RCB ಸೇರುವ ಬಗ್ಗೆ ಬಿಗ್​ ಅಪ್ಡೇಟ್​ ಕೊಟ್ಟ KL ರಾಹುಲ್; ಲಕ್ನೋ ಮಾಲೀಕರ ಬಗ್ಗೆ ಏನಂದ್ರು..?

author-image
Ganesh Nachikethu
Updated On
RCB ಫ್ಯಾನ್ಸ್​ಗೆ ಕೊನೆಗೂ ಗುಡ್​ನ್ಯೂಸ್​ ಕೊಟ್ಟ ಕನ್ನಡಿಗ ಕೆ.ಎಲ್​ ರಾಹುಲ್​​.. ಏನದು?
Advertisment
  • 2025ರ ಇಂಡಿಯನ್​ ಪ್ರೀಮಿಯರ್ ಲೀಗ್​​ ಮೆಗಾ ಆಕ್ಷನ್​ಗೆ ದಿನಗಣನೆ!
  • ಬಲಿಷ್ಠ ತಂಡ ಕಟ್ಟಲು ಎಲ್ಲಾ ಐಪಿಎಲ್​​ ತಂಡಗಳಿಂದ ಬ್ಲೂ ಪ್ರಿಂಟ್​​ ರೆಡಿ
  • ಮೆಗಾ ಹರಾಜಿಗೆ ಮುನ್ನ ದೊಡ್ಡ ಹೇಳಿಕೆ ಕೊಟ್ಟ ಕನ್ನಡಿಗ KL ರಾಹುಲ್​​

2025ರ ಇಂಡಿಯನ್​ ಪ್ರೀಮಿಯರ್ ಲೀಗ್​​ ಮೆಗಾ ಆಕ್ಷನ್​ಗೆ ದಿನಗಣನೆ ಶುರುವಾಗಿದೆ. ಮುಂದಿನ ಐಪಿಎಲ್​ ಸೀಸನ್​ಗೆ ಬಲಿಷ್ಠ ತಂಡ ಕಟ್ಟಲು ಎಲ್ಲಾ ತಂಡಗಳು ಬ್ಲೂ ಪ್ರಿಂಟ್​​ ರೆಡಿ ಮಾಡಿಕೊಂಡಿವೆ. ಹಾಗಾಗಿ ಮೆಗಾ ಹರಾಜಿನಲ್ಲಿ ಯಾರನ್ನು ಖರೀದಿ ಮಾಡಬೇಕು? ಎಂದು ಲೆಕ್ಕಾಚಾರ ನಡೆಸಿದ್ದಾರೆ. ಮಾಲೀಕರು ಅಂತೂ ಯಾವ ಆಟಗಾರರನ್ನು ಕೈ ಬಿಡಬೇಕು? ಯಾರಿಗೆ ಮಣೆ ಹಾಕಬೇಕು? ಎಂದು ಪ್ಲಾನ್​​​ ಮಾಡಿಕೊಂಡಿದ್ದಾರೆ. ಇದರ ಮಧ್ಯೆ ಕೆಎಲ್‌ ರಾಹುಲ್‌ ದೊಡ್ಡ ಹೇಳಿಕೆಯೊಂದು ನೀಡಿದ್ದಾರೆ.

ಕೆ.ಎಲ್​ ರಾಹುಲ್​​ ಹೇಳಿದ್ದೇನು..?

ಇತ್ತೀಚೆಗೆ ನಡೆದ ಖಾಸಗಿ ಸಂದರ್ಶನದಲ್ಲಿ ಮಾತಾಡಿದ ಕೆ.ಎಲ್​ ರಾಹುಲ್​, ಮಾಲೀಕರು ವ್ಯಾಪಾರದ ಹಿನ್ನೆಲೆಯಿಂದ ಬಂದವರು. ಅಂಕಿ ಅಂಶ ನೋಡಿ ಆಟಗಾರರನ್ನು ಖರೀದಿ ಮಾಡುತ್ತಾರೆ. ಅಳೆದು ತೂಗಿ ಉತ್ತಮ ತಂಡ ಕಟ್ಟುವ ಕನಸು ಕಂಡಿರುತ್ತಾರೆ. ಆಟಗಾರನಿಗೂ ಒಳ್ಳೆಯ ದಿನಗಳು ಇರುತ್ತವೆ. ಅದೇ ರೀತಿ ಕೆಟ್ಟ ದಿನಗಳು ಇರುತ್ತವೆ. ನೀವು ಕರೆದುಕೊಂಡ ಆಟಗಾರರು ಪ್ರತಿ ಪಂದ್ಯವನ್ನು ಗೆಲ್ಲಿಸಬೇಕು ಎಂದು ಭಾವಿಸಬಾರದು ಎಂದಿದ್ದಾರೆ ಕೆ.ಎಲ್​ ರಾಹುಲ್​​.

ಇನ್ನು, ಕನ್ನಡಿಗ ಕೆ.ಎಲ್​ ರಾಹುಲ್​​ ಐಪಿಎಲ್‌ ಮಾಲೀಕರ ಮನಸ್ಥಿತಿ ಬಗ್ಗೆ ತುಟಿ ಬಿಚ್ಚಿದ್ದಾರೆ. ಈ ಮೂಲಕ ಲಕ್ನೋ ಸೂಪರ್​ ಜೈಂಟ್ಸ್​ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಹಾಗೂ ತನ್ನ ನಡುವೆ ನಡೆದ ಶೀತಲ ಸಮರಕ್ಕೆ ತೆರೆ ಎಳೆದಿದ್ದಾರೆ. ಅಷ್ಟೇ ಅಲ್ಲ, ತಾನು ಲಕ್ನೋ ತಂಡವನ್ನು ಬಿಟ್ಟು ಆರ್​​ಸಿಬಿ ಸೇರುವ ಬಗ್ಗೆ ದೊಡ್ಡ ಹಿಂಟ್​ ನೀಡಿದ್ದಾರೆ ಎಂದು ಚರ್ಚೆಯಾಗುತ್ತಿದೆ.

ಇದನ್ನೂ ಓದಿ:RCBಗೆ ಬರೋ ಹಿಂಟ್ ಕೊಟ್ಟ KL ರಾಹುಲ್​​.. ಲಕ್ನೋ ಟೀಮ್ ಓನರ್​ಗೆ ಕೌಂಟರ್ ಕೊಟ್ಟ ಕನ್ನಡಿಗ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment