newsfirstkannada.com

ರೋಹಿತ್​​​ ಕುತಂತ್ರಕ್ಕೆ ಕೊಹ್ಲಿ​​ ಬಲಿ? ವಿರಾಟ್​​ ಕ್ಯಾಪ್ಟನ್ಸಿ ಬಲವಂತವಾಗಿ ಕಿತ್ತುಕೊಂಡ್ರಾ ಶರ್ಮಾ?

Share :

Published March 28, 2024 at 8:46pm

    ರೋಹಿತ್​ ಶರ್ಮಾ ವಿರುದ್ಧ ಆಕ್ರೋಶ ಹೊರಹಾಕಿದ್ದ ಕೊಹ್ಲಿ ಫ್ಯಾನ್ಸ್​​

    ಕೊಹ್ಲಿ ಕ್ಯಾಪ್ಟನ್ಸಿಯನ್ನು ಬಲವಂತವಾಗಿ ಕಿತ್ತುಕೊಂಡಿದ್ರಾ ರೋಹಿತ್​?

    ಅಂದು ಮಾಡಿದ ಕರ್ಮಕ್ಕೆ ರೋಹಿತ್​ ಐಪಿಎಲ್​​ ಕ್ಯಾಪ್ಟನ್ಸಿ ಹೋಯ್ತಾ?

2021ರಲ್ಲಿ ಟೀಮ್​ ಇಂಡಿಯಾದ ನಾಯಕತ್ವದಿಂದ ವಿರಾಟ್ ಕೊಹ್ಲಿ ಕೆಳಗಿಳಿದಿದ್ದರು. ಇಂದಿಗೂ ವಿರಾಟ್​​ ಕೊಹ್ಲಿಯನ್ನು ಉದ್ದೇಶ ಪೂರ್ವಕವಾಗಿಯೇ ನಾಯಕತ್ವದಿಂದ ಕೆಳಗಿಳಿಸಲಾಗಿದೆ ಅನ್ನೋ ವಿವಾದ ಮುನ್ನಲೆಗೆ ಬರುತ್ತಲೇ ಇದೆ. ಇದಕ್ಕೆ ಕಾರಣ ಅಂದಿನ ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಮತ್ತು ರೋಹಿತ್​ ಶರ್ಮಾ ಅನ್ನೋ ಮಾತುಗಳು ಕೇಳಿ ಬಂದಿವೆ.

ಇಷ್ಟೇ ಅಲ್ಲ, ಗಂಗೂಲಿ ಕುತಂತ್ರದಿಂದ ಕೊಹ್ಲಿ ಬಲವಂತವಾಗಿ ನಾಯಕತ್ವದಿಂದ ತೆಗೆದು ಹಾಕಲಾಯ್ತು. ರೋಹಿತ್​ಗಾಗಿ ಗಂಗೂಲಿ ಈ ನಿರ್ಧಾರ ಕೈಗೊಂಡರೂ ಎಂಬ ವಿಚಾರ ಪದೇ ಪದೇ ಚರ್ಚೆಗೆ ಬರುತ್ತಿದೆ. ಈ ಬಗ್ಗೆ ಸೌರವ್ ಗಂಗೂಲಿ ಎಷ್ಟು ಬಾರಿ ಸ್ಪಷ್ಟನೆ ನೀಡಿದ್ರೂ ವಿವಾದ ಶಮನವಾಗಿಲ್ಲ. ಬದಲಿಗೆ ಕೊಹ್ಲಿ ಫ್ಯಾನ್ಸ್​​ ರೋಹಿತ್ ಶರ್ಮಾ ಮತ್ತು ಗಂಗೂಲಿ ಅವರನ್ನು ಟಾರ್ಗೆಟ್​​ ಮಾಡಲಾಗುತ್ತಿದೆ.

