newsfirstkannada.com

ಕೊಡಗು: SSLC ಹುಡುಗಿಯ ತಲೆ ಕಡಿದ ಪ್ರಕರಣ.. ರುಂಡಕ್ಕಾಗಿ ಶ್ವಾನದಳದಿಂದ ಹುಡುಕಾಟ

Share :

Published May 10, 2024 at 12:43pm

    ಬೆಚ್ಚಿ ಬಿದ್ದ ಕೊಡಗು.. 10ನೇ ತರಗತಿ ಹುಡುಗಿಯ ರುಂಡ ಕಡಿದ ದುಷ್ಕರ್ಮಿ

    ಆಕೆಗೂ ಆತನನಿಗೂ ಏನು ಸಂಬಂಧ? ಕೊಲೆ ನಡೆಯಲು ನೈಜ್ಯ ಕಾರಣವೇನು?

    ಅಪ್ಪ- ಅಮ್ಮನ ಎದುರೇ ಮಗಳನ್ನು ಕರೆದೊಯ್ದು ಕೊಲೆ ಮಾಡಿದ ಕೊಲೆಗಾರ

ಕೊಡಗು: ಅಪ್ರಾಪ್ತ ಬಾಲಕಿಯ ಹತ್ಯೆ ಪ್ರಕರಣ ಸಂಬಂಧಿಸಿ ಕೊಡಗು ಬೆಚ್ಚಿ ಬಿದ್ದಿದೆ. ಆರೋಪಿ ಹಮ್ಮಿಯಾಲ ಗ್ರಾಮದ ಮೊಣ್ಣಂಡ ಪ್ರಕಾಶ್ ಎಂಬಾತ 10ನೇ ತರಗತಿಯ ಬಾಲಕಿಯ ರುಂಡ ಕತ್ತರಿಸಿ ಕೊಲೆ ಮಾಡಿದ್ದಾನೆ. ಸದ್ಯ ಹತ್ಯೆ ನಡೆದಿರುವ ಸ್ಥಳಕ್ಕೆ ಕೊಡಗು ಎಎಸ್ಪಿ ಮತ್ತು ತಂಡ ಆಗಮಿಸಿದ್ದು, ರುಂಡವನ್ನು ಹುಡುಕಾಡುತ್ತಿದ್ದಾರೆ

ಎಸ್​ಎಸ್​ಎಲ್​ಸಿ ಫಲಿತಾಂಶದ ಖುಷಿಯಲ್ಲಿದ್ದ ಮೀನಾಳ ಕೊಲೆ ನಡೆದಿದೆ. ತಂದೆ-ತಾಯಿಯ ಎದುರೇ ಆಕೆಯನ್ನು ಎಳೆದೊಯ್ದು ಬರ್ಬರವಾಗಿ ಪ್ರಕಾಶ್​ ಕೊಲೆ ಮಾಡಿದ್ದಾನೆ. ಸದ್ಯ ಎಎಸ್ಪಿ ಸುಂದರ್ ರಾಜ್ ಮತ್ತು ತಂಡದಿಂದ ಕೊಲೆಯಾದ ಮೀನಾಳ ರುಂಡವನ್ನು ಹುಡುಕಾಡುತ್ತಿದ್ದಾರೆ. ಸ್ಥಳಕ್ಕೆ ಕೊಡಗು ಶ್ವಾನ ದಳವೂ ಭೇಟಿ ನೀಡಿದೆ. ಊರಿನ ದಾರಿಯಲ್ಲೇ ಅಪ್ರಾಪ್ತ ಬಾಲಕಿಯ ಹತ್ಯೆ ಮಾಡಲಾಗಿದೆ.

ಹತ್ಯೆ ಮಾಡಿರುವ ಸ್ಥಳದಲ್ಲೆಲ್ಲಾ ಸಂಪೂರ್ಣ ರಕ್ತ ಸಿಕ್ತವಾಗಿದೆ. ಪಾಪಿ ಪ್ರಕಾಶ್ ನಿನ್ನೆ ಸಂಜೆ ಬಾಲಕಿಯ ಹತ್ಯೆ ಮಾಡಿ ಬಳಿಕ ತಲೆ ಕತ್ತರಿಸಿಕೊಂಡು ಹೋಗಿದ್ದಾನೆ.

ಏನಿದು ಘಟನೆ?

