ಪೋಷಕರಿಗೆ ತಾನು ಕೊಲೆ ಮಾಡಿರುವ ಕುರಿತು ತಿಳಿಸಿದ್ದ ಆರೋಪ
ತಪ್ಪಿಸಿಕೊಂಡಿದ್ದ ಆರೋಪಿ ಸುಳಿವು ಪೊಲೀಸರಿಗೆ ಗೊತ್ತಾಗಿದ್ದೇಗೆ?
ಪಿಜಿಗೆ ನುಗ್ಗಿ ಯುವತಿ ಕೃತಿ ಕುಮಾರಿಗೆ ಚಾಕು ಇರಿದು ಹತ್ಯೆ
ಬೆಂಗಳೂರು: ನಗರದ ಕೋರಮಂಗಲದ ಪಿಜಿಗೆ ನುಗ್ಗಿ ಯುವತಿಯನ್ನು ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಮಧ್ಯ ಪ್ರದೇಶದ ಭೊಪಾಲ್ನಲ್ಲಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಮಾರ್ಟಿನ್ ಒಂದೇ ಅಲ್ಲ.. ಸತ್ಯಾ ರೆಡ್ಡಿ, ಸುನೀಲ್ ರೆಡ್ಡಿಯಿಂದ ಸ್ಯಾಂಡಲ್ವುಡ್ಗೆ ಪಂಗನಾಮ.. AP ಅರ್ಜುನ್ ಹೇಳಿದ ಸತ್ಯವೇನು..?
ಆರೋಪಿ ಟಿಕ್ಕಿ ಅಭಿಷೇಕ್ನನ್ನು ಬೆಂಗಳೂರಿನ ಪೊಲೀಸರು ಮಧ್ಯ ಪ್ರದೇಶದ ಭೊಪಾಲ್ನಲ್ಲಿ ಬಂಧಿಸಿದ ಬಳಿಕ ಸ್ಥಳೀಯ ಕೋರ್ಟ್ಗೆ ಹಾಜರು ಪಡಿಸಿದ್ದರು. ಕೋರ್ಟ್ನಿಂದ ಅನುಮತಿ ಮೇರೆಗೆ ಟ್ರಾನ್ಸಿಟ್ ವಾರೆಂಟ್ ಮೇಲೆ ಹಂತಕನನ್ನು ಬೆಂಗಳೂರಿಗೆ ಕರೆ ತರಲಾಗುತ್ತಿದೆ.
ಇದನ್ನೂ ಓದಿ: ಬೆಂಗಳೂರು PG ಯುವತಿಯ ಬರ್ಬರ ಹತ್ಯೆ ಕೇಸ್ಗೆ ಹೊಸ ಟ್ವಿಸ್ಟ್.. ಕೊಲೆಗಾರ ಯಾರು? ಆಗಿದ್ದೇನು?
ಬೆಂಗಳೂರಿನ ಕೋರಮಂಗಲದ ಲೇಡಿಸ್ ಪಿಜಿಗೆ ನುಗ್ಗಿ ಕೃತಿ ಕುಮಾರಿ ಮೇಲೆ ಹಲ್ಲೆ ಮಾಡಿ ಅಭಿಷೇಕ್ನನ್ನು ಕೊಲೆ ಮಾಡಿದ್ದ. ನಂತರ ತನ್ನ ಊರು ಮಧ್ಯಪ್ರದೇಶದ ಭೊಪಾಲ್ಗೆ ತೆರಳಿದ್ದ. ಅಲ್ಲಿ ತನ್ನ ಪೋಷಕರನ್ನು ಭೇಟಿಯಾಗಿ ಕೊಲೆ ಮಾಡಿರುವ ಕುರಿತು ಹೇಳಿದ್ದ. ಇನ್ನೊಂದೆಡೆ ಪೊಲೀಸರಿಗೆ ಆರೋಪಿ ತನ್ನ ಊರಿಗೆ ಹೋಗಿರುವ ವಿಚಾರ ಗೊತ್ತಾಗಿತ್ತು. ಹೀಗಾಗಿ ಅವರ ಪೋಷಕರನ್ನು ಸಂಪರ್ಕ ಮಾಡಿದ್ದರು. ವಿಮಾನದ ಮೂಲಕ ಮಧ್ಯ ಪ್ರದೇಶಕ್ಕೆ ತೆರಳಿದ್ದ ಪೊಲೀಸರ ತಂಡ ಅಲ್ಲಿನ ಸ್ಥಳೀಯ ಪೊಲೀಸರ ಸಹಾಯದಿಂದ ಆರೋಪಿಯನ್ನು ಅರೆಸ್ಟ್ ಮಾಡಿ ಕರೆ ತರುತ್ತಿದ್ದಾರೆ.
