newsfirstkannada.com

ಕೊಡಗು: ನಮ್ಮನ್ನು ಕ್ರಿಕೆಟ್​ ಆಡಲು ಕಳುಹಿಸಿ ತಂಗಿಯ ರುಂಡ ಕಡಿದ.. ಘಟನೆ ಬಗ್ಗೆ ವಿವರಿಸಿದ ಅಪ್ರಾಪ್ತೆಯ ಸಹೋದರ

Share :

Published May 10, 2024 at 1:18pm

    ಅಪ್ಪನಿಗೆ ಹೊಡೆದ, ಅಮ್ಮನ ಕೈಗೆ ಕಡಿದ, ತಂಗಿಯ ರುಂಡ ಕತ್ತರಿಸಿದ

    ನನ್ನ ಮನೆಗೆ ಬನ್ನಿ ಎಂದು ಒತ್ತಾಯಿಸಿ ನಮ್ಮನ್ನು ಕರೆದುಕೊಂಡು ಹೋದ

    ತಂಗಿಯನ್ನು ಕಳೆದುಕೊಂಡ ಅಣ್ಣ ಘಟನೆ ಬಗ್ಗೆ ಏನೆಂದ ಗೊತ್ತಾ?

ಕೊಡಗು: ಸ್ವಂತ ತಂಗಿ ಮೀನಾಳನ್ನು ಕಳೆದುಕೊಂಡ ಸಹೋದರ ಮೊನ್ನಪ್ಪ ನ್ಯೂಸ್​ಫಸ್ಟ್​ ಜೊತೆಗೆ ಮಾತನಾಡಿದ್ದಾರೆ. ಕೊಲೆಗಾರ ಪ್ರಕಾಶ ನಮ್ಮನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಬಳಿಕ ನನ್ನ ತಂಗಿಯ ಬಳಿ ಬಂದು ಆಕೆಯ ರುಂಡವನ್ನು ಕಡಿದಿದ್ದಾನೆ ಎಂದು ಹೇಳಿದ್ದಾರೆ.

ಕ್ರಿಕೆಟ್​ ಆಡಲು ಕಳುಹಿಸಿದ್ದನು

ನಿಶ್ಚಿತಾರ್ಥ ಆದ ಬಳಿಕ ಪ್ರಕಾಶ ಆತನ ಮನೆಗೆ ನನ್ನ ಮತ್ತು ತಮ್ಮನನ್ನು ಕರೆದುಕೊಂಡು ಹೋದನು. ಬಳಿಕ ನಮ್ಮನ್ನ ಕ್ರಿಕೆಟ್​ ಆಡಲು ಕಳುಹಿಸಿ ನಾನು ಮಲಗುತ್ತೇನೆ ಹೇಳಿದ್ದಾನೆ. ನಾವು ಕ್ರಿಕೆಟ್​ ಆಡಿ ಬರುವಾಗ ಪ್ರಕಾಶ ನಮ್ಮ ಮನೆಗೆ ಹೋಗಿದ್ದಾನೆ ಎಂದು ತಿಳಿಯಿತು. ಅಷ್ಟರಲ್ಲಿ ಬೇರೊಬ್ಬರು ಅಲ್ಲಿಗೆ ಬಂದು ಪ್ರಕಾಶ ಹುಡುಗಿ ಮನೆಯವರೊಂದಿಗೆ ಗಲಾಟೆ ಮಾಡುತ್ತಿದ್ದಾನೆ ಎಂದು ಹೇಳಿದ್ದಾರೆ. ಬಳಿಕ ಮನೆಗೆ ಬಂದಾಗ ತಂಗಿಯ ಕೊಲೆಯಾಗಿದೆ.

ಮನೆಗೆ ಬಂದ ಆತ ತಂದೆಗೆ ಹೊಡೆದು, ತಾಯಿಯ ಕೈಗೆ ಕಡಿದು ತಂಗಿಯನ್ನು ಕೊಲೆ ಮಾಡಿದ್ದಾನೆ. ಮನೆಯ ಹೊರಗಡೆ ನೂರು ಮೀಟರ್​ ದೂರದಲ್ಲಿ ಮರ್ಡರ್​ ಮಾಡಿದ್ದಾನೆ. ನನಗೆ 7 ಗಂಟೆಗೆ ಈ ವಿಚಾರ ಗೊತ್ತಾಯ್ತು.

ಇಬ್ಬರು ಪ್ರೀತಿ ಮಾಡ್ತಾ ಇದ್ರು

ಇಬ್ಬರು ನಾಲ್ಕೈದು ತಿಂಗಳಿಂದ ಪ್ರೀತಿ ಮಾಡ್ತಾ ಇದ್ರು. ಪ್ರಕಾಶನ ಒತ್ತಾಡಕ್ಕಾಗಿ ನಿಶ್ಚಿತಾರ್ಥ ಮಾಡಲು ಮನೆಯಲ್ಲಿ ಒಪ್ಪಿಕೊಂಡಿದ್ದರು. ಇಲ್ಲ ಅಂದ್ರೆ ಗುಂಡು ಹೊಡೆಯುತ್ತೇನೆ. ಸಾಯಿಸುತ್ತೇನೆಂದು ಬೆದರಿಕೆ ಹಾಕುತ್ತಿದ್ದನು. ನನ್ನ ತಂಗಿಗೆ ಇಷ್ಟವಿರಲಿಲ್ಲ ಆತನಿಗೋಷ್ಟಕರ ಒಪ್ಪಿಕೊಂಡಿದ್ದಳು.

ಏನಿದು ಘಟನೆ?

ನಿನ್ನೆ ಎಸ್​ಎಸ್ಎಲ್​ಸಿ ಫಲಿತಾಂಶ ಹೊರ ಬಿದ್ದಿದೆ. ಮಧ್ಯಾಹ್ನದ ವೇಳಗೆ ಅಮ್ಮಾ ನಾನು 10ನೇ ತರಗತಿ ಪಾಸ್ ಆದೆ ಅಂತ ಮನೆಗೆ ಬಂದು ಪೋಷಕರ ಬಳಿ ಹೇಳಿಕೊಂಡಿದ್ದ ಬಾಲಕಿ ಸಂಜೆ ಹೊತ್ತಿಗೆ ಕೊಲೆಯಾಗಿದ್ದಾಳೆ. ರುಂಡ ಒಂದು ಕಡೆ. ಮುಂಡ ಒಂದು ಕಡೆ. ಬಿಸಾಡಿ ಹೋಗಿದ್ದ ದುಷ್ಕರ್ಮಿ ವಿದ್ಯಾರ್ಥಿನಿಯನ್ನ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಇಂಥಹ ಭೀಕರ ಘಟನೆಗೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸೂರ್ಲಬಿ ಗ್ರಾಮದಲ್ಲಿ ನಡೆದಿದೆ.

ಇದನ್ನೂ ಓದಿ:ಮೊದಲಿಗೆ ಎಣ್ಣೆ ಪಾರ್ಟಿ, ಆಮೇಲೆ ಜಗಳ, ನಂತರ ಕೊಲೆ.. ಚಿಕ್ಕಪ್ಪನನ್ನೇ ಬರ್ಬರವಾಗಿ ಕೊಂದ ಮಗ 

ಅಸಲಿಗೆ ನಡೆದಿದ್ದೇನು?

ಎಸ್‌ಎಸ್‌ಎಲ್‌ಸಿ ಪಾಸಾದ ಖುಷಿಯಲ್ಲಿದ್ದ ವಿದ್ಯಾರ್ಥಿನಿ ಮೀನಾಳನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸೂರ್ಲಬಿ ಗ್ರಾಮದಲ್ಲಿ ನಡೆದಿದೆ. ಅಪ್ರಾಪ್ತ ಬಾಲಕಿ ಮೀನಾಗೆ ವಿವಾಹ ಮಾಡುವುದಕ್ಕೆ ಪೋಷಕರು ಮುಂದಾಗಿದ್ದು, ನಿನ್ನೆ ನಿಶ್ಚಿತಾರ್ಥ ನಿಶ್ಚಯ ಮಾಡಿದ್ದರು. ಅಪ್ರಾಪ್ತ ಬಾಲಕಿಯನ್ನ ವಿವಾಹ ಮಾಡುವ ಬಗ್ಗೆ ಗ್ರಾಮಸ್ಥರ ಗಮನಕ್ಕೆ ಬಂದಿದ್ದು, ಈ ಹಿನ್ನೆಲೆ 34 ವರ್ಷದ ಹಮ್ಮಿಯಾಲ ಗ್ರಾಮದ ಮೊಣ್ಣಂಡ ಪ್ರಕಾಶ್ ಎಂಬಾತನೊಂದಿಗೆ ಎಂಗೇಜ್ಮೆಂಟ್ ಮಾಡುವ ವೇಳೆ ಸೋಮವಾರಪೇಟೆ ಪೊಲೀಸರು ತಡೆಯೊಡ್ಡಿ ಕ್ಯಾನ್ಸಲ್​ ಮಾಡಿಸಿದ್ದರು.

ಬಾಲ್ಯವಿವಾಹ ಅಪರಾಧ ಈ ಹಿನ್ನೆಲೆ ಬಾಲಕಿ ವಯಸ್ಕಳಾಗುವವರೆಗೆ ಮದುವೆ ಮಾಡುವಂತಿಲ್ಲ, ವೇಟ್ ಮಾಡಿ ಎಂದು ನಿಶ್ಚಿತಾರ್ಥ ನಿಲ್ಲಿಸಿದ್ದರು. ಆದರೆ ಅಷ್ಟರಲ್ಲಿ ಸಂಜೆ ವೇಳೆಗೆ ಬಂದ ನಿಶ್ಚಿತಾರ್ಥ ಮಾಡಿಕೊಳ್ಳಬೇಕಿದ್ದ ಮೊಣ್ಣಂಡ ಪ್ರಕಾಶ್ ಬಾಲಕಿ ಮನೆಯವರ ಜೊತೆ ಜಗಳ ಮಾಡಿದ್ದಾನೆ. ಹುಡುಗಿಯ ತಂದೆ ಮೇಲೆ ಹಲ್ಲೆ ಮಾಡಿ, ತಾಯಿಗೆ ಕತ್ತಿಯಿಂದ ಕಡಿದಿದ್ದಾನೆ. ಬಳಿಕ ಆಕೆಯನ್ನ ಮನೆಯಿಂದ 100 ಮೀಟರ್​ ದೂರಕ್ಕೆ ಕರೆದೊಯ್ದು ತಲೆ ಕಡಿದಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊಡಗು: ನಮ್ಮನ್ನು ಕ್ರಿಕೆಟ್​ ಆಡಲು ಕಳುಹಿಸಿ ತಂಗಿಯ ರುಂಡ ಕಡಿದ.. ಘಟನೆ ಬಗ್ಗೆ ವಿವರಿಸಿದ ಅಪ್ರಾಪ್ತೆಯ ಸಹೋದರ

https://newsfirstlive.com/wp-content/uploads/2024/05/Kodagu-murder-3.jpg

    ಅಪ್ಪನಿಗೆ ಹೊಡೆದ, ಅಮ್ಮನ ಕೈಗೆ ಕಡಿದ, ತಂಗಿಯ ರುಂಡ ಕತ್ತರಿಸಿದ

    ನನ್ನ ಮನೆಗೆ ಬನ್ನಿ ಎಂದು ಒತ್ತಾಯಿಸಿ ನಮ್ಮನ್ನು ಕರೆದುಕೊಂಡು ಹೋದ

    ತಂಗಿಯನ್ನು ಕಳೆದುಕೊಂಡ ಅಣ್ಣ ಘಟನೆ ಬಗ್ಗೆ ಏನೆಂದ ಗೊತ್ತಾ?

ಕೊಡಗು: ಸ್ವಂತ ತಂಗಿ ಮೀನಾಳನ್ನು ಕಳೆದುಕೊಂಡ ಸಹೋದರ ಮೊನ್ನಪ್ಪ ನ್ಯೂಸ್​ಫಸ್ಟ್​ ಜೊತೆಗೆ ಮಾತನಾಡಿದ್ದಾರೆ. ಕೊಲೆಗಾರ ಪ್ರಕಾಶ ನಮ್ಮನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಬಳಿಕ ನನ್ನ ತಂಗಿಯ ಬಳಿ ಬಂದು ಆಕೆಯ ರುಂಡವನ್ನು ಕಡಿದಿದ್ದಾನೆ ಎಂದು ಹೇಳಿದ್ದಾರೆ.

ಕ್ರಿಕೆಟ್​ ಆಡಲು ಕಳುಹಿಸಿದ್ದನು

ನಿಶ್ಚಿತಾರ್ಥ ಆದ ಬಳಿಕ ಪ್ರಕಾಶ ಆತನ ಮನೆಗೆ ನನ್ನ ಮತ್ತು ತಮ್ಮನನ್ನು ಕರೆದುಕೊಂಡು ಹೋದನು. ಬಳಿಕ ನಮ್ಮನ್ನ ಕ್ರಿಕೆಟ್​ ಆಡಲು ಕಳುಹಿಸಿ ನಾನು ಮಲಗುತ್ತೇನೆ ಹೇಳಿದ್ದಾನೆ. ನಾವು ಕ್ರಿಕೆಟ್​ ಆಡಿ ಬರುವಾಗ ಪ್ರಕಾಶ ನಮ್ಮ ಮನೆಗೆ ಹೋಗಿದ್ದಾನೆ ಎಂದು ತಿಳಿಯಿತು. ಅಷ್ಟರಲ್ಲಿ ಬೇರೊಬ್ಬರು ಅಲ್ಲಿಗೆ ಬಂದು ಪ್ರಕಾಶ ಹುಡುಗಿ ಮನೆಯವರೊಂದಿಗೆ ಗಲಾಟೆ ಮಾಡುತ್ತಿದ್ದಾನೆ ಎಂದು ಹೇಳಿದ್ದಾರೆ. ಬಳಿಕ ಮನೆಗೆ ಬಂದಾಗ ತಂಗಿಯ ಕೊಲೆಯಾಗಿದೆ.

ಮನೆಗೆ ಬಂದ ಆತ ತಂದೆಗೆ ಹೊಡೆದು, ತಾಯಿಯ ಕೈಗೆ ಕಡಿದು ತಂಗಿಯನ್ನು ಕೊಲೆ ಮಾಡಿದ್ದಾನೆ. ಮನೆಯ ಹೊರಗಡೆ ನೂರು ಮೀಟರ್​ ದೂರದಲ್ಲಿ ಮರ್ಡರ್​ ಮಾಡಿದ್ದಾನೆ. ನನಗೆ 7 ಗಂಟೆಗೆ ಈ ವಿಚಾರ ಗೊತ್ತಾಯ್ತು.

ಇಬ್ಬರು ಪ್ರೀತಿ ಮಾಡ್ತಾ ಇದ್ರು

ಇಬ್ಬರು ನಾಲ್ಕೈದು ತಿಂಗಳಿಂದ ಪ್ರೀತಿ ಮಾಡ್ತಾ ಇದ್ರು. ಪ್ರಕಾಶನ ಒತ್ತಾಡಕ್ಕಾಗಿ ನಿಶ್ಚಿತಾರ್ಥ ಮಾಡಲು ಮನೆಯಲ್ಲಿ ಒಪ್ಪಿಕೊಂಡಿದ್ದರು. ಇಲ್ಲ ಅಂದ್ರೆ ಗುಂಡು ಹೊಡೆಯುತ್ತೇನೆ. ಸಾಯಿಸುತ್ತೇನೆಂದು ಬೆದರಿಕೆ ಹಾಕುತ್ತಿದ್ದನು. ನನ್ನ ತಂಗಿಗೆ ಇಷ್ಟವಿರಲಿಲ್ಲ ಆತನಿಗೋಷ್ಟಕರ ಒಪ್ಪಿಕೊಂಡಿದ್ದಳು.

ಏನಿದು ಘಟನೆ?

ನಿನ್ನೆ ಎಸ್​ಎಸ್ಎಲ್​ಸಿ ಫಲಿತಾಂಶ ಹೊರ ಬಿದ್ದಿದೆ. ಮಧ್ಯಾಹ್ನದ ವೇಳಗೆ ಅಮ್ಮಾ ನಾನು 10ನೇ ತರಗತಿ ಪಾಸ್ ಆದೆ ಅಂತ ಮನೆಗೆ ಬಂದು ಪೋಷಕರ ಬಳಿ ಹೇಳಿಕೊಂಡಿದ್ದ ಬಾಲಕಿ ಸಂಜೆ ಹೊತ್ತಿಗೆ ಕೊಲೆಯಾಗಿದ್ದಾಳೆ. ರುಂಡ ಒಂದು ಕಡೆ. ಮುಂಡ ಒಂದು ಕಡೆ. ಬಿಸಾಡಿ ಹೋಗಿದ್ದ ದುಷ್ಕರ್ಮಿ ವಿದ್ಯಾರ್ಥಿನಿಯನ್ನ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಇಂಥಹ ಭೀಕರ ಘಟನೆಗೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸೂರ್ಲಬಿ ಗ್ರಾಮದಲ್ಲಿ ನಡೆದಿದೆ.

