KL ರಾಹುಲ್ ಮಾಡಿದ ದೊಡ್ಡ ತಪ್ಪು ಇದು; ಬೆಂಗಳೂರಿನ ಆಟಕ್ಕೆ ಬೆಲೆ ತೆತ್ತ ಸ್ಟಾರ್​​..!

author-image
Ganesh
Updated On
ಬಾಂಗ್ಲಾಗೆ ಎಚ್ಚರಿಕೆ ಕೊಟ್ಟ ಕನ್ನಡಿಗ KL ರಾಹುಲ್; ಟೀಂ ಇಂಡಿಯಾ ಗೆಲುವಿನ ಸೂತ್ರ ಹೇಗಿದೆ..?
Advertisment
  • ಕೆ.ಎಲ್.ರಾಹುಲ್ ಟೆಸ್ಟ್​ ಕ್ರಿಕೆಟ್ ಚಾಪ್ಟರ್ ಕ್ಲೋಸ್?
  • ಪುಣೆ ಟೆಸ್ಟ್​ ಪ್ಲೇಯಿಂಗ್-XIನಿಂದ ರಾಹುಲ್ ಡ್ರಾಪ್!
  • ಕನ್ನಡಿಗ ಡ್ರಾಪ್.. ಕರಿಯರ್​ ಕ್ಲೋಸ್​​​ ಸಂದೇಶನಾ..?

ಕೆ.ಎಲ್.ರಾಹುಲ್ ಟೀಮ್ ಇಂಡಿಯಾದ ಕ್ಲಾಸ್ ಬ್ಯಾಟ್ಸ್​ಮನ್. ತನ್ನ ಸಾಲಿಡ್​ ಆಟದಿಂದ ಮೋಡಿ ಮಾಡಿದ್ದ ಈ ಕ್ಲಾಸ್​ ಬ್ಯಾಟ್ಸ್​ಮನ್​​ ಕರಿಯರ್​ಗೆ ಬಹುತೇಕ ಎಂಡ್​ ಕಾರ್ಡ್ ಬಿದ್ದಂತಿದೆ. ಪುಣೆ ಮ್ಯಾಚ್​ನಲ್ಲಿ ಟೀಮ್​ ಮ್ಯಾನೇಜ್​ಮೆಂಟ್​​ ನೀಡಿರೋ ಸಂದೇಶ ಇಂಥದ್ದೊಂದು ಚರ್ಚೆಗೆ ನಾಂದಿ ಹಾಡಿದೆ.

ಕನ್ನಡಿಗ ಕೆ.ಎಲ್.ರಾಹುಲ್. ಪಕ್ಕಾ ಕ್ಲಾಸ್ ಬ್ಯಾಟ್ಸ್​ಮನ್. ಕಂಡೀಷನ್ಸ್​ ಯಾವುದೇ ಆಗಿರಲಿ, ಸರಾಗವಾಗಿ ರನ್ ಗಳಿಸುವ ಚಾಣಾಕ್ಷ ಅನ್ನೋದ್ರಲ್ಲಿ ಡೌಟೇ ಇಲ್ಲ. ಈತ ವಿದೇಶದಲ್ಲಿ ಸಿಡಿಸಿರುವ 7 ಶತಕಗಳೇ ಇದಕ್ಕೆ ಸಾಕ್ಷಿ. ಆದ್ರೀಗ ಇಂಥ ಕ್ಲಾಸ್ ಬ್ಯಾಟ್ಸ್​ಮನ್​​ನ ಕರಿಯರ್ ಬಹುತೇಕ ಅಂತ್ಯಕ್ಕೆ ಬಂದು ನಿಂತಿದೆ.

ಇದನ್ನೂ ಓದಿ:ಕೆಎಲ್ ರಾಹುಲ್​ ದಿಟ್ಟ ಹೋರಾಟ.. ತಂಡದ ಮರ್ಯಾದೆಗೆ ಕ್ರೀಸ್​ ಕಚ್ಚಿನಿಂತ ಕನ್ನಡಿಗ..!

ಬೆಂಗಳೂರಿನ ಟೆಸ್ಟ್​ನಲ್ಲಿ ವೈಫಲ್ಯ ಅನುಭವಿಸಿದ ಕೆ.ಎಲ್.ರಾಹುಲ್, ಪುಣೆ ಟೆಸ್ಟ್​ನಲ್ಲಿ ಬೆಂಚ್ ಕಾಯ್ತಿದ್ದಾರೆ. ಇದನ್ನು ಕೆ.ಎಲ್.ರಾಹುಲ್ ಟೆಸ್ಟ್​ ವೃತ್ತಿ ಜೀವನಕ್ಕೆ ಕೊನೆ ಮೊಳೆ ಅಂತಾನೇ ವಿಶ್ಲೇಷಿಸಲಾಗ್ತಿದೆ.

