ಅಧಿಕಾರಿ ಗೀತಾ, ಜಯಕರಶೆಟ್ಟಿ ವಿರುದ್ಧ ಆರೋಪ
ಬೆಂಗಳೂರಿನ ಅಧಿಕಾರಿಗಳಿಗೆ ಪತ್ರ ಬರೆದಿರುವ ಸಂತ್ರಸ್ತ
ಅಧಿಕಾರಿಗಳ ಮುಂದೆಯೇ ವಿಷಕುಡಿದ ಸಿಬ್ಬಂದಿ ಅಭಿಷೇಕ್
ಕೊಡಗು: ಕೆಎಸ್ಆರ್ಟಿಸಿ ಮ್ಯಾನೇಜರ್ ಕಿರುಕುಳ ನೀಡ್ತಿದ್ದಾರೆಂದು ಆರೋಪಿಸಿ, ಡಿಪೋದಲ್ಲಿ ಕಿರಿಯ ಸಹಾಯಕ ಅಭಿಷೇಕ್ ವಿಷ ಸೇವಿಸಿರೋ ಘಟನೆ ಮಡಿಕೇರಿಯಲ್ಲಿ ನಡೆಿದೆ.
ವಿಷ ಸೇವನೆಗೂ ಮೊದಲು ವ್ಯವಸ್ಥಾಪಕಿ ಗೀತಾ ಹಾಗೂ ಪುತ್ತೂರು ವಿಭಾಗದ ಡಿಸಿ ಜಯಕರಶೆಟ್ಟಿ ಕಿರುಕುಳದ ಬಗ್ಗೆ ಬೆಂಗಳೂರಿನ ಕೇಂದ್ರ ಕಚೇರಿಯ ವ್ಯವಸ್ಥಾಪಕರಿಗೆ ಅಭಿಷೇಕ್ ಪತ್ರ ಬರೆದಿದ್ದಾರೆ. ನನ್ನ ಆತ್ಮಹತ್ಮೆಗೆ ಇವರಿಬ್ಬರೇ ಕಾರಣ ಎಂದು ಉಲ್ಲೇಖಿಸಿದ್ದಾರೆ. ವಾರ್ಷಿಕ ಗುಣವಿಮರ್ಶೆಯಲ್ಲಿ ಅತೃಪ್ತಿಕರ ಎಂದು ಬರೆದು ಅಭಿಷೇಕ್ಗೆ ವ್ಯವಸ್ಥಾಪಕಿ ನೋಟಿಸ್ ಜಾರಿ ಮಾಡಿದ್ದರು.
ಹೀಗಾಗಿ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ಮಡಿಕೇರಿ ಮೆಡಿಕಲ್ ಜಿಲ್ಲಾಸ್ಪತ್ರೆಯ ಐಸಿಯೂನಲ್ಲಿ ಅಭಿಷೇಕ್ಗೆ ಚಿಕಿತ್ಸೆ ನೀಡಲಾಗ್ತಿದೆ. ಕಳೆದ ಎಂಟು ವರ್ಷದಿಂದ ವ್ಯವಸ್ಥಾಪಕಿಯಾಗಿರುವ ಗೀತಾ ಸಿಬ್ಬಂದಿಗೆ ನಿರಂತರ ಕಿರುಕುಳ ನೀಡುತ್ತಿದ್ದಾರೆ. ಇತ್ತೀಚೆಗೆ ವರ್ಗಾವಣೆಯಾದರೂ ರಿಲೀವ್ ಆಗಿರಲಿಲ್ಲ ಎಂದು ಆರೋಪಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಅಧಿಕಾರಿ ಗೀತಾ, ಜಯಕರಶೆಟ್ಟಿ ವಿರುದ್ಧ ಆರೋಪ
ಬೆಂಗಳೂರಿನ ಅಧಿಕಾರಿಗಳಿಗೆ ಪತ್ರ ಬರೆದಿರುವ ಸಂತ್ರಸ್ತ
ಅಧಿಕಾರಿಗಳ ಮುಂದೆಯೇ ವಿಷಕುಡಿದ ಸಿಬ್ಬಂದಿ ಅಭಿಷೇಕ್
ಕೊಡಗು: ಕೆಎಸ್ಆರ್ಟಿಸಿ ಮ್ಯಾನೇಜರ್ ಕಿರುಕುಳ ನೀಡ್ತಿದ್ದಾರೆಂದು ಆರೋಪಿಸಿ, ಡಿಪೋದಲ್ಲಿ ಕಿರಿಯ ಸಹಾಯಕ ಅಭಿಷೇಕ್ ವಿಷ ಸೇವಿಸಿರೋ ಘಟನೆ ಮಡಿಕೇರಿಯಲ್ಲಿ ನಡೆಿದೆ.
ವಿಷ ಸೇವನೆಗೂ ಮೊದಲು ವ್ಯವಸ್ಥಾಪಕಿ ಗೀತಾ ಹಾಗೂ ಪುತ್ತೂರು ವಿಭಾಗದ ಡಿಸಿ ಜಯಕರಶೆಟ್ಟಿ ಕಿರುಕುಳದ ಬಗ್ಗೆ ಬೆಂಗಳೂರಿನ ಕೇಂದ್ರ ಕಚೇರಿಯ ವ್ಯವಸ್ಥಾಪಕರಿಗೆ ಅಭಿಷೇಕ್ ಪತ್ರ ಬರೆದಿದ್ದಾರೆ. ನನ್ನ ಆತ್ಮಹತ್ಮೆಗೆ ಇವರಿಬ್ಬರೇ ಕಾರಣ ಎಂದು ಉಲ್ಲೇಖಿಸಿದ್ದಾರೆ. ವಾರ್ಷಿಕ ಗುಣವಿಮರ್ಶೆಯಲ್ಲಿ ಅತೃಪ್ತಿಕರ ಎಂದು ಬರೆದು ಅಭಿಷೇಕ್ಗೆ ವ್ಯವಸ್ಥಾಪಕಿ ನೋಟಿಸ್ ಜಾರಿ ಮಾಡಿದ್ದರು.
ಹೀಗಾಗಿ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ಮಡಿಕೇರಿ ಮೆಡಿಕಲ್ ಜಿಲ್ಲಾಸ್ಪತ್ರೆಯ ಐಸಿಯೂನಲ್ಲಿ ಅಭಿಷೇಕ್ಗೆ ಚಿಕಿತ್ಸೆ ನೀಡಲಾಗ್ತಿದೆ. ಕಳೆದ ಎಂಟು ವರ್ಷದಿಂದ ವ್ಯವಸ್ಥಾಪಕಿಯಾಗಿರುವ ಗೀತಾ ಸಿಬ್ಬಂದಿಗೆ ನಿರಂತರ ಕಿರುಕುಳ ನೀಡುತ್ತಿದ್ದಾರೆ. ಇತ್ತೀಚೆಗೆ ವರ್ಗಾವಣೆಯಾದರೂ ರಿಲೀವ್ ಆಗಿರಲಿಲ್ಲ ಎಂದು ಆರೋಪಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