ಹಣ ಬರುವ ದಿನ ಇವತ್ತು, ಆಸೆ ಈಡೇರಲಿದೆ -ನಿಮ್ಮ ರಾಶಿ ಭವಿಷ್ಯ

ನಿಮ್ಮ ಯೋಜನೆಗಳಿಂದ ಬೇರೆಯವರಿಗೆ ಉಪಕಾರವಾಗಲಿದೆ ಆದರೆ ನಿಮಗೆ ನಷ್ಟವಾಗಲಿದೆ. ನಂಬಿಕೆ ಇರುವ ವ್ಯಕ್ತಿಯೊಂದಿಗೆ ಮಾತ್ರ ವಿಷಯ ಚರ್ಚಿಸಿ, ಇದರಿಂದ ಬೇರೆಯವರು ಉಪಯೋಗವನ್ನು ಪಡೆದುಕೊಳ್ಳುವ ಸಾಧ್ಯತೆ ಎಚ್ಚರ ವಹಿಸಬೇಕು.

author-image
Ganesh Kerekuli
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಇದನ್ನೂ ಓದಿ:ಜೈಲು ಹಕ್ಕಿ ರನ್ಯಾ ರಾವ್​​ಗೆ ದೊಡ್ಡ ಆಘಾತ.. 102.55 ಕೋಟಿ ರೂಪಾಯಿ ದಂಡ!


ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು. ಭಾದ್ರಪದ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ, ಪೂರ್ವಾಷಾಡ ನಕ್ಷತ್ರ. ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ. 

ಮೇಷ

  • ತಮ್ಮ ಬಗ್ಗೆ ಸಮರ್ಥನೆ ಮಾಡಿಕೊಳ್ಳಬೇಕಾದ ಪ್ರಸಂಗ ಬರಬಹುದು
  • ನಿಮ್ಮ ತಪ್ಪಿಗೆ ಬೇರೆಯವರನ್ನ ದೂಷಿಸಬಾರದು
  • ಇಂದಿನ ವಾತಾವರಣ ಸರಿಯಾಗಿರುವುದಿಲ್ಲ 
  • ಆಪ್ತರು ಮತ್ತು ಬಂಧುಗಳ ಜೊತೆ ಸಮಯ ಕಳೆಯುತ್ತೀರಿ
  • ವ್ಯವಹಾರದ ಜೊತೆಗೆ ಘರ್ಷಣೆ ಆಗಬಹುದು
  • ಮಧ್ಯಾಹ್ನದ ನಂತರ ನಿಮಗೆ ಕೋಪ ಹೆಚ್ಚಾಗಿ ಬಹಳ ಒರಟಾಗಿ ವರ್ತಿಸುವ ಸಾಧ್ಯತೆ ಎಚ್ಚರ
  • ಇಂದು ನಿರೀಕ್ಷೆ ಮಾಡಿದ ಕೆಲವು ಕೆಲಸಗಳು ನಿಧಾನವಾಗಿ ಸಾಗುತ್ತದೆ 
  • ಪರಮೇಶ್ವರನನ್ನ ಪ್ರಾರ್ಥಿಸಿ

ವೃಷಭ 

  • ಪ್ರಬಾವಿ ವ್ಯಕ್ತಿ ಆಗಿದ್ದರೂ ನಿಮ್ಮ ಕಷ್ಟಕ್ಕೆ ಸಹಾಯ ಸಿಗಲ್ಲ
  • ನಿಮ್ಮ ಸ್ನೇಹಿತರ ಸಹಾಯ ಈ ದಿನ ಸಿಗುವುದಿಲ್ಲ 
  • ಶಾಸ್ತ್ರೀಯ ಸಂಗೀತ ಕೇಳಿ ಮನಸ್ಸಿಗೆ ಸಮಾಧಾನ ತಂದುಕೊಳ್ಳಿ
  • ಇಂದು ಬೇರೆ ಯಾರಿಂದಲೂ ಸಹಾಯ ನಿರೀಕ್ಷಿಸಬೇಡಿ
  • ವೃತ್ತಿಯನ್ನು ಬಹಳ ಗಂಭೀರವಾಗಿ ಪರಿಗಣಿಸದಿದ್ದರೆ ಸಂಕಷ್ಟಕ್ಕೆ ಸಿಲುಕಬಹುದು
  • ಇಂದು ಕಾಲಿನ ಸಮಸ್ಯೆ ಕಾಡಬಹುದು
  • ಹಳೆಯ ಸಾಲ ಅಥವಾ ಬಾಕಿ ತೀರಿಸಲು ಕೂಡಿಟ್ಟ ಹಣ ಖರ್ಚಾಗಬಹುದು
  • ಇಂದು ನೌಕರರಿಗೆ ಮಧ್ಯಮ ಫಲದ ದಿನ
  • ಸಾಯಿಬಾಬಾರನ್ನು ಪಾರ್ಥಿಸಿ

