ಕೆಕೆಆರ್ನ ಭಲೇ ಜೋಡಿಯ ರಣತಂತ್ರ, ಎದುರಾಳಿಗಳು ತಬ್ಬಿಬ್ಬು.!
ಕೊಲ್ಕತ್ತಾ ತಂಡ ಆಡಿದ ರೀತಿಗೆ ಕ್ರಿಕೆಟ್ ಲೋಕವೇ ಸಲಾಂ ಅಂತಿದೆ
ಚೆಪಾಕ್ನಲ್ಲಿ ನಡೆದ ಫೈನಲ್ನಲ್ಲಿ ಜಯಭೇರಿ ಬಾರಿಸಿದ ಕೊಲ್ಕತ್ತಾ
ಈ ಸೀಸನ್ನ ಆರಂಭದಲ್ಲಿ ಕೆಕೆಆರ್ ಫೈನಲ್ಸ್ಗೆ ಬರುತ್ತೆ ಅಂತಾ ನಿರೀಕ್ಷೆ ಬಹುತೇಕರಲ್ಲಿ ಇರಲೇ ಇಲ್ಲ. ಆದ್ರೆ, ಕೆಕೆಆರ್ ಮಾಡಿದ್ದು ಎಲ್ಲರೂ ಹುಬ್ಬೇರಿಸುವಂತಾ ಸಾಧನೆ. ಕಪ್ ಗೆದ್ದು ಕ್ರಿಕೆಟ್ ಲೋಕವನ್ನೇ ಬೆರಗಾಗಿಸಿಬಿಡ್ತು. ಇದಕ್ಕೆಲ್ಲ ಕಾರಣ ಗೌತಮ್ ಗಂಭೀರ್ ಎಂಬ ಗುರು. ಗಂಭೀರ್ ಕೆಕೆಆರ್ ತಂಡದ ಚಾರ್ಮ್ ಬದಲಿಸಿದ ರೋಚಕ ಕಥೆ.
ಇಂಡಿಯನ್ ಪ್ರೀಮಿಯರ್ ಲೀಗ್ 2024ಕ್ಕೆ ಅದ್ಧೂರಿ ತೆರೆ ಬಿದ್ದಿದೆ. ಚೆಪಾಕ್ನಲ್ಲಿ ನಡೆದ ಫೈನಲ್ ಫೈಟ್ನಲ್ಲಿ ಜಯಭೇರಿ ಬಾರಿಸಿ ಕೊಲ್ಕತ್ತಾ ನೈಟ್ ರೈಡರ್ಸ್ ಐಪಿಎಲ್ ಟ್ರೋಫಿಗೆ ಮುತ್ತಿಕ್ಕಿದೆ. 3ನೇ ಬಾರಿ ಕಿರೀಟ ಗೆಲ್ಲೋದ್ರೊಂದಿಗೆ ಐಪಿಎಲ್ ಇತಿಹಾಸದ 3ನೇ ಸಕ್ಸಸ್ಫುಲ್ ಫ್ರಾಂಚೈಸಿ ಎಂಬ ಪಟ್ಟ ದಕ್ಕಿಸಿಕೊಂಡಿದೆ. ಈ ಸೀಸನ್ನಲ್ಲಿ ಕೊಲ್ಕತ್ತಾ ತಂಡ ಆಡಿದ ರೀತಿಗಂತೂ ಕ್ರಿಕೆಟ್ ಲೋಕ ಸಲಾಂ ಹೊಡೀತಿದೆ.
7ನೇ ಸ್ಥಾನದಿಂದ ಚಾಂಪಿಯನ್ ಪಟ್ಟದವರೆಗೆ.!
