/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ಚತುರ್ಥಿ ತಿಥಿ, ಚಿತ್ತಾ ನಕ್ಷತ್ರ. ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.
ಮೇಷ
- ದುಬಾರಿ ವಸ್ತುಗಳ ಬಗ್ಗೆ ಚರ್ಚೆ ಮಾಡಿ ಅನಾವಶ್ಯಕ ಕಾಲಾಹರಣವಾಗಬಹುದು
- ಉದ್ಯೋಗದಲ್ಲಿ ತಂತ್ರಗಾರಿಕೆ ಬದಲಾಯಿಸುವುದರಿಂದ ಹಿನ್ನಡೆ ಸಾಧ್ಯತೆ
- ಸರಿಯಾದ ಮಾನಸಿಕ ಸಿದ್ಧತೆ ಇಲ್ಲದೇ ಪ್ರಯಾಣ ಮುಂದೂಡಿ ನಷ್ಟ ಸಾಧ್ಯತೆ
- ಕೆಲಸದ ನಿಮಿತ್ತವಾಗಿ ದೂರ ಪ್ರಯಾಣ ಮಾಡಬೇಕಾಗಬಹುದು
- ಇಂದು ಮಾನಸಿಕ ಅತೃಪ್ತಿ ಕಾಡಬಹುದು
- ಮನ ಏವ ಮನುಷ್ಯಾಣಾಂ ಕಾರಣಂ ಬಂಧ ಮೋಕ್ಷಯೋಃ
- ಆಂಜನೇಯ ಸ್ವಾಮಿಯನ್ನು ಪ್ರಾರ್ಥಿಸಿ
ವೃಷಭ
- ಅಪರಿಚಿತ ವ್ಯಕ್ತಿಗಳ ಜೊತೆ ಮಾತನಾಡುವಾಗ ಹಲ್ಲೆಗೆ ಒಳಗಾಗುವ ಸಾಧ್ಯತೆ ಇದೆ
- ನಿಮ್ಮ ಬಗ್ಗೆ ಜನರ ಬೆಂಬಲ, ಪ್ರೀತಿ ಕಂಡು ನಿಮಗೆ ಅಚ್ಚರಿಯಾಗಬಹುದು
- ಆಪತ್ತಿನಲ್ಲಿರುವ ನಿಮ್ಮನ್ನು ಜನ ಕಾಪಾಡಬಹುದು
- ನಿಮಗಿರುವ ಜನ ಬೆಂಬಲ, ಶಕ್ತಿ ಸಾಮರ್ಥ್ಯದ ಬಗ್ಗೆ ಇಂದು ಜನರೇ ಮನದಟ್ಟು ಮಾಡಬಹುದು
- ಮೃತ್ಯುಂಜಯನನ್ನು ಪ್ರಾರ್ಥಿಸಿ
ಮಿಥುನ
- ನೀವು ಯಾವ ಕೆಲಸವನ್ನ ಸಮರ್ಪಕವಾಗಿ ನಿಭಾಯಿಸಬಲ್ಲಿರೋ ಅಂತ ಕೆಲಸ ಮಾತ್ರ ಮಾಡಿ
- ರಾಜಕೀಯ ವ್ಯಕ್ತಿಗಳಿಗೆ ಉತ್ತಮ ಸ್ಥಾನ ಸಿಗುವ ಸಾಧ್ಯತೆ
- ಇಂದು ನಿರೀಕ್ಷೆ ಮೀರಿದ ಆದಾಯ ಸಾಧ್ಯತೆ
- ಇಂದು ಮಾತಿನ ಭರವಸೆ ಮಾತ್ರ ನೀಡಿದರೆ, ಅವಮಾನ ಸಾಧ್ಯತೆ
- ನಿಮ್ಮ ಕೆಲಸದ ಒತ್ತಡದಿಂದ ಕುಟುಂಬ ಸದಸ್ಯರನ್ನು ನಿರ್ಲಕ್ಷ್ಯ ಮಾಡಬೇಡಿ
- ಭವಾನಿ ದೇವಿಯನ್ನು ಪ್ರಾರ್ಥಿಸಿ
ಇದನ್ನೂ ಓದಿ: ನಿಮ್ಮ ಕೂದಲಿನ ಆರೈಕೆ ಹೇಗಿರಬೇಕು? ಸದೃಢವಾಗಿ ಬೆಳೆಯಲು ಈ ಟಿಪ್ಸ್ ಫಾಲೋ ಮಾಡಿ..