ಮಿಥುನ 

  • ನಿಮ್ಮ ಸಾಮರ್ಥ್ಯಕ್ಕೆ ಹಾನಿಯನ್ನುಂಟು ಮಾಡುವ ಕೆಲಸ ಮಾಡಬೇಡಿ
  • ಬೇರೆಯವರ ಕೆಟ್ಟದೃಷ್ಟಿ ನಿಮ್ಮ ಕುಟುಂಬಕ್ಕೆ ತಗುಲದಂತೆ ಎಚ್ಚರಿಕೆ ವಹಿಸಿ
  • ಬೇರೆಯವರ ದೃಷ್ಟಿ ನಿಮಗೆ ತಗುಲಬಹುದು ಜಾಗ್ರತೆ ವಹಿಸಿ 
  • ಒಂದೇ ಸಂದರ್ಭದಲ್ಲಿ ಎರಡೆರಡು ಕೆಲಸ ಮಾಡುವ ಅವಕಾಶ 
  • ಎರಡು ದೊಡ್ಡ ಕೆಲಸ ಒಂದೇ ಸಮಯದಲ್ಲಿ ನಿರ್ವಹಿಸುವ ಅವಕಾಶ
  • ನಿಮ್ಮ ಪ್ರಗತಿಯ ಬಗ್ಗೆ ಬೇರೆಯವರ ಮುಂದೆ ಹೇಳಿಕೊಳ್ಳಬೇಡಿ
  • ಇಂದು ಪ್ರತ್ಯಂಗಿರಾ ದೇವಿಯನ್ನು ಪ್ರಾರ್ಥಿಸಿ

ಕಟಕ

  • ಎಲ್ಲರಿಗೂ ಬೇಸರದ ವಾತಾವರಣ ಸೃಷ್ಟಿಯಾಗಬಹುದು ಜಾಗ್ರತೆ ವಹಿಸಿ
  •  ಸಮಯಕ್ಕೆ ತಕ್ಕಂತೆ ನಿಮ್ಮ ಸ್ವಭಾವ, ನಡವಳಿಕೆ ಬದಲಾಯಿಸಿಕೊಂಡರೆ ಒಳ್ಳೆಯದು
  •  ನಿಮಗೆ ಲಾಭದ ದಿನ ಆದರೆ ಮನೆಯ ಹಿರಿಯರಿಗೆ ಆರೋಗ್ಯ ಸಮಸ್ಯೆ ಕಾಡಬಹುದು
  •  ಮಹತ್ತರವಾದ ಕೆಲಸಗಳಿದ್ದರೆ ಮಧ್ಯಾಹ್ನ 3.30 ರಿಂದ 6.00 ಗಂಟೆಯೊಳಗೆ ಮುಗಿಸಿಕೊಳ್ಳಿ
  •  ಕುಟುಂಬದಲ್ಲಿ ಸಂತೋಷದ ವಾತಾವರಣ ಇರುತ್ತದೆ 
  •  ಅಮೃತ ಮೃತ್ಯುಂಜಯನ ಪ್ರಾರ್ಥಿಸಿ


ಸಿಂಹ 

  • ಯಾವುದೇ ಕಾರಣಕ್ಕೂ ಗಲಾಟೆ ಬೇಡ, ತಾಳ್ಮೆ ಪರೀಕ್ಷೆಯ ಸಮಯವಾಗಿರುತ್ತದೆ
  •  ನಿಮ್ಮ ಭಾವನೆಗಳಿಗೆ ಸಮಯ ಕೊಡಿ
  •  ಸಮಸ್ಯೆಗಳನ್ನ  ನಿಧಾನವಾಗಿ ಆಲೋಚಿಸಿ ಬುದ್ಧಿವಂತಿಕೆಯಿಂದ ಬಗೆಹರಿಸಿಕೊಳ್ಳಿ
  • ಇಂದು ಜಾಗ್ರತೆಯಿಂದ ವರ್ತಿಸಿ ಶಾಂತಿ, ಸಮಾಧಾನಗಳೇ ಈ ದಿನಕ್ಕೆ  ಔಷಧಿ
  •  ನೀವು ಹವ್ಯಾಸವನ್ನು ವೃತ್ತಿಯಾಗಿ ಸ್ವೀಕರಿಸುವ ಸಾಧ್ಯತೆ
  •  ಈ ದಿನ ಸಮಸ್ಯೆಯ ದಿನವೆಂದೇ ಹೇಳಬಹುದು
  •  ಮಹಾಕಾಳಿಯನ್ನು ಆರಾಧಿಸಿ


ಕನ್ಯಾ 

  • ಹಣದ ಸಮಸ್ಯೆಗಳಿದ್ದರೆ ಈ ದಿನ ಬಗೆಹರಿಯುವ ಸಾಧ್ಯತೆ
  •  ಇಂದು ಬೇರೆಯವರ ಸಹಾಯ ದೊರೆಯುತ್ತದೆ
  •  ವಿದ್ಯಾರ್ಥಿಗಳಿಗೆ ಹೆಚ್ಚಿನ ಅಭ್ಯಾಸದ ಬಗ್ಗೆ ಮನಸ್ಸಿರುವುದಿಲ್ಲ
  •  ವಿದ್ಯಾರ್ಥಿಗಳಿಗೆ ಕಲಿತ ವಿದ್ಯೆ ಸಾಕು ಎಂಬ ಮನೋಭಾವ ಬರಬಹುದು ಗಮನವಿರಲಿ
  •  ನೌಕರರು ತಮ್ಮ ಕೆಲಸ ಮುಗಿಸಿ ಮನೆಯ ಕೆಲಸವನ್ನು ನಿರ್ವಹಿಸುವ ಸಂದರ್ಭ ಬರಬಹುದು
  •  ಇಂದು ಮಧ್ಯಾಹ್ನ ನಂತರ ಉತ್ತಮವಾದ ದಿನ
  •  ತಮ್ಮ ಕೆಲಸದ ಬಗ್ಗೆ ಆತ್ಮ ವಿಶ್ವಾಸ ಮೂಡುತ್ತದೆ
  •  ಮಾರ್ಕೆಟಿಂಗ್ ಮಾಡುವವರಿಗೆ ಲಾಭದ ದಿನ
  •  ಅಯ್ಯಪ್ಪ ಸ್ವಾಮಿ ಪ್ರಾರ್ಥನೆ ಮಾಡಿ

ತುಲಾ 

  • ಇವರಿಗೆ ಗೌರವ, ಸನ್ಮಾನ, ಪುರಸ್ಕಾರಗಳು ಸಿಗುವ ದಿನ
  •  ಮನೆ ಮತ್ತು ನೌಕರಿಯಲ್ಲಿ ವಿಶೇಷ ಗೌರವ, ಪುರಸ್ಕಾರಗಳಿಗೆ ಭಾಜನರಾಗುತ್ತೀರಿ
  •  ಇಂದು ಭಾಷಾ ಪ್ರವೀಣರಿಗೆ ಶುಭ ದಿನ
  •  ನಿಮ್ಮ ಕೆಲಸದಲ್ಲಿ ಜಾಗ್ರತೆಯಿದ್ದರೂ ಅದನ್ನು ಸಾಬೀತು ಪಡಿಸಬೇಕಾಗುತ್ತದೆ
  •  ನೌಕರರಿಗೆ ಮೇಲಾಧಿಕಾರಿಗಳ ಬೆಂಬಲ ದೊರೆತು ಕೆಲಸದಲ್ಲಿ ಉತ್ಸಾಹ ಹೆಚ್ಚಾಗುವ ದಿನ
  •  ವೈದ್ಯಕೀಯ ವಿದ್ಯಾರ್ಥಿಗಳು ಬೇಸರ ಮಾಡಿಕೊಳ್ಳದೆ ತಮ್ಮ ವ್ಯಾಸಂಗದಲ್ಲಿ ಪರಿಶ್ರಮ ಪಡಬೇಕಾದ ದಿನ
  •  ನಾವು ಮಾಡದೇ ಇರುವ ತಪ್ಪಿಗೆ ಬೇಸರ ಪಡಬೇಕಾಗಬಹುದು ಜಾಗ್ರತೆ
  •  ಆಂಜನೇಯನನ್ನು ಪ್ರಾರ್ಥಿಸಿ

