ಸಂಕಷ್ಟದಲ್ಲಿ ಕೆ.ಎಲ್.ರಾಹುಲ್ ಟಿ20 ಕರಿಯರ್..!
ಕೊಹ್ಲಿ, ರೋಹಿತ್, ಜಡೇಜಾ ಹಾದಿಯಲ್ಲಿ ರಾಹುಲ್?
ಟಿ20 ಗೇಮ್ಗೆ ಫಿಟ್ ಆಗಲ್ವಾ ಕೆ.ಎಲ್.ರಾಹುಲ್?
ಟಿ20 ವಿಶ್ವಕಪ್ ಬೆನ್ನಲ್ಲೇ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ.. ಟಿ20 ಫಾರ್ಮೆಟ್ಗೆ ಗುಡ್ ಬೈ ಹೇಳಿದ್ರು. ಇದೀಗ ಕನ್ನಡಿಗ ಕೆ.ಎಲ್.ರಾಹುಲ್ ಕೂಡ ಈ ತ್ರಿಮೂರ್ತಿಗಳ ಹಾದಿಯನ್ನೇ ಹಿಡಿಯುತ್ತಾರಾ ಎಂಬ ಅನುಮಾನ ಹುಟ್ಟಿಹಾಕಿದೆ.
ಕೆ.ಎಲ್.ರಾಹುಲ್.. ಟೀಮ್ ಇಂಡಿಯಾದ ಸ್ಟ್ರೈಲಿಶ್ ಬ್ಯಾಟ್ಸ್ಮನ್.. ಫಾರ್ಮೆಟ್ ಯಾವುದೇ ಆಗಿರಲಿ, ಆ ಫಾರ್ಮೆಟ್ಗೆ ತಕ್ಕಂತೆ ಬದಲಾಗುವ ಕೆ.ಎಲ್.ರಾಹುಲ್, ಬ್ಯಾಟಿಂಗ್ ನೋಡೋದೇ ಕಣ್ಣಿಗೆ ಹಬ್ಬ. ಆದ್ರೀಗ ಇದೇ ರಾಹುಲ್ನ ಟಿ20 ಕರಿಯರ್ ಸಂಕಷ್ಟಕ್ಕೆ ಸಿಲುಕಿದೆ. ಟಿ20 ಮಾದರಿಯ ಕ್ರಿಕೆಟ್ನಲ್ಲಿ ಇನ್ಮುಂದೆ ಕಾಣೋದು ಅನುಮಾನವೇ. ಇದಕ್ಕೆಲ್ಲ ಕಾರಣ ಟೀಮ್ ಇಂಡಿಯಾದಲ್ಲಿ ಶುರುವಾಗಿರುವ ಹೊಸ ಪರ್ವ. ಹೀಗಾಗಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಡೇಜಾರ ಹಾದಿಯನ್ನೇ ಕೆ.ಎಲ್.ರಾಹುಲ್ ಹಿಡಿಯುತ್ತಾರಾ ಎಂಬ ಪ್ರಶ್ನೆ ಹುಟ್ಟಿಹಾಕಿದೆ.
ಇದನ್ನೂ ಓದಿ:ಡಿವೋರ್ಸ್ ವದಂತಿ ಬೆನ್ನಲ್ಲೇ ಪಾಂಡ್ಯ ಹೆಸರಿನ ಜೊತೆ ತಳುಕು ಹಾಕಿಕೊಂಡ ಸುಂದರಿ..!
ಕಾರಣ 1: ಯಂಗ್ಸ್ಟರ್ಸ್ ಮೇಲಿದೆ ಹೊಸ ಕೋಚ್ ಕಣ್ಣು
ಗೌತಮ್ ಗಂಭೀರ್, ನ್ಯೂ ಹೆಡ್ ಕೋಚ್ ಆಗಿ ಚುಕ್ಕಾಣಿ ಹಿಡಿದಿದ್ದೆ ತಡ. ಟೀಮ್ ಇಂಡಿಯಾದಲ್ಲಿ ಹೊಸ ಅಧ್ಯಾಯ ಶುರುವಾಗಿದೆ. ಯುವ ಆಟಗಾರರ ಪಡೆಯನ್ನೇ ಕಟ್ಟುವ ಮನಸ್ಸು ಮಾಡಿರೋ ಗೌತಮ್ ಗಂಭೀರ್, 2026ರ ಟಿ20 ವಿಶ್ವಕಪ್ ವೇಳೆಗೆ ಬಲಿಷ್ಠ ತಂಡ ಕಟ್ಟುವ ಚಿಂತನೆಯಲ್ಲಿದ್ದಾರೆ. ಹೀಗಾಗಿ 32 ವರ್ಷದ ಕೆ.ಎಲ್.ರಾಹುಲ್, ಟಿ20 ಫಾರ್ಮೆಟ್ನಿಂದ ಕಂಪ್ಲೀಟ್ ದೂರವಾಗೋದು ಗ್ಯಾರಂಟಿ.
ಕಾರಣ 2: T20 ಕ್ರಿಕೆಟ್ನಲ್ಲಿ ಯಂಗ್ಸ್ಟರ್ಸ್ ಶೈನಿಂಗ್
ಕೆ.ಎಲ್.ರಾಹುಲ್, ಟಿ20 ಫಾರ್ಮೆಟ್ನಿಂದ ಕಂಪ್ಲೀಟ್ ದೂರವಾಗ್ತಾರೆ ಎಂದು ಹೇಳಲು ಕಾರಣ. ಯುವ ಆಟಗಾರರ ಅಬ್ಬರವೂ ಒಂದಾಗಿದೆ. ಸಿಕ್ಕ ಒಂದೇ ಒಂದು ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಳ್ಳುತ್ತಿರುವ ಯುವ ಆಟಗಾರರು, ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ನೀಡ್ತಿದ್ದಾರೆ. ಸಿಂಗಲ್ ಹ್ಯಾಂಡ್ನಲ್ಲೇ ತಂಡವನ್ನು ಗೆಲ್ಲಿಸಿ ಗೇಮ್ ಚೇಂಜರ್ಗಳಾಗಿ ಮಿಂಚುತ್ತಿದ್ದಾರೆ. ಇದು ರಾಹುಲ್ ಬಾಗಿಲನ್ನು ಸಂಪೂರ್ಣ ಮುಚ್ಚುವಂತೆ ಮಾಡಿದೆ.
ಇದನ್ನೂ ಓದಿ:ಗಂಭೀರ್ ಕೋಚ್ ಆದ ಬೆನ್ನಲ್ಲೇ ಟೆನ್ಷನ್ ಟೆನ್ಷನ್.. ಆತಂಕ ಹುಟ್ಟಿಸಿದ ಆ ಮೂರು ಘಟನೆಗಳು..!
ಕಾರಣ 3: ಓಪನಿಂಗ್ ಸ್ಲಾಟ್ ತೀವ್ರವಾದ ಪೈಪೋಟಿ
ಟೀಮ್ ಇಂಡಿಯಾದಲ್ಲಿ ತ್ರೀವ್ರ ಪೈಫೋಟಿ ಇರುವ ಸ್ಲಾಟ್ ಅಂದ್ರೆ ಅದು ಓಪನಿಂಗ್ ಸ್ಲಾಟ್. ರೋಹಿತ್ ಶರ್ಮಾರಿಂದ ತೆರವಾದ ಸ್ಥಾನದಲ್ಲಿ ಕೆ.ಎಲ್.ರಾಹುಲ್ಗೆ ಚಾನ್ಸ್ ಸಿಗುತ್ತಾ ಅಂದ್ರೆ ನಿಜಕ್ಕೂ ಇಲ್ಲ ಅಂತಾನೇ ಹೇಳಬೇಕು. ಆರಂಭಿಕನ ಸ್ಥಾನಕ್ಕಾಗಿ ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕ್ವಾಡ್ ಜೊತೆಗೆ ನ್ಯೂ ಸೆನ್ಸೇಷನ್ ಅಭಿಷೇಕ್ ಶರ್ಮಾ ಕಮಾಲ್ ಮಾಡ್ತಿದ್ದಾರೆ. ತಂಡದಲ್ಲಿರುವ ಇವರಲ್ಲೇ ಸ್ಥಾನಕ್ಕಾಗಿ ಕಿತ್ತಾಟ ನಡೀತಿದೆ. ಇದಿಷ್ಟೇ ಅಲ್ಲ, ತಂಡದ ಹೊರಗೂ ಸಾಲು ಸಾಲು ಆಟಗಾರರು ಇದ್ದಾರೆ.