ಫೈನಲ್ ಫೈಟ್ನ ಸೋಲು ಗೆಲುವಿನಾಚೆಗೆ ಈ ಬಾರಿ ಐಪಿಎಲ್ನಲ್ಲಿ ಕೆಕೆಆರ್ ತಂಡದ ಮಾಡಿದ ಮೋಡಿ ಎಲ್ಲರನ್ನೂ ಆಶ್ಚರ್ಯಕ್ಕೆ ದೂಡಿದ್ದು ಸುಳ್ಳಲ್ಲ. ಮೊದಲ ಪಂದ್ಯದಿಂದ ಹಿಡಿದು ಫೈನಲ್ವರೆಗೆ ನೈಟ್ರೈಡರ್ಸ್ ಪಡೆ ಹೋರಾಡಿದ ರೀತಿ ಹಂಗಿತ್ತು. ಪ್ರತಿ ಪಂದ್ಯದಲ್ಲಿ ಗೆಲುವಿನ ಹಸಿವು ಇಡೀ ತಂಡದಲ್ಲಿ ಕಾಣ್ತಿತ್ತು. ಆಟಗಾರರು ನಾ ಮುಂದೆ ತಾ ಮುಂದೆ ಎಂಬಂತೆ ಪೈಪೋಟಿಗೆ ಬಿದ್ದು ಪರ್ಫಾಮ್ ಮಾಡಿದ್ರು. 2022, 2023 ಈ ಎರಡೂ ವರ್ಷಗಳಲ್ಲಿ 7ನೇ ಸ್ಥಾನಿಯಾಗಿ ಕೆಕೆಆರ್ ಟೂರ್ನಿಗೆ ಗುಡ್ ಬೈ ಹೇಳಿತ್ತು. ಆದ್ರೆ, ಕೆರಳಿ ನಿಲ್ತು. ಈ ವರ್ಷ ಆಡಿದ ರೀತಿ ಎಲ್ಲರನ್ನ ಬೆರಗಾಗಿಸಿಬಿಡ್ತು. ಅಂದಿದ್ದ ಕೆಕೆಆರ್ಗೂ, ಈ ಸೀಸನ್ನಲ್ಲಿ ಕಂಡ ಕೆಕೆಆರ್ಗೂ ಇದ್ದಿದ್ದು ಅಜಗಜಾಂತರ ವ್ಯತ್ಯಾಸ.
ಗುರು ಗೌತಮ್ ಗಂಭೀರ್ ಎಂಟ್ರಿ.. ಬದಲಾದ ಕೆಕೆಆರ್.!
ಈ ತಂಡದಲ್ಲಿರುವ ಎಲ್ಲರೂ ಸಮಾನರು. ಇಲ್ಲಿ ಜೂನಿಯರ್ -ಸೀನಿಯರ್, ಡೊಮೆಸ್ಟಿಕ್, ಇಂಟರ್ನ್ಯಾಷನಲ್ ಅನ್ನೋದಿಲ್ಲ. ನಮ್ಮ ಗುರಿ ಒಂದೆ ಐಪಿಎಲ್ ಟ್ರೋಫಿ ಗೆಲ್ಲೋದು. ಎಲ್ಲರೂ ಈ ಒಂದು ದಾರಿಯಲ್ಲಿ ಸಾಗಬೇಕು. ಮೇ 26ಕ್ಕೆ ನಾವು ಅಲ್ಲಿರಬೇಕು. ನಿಮ್ಮಿಂದ ಏನು ಸಾಧ್ಯ ಎಲ್ಲವನ್ನ ಕೊಡಬೇಕು. ಎಲ್ಲ ಇಂದಿನಿಂದ ಆರಂಭವಾಗ್ತಿದೆ. ಮಾರ್ಚ್ 23ರಿಂದಲ್ಲ. ಇಂದಿನಿಂದ ನಮ್ಮ ಐಪಿಎಲ್ ಜರ್ನಿ ಆರಂಭವಾಗ್ತಿದೆ. ಅದೇ ದಾರಿಯಲ್ಲಿ ನಡೆದು, ಹೋರಾಡಿದರೆ ನಾವು ಯಶಸ್ಸು ಆಗುತ್ತೇವೆ ಅನ್ನೋ ನಂಬಿಕೆಯಿದೆ.
ಗೌತಮ್ ಗಂಭೀರ್. ಕೆಕೆಆರ್ ಮೆಂಟರ್
ಐಪಿಎಲ್ ಆರಂಭಕ್ಕೂ ಮುನ್ನ ಕೆಕೆಆರ್ ತಂಡ ಈಡನ್ ಗಾರ್ಡನ್ನಲ್ಲಿ ಮೊದಲ ಪ್ರಾಕ್ಟೀಸ್ ಸೆಷನ್ ನಡೆಸ್ತಾ ಇತ್ತು. ಮೆಂಟರ್ ಆಗಿ ಗಂಭೀರ್ ತಂಡಕ್ಕೆ ಮರು ಎಂಟ್ರಿ ಕೊಟ್ಟ ದಿನ ಅದು. ಅವತ್ತೇ ಆಟಗಾರರು ಎದುರು ಗಂಭೀರ್ ಆಡಿದ ಮಾತುಗಳಿವು. ಮೊದಲ ದಿನದ ಅಭ್ಯಾಸದ ವೇಳೆ ಗಂಭೀರ್, ಫೈನಲ್ ಆಡೋ ಮಾತನಾಡಿದ್ರು. ಆ ಆತ್ಮವಿಶ್ವಾಸದ ಮಾತು, ಹೋರಾಟದ ಮನೋಭಾವವೇ ಕೆಕೆಆರ್ ಚಹರೆಯನ್ನೇ ಬದಲಿಸಿಬಿಡ್ತು.
