/newsfirstlive-kannada/media/media_files/2025/07/31/rashi_bhavisha-2025-07-31-22-55-03.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
-------------
ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು. ಶ್ರಾವಣ ಮಾಸ, ಕೃಷ್ಣಪಕ್ಷ, ಸಪ್ತಮಿ ತಿಥಿ, ಅಶ್ವಿನಿ ನಕ್ಷತ್ರ. ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದೆ.
ಮೇಷ
- ವಿದ್ಯಾರ್ಥಿಗಳಿಗೆ ಶಿಕ್ಷಣ ಕ್ಷೇತ್ರದಲ್ಲಿ ಹಿನ್ನಡೆ, ಅನಾನುಕೂಲ
- ಬೇರೆಯವರ ಮಾತಿನಿಂದ ಅವಮಾನಿಸುವ ಅಭ್ಯಾಸ ದೂರಮಾಡಿ
- ಆತುರದ ಮಾತು ತೊಂದರೆಯಾಗಬಹುದು, ಇರಲಿ ಎಚ್ಚರ
- ವಸ್ತು ಖರೀದಿಯಲ್ಲಿ ಚರ್ಚೆ, ಅವಮಾನ, ಕಲಹ ಉಂಟಾಗಬಹುದು
- ನಕಾರಾತ್ಮಕ ವಿಚಾರಗಳಿಗೆ ಸಮಯ ವ್ಯರ್ಥ ಆಗಲಿದೆ
- ಕುಟುಂಬದಲ್ಲಿ ಆಶಾಂತಿ, ವಿಷ್ಣು ಸಹಸ್ರನಾಮ ಶ್ರವಣ ಮಾಡಿ
ವೃಷಭ
- ಕುಟುಂಬದ ಮೂಲವನ್ನು ಸರಿಯಾಗಿ ಹುಡುಕಿ ಸರಿಪಡಿಸಬೇಕಾಗಬಹುದು
- ದೀರ್ಘಕಾಲದ ತೊಂದರೆಯಿರೋರಿಗೆ ಸ್ವಲ್ಪ ಚೇತರಿಕೆ ಇದೆ
- ಸತ್ಯಕ್ಕೆ ಹತ್ತಿರವಾದ ಉಪಯುಕ್ತವಾದ ಚರ್ಚೆ ಮಾಡುವುದು ಉತ್ತಮ
- ಅನಗತ್ಯ ವಸ್ತು, ವಿಷಯಗಳಿಗೆ ಕಲಹವಾಗಬಹುದು
- ಇಂದು ಸಹೋದರರಲ್ಲಿ ಭಿನ್ನಾಭಿಪ್ರಾಯದ ಮಾತುಗಳಿರಬಹುದು
- ನಿಮ್ಮ ಮೊಂಡು ಸ್ವಭಾವ ಪರಿವರ್ತಿಸಿಕೊಳ್ಳಲು ಪ್ರಯತ್ನಬೇಕು
- ಸಾಲಿಗ್ರಾಮ ರೂಪೀ ವಿಷ್ಣುವಿನ ಆರಾಧನೆ ಮಾಡಿ
ಮಿಥುನ
- ಸ್ಥಿರ ಮನಸ್ಸಿಲ್ಲದೇ ಅನೇಕ ಗೊಂದಲಗಳಿಗೆ ಸಿಲುಕಬಹುದು
- ಜೊತೆಗಿದ್ದ ಸ್ನೇಹತರು ನಿಮ್ಮ ಸ್ವಭಾವದಿಂದ ದೂರವಾಗಬಹುದು
- ದಿನದ ಆರಂಭದಲ್ಲಿ ನಿಮಗೆ ತೊಂದರೆ, ಬೇಸರದ ಸೂಚನೆಯಿರಬಹುದು
- ನಿಮ್ಮ ಮನಸ್ಸು ಅಧೈರ್ಯದಿಂದ ಕೂಡಿರುತ್ತದೆ, ಸಾಯಂಕಾಲದ ಚರ್ಚೆ ನಿಮಗೆ ಅನುಕೂಲವಲ್ಲ
- ನೀವು ಎಷ್ಟು ನಯವಾಗಿರುತ್ತಿರೋ ಅಷ್ಟು ಗೌರವ ನಿಮ್ಮದಾಗುತ್ತದೆ
- ಭಗವದ್ಗೀತೆಯ ಶ್ಲೋಕ ಪಠಿಸಿ
ಕಟಕ
- ಹೊಸ ಸಂಬಂಧದ ವಿಚಾರ ಚರ್ಚೆಯಾಗುತ್ತದೆ
- ಈ ದಿನ ಮಕ್ಕಳ ಬಗ್ಗೆ ಎಚ್ಚರಿಕೆಯಿರಲಿ
- ಕೆಲವು ವಿಚಾರಗಳಲ್ಲಿ ಮನೆಯಲ್ಲಿ ನಿಮ್ಮನ್ನು ಪರಿಗಣಿಸಲ್ಲ
- ಮಹಿಳೆಯರು ಸೌಂದರ್ಯವರ್ಧಕ ವಸ್ತು ಖರೀದಿಯಲ್ಲಿ ಆಸಕ್ತಿ ತೋರಬಹುದು
- ನಿಮ್ಮ ಕೆಲಸ, ಒತ್ತಡವನ್ನು ಬೇರೆಯವರಿಗೆ ವಹಿಸಬೇಡಿ
- ಬೇರೆಯವರ ವಿಚಾರಕ್ಕೆ ತಲೆಹಾಕಿ ಅವಮಾನವಾಗಬಹುದು
- ಮನೋಭವ ಮಂತ್ರ ಉಪಾಸನೆ ಮಾಡಿ
ಸಿಂಹ
- ಹಣದ ವಿಚಾರಕ್ಕೆ ಕಲಹ, ಜಗಳಬೇಡ
- ಎಲ್ಲಾ ಕೆಲಸಗಳು ಸುಲಭವಾಗಿ ನಡೆಯಬಹುದು
- ವ್ಯಕ್ತಿತ್ವ, ಸ್ವಭಾವದಲ್ಲಿ ಕೆಲವು ಬದಲಾವಣೆಗಳಾಗಬಹುದು
- ಆರೋಗ್ಯದಲ್ಲಿ ತುಂಬಾ ಏರು ಪೇರು ಕಾಣಲಿದೆ
- ಮನೆಯಲ್ಲಿ ಗಾಜಿನ ಪದಾರ್ಥ ಒಡೆಯೋದು ಅಪಶಕುನದ ಭಾವ
- ಆಯಾಸದಿಂದ ಕಿರಿಕಿರಿ ಆಗಬಹುದು
- ಸಾಯಂಕಾಲದಲ್ಲಿ ವ್ಯವಹಾರ ಮಾಡಲು ಸೂಕ್ತ ಸಮಯ
- ರುದ್ರ ಮಂತ್ರ ಶ್ರವಣ ಮಾಡಿ
ಕನ್ಯಾ
- ದಾಂಪತ್ಯದಲ್ಲಿ ವಿರಸ, ಬಿರುಕು ತೋರುತ್ತದೆ ಹೊಂದಾಣಿಕೆ ಅಗತ್ಯವಿದೆ
- ನಿಮ್ಮ ಮನಸ್ಸಿಗೆ ಸಮಾಧಾನವಾಗುವಂತ ಕೆಲಸ ಮಾಡಿ
- ಹೊಟ್ಟೆಗೆ ಸಂಬಂಧಿಸಿದ ತೊಂದರೆಯಾಗಬಹುದು
- ನಿಗೂಢ ವಿಷಯಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ
- ಉದ್ಯಮಿಗಳಿಗೆ ಹಣದ ಏರುಪೇರಿನಿಂದ ತೊಂದರೆಯಾಗಬಹುದು
- ಮನೆಯಲ್ಲಿ ಕಹಿ ವಿಚಾರಗಳನ್ನು ಮಾತನಾಡಬೇಡಿ
- ಐಕ್ಯಮತ್ಯ ಮಂತ್ರ ಶ್ರವಣ ಮಾಡಿ
ತುಲಾ
- ಬಂಧುಗಳಲ್ಲಿದ್ದ ವಿರಸ, ಭಿನ್ನಾಭಿಪ್ರಾಯ ದೂರವಾಗುತ್ತದೆ
- ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಕೆಲವು ಗೊಂದಲಗಳು ಕಾಡಬಹುದು
- ಇಂದು ಮುದ್ರಕರಿಗೆ ಶುಭ ದಿನ
- ಸಾಕು ಪ್ರಾಣಿಯ ಬಗ್ಗೆ ಸ್ವಲ್ಪ ಎಚ್ಚರಿಕೆ ವಹಿಸಿ, ತೊಂದರೆಯಾಗಬಹುದು
- ಅರಿಯದ ವಿಚಾರಗಳಲ್ಲಿ ಸಿಲುಕಬಹುದು
- ಮನೆಯಲ್ಲಿ ಮಂಗಳ ಕಾರ್ಯದ ವಿಚಾರ ಪ್ರಸ್ತಾಪಿಸಬಹುದು
- ಈಶ್ವರನ ಆರಾಧನೆ ಮಾಡಿ
ವೃಶ್ಚಿಕ
- ಕುಟುಂಬದ ನಿರ್ವಹಣೆ ಹಣದ ದೃಷ್ಟಿಯಿಂದ ಕಷ್ಟವಾಗಬಹುದು
- ಶುಭಕಾರ್ಯಕ್ಕೆ ಹೋಗಲು ಮನಸ್ಸಿರುವುದಿಲ್ಲ
- ನೌಕರಿಯ ಬಗ್ಗೆ ಸ್ನೇಹಿತರಿಂದ ತೊಂದರೆಯಿದೆ
- ವಸ್ತು ಖರೀದಿ ಅಥವಾ ವ್ಯಾಪಾರದಲ್ಲಿ ಲಾಭವಿದೆ
- ಸಾಯಂಕಾಲದ ವೇಳೆಗೆ ಅಶುಭವಾರ್ತೆ ಮನೆಯಲ್ಲಿ ಆತಂಕ
- ತಂದೆಯವರ ಸಂಪೂರ್ಣ ಸಹಾಯ, ಸಹಕಾರ ಸಿಗಲಿದೆ
- ಗುರು ದತ್ತಾತ್ರೇಯರನ್ನು ಪ್ರಾರ್ಥಿಸಿ
ಧನಸ್ಸು
- ಉದ್ಯೋಗದಲ್ಲಿ ಸ್ಥಾನ ಮಾನಗಳು ಸಿಗಬಹುದು
- ಬರಬೇಕಾದ ಬಾಕಿ ಹಣವಿದ್ದರೆ ಇಂದು ಬರುವ ಯೋಗವಿದೆ
- ಮನಸ್ಸಿನಿಂದ ವೃತ್ತಿ, ಉದ್ಯೋಗದ ಚಿಂತೆ ದೂರವಾಗುತ್ತದೆ
- ನಿಮ್ಮ ಪರಿಶ್ರಮವು ಲೆಕ್ಕಕ್ಕೆ ಬರುವುದಿಲ್ಲ
- ಇಂದು ವಿದ್ಯಾರ್ಥಿಗಳಿಗೆ ಯಶಸ್ಸಿದೆ
- ಪ್ರಯಾಣದಲ್ಲಿ ತೊಂದರೆಯಿದೆ ಎಚ್ಚರಿಕೆ
- ಕುಲದೇವತಾ ಆರಾಧನೆ ಮಾಡಿ
ಮಕರ
- ಮಾನಸಿಕ ಒತ್ತಡ, ಕೋಪ ಬರಬಹುದು
- ಎಲ್ಲಾ ಅನುಕೂಲಗಳಿದ್ದರೂ ಅನುಭವಿಸುವ ಯೋಗವಿರುವುದಿಲ್ಲ
- ನಕಾರಾತ್ಮಕ ಆಲೋಚನೆಗಳು ಬರದಂತೆ ತಡೆಯಿರಿ
- ನಿಮಗಾಗದ ಮಾತನ್ನು ಕೇಳಿ ಬೇಸರವಾಗಬಹುದು
- ತಲೆ ನೋವಿನ ಸಮಸ್ಯೆ ಕಾಡಬಹುದು
- ಮೇಲಾಧಿಕಾರಿಗಳಿಂದ ನಿಂದನೆಗೊಳಗಾಗುತ್ತೀರಿ
- ನವಗ್ರಹ ಸ್ತೋತ್ರ ಪಠಿಸಿ
ಕುಂಭ
- ಈ ದಿನ ವ್ಯಾಪಾರ ಮಾಡುವವರಿಗೆ ಲಾಭವಿದೆ
- ದೈಹಿಕ ತೊಂದರೆಯಿದೆ, ಚಿಕಿತ್ಸೆ ಅಗತ್ಯ
- ವೈವಾಹಿಕ ಜೀವನದಲ್ಲಿ ಮಾತು ಬಿರುಕು ತರಬಹುದು
- ಸ್ತ್ರೀಯರಿಂದ ಉಪಕಾರ, ಧನಲಾಭವಿದೆ
- ಇಂದು ಶತ್ರುಗಳ ಕಾಟ
- ಉದ್ಯೋಗ ಹುಡುಕುತ್ತಿರುವವರಿಗೆ ಅನುಕೂಲವಿದೆ
- ಪ್ರತ್ಯಂಗಿರಾ ಉಪಾಸನೆ ಮಾಡಿ
ಮೀನ
- ಹಳೆಯ ರೋಗಗಳಿಂದ ಮುಕ್ತಿ ಸಿಗಲಿದೆ
- ಒಂದಕ್ಕಿಂತ ಹೆಚ್ಚು ಕೆಲಸಗಳನ್ನು ಮಾಡಲು ಪ್ರಯತ್ನಿಸಿ ವಿಫಲರಾಗುತ್ತೀರಿ
- ಇಂದು ಭಾವನೆಗಳನ್ನು ನಿಯಂತ್ರಿಸಿ
- ಇಷ್ಟಾರ್ಥಗಳು ಈಡೇರುತ್ತವೆ ದುರಾಸೆ ತಪ್ಪಿದ್ದಲ್ಲ
- ಬೇಕಾದವರಿಗಾಗಿ ಸ್ವಲ್ಪ ಸಮಯ ಮೀಸಲಾಗಿಡುತ್ತೀರಿ
- ನಿಮ್ಮ ದಿನಚರಿಯಲ್ಲಿ ಸ್ವಲ್ಪ ಬದಲಾವಣೆಯಾಗಬಹುದು
- ಬಂಡಿಕೇಶ್ವರನನ್ನು ಪ್ರಾರ್ಥಿಸಿ
ಇದನ್ನೂ ಓದಿ:ಪೂಜೆ ಮಾಡಿ ಅಮ್ಮನ ತಬ್ಬಿ ಕಣ್ಣೀರಿಟ್ಟ ಪವಿತ್ರ ಗೌಡ.. ಅರೆಸ್ಟ್ ಮಾಡುವ ಮುನ್ನ ನಡೆದಿದ್ದು ಏನು..?
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us