/newsfirstlive-kannada/media/media_files/2025/07/31/rashi_bhavisha-2025-07-31-22-55-03.jpg)
ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು. ಶ್ರಾವಣ ಮಾಸ, ಶುಕ್ಲಪಕ್ಷ, ಹುಣ್ಣಿಮೆ ತಿಥಿ, ಶ್ರವಣ ನಕ್ಷತ್ರ. ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.
-------
ಮೇಷ
- ಈ ದಿನ ಹಳೆಯ ತಪ್ಪು ಪುನರಾವರ್ತನೆಯಾಗಬಹುದು
- ಒಂಟಿಯಾಗಿದ್ದು ಕೆಟ್ಟ ಅಭ್ಯಾಸಗಳಿಗೆ ದಾಸರಾಗುವುದನ್ನು ತಪ್ಪಿಸಿ
- ಓದು ಕೆಲಸ ಎರಡೂ ಇರುವವರಿಗೆ ಸವಾಲಿನ ದಿನ
- ಮನೆ, ಮನ ಸಂತಸದಿಂದ ಇರುವುದಿಲ್ಲ
- ಇಂದು ಅಜೀರ್ಣ ಸಮಸ್ಯೆ ಕಾಡಬಹುದು
- ಆತ್ಮ ವಿಶ್ವಾಸ ಹೆಚ್ಚಿದರೆ ಗುರಿ ಮುಟ್ಟಬಹುದು
- ಧ್ಯಾನ ಮಾಡಿ
ವೃಷಭ
- ಪ್ರೀತಿ ಪ್ರೇಮ ವಿಚಾರದಲ್ಲಿ ಸಮಾಧಾನವಿರಬೇಕು
- ವಿನಾಕಾರಣ ತಿರುಗಾಟ ಮಾಡದಿದ್ದರೆ ಯಶಸ್ಸು ಸಿಗಲಿದೆ
- ವಿವಾಹ ವಿಚಾರ ಪ್ರಸ್ತಾಪಬೇಡ ನಿರಾಸೆಯಾಗಬಹುದು
- ಇಂದು ಸಾಲದ ವಿಚಾರ ಬೇಡ
- ಗೌರವ ಇರುವಲ್ಲಿ ಭಾಗಿಗಳಾಗಿ
- ಮನೆಯ ಅಗತ್ಯತೆಗಳನ್ನು ಗಮನಿಸಿ
- ಲಕ್ಷ್ಮೀನಾರಾಯಣರ ಅನುಗ್ರಹ ಪಡೆಯಿರಿ
ಇದನ್ನೂ ಓದಿ: ರಾಖಿ ಕಟ್ಟೋ ಮುನ್ನ ಸಹೋದರಿಯರು ಓದಲೇಬೇಕಾದ ಪ್ರಮುಖ ವಿಚಾರ ಇಲ್ಲಿದೆ..!
