Happy Ganesh Chaturthi -ಯಾರಿಗೆ ಶುಭ, ಯಾರಿಗೆ ಅಶುಭ? ಇಲ್ಲಿದೆ ನಿಮ್ಮ ಭವಿಷ್ಯ

ಬೆಳಗ್ಗೆ ಎದ್ದ ತಕ್ಷಣ ಇವತ್ತು ಏನು ಮಾಡಬೇಕು? ಏನು ಮಾಡಬಾರದು ಅಂತಾ ಲೆಕ್ಕಾ ಹಾಕ್ತೀವಿ. ಈ ದಿನ ನಿಮಗೆ ಅದೃಷ್ಟ ತಂದುಕೊಡಬಹುದು, ಕೆಲವ್ರಿಗೆ ಒಳ್ಳೆಯದ ದಿನ ಆಲ್ಲದಿರಬಹುದು. ನೀವು ಜ್ಯೋತಿಷಿ ಶಾಸ್ತ್ರ ನಂಬೋರು ಆಗಿದ್ರೆ ಅಂಗೈ ಅಗಲದ ಮೊಬೈಲ್​​ನಲ್ಲೇ ತಿಳಿದುಕೊಳ್ಳಬಹುದು.

author-image
Ganesh Kerekuli
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment

ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ಚತುರ್ಥಿ ತಿಥಿ, ಚಿತ್ತಾ ನಕ್ಷತ್ರ. ರಾಹುಕಾಲ ಬುಧವಾರ ಮಧ್ಯಾಹ್ನ  12.00 ರಿಂದ 1.30 ರವರೆಗೆ ಇರಲಿದೆ.

ಮೇಷ

  • ದುಬಾರಿ ವಸ್ತುಗಳ ಬಗ್ಗೆ ಚರ್ಚೆ ಮಾಡಿ ಅನಾವಶ್ಯಕ ಕಾಲಾಹರಣವಾಗಬಹುದು
  • ಉದ್ಯೋಗದಲ್ಲಿ ತಂತ್ರಗಾರಿಕೆ ಬದಲಾಯಿಸುವುದರಿಂದ ಹಿನ್ನಡೆ ಸಾಧ್ಯತೆ 
  • ಸರಿಯಾದ ಮಾನಸಿಕ ಸಿದ್ಧತೆ ಇಲ್ಲದೇ ಪ್ರಯಾಣ ಮುಂದೂಡಿ ನಷ್ಟ ಸಾಧ್ಯತೆ
  • ಕೆಲಸದ ನಿಮಿತ್ತವಾಗಿ ದೂರ ಪ್ರಯಾಣ ಮಾಡಬೇಕಾಗಬಹುದು
  • ಇಂದು ಮಾನಸಿಕ ಅತೃಪ್ತಿ ಕಾಡಬಹುದು
  • ಮನ ಏವ ಮನುಷ್ಯಾಣಾಂ ಕಾರಣಂ ಬಂಧ ಮೋಕ್ಷಯೋಃ 
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥಿಸಿ

ವೃಷಭ

  • ಅಪರಿಚಿತ ವ್ಯಕ್ತಿಗಳ ಜೊತೆ ಮಾತನಾಡುವಾಗ ಹಲ್ಲೆಗೆ ಒಳಗಾಗುವ ಸಾಧ್ಯತೆ ಇದೆ
  • ನಿಮ್ಮ ಬಗ್ಗೆ ಜನರ ಬೆಂಬಲ, ಪ್ರೀತಿ ಕಂಡು ನಿಮಗೆ ಅಚ್ಚರಿಯಾಗಬಹುದು
  • ಆಪತ್ತಿನಲ್ಲಿರುವ ನಿಮ್ಮನ್ನು ಜನ ಕಾಪಾಡಬಹುದು
  • ನಿಮಗಿರುವ ಜನ ಬೆಂಬಲ, ಶಕ್ತಿ ಸಾಮರ್ಥ್ಯದ ಬಗ್ಗೆ ಇಂದು ಜನರೇ ಮನದಟ್ಟು ಮಾಡಬಹುದು
  • ಮೃತ್ಯುಂಜಯನನ್ನು ಪ್ರಾರ್ಥಿಸಿ