ಅಟ್ಯಾಕ್.. ಅಟ್ಯಾಕ್.. ಅಟ್ಯಾಕ್.. ಒಂದೇ ಮಂತ್ರ..!
ಈ ಸೀಸನ್ನಲ್ಲಿ ಕೆಕೆಆರ್ ತಂಡಕ್ಕೆ ಗಂಭೀರ್ ಎಂಟ್ರಿ ಕೊಟ್ಟಿದ್ದೇ ಕೊಟ್ಟಿದ್ದು, ಕೊಲ್ಕತ್ತಾ ತಂಡ ಎದುರಾಳಿಗಳ ಮೇಲೆ ಅಕ್ಷರಶಃ ರೈಡ್ ಮಾಡ್ತು. ಅಗ್ರೆಸ್ಸೀವ್ ಇಂಟೆಂಟ್ನಲ್ಲಿ ಹೋರಾಡಿದ ಕೆಕೆಆರ್, ಎದುರಾಳಿ ತಂಡ, ಎದುರಾಳಿ ಆಟಗಾರರು ಯಾವುವದಕ್ಕೂ ಕೇರ್ ಮಾಡಲೇ ಇಲ್ಲ. ಡ್ರೆಸ್ಸಿಂಗ್ ರೂಮ್ನ ವಾತಾವರಣದಲ್ಲಾದ ಬದಲಾವಣೆ, ಸಿಗ್ತಿದ್ದ ಬೆಂಬಲ, ಪ್ರೋತ್ಸಾಹ ಆಟಗಾರರಲ್ಲಿ ಫಿಯರ್ಲೆಸ್ ಮನಸ್ಥಿತಿಯನ್ನ ಬೆಳೆಸಿಬಿಡ್ತು. ಇದು ಸಹಜವಾಗೇ ಆತ್ಮವಿಶ್ವಾಸವನ್ನ ಹೆಚ್ಚಿಸಿತು. ಆನ್ಫೀಲ್ಡ್ನಲ್ಲಿ ರಿಸಲ್ಟ್ ಕೂಡ ಸಿಗ್ತು.
2 ಕಠಿಣ ನಿರ್ಧಾರ, ಕೆಕೆಆರ್ ಆಟ ಅದ್ಭುತ.!
2021, 2022ರ ಸೀಸನ್ನಲ್ಲಿ ಎರಡೂ ಸೀಸನ್ನಲ್ಲಿ 7 ಬೇರೆ-ಬೇರೆ ಓಪನರ್ಸ್ಗಳನ್ನ ಟ್ರೈ ಮಾಡಿತ್ತು. ಆರಂಭದಲ್ಲೇ ಆಗ್ತಿದ್ದ ಯಡವಟ್ಟು ತಂಡವನ್ನ 7ನೇ ಸ್ಥಾನಿಯಾಗಿ ಗುಡ್ ಬೈ ಹೇಳುವಂತೆ ಮಾಡಿತು. ಆದ್ರೆ, ಗೌತಮ್ ಗಂಭೀರ್ ಎಂಟ್ರಿ ಕೊಟ್ಟ ಬಳಿಕ, ಲೋವರ್ ಆರ್ಡರ್ನಲ್ಲಿ ಬ್ಯಾಟಿಂಗ್ ಮಾಡ್ತಿದ್ದ ಸುನೀಲ್ ನರೈನ್ಗೆ ಪ್ರಮೋಷನ್ ಕೊಟ್ರು. ಓಪನರ್ ಆಗಿ ಕಣಕ್ಕಿಳಿದ ನರೈನ್ ಧಮಾಕಾ ಸೃಷ್ಟಿಸಿದ್ರು. ಇನ್ನು, ಟೂರ್ನಿಗೂ ಮುನ್ನ ಜೇಸನ್ ರಾಯ್ ಅಲಭ್ಯರಾದಾಗ ಫಿಲ್ ಸಾಲ್ಟ್ನ ರಿಪ್ಲೇಸ್ ಮೆಂಟ್ ಪ್ಲೇಯರ್ ಆಗಿ ಕರೆತಂದ್ರು. ಓಪನರ್ಸ್ಗಳಾಗಿ ಕಣಕ್ಕಿಳಿದ ಈ ಸಾಲ್ಟ್ -ನರೈನ್ ಜೋಡಿ ಬೌಲರ್ಗಳನ್ನ ಬಿಡದೇ ಕಾಡಿದ್ರು.
ಗುರು ಗಂಭೀರ್ಗೆ ಕೋಚ್ ಚಂದ್ರಕಾಂತ್ ಪಂಡಿತ್ ಸಾಥ್.!
ಮೆಂಟರ್ ಆಗಿ ಕೆಕೆಆರ್ಗೆ ಮರು ಎಂಟ್ರಿ ಕೊಟ್ಟ ಗೌತಮ್ ಗಂಭೀರ್ಗೆ ಹೆಡ್ ಕೋಚ್ ಚಂದ್ರಕಾಂತ್ ಪಂಡಿತ್ ಸಖತ್ ಸಾಥ್ ನೀಡಿದ್ರು. ಚಂದ್ರಕಾಂತ್ ಪಂಡಿತ್, ಇಂಡಿಯನ್ ಡೊಮೆಸ್ಟಿಕ್ ಸರ್ಕ್ಯೂಟ್ನ ಸಕ್ಸಸ್ಫುಲ್ ಕೋಚ್. ಈ ಇಬ್ಬರು ಮಾಸ್ಟರ್ ಮೈಂಡ್ಗಳು ಹೆಣೆದ ರಣತಂತ್ರಗಳಿಗೆ ಎದುರಾಳಿ ಪಡೆಗಳು ತಬ್ಬಿಬ್ಬಾದ್ವು. ಪ್ರತಿ ಪಂದ್ಯಕ್ಕೂ ಮುನ್ನ ಎದುರಾಳಿಗಳ ಸ್ಟ್ರೆಂಥ್ & ವೀಕ್ನೆಸ್ ಮೇಲೆ ಸಾಕಷ್ಟು ವರ್ಕೌಟ್ ಮಾಡ್ತಿದ್ದ ಜೋಡಿ, ಪರ್ಫೆಕ್ಟ್ ಗೇಮ್ಪ್ಲಾನ್ ರೂಪಿಸ್ತಿದ್ರು. ಡಗೌಟ್ನಲ್ಲಿ ಕುಳಿತು ಇಡೀ ಪಂದ್ಯ ನೋಡ್ತಿದ್ದ ಈ ಜೋಡಿ, ತಂಡಕ್ಕೆ ಅಗತ್ಯ ಟಿಪ್ಸ್ ನೀಡ್ತಿದ್ರು. ಈ ಭಲೇ ಜೋಡಿ ಒಟ್ಟಾಗಿ ಮಾಡಿದ ಮೋಡಿ, ಈ ಸೀಸನ್ನಲ್ಲಿ ಕೆಕೆಆರ್ಗೆ ಸಕ್ಸಸ್ನ ಗಿಫ್ಟ್ ಕೊಡ್ತು.
ಈ ಸೀಸನ್ ಆರಂಭದಲ್ಲಿ ಕೆಕೆಆರ್ ತಂಡದ ಪ್ಲೇ ಆಫ್ಗೆ ಎಂಟ್ರಿ ಕೊಡುತ್ತೆ ಅಂತಾ ಬಹುತೇಕರು ಊಹೆ ಕೂಡ ಮಾಡಿರಲಿಲ್ಲ. ಆದ್ರೆ, ಟೂರ್ನಿಗೂ ಮುನ್ನ ತಂಡದ ಸಕ್ಸಸ್ಫುಲ್ ಕ್ಯಾಪ್ಟನ್ ಗೌತಮ್ ಗಂಭೀರ್, ಮೆಂಟರ್ ಆಗಿ ಮರು ಎಂಟ್ರಿ ಕೊಟ್ರು. ಈ ಗುರು ಗಂಭೀರ್ ಎಂಟ್ರಿ ಇಡೀ ಕೆಕೆಆರ್ ತಂಡದ ಹಣೆಬರಹವನ್ನೇ ಬದಲಿಸಿದ್ದಂತೂ ಸುಳ್ಳಲ್ಲ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಕೆಕೆಆರ್ನ ಭಲೇ ಜೋಡಿಯ ರಣತಂತ್ರ, ಎದುರಾಳಿಗಳು ತಬ್ಬಿಬ್ಬು.!