ಮಿಥುನ
- ವ್ಯವಹಾರ ನಷ್ಟ, ಅವಮಾನ ಆಗುವ ಸಾಧ್ಯತೆ
- ಆಸ್ತಿಯ ವಿಚಾರ ಮುಂದೆ ಮಾರಕವಾಗಬಹುದು
- ಲಾಭ ಅಥವಾ ಹಣ ತಾತ್ಕಾಲಿಕ, ಹಿಂದಿನ ಪರಿಸ್ಥಿತಿ ಜ್ಞಾಪಿಸಿಕೊಳ್ಳಿ
- ಬಂಧುಗಳಿಂದಲೇ ನಿಮ್ಮ ವೃತ್ತಿಗೆ ಪೆಟ್ಟು ಬೀಳಬಹುದು
- ನಿಮ್ಮ ಸ್ವಭಾವ ಬದಲಿಸಿಕೊಳ್ಳಿ
- ದಾಂಪತ್ಯದಲ್ಲಿ ಬೇರೆಯವರ ಆಗಮನದಿಂದ ಬೇಸರ ಆಗಬಹುದು
- ಕುಟುಂಬದ ಮೂಲ ದೇವರ ಪ್ರಾರ್ಥಿಸಿ
ಕಟಕ
- ಹಣದ ವಿಚಾರಕ್ಕೆ ತೊಂದರೆ ಬೇಸರ ಆಗಬಹುದು
- ಮಧ್ಯಾಹ್ನದ ನಂತರ ದುಃಖ ಹೆಚ್ಚಾಗಲಿದೆ
- ಕುಟುಂಬದ ಸ್ತ್ರೀಯರ ವಿಚಾರದಲ್ಲಿ ಬೇಸರ ಆಗಬಹುದು
- ಈ ದಿನ ಆಲಸ್ಯ ದೂರಮಾಡಿಕೊಳ್ಳಿ
- ಕೆಲಸದಲ್ಲಿ ಉತ್ಸಾಹವಿಲ್ಲದೆ ಎಡವಟ್ಟು ಮಾಡಿಕೊಳ್ಳಬಹುದು
- ಇಂದು ನಿಮಗೆ ಆರೋಗ್ಯ ಸುಧಾರಿಸುತ್ತದೆ
- ಕುಬೇರ ಲಕ್ಷ್ಮೀಯನ್ನು ಅರ್ಚಿಸಿ
ಇದನ್ನೂ ಓದಿ: ಬ್ರೆಡ್, ಬಿಸ್ಕತ್, ಚಿಪ್ಸ್ ಸೇರಿ ಇತರೆ ಪ್ಯಾಕೆಟ್ಗಳ ಮೇಲೆ ಈ ಕಲರ್ ಚಿಹ್ನೆ, ಡಾಟ್ ಇದ್ರೆ ಏನ್ ಅರ್ಥ?
ಸಿಂಹ
- ಈ ದಿನ ತುಂಬಾ ಖರ್ಚು, ಅತಿಯಾದ ಮಾತಿನಿಂದ ತೊಂದರೆಯಾಗಬಹುದು
- ಸಂಜೆಗೆ ಬೇಸರದಿಂದ ಒಂಟಿತನ ಕಾಡಬಹುದು
- ಮಾಡಿರುವ ತಪ್ಪಿಗೆ ದಂಡ, ಶಿಕ್ಷೆಗೆ ಅವಕಾಶವಿದೆ
- ನಿಮ್ಮ ಪರಿಚಯ, ಬಂಧುತ್ವ ಎಲ್ಲಾ ವ್ಯರ್ಥ ಆಗಬಹುದು
- ಕುಟುಂಬದ ಸದಸ್ಯರು ಆತಂಕದಲ್ಲಿರುತ್ತಾರೆ
- ಇಂದು ನಿಮಗೆ ಯಾರ ಸಹಾಯವೂ ದೊರೆಯುವುದಿಲ್ಲ
- ಅನಗತ್ಯ ಕೆಲಸಗಳಿಂದ ದೂರವಿರಬೇಕು
- ತಿರುಪತಿ ವೆಂಕಟೇಶ್ವರನ ಪ್ರಾರ್ಥನೆ ಮಾಡಿ
ಕನ್ಯಾ
- ದಾಂಪತ್ಯದಲ್ಲಿ ಬಿರುಕು ಬರದಂತೆ ಗಮನಿಸಿ
- ಉತ್ತಮ ಹೆಸರುಗಳಿಸಲು ಸದಾವಕಾಶ ತಾನಾಗಿಯೇ ಬರುತ್ತದೆ
- ನಂಬಿದವರು ಸಹಾಯ ಮಾಡದಿರಬಹುದು
- ಬೇರೆಯವರ ಹಿತಕ್ಕಾಗಿ ಬಯಸುತ್ತೀರಿ ಅದರ ಬೆಲೆ ಅವರಿಗೆ ತಿಳಿಯುವುದಿಲ್ಲ
- ನಿಮ್ಮ ಶ್ರಮ ಸಾರ್ಥಕವಾದ ಭಾವವಿರುತ್ತದೆ
- ಶಿಸ್ತುಬದ್ದವಾದ ಜೀವನ, ಸಮಾಜದ ಹಿತ ನಿಮ್ಮಿಂದ ಆಗಬಹುದು
- ನವಗ್ರಹರನ್ನು ಆರಾಧಿಸಿ
ಇದನ್ನೂ ಓದಿ:ಶಾರುಖ್ ಖಾನ್ ಜತೆ ಮಾಡಿದ್ದು ಒಂದೇ ಒಂದು ಸಿನಿಮಾ.. ಈಗ 45,000 ಕೋಟಿ ರೂಪಾಯಿ ಒಡತಿ ಈ ಹೀರೋಯಿನ್!
