ಮತ್ತೆ ಬಾರದ ಮಳೆರಾಯ.. KRS ಡ್ಯಾಮ್​​ನಲ್ಲಿ ನೀರಿನ ಹರಿವಿನಲ್ಲಿ ಏರಿಳಿತ..! ಇಂದು ಎಷ್ಟಿದೆ..?

author-image
Bheemappa
Updated On
ಮತ್ತೆ ಬಾರದ ಮಳೆರಾಯ.. KRS ಡ್ಯಾಮ್​​ನಲ್ಲಿ ನೀರಿನ ಹರಿವಿನಲ್ಲಿ ಏರಿಳಿತ..! ಇಂದು ಎಷ್ಟಿದೆ..?
Advertisment
  • ಕೆರೆ, ಕಟ್ಟೆ, ಡ್ಯಾಮ್​ಗಳು ತುಂಬಿದರೆ ಬೆಳೆಗಳಿಗೂ ನೀರು
  • ಮಳೆ ಚೆನ್ನಾಗಿ ಬಿದ್ದರೆ ಭೂಮಿ ಹಸಿರು ಹೊದ್ದು ನಿಲ್ಲುತ್ತದೆ
  • ಕೃಷ್ಣ ರಾಜ ಸಾಗರ ಅಣೆಕಟ್ಟಿನಲ್ಲಿ ಇಂದಿನ ಸಾಂದ್ರತೆ ಎಷ್ಟು?

ಮಂಡ್ಯ: ರೈತರು ಮಳೆ ನಂಬಿಕೊಂಡು ಬದುಕು ಸಾಗಿಸುತ್ತಿದ್ದಾರೆ. ವರ್ಷದಲ್ಲಿ ಸರಿಯಾಗಿ ಮಳೆಯಾದರೆ ಕೆರೆ, ಕಟ್ಟೆಗಳು, ಡ್ಯಾಮ್​ಗಳು ತುಂಬಿ ಬೆಳೆಗಳಿಗು ನೀರು ಹರಿಸಲಾಗುತ್ತದೆ. ಈ ಬಾರಿ ಮಳೆ ಸುರಿಯುತ್ತಿದ್ದರು ಜಲಾಶಯಗಳಿಗೆ ಸಾಕಾಗುತ್ತಿಲ್ಲ. ಸದ್ಯ ಮುಂಗಾರು ಮಳೆ ಚಾಲ್ತಿಯಲ್ಲಿದ್ದು ಎಲ್ಲ ಕಡೆ ವರುಣ ಜೋರಾಗಿ ಕೃಪೆ ತೋರಿದರೆ ಡ್ಯಾಮ್​ಗಳ ಒಳ ಹರಿವು, ಹೊರ ಹರಿವು ಹೆಚ್ಚಾಗುತ್ತದೆ. ಸದ್ಯ ಕೆಆರ್​ಎಸ್​ ಜಲಾಶಯದ ಒಳಹರಿವು, ಹೊರ ಹರಿವಿನ ಮಟ್ಟ ಹೇಗಿದೆ ಎನ್ನುವ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:ಟ್ರಕ್ಕಿಂಗ್​ಗೆ ಹೋದವರ ದುರಂತ ಅಂತ್ಯ.. 9 ಜನರ ಪೈಕಿ 4 ಮೃತದೇಹಗಳಿಗಾಗಿ ಮುಂದುವರೆದ ಶೋಧಕಾರ್ಯ

ಕಳೆದೆರಡು ದಿನಗಳಿಗೆ ಹೋಲಿಸಿದರೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾಗಿದೆ. ಹೀಗಾಗಿ ನೀರಿನ ಒಳಹರಿವು ಕೊಂಚ ಬದಲಾವಣೆಯಾಗಿದೆ. ಆದರೂ ಕೆಆರ್​​ಎಸ್​ ಡ್ಯಾಂನ ನೀರಿನ ಮಟ್ಟದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಇಂದಿನ ಕೆಆರ್‌ಎಸ್ ನೀರಿನ ಮಟ್ಟ

  • ಗರಿಷ್ಠ ಮಟ್ಟ- 124.80 ಅಡಿ
  • ಇಂದಿನ ಮಟ್ಟ- 84.60 ಅಡಿ
  • ಗರಿಷ್ಠ ಸಾಂದ್ರತೆ- 49.452 ಟಿಎಂಸಿ
  • ಇಂದಿನ ಸಾಂದ್ರತೆ- 12.965 ಟಿಎಂಸಿ
  • ಒಳ ಹರಿವು- 1,470 ಕ್ಯೂಸೆಕ್
  • ಹೊರ ಹರಿವು- 550 ಕ್ಯೂಸೆಕ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment