16 ವರ್ಷದ ಬಾಲಕಿಯನ್ನು ಅತಿಯಾಗಿ ಲವ್ ಮಾಡುತ್ತಿದ್ದ 32 ವರ್ಷ ವ್ಯಕ್ತಿ
ಮೀನಾಳ ಎಸ್ಎಸ್ಎಲ್ಸಿ ಪರೀಕ್ಷೆಗೆ ತುಂಬಾ ಸಪೋರ್ಟ್ ಮಾಡುತ್ತಿದ್ದ!
ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸೂರ್ಲಬಿಯಲ್ಲಿ ನಡೆದ ಘಟನೆ
ಮಡಿಕೇರಿ: ನಿನ್ನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸೂರ್ಲಬಿ ಗ್ರಾಮದಲ್ಲಿ 10ನೇ ತರಗತಿಯ ಮೀನಾ ಎಂಬ ಅಪ್ರಾಪ್ತ ಬಾಲಕಿಯನ್ನು ಕೊಲೆ ಮಾಡಲಾಗಿದೆ. ಕಾನೂನು ವಿರೋಧಿಸಿ ನಿಶ್ಚಿತಾರ್ಥ ಮಾಡಲು ಮುಂದಾದ 34 ವರ್ಷದ ಪುರುಷ ಮೊಣ್ಣಂಡ ಪ್ರಕಾಶನೇ ಆಕೆಯ ರುಂಡ ಕತ್ತರಿಸಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ಇದನ್ನೂ ಓದಿ: VIDEO: ಅಪ್ರಾಪ್ತೆಯ ರುಂಡ ಕತ್ತರಿಸಿ ಬಂದ ಮಗ ಅಮ್ಮನ ಬಳಿ ಏನಂದ? ಕೃತ್ಯ ನೆನೆದು ಬಿಕ್ಕಿ ಬಿಕ್ಕಿ ಅತ್ತ ಆರೋಪಿಯ ತಂದೆ
ಹೌದು, ನಿನ್ನೆ ರಾಜ್ಯದಲ್ಲಿ SSLC ಫಲಿತಾಂಶ ಪ್ರಕಟವಾಗಿತ್ತು. ಮುಂಜಾನೆ ಪಾಸ್ ಆದ ಖುಷಿಯಲ್ಲಿದ್ದ ಬಾಲಕಿಗೆ ಸಂಜೆ ಹೊತ್ತಿಗೆ ಕೊಲೆಯಾಗಿ ಬಿದ್ದಿದ್ದಳು. ಈ ಸುದ್ದಿ ಕೇಳಿ ಇಡೀ ರಾಜ್ಯವೇ ಬೆಚ್ಚಿ ಬಿದ್ದಿದೆ. ಇದೀಗ ಇದೇ ವಿಚಾರದ ಬಗ್ಗೆ ಮೃತ ಬಾಲಕಿಯ ತಾಯಿ ಪ್ರತಿಕ್ರಿಯೇ ನೀಡಿದ್ದಾಳೆ. ಇನ್ನು, ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ನನಗೆ ಬಿಪಿ ಜಾಸ್ತಿ ಆಗಿತ್ತು ಅಂತ ಮಲಗಿಕೊಂಡಿದ್ದೆ. ಸ್ವಲ್ಪ ಸಮಯದ ನಂತರ ಜೋರಾಗಿ ಶಬ್ದ ಆಯ್ತು. ಕೂಡಲೇ ಆ ಜಾಗಕ್ಕೆ ಓಡಿ ಹೋದೆ. ಅಷ್ಟರಲ್ಲಿ ಪ್ರಕಾಶ ಕೋಣೆಯಲ್ಲಿ ನಿಂತಿದ್ದ. ಬಳಿಕ ನಾನು ಕೇಳಿದೆ ಏನ್ ಆಯ್ತು ಕೇಳಿದ್ದಕ್ಕೆ ಅವರು ಏನು ಹೇಳಿಲ್ಲ ಅಂತ ಹೇಳಿದ್ದಾರೆ.
ಹೀಗೆ ಮಾತನ್ನು ಮುಂದುವರೆಸಿದ ಅವರು ಪ್ರಕಾಶ ನಮ್ಮ ಜೊತೆಗೆ ಇರುತ್ತಿದ್ದ. ನಮ್ಮ ಹುಡುಗಿಯನ್ನು ಅತಿಯಾಗಿ ಪ್ರೀತಿಸುತ್ತಿದ್ದ. ಮೀನಾಳ ಎಸ್ಎಸ್ಎಲ್ಸಿ ಪರೀಕ್ಷೆಗೆ ತುಂಬಾ ಸಪೋರ್ಟ್ ಮಾಡುತ್ತಿದ್ದ. ನಮ್ಮ ಹುಡುಗಿ ಪರೀಕ್ಷೆಯಲ್ಲಿ ಪಾಸ್ ಆಗಬೇಕು ಅಂತ ಹೇಳುತ್ತಿದ್ದ. ಆಕೆಯ ಪರೀಕ್ಷೆಗೆ ತುಂಬಾ ಹಣವನ್ನು ಖರ್ಚು ಮಾಡುತ್ತಿದ್ದ. ಅವನು ನಮ್ಮ ಬಳಿ ಏನು ಹೇಳಿಕೊಂಡಿರಲಿಲ್ಲ. ನಮ್ಮ ಜೊತೆ ನಗು ನಗುತ್ತಾ ಇದ್ದ ಮನುಷ್ಯ ಹೀಗೆ ಏಕೆ ಮಾಡಿದ ಅಂತ ಗೊತ್ತಿಲ್ಲ ಅಂತ ಹೇಳಿಕೊಂಡಿದ್ದಾರೆ.