ಕಾರಣ 4: ಕೀಪಿಂಗ್ ಕೋಟಾದಲ್ಲಿ ಚಾನ್ಸೇ ಇಲ್ಲ
ಆರಂಭಿಕನಾಗಿ ಅಲ್ಲ. ವಿಕೆಟ್ ಕೀಪಿಂಗ್ ಆ್ಯಂಡ್ ಮಿಡಲ್ ಆರ್ಡರ್ ಬ್ಯಾಟ್ಸ್ಮನ್ ಕೋಟಾದಲ್ಲಿ ಟಿ20 ಫಾರ್ಮೆಟ್ಗೆ ಎಂಟ್ರಿ ಕೊಡುವ ಚಾನ್ಸ್ ಕೂಡ ಕೆ.ಎಲ್.ರಾಹುಲ್ಗೆ ಇಲ್ಲ. ಫಸ್ಟ್ ಚಾಯ್ಸ್ ವಿಕೆಟ್ ಕೀಪರ್ ರಿಷಭ್ ಪಂತ್ಗೆ ಭವಿಷ್ಯದ ನಾಯಕನ ಪಟ್ಟ ಕಟ್ಟಲು ಬಿಸಿಸಿಐ ರೆಡಿಯಾಗಿದೆ. ಮತ್ತೊಂದೆಡೆ ಸಂಜು ಸ್ಯಾಮ್ಸನ್, ಧೃವ್ ಜುರೇಲ್, ಇಶಾನ್ ಕಿಶನ್ ಬ್ಯಾಕ್ ಅಪ್ ವಿಕೆಟ್ ಕೀಪರ್ಗಳಾಗಿದ್ದಾರೆ. ಜಿತೇಶ್ ಶರ್ಮಾ ಕೂಡ ಚಾನ್ಸ್ಗಾಗಿ ಬೆಂಚ್ ಕಾಯ್ತಿದ್ದಾರೆ. ಮಿಡಲ್ ಆರ್ಡರ್ನಲ್ಲಿ ಬಲ ತುಂಬಬಲ್ಲ ಇವರನ್ನ ಓವರ್ ಟೇಕ್ ಮಾಡೋದು ನಿಜಕ್ಕೂ ಕಷ್ಟದ ಕೆಲಸ.
ಇದನ್ನೂ ಓದಿ:ಮೌನಕ್ಕೆ ಜಾರಿತು ಅಕ್ಷರಗಳಿಗೂ ಭಾವ ತುಂಬುತ್ತಿದ್ದ ದನಿ.. ಅಪರ್ಣಾ ಅವರ 7 ಅಪೂರ್ವ ದಾಖಲೆಗಳು.. ಇಲ್ಲಿವೆ
ಕಾರಣ 5: ಅಗ್ರೆಸ್ಸೀವ್ ಆಟಕ್ಕೆ ಸೂಟ್ ಆಗ್ತಿಲ್ಲ ರಾಹುಲ್
ಕೆ.ಎಲ್.ರಾಹುಲ್ಗೆ ಮುಳ್ಳಾಗಿರುವುದೇ ಸ್ಲೋ ಬ್ಯಾಟಿಂಗ್. ಈ ಹಿಂದೆ ಆಕ್ರಮಣಕಾರಿ ಬ್ಯಾಟಿಂಗ್ ಮಾಡಲು ಸೈ ಅಂತಿದ್ದ ಕನ್ನಡಿಗ ರಾಹುಲ್, ಈಗ ಕಂಪ್ಲೀಟ್ ಬದಲಾಗಿದ್ದಾರೆ. ಸ್ಲೋ ಬ್ಯಾಟಿಂಗ್ನಿಂದಾಗಿಯೇ 2022ರ ಟಿ20 ವಿಶ್ವಕಪ್ ಬಳಿಕ ತಂಡದಿಂದ ಗೇಟ್ಪಾಸ್ ಪಡೆದ ರಾಹುಲ್, ಐಪಿಎಲ್ನಲ್ಲೂ ಏಕದಿನ ಶೈಲಿಯಲ್ಲೇ ಬ್ಯಾಟಿಂಗ್ ಮಾಡಿದೆಚ್ಚು. ಇದೇ ಕಾರಣಕ್ಕೆ ಟಿ20 ವಿಶ್ವಕಪ್ನಿಂದ ದೂರವಾದ ಕನ್ನಡಿಗ ರಾಹುಲ್, ಈಗ ಚುಟಕು ಮಾದರಿಯ ತಂಡಕ್ಕೆ ಕಮ್ಬ್ಯಾಕ್ ಮಾಡಬೇಕಾದ್ರೆ, ಪವಾಡವೇ ನಡೀಯಬೇಕಿದೆ.
ಇದನ್ನೂ ಓದಿ:ವೈದ್ಯರ ಗಡುವು ಮೀರಿ ಅಪರ್ಣಾ ಬದುಕಿದ್ದೇ ಚಮತ್ಕಾರ.. ಕೊನೆಗಾಲದಲ್ಲಿ ಪಟ್ಟ ಕಷ್ಟಗಳು ಅಷ್ಟಿಷ್ಟಲ್ಲ..
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಸಂಕಷ್ಟದಲ್ಲಿ ಕೆ.ಎಲ್.ರಾಹುಲ್ ಟಿ20 ಕರಿಯರ್..!
ಕೊಹ್ಲಿ, ರೋಹಿತ್, ಜಡೇಜಾ ಹಾದಿಯಲ್ಲಿ ರಾಹುಲ್?
ಟಿ20 ಗೇಮ್ಗೆ ಫಿಟ್ ಆಗಲ್ವಾ ಕೆ.ಎಲ್.ರಾಹುಲ್?
ಟಿ20 ವಿಶ್ವಕಪ್ ಬೆನ್ನಲ್ಲೇ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ.. ಟಿ20 ಫಾರ್ಮೆಟ್ಗೆ ಗುಡ್ ಬೈ ಹೇಳಿದ್ರು. ಇದೀಗ ಕನ್ನಡಿಗ ಕೆ.ಎಲ್.ರಾಹುಲ್ ಕೂಡ ಈ ತ್ರಿಮೂರ್ತಿಗಳ ಹಾದಿಯನ್ನೇ ಹಿಡಿಯುತ್ತಾರಾ ಎಂಬ ಅನುಮಾನ ಹುಟ್ಟಿಹಾಕಿದೆ.