ಇತ್ತೀಚೆಗೆ ರೋಹಿತ್​ ಶರ್ಮಾ ಅವರನ್ನು ಕೆಳಗಿಳಿಸಿ ಹಾರ್ದಿಕ್​ ಪಾಂಡ್ಯಗೆ ಮುಂಬೈ ಇಂಡಿಯನ್ಸ್​ ಕ್ಯಾಪ್ಟನ್ಸಿ ಪಟ್ಟ ಕಟ್ಟಲಾಗಿದೆ. ಇದಕ್ಕೆ ಹಾರ್ದಿಕ್​ ವಿರುದ್ಧ ರೋಹಿತ್​ ಫ್ಯಾನ್ಸ್​ ಆಕ್ರೋಶ ಹೊರಹಾಕಿದ್ದಾರೆ. ಈಗ ಇದಕ್ಕೆ ಕೊಹ್ಲಿ ಫ್ಯಾನ್ಸ್​ ಎಂಟ್ರಿ ನೀಡಿದ್ದು, ವಿರಾಟ್​ಗೆ ಟಿ20 ತಂಡದ ನಾಯಕತ್ವ ಬಿಟ್ಟುಕೊಡಲು ಇಷ್ಟವಿರಲಿಲ್ಲ. ಆದರೆ ಅವರಿಂದ ಟಿ20 ನಾಯಕತ್ವವನ್ನು ಕಸಿದುಕೊಳ್ಳಲಾಯಿತು. ಈ ಬೇಸರದಿಂದಲೇ ಕೊಹ್ಲಿ ಟೆಸ್ಟ್ ಮಾದರಿ ನಾಯಕತ್ವವನ್ನೂ ತ್ಯಜಿಸಿದರು ಎಂದಿದ್ದಾರೆ. ಅದರಲ್ಲೂ ರೋಹಿತ್​ ಮೂರು ಫಾರ್ಮೇಟ್​ಗೂ ನಾನೇ ಕ್ಯಾಪ್ಟನ್​ ಆಗಿರಬೇಕು ಎಂದು ಪಟ್ಟು ಹಿಡಿದಿದ್ದರು. ಅಂದು ಕೊಹ್ಲಿಗೆ ರೋಹಿತ್​ ಮೋಸ ಮಾಡಿದ್ರು. ಈಗ ರೋಹಿತ್​ಗೆ ಹಾರ್ದಿಕ್​ ಮಾಡಿದ್ದಾರೆ ಎಂದು ಟ್ರೋಲ್​ ಮಾಡಲಾಗುತ್ತಿದೆ.

ಇದನ್ನೂ ಓದಿ: ‘ನಾಚಿಕೆ ಆಗಬೇಕು ನಿನಗೆ..’- ಹಾರ್ದಿಕ್​​ ವಿರುದ್ಧ ಮುಂಬೈ ಅಭಿಮಾನಿಗಳು ಆಕ್ರೋಶ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೋಹಿತ್​​​ ಕುತಂತ್ರಕ್ಕೆ ಕೊಹ್ಲಿ​​ ಬಲಿ? ವಿರಾಟ್​​ ಕ್ಯಾಪ್ಟನ್ಸಿ ಬಲವಂತವಾಗಿ ಕಿತ್ತುಕೊಂಡ್ರಾ ಶರ್ಮಾ?

https://newsfirstlive.com/wp-content/uploads/2024/03/Rohit_Kohli-IPL1.jpg

    ರೋಹಿತ್​ ಶರ್ಮಾ ವಿರುದ್ಧ ಆಕ್ರೋಶ ಹೊರಹಾಕಿದ್ದ ಕೊಹ್ಲಿ ಫ್ಯಾನ್ಸ್​​

    ಕೊಹ್ಲಿ ಕ್ಯಾಪ್ಟನ್ಸಿಯನ್ನು ಬಲವಂತವಾಗಿ ಕಿತ್ತುಕೊಂಡಿದ್ರಾ ರೋಹಿತ್​?

    ಅಂದು ಮಾಡಿದ ಕರ್ಮಕ್ಕೆ ರೋಹಿತ್​ ಐಪಿಎಲ್​​ ಕ್ಯಾಪ್ಟನ್ಸಿ ಹೋಯ್ತಾ?

2021ರಲ್ಲಿ ಟೀಮ್​ ಇಂಡಿಯಾದ ನಾಯಕತ್ವದಿಂದ ವಿರಾಟ್ ಕೊಹ್ಲಿ ಕೆಳಗಿಳಿದಿದ್ದರು. ಇಂದಿಗೂ ವಿರಾಟ್​​ ಕೊಹ್ಲಿಯನ್ನು ಉದ್ದೇಶ ಪೂರ್ವಕವಾಗಿಯೇ ನಾಯಕತ್ವದಿಂದ ಕೆಳಗಿಳಿಸಲಾಗಿದೆ ಅನ್ನೋ ವಿವಾದ ಮುನ್ನಲೆಗೆ ಬರುತ್ತಲೇ ಇದೆ. ಇದಕ್ಕೆ ಕಾರಣ ಅಂದಿನ ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಮತ್ತು ರೋಹಿತ್​ ಶರ್ಮಾ ಅನ್ನೋ ಮಾತುಗಳು ಕೇಳಿ ಬಂದಿವೆ.

