮ ನೋಡ್ತಿದ್ದೇನೆ. ಕೋರ್ಟ್​​ಗೆ ಹೋಗಿ ತಪ್ಪು ಅಂತ ಹೇಳದೆ ಹೇಗೆ ಮಾತಾಡೋಕೆ ಆಗುತ್ತೆ?. ಇನ್ನೂ ಕಾನೂನು ಇದೆ. ತನಿಖೆ ಆಗ್ತಿದೆ. ಸತ್ಯ ಗೊತ್ತಿಲ್ಲದೇ ಏನೂ ಮಾತಾಡೋಕೆ ಆಗಲ್ಲ. ಅಷ್ಟು ಆತುರವಾಗಿ ಯಾಕೆ ಮಾತಾಡೋಕೆ ಆಗುತ್ತೆ ಎಂದು ಹೇಳಿದ್ದಾರೆ.
ಅಂದಹಾಗೆಯೇ, ನಾಳೆ ಒಂದೇ ದಿನ ಬಾಕಿ ನಾಳಿದ್ದು ಸುದೀಪ್​ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಈ ಬಾರಿ ಜಯನಗರದ MES ಗ್ರೌಂಡ್​​ನಲ್ಲಿ ಬರ್ತ್​ಡೇ ಆಚರಿಸಲು ಮುಂದಾಗಿದ್ದಾರೆ. ಈ ವೇಳೆ ನಟನನ್ನು ಕಾಣಲು ಬರುವ ಅಭಿಮಾನಿಗಳಿಗೆ ಕಿವಿಮಾತಿನ ಜೊತೆಗೆ ಕೇಕ್​​ ತರದಂತೆ ವಿನಂತಿ ಮಾಡಿಕೊಂಡಿದ್ದಾರೆ. ಕೇಕ್​ ತಂದು ಅಲ್ಲೇ ಬಿಸಾಡುವ ಬದಲು ನನ್ನ ಹೆಸರಿನಲ್ಲಿ ಬಡವರಿಗೆ ಊಟ ನೀಡಿ ಎಂದು ಮನವಿ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us