ತುಲಾ
- ಸ್ವಭಾವ, ನಡವಳಿಕೆ ಬದಲಾವಣೆ ಮಾಡಿಕೊಳ್ಳಲು ಅವಕಾಶ
- ದುಡ್ಡಿನ ಚಿಂತೆ ನಿಮ್ಮ ಆರೋಗ್ಯವನ್ನು ಹಾಳು ಮಾಡಬಹುದು
- ಬಂಧುಗಳಲ್ಲಿ ಅವಮಾನ ಆಗುವ ಸಾಧ್ಯತೆ ಇದೆ
- ನಿಮ್ಮ ತಿರುಗಾಟ, ಅಲಂಕಾರ ಇತ್ಯಾದಿಗಳಿಗೆ ಕಡಿವಾಣ ಇರಬೇಕು
- ಈ ದಿನ ನೀವು ಮಕ್ಕಳಿಗೆ ನ್ಯಾಯ ಒದಗಿಸಿ
- ಪೂರ್ವಜನ್ಮದ ಕರ್ಮ ಎಲ್ಲವೂ ಇದ್ದು ನರಳುತ್ತೀರಿ
- ಲಕ್ಷ್ಮೀನರಸಿಂಹ ಸ್ವಾಮಿಯನ್ನು ಪ್ರಾರ್ಥಿಸಿ
ವೃಶ್ಚಿಕ
- ಸ್ವಾರ್ಥಕ್ಕಾಗಿ ಬೇರೆಯವರ ದೂಷಿಸಬಾರದು
- ವಿದ್ಯಾಭ್ಯಾಸದ ವಿಚಾರದಲ್ಲಿ ಮುನ್ನಡೆ
- ಸಾಯಂಕಾಲದ ಹೊತ್ತಿಗೆ ತಾಯಿಯಿಂದ ಸಮಾಧಾನ ಸಿಗಲಿದೆ
- ನಿಮ್ಮ ಸಮಸ್ಯೆಯನ್ನು ಮನೆ, ಸ್ನೇಹಿತರು, ಬಂಧುಗಳಲ್ಲಿ ಹೇಳಿಕೊಳ್ಳಿ
- ಮಾನಸಿಕ ನೋವಿನಿಂದ ಬಳಲುತ್ತೀರಿ
- ಸ್ನೇಹಿತೆ ಮಧ್ಯೆ ಜಗಳ ಸಂಭವ
- ತಾಯಿಯ ಪ್ರೀತಿಗೆ ಪಾತ್ರರಾಗಿರಿ
ಇದನ್ನೂ ಓದಿ:ಶಿಶು ಹುಟ್ಟಿನಿಂದ 6 ತಿಂಗಳವರೆಗೆ.. ಪೋಷಕರು ಈ ಸಲಹೆಗಳನ್ನು ಫಾಲೋ ಮಾಡಿ..