ಮಿಥುನ

  • ನೀವು ಯಾವ ಕೆಲಸವನ್ನ ಸಮರ್ಪಕವಾಗಿ ನಿಭಾಯಿಸಬಲ್ಲಿರೋ ಅಂತ ಕೆಲಸ ಮಾತ್ರ ಮಾಡಿ
  • ರಾಜಕೀಯ ವ್ಯಕ್ತಿಗಳಿಗೆ ಉತ್ತಮ ಸ್ಥಾನ ಸಿಗುವ ಸಾಧ್ಯತೆ   
  • ಇಂದು ನಿರೀಕ್ಷೆ ಮೀರಿದ ಆದಾಯ ಸಾಧ್ಯತೆ 
  • ಇಂದು ಮಾತಿನ ಭರವಸೆ ಮಾತ್ರ ನೀಡಿದರೆ, ಅವಮಾನ ಸಾಧ್ಯತೆ
  • ನಿಮ್ಮ ಕೆಲಸದ ಒತ್ತಡದಿಂದ ಕುಟುಂಬ ಸದಸ್ಯರನ್ನು ನಿರ್ಲಕ್ಷ್ಯ ಮಾಡಬೇಡಿ
  • ಭವಾನಿ ದೇವಿಯನ್ನು ಪ್ರಾರ್ಥಿಸಿ

ಇದನ್ನೂ ಓದಿ: ನಿಮ್ಮ ಕೂದಲಿನ ಆರೈಕೆ ಹೇಗಿರಬೇಕು? ಸದೃಢವಾಗಿ ಬೆಳೆಯಲು ಈ ಟಿಪ್ಸ್ ಫಾಲೋ ಮಾಡಿ..

ಕಟಕ 

  • ನಿಮ್ಮ ಅಶಿಸ್ತಿನಿಂದ ಹಣ ಕೊಡುವುದನ್ನ ಕಡಿಮೆ ಮಾಡಬಹುದು
  • ವಿದ್ಯಾರ್ಥಿಗಳಿಗೆ ಪಾಕೆಟ್ ಮನಿ ನಿಂತು ಹೋಗುವ ಸಾಧ್ಯತೆ
  • ಗೃಹ ನಿರ್ವಹಣೆ ಮಾಡುವವರು ಶಿಸ್ತಿನ ಜೀವನ ನಡೆಸಬೇಕು
  • ನಿಮ್ಮ ನೌಕರಿಯ ಬಗ್ಗೆ ಹೆಚ್ಚು ಗಮನ ನೀಡದೆ ಇದ್ದರೆ ತೊಂದರೆ ಸಾಧ್ಯತೆ
  • ನಿಮ್ಮ ಶಿಸ್ತುಬದ್ಧ ಜೀವನದ ಕೊರತೆಯಿಂದ ಆರ್ಥಿಕ ಸ್ಥಿತಿ ಅಸ್ತವ್ಯಸ್ತವಾಗುವ ಸಾಧ್ಯತೆ
  • ಲಕ್ಷ್ಮಿನಾರಾಯಣನನ್ನು ಪ್ರಾರ್ಥನೆ ಮಾಡಿ

ಸಿಂಹ 

  • ನಿಮ್ಮ ವರ್ತನೆ, ಸ್ವಭಾವ ಬದಲಿಸಿಕೊಂಡರೆ ಪ್ರೀತಿ, ಅಭಿಮಾನ ಸಿಗಬಹುದು
  • ಕುಟುಂಬದವರ ಹತ್ತಿರ ಯಾವುದೇ ವ್ಯವಹಾರ ಮಾಡಬೇಡಿ
  • ಹಿರಿಯರ, ಸಾಧು-ಸಂತರ ಮಾರ್ಗದರ್ಶನ ಪಡೆದು ನಿಮ್ಮ ಸ್ವಭಾವವನ್ನು ಬದಲಿಸಿಕೊಂಡರೆ ಒಳ್ಳೆಯದು
  • ಮದುವೆ ಮಾತುಕತೆ ಇತ್ಯರ್ಥ ಆಗಲಿದೆ
  • ಕೋರ್ಟ್ ವಿವಾದಗಳು ಬಗೆಹರೆಯಲಿದೆ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ 