ಕೃತಿ ಕುಮಾರಿಗೂ, ಆರೋಪಿ ಅಭಿಷೇಕ್ಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಲಾಗಿದೆ. ಕೃತಿ ಕುಮಾರಿ ಆತನ ಪ್ರೇಯಸಿಯ ಸ್ನೇಹಿತೆ ಎಂಬ ಮಾಹಿತಿ ಅಷ್ಟೇ ಗೊತ್ತಿರೋದು. ಪ್ರೇಯಸಿ ಮೇಲೆ ಕೋಪಿಸಿಕೊಂಡಿದ್ದ ಅಭಿಷೇಕ್, ಕೃತಿ ಕುಮಾರಿಗೆ ಯಾಕೆ ಚೂರಿ ಇರಿದ ಅನ್ನೋದು ಮಾತ್ರ ಇನ್ನೂ ನಿಗೂಢ. ಆರೋಪಿ ಬಂಧನ ಹಿನ್ನೆಲೆಯಲ್ಲಿ ಕೊಲೆಯ ಹಿಂದಿನ ರಹಸ್ಯ ಗೊತ್ತಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಪೋಷಕರಿಗೆ ತಾನು ಕೊಲೆ ಮಾಡಿರುವ ಕುರಿತು ತಿಳಿಸಿದ್ದ ಆರೋಪ
ತಪ್ಪಿಸಿಕೊಂಡಿದ್ದ ಆರೋಪಿ ಸುಳಿವು ಪೊಲೀಸರಿಗೆ ಗೊತ್ತಾಗಿದ್ದೇಗೆ?
ಪಿಜಿಗೆ ನುಗ್ಗಿ ಯುವತಿ ಕೃತಿ ಕುಮಾರಿಗೆ ಚಾಕು ಇರಿದು ಹತ್ಯೆ
ಬೆಂಗಳೂರು: ನಗರದ ಕೋರಮಂಗಲದ ಪಿಜಿಗೆ ನುಗ್ಗಿ ಯುವತಿಯನ್ನು ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಮಧ್ಯ ಪ್ರದೇಶದ ಭೊಪಾಲ್ನಲ್ಲಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಮಾರ್ಟಿನ್ ಒಂದೇ ಅಲ್ಲ.. ಸತ್ಯಾ ರೆಡ್ಡಿ, ಸುನೀಲ್ ರೆಡ್ಡಿಯಿಂದ ಸ್ಯಾಂಡಲ್ವುಡ್ಗೆ ಪಂಗನಾಮ.. AP ಅರ್ಜುನ್ ಹೇಳಿದ ಸತ್ಯವೇನು..?
ಆರೋಪಿ ಟಿಕ್ಕಿ ಅಭಿಷೇಕ್ನನ್ನು ಬೆಂಗಳೂರಿನ ಪೊಲೀಸರು ಮಧ್ಯ ಪ್ರದೇಶದ ಭೊಪಾಲ್ನಲ್ಲಿ ಬಂಧಿಸಿದ ಬಳಿಕ ಸ್ಥಳೀಯ ಕೋರ್ಟ್ಗೆ ಹಾಜರು ಪಡಿಸಿದ್ದರು. ಕೋರ್ಟ್ನಿಂದ ಅನುಮತಿ ಮೇರೆಗೆ ಟ್ರಾನ್ಸಿಟ್ ವಾರೆಂಟ್ ಮೇಲೆ ಹಂತಕನನ್ನು ಬೆಂಗಳೂರಿಗೆ ಕರೆ ತರಲಾಗುತ್ತಿದೆ.
ಇದನ್ನೂ ಓದಿ: ಬೆಂಗಳೂರು PG ಯುವತಿಯ ಬರ್ಬರ ಹತ್ಯೆ ಕೇಸ್ಗೆ ಹೊಸ ಟ್ವಿಸ್ಟ್.. ಕೊಲೆಗಾರ ಯಾರು? ಆಗಿದ್ದೇನು?
ಬೆಂಗಳೂರಿನ ಕೋರಮಂಗಲದ ಲೇಡಿಸ್ ಪಿಜಿಗೆ ನುಗ್ಗಿ ಕೃತಿ ಕುಮಾರಿ ಮೇಲೆ ಹಲ್ಲೆ ಮಾಡಿ ಅಭಿಷೇಕ್ನನ್ನು ಕೊಲೆ ಮಾಡಿದ್ದ. ನಂತರ ತನ್ನ ಊರು ಮಧ್ಯಪ್ರದೇಶದ ಭೊಪಾಲ್ಗೆ ತೆರಳಿದ್ದ. ಅಲ್ಲಿ ತನ್ನ ಪೋಷಕರನ್ನು ಭೇಟಿಯಾಗಿ ಕೊಲೆ ಮಾಡಿರುವ ಕುರಿತು ಹೇಳಿದ್ದ. ಇನ್ನೊಂದೆಡೆ ಪೊಲೀಸರಿಗೆ ಆರೋಪಿ ತನ್ನ ಊರಿಗೆ ಹೋಗಿರುವ ವಿಚಾರ ಗೊತ್ತಾಗಿತ್ತು. ಹೀಗಾಗಿ ಅವರ ಪೋಷಕರನ್ನು ಸಂಪರ್ಕ ಮಾಡಿದ್ದರು. ವಿಮಾನದ ಮೂಲಕ ಮಧ್ಯ ಪ್ರದೇಶಕ್ಕೆ ತೆರಳಿದ್ದ ಪೊಲೀಸರ ತಂಡ ಅಲ್ಲಿನ ಸ್ಥಳೀಯ ಪೊಲೀಸರ ಸಹಾಯದಿಂದ ಆರೋಪಿಯನ್ನು ಅರೆಸ್ಟ್ ಮಾಡಿ ಕರೆ ತರುತ್ತಿದ್ದಾರೆ.
ಕೃತಿ ಕುಮಾರಿಗೂ, ಆರೋಪಿ ಅಭಿಷೇಕ್ಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಲಾಗಿದೆ. ಕೃತಿ ಕುಮಾರಿ ಆತನ ಪ್ರೇಯಸಿಯ ಸ್ನೇಹಿತೆ ಎಂಬ ಮಾಹಿತಿ ಅಷ್ಟೇ ಗೊತ್ತಿರೋದು. ಪ್ರೇಯಸಿ ಮೇಲೆ ಕೋಪಿಸಿಕೊಂಡಿದ್ದ ಅಭಿಷೇಕ್, ಕೃತಿ ಕುಮಾರಿಗೆ ಯಾಕೆ ಚೂರಿ ಇರಿದ ಅನ್ನೋದು ಮಾತ್ರ ಇನ್ನೂ ನಿಗೂಢ. ಆರೋಪಿ ಬಂಧನ ಹಿನ್ನೆಲೆಯಲ್ಲಿ ಕೊಲೆಯ ಹಿಂದಿನ ರಹಸ್ಯ ಗೊತ್ತಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