ಲೇಟ್ ಆದ್ರೂ ಲೆಟೇಸ್ಟ್ ಆಗಿ ಇಂಟರ್ನ್ಯಾಷನಲ್ಗೆ ಸೂರ್ಯ ಎಂಟ್ರಿ
ಸೂರ್ಯರನ್ನ ಹುಡುಕಿ ಬಂದ ಮತ್ತೊಂದು ಬಿಗ್ ಆಫರ್, ಏನ್ ಆಫರ್?
ಸೂರ್ಯ ಕುಮಾರ್ ಜೀವನದಲ್ಲಿ ಸದ್ಯ ಗೋಲ್ಡನ್ ಟೈಮ್ ರನ್ ಆಗ್ತಿದೆ!
ಸೂರ್ಯ ಕುಮಾರ್ ಜೀವನದಲ್ಲಿ ಸದ್ಯ ಗೋಲ್ಡನ್ ಟೈಮ್ ನಡೀತಾ ಇದೆ ಅಂತ ಅನ್ಸುತ್ತೆ. ಟೀಮ್ ಇಂಡಿಯಾದ ನಾಯಕನ ಪಟ್ಟದ ಸರ್ಪ್ರೈಸ್ ಸಿಕ್ಕು 2 ದಿನ ಆಯ್ತಷ್ಟೇ. ಅದಾಗಲೇ ಮತ್ತೊಂದು ಬಿಗ್ ಅಫರ್ ಸೂರ್ಯನನ್ನ ಹುಡುಕಿಕೊಂಡು ಬಂದಿದೆ. ಒಂದಲ್ಲ.. ಎರಡಲ್ಲ.. ಬರೋಬ್ಬರಿ 30 ಕೋಟಿಯ ಡೀಲ್ ಇದು. ಅಷ್ಟು ದೊಡ್ಡ ಡೀಲ್ ಯಾವದಪ್ಪಾ ಅಂತೀರಾ?.
ಇದನ್ನೂ ಓದಿ: ‘ಕೊಹ್ಲಿ ಶ್ರೇಷ್ಠ ಪ್ಲೇಯರ್, ರೋಹಿತ್ ಡೇಂಜರಸ್ ಬ್ಯಾಟರ್’.. ಆದ್ರೆ ಈ ಬೌಲರ್ ಅಂದ್ರೆ ಇವರಿಗೆ ಭಯ, ಕಾರಣ?
ಮಿಸ್ಟರ್ 360 ಡಿಗ್ರಿ ಸೂರ್ಯಕುಮಾರ್ ಯಾದವ್ ಬಂಪರ್ ಲಾಟರಿ ಹೊಡೆದಿದೆ. ಲೇಟ್ ಆದ್ರೂ ಲೆಟೇಸ್ಟ್ ಆಗಿ ಇಂಟರ್ನ್ಯಾಷನಲ್ ಕ್ರಿಕೆಟ್ಗೆ ಎಂಟ್ರಿ ಕೊಟ್ಟ ಸೂರ್ಯ ಮೂರೇ ವರ್ಷದಲ್ಲಿ ಟೀಮ್ ಇಂಡಿಯಾದ ಸಾರಥಿಯಾಗಿದ್ದಾರೆ. ಸರ್ಪ್ರೈಸ್ ರೀತಿಯಲ್ಲಿ ಚುಟುಕು ಫಾರ್ಮೆಟ್ನಲ್ಲಿ ನಾಯಕನ ಪಟ್ಟ ಒಲಿದಿದೆ. ಇದ್ರ ಬೆನ್ನಲ್ಲೇ, ಮತ್ತೊಂದು ಬಿಗ್ ಆಫರ್ ಸೂರ್ಯನನ್ನ ಹುಡುಕಿಕೊಂಡು ಬಂದಿದೆ.
ಇದನ್ನೂ ಓದಿ: IT ಕಂಪನಿಗಳ ಉದ್ಯೋಗಿಗಳಿಗೆ ಬಿಗ್ ಶಾಕ್.. ಇನ್ಮುಂದೆ 14 ಗಂಟೆ ಕೆಲಸ ಮಾಡೋದು ಫಿಕ್ಸ್?
ಟೀಮ್ ಇಂಡಿಯಾದ T20 ನಾಯಕನಿಗೆ ಬಿಗ್ ಆಫರ್.!
ಟೀಮ್ ಇಂಡಿಯಾದ ನಾಯಕನ ಪಟ್ಟವೇರಿದ ಬೆನ್ನಲ್ಲೇ, ಬಿಗ್ ಆಫರ್ ಒಂದು ಸೂರ್ಯಕುಮಾರ್ ಯಾದವ್ನ ಅರಸಿಕೊಂಡು ಬಂದಿದೆ. ಐಪಿಎಲ್ನ ಮೆಗಾ ಆಕ್ಷನ್ಗೆ ಫ್ರಾಂಚೈಸಿಗಳ ವಲಯದಲ್ಲಿ ಸಿದ್ಧತೆಗಳು ಅರಂಭವಾಗಿದ್ದು, ರಿಟೈನ್-ರಿಲೀಸ್ ಲೆಕ್ಕಾಚಾರ ಹಾಕ್ತಿವೆ. ಜೊತೆಗೆ ಬೇರೆ ತಂಡದಿಂದ ಆಟಗಾರರನ್ನ ಸೆಳೆಯೋ ಪ್ಲಾನ್ ಕೂಡ ನಡೆಸ್ತಿವೆ. ಇದೇ ರೀತಿಯಲ್ಲಿ ಟ್ರೇಡ್ ವಿಂಡೋ ಅಡಿಯನ್ನ ಸೂರ್ಯನನ್ನ ಸೆಳೆಯಲು ಫ್ರಾಂಚೈಸಿಯೊಂದು ಬಿಗ್ ಅಫರ್ ಮಾಡಿದೆ.
30 ಕೋಟಿಯ ಬಿಗ್ ಆಫರ್ ಮಾಡಿದ ಕೆಕೆಆರ್.!
ಸೂರ್ಯ ಕುಮಾರ್ಗೆ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಗಾಳ ಹಾಕಿದೆ. ತಂಡದ ಮಾಜಿ ಆಟಗಾರನಿಗೆ ಬರೋಬ್ಬರಿ 30 ಕೋಟಿಯ ಆಫರ್ ಮಾಡಿದೆ ಎಂಬ ಹೊಸ ಸುದ್ದಿ ಈಗ ಹೊರ ಬಿದ್ದಿದೆ. ಈ ವಿಚಾರವನ್ನಿಟ್ಟುಕೊಂಡು ಈಗಾಗಲೇ ಕೆಕೆಆರ್ ಮ್ಯಾನೇಜ್ಮೆಂಟ್ ಸೂರ್ಯನ ಜೊತೆಗೆ ಮಾತುಕತೆ ನಡೆಸಿದೆ. ಸೂರ್ಯನ ಅಂತಿಮ ನಿರ್ಧಾರ ತಂಡ ಕಾಯ್ತಿದ್ದು, ಸೂರ್ಯ KKRನ ಬಿಗ್ ಆಫರ್ ಒಪ್ಪಿಕೊಳ್ತಾರಾ ಅನ್ನೋ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.
ಮುಂಬೈಗೆ ಗುಡ್ ಬೈ ಹೇಳಲು ಸೂರ್ಯಕುಮಾರ್ ರೆಡಿ.?
ಕಳೆದ ಸೀಸನ್ ಐಪಿಎಲ್ ವೇಳೆಯೇ ಸೂರ್ಯಕುಮಾರ್ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯಿಂದ ಒಂದು ಹೆಜ್ಜೆ ಹೊರಗಿಟ್ಟಿದ್ರು. 5 ಬಾರಿ ಟ್ರೋಫಿ ಗೆಲ್ಲಿಸಿಕೊಟ್ಟ ರೋಹಿತ್ ಶರ್ಮಾರನ್ನ ಅವಮಾನಿಸಿದ ರೀತಿ ಸೂರ್ಯ ಕುಮಾರ್ಗೆ ಬೇಸರ ತರಿಸಿತ್ತು. ಜೊತೆಗೆ ರೋಹಿತ್ ನಂತರ ತಂಡದ ಹಿರಿಯ ಆಟಗಾರನಾಗಿದ್ದ ತಮ್ಮನ್ನ ಸೈಡ್ ಲೈನ್ ಮಾಡಿ, ಹಾರ್ದಿಕ್ನ ಕರೆ ತಂದು ಪಟ್ಟಕಟ್ಟಿದ್ದನ್ನೂ ಸೂರ್ಯ ಒಪ್ಪಿಕೊಂಡಿರಲಿಲ್ಲ. ಹೀಗಾಗಿ ಮುಂಬೈ ಫ್ರಾಂಚೈಸಿ ಬಿಡಲು ಸೂರ್ಯ ಕಳೆದ ಸೀಸನ್ನಲ್ಲೇ ಚಿಂತಿಸಿದ್ರು. ಇದೀಗ ಬಿಗ್ ಆಫರ್ ಬಂದಿರೋದ್ರಿಂದ ಗುಡ್ ಬೈ ಹೇಳೋ ಸಾಧ್ಯತೆ ದಟ್ಟವಾಗಿದೆ.
