/newsfirstlive-kannada/media/media_files/2025/09/06/lunar-eclipse-2025-09-06-18-59-51.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು. ಭಾದ್ರಪದ ಮಾಸ, ಶುಕ್ಲ ಪಕ್ಷ, ಪೂರ್ಣಿಮಾ ತಿಥಿ, ಶತಭಿಷಾ ನಕ್ಷತ್ರ. ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ
ಮೇಷ
- ನೌಕರಿಯಲ್ಲಿ ತುಂಬಾ ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕಾದ ದಿನ
- ಮೇಲಾಧಿಕಾರಿಗಳ ಜೊತೆ, ಕುಟುಂಬದಲ್ಲಿ ವಿಶ್ವಾಸವನ್ನು ಹಾಗೆ ಉಳಿಸಿಕೊಳ್ಳಿ
- ಸ್ತ್ರೀಯರಿಗೆ ಶುಭಫಲವಿದ್ದರೂ ಮನೆಯ ವಾತಾವರಣ ಸರಿಯಿಲ್ಲದೆ ಬೇಸರ ಉಂಟಾಗಬಹುದು
- ಶರೀರದ ಮೇಲೆ ಆಗುವ ಗಾಯದ ಮೇಲೆ ಹೆಚ್ಚು ಗಮನಹರಿಸಿ ಚಿಕಿತ್ಸೆ ಪಡೆಯಿರಿ
- ಕೈಗೆ ಎಷ್ಟೇ ಹಣ ಬಂದರೂ ಕೈಯಲ್ಲಿ ನಿಲ್ಲುವುದಿಲ್ಲ
- ಕಬ್ಬಿಣದ ಪದಾರ್ಥಗಳಿಂದ, ವಾಹನಗಳಿಂದ ಪೆಟ್ಟು ಬೀಳಬಹುದಾದ ಸೂಚನೆಗಳಿವೆ
- ಶನೇಶ್ವರ ದೇವಾಲಯಕ್ಕೆ ಎಳ್ಳೆಣ್ಣೆ ನೀಡಿ
ವೃಷಭ
- ಸೌಂದರ್ಯ ವರ್ಧಕಗಳ ವ್ಯಾಪಾರಸ್ಥರಿಗೆ ಅಧಿಕ ಲಾಭವಿರುವ ದಿನ
- ವಿದ್ಯಾರ್ಥಿಗಳು ವಿದ್ಯಾಕ್ಷೇತ್ರದಲ್ಲಿ ಪ್ರಗತಿ ಹೊಂದುತ್ತೀರಿ
- ಪಿತ್ರಾರ್ಜಿತ ಆಸ್ತಿ ಲಾಭದ ಸೂಚನೆಗಳಿವೆ
- ಉದ್ಯೋಗದಲ್ಲಿ ಅತಂತ್ರತೆ ಇರುವಂತದ್ದು
- ಅನಗತ್ಯ ಖರ್ಚಿಗೆ ನೂರು ದಾರಿ ಎನ್ನುವಂತೆ ಹೆಚ್ಚು ದುಂದುವೆಚ್ಚವಾಗುವ ಸಾಧ್ಯತೆ
- ಬಂಧುಗಳಲ್ಲಿ ಮಾತಿಗೆ ಮಾತು ಬೆಳೆದು ನಿಷ್ಠೂರವಾಗುವ ಸಾಧ್ಯತೆಗಳಿವೆ
- ಯಾವುದೇ ರೀತಿಯ ಗೊಂದಲವಿಲ್ಲದೆ ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಮುಂದುವರೆಸಬಹುದು
- ನೌಕರರಿಗೆ ವರ್ಗಾವಣೆಯ ವಿಚಾರದಲ್ಲಿ ಸ್ವಲ್ಪ ಅಡ್ಡಿಯಾಗಬಹುದು
- ವಿಲಾಸಿ ಜೀವನಕ್ಕೆ ಹೆಚ್ಚು ಹಣ ಖರ್ಚಾಗಲಿದೆ
- ದಂಪತಿಗಳಲ್ಲಿ ವಿರಸ ಉಂಟಾಗಬಹುದು
- ಗಣಪತಿಗೆ ಬಿಳಿ ಎಕ್ಕದ ಹೂ ಮತ್ತು ಗರಿಕೆ ಸಮರ್ಪಿಸಿ
ಮಿಥುನ
- ಮರಗೆಲಸ ಮಾಡುವವರಿಗೆ ಅಧಿಕ ಲಾಭ ಸಿಗುವ ಅವಕಾಶಗಳಿವೆ
- ಅಸಹನೆಯಿಂದ ವಾದ-ವಿವಾದಗಳು ಏರ್ಪಾಟಾಗುತ್ತದೆ
- ಸ್ತ್ರೀ ವೈದ್ಯರಿಗೆ ಹೆಚ್ಚಿನ ಬೇಡಿಕೆ ಮತ್ತು ಲಾಭವಿರುವ ದಿನವಾಗಲಿದೆ
- ಮಾತಿಗೆ ಮಾತು ಬೆಳೆಯುವುದರಿಂದ ಮನಃ ಕ್ಲೇಷ ಉಂಟಾಗುತ್ತದೆ
- ಇಂದು ಅತಿ ಖರ್ಚಿನ ದಿನವಾಗಿರುತ್ತದೆ
- ಮನಸ್ಸಿಗೆ ಯಾವುದೊ ಒಂದು ಹಿಂಸೆ ಕಾಡುವ ದಿನ
- ಕೋರ್ಟ್ ಕಚೇರಿಗಳಲ್ಲಿನ ಕೇಸ್ಗಳಿಗೆ ಇಂದು ಜಯ ಸಿಗಲಿದೆ
- ಬಂಧುಗಳ ಜೊತೆಯಲ್ಲಿ ಜಗಳವಾಗಬಹುದು
- ಲಲಿತಾ ಸಹಸ್ರ ನಾಮವನ್ನು ಶ್ರವಣ ಮಾಡಿ
ಕಟಕ
- ನಿಮ್ಮ ಚಟುವಟಿಕೆಗಳ ಕಡೆಗೆ ಗಮನ ಹರಿಸಿದರೆ ಮನಸ್ಸಿಗೆ ಸಮಾಧಾನ ಸಿಗಲಿದೆ
- ಹಣದ ವಿಚಾರದಲ್ಲಿ ಮನಸ್ತಾಪ ಉಂಟಾಗುತ್ತದೆ
- ಮನಸ್ಸಿನ ನೋವನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬೇಕಾಗುವ ಸಂದರ್ಭ
- ಅಳುವುದರಿಂದ ಆಥವಾ ಬೇಸರ ಮಾಡಿಕೊಳ್ಳವುದರಿಂದ ಪ್ರಯೋಜನವಿಲ್ಲ
- ಇಂದು ನೀವು ಪ್ರಯಾಣವನ್ನು ಮುಂದೂಡಿದರೆ ಒಳ್ಳೆಯದು
- ಕುಟುಂಬದಲ್ಲಿ ಕಲಹ,ಕಿರಿಕಿರಿ,ಮನಸ್ಸಿಗೆ ಬೇಸರ ಆಗಬಹುದು
- ಅವಮಾನಕ್ಕೆ ಗುರಿಯಾಗುವ ಸಾಧ್ಯತೆಗಳು ಇದೆ
- ಶಾಸ್ತ್ರೀಯ ಸಂಗೀತವನ್ನು ಕೇಳಿ ಮನಸ್ಸಿಗೆ ಸಮಾಧಾನ ಪಡೆದುಕೊಳ್ಳಿ
ಸಿಂಹ
- ಮನೆಯವರ ಮಾತನ್ನು ಕೇಳದೆ ನೀವು ನಷ್ಟವನ್ನು ಅನುಭವಿಸುತ್ತೀರಿ
- ಕೆಲಸಗಳಲ್ಲಿ ಹಿನ್ನಡೆ ಉಂಟಾಗುವ ಸಾಧ್ಯತೆ
- ಅಕಾಲ ಭೋಜನ ವಿರೋಧಿಗಳಿಂದ ತೊಂದರೆಯಾಗಬಹುದು
- ಅಪರಿಚಿತರಿಂದ ನೀವು ಮೋಸ ಹೋಗುತ್ತೀರಿ
- ಕೆಲಸದ ಒತ್ತಡದಿಂದ ನಿದ್ರಾಭಂಗ ಆಗುವ ಸಾಧ್ಯತೆ
- ಇಂದು ಆಲಸ್ಯ ಹೆಚ್ಚಾಗಿ ಕಾಡಬಹುದಾದ ದಿನ
- ರಾತ್ರಿಯ ಹೊತ್ತಿಗೆ ನಿಮಗೆ ಜ್ಞಾನೋದಯವಾಗಬಹುದು
- ಅಷ್ಟು ಹೊತ್ತಿಗೆ ನಿಮ್ಮ ಸಮಯ ಮೀರಿ ನಷ್ಟ ಅನುಭವಿಸಿರುತ್ತೀರಿ