ಧನುಸ್
- ಇಂದು ಹೊಸ ವಾಹನ ಖರೀದಿ ಸಾಧ್ಯತೆ
- ಆಹಾರದಿಂದ ಸಮಸ್ಯೆ ಉಂಟಾಗಬಹುದು
- ಯಶಸ್ಸಿನ ಬಯಕೆ, ಹಣ ಹೂಡಿಕೆಯ ಚಿಂತನೆ ಕಾಡಬಹುದು
- ಧೈರ್ಯ ಕಡಿಮೆ ಇರುವುದರಿಂದ ಕೆಲಸಗಳಲ್ಲಿ ಹಿನ್ನಡೆ
- ಒಳ್ಳೆಯ ಕೆಲಸ ಮಾಡಲು ಮಧ್ಯಾಹ್ನದ ನಂತರ ಸಮಯ ಚೆನ್ನಾಗಿದೆ
- ವೃತ್ತಿಯಲ್ಲಿ ದ್ವೇಷ ಸಾಧಿಸುತ್ತೀರಿ
- ಈಶ್ವರ ಪರಿವಾರ ದೇವತೆಗಳ ಪ್ರಾರ್ಥಿಸಿ
ಮಕರ
- ವಿದೇಶ ಪ್ರಯಾಣದ ವಿಚಾರದಲ್ಲಿ ಗೊಂದಲ
- ಎಲ್ಲಾ ಕಡೆ ಅಪಮಾನ ಆಗಬಹುದು ಎಚ್ಚರಿಕೆ
- ಪ್ರೀತಿಸಿದವರಿಂದ ವಂಚನೆಯ ಸೂಚನೆ
- ಆಸೆಗಳಿಗೆ ವಿರುದ್ದ ವಾತಾವರಣ ಇರಲಿದೆ
- ನೀವು ನಂಬಿಕೆ ದ್ರೋಹಕ್ಕೆ ಪಾತ್ರರಾಗಬಹುದು
- ಮಾನಸಿಕ ಧೈರ್ಯ ನಿಮಗೆ ಮಾರ್ಗಸೂಚಿ
- ಮಾರುತಿಯನ್ನು ಪ್ರಾರ್ಥಿಸಿ
ಇದನ್ನೂ ಓದಿ: ಉರ್ಫಿ ಜಾವೇದ್ ಬ್ಯೂಟಿ ಹೇಗಿತ್ತು.. ತನ್ನ ಸೌಂದರ್ಯ, ತಾನೇ ಕೆಡಿಸಿಕೊಂಡಳಾ..?
ಕುಂಭ
- ಕುಟುಂಬದಲ್ಲಿ ಶಾಂತಿಯ ವಾತಾವರಣ
- ಗೌರವವ ಕೇಳಿ ಪಡೆಯುವುದಲ್ಲ ಎಂದು ಅರಿಯಬೇಕು
- ಕಷ್ಟಪಟ್ಟು ಕೆಲಸ ಮಾಡಿದರೆ ಜಯ ಸಾಧಿಸಬಹುದು
- ನಿಮ್ಮ ಗಮನ ನಿಮ್ಮ ಕರ್ತವ್ಯದ ಮೇಲಿರಲಿ
- ನಿಮ್ಮ ಮನಸ್ಸಿಗೆ ಒಪ್ಪದ ಕೆಲಸ ಮಾಡಬೇಡಿ
- ಅನಿರೀಕ್ಷಿತ ಸಿಹಿ ಸುದ್ದಿಯಿಂದ ಉಲ್ಲಾಸ
- ವಾಗ್ದೇವತಾ ಆರಾಧನೆ ಮಾಡಿ
ಮೀನಾ
- ಸಾಮಾಜಿಕ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ
- ಅವಿವಾಹಿತರಿಗೆ ಸಿಹಿಸುದ್ದಿ, ಅನುಮಾನ ಬೇಡ
- ನಿಮ್ಮ ನಾಯಕತ್ವದ ಸಾಮರ್ಥ್ಯವನ್ನು ಪರೀಕ್ಷಿಸಿಕೊಳ್ಳಿ
- ಪ್ರಯಾಣದಿಂದ ತೊಂದರೆಯಾಗಬಹುದು ಜಾಗ್ರತೆ ವಹಿಸಿ
- ಮನೆ ನವೀಕರಣ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆ
- ಬುದ್ಧಿವಂತರ ಸಹವಾಸದಿಂದ ಸಂತೋಷ ಸಿಗಲಿದೆ
- ಸ್ವಯಂವರ ಪಾರ್ವತಿಯನ್ನು ಪ್ರಾರ್ಥಿಸಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