newsfirstkannada.com

×

’ಜಗ್ಗೇಶ್​​ ದೊಡ್ಡವ್ರು.. ಅವ್ರಿಗೆ ಎಸ್ಕೇಪ್​ ಆಗೋದು ತುಂಬಾ ಚೆನ್ನಾಗಿ ಗೊತ್ತು’ -ಕಿಚ್ಚ ಸುದೀಪ್​ ಹಿಗ್ಯಾಕಂದ್ರು..?

Share :

Published June 17, 2024 at 9:48am

    ಕೊಲೆ ಕೇಸ್​​ನಲ್ಲಿ ಆರೋಪಿಗಳಾಗಿರೋ ಪವಿತ್ರಾ ಗೌಡ, ದರ್ಶನ್​

    ರೇಣುಕಾಸ್ವಾಮಿ ಸಾವಿಗೆ ನ್ಯಾಯ ಸಿಗಬೇಕು ಎಂದ ಕಿಚ್ಚ ಸುದೀಪ್​

    ನಟ ಜಗ್ಗೇಶ್​ ಅವರಿಗೆ ನಮಗಿಂತ ಚೆನ್ನಾಗಿ ತಿಳುವಳಿಕೆ ಇದೆ-ಕಿಚ್ಚ ಸುದೀಪ್​

ಚಿತ್ರದುರ್ಗದ ರೇಣುಕಾಸ್ವಾಮಿ ಸಾವಿಗೆ ನ್ಯಾಯ ಸಿಗಬೇಕು ಅಂತ ಕಿಚ್ಚ ಸುದೀಪ್​ ಒತ್ತಾಯಿಸಿದ್ದಾರೆ. ತಪ್ಪು ಯಾರೇ ಮಾಡಲಿ ಅವರಿಗೆ ಶಿಕ್ಷೆ ಆಗಲೇಬೇಕು ಎಂದು ಸುದೀಪ್​ ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ ದರ್ಶನ್​ ಅವರನ್ನು ಚಿತ್ರರಂಗದಿಂದ ಬ್ಯಾನ್ ಮಾಡುವ ವಿಚಾರಕ್ಕೆ ಸಂಬಂಧಿಸಿ ಮಾಧ್ಯಮಗಳು ಸದೀಪ್ ಅವರನ್ನು ಪ್ರಶ್ನೆ ಮಾಡಿದ್ದವು.

ಅದಕ್ಕೆ ಉತ್ತರಿಸಿದ ಕಿಚ್ಚ ಸುದೀಪ್.. ನಾವು ಯಾರನ್ನೂ ಬ್ಯಾನ್ ಮಾಡಲು ಆಗಲ್ಲ. ಈ ಕೇಸ್​ನಿಂದ ಹೊರಗೆ ಬಂದರೆ ಬ್ಯಾನ್ ಅನ್ನುವ ಪದ ಬರಲ್ಲ. ಇಲ್ಲಿ ಬೇಕಾಗಿರುವುದು ನ್ಯಾಯ. ಎಲ್ಲರೂ ನೋಡುತ್ತಿರುವುದು ಪೊಲೀಸರು ಏನು ಕೆಲಸ ಮಾಡ್ತಿದ್ದಾರೆ ಅನ್ನೋದು ಅಂತ ಹೇಳಿದ್ದಾರೆ.

ಇದನ್ನೂ ಓದಿ: ಫ್ರೆಂಡ್​​ಶಿಪ್ ಬೇರೆ, ಸಂಬಂಧಗಳು ಬೇರೆ.. ದರ್ಶನ್​ ಪ್ರಕರಣದ ಬಗ್ಗೆ ನಟ ಸುದೀಪ್ ಇನ್ನೇನು ಅಂದ್ರು?

ಆಗ ಮಾಧ್ಯಮಗಳು.. ಈ ಹಿಂದೆ ಜಗ್ಗೇಶ್ ಅವರ ಬ್ಯಾನ್ ವಿಚಾರಕ್ಕೆ ಸಂಬಂಧಿಸಿ ಸುದೀಪ್​ಗೆ ಪ್ರಶ್ನೆ ಮಾಡಿದ್ದವು. ಈ ಹಿಂದೆ ಚಿತ್ರರಂಗದಲ್ಲಿ ದಯವಿಟ್ಟು ಯಾರಿಗೂ ಬ್ಯಾನ್ ಎಂದು ಬಳಸಬೇಡಿ. ಏನಿದ್ದರೂ ಮಾತುಕತೆಯಲ್ಲೇ ಬಗೆಹರಿಸಿಕೊಳ್ಳಿ ಎಂದು ರಾಜ್​ ಕುಮಾರ್ ಹೇಳಿದ್ದರಂತೆ.. ಈಗ ನೀವು ಏನ್ ಹೇಳ್ತೀರಿ ಎಂದು ಪ್ರಶ್ನೆ ಮಾಡಿದ್ದವು.

ಅದಕ್ಕೂ ಉತ್ತರಿಸಿದ ಕಿಚ್ಚ ಸುದೀಪ್​.. ಇದಕ್ಕೆ ನಾನು ಇಲ್ಲಿಯೇ ಅಂತ್ಯ ಹಾಡುತ್ತೇನೆ. ಅಣ್ಣಾವ್ರು ಹೇಳಿದರ ಬಗ್ಗೆ ಪರ, ವಿರುದ್ಧವಾಗಿ ಮಾತನಾಡುವಷ್ಟು ನಾನು ದೊಡ್ಡವನಲ್ಲ. ಜಗ್ಗೇಶ್ ಅವರು ನಮ್ಮ ಸಹೋದರರು. ಅವರಿಗೆ ನಮಗಿಂತ ಚೆನ್ನಾಗಿ ತಿಳುವಳಿಕೆ ಇದೆ. ಇನ್ನೊಂದು ಬೇಡವಾಗಿದ್ದ ಜಾಗದಲ್ಲಿ ಕೈ ಹಾಕಿದ್ರೆ, ಏನ್​ ಮಾಡಬೇಕು ಮತ್ತು ಹೇಗೆ ಎಸ್ಕೇಪ್​ ಆಗಬೇಕು ಅಂತ ಅವರಿಗೆ ನನಗಿಂತ ಚೆನ್ನಾಗಿ ಗೊತ್ತಿದೆ. ಹೀಗಾಗಿ ಇದರಲ್ಲಿ ನಾನು ಬಹಳ ಮುಗ್ಧ ಅಂತ ಉತ್ತರಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

’ಜಗ್ಗೇಶ್​​ ದೊಡ್ಡವ್ರು.. ಅವ್ರಿಗೆ ಎಸ್ಕೇಪ್​ ಆಗೋದು ತುಂಬಾ ಚೆನ್ನಾಗಿ ಗೊತ್ತು’ -ಕಿಚ್ಚ ಸುದೀಪ್​ ಹಿಗ್ಯಾಕಂದ್ರು..?

https://newsfirstlive.com/wp-content/uploads/2024/06/jagesh.jpg

    ಕೊಲೆ ಕೇಸ್​​ನಲ್ಲಿ ಆರೋಪಿಗಳಾಗಿರೋ ಪವಿತ್ರಾ ಗೌಡ, ದರ್ಶನ್​

    ರೇಣುಕಾಸ್ವಾಮಿ ಸಾವಿಗೆ ನ್ಯಾಯ ಸಿಗಬೇಕು ಎಂದ ಕಿಚ್ಚ ಸುದೀಪ್​

    ನಟ ಜಗ್ಗೇಶ್​ ಅವರಿಗೆ ನಮಗಿಂತ ಚೆನ್ನಾಗಿ ತಿಳುವಳಿಕೆ ಇದೆ-ಕಿಚ್ಚ ಸುದೀಪ್​

ಚಿತ್ರದುರ್ಗದ ರೇಣುಕಾಸ್ವಾಮಿ ಸಾವಿಗೆ ನ್ಯಾಯ ಸಿಗಬೇಕು ಅಂತ ಕಿಚ್ಚ ಸುದೀಪ್​ ಒತ್ತಾಯಿಸಿದ್ದಾರೆ. ತಪ್ಪು ಯಾರೇ ಮಾಡಲಿ ಅವರಿಗೆ ಶಿಕ್ಷೆ ಆಗಲೇಬೇಕು ಎಂದು ಸುದೀಪ್​ ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ ದರ್ಶನ್​ ಅವರನ್ನು ಚಿತ್ರರಂಗದಿಂದ ಬ್ಯಾನ್ ಮಾಡುವ ವಿಚಾರಕ್ಕೆ ಸಂಬಂಧಿಸಿ ಮಾಧ್ಯಮಗಳು ಸದೀಪ್ ಅವರನ್ನು ಪ್ರಶ್ನೆ ಮಾಡಿದ್ದವು.

