/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಇದನ್ನೂ ಓದಿ:ಜೈಲು ಹಕ್ಕಿ ರನ್ಯಾ ರಾವ್​​ಗೆ ದೊಡ್ಡ ಆಘಾತ.. 102.55 ಕೋಟಿ ರೂಪಾಯಿ ದಂಡ!
ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು. ಭಾದ್ರಪದ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ, ಪೂರ್ವಾಷಾಡ ನಕ್ಷತ್ರ. ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.
ಮೇಷ
- ತಮ್ಮ ಬಗ್ಗೆ ಸಮರ್ಥನೆ ಮಾಡಿಕೊಳ್ಳಬೇಕಾದ ಪ್ರಸಂಗ ಬರಬಹುದು
- ನಿಮ್ಮ ತಪ್ಪಿಗೆ ಬೇರೆಯವರನ್ನ ದೂಷಿಸಬಾರದು
- ಇಂದಿನ ವಾತಾವರಣ ಸರಿಯಾಗಿರುವುದಿಲ್ಲ
- ಆಪ್ತರು ಮತ್ತು ಬಂಧುಗಳ ಜೊತೆ ಸಮಯ ಕಳೆಯುತ್ತೀರಿ
- ವ್ಯವಹಾರದ ಜೊತೆಗೆ ಘರ್ಷಣೆ ಆಗಬಹುದು
- ಮಧ್ಯಾಹ್ನದ ನಂತರ ನಿಮಗೆ ಕೋಪ ಹೆಚ್ಚಾಗಿ ಬಹಳ ಒರಟಾಗಿ ವರ್ತಿಸುವ ಸಾಧ್ಯತೆ ಎಚ್ಚರ
- ಇಂದು ನಿರೀಕ್ಷೆ ಮಾಡಿದ ಕೆಲವು ಕೆಲಸಗಳು ನಿಧಾನವಾಗಿ ಸಾಗುತ್ತದೆ
- ಪರಮೇಶ್ವರನನ್ನ ಪ್ರಾರ್ಥಿಸಿ
ವೃಷಭ
- ಪ್ರಬಾವಿ ವ್ಯಕ್ತಿ ಆಗಿದ್ದರೂ ನಿಮ್ಮ ಕಷ್ಟಕ್ಕೆ ಸಹಾಯ ಸಿಗಲ್ಲ
- ನಿಮ್ಮ ಸ್ನೇಹಿತರ ಸಹಾಯ ಈ ದಿನ ಸಿಗುವುದಿಲ್ಲ
- ಶಾಸ್ತ್ರೀಯ ಸಂಗೀತ ಕೇಳಿ ಮನಸ್ಸಿಗೆ ಸಮಾಧಾನ ತಂದುಕೊಳ್ಳಿ
- ಇಂದು ಬೇರೆ ಯಾರಿಂದಲೂ ಸಹಾಯ ನಿರೀಕ್ಷಿಸಬೇಡಿ
- ವೃತ್ತಿಯನ್ನು ಬಹಳ ಗಂಭೀರವಾಗಿ ಪರಿಗಣಿಸದಿದ್ದರೆ ಸಂಕಷ್ಟಕ್ಕೆ ಸಿಲುಕಬಹುದು
- ಇಂದು ಕಾಲಿನ ಸಮಸ್ಯೆ ಕಾಡಬಹುದು
- ಹಳೆಯ ಸಾಲ ಅಥವಾ ಬಾಕಿ ತೀರಿಸಲು ಕೂಡಿಟ್ಟ ಹಣ ಖರ್ಚಾಗಬಹುದು