ಕಟಕ
- ನಿಮ್ಮ ಅಶಿಸ್ತಿನಿಂದ ಹಣ ಕೊಡುವುದನ್ನ ಕಡಿಮೆ ಮಾಡಬಹುದು
- ವಿದ್ಯಾರ್ಥಿಗಳಿಗೆ ಪಾಕೆಟ್ ಮನಿ ನಿಂತು ಹೋಗುವ ಸಾಧ್ಯತೆ
- ಗೃಹ ನಿರ್ವಹಣೆ ಮಾಡುವವರು ಶಿಸ್ತಿನ ಜೀವನ ನಡೆಸಬೇಕು
- ನಿಮ್ಮ ನೌಕರಿಯ ಬಗ್ಗೆ ಹೆಚ್ಚು ಗಮನ ನೀಡದೆ ಇದ್ದರೆ ತೊಂದರೆ ಸಾಧ್ಯತೆ
- ನಿಮ್ಮ ಶಿಸ್ತುಬದ್ಧ ಜೀವನದ ಕೊರತೆಯಿಂದ ಆರ್ಥಿಕ ಸ್ಥಿತಿ ಅಸ್ತವ್ಯಸ್ತವಾಗುವ ಸಾಧ್ಯತೆ
- ಲಕ್ಷ್ಮಿನಾರಾಯಣನನ್ನು ಪ್ರಾರ್ಥನೆ ಮಾಡಿ
ಸಿಂಹ
- ನಿಮ್ಮ ವರ್ತನೆ, ಸ್ವಭಾವ ಬದಲಿಸಿಕೊಂಡರೆ ಪ್ರೀತಿ, ಅಭಿಮಾನ ಸಿಗಬಹುದು
- ಕುಟುಂಬದವರ ಹತ್ತಿರ ಯಾವುದೇ ವ್ಯವಹಾರ ಮಾಡಬೇಡಿ
- ಹಿರಿಯರ, ಸಾಧು-ಸಂತರ ಮಾರ್ಗದರ್ಶನ ಪಡೆದು ನಿಮ್ಮ ಸ್ವಭಾವವನ್ನು ಬದಲಿಸಿಕೊಂಡರೆ ಒಳ್ಳೆಯದು
- ಮದುವೆ ಮಾತುಕತೆ ಇತ್ಯರ್ಥ ಆಗಲಿದೆ
- ಕೋರ್ಟ್ ವಿವಾದಗಳು ಬಗೆಹರೆಯಲಿದೆ
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಕನ್ಯಾ
- ಮನೆಯ ನವೀಕರಣ ಮತ್ತು ಆಭರಣ ಖರೀದಿಸುವ ಬಗ್ಗೆ ಮನೆಯಲ್ಲಿ ಚರ್ಚೆ ಸಾಧ್ಯತೆ
- ಕುಟುಂಬದಲ್ಲಿ ಉತ್ತಮ ವಾತಾವರಣ ಇರುತ್ತದೆ
- ನಿಮ್ಮ ಜೊತೆ ಭಿನ್ನಾಭಿಪ್ರಾಯ ಹೊಂದಿದವರು ಇಂದು ಸುಮ್ಮನಾಗುತ್ತಾರೆ
- ನಿಮ್ಮ ಬುದ್ಧಿವಂತಿಕೆಯಿಂದ ಎಲ್ಲಾ ಕೆಲಸಗಳನ್ನು ಪೂರೈಸುತ್ತೀರಿ
- ಮಕ್ಕಳಿಂದ ಮನಸ್ಸಿಗೆ ಸಮಾಧಾನ ಸಾಧ್ಯತೆ
- ನವಗ್ರಹರನ್ನು ಪ್ರಾರ್ಥಿಸಿ
ತುಲಾ :
- ಸರ್ಕಾರಿ ನೌಕರರು ಉತ್ತಮ ಅವಕಾಶದಿಂದ ವಂಚಿತರಾಗಬಹುದು
- ಆರೋಗ್ಯದಲ್ಲಿ ಅಲ್ಪ ಸ್ವಲ್ಪ ವ್ಯತ್ಯಾಸ ಕಂಡರೂ ತಕ್ಷಣ ವೈದ್ಯರ ಭೇಟಿ ಮಾಡಿ
- ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ಹೋಗುವ ಅವಕಾಶವಿದೆ
- ಕೆಲವರಿಗೆ ಇಂದು ಹೃದಯಕ್ಕೆ ಸಂಬಂಧಿಸಿದ ತೊಂದರೆ ಕಾಡಬಹುದು ಎಚ್ಚರ
- ಇಂದು ವಿದ್ಯಾರ್ಥಿಗಳಿಗೆ ಯಶಸ್ಸಿನ ದಿನ, ಸೂರ್ಯನನ್ನು ಪ್ರಾರ್ಥನೆ ಮಾಡಿ
ವೃಶ್ಚಿಕ
- ನೌಕರಿಯ ಭದ್ರತೆಯ ಬಗ್ಗೆ ಸಮಾಧಾನವಿರುತ್ತದೆ
- ಉದ್ಯೋಗದಲ್ಲಿ ನಿಮ್ಮ ಹಕ್ಕು ಮತ್ತು ಜವಾಬ್ದಾರಿಗಳು ಹೆಚ್ಚಾಗಬಹುದು