ಕೆ.ಎಲ್.ರಾಹುಲ್.. ಟೀಮ್ ಇಂಡಿಯಾದ ಸ್ಟ್ರೈಲಿಶ್ ಬ್ಯಾಟ್ಸ್ಮನ್.. ಫಾರ್ಮೆಟ್ ಯಾವುದೇ ಆಗಿರಲಿ, ಆ ಫಾರ್ಮೆಟ್ಗೆ ತಕ್ಕಂತೆ ಬದಲಾಗುವ ಕೆ.ಎಲ್.ರಾಹುಲ್, ಬ್ಯಾಟಿಂಗ್ ನೋಡೋದೇ ಕಣ್ಣಿಗೆ ಹಬ್ಬ. ಆದ್ರೀಗ ಇದೇ ರಾಹುಲ್ನ ಟಿ20 ಕರಿಯರ್ ಸಂಕಷ್ಟಕ್ಕೆ ಸಿಲುಕಿದೆ. ಟಿ20 ಮಾದರಿಯ ಕ್ರಿಕೆಟ್ನಲ್ಲಿ ಇನ್ಮುಂದೆ ಕಾಣೋದು ಅನುಮಾನವೇ. ಇದಕ್ಕೆಲ್ಲ ಕಾರಣ ಟೀಮ್ ಇಂಡಿಯಾದಲ್ಲಿ ಶುರುವಾಗಿರುವ ಹೊಸ ಪರ್ವ. ಹೀಗಾಗಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಡೇಜಾರ ಹಾದಿಯನ್ನೇ ಕೆ.ಎಲ್.ರಾಹುಲ್ ಹಿಡಿಯುತ್ತಾರಾ ಎಂಬ ಪ್ರಶ್ನೆ ಹುಟ್ಟಿಹಾಕಿದೆ.
ಇದನ್ನೂ ಓದಿ:ಡಿವೋರ್ಸ್ ವದಂತಿ ಬೆನ್ನಲ್ಲೇ ಪಾಂಡ್ಯ ಹೆಸರಿನ ಜೊತೆ ತಳುಕು ಹಾಕಿಕೊಂಡ ಸುಂದರಿ..!
ಕಾರಣ 1: ಯಂಗ್ಸ್ಟರ್ಸ್ ಮೇಲಿದೆ ಹೊಸ ಕೋಚ್ ಕಣ್ಣು
ಗೌತಮ್ ಗಂಭೀರ್, ನ್ಯೂ ಹೆಡ್ ಕೋಚ್ ಆಗಿ ಚುಕ್ಕಾಣಿ ಹಿಡಿದಿದ್ದೆ ತಡ. ಟೀಮ್ ಇಂಡಿಯಾದಲ್ಲಿ ಹೊಸ ಅಧ್ಯಾಯ ಶುರುವಾಗಿದೆ. ಯುವ ಆಟಗಾರರ ಪಡೆಯನ್ನೇ ಕಟ್ಟುವ ಮನಸ್ಸು ಮಾಡಿರೋ ಗೌತಮ್ ಗಂಭೀರ್, 2026ರ ಟಿ20 ವಿಶ್ವಕಪ್ ವೇಳೆಗೆ ಬಲಿಷ್ಠ ತಂಡ ಕಟ್ಟುವ ಚಿಂತನೆಯಲ್ಲಿದ್ದಾರೆ. ಹೀಗಾಗಿ 32 ವರ್ಷದ ಕೆ.ಎಲ್.ರಾಹುಲ್, ಟಿ20 ಫಾರ್ಮೆಟ್ನಿಂದ ಕಂಪ್ಲೀಟ್ ದೂರವಾಗೋದು ಗ್ಯಾರಂಟಿ.
ಕಾರಣ 2: T20 ಕ್ರಿಕೆಟ್ನಲ್ಲಿ ಯಂಗ್ಸ್ಟರ್ಸ್ ಶೈನಿಂಗ್
ಕೆ.ಎಲ್.ರಾಹುಲ್, ಟಿ20 ಫಾರ್ಮೆಟ್ನಿಂದ ಕಂಪ್ಲೀಟ್ ದೂರವಾಗ್ತಾರೆ ಎಂದು ಹೇಳಲು ಕಾರಣ. ಯುವ ಆಟಗಾರರ ಅಬ್ಬರವೂ ಒಂದಾಗಿದೆ. ಸಿಕ್ಕ ಒಂದೇ ಒಂದು ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಳ್ಳುತ್ತಿರುವ ಯುವ ಆಟಗಾರರು, ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ನೀಡ್ತಿದ್ದಾರೆ. ಸಿಂಗಲ್ ಹ್ಯಾಂಡ್ನಲ್ಲೇ ತಂಡವನ್ನು ಗೆಲ್ಲಿಸಿ ಗೇಮ್ ಚೇಂಜರ್ಗಳಾಗಿ ಮಿಂಚುತ್ತಿದ್ದಾರೆ. ಇದು ರಾಹುಲ್ ಬಾಗಿಲನ್ನು ಸಂಪೂರ್ಣ ಮುಚ್ಚುವಂತೆ ಮಾಡಿದೆ.
ಇದನ್ನೂ ಓದಿ:ಗಂಭೀರ್ ಕೋಚ್ ಆದ ಬೆನ್ನಲ್ಲೇ ಟೆನ್ಷನ್ ಟೆನ್ಷನ್.. ಆತಂಕ ಹುಟ್ಟಿಸಿದ ಆ ಮೂರು ಘಟನೆಗಳು..!
ಕಾರಣ 3: ಓಪನಿಂಗ್ ಸ್ಲಾಟ್ ತೀವ್ರವಾದ ಪೈಪೋಟಿ
ಟೀಮ್ ಇಂಡಿಯಾದಲ್ಲಿ ತ್ರೀವ್ರ ಪೈಫೋಟಿ ಇರುವ ಸ್ಲಾಟ್ ಅಂದ್ರೆ ಅದು ಓಪನಿಂಗ್ ಸ್ಲಾಟ್. ರೋಹಿತ್ ಶರ್ಮಾರಿಂದ ತೆರವಾದ ಸ್ಥಾನದಲ್ಲಿ ಕೆ.ಎಲ್.ರಾಹುಲ್ಗೆ ಚಾನ್ಸ್ ಸಿಗುತ್ತಾ ಅಂದ್ರೆ ನಿಜಕ್ಕೂ ಇಲ್ಲ ಅಂತಾನೇ ಹೇಳಬೇಕು. ಆರಂಭಿಕನ ಸ್ಥಾನಕ್ಕಾಗಿ ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕ್ವಾಡ್ ಜೊತೆಗೆ ನ್ಯೂ ಸೆನ್ಸೇಷನ್ ಅಭಿಷೇಕ್ ಶರ್ಮಾ ಕಮಾಲ್ ಮಾಡ್ತಿದ್ದಾರೆ. ತಂಡದಲ್ಲಿರುವ ಇವರಲ್ಲೇ ಸ್ಥಾನಕ್ಕಾಗಿ ಕಿತ್ತಾಟ ನಡೀತಿದೆ. ಇದಿಷ್ಟೇ ಅಲ್ಲ, ತಂಡದ ಹೊರಗೂ ಸಾಲು ಸಾಲು ಆಟಗಾರರು ಇದ್ದಾರೆ.
ಕಾರಣ 4: ಕೀಪಿಂಗ್ ಕೋಟಾದಲ್ಲಿ ಚಾನ್ಸೇ ಇಲ್ಲ
ಆರಂಭಿಕನಾಗಿ ಅಲ್ಲ. ವಿಕೆಟ್ ಕೀಪಿಂಗ್ ಆ್ಯಂಡ್ ಮಿಡಲ್ ಆರ್ಡರ್ ಬ್ಯಾಟ್ಸ್ಮನ್ ಕೋಟಾದಲ್ಲಿ ಟಿ20 ಫಾರ್ಮೆಟ್ಗೆ ಎಂಟ್ರಿ ಕೊಡುವ ಚಾನ್ಸ್ ಕೂಡ ಕೆ.ಎಲ್.ರಾಹುಲ್ಗೆ ಇಲ್ಲ. ಫಸ್ಟ್ ಚಾಯ್ಸ್ ವಿಕೆಟ್ ಕೀಪರ್ ರಿಷಭ್ ಪಂತ್ಗೆ ಭವಿಷ್ಯದ ನಾಯಕನ ಪಟ್ಟ ಕಟ್ಟಲು ಬಿಸಿಸಿಐ ರೆಡಿಯಾಗಿದೆ. ಮತ್ತೊಂದೆಡೆ ಸಂಜು ಸ್ಯಾಮ್ಸನ್, ಧೃವ್ ಜುರೇಲ್, ಇಶಾನ್ ಕಿಶನ್ ಬ್ಯಾಕ್ ಅಪ್ ವಿಕೆಟ್ ಕೀಪರ್ಗಳಾಗಿದ್ದಾರೆ. ಜಿತೇಶ್ ಶರ್ಮಾ ಕೂಡ ಚಾನ್ಸ್ಗಾಗಿ ಬೆಂಚ್ ಕಾಯ್ತಿದ್ದಾರೆ. ಮಿಡಲ್ ಆರ್ಡರ್ನಲ್ಲಿ ಬಲ ತುಂಬಬಲ್ಲ ಇವರನ್ನ ಓವರ್ ಟೇಕ್ ಮಾಡೋದು ನಿಜಕ್ಕೂ ಕಷ್ಟದ ಕೆಲಸ.
ಇದನ್ನೂ ಓದಿ:ಮೌನಕ್ಕೆ ಜಾರಿತು ಅಕ್ಷರಗಳಿಗೂ ಭಾವ ತುಂಬುತ್ತಿದ್ದ ದನಿ.. ಅಪರ್ಣಾ ಅವರ 7 ಅಪೂರ್ವ ದಾಖಲೆಗಳು.. ಇಲ್ಲಿವೆ
ಕಾರಣ 5: ಅಗ್ರೆಸ್ಸೀವ್ ಆಟಕ್ಕೆ ಸೂಟ್ ಆಗ್ತಿಲ್ಲ ರಾಹುಲ್
ಕೆ.ಎಲ್.ರಾಹುಲ್ಗೆ ಮುಳ್ಳಾಗಿರುವುದೇ ಸ್ಲೋ ಬ್ಯಾಟಿಂಗ್. ಈ ಹಿಂದೆ ಆಕ್ರಮಣಕಾರಿ ಬ್ಯಾಟಿಂಗ್ ಮಾಡಲು ಸೈ ಅಂತಿದ್ದ ಕನ್ನಡಿಗ ರಾಹುಲ್, ಈಗ ಕಂಪ್ಲೀಟ್ ಬದಲಾಗಿದ್ದಾರೆ. ಸ್ಲೋ ಬ್ಯಾಟಿಂಗ್ನಿಂದಾಗಿಯೇ 2022ರ ಟಿ20 ವಿಶ್ವಕಪ್ ಬಳಿಕ ತಂಡದಿಂದ ಗೇಟ್ಪಾಸ್ ಪಡೆದ ರಾಹುಲ್, ಐಪಿಎಲ್ನಲ್ಲೂ ಏಕದಿನ ಶೈಲಿಯಲ್ಲೇ ಬ್ಯಾಟಿಂಗ್ ಮಾಡಿದೆಚ್ಚು. ಇದೇ ಕಾರಣಕ್ಕೆ ಟಿ20 ವಿಶ್ವಕಪ್ನಿಂದ ದೂರವಾದ ಕನ್ನಡಿಗ ರಾಹುಲ್, ಈಗ ಚುಟಕು ಮಾದರಿಯ ತಂಡಕ್ಕೆ ಕಮ್ಬ್ಯಾಕ್ ಮಾಡಬೇಕಾದ್ರೆ, ಪವಾಡವೇ ನಡೀಯಬೇಕಿದೆ.
ಇದನ್ನೂ ಓದಿ:ವೈದ್ಯರ ಗಡುವು ಮೀರಿ ಅಪರ್ಣಾ ಬದುಕಿದ್ದೇ ಚಮತ್ಕಾರ.. ಕೊನೆಗಾಲದಲ್ಲಿ ಪಟ್ಟ ಕಷ್ಟಗಳು ಅಷ್ಟಿಷ್ಟಲ್ಲ..
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್