- ಆಕಸ್ಮಿಕ ಅವಘಡಗಳಿಂದ ಹೆಚ್ಚು ಹಣ ಖರ್ಚಾಗಬಹುದು
- ದುರ್ಗಾದೇವಿಯ ಅಷ್ಟೋತ್ತರ ಪಠಿಸಿ
ಕನ್ಯಾ
- ಮನೆಯವರಿಗೆ,ಮಕ್ಕಳಿಗೆ ಸ್ಫೂರ್ತಿದಾಯಕರಾಗಿರಬೇಕು
- ನೀವು ಮಾಡುವ ಕೆಲಸದಲ್ಲಿ ಉತ್ಸಾಹ ಇರೋದಿಲ್ಲ
- ವೈರಾಗ್ಯದ ಭಾವ ನಿಮ್ಮನ್ನು ಅಧಿಕವಾಗಿ ಕಾಡಬಹುದು
- ಈ ದಿನ ಪ್ರೀತಿ ಪಾತ್ರರನ್ನು ಭೇಟಿಯಾಗುತ್ತೀರಿ
- ನಿಮ್ಮ ನೀರಸ ಭಾವನೆಯಿಂದ ಮನೆಯವರ ಮೇಲೆ ಪ್ರಭಾವ ಬೀರಬಹುದು
- ಮನಃ ಶಾಂತಿಗಾಗಿ ದೇವರ ಪೂಜೆಗೆ ಶರಣಾಗುವಿರಿ
- ಇಂದು ವೈರಾಗ್ಯದ ಮಾತು ಬೇಡ
- ಆರೋಗ್ಯದ ಬಗ್ಗೆ ವೈದ್ಯರ ಸಲಹೆ ಪಡೆಯಿರಿ
- ಇಂದು ಆದಾಯದಷ್ಟೇ ಖರ್ಚು ಇರುತ್ತದೆ
- ಧ್ಯಾನ ಮಾಡಿ
ತುಲಾ
- ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವ ದಿನವಾಗಿದೆ
- ಮಕ್ಕಳ ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನಹರಿಸಬೇಕಾಗುತ್ತದೆ
- ಉತ್ತಮವಾದ ಬುದ್ಧಿ ಶಕ್ತಿಯನ್ನು ಪ್ರಯೋಗಿಸಿ ಶುಭ ಫಲಗಳನ್ನು ಹೊಂದುತ್ತೀರಿ
- ಹಣಕಾಸಿನ ಸ್ಥಿತಿಯು ಉತ್ತಮವಾಗಿರುತ್ತದೆ
- ನಿಮ್ಮ ವಿರೋಧಿಗಳು, ಶತ್ರುಗಳು ನಿಮ್ಮ ಬೆಳವಣಿಗೆ ನೋಡಿ ಹೊಟ್ಟೆಕಿಚ್ಚು ಪಡುತ್ತಾರೆ
- ವಿರೋಧವನ್ನು, ದ್ವೇಷವನ್ನು ಹೆಚ್ಚು ಮಾಡಿಕೊಳ್ಳುವ ಸ್ಥಿತಿ ತಲುಪುತ್ತೀರಿ
- ಅದನ್ನೆಲ್ಲಾ ಮೆಟ್ಟಿ ನಿಲ್ಲುವ ಶಕ್ತಿ ನಿಮಗೆ ಇರುತ್ತದೆ
- ಈ ದಿನ ಅಹಂಕಾರ ಬೇಡ
- ನಿಮ್ಮ ಗುರುಗಳ ಮಾರ್ಗದರ್ಶನ ಪಡೆಯಿರಿ
ವೃಶ್ಚಿಕ
- ವಿದ್ಯಾರ್ಥಿಗಳಿಗೆ ಆರೋಗ್ಯ ದೃಷ್ಟಿಯಿಂದ ಸಣ್ಣ ಪುಟ್ಟ ಹಿನ್ನಡೆ ಕಾಣುತ್ತದೆ
- ಸಾಯಂಕಾಲದಲ್ಲಿ ಕೆಲವು ವೈಯಕ್ತಿಕ ವಿಚಾರಗಳಿಗೆ ಅಡ್ಡಿಯಾಗುವ ಸಾಧ್ಯತೆಗಳು ಹೆಚ್ಚು
- ಯಾವುದೊ ನಿರ್ಧಾರ ತೆಗೆದುಕೊಂಡು ಅದರಿಂದ ಬೇಸರ ಪಡುತ್ತೀರಿ
- ಇಲ್ಲ ಸಲ್ಲದ ಅಪವಾದಗಳಿಗೆ ಗುರಿಯಾಗಬಹುದು
