ಐಪಿಎಲ್ ಟೂರ್ನಿಯ 31ನೇ ಪಂದ್ಯದಲ್ಲಿ ಗೆಲ್ಲುವರು ಯಾರು?
ಕ್ರಿಕೆಟ್ ಫ್ಯಾನ್ಸ್ಗೆ ರಸದೌತಣ ಉಣ ಬಡಿಸುತ್ತಿರುವ ಐಪಿಎಲ್
ಸಂಜು ಸ್ಯಾಮ್ಸನ್ ತಂಡಕ್ಕೆ ಟಕ್ಕರ್ ಕೊಡುತ್ತಾ ನೈಟ್ ರೈಡರ್ಸ್
ಭಾರತದಲ್ಲಿ ಐಪಿಎಲ್ ಪಂದ್ಯಗಳು ಕ್ರಿಕೆಟ್ ಅಭಿಮಾನಿಗಳಿಗೆ ರಸದೌತಣ ಉಣ ಬಡಿಸುತ್ತಿವೆ. RCB-SRH ಪ್ಲೇಯರ್ಸ್ ಮದಗಜಗಳಂತೆ ಕಾದಾಡಿದವು. ಆದರೆ ಅಂತಿಮ ಹೋರಾಟದಲ್ಲಿ 25 ರನ್ಗಳಿದ ಬೆಂಗಳೂರು ಶರಣಾಯಿತು. ಸದ್ಯ ಇಂದಿನ ಐಪಿಎಲ್ ಟೂರ್ನಿಯ 31ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಜೊತೆ ರಾಜಸ್ಥಾನ್ ರಾಯಲ್ಸ್ ತಂಡ ಸೆಣಸಾಟ ನಡೆಸಲಿದೆ.
ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ಬಲಿಷ್ಠವಾಗಿದ್ದು ಕೇವಲ ಒಂದು ಮ್ಯಾಚ್ ಅನ್ನು ಮಾತ್ರ ಸೋತಿದ್ದು ಉಳಿದ 5 ಪಂದ್ಯಗಳಲ್ಲೂ ಅಮೋಘ ಗೆಲುವು ಪಡೆದುಕೊಂಡಿದೆ. ರಾಯಲ್ಸ್ ಬ್ಯಾಟ್ಸ್ಮನ್ಗಳು, ಬೌಲರ್ಗಳು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿ ಎಲ್ಲ ಪಂದ್ಯಗಳಲ್ಲಿ ಗೆಲುವು ಪಡೆದುಕೊಳ್ಳುತ್ತಿದ್ದಾರೆ. ಆದರೆ ಇಂದಿನ ಕೋಲ್ಕತ್ತಾದ ಜೊತೆಗಿನ ಮ್ಯಾಚ್ ಗೆಲ್ಲುವುದು ರಾಜಸ್ಥಾನ್ಗೆ ಚಾಲೆಂಜ್ ಎಂದು ಹೇಳಬಹುದು. ಏಕೆಂದರೆ ತವರಿನಲ್ಲಿ ಕೋಲ್ಕತ್ತಾವನ್ನ ಬಗ್ಗಿಸುವುದು ಕಷ್ಟ ಆಗಿದೆ.
ಇದನ್ನೂ ಓದಿ: ಕರುನಾಡ ಕುಳ್ಳ, ನಟ, ನಿರ್ಮಾಪಕ ದ್ವಾರಕೀಶ್ ನಿಧನ
ಇದನ್ನೂ ಓದಿ: ಧೋನಿ ಬ್ಯಾಟಿಂಗ್ ಎಂಜಾಯ್ ಮಾಡಿದ ಬಾಲಿವುಡ್ ಸ್ಟಾರ್ಸ್.. ಮಹಿ ಸಿಕ್ಸ್ಗೆ ಕರೀನಾ, ನೇಹಾ ಫುಲ್ ಶಾಕ್
ಈ ಟೂರ್ನಿಯಲ್ಲಿ ಕೆಕೆಆರ್ ಬಿಗಿ ಹಿಡಿತ ಸಾಧಿಸಿದ್ದು ಹೊಡಿಬಡಿ ಆಟಗಾರರಿಂದಲೇ ತುಂಬಿದೆ. ಪಿಲಿಪ್ ಸಾಲ್ಟ್, ಸುನಿಲ್ ಓಪನಿಂಗ್ ಅಲ್ಲಿ ಅಬ್ಬರಿಸ್ತಾರೆ. ಕ್ಯಾಪ್ಟನ್ ಶ್ರೇಯಸ್ ಅಯ್ಯರ್, ರಸೆಲ್ ಹಾಗೂ ರಿಂಕು ಸಿಂಗ್ ಅಖಾಡಕ್ಕೆ ಇಳಿದರೆ ಪಂದ್ಯದ ದಿಕ್ಕನ್ನೇ ಬದಲಿಸೋ ಛಲವಂತರು. ತವರಿನಲ್ಲೇ ಪಂದ್ಯ ನಡೆಯುತ್ತಿದ್ದರಿಂದ ಕೆಕೆಆರ್ ವಿರುದ್ಧ ರಾಜಸ್ಥಾನ್ಗೆ ಗೆಲುವು ಸ್ವಲ್ಪ ಕಷ್ಟ ಎನಿಸಬಹುದು.