- ಕೆಲವು ಸಾಮಗ್ರಿಗಳನ್ನು ಹೆಚ್ಚು ಹಣಕೊಟ್ಟು ಖರೀದಿಸುತ್ತೀರಿ
- ಇಂದು ಮಾಡಬೇಕಾದ ಕೆಲಸವನ್ನು ನಾಳೆಗೆ ಮುಂದೂಡಬಹುದು
- ನಿಮ್ಮ ಆರೋಗ್ಯ ಹಾಳಾಗಬಹುದು ಎಚ್ಚರವಿರಲಿ
- ಅನ್ನಪೂರ್ಣೇಶ್ವರಿಯನ್ನು ಪ್ರಾರ್ಥಿಸಿ
ಧನುಸ್
- ವಸ್ತು ಖರೀದಿಸಲು ದುಂದುವೆಚ್ಚ ಮಾಡಬೇಡಿ
- ಆತುರಾತುರದಿಂದ ಏನಾದರೂ ಮಾಡಿದರೆ ತೊಂದರೆಯಾಗಬಹುದು
- ಆರೋಗ್ಯದ ದೃಷ್ಟಿಯಿಂದ ಮೂಳೆ ಮತ್ತು ನರಕ್ಕೆ ಸಂಬಂಧಿಸಿದ ತೊಂದರೆಯಾಗಬಹುದು
- ಕಾನೂನಾತ್ಮಕವಾದ ವಿಷಯಗಳು ಎದುರಾಗಬಹುದು
- ಹಿರಿಯರಿಗೆ ಗೌರವನ್ನು ಕೊಡಿ
- ಅಂಬಾಭವಾನಿಯನ್ನು ಆರಾಧಿಸಿ
ಮಕರ
- ನಿಮ್ಮನ್ನು ಬೇರೆಯವರಿಗೆ ಹೋಲಿಕೆ ಮಾಡಿಕೊಳ್ಳಬೇಡಿ
- ನಿಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಿ
- ಬೇರೆಯವರನ್ನು ನೋಡಿ ಹಣ ಹೂಡಿಕೆ ಮಾಡಲು ಮುಂದಾದರೆ ನಷ್ಟ
- ಸ್ನೇಹಿತರ ಜೊತೆ ವಾದ-ವಿವಾದಗಳು ಬೇಡ
- ದುರ್ಗಾದೀಪ ನಮಸ್ಕಾರ ಮಾಡಿ
ಕುಂಭ
- ನಿಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಿ
- ಕಾನೂನಿನ ಚೌಕಟ್ಟಿನಲ್ಲಿ ನಿಮ್ಮ ವ್ಯವಹಾರ ನಡೆಯುವುದರಿಂದ ಯಶಸ್ಸು
- ನಿಮ್ಮ ಜೀವನದಲ್ಲಿ ಸತ್ಯ ಸಾಧನೆ ಮತ್ತು ಸತ್ಯ ಶೋಧನೆ ಮುಖ್ಯವಾಗುತ್ತದೆ
- ವಿದ್ಯಾರ್ಥಿಗಳು ಭವಿಷ್ಯದ ಬಗ್ಗೆ ಸರಿಯಾಗಿ ಚಿಂತನೆ ಮಾಡಿ
- ಆಸ್ತಿ ಖರೀದಿ ಅಥವಾ ಮಾರಾಟದಿಂದ ಲಾಭವಾಗಬಹುದು
- ರಾಮ ಕೃಷ್ಣ ಪರಮಹಂಸರ ಜೀವನ ಚರಿತ್ರೆ ಓದಿ
ಮೀನ
- ವ್ಯವಹಾರದಲ್ಲಿ ನಿಮ್ಮ ಬುದ್ಧಿವಂತಿಕೆಯಿಂದ ಕೆಲಸಗಳಾಗುತ್ತವೆ
- ರಕ್ತದೊತ್ತಡ ಇರುವವರು ತಮ್ಮ ಆರೋಗ್ಯದ ಬಗ್ಗೆ ಜಾಗ್ರತೆವಹಿಸಿ
- ಎರಡೆರಡು ಕೆಲಸಗಳನ್ನು ಒಟ್ಟಿಗೆ ಮಾಡಲು ಪ್ರಯತ್ನಿಸಬೇಡಿ ಸೋಲಾಗಬಹುದು
- ಭೂಮಿ ಅಥವಾ ಮನೆಯನ್ನು ಖರೀದಿಸುವ ಯೋಗವಿದೆ
- ಈ ದಿನ ಜನರು ನಿಮ್ಮನ್ನು ಮೆಚ್ಚಿಕೊಳ್ಳುತ್ತಾರೆ
- ದೇವಿಯನ್ನು ಆರಾಧಿಸಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