ಇಷ್ಟೇ ಅಲ್ಲ, ಗಂಗೂಲಿ ಕುತಂತ್ರದಿಂದ ಕೊಹ್ಲಿ ಬಲವಂತವಾಗಿ ನಾಯಕತ್ವದಿಂದ ತೆಗೆದು ಹಾಕಲಾಯ್ತು. ರೋಹಿತ್​ಗಾಗಿ ಗಂಗೂಲಿ ಈ ನಿರ್ಧಾರ ಕೈಗೊಂಡರೂ ಎಂಬ ವಿಚಾರ ಪದೇ ಪದೇ ಚರ್ಚೆಗೆ ಬರುತ್ತಿದೆ. ಈ ಬಗ್ಗೆ ಸೌರವ್ ಗಂಗೂಲಿ ಎಷ್ಟು ಬಾರಿ ಸ್ಪಷ್ಟನೆ ನೀಡಿದ್ರೂ ವಿವಾದ ಶಮನವಾಗಿಲ್ಲ. ಬದಲಿಗೆ ಕೊಹ್ಲಿ ಫ್ಯಾನ್ಸ್​​ ರೋಹಿತ್ ಶರ್ಮಾ ಮತ್ತು ಗಂಗೂಲಿ ಅವರನ್ನು ಟಾರ್ಗೆಟ್​​ ಮಾಡಲಾಗುತ್ತಿದೆ.

ಇತ್ತೀಚೆಗೆ ರೋಹಿತ್​ ಶರ್ಮಾ ಅವರನ್ನು ಕೆಳಗಿಳಿಸಿ ಹಾರ್ದಿಕ್​ ಪಾಂಡ್ಯಗೆ ಮುಂಬೈ ಇಂಡಿಯನ್ಸ್​ ಕ್ಯಾಪ್ಟನ್ಸಿ ಪಟ್ಟ ಕಟ್ಟಲಾಗಿದೆ. ಇದಕ್ಕೆ ಹಾರ್ದಿಕ್​ ವಿರುದ್ಧ ರೋಹಿತ್​ ಫ್ಯಾನ್ಸ್​ ಆಕ್ರೋಶ ಹೊರಹಾಕಿದ್ದಾರೆ. ಈಗ ಇದಕ್ಕೆ ಕೊಹ್ಲಿ ಫ್ಯಾನ್ಸ್​ ಎಂಟ್ರಿ ನೀಡಿದ್ದು, ವಿರಾಟ್​ಗೆ ಟಿ20 ತಂಡದ ನಾಯಕತ್ವ ಬಿಟ್ಟುಕೊಡಲು ಇಷ್ಟವಿರಲಿಲ್ಲ. ಆದರೆ ಅವರಿಂದ ಟಿ20 ನಾಯಕತ್ವವನ್ನು ಕಸಿದುಕೊಳ್ಳಲಾಯಿತು. ಈ ಬೇಸರದಿಂದಲೇ ಕೊಹ್ಲಿ ಟೆಸ್ಟ್ ಮಾದರಿ ನಾಯಕತ್ವವನ್ನೂ ತ್ಯಜಿಸಿದರು ಎಂದಿದ್ದಾರೆ. ಅದರಲ್ಲೂ ರೋಹಿತ್​ ಮೂರು ಫಾರ್ಮೇಟ್​ಗೂ ನಾನೇ ಕ್ಯಾಪ್ಟನ್​ ಆಗಿರಬೇಕು ಎಂದು ಪಟ್ಟು ಹಿಡಿದಿದ್ದರು. ಅಂದು ಕೊಹ್ಲಿಗೆ ರೋಹಿತ್​ ಮೋಸ ಮಾಡಿದ್ರು. ಈಗ ರೋಹಿತ್​ಗೆ ಹಾರ್ದಿಕ್​ ಮಾಡಿದ್ದಾರೆ ಎಂದು ಟ್ರೋಲ್​ ಮಾಡಲಾಗುತ್ತಿದೆ.

ಇದನ್ನೂ ಓದಿ: ‘ನಾಚಿಕೆ ಆಗಬೇಕು ನಿನಗೆ..’- ಹಾರ್ದಿಕ್​​ ವಿರುದ್ಧ ಮುಂಬೈ ಅಭಿಮಾನಿಗಳು ಆಕ್ರೋಶ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More