ಇನ್​​ ಕನ್ಸಿಸ್ಟೆಂಟ್​ ಬ್ಯಾಟಿಂಗ್
ಕೆ.ಎಲ್.ರಾಹುಲ್ ಬೆಸ್ಟ್​ ಬ್ಯಾಟರ್ ಅನ್ನೋದ್ರಲ್ಲಿ ನೋ ಡೌಟ್. ಈ ವಿಶ್ವದ ದರ್ಜೆಯ ಬ್ಯಾಟರ್​, ಇದುವರೆಗೆ ಟೆಸ್ಟ್ ಕ್ರಿಕೆಟ್​ನಲ್ಲಿ ಕನ್ಸಿಸ್ಟೆಂಟ್​ ಪರ್ಫಾಮೆನ್ಸ್​ ನೀಡಿದ್ದಿಲ್ಲ. ಇದೇ ಈಗ ರಾಹುಲ್​ಗೆ ಮುಗ್ಗಲ ಮುಳ್ಳಾಗಿದೆ.

ಟೀಮ್​ಗೆ ಅವಶ್ಯತೆ ಇದ್ದಾಗ ಆಡಲ್ಲ
ಒಂದ್ಕಡೆ ಕನ್ಸಿಸ್ಟೆನ್ಸಿ ಕಾಯ್ದುಕೊಳ್ಳದ ರಾಹುಲ್​​​​​​​​​, ಮತ್ತೊಂದೆಡೆ ಕ್ರೂಶಿಯಲ್ ಮ್ಯಾಚ್​ಗಳಲ್ಲೂ ತಂಡದ ಕೈಬಿಡ್ತಾರೆ. ಇದಕ್ಕೆ ಬೆಂಗಳೂರು ಟೆಸ್ಟ್​ನ 2ನೇ ಇನ್ನಿಂಗ್ಸ್​ ಬೆಸ್ಟ್​ ಎಕ್ಸಾಂಪಲ್​.

ಇದನ್ನೂ ಓದಿ:ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸೋಲಿಗೆ ಕಾರಣ ಯಾರು ಎಂದು ಹೇಳಿದ ರೋಹಿತ್ ಶರ್ಮಾ..!

ಸಿಕ್ಕ ಚಾನ್ಸ್​ನಲ್ಲಿ ಕಳಪೆ ಪ್ರದರ್ಶನ​
ಬಾಂಗ್ಲಾ ಸಿರೀಸ್​ನಲ್ಲಿ ಬಹುಪಾಲು ವೈಫಲ್ಯ ಅನುಭವಿಸಿದ್ದ ಕೆ.ಎಲ್.ರಾಹುಲ್​​​​​​​​​​​​​​​​​ಗೆ, ಬೆಂಗಳೂರು ಟೆಸ್ಟ್​ ಇಂಪಾರ್ಟೆಂಟ್ ಅನ್ನೋದು ಗೊತ್ತಿತ್ತು. ಸರ್ಫರಾಜ್ ಸಿಕ್ಕ ಅವಕಾಶಗಳನ್ನ ಬಾಚಿಕೊಳ್ತಿದ್ದಾರೆ. ಬೆಂಗಳೂರು ಟೆಸ್ಟ್ ಡು ಆರ್ ಡೈ ಆಗಿತ್ತು. ತವರಿನ ಪಿಚ್​ನಲ್ಲೇ ಸಿಕ್ಕ ಚಿನ್ನದಂತಹ ಅವಕಾಶ ಮಣ್ಣು ಪಾಲು ಮಾಡಿದರು.

ಕಾನ್ಫಿಡೆನ್ಸ್​ ಇಲ್ಲ.. ರಿಸ್ಕ್​​ಗೆ ಹಿಂದೇಟು
ಕೆ.ಎಲ್.ರಾಹುಲ್​ ಹಿನ್ನಡೆಗೆ ಕಾರಣವೇ ಅಳುಕು. ಪಾಸಿಟಿವ್ ಮೈಂಡ್​ಸೆಟ್​ನಲ್ಲಿ ಬ್ಯಾಟ್​ ಬೀಸದ ಕೆ.ಎಲ್.ರಾಹುಲ್, ರಿಸ್ಕ್​ ತೆಗೆದುಕೊಳ್ಳುವಲ್ಲಿ ಹಿಂದೇಟು ಹಾಕ್ತಾರೆ. ಹೀಗೆ ಹೇಳೋದಕ್ಕೆ ಬೆಂಗಳೂರು ಟೆಸ್ಟ್ ಮಾತ್ರ​ ಕಾರಣವಲ್ಲ. 2023ರ ಏಕದಿನ ವಿಶ್ವಕಪ್​ ಫೈನಲ್​ ಕೂಡ ಬೆಸ್ಟ್​ ಎಕ್ಸಾಂಪಲ್.

