newsfirstkannada.com

VIDEO: ಅಪ್ರಾಪ್ತೆಯ ರುಂಡ ಕತ್ತರಿಸಿ ಬಂದ ಮಗ ಅಮ್ಮನ ಬಳಿ ಏನಂದ? ಕೃತ್ಯ ನೆನೆದು ಬಿಕ್ಕಿ ಬಿಕ್ಕಿ ಅತ್ತ ಆರೋಪಿಯ ತಂದೆ

Share :

Published May 10, 2024 at 3:07pm

Update May 10, 2024 at 3:11pm

    10ನೇ ತರಗತಿ ಬಾಲಕಿಯ ರುಂಡ ಕತ್ತರಿಸಿ ಕೊಲೆ

    ಅಪ್ರಾಪ್ತ ಬಾಲಕಿಯನ್ನು ನಿಶ್ಚಿತಾರ್ಥ ಮಾಡಿಕೊಂಡು ಕೊಲೆಗೈದ

    ಮನೆಯಿಂದ ಕೋವಿ ಹಿಡಿದು ಹೊದವನಿಗಾಗಿ ಪೊಲೀಸರ ಹುಡುಕಾಟ

32 ವರ್ಷ ವಯಸ್ಸಿನ ಪುರುಷನೋರ್ವ ಅಪ್ರಾಪ್ತ ಬಾಲಕಿಯನ್ನು ನಿಶ್ಚಿತಾರ್ಥ ಮಾಡಿಕೊಂಡು, ಕೊನೆಗೆ ರುಂಡ ಕತ್ತರಿಸಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ಸೋಮವಾರಪೇಟೆ ತಾಲೂಕಿನ ಸೂರ್ಲಬಿ ಗ್ರಾಮದಲ್ಲಿ ನಡೆದಿದೆ. 10ನೇ ತರಗತಿ ಮೀನಾ ಎಂಬಾಕೆಯನ್ನು ಹಮ್ಮಿಯಾಲ ಗ್ರಾಮದ ಮೊಣ್ಣಂಡ ಪ್ರಕಾಶ್ ಎಂಬಾತ ಕೊಲೆ ಮಾಡಿದ್ದಾನೆ. ಇದೀಗ ಈ ಕೊಲೆ ಸಂಬಂಧಿಸಿ ಆರೋಪಿಯ ತಂದೆ ಎಂ ಕೆ ಪಟ್ಟು ನ್ಯೂಸ್​ಫಸ್ಟ್ ಜೊತೆಗೆ ಮಾತನಾಡಿದ್ದಾರೆ.

‘ನನಗೆ ಎರಡು ಗಂಡು ಮೂರು ಹೆಣ್ಣು ಮಕ್ಕಳು. ನಿಶ್ಚಿತಾರ್ಥ ಮಾಡಿಕೊಂಡು ಹುಡುಗಿ ಮನೆಯಿಂದ ಬಂದೆವು. ಬಂದ ಬಳಿಕ ಮತ್ತೆ ವಾಪಸ್ಸು ಹುಡುಗ ಹುಡುಗಿ ಮನೆಗೆ ಹೋಗಿದ್ದಾನೆ. ನಾನು ಗೃಹ ಪ್ರವೇಶಕ್ಕೆ ಹೋಗಿದ್ದೆ. ಮನೆಯಲ್ಲಿ ಹೆಂಡತಿ ಮಾತ್ರ ಇದ್ದಳು. ಕೊಲೆ ಮಾಡಿದ ಬಂದ ಬಳಿಕ ತಾಯಿ ಬಳಿ ಚೆನ್ನಾಗಿ ಇರು ನೀನು ಎಂದು ಆತ ಹೇಳಿದ್ದಾನೆ. ನಾನು ಹೋಗ್ತೀನಿ ಎಂದು ಮನೆ ಬಿಟ್ಟು ಹೋಗಿದ್ದಾನೆ. ಕೋವಿ ತೆಗೆದುಕೊಂಡು ಹೋಗಿದ್ದಾನೆ’ ಎಂದು ಆರೋಪಿಯ ತಂದೆ ಹೇಳಿದ್ದಾರೆ.

ಏನಿದು ಘಟನೆ?