- ವೈದ್ಯರ ಸಲಹೆಯನ್ನು ನಿರ್ಲಕ್ಷ ಮಾಡುವುದರಿಂದ ಆರೋಗ್ಯದಲ್ಲಿ ಏರು-ಪೇರಾಗುತ್ತದೆ
- ಸರಿ ತಪ್ಪುಗಳ ಬಗ್ಗೆ ವಿವೇಚನೆ ಇಲ್ಲದೆ ವ್ಯವಹರಿಸಬೇಕಾಗುತ್ತದೆ
- ಮಕ್ಕಳಿಂದ ಸ್ವಲ್ಪ ಕಿರಿಕಿರಿ ಉಂಟಾಗಬಹುದು
- ಯತ್ನ ಕಾರ್ಯದಲ್ಲಿ ನಿಮಗೆ ಜಯಪ್ರದವಾಗಲಿದೆ
- ಇಂದು ಅತಿಯಾದ ಒತ್ತಡ ಉಂಟಾಗಬಹುದು
- ಕಠಿಣ ನಿರ್ಧಾರಗಳಿಂದ ಉತ್ತಮ ಫಲ ಸಿಗುವ ದಿನ
- ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥಿಸಿ
ಧನುಸ್ :
- ಕೃಷಿ ಕ್ಷೇತ್ರದಲ್ಲಿರುವ ವ್ಯಾಪಾರಸ್ಥರಿಗೆ ಅನುಕೂಲ ಉಂಟಾಗುತ್ತದೆ
- ಮಕ್ಕಳಿಂದ ಬೇಸರ, ನೋವು ಆಗುವ ದಿನ
- ಹಳೆಯ ವ್ಯಾಪಾರ,ವ್ಯವಹಾರಗಳಿಂದ ಧನಹಾನಿಯಾಗುವ ಸಾಧ್ಯತೆ
- ಕಮಿಷನ್ ಏಜೆಂಟರುಗಳಿಗೆ ಸ್ವಲ್ಪ ಹಿನ್ನಡೆಯಾಗಬಹುದು
- ಹಣದ ವಿಚಾರದಲ್ಲಿ ಸ್ವಲ್ಪ ಕಿರಿಕಿರಿ ಉಂಟಾಗಲಿದೆ
- ಅನಾವಶ್ಯಕವಾಗಿ ದ್ವೇಷ ಬೆಳೆಯಬಹುದಾದ ಸಾಧ್ಯತೆ
- ಈ ದಿನ ಮಿತ್ರರಲ್ಲಿ ಜಗಳ ಆಗಬಹುದು
- ವ್ಯವಹಾರದಲ್ಲಿ ನಂಬಿಕೆ ಉಳಿಸಿಕೊಳ್ಳಲು ತುಂಬಾ ಸಾಹಸ ಪಡಬೇಕಾಗುತ್ತದೆ
- ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಅನುಕೂಲವಾಗುವಂತಹ ದಿನ
- ದುರ್ಗಾ ಪ್ರಾರ್ಥನೆ ಮಾಡಿ
ಮಕರ
- ಮಹಿಳೆಯರಿಗೆ ವ್ಯಾಪಾರದ ದೃಷ್ಟಿಯಿಂದ ಮೋಸವಾಗುವ ಸಾಧ್ಯತೆಗಳಿದೆ
- ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ವಾದ-ವಿವಾದ ಮಾಡುವುದರಿಂದ ತೊಂದರೆ ಉಂಟಾಗಬಹುದು
- ಅನಗತ್ಯವಾದ ವಸ್ತುಗಳ ಖರೀದಿ ಮಾಡುವಾಗ ಜಾಗ್ರತೆ ಇರಲಿ
- ಹಿತಶತ್ರುಗಳಿಂದ ತೊಂದರೆಯಾಗುವ ಸಂಭವಗಳು ಹೆಚ್ಚಾಗಿ ಕಾಣುತ್ತದೆ
- ವಿದ್ಯಾರ್ಥಿಗಳಿಗೆ ಮುನ್ನಡೆಯಿದೆ, ಯಶಸ್ಸನ್ನು ಕಾಣಬಹುದು
- ಆರೋಗ್ಯದ ದೃಷ್ಟಿಯಿಂದ ಶುಭಕಾರ್ಯಗಳನ್ನು, ಪ್ರಯಾಣವನ್ನು ಮುಂದೂಡಿದರೆ ಒಳ್ಳೆಯದು
- ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಿ
- ಉಗ್ರ ನರಸಿಂಹನನ್ನು ಪ್ರಾರ್ಥಿಸಿ
ಕುಂಭ
- ನೌಕರಿಯಲ್ಲಿರುವವರು ವರ್ಗಾವಣೆಗೆ ಪ್ರಯತ್ನಿಸುತ್ತಿದ್ದರೆ ಅವರಿಗೆ ಅನುಕೂಲವಾಗುತ್ತದೆ
- ಕುಟುಂಬದಲ್ಲಿ ವಾಗ್ವಾದ ನಡೆಯುವಂತದ್ದು
- ದಾನ ಧರ್ಮಗಳಲ್ಲಿ ಆಸಕ್ತಿ ಬಂದರೂ ದುರಾಲೋಚನೆಗಳು ಜೊತೆ ಜೊತೆಯಾಗಿರುತ್ತದೆ
- ನ್ಯಾಯಾಂಗದಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಶುಭ ಫಲವಿದೆ
- ಪಾಲುದಾರಿಕೆ, ಹಣ ಹೂಡಿಕೆಯಲ್ಲಿ ಆರ್ಥಿಕ ಸಂಕಷ್ಟವನ್ನು ಎದುರಿಸುವ ಪರಿಸ್ಥಿತಿ
- ನಾವು ಸಹಾಯ ಮಾಡಿದವರಿಂದ ನಮಗೆ ಏನು ಅನುಕೂಲ ಅನ್ನೋ ಯೋಚನೆಗಳು ಬರುತ್ತದೆ
- ಪಲಾಪೇಕ್ಷೆ ಇಲ್ಲದೆ ಮಾಡಿರುವ ದಾನ ಸಂಪೂರ್ಣವಾದ ಫಲ ಸಿಗುತ್ತದೆ
- ಈ ದಿನ ಸಾಲವನ್ನು ತೀರಿಸುವ ಅವಕಾಶವಿರುತ್ತದೆ
- ಇಂದು ನೀವು ಋಣಬಾಧೆಯಿಂದ ಮುಕ್ತರಾಗಬಹುದು
- ವಿಷ್ಣು ಸಹಸ್ರ ನಾಮ ಪಠಿಸಿ
ಮೀನ
- ವಿದ್ಯಾರ್ಥಿಗಳು ಮನಸ್ಸನ್ನು ಕೇಂದ್ರೀಕರಿಸಿದರೆ ಹೆಚ್ಚು ಓದಲು ಅನುಕೂಲ ಆಗಲಿದೆ
- ಬೇರೆಯವರ ಮಾತಿಗೆ ಮರುಳಾಗಬೇಡಿ
- ಮಹಿಳಾ ನೌಕರರಿಗೆ ಶುಭ ಸುದ್ಧಿ
- ಹಿರಿಯರ ಮಾತಿಗೆ ಗೌರವ ಕೊಡುವುದು ಉತ್ತಮವಾಗಿರುತ್ತದೆ
- ಈ ದಿನ ಆರೋಗ್ಯದ ಬಗ್ಗೆ ಗಮನಹರಿಸಿ
- ಇಂದು ಮಕ್ಕಳಿಂದ ತೊಂದರೆಯಾಗಬಹುದು
- ನಿಮ್ಮ ತೀರ್ಮಾನವನ್ನು ಸ್ಥಿರವಾಗಿರಿಸಿಕೊಂಡರೆ ವ್ಯವಹಾರದಲ್ಲಿ ಲಾಭವಿದೆ
- ಸ್ವಭಾವದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡರೆ ಎಲ್ಲಾ ರೀತಿಯಲ್ಲಿಯೂ ಒಳ್ಳೆಯದು
- ಹಿರಿಯರ ಕೋಪಕ್ಕೆ ಒಳಗಾಗುತ್ತೀರಿ
- ಗುರುಗಳನ್ನು ಪ್ರಾರ್ಥಿಸಿ
ಇದನ್ನೂ ಓದಿ:ರಾಜ್ಯದಲ್ಲಿ 12.68 ಲಕ್ಷ ಆಕ್ರಮ ರೇಷನ್ ಕಾರ್ಡ್ ಪತ್ತೆ, 8 ಲಕ್ಷ ರೇಷನ್ ಕಾರ್ಡ್ ರದ್ದು ಸಾಧ್ಯತೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