ಈ ಎರಡು ಟೀಮ್ಗಳು ಟೇಬಲ್ ಟಾಪ್ನಲ್ಲಿದ್ದು ರಾಜಸ್ಥಾನ್ ಮೊದಲ ಸ್ಥಾನದಲ್ಲಿದ್ರೆ, ಕೋಲ್ಕತ್ತಾ 2ನೇ ಸ್ಥಾನದಲ್ಲಿದೆ. ಒಂದು ವೇಳೆ ಇವತ್ತು ಕೋಲ್ಕತ್ತಾ ಗೆದ್ದರೂ ಸಮಾನ ಅಂಕ ಪಡೆಯಲಿದೆ. ಅದರಂತೆ ಇಂದಿನ ಪಂದ್ಯ ಸಂಜೆ 7:30ಕ್ಕೆ ಕೊಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ನಡೆಯಲಿದೆ. ಈಗಾಗಲೇ ಅಭಿಮಾನಿಗಳು ಸ್ಟೇಡಿಯಂನತ್ತ ಆಗಮಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಐಪಿಎಲ್ ಟೂರ್ನಿಯ 31ನೇ ಪಂದ್ಯದಲ್ಲಿ ಗೆಲ್ಲುವರು ಯಾರು?
ಕ್ರಿಕೆಟ್ ಫ್ಯಾನ್ಸ್ಗೆ ರಸದೌತಣ ಉಣ ಬಡಿಸುತ್ತಿರುವ ಐಪಿಎಲ್
ಸಂಜು ಸ್ಯಾಮ್ಸನ್ ತಂಡಕ್ಕೆ ಟಕ್ಕರ್ ಕೊಡುತ್ತಾ ನೈಟ್ ರೈಡರ್ಸ್
ಭಾರತದಲ್ಲಿ ಐಪಿಎಲ್ ಪಂದ್ಯಗಳು ಕ್ರಿಕೆಟ್ ಅಭಿಮಾನಿಗಳಿಗೆ ರಸದೌತಣ ಉಣ ಬಡಿಸುತ್ತಿವೆ. RCB-SRH ಪ್ಲೇಯರ್ಸ್ ಮದಗಜಗಳಂತೆ ಕಾದಾಡಿದವು. ಆದರೆ ಅಂತಿಮ ಹೋರಾಟದಲ್ಲಿ 25 ರನ್ಗಳಿದ ಬೆಂಗಳೂರು ಶರಣಾಯಿತು. ಸದ್ಯ ಇಂದಿನ ಐಪಿಎಲ್ ಟೂರ್ನಿಯ 31ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಜೊತೆ ರಾಜಸ್ಥಾನ್ ರಾಯಲ್ಸ್ ತಂಡ ಸೆಣಸಾಟ ನಡೆಸಲಿದೆ.
ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ಬಲಿಷ್ಠವಾಗಿದ್ದು ಕೇವಲ ಒಂದು ಮ್ಯಾಚ್ ಅನ್ನು ಮಾತ್ರ ಸೋತಿದ್ದು ಉಳಿದ 5 ಪಂದ್ಯಗಳಲ್ಲೂ ಅಮೋಘ ಗೆಲುವು ಪಡೆದುಕೊಂಡಿದೆ. ರಾಯಲ್ಸ್ ಬ್ಯಾಟ್ಸ್ಮನ್ಗಳು, ಬೌಲರ್ಗಳು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿ ಎಲ್ಲ ಪಂದ್ಯಗಳಲ್ಲಿ ಗೆಲುವು ಪಡೆದುಕೊಳ್ಳುತ್ತಿದ್ದಾರೆ. ಆದರೆ ಇಂದಿನ ಕೋಲ್ಕತ್ತಾದ ಜೊತೆಗಿನ ಮ್ಯಾಚ್ ಗೆಲ್ಲುವುದು ರಾಜಸ್ಥಾನ್ಗೆ ಚಾಲೆಂಜ್ ಎಂದು ಹೇಳಬಹುದು. ಏಕೆಂದರೆ ತವರಿನಲ್ಲಿ ಕೋಲ್ಕತ್ತಾವನ್ನ ಬಗ್ಗಿಸುವುದು ಕಷ್ಟ ಆಗಿದೆ.
ಇದನ್ನೂ ಓದಿ: ಕರುನಾಡ ಕುಳ್ಳ, ನಟ, ನಿರ್ಮಾಪಕ ದ್ವಾರಕೀಶ್ ನಿಧನ
ಇದನ್ನೂ ಓದಿ: ಧೋನಿ ಬ್ಯಾಟಿಂಗ್ ಎಂಜಾಯ್ ಮಾಡಿದ ಬಾಲಿವುಡ್ ಸ್ಟಾರ್ಸ್.. ಮಹಿ ಸಿಕ್ಸ್ಗೆ ಕರೀನಾ, ನೇಹಾ ಫುಲ್ ಶಾಕ್
ಈ ಟೂರ್ನಿಯಲ್ಲಿ ಕೆಕೆಆರ್ ಬಿಗಿ ಹಿಡಿತ ಸಾಧಿಸಿದ್ದು ಹೊಡಿಬಡಿ ಆಟಗಾರರಿಂದಲೇ ತುಂಬಿದೆ. ಪಿಲಿಪ್ ಸಾಲ್ಟ್, ಸುನಿಲ್ ಓಪನಿಂಗ್ ಅಲ್ಲಿ ಅಬ್ಬರಿಸ್ತಾರೆ. ಕ್ಯಾಪ್ಟನ್ ಶ್ರೇಯಸ್ ಅಯ್ಯರ್, ರಸೆಲ್ ಹಾಗೂ ರಿಂಕು ಸಿಂಗ್ ಅಖಾಡಕ್ಕೆ ಇಳಿದರೆ ಪಂದ್ಯದ ದಿಕ್ಕನ್ನೇ ಬದಲಿಸೋ ಛಲವಂತರು. ತವರಿನಲ್ಲೇ ಪಂದ್ಯ ನಡೆಯುತ್ತಿದ್ದರಿಂದ ಕೆಕೆಆರ್ ವಿರುದ್ಧ ರಾಜಸ್ಥಾನ್ಗೆ ಗೆಲುವು ಸ್ವಲ್ಪ ಕಷ್ಟ ಎನಿಸಬಹುದು.
ಈ ಎರಡು ಟೀಮ್ಗಳು ಟೇಬಲ್ ಟಾಪ್ನಲ್ಲಿದ್ದು ರಾಜಸ್ಥಾನ್ ಮೊದಲ ಸ್ಥಾನದಲ್ಲಿದ್ರೆ, ಕೋಲ್ಕತ್ತಾ 2ನೇ ಸ್ಥಾನದಲ್ಲಿದೆ. ಒಂದು ವೇಳೆ ಇವತ್ತು ಕೋಲ್ಕತ್ತಾ ಗೆದ್ದರೂ ಸಮಾನ ಅಂಕ ಪಡೆಯಲಿದೆ. ಅದರಂತೆ ಇಂದಿನ ಪಂದ್ಯ ಸಂಜೆ 7:30ಕ್ಕೆ ಕೊಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ನಡೆಯಲಿದೆ. ಈಗಾಗಲೇ ಅಭಿಮಾನಿಗಳು ಸ್ಟೇಡಿಯಂನತ್ತ ಆಗಮಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