ಕೊಲ್ಕತ್ತಾ ತಂಡ ಆಡಿದ ರೀತಿಗೆ ಕ್ರಿಕೆಟ್ ಲೋಕವೇ ಸಲಾಂ ಅಂತಿದೆ
ಚೆಪಾಕ್ನಲ್ಲಿ ನಡೆದ ಫೈನಲ್ನಲ್ಲಿ ಜಯಭೇರಿ ಬಾರಿಸಿದ ಕೊಲ್ಕತ್ತಾ
ಈ ಸೀಸನ್ನ ಆರಂಭದಲ್ಲಿ ಕೆಕೆಆರ್ ಫೈನಲ್ಸ್ಗೆ ಬರುತ್ತೆ ಅಂತಾ ನಿರೀಕ್ಷೆ ಬಹುತೇಕರಲ್ಲಿ ಇರಲೇ ಇಲ್ಲ. ಆದ್ರೆ, ಕೆಕೆಆರ್ ಮಾಡಿದ್ದು ಎಲ್ಲರೂ ಹುಬ್ಬೇರಿಸುವಂತಾ ಸಾಧನೆ. ಕಪ್ ಗೆದ್ದು ಕ್ರಿಕೆಟ್ ಲೋಕವನ್ನೇ ಬೆರಗಾಗಿಸಿಬಿಡ್ತು. ಇದಕ್ಕೆಲ್ಲ ಕಾರಣ ಗೌತಮ್ ಗಂಭೀರ್ ಎಂಬ ಗುರು. ಗಂಭೀರ್ ಕೆಕೆಆರ್ ತಂಡದ ಚಾರ್ಮ್ ಬದಲಿಸಿದ ರೋಚಕ ಕಥೆ.
ಇಂಡಿಯನ್ ಪ್ರೀಮಿಯರ್ ಲೀಗ್ 2024ಕ್ಕೆ ಅದ್ಧೂರಿ ತೆರೆ ಬಿದ್ದಿದೆ. ಚೆಪಾಕ್ನಲ್ಲಿ ನಡೆದ ಫೈನಲ್ ಫೈಟ್ನಲ್ಲಿ ಜಯಭೇರಿ ಬಾರಿಸಿ ಕೊಲ್ಕತ್ತಾ ನೈಟ್ ರೈಡರ್ಸ್ ಐಪಿಎಲ್ ಟ್ರೋಫಿಗೆ ಮುತ್ತಿಕ್ಕಿದೆ. 3ನೇ ಬಾರಿ ಕಿರೀಟ ಗೆಲ್ಲೋದ್ರೊಂದಿಗೆ ಐಪಿಎಲ್ ಇತಿಹಾಸದ 3ನೇ ಸಕ್ಸಸ್ಫುಲ್ ಫ್ರಾಂಚೈಸಿ ಎಂಬ ಪಟ್ಟ ದಕ್ಕಿಸಿಕೊಂಡಿದೆ. ಈ ಸೀಸನ್ನಲ್ಲಿ ಕೊಲ್ಕತ್ತಾ ತಂಡ ಆಡಿದ ರೀತಿಗಂತೂ ಕ್ರಿಕೆಟ್ ಲೋಕ ಸಲಾಂ ಹೊಡೀತಿದೆ.
7ನೇ ಸ್ಥಾನದಿಂದ ಚಾಂಪಿಯನ್ ಪಟ್ಟದವರೆಗೆ.!