ಸೂರ್ಯ ಕೆಕೆಆರ್ಗೆ, ಶ್ರೇಯಸ್ ಅಯ್ಯರ್ ಡೆಲ್ಲಿಗೆ.?
ಈ ಸೀಸನ್ ಐಪಿಎಲ್ನಲ್ಲಿ ಸಾಲಿಡ್ ಪರ್ಫಾಮೆನ್ಸ್ ನೀಡಿರುವ ಶ್ರೇಯಸ್ ಅಯ್ಯರ್ ಕೆಕೆಆರ್ ತಂಡವನ್ನ ಚಾಂಪಿಯನ್ ಮಾಡಿದ್ದಾರೆ. ಟ್ರೋಫಿ ಗೆಲ್ಲಿಸಿಕೊಟ್ಟ ಶ್ರೇಯಸ್ ಅಯ್ಯರ್ ತಂಡದಲ್ಲಿರೋವಾಗ್ಲೇ, ಸೂರ್ಯನಿಗೆ ಗಾಳ ಹಾಕಿರೋದಕ್ಕೂ ಕಾರಣವಿದೆ. ಮೂಲಗಳ ಪ್ರಕಾರ ಶ್ರೇಯಸ್ ಅಯ್ಯರ್ ಕೂಡ ಕೆಕೆಆರ್ ಫ್ರಾಂಚೈಸಿ ತೊರೆಯಲು ಮುಂದಾಗಿದ್ದಾರಂತೆ. ಕೆಕೆಆರ್ ಬಿಟ್ಟು, ತಮ್ಮ ಹಳೆ ಫ್ರಾಂಚೈಸಿ ಡೆಲ್ಲಿ ಕ್ಯಾಪಿಟಲ್ಸ್ ಸೇರಲು ಶ್ರೇಯಸ್ ಯೋಚಿಸ್ತಿದ್ದಾರಂತೆ.
ಇದನ್ನೂ ಓದಿ: ಗುರಾಯಿಸಿದ್ದನ್ನ ಪ್ರಶ್ನೆ ಮಾಡಿದ್ದಕ್ಕೆ ಯುವಕನ ಬರ್ಬರ ಹತ್ಯೆ.. ಅಸಲಿಗೆ ಆಗಿದ್ದೇನು?
ಚೆನ್ನೈ ಸೂಪರ್ ಕಿಂಗ್ಸ್ ಸೇರ್ತಾರಾ ರಿಷಭ್ ಪಂತ್.?
ಡೆಲ್ಲಿ ಕ್ಯಾಪಿಟಲ್ಸ್ನ ಹಾಲಿ ಕ್ಯಾಪ್ಟನ್ ರಿಷಬ್ ಪಂತ್ ಕೂಡ ತಂಡ ತೊರೆಯೋದು ಕನ್ಫರ್ಮ್ ಆಗಿದೆ. ಫ್ರಾಂಚೈಸಿ ಜೊತೆಗಿನ ಭಿನ್ನಭಿಪ್ರಾಯದ ಕಾರಣಕ್ಕೆ ಪಂತ್, ಡೆಲ್ಲಿಗೆ ಗುಡ್ ಬೈ ಹೇಳಲು ಮುಂದಾಗಿದ್ದಾರೆ. ಹೀಗಾಗಿ ಡೆಲ್ಲಿ ಫ್ರಾಂಚೈಸಿ ಮಾಜಿ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ನ ಸಂಪರ್ಕಿಸಿದೆ. ಇನ್ನು, ಡೆಲ್ಲಿ ತೊರೆಯಲು ಮುಂದಾಗಿರೋ ಪಂತ್, ಚೆನ್ನೈ ಸೂಪರ್ ಕಿಂಗ್ಸ್ ಸೇರ್ತಾರೆ ಎನ್ನಲಾಗ್ತಿದೆ. ಸಿಎಸ್ಕೆ ಕೂಡ ಪಂತ್ ಖರೀದಿಗೆ ಆಸಕ್ತಿ ತೋರಿದೆ ಎಂಬ ಮಾಹಿತಿಯಿದೆ.
ಇದನ್ನೂ ಓದಿ: ತುಂಗಾಭದ್ರ ಡ್ಯಾಂ ಭರ್ತಿಗೆ ಕೆಲವೇ ಅಡಿಗಳು ಬಾಕಿ.. 3 ವಾರದಲ್ಲಿ ಹರಿದು ಬಂದಿರೋ ನೀರು ಎಷ್ಟು?
ಲಕ್ನೋ ಸೂಪರ್ ಜೈಂಟ್ಸ್ ಕ್ಯಾಪ್ಟನ್ ಕೆ.ಎಲ್ ರಾಹುಲ್ ಕೂಡ ಫ್ರಾಂಚೈಸಿ ತೊರೆಯಲಿದ್ದಾರೆ ಎಂಬ ಸುದ್ದಿಯಿದೆ. ಆರ್ಸಿಬಿ ಫ್ರಾಂಚೈಸಿ ಕೂಡ ನಾಯಕನ ಹುಡುಕಾಟದಲ್ಲಿದೆ ಎನ್ನಲಾಗಿದೆ. ಐಪಿಎಲ್ ಮೆಗಾ ಆಕ್ಷನ್ಗೂ ಮುನ್ನ ಫ್ರಾಂಚೈಸಿಗಳ ವಲಯದಲ್ಲಿ ಬದಲಾವಣೆಯ ಸುದ್ದಿ ಜೋರಾಗಿ ಕೇಳಿ ಬರ್ತಿದೆ. ಎಲ್ಲಾ ಅಂದುಕೊಂಡಂತೆ ಆದ್ರೆ, ಮುಂದಿನ ಐಪಿಎಲ್ನಲ್ಲಿ ಬಹುತೇಕ ತಂಡಗಳ ನಾಯಕರೇ ಬದಲಾಗೋದು ಪಕ್ಕಾ.!
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಲೇಟ್ ಆದ್ರೂ ಲೆಟೇಸ್ಟ್ ಆಗಿ ಇಂಟರ್ನ್ಯಾಷನಲ್ಗೆ ಸೂರ್ಯ ಎಂಟ್ರಿ
ಸೂರ್ಯರನ್ನ ಹುಡುಕಿ ಬಂದ ಮತ್ತೊಂದು ಬಿಗ್ ಆಫರ್, ಏನ್ ಆಫರ್?
ಸೂರ್ಯ ಕುಮಾರ್ ಜೀವನದಲ್ಲಿ ಸದ್ಯ ಗೋಲ್ಡನ್ ಟೈಮ್ ರನ್ ಆಗ್ತಿದೆ!
ಸೂರ್ಯ ಕುಮಾರ್ ಜೀವನದಲ್ಲಿ ಸದ್ಯ ಗೋಲ್ಡನ್ ಟೈಮ್ ನಡೀತಾ ಇದೆ ಅಂತ ಅನ್ಸುತ್ತೆ. ಟೀಮ್ ಇಂಡಿಯಾದ ನಾಯಕನ ಪಟ್ಟದ ಸರ್ಪ್ರೈಸ್ ಸಿಕ್ಕು 2 ದಿನ ಆಯ್ತಷ್ಟೇ. ಅದಾಗಲೇ ಮತ್ತೊಂದು ಬಿಗ್ ಅಫರ್ ಸೂರ್ಯನನ್ನ ಹುಡುಕಿಕೊಂಡು ಬಂದಿದೆ. ಒಂದಲ್ಲ.. ಎರಡಲ್ಲ.. ಬರೋಬ್ಬರಿ 30 ಕೋಟಿಯ ಡೀಲ್ ಇದು. ಅಷ್ಟು ದೊಡ್ಡ ಡೀಲ್ ಯಾವದಪ್ಪಾ ಅಂತೀರಾ?.
ಇದನ್ನೂ ಓದಿ: ‘ಕೊಹ್ಲಿ ಶ್ರೇಷ್ಠ ಪ್ಲೇಯರ್, ರೋಹಿತ್ ಡೇಂಜರಸ್ ಬ್ಯಾಟರ್’.. ಆದ್ರೆ ಈ ಬೌಲರ್ ಅಂದ್ರೆ ಇವರಿಗೆ ಭಯ, ಕಾರಣ?
ಮಿಸ್ಟರ್ 360 ಡಿಗ್ರಿ ಸೂರ್ಯಕುಮಾರ್ ಯಾದವ್ ಬಂಪರ್ ಲಾಟರಿ ಹೊಡೆದಿದೆ. ಲೇಟ್ ಆದ್ರೂ ಲೆಟೇಸ್ಟ್ ಆಗಿ ಇಂಟರ್ನ್ಯಾಷನಲ್ ಕ್ರಿಕೆಟ್ಗೆ ಎಂಟ್ರಿ ಕೊಟ್ಟ ಸೂರ್ಯ ಮೂರೇ ವರ್ಷದಲ್ಲಿ ಟೀಮ್ ಇಂಡಿಯಾದ ಸಾರಥಿಯಾಗಿದ್ದಾರೆ. ಸರ್ಪ್ರೈಸ್ ರೀತಿಯಲ್ಲಿ ಚುಟುಕು ಫಾರ್ಮೆಟ್ನಲ್ಲಿ ನಾಯಕನ ಪಟ್ಟ ಒಲಿದಿದೆ. ಇದ್ರ ಬೆನ್ನಲ್ಲೇ, ಮತ್ತೊಂದು ಬಿಗ್ ಆಫರ್ ಸೂರ್ಯನನ್ನ ಹುಡುಕಿಕೊಂಡು ಬಂದಿದೆ.
ಇದನ್ನೂ ಓದಿ: IT ಕಂಪನಿಗಳ ಉದ್ಯೋಗಿಗಳಿಗೆ ಬಿಗ್ ಶಾಕ್.. ಇನ್ಮುಂದೆ 14 ಗಂಟೆ ಕೆಲಸ ಮಾಡೋದು ಫಿಕ್ಸ್?
ಟೀಮ್ ಇಂಡಿಯಾದ T20 ನಾಯಕನಿಗೆ ಬಿಗ್ ಆಫರ್.!
ಟೀಮ್ ಇಂಡಿಯಾದ ನಾಯಕನ ಪಟ್ಟವೇರಿದ ಬೆನ್ನಲ್ಲೇ, ಬಿಗ್ ಆಫರ್ ಒಂದು ಸೂರ್ಯಕುಮಾರ್ ಯಾದವ್ನ ಅರಸಿಕೊಂಡು ಬಂದಿದೆ. ಐಪಿಎಲ್ನ ಮೆಗಾ ಆಕ್ಷನ್ಗೆ ಫ್ರಾಂಚೈಸಿಗಳ ವಲಯದಲ್ಲಿ ಸಿದ್ಧತೆಗಳು ಅರಂಭವಾಗಿದ್ದು, ರಿಟೈನ್-ರಿಲೀಸ್ ಲೆಕ್ಕಾಚಾರ ಹಾಕ್ತಿವೆ. ಜೊತೆಗೆ ಬೇರೆ ತಂಡದಿಂದ ಆಟಗಾರರನ್ನ ಸೆಳೆಯೋ ಪ್ಲಾನ್ ಕೂಡ ನಡೆಸ್ತಿವೆ. ಇದೇ ರೀತಿಯಲ್ಲಿ ಟ್ರೇಡ್ ವಿಂಡೋ ಅಡಿಯನ್ನ ಸೂರ್ಯನನ್ನ ಸೆಳೆಯಲು ಫ್ರಾಂಚೈಸಿಯೊಂದು ಬಿಗ್ ಅಫರ್ ಮಾಡಿದೆ.
30 ಕೋಟಿಯ ಬಿಗ್ ಆಫರ್ ಮಾಡಿದ ಕೆಕೆಆರ್.!
ಸೂರ್ಯ ಕುಮಾರ್ಗೆ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಗಾಳ ಹಾಕಿದೆ. ತಂಡದ ಮಾಜಿ ಆಟಗಾರನಿಗೆ ಬರೋಬ್ಬರಿ 30 ಕೋಟಿಯ ಆಫರ್ ಮಾಡಿದೆ ಎಂಬ ಹೊಸ ಸುದ್ದಿ ಈಗ ಹೊರ ಬಿದ್ದಿದೆ. ಈ ವಿಚಾರವನ್ನಿಟ್ಟುಕೊಂಡು ಈಗಾಗಲೇ ಕೆಕೆಆರ್ ಮ್ಯಾನೇಜ್ಮೆಂಟ್ ಸೂರ್ಯನ ಜೊತೆಗೆ ಮಾತುಕತೆ ನಡೆಸಿದೆ. ಸೂರ್ಯನ ಅಂತಿಮ ನಿರ್ಧಾರ ತಂಡ ಕಾಯ್ತಿದ್ದು, ಸೂರ್ಯ KKRನ ಬಿಗ್ ಆಫರ್ ಒಪ್ಪಿಕೊಳ್ತಾರಾ ಅನ್ನೋ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.
ಮುಂಬೈಗೆ ಗುಡ್ ಬೈ ಹೇಳಲು ಸೂರ್ಯಕುಮಾರ್ ರೆಡಿ.?
ಕಳೆದ ಸೀಸನ್ ಐಪಿಎಲ್ ವೇಳೆಯೇ ಸೂರ್ಯಕುಮಾರ್ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯಿಂದ ಒಂದು ಹೆಜ್ಜೆ ಹೊರಗಿಟ್ಟಿದ್ರು. 5 ಬಾರಿ ಟ್ರೋಫಿ ಗೆಲ್ಲಿಸಿಕೊಟ್ಟ ರೋಹಿತ್ ಶರ್ಮಾರನ್ನ ಅವಮಾನಿಸಿದ ರೀತಿ ಸೂರ್ಯ ಕುಮಾರ್ಗೆ ಬೇಸರ ತರಿಸಿತ್ತು. ಜೊತೆಗೆ ರೋಹಿತ್ ನಂತರ ತಂಡದ ಹಿರಿಯ ಆಟಗಾರನಾಗಿದ್ದ ತಮ್ಮನ್ನ ಸೈಡ್ ಲೈನ್ ಮಾಡಿ, ಹಾರ್ದಿಕ್ನ ಕರೆ ತಂದು ಪಟ್ಟಕಟ್ಟಿದ್ದನ್ನೂ ಸೂರ್ಯ ಒಪ್ಪಿಕೊಂಡಿರಲಿಲ್ಲ. ಹೀಗಾಗಿ ಮುಂಬೈ ಫ್ರಾಂಚೈಸಿ ಬಿಡಲು ಸೂರ್ಯ ಕಳೆದ ಸೀಸನ್ನಲ್ಲೇ ಚಿಂತಿಸಿದ್ರು. ಇದೀಗ ಬಿಗ್ ಆಫರ್ ಬಂದಿರೋದ್ರಿಂದ ಗುಡ್ ಬೈ ಹೇಳೋ ಸಾಧ್ಯತೆ ದಟ್ಟವಾಗಿದೆ.
ಸೂರ್ಯ ಕೆಕೆಆರ್ಗೆ, ಶ್ರೇಯಸ್ ಅಯ್ಯರ್ ಡೆಲ್ಲಿಗೆ.?
ಈ ಸೀಸನ್ ಐಪಿಎಲ್ನಲ್ಲಿ ಸಾಲಿಡ್ ಪರ್ಫಾಮೆನ್ಸ್ ನೀಡಿರುವ ಶ್ರೇಯಸ್ ಅಯ್ಯರ್ ಕೆಕೆಆರ್ ತಂಡವನ್ನ ಚಾಂಪಿಯನ್ ಮಾಡಿದ್ದಾರೆ. ಟ್ರೋಫಿ ಗೆಲ್ಲಿಸಿಕೊಟ್ಟ ಶ್ರೇಯಸ್ ಅಯ್ಯರ್ ತಂಡದಲ್ಲಿರೋವಾಗ್ಲೇ, ಸೂರ್ಯನಿಗೆ ಗಾಳ ಹಾಕಿರೋದಕ್ಕೂ ಕಾರಣವಿದೆ. ಮೂಲಗಳ ಪ್ರಕಾರ ಶ್ರೇಯಸ್ ಅಯ್ಯರ್ ಕೂಡ ಕೆಕೆಆರ್ ಫ್ರಾಂಚೈಸಿ ತೊರೆಯಲು ಮುಂದಾಗಿದ್ದಾರಂತೆ. ಕೆಕೆಆರ್ ಬಿಟ್ಟು, ತಮ್ಮ ಹಳೆ ಫ್ರಾಂಚೈಸಿ ಡೆಲ್ಲಿ ಕ್ಯಾಪಿಟಲ್ಸ್ ಸೇರಲು ಶ್ರೇಯಸ್ ಯೋಚಿಸ್ತಿದ್ದಾರಂತೆ.