ಯಂಗ್​ಸ್ಟರ್ಸ್​ ಪೈಪೋಟಿ
ಸತತ ವೈಫಲ್ಯ ಅನುಭವಿಸ್ತಿರುವ ರಾಹುಲ್​​ಗೆ, ಯುವ ಆಟಗಾರರ ಪೈಪೋಟಿಯೂ ಇದೆ. ಈಗಾಗಲೇ ಸರ್ಫರಾಜ್ ಖಾನ್​, ರಾಹುಲ್ ಸ್ಥಾನವನ್ನು ಅರ್ದ ಕಬ್ಜಾ ಮಾಡಿದ್ದಾರೆ. ತಂಡದ ಹೊರಗೆ ಇಶಾನ್ ಕಿಶನ್, ಋತುರಾಜ್ ಗಾಯಕ್ವಾಡ್​, ಅಭಿಮನ್ಯು ಈಶ್ವರನ್​​​​ರಂಥ ಸಾಲು ಸಾಲು ಆಟಗಾರರ ದಂಡೇ ಇದೆ.

ಈ ಕಾರಣಗಳು ರಾಹುಲ್ ಟೆಸ್ಟ್​ ಕರಿಯರ್​​​​ ಖತಂ ಅನ್ನೋ ಸಂದೇಶವನ್ನೇ ನೀಡ್ತಿವೆ. ಅಷ್ಟೇ ಅಲ್ಲ. ಪ್ರತಿಷ್ಠಿತ ಆಸ್ಟ್ರೇಲಿಯಾ ಸರಣಿಗೂ ಆಯ್ಕೆ ಆಗಿದ್ದಾರೆ. ಆದರೆ ಬೌನ್ಸಿ ಟ್ರ್ಯಾಕ್​ನ ಸಕ್ಸಸ್ ಕೆ.ಎಲ್.ರಾಹುಲ್​​​​​​​​​​, ಆಸ್ಟ್ರೇಲಿಯಾಗೆ ತೆರಳುವಂತೆ ಮಾಡಿದೆ. ಆ ಸರಣಿಯಲ್ಲೂ ಕೆ.ಎಲ್.ರಾಹುಲ್ ಬೌನ್ಸ್​ ಬ್ಯಾಕ್ ಮಾಡದಿದ್ರೆ ತುಂಬಾ ಕಷ್ಟವಾಗಲಿದೆ.

ಇದನ್ನೂ ಓದಿ:IND vs NZ: ನ್ಯೂಜಿಲೆಂಡ್ ವಿರುದ್ಧ ರೋಹಿತ್ ಪಡೆಗೆ ಮತ್ತೆ ಹೀನಾಯ ಸೋಲು, ಟೀಂ ಇಂಡಿಯಾ ಎಡವಿದ್ದೆಲ್ಲಿ..?

ಒಟ್ಟಿನಲ್ಲಿ ಟಿ20 ಫಾರ್ಮೆಟ್​ನಿಂದ ದೂರ ಉಳಿದಿರುವ ರಾಹುಲ್, ಕಳೆದ ಲಂಕಾ ಟೂರ್​ನಲ್ಲಿ ಏಕದಿನ ತಂಡದಿಂದಲೂ ಡ್ರಾಪ್​ ಆಗಿದ್ದರು. ಟೆಸ್ಟ್​ ಕ್ರಿಕೆಟ್​ನಲ್ಲೂ ಬೆಂಚ್​ಗೆ ಸೀಮಿತವಾಗಿದ್ದಾರೆ. ಮುಂದೆ ರಾಹುಲ್​ ಎಚ್ಚೆತ್ತುಕೊಳ್ಳದಿದ್ರೆ ಕ್ರಿಕೆಟ್ ಕರಿಯರ್ ಕಂಪ್ಲೀಟ್ ಕ್ಲೋಸ್ ಆಗೋದ್ರಲ್ಲಿ ಅನುಮಾನವೇ ಇಲ್ಲ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment