/newsfirstlive-kannada/media/post_attachments/wp-content/uploads/2024/05/KKR-1-1.jpg)
ಆರ್​ಸಿಬಿ ಮತ್ತು ರಾಜಸ್ಥಾನ್​ ಎಲಿಮಿನೇಟ್​​ ಪಂದ್ಯದ ದಿನ ಕಂಟಕವೊಂದು ಎದುರಾಗಿತ್ತು. ಕೊಹ್ಲಿಗೆ ಬೆದರಿಕೆ ಕರೆ ಇದ್ದ ಕಾರಣ ಆರ್​ಸಿಬಿ ಅಭ್ಯಾಸವನ್ನು ಮೊಟಕುಗೊಳಿಸಿತ್ತು. ಮಾತ್ರವಲ್ಲದೆ ಸುದ್ದಿಗೋಷ್ಠಿಯನ್ನು ನಡೆಸಿರಲಿಲ್ಲ. ಅದರಂತೆಯೇ ಕೋಲ್ಕತ್ತಾಗೂ ನಿನ್ನೆ ಕಂಟಕ ಎಂದುರಾಗಿತ್ತು. ಅಭ್ಯಾಸ ಮಾಡಲು ಸಾಧ್ಯವಾಗದಂತೆ ಮಳೆ ಉಪಟಳ ನೀಡಿದೆ.
ಇಂದು ಚೆನ್ನೈನ ಚಿದಂಬರಂ ಮೈದಾನದಲ್ಲಿ ಸನ್​ರೈಸರ್ಸ್​​ ಹೈದರಾಬಾದ್​ ಜೊತೆಗೆ ಕೆಕೆಆರ್​ ಫೈನಲ್​ ಪಂದ್ಯ ಎದುರಿಸುತ್ತಿದೆ. ಆದರೆ ಅದಕ್ಕೂ ಮುನ್ನ ತಂಡ ತನ್ನ ಅಭ್ಯಾಸದಲ್ಲಿ ನಿರತವಾಗಿದೆ. ಆದರೆ ನಿನ್ನೆ ಅಭ್ಯಾಸಕ್ಕೆಂದು ಮೈದಾನಕ್ಕಿಳಿದ ಕೆಕೆಆರ್​ ತಂಡಕ್ಕೆ ಮಳೆ ಸಂಕಷ್ಟ ನೀಡಿದೆ.
ಇಂದು ಮಳೆ ಬರುತ್ತಾ?
ಈ ಬಾರಿಯ ಮೂರು ಐಪಿಎಲ್​ ಪಂದ್ಯಗಳು ಮಳೆಯಿಂದಾಗಿ ರದ್ದಾಗಿತ್ತು. ಆ ಕಾರಣಕ್ಕೆ ಉಭಯ ತಂಡಗಳಿಗೆ ಒಂದೊಂದು ಅಂಕ ನೀಡಲಾಗಿತ್ತು. ಆದರೆ ಹಮಾಮಾನ ಇಲಾಖೆ ನೀಡಿದ ಮುನ್ಸೂಚನೆ ಗಮನಿಸಿದರೆ ರೆಮಲ್​ ಚಂಡ ಮಾರುತ ಬೀಸುವ ಲಕ್ಷಣ ಕಾಣುತ್ತಿದೆ. ಒಂದು ವೇಳೆ ಸೈಕ್ಲೋನ್​ ಭೀತಿಯಿಂದ ಇಂದಿನ ಪಂದ್ಯ ರದ್ದಾದರೆ ಯಾರ ಮುಡಿಗೆ ಟ್ರೋಫಿ ಸೇರಲಿದೆ ಎಂಬ ಲೆಕ್ಕಾಚಾರ ಅಭಿಮಾನಿಗಳ ತಲೆ ಕೆಡಿಸಿದೆ.
/newsfirstlive-kannada/media/post_attachments/wp-content/uploads/2024/05/KKR-2-1.jpg)
ಇಂದು ಮಳೆ ಬಂದರೆ ಗತಿ ಏನು?
ಇಂದು ಪಂದ್ಯದ ವೇಳೆ ಮಳೆ ಶಾಕ್ ಕೊಟ್ಟರೆ ಅದಕ್ಕಾಗಿ ದಿನವೊಂದನ್ನು ಮೀಸಲಿಟ್ಟು ಆಡಿಸಲಾಗುತ್ತದೆ. ಒಂದು ವೇಳೆ ಮೀಸಲು ದಿನದಂದೂ ಸಹ ಮಳೆ ಬಂದರೆ 5 ಓವರ್​ನಲ್ಲಿ ಪಂದ್ಯವಾಡಿಸಲು ಸಾಧ್ಯವಾಗುತ್ತದಾ ಎಂದು ನೋಡಲಾಗುತ್ತದೆ.
ಇದನ್ನೂ ಓದಿ: ಮೇಕೆ ಮೇಯಿಸುತ್ತಿದ್ದ ಮಹಿಳೆ ಮೇಲೆ ಹುಲಿ ದಾಳಿ.. ವ್ಯಾಘ್ರ ತಿಂದು ತೇಗಿದ ಮೃತದೇಹಕ್ಕಾಗಿ ಹುಡುಕಾಟ
ಐದು ಓವರ್​ನ ಪಂದ್ಯ ಸಹ ಸಾಧ್ಯವಾಗದೆ ಹೋದರೆ ಸೂಪರ್​ ಓವರ್​ ಮೂಲಕ ಪಂದ್ಯ ನಡೆಸುವ ಸಾಧ್ಯತೆ ಇದೆ. ಇವೆಲ್ಲ ಅಡಚಣೆ ಎದುರಾದರೆ, ಧಾರಾಕಾರ ಮಳೆಯಿಂದ ಪಂದ್ಯ ನಡೆಸಲು ಸಾಧ್ಯವಾಗುವುದಿಲ್ಲ ಎಂಬುದಾದರೆ ಪಾಯಿಂಟ್​ ಟೇಬಲ್​ ಪ್ರಕಾರ ಕೋಲ್ಕತ್ತಾ ಟ್ರೋಫಿ ಮುಡಿಗೇರಿಸಿಕೊಳ್ಳುವ ಸಾಧ್ಯತೆ ಬಹುಪಾಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us