ನಿನ್ನೆ ಎಸ್​ಎಸ್ಎಲ್​ಸಿ ಫಲಿತಾಂಶ ಹೊರ ಬಿದ್ದಿದೆ. ಮಧ್ಯಾಹ್ನದ ವೇಳೆಗೆ ಅಮ್ಮಾ ನಾನು 10ನೇ ತರಗತಿ ಪಾಸ್ ಆದೆ ಎಂದು ಪೋಷಕರ ಬಳಿ ಹೇಳಿಕೊಂಡಿದ್ದ ಬಾಲಕಿ ಸಂಜೆ ಹೊತ್ತಿಗೆ ಕೊಲೆಯಾಗಿದ್ದಾಳೆ. ಆರೋಪಿ ಮೊಣ್ಣಂಡ ಪ್ರಕಾಶ್ ಬಾಲಕಿ ರುಂಡ ಒಂದು ಕಡೆ. ಮುಂಡ ಒಂದು ಕಡೆ.ಬಿಸಾಡಿ ಹೋಗಿದ್ದಾನೆ. ಸದ್ಯ ಆತ ತಲೆಮರೆಸಿಕೊಂಡಿದ್ದು, ಪೊಲೀಸರು ಆತನನ್ನು ಹುಡುಕಾಡುತ್ತಿದ್ದಾರೆ.

ಇದನ್ನೂ ಓದಿ: ಬಾಲಕಿಗೆ ಚಾಕಲೇಟ್​ ಕೊಡಿಸ್ತಿದ್ದ, ಪ್ರಶ್ನಿಸಿದ್ರೆ ಅವಾಜ್​ ಹಾಕ್ತಿದ್ದ; ಕೊಲೆಗಾರನ ಬಗ್ಗೆ ಸ್ಥಳೀಯರು ಬಿಚ್ಚಿಟ್ರು ಅಚ್ಚರಿಯ ಮಾಹಿತಿ

ಅಸಲಿಗೆ ನಡೆದಿದ್ದೇನು?

ಮೀನಾ ಮತ್ತು ಮೊಣ್ಣಂಡ ಪ್ರಕಾಶ್ ಇಬ್ಬರು ಲವ್​ ಮಾಡುತ್ತಿದ್ದರು. ಮನೆಯವರ ಬಳಿ ಒತ್ತಾಯ ಮಾಡಿಕೊಂಡು ನಿನ್ನೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ಸಂಜೆ ವೇಳೆ ಮೊಣ್ಣಂಡ ಪ್ರಕಾಶ್ ಬಾಲಕಿಯ ಮನೆಗೆ ಬಂದು ಆಕೆಯ ತಂದೆ-ತಾಯಿ ಮೇಲೆ ಹಲ್ಲೆ ಮಾಡಿದ್ದಾನೆ. ಕೊನೆಗೆ ಆಕೆಯ ಕುತ್ತಿಗೆ ಕತ್ತರಿಸಿ ಎಸ್ಕೇಪ್​ ಆಗಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಅಪ್ರಾಪ್ತೆಯ ರುಂಡ ಕತ್ತರಿಸಿ ಬಂದ ಮಗ ಅಮ್ಮನ ಬಳಿ ಏನಂದ? ಕೃತ್ಯ ನೆನೆದು ಬಿಕ್ಕಿ ಬಿಕ್ಕಿ ಅತ್ತ ಆರೋಪಿಯ ತಂದೆ

https://newsfirstlive.com/wp-content/uploads/2024/05/Kodagu-murder-5.jpg

    10ನೇ ತರಗತಿ ಬಾಲಕಿಯ ರುಂಡ ಕತ್ತರಿಸಿ ಕೊಲೆ

    ಅಪ್ರಾಪ್ತ ಬಾಲಕಿಯನ್ನು ನಿಶ್ಚಿತಾರ್ಥ ಮಾಡಿಕೊಂಡು ಕೊಲೆಗೈದ

    ಮನೆಯಿಂದ ಕೋವಿ ಹಿಡಿದು ಹೊದವನಿಗಾಗಿ ಪೊಲೀಸರ ಹುಡುಕಾಟ

32 ವರ್ಷ ವಯಸ್ಸಿನ ಪುರುಷನೋರ್ವ ಅಪ್ರಾಪ್ತ ಬಾಲಕಿಯನ್ನು ನಿಶ್ಚಿತಾರ್ಥ ಮಾಡಿಕೊಂಡು, ಕೊನೆಗೆ ರುಂಡ ಕತ್ತರಿಸಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ಸೋಮವಾರಪೇಟೆ ತಾಲೂಕಿನ ಸೂರ್ಲಬಿ ಗ್ರಾಮದಲ್ಲಿ ನಡೆದಿದೆ. 10ನೇ ತರಗತಿ ಮೀನಾ ಎಂಬಾಕೆಯನ್ನು ಹಮ್ಮಿಯಾಲ ಗ್ರಾಮದ ಮೊಣ್ಣಂಡ ಪ್ರಕಾಶ್ ಎಂಬಾತ ಕೊಲೆ ಮಾಡಿದ್ದಾನೆ. ಇದೀಗ ಈ ಕೊಲೆ ಸಂಬಂಧಿಸಿ ಆರೋಪಿಯ ತಂದೆ ಎಂ ಕೆ ಪಟ್ಟು ನ್ಯೂಸ್​ಫಸ್ಟ್ ಜೊತೆಗೆ ಮಾತನಾಡಿದ್ದಾರೆ.