ನಿನ್ನೆ ಎಸ್​ಎಸ್ಎಲ್​ಸಿ ಫಲಿತಾಂಶ ಹೊರ ಬಿದ್ದಿದೆ. ಮಧ್ಯಾಹ್ನದ ವೇಳಗೆ ಅಮ್ಮಾ ನಾನು 10ನೇ ತರಗತಿ ಪಾಸ್ ಆದೆ ಅಂತ ಮನೆಗೆ ಬಂದು ಪೋಷಕರ ಬಳಿ ಹೇಳಿಕೊಂಡಿದ್ದ ಬಾಲಕಿ ಸಂಜೆ ಹೊತ್ತಿಗೆ ಕೊಲೆಯಾಗಿದ್ದಾಳೆ. ರುಂಡ ಒಂದು ಕಡೆ. ಮುಂಡ ಒಂದು ಕಡೆ. ಬಿಸಾಡಿ ಹೋಗಿದ್ದ ದುಷ್ಕರ್ಮಿ ವಿದ್ಯಾರ್ಥಿನಿಯನ್ನ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಇಂಥಹ ಭೀಕರ ಘಟನೆಗೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸೂರ್ಲಬಿ ಗ್ರಾಮದಲ್ಲಿ ನಡೆದಿದೆ. ಅಷ್ಟಕ್ಕೂ ಕೊಲೆಗೆ ಕಾರಣವೇನು ಗೊತ್ತಾ?.

ಇದನ್ನೂ ಓದಿ:ಮೊದಲಿಗೆ ಎಣ್ಣೆ ಪಾರ್ಟಿ, ಆಮೇಲೆ ಜಗಳ, ನಂತರ ಕೊಲೆ.. ಚಿಕ್ಕಪ್ಪನನ್ನೇ ಬರ್ಬರವಾಗಿ ಕೊಂದ ಮಗ 

ಅಸಲಿಗೆ ನಡೆದಿದ್ದೇನು?

ಎಸ್‌ಎಸ್‌ಎಲ್‌ಸಿ ಪಾಸಾದ ಖುಷಿಯಲ್ಲಿದ್ದ ವಿದ್ಯಾರ್ಥಿನಿಯನ್ನ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸೂರ್ಲಬಿ ಗ್ರಾಮದಲ್ಲಿ ನಡೆದಿದೆ. ಅಪ್ರಾಪ್ತ ಬಾಲಕಿ ಮೀನಾಗೆ ವಿವಾಹ ಮಾಡುವುದಕ್ಕೆ ಪೋಷಕರು ಮುಂದಾಗಿದ್ದು, ನಿನ್ನೆ ನಿಶ್ಚಿತಾರ್ಥ ನಿಶ್ಚಯ ಮಾಡಿದ್ದರು. ಅಪ್ರಾಪ್ತ ಬಾಲಕಿಯನ್ನ ವಿವಾಹ ಮಾಡುವ ಬಗ್ಗೆ ಗ್ರಾಮಸ್ಥರ ಗಮನಕ್ಕೆ ಬಂದಿದ್ದು, ಈ ಹಿನ್ನೆಲೆ 34 ವರ್ಷದ ಹಮ್ಮಿಯಾಲ ಗ್ರಾಮದ ಮೊಣ್ಣಂಡ ಪ್ರಕಾಶ್ ಎಂಬಾತನೊಂದಿಗೆ ಎಂಗೇಜ್ಮೆಂಟ್ ಮಾಡುವ ವೇಳೆ ಸೋಮವಾರಪೇಟೆ ಪೊಲೀಸರು ತಡೆಯೊಡ್ಡಿ ಕ್ಯಾನ್ಸಲ್​ ಮಾಡಿಸಿದ್ದರು.

ಇದನ್ನೂ ಓದಿ: SSLC ಪಾಸ್​ ಆದ ವಿದ್ಯಾರ್ಥಿನಿಯ ತಲೆ ಕಡಿದ ದುಷ್ಕರ್ಮಿ.. ಕೊಲೆಗಾರ ಬೇರೆ ಯಾರೂ ಅಲ್ಲ.. ಈತನೇ

ಕೊಲೆಗಾರ ಯಾರು?

ಬಾಲ್ಯವಿವಾಹ ಅಪರಾಧ ಈ ಹಿನ್ನೆಲೆ ಬಾಲಕಿ ವಯಸ್ಕಳಾಗುವವರೆಗೆ ಮದುವೆ ಮಾಡುವಂತಿಲ್ಲ, ವೇಟ್ ಮಾಡಿ ಎಂದು ನಿಶ್ಚಿತಾರ್ಥ ನಿಲ್ಲಿಸಿದ್ದರು. ಆದರೆ ಅಷ್ಟರಲ್ಲಿ ಸಂಜೆ ವೇಳೆಗೆ ಬಂದ ನಿಶ್ಚಿತಾರ್ಥ ಮಾಡಿಕೊಳ್ಳಬೇಕಿದ್ದ ಮೊಣ್ಣಂಡ ಪ್ರಕಾಶ್ ಬಾಲಕಿ ಮನೆಯವರ ಜೊತೆ ಜಗಳ ಮಾಡಿದ್ದಾನೆ. ಬಳಿಕ ಆಕೆಯನ್ನ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾನೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊಡಗು: SSLC ಹುಡುಗಿಯ ತಲೆ ಕಡಿದ ಪ್ರಕರಣ.. ರುಂಡಕ್ಕಾಗಿ ಶ್ವಾನದಳದಿಂದ ಹುಡುಕಾಟ

https://newsfirstlive.com/wp-content/uploads/2024/05/Kodagu-murder-1.jpg

    ಬೆಚ್ಚಿ ಬಿದ್ದ ಕೊಡಗು.. 10ನೇ ತರಗತಿ ಹುಡುಗಿಯ ರುಂಡ ಕಡಿದ ದುಷ್ಕರ್ಮಿ

    ಆಕೆಗೂ ಆತನನಿಗೂ ಏನು ಸಂಬಂಧ? ಕೊಲೆ ನಡೆಯಲು ನೈಜ್ಯ ಕಾರಣವೇನು?

    ಅಪ್ಪ- ಅಮ್ಮನ ಎದುರೇ ಮಗಳನ್ನು ಕರೆದೊಯ್ದು ಕೊಲೆ ಮಾಡಿದ ಕೊಲೆಗಾರ

ಕೊಡಗು: ಅಪ್ರಾಪ್ತ ಬಾಲಕಿಯ ಹತ್ಯೆ ಪ್ರಕರಣ ಸಂಬಂಧಿಸಿ ಕೊಡಗು ಬೆಚ್ಚಿ ಬಿದ್ದಿದೆ. ಆರೋಪಿ ಹಮ್ಮಿಯಾಲ ಗ್ರಾಮದ ಮೊಣ್ಣಂಡ ಪ್ರಕಾಶ್ ಎಂಬಾತ 10ನೇ ತರಗತಿಯ ಬಾಲಕಿಯ ರುಂಡ ಕತ್ತರಿಸಿ ಕೊಲೆ ಮಾಡಿದ್ದಾನೆ. ಸದ್ಯ ಹತ್ಯೆ ನಡೆದಿರುವ ಸ್ಥಳಕ್ಕೆ ಕೊಡಗು ಎಎಸ್ಪಿ ಮತ್ತು ತಂಡ ಆಗಮಿಸಿದ್ದು, ರುಂಡವನ್ನು ಹುಡುಕಾಡುತ್ತಿದ್ದಾರೆ

ಎಸ್​ಎಸ್​ಎಲ್​ಸಿ ಫಲಿತಾಂಶದ ಖುಷಿಯಲ್ಲಿದ್ದ ಮೀನಾಳ ಕೊಲೆ ನಡೆದಿದೆ. ತಂದೆ-ತಾಯಿಯ ಎದುರೇ ಆಕೆಯನ್ನು ಎಳೆದೊಯ್ದು ಬರ್ಬರವಾಗಿ ಪ್ರಕಾಶ್​ ಕೊಲೆ ಮಾಡಿದ್ದಾನೆ. ಸದ್ಯ ಎಎಸ್ಪಿ ಸುಂದರ್ ರಾಜ್ ಮತ್ತು ತಂಡದಿಂದ ಕೊಲೆಯಾದ ಮೀನಾಳ ರುಂಡವನ್ನು ಹುಡುಕಾಡುತ್ತಿದ್ದಾರೆ. ಸ್ಥಳಕ್ಕೆ ಕೊಡಗು ಶ್ವಾನ ದಳವೂ ಭೇಟಿ ನೀಡಿದೆ. ಊರಿನ ದಾರಿಯಲ್ಲೇ ಅಪ್ರಾಪ್ತ ಬಾಲಕಿಯ ಹತ್ಯೆ ಮಾಡಲಾಗಿದೆ.

ಹತ್ಯೆ ಮಾಡಿರುವ ಸ್ಥಳದಲ್ಲೆಲ್ಲಾ ಸಂಪೂರ್ಣ ರಕ್ತ ಸಿಕ್ತವಾಗಿದೆ. ಪಾಪಿ ಪ್ರಕಾಶ್ ನಿನ್ನೆ ಸಂಜೆ ಬಾಲಕಿಯ ಹತ್ಯೆ ಮಾಡಿ ಬಳಿಕ ತಲೆ ಕತ್ತರಿಸಿಕೊಂಡು ಹೋಗಿದ್ದಾನೆ.

ಏನಿದು ಘಟನೆ?

ನಿನ್ನೆ ಎಸ್​ಎಸ್ಎಲ್​ಸಿ ಫಲಿತಾಂಶ ಹೊರ ಬಿದ್ದಿದೆ. ಮಧ್ಯಾಹ್ನದ ವೇಳಗೆ ಅಮ್ಮಾ ನಾನು 10ನೇ ತರಗತಿ ಪಾಸ್ ಆದೆ ಅಂತ ಮನೆಗೆ ಬಂದು ಪೋಷಕರ ಬಳಿ ಹೇಳಿಕೊಂಡಿದ್ದ ಬಾಲಕಿ ಸಂಜೆ ಹೊತ್ತಿಗೆ ಕೊಲೆಯಾಗಿದ್ದಾಳೆ. ರುಂಡ ಒಂದು ಕಡೆ. ಮುಂಡ ಒಂದು ಕಡೆ. ಬಿಸಾಡಿ ಹೋಗಿದ್ದ ದುಷ್ಕರ್ಮಿ ವಿದ್ಯಾರ್ಥಿನಿಯನ್ನ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಇಂಥಹ ಭೀಕರ ಘಟನೆಗೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸೂರ್ಲಬಿ ಗ್ರಾಮದಲ್ಲಿ ನಡೆದಿದೆ. ಅಷ್ಟಕ್ಕೂ ಕೊಲೆಗೆ ಕಾರಣವೇನು ಗೊತ್ತಾ?.

ಇದನ್ನೂ ಓದಿ:ಮೊದಲಿಗೆ ಎಣ್ಣೆ ಪಾರ್ಟಿ, ಆಮೇಲೆ ಜಗಳ, ನಂತರ ಕೊಲೆ.. ಚಿಕ್ಕಪ್ಪನನ್ನೇ ಬರ್ಬರವಾಗಿ ಕೊಂದ ಮಗ 

ಅಸಲಿಗೆ ನಡೆದಿದ್ದೇನು?

ಎಸ್‌ಎಸ್‌ಎಲ್‌ಸಿ ಪಾಸಾದ ಖುಷಿಯಲ್ಲಿದ್ದ ವಿದ್ಯಾರ್ಥಿನಿಯನ್ನ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸೂರ್ಲಬಿ ಗ್ರಾಮದಲ್ಲಿ ನಡೆದಿದೆ. ಅಪ್ರಾಪ್ತ ಬಾಲಕಿ ಮೀನಾಗೆ ವಿವಾಹ ಮಾಡುವುದಕ್ಕೆ ಪೋಷಕರು ಮುಂದಾಗಿದ್ದು, ನಿನ್ನೆ ನಿಶ್ಚಿತಾರ್ಥ ನಿಶ್ಚಯ ಮಾಡಿದ್ದರು. ಅಪ್ರಾಪ್ತ ಬಾಲಕಿಯನ್ನ ವಿವಾಹ ಮಾಡುವ ಬಗ್ಗೆ ಗ್ರಾಮಸ್ಥರ ಗಮನಕ್ಕೆ ಬಂದಿದ್ದು, ಈ ಹಿನ್ನೆಲೆ 34 ವರ್ಷದ ಹಮ್ಮಿಯಾಲ ಗ್ರಾಮದ ಮೊಣ್ಣಂಡ ಪ್ರಕಾಶ್ ಎಂಬಾತನೊಂದಿಗೆ ಎಂಗೇಜ್ಮೆಂಟ್ ಮಾಡುವ ವೇಳೆ ಸೋಮವಾರಪೇಟೆ ಪೊಲೀಸರು ತಡೆಯೊಡ್ಡಿ ಕ್ಯಾನ್ಸಲ್​ ಮಾಡಿಸಿದ್ದರು.

ಇದನ್ನೂ ಓದಿ: SSLC ಪಾಸ್​ ಆದ ವಿದ್ಯಾರ್ಥಿನಿಯ ತಲೆ ಕಡಿದ ದುಷ್ಕರ್ಮಿ.. ಕೊಲೆಗಾರ ಬೇರೆ ಯಾರೂ ಅಲ್ಲ.. ಈತನೇ

ಕೊಲೆಗಾರ ಯಾರು?

ಬಾಲ್ಯವಿವಾಹ ಅಪರಾಧ ಈ ಹಿನ್ನೆಲೆ ಬಾಲಕಿ ವಯಸ್ಕಳಾಗುವವರೆಗೆ ಮದುವೆ ಮಾಡುವಂತಿಲ್ಲ, ವೇಟ್ ಮಾಡಿ ಎಂದು ನಿಶ್ಚಿತಾರ್ಥ ನಿಲ್ಲಿಸಿದ್ದರು. ಆದರೆ ಅಷ್ಟರಲ್ಲಿ ಸಂಜೆ ವೇಳೆಗೆ ಬಂದ ನಿಶ್ಚಿತಾರ್ಥ ಮಾಡಿಕೊಳ್ಳಬೇಕಿದ್ದ ಮೊಣ್ಣಂಡ ಪ್ರಕಾಶ್ ಬಾಲಕಿ ಮನೆಯವರ ಜೊತೆ ಜಗಳ ಮಾಡಿದ್ದಾನೆ. ಬಳಿಕ ಆಕೆಯನ್ನ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾನೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More