- ಇಂದು ನೌಕರರಿಗೆ ಮಧ್ಯಮ ಫಲದ ದಿನ
- ಸಾಯಿಬಾಬಾರನ್ನು ಪಾರ್ಥಿಸಿ
ಮಿಥುನ
- ನಿಮ್ಮ ಸಾಮರ್ಥ್ಯಕ್ಕೆ ಹಾನಿಯನ್ನುಂಟು ಮಾಡುವ ಕೆಲಸ ಮಾಡಬೇಡಿ
- ಬೇರೆಯವರ ಕೆಟ್ಟದೃಷ್ಟಿ ನಿಮ್ಮ ಕುಟುಂಬಕ್ಕೆ ತಗುಲದಂತೆ ಎಚ್ಚರಿಕೆ ವಹಿಸಿ
- ಬೇರೆಯವರ ದೃಷ್ಟಿ ನಿಮಗೆ ತಗುಲಬಹುದು ಜಾಗ್ರತೆ ವಹಿಸಿ
- ಒಂದೇ ಸಂದರ್ಭದಲ್ಲಿ ಎರಡೆರಡು ಕೆಲಸ ಮಾಡುವ ಅವಕಾಶ
- ಎರಡು ದೊಡ್ಡ ಕೆಲಸ ಒಂದೇ ಸಮಯದಲ್ಲಿ ನಿರ್ವಹಿಸುವ ಅವಕಾಶ
- ನಿಮ್ಮ ಪ್ರಗತಿಯ ಬಗ್ಗೆ ಬೇರೆಯವರ ಮುಂದೆ ಹೇಳಿಕೊಳ್ಳಬೇಡಿ
- ಇಂದು ಪ್ರತ್ಯಂಗಿರಾ ದೇವಿಯನ್ನು ಪ್ರಾರ್ಥಿಸಿ
ಕಟಕ
- ಎಲ್ಲರಿಗೂ ಬೇಸರದ ವಾತಾವರಣ ಸೃಷ್ಟಿಯಾಗಬಹುದು ಜಾಗ್ರತೆ ವಹಿಸಿ
- ಸಮಯಕ್ಕೆ ತಕ್ಕಂತೆ ನಿಮ್ಮ ಸ್ವಭಾವ, ನಡವಳಿಕೆ ಬದಲಾಯಿಸಿಕೊಂಡರೆ ಒಳ್ಳೆಯದು
- ನಿಮಗೆ ಲಾಭದ ದಿನ ಆದರೆ ಮನೆಯ ಹಿರಿಯರಿಗೆ ಆರೋಗ್ಯ ಸಮಸ್ಯೆ ಕಾಡಬಹುದು
- ಮಹತ್ತರವಾದ ಕೆಲಸಗಳಿದ್ದರೆ ಮಧ್ಯಾಹ್ನ 3.30 ರಿಂದ 6.00 ಗಂಟೆಯೊಳಗೆ ಮುಗಿಸಿಕೊಳ್ಳಿ
- ಕುಟುಂಬದಲ್ಲಿ ಸಂತೋಷದ ವಾತಾವರಣ ಇರುತ್ತದೆ
- ಅಮೃತ ಮೃತ್ಯುಂಜಯನ ಪ್ರಾರ್ಥಿಸಿ
ಸಿಂಹ
- ಯಾವುದೇ ಕಾರಣಕ್ಕೂ ಗಲಾಟೆ ಬೇಡ, ತಾಳ್ಮೆ ಪರೀಕ್ಷೆಯ ಸಮಯವಾಗಿರುತ್ತದೆ
- ನಿಮ್ಮ ಭಾವನೆಗಳಿಗೆ ಸಮಯ ಕೊಡಿ
- ಸಮಸ್ಯೆಗಳನ್ನ ನಿಧಾನವಾಗಿ ಆಲೋಚಿಸಿ ಬುದ್ಧಿವಂತಿಕೆಯಿಂದ ಬಗೆಹರಿಸಿಕೊಳ್ಳಿ
- ಇಂದು ಜಾಗ್ರತೆಯಿಂದ ವರ್ತಿಸಿ ಶಾಂತಿ, ಸಮಾಧಾನಗಳೇ ಈ ದಿನಕ್ಕೆ ಔಷಧಿ
- ನೀವು ಹವ್ಯಾಸವನ್ನು ವೃತ್ತಿಯಾಗಿ ಸ್ವೀಕರಿಸುವ ಸಾಧ್ಯತೆ