‘ನನಗೆ ಎರಡು ಗಂಡು ಮೂರು ಹೆಣ್ಣು ಮಕ್ಕಳು. ನಿಶ್ಚಿತಾರ್ಥ ಮಾಡಿಕೊಂಡು ಹುಡುಗಿ ಮನೆಯಿಂದ ಬಂದೆವು. ಬಂದ ಬಳಿಕ ಮತ್ತೆ ವಾಪಸ್ಸು ಹುಡುಗ ಹುಡುಗಿ ಮನೆಗೆ ಹೋಗಿದ್ದಾನೆ. ನಾನು ಗೃಹ ಪ್ರವೇಶಕ್ಕೆ ಹೋಗಿದ್ದೆ. ಮನೆಯಲ್ಲಿ ಹೆಂಡತಿ ಮಾತ್ರ ಇದ್ದಳು. ಕೊಲೆ ಮಾಡಿದ ಬಂದ ಬಳಿಕ ತಾಯಿ ಬಳಿ ಚೆನ್ನಾಗಿ ಇರು ನೀನು ಎಂದು ಆತ ಹೇಳಿದ್ದಾನೆ. ನಾನು ಹೋಗ್ತೀನಿ ಎಂದು ಮನೆ ಬಿಟ್ಟು ಹೋಗಿದ್ದಾನೆ. ಕೋವಿ ತೆಗೆದುಕೊಂಡು ಹೋಗಿದ್ದಾನೆ’ ಎಂದು ಆರೋಪಿಯ ತಂದೆ ಹೇಳಿದ್ದಾರೆ.

ಏನಿದು ಘಟನೆ?

ನಿನ್ನೆ ಎಸ್​ಎಸ್ಎಲ್​ಸಿ ಫಲಿತಾಂಶ ಹೊರ ಬಿದ್ದಿದೆ. ಮಧ್ಯಾಹ್ನದ ವೇಳೆಗೆ ಅಮ್ಮಾ ನಾನು 10ನೇ ತರಗತಿ ಪಾಸ್ ಆದೆ ಎಂದು ಪೋಷಕರ ಬಳಿ ಹೇಳಿಕೊಂಡಿದ್ದ ಬಾಲಕಿ ಸಂಜೆ ಹೊತ್ತಿಗೆ ಕೊಲೆಯಾಗಿದ್ದಾಳೆ. ಆರೋಪಿ ಮೊಣ್ಣಂಡ ಪ್ರಕಾಶ್ ಬಾಲಕಿ ರುಂಡ ಒಂದು ಕಡೆ. ಮುಂಡ ಒಂದು ಕಡೆ.ಬಿಸಾಡಿ ಹೋಗಿದ್ದಾನೆ. ಸದ್ಯ ಆತ ತಲೆಮರೆಸಿಕೊಂಡಿದ್ದು, ಪೊಲೀಸರು ಆತನನ್ನು ಹುಡುಕಾಡುತ್ತಿದ್ದಾರೆ.

ಇದನ್ನೂ ಓದಿ: ಬಾಲಕಿಗೆ ಚಾಕಲೇಟ್​ ಕೊಡಿಸ್ತಿದ್ದ, ಪ್ರಶ್ನಿಸಿದ್ರೆ ಅವಾಜ್​ ಹಾಕ್ತಿದ್ದ; ಕೊಲೆಗಾರನ ಬಗ್ಗೆ ಸ್ಥಳೀಯರು ಬಿಚ್ಚಿಟ್ರು ಅಚ್ಚರಿಯ ಮಾಹಿತಿ

ಅಸಲಿಗೆ ನಡೆದಿದ್ದೇನು?

ಮೀನಾ ಮತ್ತು ಮೊಣ್ಣಂಡ ಪ್ರಕಾಶ್ ಇಬ್ಬರು ಲವ್​ ಮಾಡುತ್ತಿದ್ದರು. ಮನೆಯವರ ಬಳಿ ಒತ್ತಾಯ ಮಾಡಿಕೊಂಡು ನಿನ್ನೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ಸಂಜೆ ವೇಳೆ ಮೊಣ್ಣಂಡ ಪ್ರಕಾಶ್ ಬಾಲಕಿಯ ಮನೆಗೆ ಬಂದು ಆಕೆಯ ತಂದೆ-ತಾಯಿ ಮೇಲೆ ಹಲ್ಲೆ ಮಾಡಿದ್ದಾನೆ. ಕೊನೆಗೆ ಆಕೆಯ ಕುತ್ತಿಗೆ ಕತ್ತರಿಸಿ ಎಸ್ಕೇಪ್​ ಆಗಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More