ವೃಶ್ಚಿಕ

  • ಧನಾಗಮನದಿಂದ ನಿಮ್ಮ ಯೋಜನೆ ಬೇರೆ ರೂಪ ಪಡೆದುಕೊಳ್ಳಬಹುದು
  • ಜಾಗದ ಖರೀದಿಯ ಬಗ್ಗೆ ಹೆಚ್ಚು ಒಲವು ತೋರಬಹುದಾದ ದಿನ 
  • ವ್ಯಾವಹಾರಿಕವಾಗಿ ಜರುಗುವ ಕೆಲವು ಸಂಘರ್ಷಗಳನ್ನು ಬಗೆಹರಿಸಬೇಕಾಗಬಹುದು
  • ಹಲವು ವಸ್ತುಗಳ ಆಮದು ಮಾಡಿಕೊಳ್ಳುವ ವಿಚಾರದಲ್ಲಿ ಒಡಂಬಡಿಕೆಗಳನ್ನ ಮಾಡಿಕೊಳ್ಳುವ ಸಾಧ್ಯತೆ
  • ಈ ದಿನ ತುಂಬಾ ಓಡಾಟ, ಒತ್ತಡಗಳಿರುತ್ತದೆ
  •  ಕಾನೂನಿಗೆ ಸಂಬಂಧಿಸಿದ ವಿಚಾರದಲ್ಲಿ ಸ್ವಲ್ಪ ಜಾಗ್ರತೆ ವಹಿಸಬೇಕಾಗುತ್ತದೆ
  •  ಮನೆಯಲ್ಲಿ ಸಾಕು ಪ್ರಾಣಿಗಳಿದ್ದರೆ ಜಾಗ್ರತೆ ವಹಿಸಿ
  •  ವ್ಯಾಪಾರಸ್ಥರಿಗೆ ಆದಾಯ ಹೆಚ್ಚಾಗುವ ಸೂಚನೆಗಳಿವೆ
  • ಕಾಲಭೈರವನನ್ನು ಆರಾಧನೆ ಮಾಡಿ

ಧನುಸ್

  • ಅಣ್ಣ ತಮ್ಮಂದಿರೊಂದಿಗೆ ಮಾತಿನ ಘರ್ಷಣೆ ನಡೆಯಬಹುದು
  •  ಮನೆಯಲ್ಲಿ ಮಕ್ಕಳ ಅಭ್ಯುದಯ ಬಹಳ ಚೆನ್ನಾಗಿರುವುದರಿಂದ ತೃಪ್ತಿ ಸಿಗುತ್ತದೆ
  •  ಈಗಾಗಲೇ ಆರಂಭಿಸಿದ ಕೆಲಸದಲ್ಲಿ ಯಶಸ್ಸನ್ನು ಕಾಣುತ್ತೀರಿ
  •  ಆಲಸ್ಯವನ್ನು ಕಡಿಮೆ ಮಾಡಿ ಚುರುಕಾಗಬೇಕಾಗುತ್ತದೆ 
  •  ಯಾವುದೇ ಕೆಲಸಗಳನ್ನು ನಾಳೆಗೆ ಮುಂದೂಡಬೇಡಿ ನಷ್ಟ ಆಗಬಹುದು 
  •  ತಂದೆ-ತಾಯಿಗೆ ಆರೋಗ್ಯ ಸಮಸ್ಯೆ ಕಾಡಬಹುದು ಜಾಗ್ರತೆ
  •  ಜಗಳ ಬೇಡ ಮೌನಕ್ಕೆ ಶರಣಾಗಿ
  •  ಕುಲದೇವತಾ ಆರಾಧನೆ ಮಾಡಿ

ಮಕರ 

  • ಈ ರಾಶಿಯಲ್ಲಿ ಜನಿಸಿದವರಿಗೆ ತಂದೆ-ತಾಯಿಯವರ ಕಡೆಯಿಂದ ಶುಭ ಸುದ್ದಿ ಸಿಗಲಿದೆ
  •  ಇಂದು ಅವಿವಾಹಿತರಿಗೆ ಉತ್ತಮ ದಿನ
  •  ವಿವಾಹ ವಿಚಾರಗಳು ಕೈಗೂಡಬಹುದು 
  •  ಮನೆಯ ವಾತಾವರಣ ಉತ್ತಮವಾಗಿರುವ ದಿನವಾಗಿದೆ
  •  ನೌಕರಿಗೆ ಹೋಗುವುದನ್ನು ಬಿಟ್ಟು ಮನೆಯಲ್ಲಿ ಆನಂದವಾಗಿ ಕಾಲ ಕಳೆಯುತ್ತೀರಿ 
  •  ವಿದ್ಯಾರ್ಥಿಗಳು ಇಂದು ಆನಂದದಲ್ಲಿರುವ ದಿನ
  •   ಕೃತ್ತಿಕಾ ನಕ್ಷತ್ರದಲ್ಲಿ ಜನಿಸಿದವರಿಗೆ ಈ ದಿನ ಸ್ವಲ್ಪ ತೊಂದರೆಯಾಗಬಹುದು ಜಾಗ್ರತೆ
  •  ಕಾರ್ತಿಕೇಯನನ್ನು ಆರಾಧಿಸಿ