  • ಮನೆಯ ನವೀಕರಣ ಮತ್ತು ಆಭರಣ ಖರೀದಿಸುವ ಬಗ್ಗೆ ಮನೆಯಲ್ಲಿ ಚರ್ಚೆ ಸಾಧ್ಯತೆ
  • ಕುಟುಂಬದಲ್ಲಿ ಉತ್ತಮ ವಾತಾವರಣ ಇರುತ್ತದೆ
  • ನಿಮ್ಮ ಜೊತೆ ಭಿನ್ನಾಭಿಪ್ರಾಯ ಹೊಂದಿದವರು ಇಂದು ಸುಮ್ಮನಾಗುತ್ತಾರೆ
  • ನಿಮ್ಮ ಬುದ್ಧಿವಂತಿಕೆಯಿಂದ ಎಲ್ಲಾ ಕೆಲಸಗಳನ್ನು ಪೂರೈಸುತ್ತೀರಿ 
  • ಮಕ್ಕಳಿಂದ ಮನಸ್ಸಿಗೆ ಸಮಾಧಾನ ಸಾಧ್ಯತೆ
  • ನವಗ್ರಹರನ್ನು ಪ್ರಾರ್ಥಿಸಿ

ತುಲಾ :

  • ಸರ್ಕಾರಿ ನೌಕರರು ಉತ್ತಮ ಅವಕಾಶದಿಂದ ವಂಚಿತರಾಗಬಹುದು
  • ಆರೋಗ್ಯದಲ್ಲಿ ಅಲ್ಪ ಸ್ವಲ್ಪ ವ್ಯತ್ಯಾಸ ಕಂಡರೂ ತಕ್ಷಣ ವೈದ್ಯರ ಭೇಟಿ ಮಾಡಿ
  • ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ಹೋಗುವ ಅವಕಾಶವಿದೆ
  • ಕೆಲವರಿಗೆ ಇಂದು ಹೃದಯಕ್ಕೆ ಸಂಬಂಧಿಸಿದ ತೊಂದರೆ ಕಾಡಬಹುದು ಎಚ್ಚರ
  • ಇಂದು ವಿದ್ಯಾರ್ಥಿಗಳಿಗೆ ಯಶಸ್ಸಿನ ದಿನ, ಸೂರ್ಯನನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  • ನೌಕರಿಯ ಭದ್ರತೆಯ ಬಗ್ಗೆ ಸಮಾಧಾನವಿರುತ್ತದೆ 
  • ಉದ್ಯೋಗದಲ್ಲಿ ನಿಮ್ಮ ಹಕ್ಕು ಮತ್ತು ಜವಾಬ್ದಾರಿಗಳು ಹೆಚ್ಚಾಗಬಹುದು
  • ಕೆಲವು ಸಾಮಗ್ರಿಗಳನ್ನು ಹೆಚ್ಚು ಹಣಕೊಟ್ಟು ಖರೀದಿಸುತ್ತೀರಿ
  • ಇಂದು ಮಾಡಬೇಕಾದ ಕೆಲಸವನ್ನು ನಾಳೆಗೆ ಮುಂದೂಡಬಹುದು
  • ನಿಮ್ಮ ಆರೋಗ್ಯ ಹಾಳಾಗಬಹುದು ಎಚ್ಚರವಿರಲಿ
  • ಅನ್ನಪೂರ್ಣೇಶ್ವರಿಯನ್ನು ಪ್ರಾರ್ಥಿಸಿ

ಧನುಸ್ 

  • ವಸ್ತು ಖರೀದಿಸಲು ದುಂದುವೆಚ್ಚ ಮಾಡಬೇಡಿ
  • ಆತುರಾತುರದಿಂದ ಏನಾದರೂ ಮಾಡಿದರೆ ತೊಂದರೆಯಾಗಬಹುದು
  • ಆರೋಗ್ಯದ ದೃಷ್ಟಿಯಿಂದ ಮೂಳೆ ಮತ್ತು ನರಕ್ಕೆ ಸಂಬಂಧಿಸಿದ ತೊಂದರೆಯಾಗಬಹುದು 
  • ಕಾನೂನಾತ್ಮಕವಾದ ವಿಷಯಗಳು ಎದುರಾಗಬಹುದು
  • ಹಿರಿಯರಿಗೆ ಗೌರವನ್ನು ಕೊಡಿ
  • ಅಂಬಾಭವಾನಿಯನ್ನು ಆರಾಧಿಸಿ

ಮಕರ

  • ನಿಮ್ಮನ್ನು ಬೇರೆಯವರಿಗೆ ಹೋಲಿಕೆ ಮಾಡಿಕೊಳ್ಳಬೇಡಿ
  • ನಿಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಿ
  • ಬೇರೆಯವರನ್ನು ನೋಡಿ ಹಣ ಹೂಡಿಕೆ ಮಾಡಲು ಮುಂದಾದರೆ ನಷ್ಟ 
  • ಸ್ನೇಹಿತರ ಜೊತೆ ವಾದ-ವಿವಾದಗಳು ಬೇಡ
  • ದುರ್ಗಾದೀಪ ನಮಸ್ಕಾರ ಮಾಡಿ

ಕುಂಭ

  • ನಿಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಿ
  • ಕಾನೂನಿನ ಚೌಕಟ್ಟಿನಲ್ಲಿ ನಿಮ್ಮ ವ್ಯವಹಾರ ನಡೆಯುವುದರಿಂದ ಯಶಸ್ಸು
  • ನಿಮ್ಮ ಜೀವನದಲ್ಲಿ ಸತ್ಯ ಸಾಧನೆ ಮತ್ತು ಸತ್ಯ ಶೋಧನೆ ಮುಖ್ಯವಾಗುತ್ತದೆ
  • ವಿದ್ಯಾರ್ಥಿಗಳು ಭವಿಷ್ಯದ ಬಗ್ಗೆ ಸರಿಯಾಗಿ ಚಿಂತನೆ ಮಾಡಿ
  • ಆಸ್ತಿ ಖರೀದಿ ಅಥವಾ ಮಾರಾಟದಿಂದ ಲಾಭವಾಗಬಹುದು
  • ರಾಮ ಕೃಷ್ಣ ಪರಮಹಂಸರ ಜೀವನ ಚರಿತ್ರೆ ಓದಿ

ಮೀನ 

  • ವ್ಯವಹಾರದಲ್ಲಿ ನಿಮ್ಮ ಬುದ್ಧಿವಂತಿಕೆಯಿಂದ ಕೆಲಸಗಳಾಗುತ್ತವೆ
  • ರಕ್ತದೊತ್ತಡ ಇರುವವರು ತಮ್ಮ ಆರೋಗ್ಯದ ಬಗ್ಗೆ  ಜಾಗ್ರತೆವಹಿಸಿ
  • ಎರಡೆರಡು ಕೆಲಸಗಳನ್ನು ಒಟ್ಟಿಗೆ ಮಾಡಲು ಪ್ರಯತ್ನಿಸಬೇಡಿ ಸೋಲಾಗಬಹುದು
  • ಭೂಮಿ ಅಥವಾ ಮನೆಯನ್ನು ಖರೀದಿಸುವ ಯೋಗವಿದೆ
  • ಈ ದಿನ ಜನರು ನಿಮ್ಮನ್ನು ಮೆಚ್ಚಿಕೊಳ್ಳುತ್ತಾರೆ
  • ದೇವಿಯನ್ನು ಆರಾಧಿಸಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Ganesha Chaturthi Rashi Bhavishya
Advertisment