- ಈ ದಿನ ಸಮಸ್ಯೆಯ ದಿನವೆಂದೇ ಹೇಳಬಹುದು
- ಮಹಾಕಾಳಿಯನ್ನು ಆರಾಧಿಸಿ
ಕನ್ಯಾ
- ಹಣದ ಸಮಸ್ಯೆಗಳಿದ್ದರೆ ಈ ದಿನ ಬಗೆಹರಿಯುವ ಸಾಧ್ಯತೆ
- ಇಂದು ಬೇರೆಯವರ ಸಹಾಯ ದೊರೆಯುತ್ತದೆ
- ವಿದ್ಯಾರ್ಥಿಗಳಿಗೆ ಹೆಚ್ಚಿನ ಅಭ್ಯಾಸದ ಬಗ್ಗೆ ಮನಸ್ಸಿರುವುದಿಲ್ಲ
- ವಿದ್ಯಾರ್ಥಿಗಳಿಗೆ ಕಲಿತ ವಿದ್ಯೆ ಸಾಕು ಎಂಬ ಮನೋಭಾವ ಬರಬಹುದು ಗಮನವಿರಲಿ
- ನೌಕರರು ತಮ್ಮ ಕೆಲಸ ಮುಗಿಸಿ ಮನೆಯ ಕೆಲಸವನ್ನು ನಿರ್ವಹಿಸುವ ಸಂದರ್ಭ ಬರಬಹುದು
- ಇಂದು ಮಧ್ಯಾಹ್ನ ನಂತರ ಉತ್ತಮವಾದ ದಿನ
- ತಮ್ಮ ಕೆಲಸದ ಬಗ್ಗೆ ಆತ್ಮ ವಿಶ್ವಾಸ ಮೂಡುತ್ತದೆ
- ಮಾರ್ಕೆಟಿಂಗ್ ಮಾಡುವವರಿಗೆ ಲಾಭದ ದಿನ
- ಅಯ್ಯಪ್ಪ ಸ್ವಾಮಿ ಪ್ರಾರ್ಥನೆ ಮಾಡಿ
ತುಲಾ
- ಇವರಿಗೆ ಗೌರವ, ಸನ್ಮಾನ, ಪುರಸ್ಕಾರಗಳು ಸಿಗುವ ದಿನ
- ಮನೆ ಮತ್ತು ನೌಕರಿಯಲ್ಲಿ ವಿಶೇಷ ಗೌರವ, ಪುರಸ್ಕಾರಗಳಿಗೆ ಭಾಜನರಾಗುತ್ತೀರಿ
- ಇಂದು ಭಾಷಾ ಪ್ರವೀಣರಿಗೆ ಶುಭ ದಿನ
- ನಿಮ್ಮ ಕೆಲಸದಲ್ಲಿ ಜಾಗ್ರತೆಯಿದ್ದರೂ ಅದನ್ನು ಸಾಬೀತು ಪಡಿಸಬೇಕಾಗುತ್ತದೆ
- ನೌಕರರಿಗೆ ಮೇಲಾಧಿಕಾರಿಗಳ ಬೆಂಬಲ ದೊರೆತು ಕೆಲಸದಲ್ಲಿ ಉತ್ಸಾಹ ಹೆಚ್ಚಾಗುವ ದಿನ
- ವೈದ್ಯಕೀಯ ವಿದ್ಯಾರ್ಥಿಗಳು ಬೇಸರ ಮಾಡಿಕೊಳ್ಳದೆ ತಮ್ಮ ವ್ಯಾಸಂಗದಲ್ಲಿ ಪರಿಶ್ರಮ ಪಡಬೇಕಾದ ದಿನ
- ನಾವು ಮಾಡದೇ ಇರುವ ತಪ್ಪಿಗೆ ಬೇಸರ ಪಡಬೇಕಾಗಬಹುದು ಜಾಗ್ರತೆ
- ಆಂಜನೇಯನನ್ನು ಪ್ರಾರ್ಥಿಸಿ
ವೃಶ್ಚಿಕ
- ಧನಾಗಮನದಿಂದ ನಿಮ್ಮ ಯೋಜನೆ ಬೇರೆ ರೂಪ ಪಡೆದುಕೊಳ್ಳಬಹುದು
- ಜಾಗದ ಖರೀದಿಯ ಬಗ್ಗೆ ಹೆಚ್ಚು ಒಲವು ತೋರಬಹುದಾದ ದಿನ