ಇದನ್ನೂ ಓದಿ: ಗುರಾಯಿಸಿದ್ದನ್ನ ಪ್ರಶ್ನೆ ಮಾಡಿದ್ದಕ್ಕೆ ಯುವಕನ ಬರ್ಬರ ಹತ್ಯೆ.. ಅಸಲಿಗೆ ಆಗಿದ್ದೇನು?
ಚೆನ್ನೈ ಸೂಪರ್ ಕಿಂಗ್ಸ್ ಸೇರ್ತಾರಾ ರಿಷಭ್ ಪಂತ್.?
ಡೆಲ್ಲಿ ಕ್ಯಾಪಿಟಲ್ಸ್ನ ಹಾಲಿ ಕ್ಯಾಪ್ಟನ್ ರಿಷಬ್ ಪಂತ್ ಕೂಡ ತಂಡ ತೊರೆಯೋದು ಕನ್ಫರ್ಮ್ ಆಗಿದೆ. ಫ್ರಾಂಚೈಸಿ ಜೊತೆಗಿನ ಭಿನ್ನಭಿಪ್ರಾಯದ ಕಾರಣಕ್ಕೆ ಪಂತ್, ಡೆಲ್ಲಿಗೆ ಗುಡ್ ಬೈ ಹೇಳಲು ಮುಂದಾಗಿದ್ದಾರೆ. ಹೀಗಾಗಿ ಡೆಲ್ಲಿ ಫ್ರಾಂಚೈಸಿ ಮಾಜಿ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ನ ಸಂಪರ್ಕಿಸಿದೆ. ಇನ್ನು, ಡೆಲ್ಲಿ ತೊರೆಯಲು ಮುಂದಾಗಿರೋ ಪಂತ್, ಚೆನ್ನೈ ಸೂಪರ್ ಕಿಂಗ್ಸ್ ಸೇರ್ತಾರೆ ಎನ್ನಲಾಗ್ತಿದೆ. ಸಿಎಸ್ಕೆ ಕೂಡ ಪಂತ್ ಖರೀದಿಗೆ ಆಸಕ್ತಿ ತೋರಿದೆ ಎಂಬ ಮಾಹಿತಿಯಿದೆ.
ಇದನ್ನೂ ಓದಿ: ತುಂಗಾಭದ್ರ ಡ್ಯಾಂ ಭರ್ತಿಗೆ ಕೆಲವೇ ಅಡಿಗಳು ಬಾಕಿ.. 3 ವಾರದಲ್ಲಿ ಹರಿದು ಬಂದಿರೋ ನೀರು ಎಷ್ಟು?
ಲಕ್ನೋ ಸೂಪರ್ ಜೈಂಟ್ಸ್ ಕ್ಯಾಪ್ಟನ್ ಕೆ.ಎಲ್ ರಾಹುಲ್ ಕೂಡ ಫ್ರಾಂಚೈಸಿ ತೊರೆಯಲಿದ್ದಾರೆ ಎಂಬ ಸುದ್ದಿಯಿದೆ. ಆರ್ಸಿಬಿ ಫ್ರಾಂಚೈಸಿ ಕೂಡ ನಾಯಕನ ಹುಡುಕಾಟದಲ್ಲಿದೆ ಎನ್ನಲಾಗಿದೆ. ಐಪಿಎಲ್ ಮೆಗಾ ಆಕ್ಷನ್ಗೂ ಮುನ್ನ ಫ್ರಾಂಚೈಸಿಗಳ ವಲಯದಲ್ಲಿ ಬದಲಾವಣೆಯ ಸುದ್ದಿ ಜೋರಾಗಿ ಕೇಳಿ ಬರ್ತಿದೆ. ಎಲ್ಲಾ ಅಂದುಕೊಂಡಂತೆ ಆದ್ರೆ, ಮುಂದಿನ ಐಪಿಎಲ್ನಲ್ಲಿ ಬಹುತೇಕ ತಂಡಗಳ ನಾಯಕರೇ ಬದಲಾಗೋದು ಪಕ್ಕಾ.!
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