ಅದಕ್ಕೆ ಉತ್ತರಿಸಿದ ಕಿಚ್ಚ ಸುದೀಪ್.. ನಾವು ಯಾರನ್ನೂ ಬ್ಯಾನ್ ಮಾಡಲು ಆಗಲ್ಲ. ಈ ಕೇಸ್​ನಿಂದ ಹೊರಗೆ ಬಂದರೆ ಬ್ಯಾನ್ ಅನ್ನುವ ಪದ ಬರಲ್ಲ. ಇಲ್ಲಿ ಬೇಕಾಗಿರುವುದು ನ್ಯಾಯ. ಎಲ್ಲರೂ ನೋಡುತ್ತಿರುವುದು ಪೊಲೀಸರು ಏನು ಕೆಲಸ ಮಾಡ್ತಿದ್ದಾರೆ ಅನ್ನೋದು ಅಂತ ಹೇಳಿದ್ದಾರೆ.

ಇದನ್ನೂ ಓದಿ: ಫ್ರೆಂಡ್​​ಶಿಪ್ ಬೇರೆ, ಸಂಬಂಧಗಳು ಬೇರೆ.. ದರ್ಶನ್​ ಪ್ರಕರಣದ ಬಗ್ಗೆ ನಟ ಸುದೀಪ್ ಇನ್ನೇನು ಅಂದ್ರು?

ಆಗ ಮಾಧ್ಯಮಗಳು.. ಈ ಹಿಂದೆ ಜಗ್ಗೇಶ್ ಅವರ ಬ್ಯಾನ್ ವಿಚಾರಕ್ಕೆ ಸಂಬಂಧಿಸಿ ಸುದೀಪ್​ಗೆ ಪ್ರಶ್ನೆ ಮಾಡಿದ್ದವು. ಈ ಹಿಂದೆ ಚಿತ್ರರಂಗದಲ್ಲಿ ದಯವಿಟ್ಟು ಯಾರಿಗೂ ಬ್ಯಾನ್ ಎಂದು ಬಳಸಬೇಡಿ. ಏನಿದ್ದರೂ ಮಾತುಕತೆಯಲ್ಲೇ ಬಗೆಹರಿಸಿಕೊಳ್ಳಿ ಎಂದು ರಾಜ್​ ಕುಮಾರ್ ಹೇಳಿದ್ದರಂತೆ.. ಈಗ ನೀವು ಏನ್ ಹೇಳ್ತೀರಿ ಎಂದು ಪ್ರಶ್ನೆ ಮಾಡಿದ್ದವು.

ಅದಕ್ಕೂ ಉತ್ತರಿಸಿದ ಕಿಚ್ಚ ಸುದೀಪ್​.. ಇದಕ್ಕೆ ನಾನು ಇಲ್ಲಿಯೇ ಅಂತ್ಯ ಹಾಡುತ್ತೇನೆ. ಅಣ್ಣಾವ್ರು ಹೇಳಿದರ ಬಗ್ಗೆ ಪರ, ವಿರುದ್ಧವಾಗಿ ಮಾತನಾಡುವಷ್ಟು ನಾನು ದೊಡ್ಡವನಲ್ಲ. ಜಗ್ಗೇಶ್ ಅವರು ನಮ್ಮ ಸಹೋದರರು. ಅವರಿಗೆ ನಮಗಿಂತ ಚೆನ್ನಾಗಿ ತಿಳುವಳಿಕೆ ಇದೆ. ಇನ್ನೊಂದು ಬೇಡವಾಗಿದ್ದ ಜಾಗದಲ್ಲಿ ಕೈ ಹಾಕಿದ್ರೆ, ಏನ್​ ಮಾಡಬೇಕು ಮತ್ತು ಹೇಗೆ ಎಸ್ಕೇಪ್​ ಆಗಬೇಕು ಅಂತ ಅವರಿಗೆ ನನಗಿಂತ ಚೆನ್ನಾಗಿ ಗೊತ್ತಿದೆ. ಹೀಗಾಗಿ ಇದರಲ್ಲಿ ನಾನು ಬಹಳ ಮುಗ್ಧ ಅಂತ ಉತ್ತರಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More