- ವ್ಯಾವಹಾರಿಕವಾಗಿ ಜರುಗುವ ಕೆಲವು ಸಂಘರ್ಷಗಳನ್ನು ಬಗೆಹರಿಸಬೇಕಾಗಬಹುದು
- ಹಲವು ವಸ್ತುಗಳ ಆಮದು ಮಾಡಿಕೊಳ್ಳುವ ವಿಚಾರದಲ್ಲಿ ಒಡಂಬಡಿಕೆಗಳನ್ನ ಮಾಡಿಕೊಳ್ಳುವ ಸಾಧ್ಯತೆ
- ಈ ದಿನ ತುಂಬಾ ಓಡಾಟ, ಒತ್ತಡಗಳಿರುತ್ತದೆ
- ಕಾನೂನಿಗೆ ಸಂಬಂಧಿಸಿದ ವಿಚಾರದಲ್ಲಿ ಸ್ವಲ್ಪ ಜಾಗ್ರತೆ ವಹಿಸಬೇಕಾಗುತ್ತದೆ
- ಮನೆಯಲ್ಲಿ ಸಾಕು ಪ್ರಾಣಿಗಳಿದ್ದರೆ ಜಾಗ್ರತೆ ವಹಿಸಿ
- ವ್ಯಾಪಾರಸ್ಥರಿಗೆ ಆದಾಯ ಹೆಚ್ಚಾಗುವ ಸೂಚನೆಗಳಿವೆ
- ಕಾಲಭೈರವನನ್ನು ಆರಾಧನೆ ಮಾಡಿ
ಧನುಸ್
- ಅಣ್ಣ ತಮ್ಮಂದಿರೊಂದಿಗೆ ಮಾತಿನ ಘರ್ಷಣೆ ನಡೆಯಬಹುದು
- ಮನೆಯಲ್ಲಿ ಮಕ್ಕಳ ಅಭ್ಯುದಯ ಬಹಳ ಚೆನ್ನಾಗಿರುವುದರಿಂದ ತೃಪ್ತಿ ಸಿಗುತ್ತದೆ
- ಈಗಾಗಲೇ ಆರಂಭಿಸಿದ ಕೆಲಸದಲ್ಲಿ ಯಶಸ್ಸನ್ನು ಕಾಣುತ್ತೀರಿ
- ಆಲಸ್ಯವನ್ನು ಕಡಿಮೆ ಮಾಡಿ ಚುರುಕಾಗಬೇಕಾಗುತ್ತದೆ
- ಯಾವುದೇ ಕೆಲಸಗಳನ್ನು ನಾಳೆಗೆ ಮುಂದೂಡಬೇಡಿ ನಷ್ಟ ಆಗಬಹುದು
- ತಂದೆ-ತಾಯಿಗೆ ಆರೋಗ್ಯ ಸಮಸ್ಯೆ ಕಾಡಬಹುದು ಜಾಗ್ರತೆ
- ಜಗಳ ಬೇಡ ಮೌನಕ್ಕೆ ಶರಣಾಗಿ
- ಕುಲದೇವತಾ ಆರಾಧನೆ ಮಾಡಿ
ಮಕರ
- ಈ ರಾಶಿಯಲ್ಲಿ ಜನಿಸಿದವರಿಗೆ ತಂದೆ-ತಾಯಿಯವರ ಕಡೆಯಿಂದ ಶುಭ ಸುದ್ದಿ ಸಿಗಲಿದೆ
- ಇಂದು ಅವಿವಾಹಿತರಿಗೆ ಉತ್ತಮ ದಿನ
- ವಿವಾಹ ವಿಚಾರಗಳು ಕೈಗೂಡಬಹುದು
- ಮನೆಯ ವಾತಾವರಣ ಉತ್ತಮವಾಗಿರುವ ದಿನವಾಗಿದೆ
- ನೌಕರಿಗೆ ಹೋಗುವುದನ್ನು ಬಿಟ್ಟು ಮನೆಯಲ್ಲಿ ಆನಂದವಾಗಿ ಕಾಲ ಕಳೆಯುತ್ತೀರಿ
- ವಿದ್ಯಾರ್ಥಿಗಳು ಇಂದು ಆನಂದದಲ್ಲಿರುವ ದಿನ
- ಕೃತ್ತಿಕಾ ನಕ್ಷತ್ರದಲ್ಲಿ ಜನಿಸಿದವರಿಗೆ ಈ ದಿನ ಸ್ವಲ್ಪ ತೊಂದರೆಯಾಗಬಹುದು ಜಾಗ್ರತೆ
- ಕಾರ್ತಿಕೇಯನನ್ನು ಆರಾಧಿಸಿ
ಕುಂಭ
- ಮನೆಗೆ ಅತಿಥಿಗಳ ಆಗಮನದಿಂದ ಸ್ವಲ್ಪ ಸಮಾಧಾನ ಸಿಗುತ್ತದೆ
- ದಿನಚರಿ ಸಾಯಂಕಾಲದ ವೇಳೆಗೆ ಸ್ವಲ್ಪ ಅಸ್ತವ್ಯಸ್ತವಾಗಬಹುದು
- ಚಿಕ್ಕ ಮಕ್ಕಳು ಸಂತೋಷದಿಂದ ಕಾಲ ಕಳೆಯುವ ಸಮಯವಾಗಿರುತ್ತೆ
- ಹಣದ ವಿಚಾರದಲ್ಲಿ ಸ್ವಲ್ಪ ಚಿಂತೆಯಿರುತ್ತದೆ
- ಮಧ್ಯಾಹ್ನದ ನಂತರ ಸ್ವಲ್ಪ ಆಲಸ್ಯ ಕಾಡಬಹುದು
- ವಿದ್ಯಾರ್ಥಿಗಳಿಗೆ ವಿಶೇಷವಾಗಿ ಮಾನಸಿಕ ಸಮಾಧಾನವಿರುವುದಿಲ್ಲ
- ಅನಿವಾರ್ಯ ಕಾರಣಗಳಿಗೆ ಸಾಲವನ್ನು ಮಾಡಬೇಕಾಗಬಹುದು
- ಮಾಧ್ಯಮಗಳಲ್ಲಿ ಕೆಲಸ ಮಾಡುವವರಿಗೆ ಶುಭದಿನ
- ಧರ್ಮಸ್ಥಳ ಮಂಜುನಾಥನನ್ನು ಆರಾಧಿಸಿ
ಮೀನ
- ವ್ಯವಹಾರದ ದೃಷ್ಠಿಯಿಂದ ದೂರ ಪ್ರಯಾಣ ಮಾಡಬಹುದು
- ಮನೆಯವರು ನಿಮ್ಮ ಪ್ರಗತಿಯ ವಿಚಾರವನ್ನು ಕೇಳಿ ಬಹಳ ಸಂತೋಷ ಪಡುತ್ತಾರೆ
- ವಿಕಲ ಚೇತನರು ರಸ್ತೆಯಲ್ಲಿ ಹೋಗುವಾಗ ಜಾಗ್ರತೆ ವಹಿಸಿ
- ಸರಿಯಾದ ಉಪಯೋಗ ಮಾಡಿಕೊಂಡು ಲಾಭವನ್ನು ಪಡೆಯಬಹುದು
- ಮನಸ್ಸಿಗೆ ಆನಂದ ಉಂಟಾಗುವ ದಿನವಾಗಿರುತ್ತದೆ
- ಒಟ್ಟಾರೆ ಈ ದಿನ ನಿಮಗೆ ಶುಭದಿನ
- ನಿಮ್ಮ ವಿದ್ಯೆ-ಬುದ್ಧಿಗೂ ಮೀರಿದ ಹಲವು ಅವಕಾಶಗಳು ನಿಮ್ಮದಾಗುತ್ತವೆ
- ಹಣ ಹೂಡಿಕೆ ಮಾಡಲು ಹೊಸ ಆಲೋಚನೆಗಳು ನಿಮ್ಮನ್ನು ಹುಡುಕಿಕೊಂಡು ಬರುವ ದಿನ
- ಈ ದಿನ ಸಂತೋಷದಿಂದ ಆರಂಭವಾಗುತ್ತದೆ
- ಪರಮೇಶ್ವರನನ್ನು ಪ್ರಾರ್ಥಿಸಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us