ಕುಂಭ 

  • ಮನೆಗೆ ಅತಿಥಿಗಳ ಆಗಮನದಿಂದ ಸ್ವಲ್ಪ ಸಮಾಧಾನ ಸಿಗುತ್ತದೆ
  •  ದಿನಚರಿ ಸಾಯಂಕಾಲದ ವೇಳೆಗೆ ಸ್ವಲ್ಪ ಅಸ್ತವ್ಯಸ್ತವಾಗಬಹುದು
  •  ಚಿಕ್ಕ ಮಕ್ಕಳು ಸಂತೋಷದಿಂದ ಕಾಲ ಕಳೆಯುವ ಸಮಯವಾಗಿರುತ್ತೆ
  •  ಹಣದ ವಿಚಾರದಲ್ಲಿ ಸ್ವಲ್ಪ ಚಿಂತೆಯಿರುತ್ತದೆ 
  •  ಮಧ್ಯಾಹ್ನದ ನಂತರ ಸ್ವಲ್ಪ ಆಲಸ್ಯ ಕಾಡಬಹುದು
  •  ವಿದ್ಯಾರ್ಥಿಗಳಿಗೆ ವಿಶೇಷವಾಗಿ ಮಾನಸಿಕ ಸಮಾಧಾನವಿರುವುದಿಲ್ಲ
  • ಅನಿವಾರ್ಯ ಕಾರಣಗಳಿಗೆ ಸಾಲವನ್ನು ಮಾಡಬೇಕಾಗಬಹುದು
  •  ಮಾಧ್ಯಮಗಳಲ್ಲಿ ಕೆಲಸ ಮಾಡುವವರಿಗೆ ಶುಭದಿನ
  •  ಧರ್ಮಸ್ಥಳ ಮಂಜುನಾಥನನ್ನು ಆರಾಧಿಸಿ

ಮೀನ

  • ವ್ಯವಹಾರದ ದೃಷ್ಠಿಯಿಂದ ದೂರ ಪ್ರಯಾಣ ಮಾಡಬಹುದು
  •  ಮನೆಯವರು ನಿಮ್ಮ ಪ್ರಗತಿಯ ವಿಚಾರವನ್ನು ಕೇಳಿ ಬಹಳ ಸಂತೋಷ ಪಡುತ್ತಾರೆ
  •  ವಿಕಲ ಚೇತನರು ರಸ್ತೆಯಲ್ಲಿ ಹೋಗುವಾಗ ಜಾಗ್ರತೆ ವಹಿಸಿ
  • ಸರಿಯಾದ ಉಪಯೋಗ ಮಾಡಿಕೊಂಡು ಲಾಭವನ್ನು ಪಡೆಯಬಹುದು
  • ಮನಸ್ಸಿಗೆ ಆನಂದ ಉಂಟಾಗುವ ದಿನವಾಗಿರುತ್ತದೆ
  • ಒಟ್ಟಾರೆ ಈ ದಿನ ನಿಮಗೆ ಶುಭದಿನ
  •  ನಿಮ್ಮ ವಿದ್ಯೆ-ಬುದ್ಧಿಗೂ ಮೀರಿದ ಹಲವು ಅವಕಾಶಗಳು ನಿಮ್ಮದಾಗುತ್ತವೆ
  •  ಹಣ ಹೂಡಿಕೆ ಮಾಡಲು ಹೊಸ ಆಲೋಚನೆಗಳು ನಿಮ್ಮನ್ನು ಹುಡುಕಿಕೊಂಡು ಬರುವ ದಿನ
  •  ಈ ದಿನ ಸಂತೋಷದಿಂದ ಆರಂಭವಾಗುತ್ತದೆ
  •  ಪರಮೇಶ್ವರನನ್ನು ಪ್ರಾರ್ಥಿಸಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashi Bhavishya
Advertisment