ಬಾಲಕಿ ಮೀನಾ ಇನ್ನೂ ಹತ್ತನೇ ಕ್ಲಾಸ್ ಓದುತ್ತಿದ್ದ ಅಪ್ರಾಪ್ತೆ ಆಗಿದ್ದಳು. ಆಕೆ ಎಸ್ಎಸ್ಎಲ್ಸಿ ಪರೀಕ್ಷೆ ಬರೆದು ಗುರುವಾರವಷ್ಟೇ ಫಲಿತಾಂಶ ಪ್ರಕಟಗೊಂಡಿತ್ತು. ಬಾಲಕಿ ಮೀನಾಳಿಗೆ 16 ವರ್ಷ. ಆರೋಪಿ ಪ್ರಕಾಶನಿಗೆ 32 ವರ್ಷ. ಪ್ರಕಾಶ ಮೀನಾಳನ್ನು ಹುಚ್ಚನಂತೆ ಪ್ರೀತಿ ಮಾಡುತ್ತಿದ್ದ. ಹೀಗಾಗಿ ಗುರು ಹಿರಿಯರ ಸಮ್ಮುಖದಲ್ಲಿ ನಿಶ್ಚಿತಾರ್ಥ ನಿಗದಿಯಾಗಿತ್ತು. ಅಪ್ರಾಪ್ತ ವಯಸ್ಸಿನವಳಾಗಿದ್ದ ಕಾರಣ ಮೀನಾ ಮದುವೆ ನಿಶ್ಚಿತಾರ್ಥವನ್ನು ರದ್ದು ಮಾಡಲಾಗಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
16 ವರ್ಷದ ಬಾಲಕಿಯನ್ನು ಅತಿಯಾಗಿ ಲವ್ ಮಾಡುತ್ತಿದ್ದ 32 ವರ್ಷ ವ್ಯಕ್ತಿ
ಮೀನಾಳ ಎಸ್ಎಸ್ಎಲ್ಸಿ ಪರೀಕ್ಷೆಗೆ ತುಂಬಾ ಸಪೋರ್ಟ್ ಮಾಡುತ್ತಿದ್ದ!
ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸೂರ್ಲಬಿಯಲ್ಲಿ ನಡೆದ ಘಟನೆ
ಮಡಿಕೇರಿ: ನಿನ್ನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸೂರ್ಲಬಿ ಗ್ರಾಮದಲ್ಲಿ 10ನೇ ತರಗತಿಯ ಮೀನಾ ಎಂಬ ಅಪ್ರಾಪ್ತ ಬಾಲಕಿಯನ್ನು ಕೊಲೆ ಮಾಡಲಾಗಿದೆ. ಕಾನೂನು ವಿರೋಧಿಸಿ ನಿಶ್ಚಿತಾರ್ಥ ಮಾಡಲು ಮುಂದಾದ 34 ವರ್ಷದ ಪುರುಷ ಮೊಣ್ಣಂಡ ಪ್ರಕಾಶನೇ ಆಕೆಯ ರುಂಡ ಕತ್ತರಿಸಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ಇದನ್ನೂ ಓದಿ: VIDEO: ಅಪ್ರಾಪ್ತೆಯ ರುಂಡ ಕತ್ತರಿಸಿ ಬಂದ ಮಗ ಅಮ್ಮನ ಬಳಿ ಏನಂದ? ಕೃತ್ಯ ನೆನೆದು ಬಿಕ್ಕಿ ಬಿಕ್ಕಿ ಅತ್ತ ಆರೋಪಿಯ ತಂದೆ