ಫೈನಲ್ ಫೈಟ್ನ ಸೋಲು ಗೆಲುವಿನಾಚೆಗೆ ಈ ಬಾರಿ ಐಪಿಎಲ್ನಲ್ಲಿ ಕೆಕೆಆರ್ ತಂಡದ ಮಾಡಿದ ಮೋಡಿ ಎಲ್ಲರನ್ನೂ ಆಶ್ಚರ್ಯಕ್ಕೆ ದೂಡಿದ್ದು ಸುಳ್ಳಲ್ಲ. ಮೊದಲ ಪಂದ್ಯದಿಂದ ಹಿಡಿದು ಫೈನಲ್ವರೆಗೆ ನೈಟ್ರೈಡರ್ಸ್ ಪಡೆ ಹೋರಾಡಿದ ರೀತಿ ಹಂಗಿತ್ತು. ಪ್ರತಿ ಪಂದ್ಯದಲ್ಲಿ ಗೆಲುವಿನ ಹಸಿವು ಇಡೀ ತಂಡದಲ್ಲಿ ಕಾಣ್ತಿತ್ತು. ಆಟಗಾರರು ನಾ ಮುಂದೆ ತಾ ಮುಂದೆ ಎಂಬಂತೆ ಪೈಪೋಟಿಗೆ ಬಿದ್ದು ಪರ್ಫಾಮ್ ಮಾಡಿದ್ರು. 2022, 2023 ಈ ಎರಡೂ ವರ್ಷಗಳಲ್ಲಿ 7ನೇ ಸ್ಥಾನಿಯಾಗಿ ಕೆಕೆಆರ್ ಟೂರ್ನಿಗೆ ಗುಡ್ ಬೈ ಹೇಳಿತ್ತು. ಆದ್ರೆ, ಕೆರಳಿ ನಿಲ್ತು. ಈ ವರ್ಷ ಆಡಿದ ರೀತಿ ಎಲ್ಲರನ್ನ ಬೆರಗಾಗಿಸಿಬಿಡ್ತು. ಅಂದಿದ್ದ ಕೆಕೆಆರ್ಗೂ, ಈ ಸೀಸನ್ನಲ್ಲಿ ಕಂಡ ಕೆಕೆಆರ್ಗೂ ಇದ್ದಿದ್ದು ಅಜಗಜಾಂತರ ವ್ಯತ್ಯಾಸ.
ಗುರು ಗೌತಮ್ ಗಂಭೀರ್ ಎಂಟ್ರಿ.. ಬದಲಾದ ಕೆಕೆಆರ್.!
ಈ ತಂಡದಲ್ಲಿರುವ ಎಲ್ಲರೂ ಸಮಾನರು. ಇಲ್ಲಿ ಜೂನಿಯರ್ -ಸೀನಿಯರ್, ಡೊಮೆಸ್ಟಿಕ್, ಇಂಟರ್ನ್ಯಾಷನಲ್ ಅನ್ನೋದಿಲ್ಲ. ನಮ್ಮ ಗುರಿ ಒಂದೆ ಐಪಿಎಲ್ ಟ್ರೋಫಿ ಗೆಲ್ಲೋದು. ಎಲ್ಲರೂ ಈ ಒಂದು ದಾರಿಯಲ್ಲಿ ಸಾಗಬೇಕು. ಮೇ 26ಕ್ಕೆ ನಾವು ಅಲ್ಲಿರಬೇಕು. ನಿಮ್ಮಿಂದ ಏನು ಸಾಧ್ಯ ಎಲ್ಲವನ್ನ ಕೊಡಬೇಕು. ಎಲ್ಲ ಇಂದಿನಿಂದ ಆರಂಭವಾಗ್ತಿದೆ. ಮಾರ್ಚ್ 23ರಿಂದಲ್ಲ. ಇಂದಿನಿಂದ ನಮ್ಮ ಐಪಿಎಲ್ ಜರ್ನಿ ಆರಂಭವಾಗ್ತಿದೆ. ಅದೇ ದಾರಿಯಲ್ಲಿ ನಡೆದು, ಹೋರಾಡಿದರೆ ನಾವು ಯಶಸ್ಸು ಆಗುತ್ತೇವೆ ಅನ್ನೋ ನಂಬಿಕೆಯಿದೆ.
ಗೌತಮ್ ಗಂಭೀರ್. ಕೆಕೆಆರ್ ಮೆಂಟರ್
ಐಪಿಎಲ್ ಆರಂಭಕ್ಕೂ ಮುನ್ನ ಕೆಕೆಆರ್ ತಂಡ ಈಡನ್ ಗಾರ್ಡನ್ನಲ್ಲಿ ಮೊದಲ ಪ್ರಾಕ್ಟೀಸ್ ಸೆಷನ್ ನಡೆಸ್ತಾ ಇತ್ತು. ಮೆಂಟರ್ ಆಗಿ ಗಂಭೀರ್ ತಂಡಕ್ಕೆ ಮರು ಎಂಟ್ರಿ ಕೊಟ್ಟ ದಿನ ಅದು. ಅವತ್ತೇ ಆಟಗಾರರು ಎದುರು ಗಂಭೀರ್ ಆಡಿದ ಮಾತುಗಳಿವು. ಮೊದಲ ದಿನದ ಅಭ್ಯಾಸದ ವೇಳೆ ಗಂಭೀರ್, ಫೈನಲ್ ಆಡೋ ಮಾತನಾಡಿದ್ರು. ಆ ಆತ್ಮವಿಶ್ವಾಸದ ಮಾತು, ಹೋರಾಟದ ಮನೋಭಾವವೇ ಕೆಕೆಆರ್ ಚಹರೆಯನ್ನೇ ಬದಲಿಸಿಬಿಡ್ತು.
ಅಟ್ಯಾಕ್.. ಅಟ್ಯಾಕ್.. ಅಟ್ಯಾಕ್.. ಒಂದೇ ಮಂತ್ರ..!
ಈ ಸೀಸನ್ನಲ್ಲಿ ಕೆಕೆಆರ್ ತಂಡಕ್ಕೆ ಗಂಭೀರ್ ಎಂಟ್ರಿ ಕೊಟ್ಟಿದ್ದೇ ಕೊಟ್ಟಿದ್ದು, ಕೊಲ್ಕತ್ತಾ ತಂಡ ಎದುರಾಳಿಗಳ ಮೇಲೆ ಅಕ್ಷರಶಃ ರೈಡ್ ಮಾಡ್ತು. ಅಗ್ರೆಸ್ಸೀವ್ ಇಂಟೆಂಟ್ನಲ್ಲಿ ಹೋರಾಡಿದ ಕೆಕೆಆರ್, ಎದುರಾಳಿ ತಂಡ, ಎದುರಾಳಿ ಆಟಗಾರರು ಯಾವುವದಕ್ಕೂ ಕೇರ್ ಮಾಡಲೇ ಇಲ್ಲ. ಡ್ರೆಸ್ಸಿಂಗ್ ರೂಮ್ನ ವಾತಾವರಣದಲ್ಲಾದ ಬದಲಾವಣೆ, ಸಿಗ್ತಿದ್ದ ಬೆಂಬಲ, ಪ್ರೋತ್ಸಾಹ ಆಟಗಾರರಲ್ಲಿ ಫಿಯರ್ಲೆಸ್ ಮನಸ್ಥಿತಿಯನ್ನ ಬೆಳೆಸಿಬಿಡ್ತು. ಇದು ಸಹಜವಾಗೇ ಆತ್ಮವಿಶ್ವಾಸವನ್ನ ಹೆಚ್ಚಿಸಿತು. ಆನ್ಫೀಲ್ಡ್ನಲ್ಲಿ ರಿಸಲ್ಟ್ ಕೂಡ ಸಿಗ್ತು.
2 ಕಠಿಣ ನಿರ್ಧಾರ, ಕೆಕೆಆರ್ ಆಟ ಅದ್ಭುತ.!
2021, 2022ರ ಸೀಸನ್ನಲ್ಲಿ ಎರಡೂ ಸೀಸನ್ನಲ್ಲಿ 7 ಬೇರೆ-ಬೇರೆ ಓಪನರ್ಸ್ಗಳನ್ನ ಟ್ರೈ ಮಾಡಿತ್ತು. ಆರಂಭದಲ್ಲೇ ಆಗ್ತಿದ್ದ ಯಡವಟ್ಟು ತಂಡವನ್ನ 7ನೇ ಸ್ಥಾನಿಯಾಗಿ ಗುಡ್ ಬೈ ಹೇಳುವಂತೆ ಮಾಡಿತು. ಆದ್ರೆ, ಗೌತಮ್ ಗಂಭೀರ್ ಎಂಟ್ರಿ ಕೊಟ್ಟ ಬಳಿಕ, ಲೋವರ್ ಆರ್ಡರ್ನಲ್ಲಿ ಬ್ಯಾಟಿಂಗ್ ಮಾಡ್ತಿದ್ದ ಸುನೀಲ್ ನರೈನ್ಗೆ ಪ್ರಮೋಷನ್ ಕೊಟ್ರು. ಓಪನರ್ ಆಗಿ ಕಣಕ್ಕಿಳಿದ ನರೈನ್ ಧಮಾಕಾ ಸೃಷ್ಟಿಸಿದ್ರು. ಇನ್ನು, ಟೂರ್ನಿಗೂ ಮುನ್ನ ಜೇಸನ್ ರಾಯ್ ಅಲಭ್ಯರಾದಾಗ ಫಿಲ್ ಸಾಲ್ಟ್ನ ರಿಪ್ಲೇಸ್ ಮೆಂಟ್ ಪ್ಲೇಯರ್ ಆಗಿ ಕರೆತಂದ್ರು. ಓಪನರ್ಸ್ಗಳಾಗಿ ಕಣಕ್ಕಿಳಿದ ಈ ಸಾಲ್ಟ್ -ನರೈನ್ ಜೋಡಿ ಬೌಲರ್ಗಳನ್ನ ಬಿಡದೇ ಕಾಡಿದ್ರು.
