/newsfirstlive-kannada/media/post_attachments/wp-content/uploads/2024/10/DEEPAVALI-DECORATION-4.jpg)
ಪ್ರತಿ ವರ್ಷ ದಸರಾ ನಂತರ 20 ದಿನಗಳ ನಂತರ ದೀಪಾವಳಿ (Deepavali) ಆಚರಿಸಲಾಗುತ್ತದೆ. ಇದರ ಹಿಂದಿನ ಕಾರಣವೆನೆಂದು ನೀವು ಎಂದಾದರೂ ಯೋಚಿಸಿದ್ದೀರಾ? ಹಾಗಾದರೆ ಏಕೆ ಎಂದು ತಿಳಿದುಕೊಳ್ಳೋಣ..
ದೀಪಾವಳಿ ಹಬ್ಬವನ್ನು ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ಇದು ಸನಾತನ ಧರ್ಮದ ಪ್ರಮುಖ ಹಬ್ಬವಾಗಿದೆ. ಪ್ರತಿ ವರ್ಷ ದಸರಾ ನಂತರ 20 ಅಥವಾ 21 ದಿನಗಳ ನಂತರ ದೀಪಾವಳಿ ಬರುತ್ತದೆ. ಈ ವರ್ಷ ದಸರಾ ಮುಗಿದ 20 ದಿನಗಳ ನಂತರ ದೀಪಾವಳಿ ಬಂದಿದೆ. ಅದರಂತೆ ಇಂದು ಬಲೀಂದ್ರನ ಹಬ್ಬ ನಡೆಯುತ್ತಿದೆ.
ಇದನ್ನೂ ಓದಿ: ದೀಪಾವಳಿ ಧಮಾಕ.. ಆಭರಣ ಪ್ರಿಯರಿಗೆ ಗುಡ್​ನ್ಯೂಸ್​, ಬೆಲೆಯಲ್ಲಿ ಭಾರೀ ಇಳಿಕೆ ಕಂಡ ಚಿನ್ನ!
ದಸರಾ ಹಬ್ಬದ 20 ಅಥವಾ 21 ದಿನಗಳ ನಂತರ ದೀಪಾವಳಿ ಆಚರಿಸುವುದರ ಹಿಂದಿನ ಕಾರಣ ನಿಮಗೂ ತಿಳಿದಿಲ್ಲದಿರಬಹುದು. ಇದರ ಹಿಂದೆ ಒಂದು ಧಾರ್ಮಿಕ ನಂಬಿಕೆ ಇದೆ. ಇದನ್ನು ಮಹರ್ಷಿ ವಾಲ್ಮೀಕಿ ತಮ್ಮ ರಾಮಾಯಣದಲ್ಲಿ ವಿವರಿಸಿದ್ದಾರೆ.
ವಾಲ್ಮೀಕಿ ರಾಮಾಯಣದ ಪ್ರಕಾರ, ಭಗವಾನ್ ರಾಮನು ಲಂಕಾದ ರಾಜ ರಾವಣನನ್ನು ಕೊಂದು ಚಿನ್ನದ ಲಂಕೆಯನ್ನು ರಾವಣನ ಕಿರಿಯ ಸಹೋದರ ವಿಭೀಷಣನಿಗೆ ಹಸ್ತಾಂತರಿಸಿದ. ನಂತರ ರಾಮನು ಅಯೋಧ್ಯೆಗೆ ಮರಳಿದ. ಅವನಿಗೆ ಹಿಂತಿರುಗಲು 20 ದಿನಗಳು ಬೇಕಾಯಿತು. ರಾಮನು ಬಂದ ನಂತರ ಅಯೋಧ್ಯೆಯ ಎಲ್ಲಾ ನಿವಾಸಿಗಳು ಅವನನ್ನು ಸ್ವಾಗತಿಸಲು ದೀಪಗಳನ್ನು ಬೆಳಗಿಸಿದರು. ಆ ದಿನದಿಂದ ಈ ಹಬ್ಬವನ್ನು ದೀಪಾವಳಿ ಎಂದು ಆಚರಿಸಲು ಪ್ರಾರಂಭಿಸಲಾಯಿತು.
ಇದನ್ನೂ ಓದಿ: ದೀಪಾವಳಿ.. ಪಟಾಕಿ ಸಿಡಿಸುವಾಗ ಈ 7 ವಿಷಯ ಮರೆಯಬೇಡಿ.. ಇಲ್ಲದಿದ್ದರೆ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