ಹೌದು, ನಿನ್ನೆ ರಾಜ್ಯದಲ್ಲಿ SSLC ಫಲಿತಾಂಶ ಪ್ರಕಟವಾಗಿತ್ತು. ಮುಂಜಾನೆ ಪಾಸ್ ಆದ ಖುಷಿಯಲ್ಲಿದ್ದ ಬಾಲಕಿಗೆ ಸಂಜೆ ಹೊತ್ತಿಗೆ ಕೊಲೆಯಾಗಿ ಬಿದ್ದಿದ್ದಳು. ಈ ಸುದ್ದಿ ಕೇಳಿ ಇಡೀ ರಾಜ್ಯವೇ ಬೆಚ್ಚಿ ಬಿದ್ದಿದೆ. ಇದೀಗ ಇದೇ ವಿಚಾರದ ಬಗ್ಗೆ ಮೃತ ಬಾಲಕಿಯ ತಾಯಿ ಪ್ರತಿಕ್ರಿಯೇ ನೀಡಿದ್ದಾಳೆ. ಇನ್ನು, ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ನನಗೆ ಬಿಪಿ ಜಾಸ್ತಿ ಆಗಿತ್ತು ಅಂತ ಮಲಗಿಕೊಂಡಿದ್ದೆ. ಸ್ವಲ್ಪ ಸಮಯದ ನಂತರ ಜೋರಾಗಿ ಶಬ್ದ ಆಯ್ತು. ಕೂಡಲೇ ಆ ಜಾಗಕ್ಕೆ ಓಡಿ ಹೋದೆ. ಅಷ್ಟರಲ್ಲಿ ಪ್ರಕಾಶ ಕೋಣೆಯಲ್ಲಿ ನಿಂತಿದ್ದ. ಬಳಿಕ ನಾನು ಕೇಳಿದೆ ಏನ್ ಆಯ್ತು ಕೇಳಿದ್ದಕ್ಕೆ ಅವರು ಏನು ಹೇಳಿಲ್ಲ ಅಂತ ಹೇಳಿದ್ದಾರೆ.
ಹೀಗೆ ಮಾತನ್ನು ಮುಂದುವರೆಸಿದ ಅವರು ಪ್ರಕಾಶ ನಮ್ಮ ಜೊತೆಗೆ ಇರುತ್ತಿದ್ದ. ನಮ್ಮ ಹುಡುಗಿಯನ್ನು ಅತಿಯಾಗಿ ಪ್ರೀತಿಸುತ್ತಿದ್ದ. ಮೀನಾಳ ಎಸ್ಎಸ್ಎಲ್ಸಿ ಪರೀಕ್ಷೆಗೆ ತುಂಬಾ ಸಪೋರ್ಟ್ ಮಾಡುತ್ತಿದ್ದ. ನಮ್ಮ ಹುಡುಗಿ ಪರೀಕ್ಷೆಯಲ್ಲಿ ಪಾಸ್ ಆಗಬೇಕು ಅಂತ ಹೇಳುತ್ತಿದ್ದ. ಆಕೆಯ ಪರೀಕ್ಷೆಗೆ ತುಂಬಾ ಹಣವನ್ನು ಖರ್ಚು ಮಾಡುತ್ತಿದ್ದ. ಅವನು ನಮ್ಮ ಬಳಿ ಏನು ಹೇಳಿಕೊಂಡಿರಲಿಲ್ಲ. ನಮ್ಮ ಜೊತೆ ನಗು ನಗುತ್ತಾ ಇದ್ದ ಮನುಷ್ಯ ಹೀಗೆ ಏಕೆ ಮಾಡಿದ ಅಂತ ಗೊತ್ತಿಲ್ಲ ಅಂತ ಹೇಳಿಕೊಂಡಿದ್ದಾರೆ.
ಬಾಲಕಿ ಮೀನಾ ಇನ್ನೂ ಹತ್ತನೇ ಕ್ಲಾಸ್ ಓದುತ್ತಿದ್ದ ಅಪ್ರಾಪ್ತೆ ಆಗಿದ್ದಳು. ಆಕೆ ಎಸ್ಎಸ್ಎಲ್ಸಿ ಪರೀಕ್ಷೆ ಬರೆದು ಗುರುವಾರವಷ್ಟೇ ಫಲಿತಾಂಶ ಪ್ರಕಟಗೊಂಡಿತ್ತು. ಬಾಲಕಿ ಮೀನಾಳಿಗೆ 16 ವರ್ಷ. ಆರೋಪಿ ಪ್ರಕಾಶನಿಗೆ 32 ವರ್ಷ. ಪ್ರಕಾಶ ಮೀನಾಳನ್ನು ಹುಚ್ಚನಂತೆ ಪ್ರೀತಿ ಮಾಡುತ್ತಿದ್ದ. ಹೀಗಾಗಿ ಗುರು ಹಿರಿಯರ ಸಮ್ಮುಖದಲ್ಲಿ ನಿಶ್ಚಿತಾರ್ಥ ನಿಗದಿಯಾಗಿತ್ತು. ಅಪ್ರಾಪ್ತ ವಯಸ್ಸಿನವಳಾಗಿದ್ದ ಕಾರಣ ಮೀನಾ ಮದುವೆ ನಿಶ್ಚಿತಾರ್ಥವನ್ನು ರದ್ದು ಮಾಡಲಾಗಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