ಬೆಂಗಳೂರಿನ ತುರಹಳ್ಳಿ ಫಾರೆಸ್ಟ್ನಿಂದ ರಸ್ತೆಗೆ ನುಗ್ಗಿದ ಚಿರತೆ ಮತ್ತು ಮರಿ
ಬಸ್ನಲ್ಲಿದ್ದ ಪ್ರಯಾಣಿಕರನ್ನು ಕೆಳಗೆ ಇಳಿಯದಂತೆ ಡ್ರೈವರ್ ಸೂಚನೆ
ತಾಯಿ ಚಿರತೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಹುಡುಕಾಟ
ಬೆಂಗಳೂರು: ಮೊನ್ನೆ ಮೊನ್ನೆಯಷ್ಟೇ ಎಸ್ಆರ್ಆರ್ ಲೇಔಟ್ನಲ್ಲಿ ಚಿರತೆ ಹೆಜ್ಜೆ ಗುರುತು ಪತ್ತೆಯಾಗಿತ್ತು. ಹೀಗಾಗಿ ಆನೇಕಲ್ನ ನಿವಾಸಿಗಳಿಗೆ ಟೆನ್ಷನ್ ಶುರುವಾಗಿತ್ತು. ಆದರೆ ಇದೀಗ ತುರಹಳ್ಳಿ ಫಾರೆಸ್ಟ್ನಿಂದ ಚಿರತೆ ಮತ್ತು ಅದರ ಮರಿ ರಸ್ತೆಗೆ ನುಗ್ಗಿದೆ.
ತುರಹಳ್ಳಿ ಕಾಡಿನಿಂದ ಚಿರತೆ ಮರಿಯೊಂದು ಸಿಲಿಕಾನ್ ಸಿಟಿಯ ರಸ್ತೆಗೆ ನುಗ್ಗಿದೆ. ತಾಯಿ ಚಿರತೆಯಿಂದ ತಪ್ಪಿಸಿಕೊಂಡ ಮರಿ ಚಿರತೆ ಬಸ್ನ ಕೆಳಗೆ ಅವಿತುಕೊಂಡಿದೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನ ರಕ್ಷಣೆ ಮಾಡಿದ್ದಾರೆ.#Leopard #TurahalliForest #Bengaluru #Karnataka #NewsFirstLive #NewsFirstKannada pic.twitter.com/47M6IgAI9O
— NewsFirst Kannada (@NewsFirstKan) April 3, 2024
ಇದನ್ನೂ ಓದಿ: ಬೆಂಗಳೂರಲ್ಲಿ ಮತ್ತೆ ಚಿರತೆ ಹೆಜ್ಜೆ ಗುರುತು.. ಬೆಚ್ಚಿ ಬಿದ್ದ ಲೇಔಟ್ ನಿವಾಸಿಗಳು
ಹೌದು, ಕೆಂಗೇರಿಯಿಂದ ಚಿಕ್ಕೇಗೌಡನ ಪಾಳ್ಯ ಮಾರ್ಗದಲ್ಲಿ ಸಂಚಾರ ಮಾಡುತ್ತಿದ್ದ ಬಿಎಂಟಿಸಿ ಬಸ್ನ ಅಡಿ ಚಿರತೆ ಕಾಣಿಸಿಕೊಂಡಿದೆ. ಚಿರತೆ ಕಂಡ ಕೂಡಲೇ ಬಿಎಂಟಿಸಿ ಚಾಲಕ ಬಸ್ ನಿಲ್ಲಿಸಿದ್ದಾರೆ. ತಾಯಿ ಚಿರತೆ ತಪ್ಪಿಸಿಕೊಂಡಿದ್ದು, ಆ ಮರಿ ಮಾತ್ರ ಬಸ್ ಕೆಳಗೆ ಅವಿತುಕೊಂಡಿತ್ತು. ಬಳಿಕ ಆ ಮರಿಗೆ ನೀರು ಕುಡಿಸಲು ಮುಂದಾಗಿದ್ದ ಬಿಎಂಟಿಸಿ ಡ್ರೈವರ್ ಮೇಲೆ ಚಿರತೆ ಅಟ್ಯಾಕ್ ಮಾಡಲು ಮುಂದಾಗಿದೆ.