ಇದನ್ನೂ ಓದಿ:ಮೊದಲಿಗೆ ಎಣ್ಣೆ ಪಾರ್ಟಿ, ಆಮೇಲೆ ಜಗಳ, ನಂತರ ಕೊಲೆ.. ಚಿಕ್ಕಪ್ಪನನ್ನೇ ಬರ್ಬರವಾಗಿ ಕೊಂದ ಮಗ 

ಅಸಲಿಗೆ ನಡೆದಿದ್ದೇನು?

ಎಸ್‌ಎಸ್‌ಎಲ್‌ಸಿ ಪಾಸಾದ ಖುಷಿಯಲ್ಲಿದ್ದ ವಿದ್ಯಾರ್ಥಿನಿ ಮೀನಾಳನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸೂರ್ಲಬಿ ಗ್ರಾಮದಲ್ಲಿ ನಡೆದಿದೆ. ಅಪ್ರಾಪ್ತ ಬಾಲಕಿ ಮೀನಾಗೆ ವಿವಾಹ ಮಾಡುವುದಕ್ಕೆ ಪೋಷಕರು ಮುಂದಾಗಿದ್ದು, ನಿನ್ನೆ ನಿಶ್ಚಿತಾರ್ಥ ನಿಶ್ಚಯ ಮಾಡಿದ್ದರು. ಅಪ್ರಾಪ್ತ ಬಾಲಕಿಯನ್ನ ವಿವಾಹ ಮಾಡುವ ಬಗ್ಗೆ ಗ್ರಾಮಸ್ಥರ ಗಮನಕ್ಕೆ ಬಂದಿದ್ದು, ಈ ಹಿನ್ನೆಲೆ 34 ವರ್ಷದ ಹಮ್ಮಿಯಾಲ ಗ್ರಾಮದ ಮೊಣ್ಣಂಡ ಪ್ರಕಾಶ್ ಎಂಬಾತನೊಂದಿಗೆ ಎಂಗೇಜ್ಮೆಂಟ್ ಮಾಡುವ ವೇಳೆ ಸೋಮವಾರಪೇಟೆ ಪೊಲೀಸರು ತಡೆಯೊಡ್ಡಿ ಕ್ಯಾನ್ಸಲ್​ ಮಾಡಿಸಿದ್ದರು.

ಬಾಲ್ಯವಿವಾಹ ಅಪರಾಧ ಈ ಹಿನ್ನೆಲೆ ಬಾಲಕಿ ವಯಸ್ಕಳಾಗುವವರೆಗೆ ಮದುವೆ ಮಾಡುವಂತಿಲ್ಲ, ವೇಟ್ ಮಾಡಿ ಎಂದು ನಿಶ್ಚಿತಾರ್ಥ ನಿಲ್ಲಿಸಿದ್ದರು. ಆದರೆ ಅಷ್ಟರಲ್ಲಿ ಸಂಜೆ ವೇಳೆಗೆ ಬಂದ ನಿಶ್ಚಿತಾರ್ಥ ಮಾಡಿಕೊಳ್ಳಬೇಕಿದ್ದ ಮೊಣ್ಣಂಡ ಪ್ರಕಾಶ್ ಬಾಲಕಿ ಮನೆಯವರ ಜೊತೆ ಜಗಳ ಮಾಡಿದ್ದಾನೆ. ಹುಡುಗಿಯ ತಂದೆ ಮೇಲೆ ಹಲ್ಲೆ ಮಾಡಿ, ತಾಯಿಗೆ ಕತ್ತಿಯಿಂದ ಕಡಿದಿದ್ದಾನೆ. ಬಳಿಕ ಆಕೆಯನ್ನ ಮನೆಯಿಂದ 100 ಮೀಟರ್​ ದೂರಕ್ಕೆ ಕರೆದೊಯ್ದು ತಲೆ ಕಡಿದಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More