ಗುರು ಗಂಭೀರ್ಗೆ ಕೋಚ್ ಚಂದ್ರಕಾಂತ್ ಪಂಡಿತ್ ಸಾಥ್.!
ಮೆಂಟರ್ ಆಗಿ ಕೆಕೆಆರ್ಗೆ ಮರು ಎಂಟ್ರಿ ಕೊಟ್ಟ ಗೌತಮ್ ಗಂಭೀರ್ಗೆ ಹೆಡ್ ಕೋಚ್ ಚಂದ್ರಕಾಂತ್ ಪಂಡಿತ್ ಸಖತ್ ಸಾಥ್ ನೀಡಿದ್ರು. ಚಂದ್ರಕಾಂತ್ ಪಂಡಿತ್, ಇಂಡಿಯನ್ ಡೊಮೆಸ್ಟಿಕ್ ಸರ್ಕ್ಯೂಟ್ನ ಸಕ್ಸಸ್ಫುಲ್ ಕೋಚ್. ಈ ಇಬ್ಬರು ಮಾಸ್ಟರ್ ಮೈಂಡ್ಗಳು ಹೆಣೆದ ರಣತಂತ್ರಗಳಿಗೆ ಎದುರಾಳಿ ಪಡೆಗಳು ತಬ್ಬಿಬ್ಬಾದ್ವು. ಪ್ರತಿ ಪಂದ್ಯಕ್ಕೂ ಮುನ್ನ ಎದುರಾಳಿಗಳ ಸ್ಟ್ರೆಂಥ್ & ವೀಕ್ನೆಸ್ ಮೇಲೆ ಸಾಕಷ್ಟು ವರ್ಕೌಟ್ ಮಾಡ್ತಿದ್ದ ಜೋಡಿ, ಪರ್ಫೆಕ್ಟ್ ಗೇಮ್ಪ್ಲಾನ್ ರೂಪಿಸ್ತಿದ್ರು. ಡಗೌಟ್ನಲ್ಲಿ ಕುಳಿತು ಇಡೀ ಪಂದ್ಯ ನೋಡ್ತಿದ್ದ ಈ ಜೋಡಿ, ತಂಡಕ್ಕೆ ಅಗತ್ಯ ಟಿಪ್ಸ್ ನೀಡ್ತಿದ್ರು. ಈ ಭಲೇ ಜೋಡಿ ಒಟ್ಟಾಗಿ ಮಾಡಿದ ಮೋಡಿ, ಈ ಸೀಸನ್ನಲ್ಲಿ ಕೆಕೆಆರ್ಗೆ ಸಕ್ಸಸ್ನ ಗಿಫ್ಟ್ ಕೊಡ್ತು.
ಈ ಸೀಸನ್ ಆರಂಭದಲ್ಲಿ ಕೆಕೆಆರ್ ತಂಡದ ಪ್ಲೇ ಆಫ್ಗೆ ಎಂಟ್ರಿ ಕೊಡುತ್ತೆ ಅಂತಾ ಬಹುತೇಕರು ಊಹೆ ಕೂಡ ಮಾಡಿರಲಿಲ್ಲ. ಆದ್ರೆ, ಟೂರ್ನಿಗೂ ಮುನ್ನ ತಂಡದ ಸಕ್ಸಸ್ಫುಲ್ ಕ್ಯಾಪ್ಟನ್ ಗೌತಮ್ ಗಂಭೀರ್, ಮೆಂಟರ್ ಆಗಿ ಮರು ಎಂಟ್ರಿ ಕೊಟ್ರು. ಈ ಗುರು ಗಂಭೀರ್ ಎಂಟ್ರಿ ಇಡೀ ಕೆಕೆಆರ್ ತಂಡದ ಹಣೆಬರಹವನ್ನೇ ಬದಲಿಸಿದ್ದಂತೂ ಸುಳ್ಳಲ್ಲ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