ಕೂಡಲೇ ಎಚ್ಚೆತುಕೊಂಡ ಚಾಲಕ ಬಸ್ನಲ್ಲಿದ್ದ ಪ್ರಯಾಣಿಕರನ್ನು ಕೆಳಗೆ ಇಳಿಯದಂತೆ ಸೂಚನೆ ನೀಡಿದರೂ. ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ. ಕೂಡಲೇ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಮರಿ ರಕ್ಷಣೆ ಮಾಡಿದ್ದಾರೆ. ಇನ್ನು ತಪ್ಪಿಸಿಕೊಂಡ ತಾಯಿ ಚಿರತೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಬೆಂಗಳೂರಿನ ತುರಹಳ್ಳಿ ಫಾರೆಸ್ಟ್ನಿಂದ ರಸ್ತೆಗೆ ನುಗ್ಗಿದ ಚಿರತೆ ಮತ್ತು ಮರಿ
ಬಸ್ನಲ್ಲಿದ್ದ ಪ್ರಯಾಣಿಕರನ್ನು ಕೆಳಗೆ ಇಳಿಯದಂತೆ ಡ್ರೈವರ್ ಸೂಚನೆ
ತಾಯಿ ಚಿರತೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಹುಡುಕಾಟ
ಬೆಂಗಳೂರು: ಮೊನ್ನೆ ಮೊನ್ನೆಯಷ್ಟೇ ಎಸ್ಆರ್ಆರ್ ಲೇಔಟ್ನಲ್ಲಿ ಚಿರತೆ ಹೆಜ್ಜೆ ಗುರುತು ಪತ್ತೆಯಾಗಿತ್ತು. ಹೀಗಾಗಿ ಆನೇಕಲ್ನ ನಿವಾಸಿಗಳಿಗೆ ಟೆನ್ಷನ್ ಶುರುವಾಗಿತ್ತು. ಆದರೆ ಇದೀಗ ತುರಹಳ್ಳಿ ಫಾರೆಸ್ಟ್ನಿಂದ ಚಿರತೆ ಮತ್ತು ಅದರ ಮರಿ ರಸ್ತೆಗೆ ನುಗ್ಗಿದೆ.
ತುರಹಳ್ಳಿ ಕಾಡಿನಿಂದ ಚಿರತೆ ಮರಿಯೊಂದು ಸಿಲಿಕಾನ್ ಸಿಟಿಯ ರಸ್ತೆಗೆ ನುಗ್ಗಿದೆ. ತಾಯಿ ಚಿರತೆಯಿಂದ ತಪ್ಪಿಸಿಕೊಂಡ ಮರಿ ಚಿರತೆ ಬಸ್ನ ಕೆಳಗೆ ಅವಿತುಕೊಂಡಿದೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನ ರಕ್ಷಣೆ ಮಾಡಿದ್ದಾರೆ.#Leopard #TurahalliForest #Bengaluru #Karnataka #NewsFirstLive #NewsFirstKannada pic.twitter.com/47M6IgAI9O
— NewsFirst Kannada (@NewsFirstKan) April 3, 2024
ಇದನ್ನೂ ಓದಿ: ಬೆಂಗಳೂರಲ್ಲಿ ಮತ್ತೆ ಚಿರತೆ ಹೆಜ್ಜೆ ಗುರುತು.. ಬೆಚ್ಚಿ ಬಿದ್ದ ಲೇಔಟ್ ನಿವಾಸಿಗಳು
ಹೌದು, ಕೆಂಗೇರಿಯಿಂದ ಚಿಕ್ಕೇಗೌಡನ ಪಾಳ್ಯ ಮಾರ್ಗದಲ್ಲಿ ಸಂಚಾರ ಮಾಡುತ್ತಿದ್ದ ಬಿಎಂಟಿಸಿ ಬಸ್ನ ಅಡಿ ಚಿರತೆ ಕಾಣಿಸಿಕೊಂಡಿದೆ. ಚಿರತೆ ಕಂಡ ಕೂಡಲೇ ಬಿಎಂಟಿಸಿ ಚಾಲಕ ಬಸ್ ನಿಲ್ಲಿಸಿದ್ದಾರೆ. ತಾಯಿ ಚಿರತೆ ತಪ್ಪಿಸಿಕೊಂಡಿದ್ದು, ಆ ಮರಿ ಮಾತ್ರ ಬಸ್ ಕೆಳಗೆ ಅವಿತುಕೊಂಡಿತ್ತು. ಬಳಿಕ ಆ ಮರಿಗೆ ನೀರು ಕುಡಿಸಲು ಮುಂದಾಗಿದ್ದ ಬಿಎಂಟಿಸಿ ಡ್ರೈವರ್ ಮೇಲೆ ಚಿರತೆ ಅಟ್ಯಾಕ್ ಮಾಡಲು ಮುಂದಾಗಿದೆ.
ಕೂಡಲೇ ಎಚ್ಚೆತುಕೊಂಡ ಚಾಲಕ ಬಸ್ನಲ್ಲಿದ್ದ ಪ್ರಯಾಣಿಕರನ್ನು ಕೆಳಗೆ ಇಳಿಯದಂತೆ ಸೂಚನೆ ನೀಡಿದರೂ. ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ. ಕೂಡಲೇ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಮರಿ ರಕ್ಷಣೆ ಮಾಡಿದ್ದಾರೆ. ಇನ್ನು ತಪ್ಪಿಸಿಕೊಂಡ ತಾಯಿ ಚಿರತೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